Homeಮುಖಪುಟಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

ಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

- Advertisement -
- Advertisement -

ಭಾರತ ಬ್ರಿಟಿಷ್ ವಸಾಹತುವಾಗಿದ್ದಾಗ ಅಂದಿನ ಬ್ರಿಟಿಷ್ ಸರ್ಕಾರ ತನ್ನ ವಿರುದ್ಧದ ಪ್ರತಿರೋಧವನ್ನು ಹೇಗಾದರೂ ದಮನಿಸಲು ಪ್ರಯತ್ನಿಸುತ್ತಿತ್ತು. ಆದರೆ ಆ ದಮನ ಎಲ್ಲ ರೀತಿಯ ಮಿತಿ ಮೀರಿದ್ದು ಏಪ್ರಿಲ್ 13 1919ರಂದು. ಪಂಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಕರಾಳ ರೌಲತ್ ಕಾಯ್ದೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಿಶಸ್ತ್ರ ಜನರ ಮೇಲೆ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ಯಾವುದೇ ಪೂರ್ವಸೂಚನೆ ಇಲ್ಲದೆ, ಜನರನ್ನು ಚದುರಿಸಲು ಸಣ್ಣ ಪ್ರಯತ್ನವನ್ನೂ ಮಾಡದೆ, ಸಾವಿರಾರು ಸುತ್ತು ಗುಂಡುಗಳನ್ನು ಹಾರಿಸಲು ಆದೇಶ ನೀಡಿದ್ದು, ಈ ಹತ್ಯಾಕಾಂಡಕ್ಕೆ ಕಾರಣವಾಗಿತ್ತು. ಈ ಮಾರಣಹೋಮದ ಬಗ್ಗೆ ತದನಂತರ ರಚಿಸಲಾದ ಹಂಟರ್ ಕಮಿಟಿ ಕೂಡ ನಿಷ್ಪಕ್ಷಪಾತ ತನಿಖೆಯನ್ನು ಮಾಡಲು ಸೋತಿತ್ತು. ಗಾಯಕ್ಕೆ ಉಪ್ಪು ಸವರುವಂತೆ ಅಂದು ನಡೆದ ಈ ಹತ್ಯಾಕಾಂಡಕ್ಕೆ ಶೂಟಿಂಗ್ ಆರ್ಡರ್ ನೀಡಿದ್ದ ಡೈಯರ್ ಆಗಲೀ ಅಂದು ಪಂಜಾಬಿನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮೈಕೇಲ್ ಓ ಡ್ವಾಯರ್ ಆಗಲಿ, ಸಣ್ಣ ಮಟ್ಟದ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿರಲಿಲ್ಲ.

ರೆಜಿನಾಲ್ಡ್ ಡೈಯರ್

ಇದಕ್ಕೆ ವ್ಯತಿರಿಕ್ತವಾಗಿ, ಡೈಯರ್ ಹಂಟರ್ ಕಮಿಶನ್ ಎದುರು “ಸಾಧ್ಯವಿತ್ತು, ಗುಂಡು ಹಾರಿಸದೆ ಗುಂಪನ್ನು ಚದುರಿಸಬಹುದಿತ್ತು. ಆದರೆ ಅವರು ಹಿಂದಿರುಗಿ ಬಂದು, ನನ್ನನ್ನು ನೋಡಿ ನಕ್ಕಿ, ನಾನು ಮೂರ್ಖನಂತೆ ಕಾಣುವಂತೆ ಮಾಡುತ್ತಿದ್ದರು” ಎಂದಿದ್ದನಲ್ಲದೆ ಅವಕಾಶ ಸಿಕ್ಕಿದ್ದರೆ ಇನ್ನೂ ಹೆಚ್ಚಿನ ಕ್ರೌರ್ಯಕ್ಕೆ ಸಿದ್ಧನಾಗಿದ್ದೆ ಎಂದಿದ್ದ. ಇಂತಹ ಒಂದು ಕರಾಳ ಘಟನೆ ಭಾರತೀಯರ ಅಂತಸಾಕ್ಷಿಯನ್ನು ಕದಡಿತ್ತು ಎಷ್ಟೋ ವರ್ಷಗಳ ಕಾಲ ಸಂಘಟಿತ ನೆನಪಿನಲ್ಲಿ ನೋವಾಗಿ ಮಡುಗಟ್ಟಿತ್ತು. ವರ್ತಮಾನದಲ್ಲಿಯೂ ಪ್ರಭುತ್ವಗಳು ನಡೆಸುವ ಹತ್ಯಾಕಾಂಡಗಳ ಸಂದರ್ಭಗಳಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ ಪ್ರತಿಧ್ವನಿಸುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ, ಇತ್ತೀಚೆಗಷ್ಟೇ ಒಟಿಟಿ ವೇದಿಕೆಯೊಂದರಲ್ಲಿ ಬಿಡುಗಡೆಯಾಗಿರುವ ಕ್ರಾಂತಿಕಾರಿ ಉಧಮ್ ಸಿಂಗ್ ಅವರ ಜೀವನದ ಒಂದು ಘಟ್ಟವನ್ನು ಕಟ್ಟಿಕೊಡುವ ’ಸರ್ದಾರ್ ಉಧಮ್’ ದೊಡ್ಡಮಟ್ಟದ ಕುತೂಹಲ ಮೂಡಿಸಿದ್ದು ನಿಜ.

ಉಧಮ್ ಸಿಂಗ್ ನಕಲಿ ಪಾಸ್‌ಪೋರ್ಟ್ ಬಳಸಿ ಲಂಡನ್‌ಗೆ ಪ್ರಯಾಣ ಬೆಳೆಸುವ, ಅಲ್ಲಿ ಭಾರತೀಯ ಕ್ರಾಂತಿಕಾರಿಗಳ ಜೊತೆಗೆ ಸಂವಹನ ಸಾಧಿಸುವ, ಹಲವು ವರ್ಷಗಳ ಕಾಲ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ತನ್ನ ಕಾರ್ಯಸಾಧನೆಗಾಗಿ ಹವಣಿಸುವ, ಮೈಕೇಲ್ ಡ್ವಾಯರ್‌ಗೆ ಗುಂಡುಹೊಡೆದು ಕೊಲ್ಲುವ ಮೂಲಕ ತನ್ನ ಕಾರ್ಯವನ್ನು ಸಾಧಿಸುವ, ತನಿಖೆಯಲ್ಲಿ ಬ್ರಿಟಿಷ್ ಪೊಲೀಸರ ದೌರ್ಜನ್ಯಕ್ಕೆ ಒಳಗಾಗುವ, ಕೋರ್ಟ್ ವಿಚಾರಣೆಯ ಸಮಯದಲ್ಲಿ ನನಗೆ ಟ್ರಯಲ್ ಬೇಡ ನಮಗೆ ಸ್ವತಂತ್ರ ನೀಡಿ ಎಂದು ಗಲ್ಲು ಶಿಕ್ಷೆಗೆ ಗುರಿಯಾಗುವ ಹಾಗೂ ಫ್ಲಾಷ್‌ಬ್ಯಾಕ್‌ನಲ್ಲಿ ಕಟ್ಟಿಕೊಟ್ಟಿರುವಂತೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಎಲ್ಲ ಜನರ ಚಲನವಲನವನ್ನು ನಿರ್ಬಂಧಿಸಿದ ಮಾರ್ಶಲ್ ಲಾ ಉಲ್ಲಂಘಿಸಿ ಅಪಾರ ಸಾವುನೋವಿನ ನಡುವೆ ಗಾಯಗೊಂಡವರನ್ನು ರಕ್ಷಿಸುವ ಉಧಮ್ ಜೀವನವನ್ನು ಸಿನಿಮಾ ಹಿಡಿದಿಡಲು ಪ್ರಯತ್ನಿಸಿದೆ. ಈ ನಿಟ್ಟಿನಲ್ಲಿ ಮನುಕುಲದಲ್ಲಿಯೇ ಒಂದು ನೀಚ ಘಟನೆಯಾಗಿ ದಾಖಲೆಯಾಗಿರುವ, ಬ್ರಿಟಿಷ್ ಪ್ರಭುತ್ವ ನಡೆಸಿದ ಹತ್ಯಾಕಾಂಡದ ಬಗೆಗಿನ ಸೃಜನಶೀಲ ಅಭಿವ್ಯಕ್ತಿಯಾಗಿ ಹೊಸ ಶತಮಾನದ ಪೀಳಿಗೆಗೆ ಆ ದುರಂತವನ್ನು ದಾಟಿಸಲು ಸಿನಿಮಾ ಪ್ರಯತ್ನಿಸಿದೆ.

ಮೈಕೇಲ್ ಓ ಡ್ವಾಯರ್

ಈ ಕಥನವನ್ನು ಕಟ್ಟುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ತಲೆದೋರುವ ಕೆಲವು ತಾತ್ವಿಕ ಪ್ರಶ್ನೆಗಳನ್ನು ನಿರ್ದೇಶಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿರುವುದು ಕೂಡ ಸಿನಿಮಾ ತನ್ನ ಶೈಲಿಯಲ್ಲಿ ಒಳಗೊಂಡಿದೆ. ಅದರಲ್ಲಿ ಪ್ರಮುಖವಾಗಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿರುವ ಘಟನೆಗಳಿಂದ ಕನಲಿ ಕ್ರಾಂತಿಕಾರಿ ದಾರಿ ಹಿಡಿದಿರುವ ಉಧಮ್‌ನದ್ದು ಕೇವಲ ಪ್ರತೀಕಾರವಷ್ಟೆಯೇ? ಎಂಬುದು. ಅಲ್ಲವೆಂಬಂತೆ, ಫ್ಲಾಷ್‌ಬ್ಯಾಕ್‌ನಲ್ಲಿ ಉಧಮ್, ಭಗತ್ ಸಿಂಗ್ ಜೊತೆಗೆ ನಡೆಸುವ ಸಂಭಾಷಣೆ ಉತ್ತರಿಸುತ್ತದೆ. ’ಕ್ರಾಂತಿಕಾರಿಗಳಿಗೂ ಮತ್ತು ಭಯೋತ್ಪಾದಕರಿಗೂ ವ್ಯತ್ಯಾಸವಿದೆ’ ಎನ್ನುವ ಭಗತ್ ಸಿಂಗ್, ’ಕ್ರಾಂತಿಕಾರಿ ಸ್ವಾತಂತ್ರ್ಯ ಗಳಿಸಿಕೊಳ್ಳಲು ಕೇವಲ ಸಾಂಕೇತಿಕ ಕೃತ್ಯಗಳಿಗೆ ಮುಂದಾಗುತ್ತಾನೆ, ಆದುದರಿಂದ ಕ್ರಾಂತಿಕಾರಿ ಕೋಮುವಾದಿ, ಜಾತಿವಾದಿ ಆಗಿರಲು ಸಾಧ್ಯವಿಲ್ಲ ಮತ್ತು ಅವನಿಗೆ ವರ್ಗವಿಲ್ಲ, ಅವನು ಹೆಚ್ಚು ಮಾನವೀಯವಾಗಿರಬೇಕು’ ಎಂಬಂತಹ ಸಂಭಾಷಣೆ ಮೂಡುತ್ತದೆ. ಹಾಗೆಯೇ ಡ್ವಾಯರ್‌ನನ್ನು ಕೊಂದ ನಂತರ, ಕೋರ್ಟ್ ವಿಚಾರಣೆಯಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಮೊರೆಯಿಡುವ ಉಧಮ್ ಅದಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ಧ ಎನ್ನುತ್ತಾನೆ. ಈ ರೀತಿಯಲ್ಲಿ ದೃಶ್ಯ ಕಟ್ಟಿರುವುದು ಈ ಸಿನಿಮಾವನ್ನು ಕೇವಲ ಪ್ರತೀಕಾರದ ಅಥವಾ ರಾಷ್ಟ್ರೀಯತೆಯನ್ನು ಉದ್ದೀಪಿಸುವ ಸಿನಿಮಾವನ್ನಾಗಿಸದೆ, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ನಿರೂಪಿಸುವ ಸಿನಿಮಾವಾಗಿಯೂ ಬೆಳೆಯಲು ಪ್ರಯತ್ನಿಸಿದೆ. ಒಂದು ಕ್ರೌರ್ಯದ ಪ್ರಭುತ್ವದ ವಿರುದ್ಧದ ಹೋರಾಟವಾಗಿಯೂ ಕಾಣಿಸುತ್ತದೆ.

ಉಧಮ್ ಸಿಂಗ್ ಇಂಗ್ಲೆಂಡಿನಲ್ಲಿ ತನ್ನ ಕಾರ್ಯಸಾಧನೆಗಾಗಿ ಹಲವು ವರ್ಷಗಳ ಕಾಲ ಹತ್ತು ಹಲವು ಕೆಲಸಗಳನ್ನು ಮಾಡಿಕೊಂಡು ಜೀವನ ಸವೆಸುವ ದೃಶ್ಯಗಳು ಸಿನಿಮಾದ ಬಹುಭಾಗವನ್ನು ಆಕ್ರಮಿಸಿವೆ. ಅದರಲ್ಲಿ ಡ್ವಾಯರ್ ಜೊತೆಗೆ ಸ್ವಲ್ಪ ಸಮಯ ಕಳೆಯುವ ದೃಶ್ಯಗಳು, ಹೇಗೆ ಹತ್ಯಾಕಾಂಡದ ರೂವಾರಿಗಳು, ಸಾವಿರಾರು ನಿರಾಯುಧ ಜನರನ್ನು ಕೊಂದ ಬಗ್ಗೆ ಸಣ್ಣ ಪಶ್ಚಾತ್ತಾಪವನ್ನೂ ಉಳಿಸಿಕೊಂಡಿಲ್ಲ ಎಂಬುದನ್ನು ಚಿತ್ರಿಸುತ್ತದೆ. ಉಳಿದಂತೆ ಐರಿಷ್ ರೆವೊಲ್ಯೂಷನರಿ ಅಸೋಸಿಯೇಶನ್, ಎರಡನೇ ಮಹಾಯುದ್ಧದ ಸಂದರ್ಭ, ಕಮ್ಯುನಿಸ್ಟ್ ಚಳವಳಿ, ಎಚ್ ಎಸ್ ಆರ್ ಎ, ಇವೆಲ್ಲವೂ ಸಿನಿಮಾದ ಭಾಗವಾಗಿ ಹಾದುಹೋದರೂ ವಿವರಗಳ ಕೊರತೆಯಿಂದ ಸೊರಗುತ್ತವೆ. ಸಾಂದರ್ಭಿಕವಾಗಿ ಬಳಕೆಯಾಗಿರುವಂತೆ ಕಾಣುವ ಈ ಸಂಗತಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒಳಗೊಂಡಿದ್ದರೆ ಆ ಪ್ರಕ್ಷುಬ್ಧ ದಿನಗಳ ಚಿತ್ರಣದ ವಿವರಗಳ ಹಿನ್ನೆಲೆಯಲ್ಲಿ ಉಧಮ್ ಸಿಂಗ್‌ನ ಕಥೆ ಇನ್ನಷ್ಟು ಜೀವಂತವಾಗಿರುತ್ತಿತ್ತು.

ಉಧಮ್ ಸಿಂಗ್

ಇನ್ನು ಸಿನಿಮಾದ ಕೊನೆಯ ಭಾಗದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ವಿಸ್ತೃತವಾಗಿ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಇದನ್ನು ಕೂಡ ಮುಖ್ಯ ಕಥನದ ನಡುನಡುವಿನಲ್ಲಿ ಸೇರಿಸಿ, ಫ್ಲಾಷ್‌ಬ್ಯಾಕ್ ತಂತ್ರದ ಮೂಲಕ ಹೇಳಬಹುದಿತ್ತಾದರೂ, ಅದನ್ನು ವಿಭಿನ್ನ ಅಧ್ಯಾಯವನ್ನಾಗಿಸಿರುವುದು ಹೆಚ್ಚು ಪರಿಣಾಮ ಬೀರಲಿ ಎಂದೇನೋ! ಆದರೆ ಅದು ಸಿನಿಮಾದ ಕೊನೆಯ ಭಾಗಕ್ಕೆ ಪ್ರತ್ಯೇಕವಾದ ಸೇರ್ಪಡೆಯೆನಿಸಿ, ಸಿನಿಮಾದ ಇಡಿಯಾದ ನಿರೂಪಣೆಯ ಭಾಗವಾಗಿ ಸೇರಲಿಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಜಲಿಯನ್ ವಾಲಾಬಾಗ್‌ಗೆ ಮೊದಲು ಮತ್ತು ನಂತರದ ದಮನಕಾರಿ ಘಟನೆಗಳ ಐತಿಹಾಸಿಕ ಚಿತ್ರಣವನ್ನು ದೃಶ್ಯರೂಪದಲ್ಲಿ ಕಾಣದೆ ಇರುವುದು ಕೂಡ ಅದಕ್ಕೆ ಕಾರಣವಾಗಿರಬಹುದು. ರೌಲತ್ ಆಕ್ಟ್ ಜಾರಿ, ಮಹಾತ್ಮ ಗಾಂಧಿಯವರ ಪ್ರತಿರೋಧ, ಡಾ. ಸತ್ಯಪಾಲ್ ಮತ್ತು ಸೈಫುದ್ದೀನ್ ಕಿಚ್‌ಲ್ಯೂ ಅವರ ಬಂಧನ ಇವೆಲ್ಲವೂ ಸಂಭಾಷಣೆಯಲ್ಲಿ ಮಾತ್ರ ಹೊಕ್ಕಿವೆ. ಇವುಗಳ ಜೊತೆಗೆ ಹತ್ಯಾಕಾಂಡದ ನಂತರದ ಹಲವು ದೌರ್ಜನ್ಯದ ಘಟನೆಗಳು (ಒಂದು ರಸ್ತೆಯನ್ನು ದಾಟುವಾಗ ಎಲ್ಲ ಭಾರತೀಯರೂ ತೆವಳಿ ಹೋಗಬೇಕು ಎಂಬ ಆದೇಶವನ್ನು ಡೈಯರ್ ನೀಡಿದ್ದು, ಸಾರ್ವಜನಿಕ್ವಾಗಿ ಜನರನ್ನು ನಗ್ನಗೊಳಿಸಿ ಥಳಿಸಿದ್ದು) ದೃಶ್ಯರೂಪದಲ್ಲಿ ಜಾಗಪಡೆಯಲು ಸಾಧ್ಯವಾಗಿದ್ದರೆ, ಅಂದರೆ ವಿವರಗಳು ಇನ್ನೂ ಪಕ್ವವಾಗಿ ದಾಖಲಾಗಿದ್ದರೆ ಸಿನಿಮಾ ಇನ್ನೂ ಮಹತ್ವದ್ದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ದಾಟಿಸಲು ಸಾಧ್ಯವಾಗುತ್ತಿತ್ತು. ಜೊತೆಗೆ ಜಲಿಯನ್ ವಾಲಾಬಾಗ್ ಅನ್ನು ಬ್ರಿಟನ್ ಜನರಿಗೆ ತಿಳಿಸಲು ಪ್ರಯತ್ನಿಸಿದ ಪತ್ರಕರ್ತ ಹಾರ್ನಿಮನ್, ಹಂಟರ್ ಕಮಿಶನ್ ಭಾಗವಾಗಿದ್ದ ಮತ್ತು ದಿಟ್ಟತನದಿಂದ ವಿಚಾರಣೆ ನಡೆಸಿದ ಅಂದಿನ ಬ್ಯಾರಿಸ್ಟರ್ ಸೆತಲ್ವಾಡ್ – ಹೀಗೆ ಈ ಘಟನೆಗೆ ಸಂಬಂಧಿಸಿದ ಪ್ರಮುಖ ಐತಿಹಾಸಿಕ ವ್ಯಕ್ತಿಗಳನ್ನುಸಣ್ಣ ಅವಧಿಗಾದರೂ ಕಟ್ಟಿಕೊಡುವ ಅವಕಾಶವನ್ನು ನಿರ್ದೇಶಕರು ಕಳೆದುಕೊಂಡಿದ್ದಾರೆ.

ಉಧಮ್ ಸಿಂಗ್‌ನ ಈ ಕಥೆಯನ್ನು ಕಟ್ಟುವಾಗ ನಿರ್ದೇಶಕ ಶೂಜಿತ್ ಸರ್ಕಾರ್ ಹಲವು ಲಿಬರ್ಟಿಗಳನ್ನು ತೆಗೆದುಕೊಂಡಿದ್ದಾರೆ. ಅದಕ್ಕೆ ಒಂದು ಸಣ್ಣ ಉದಾಹರಣೆಯೆಂದರೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ದಿನ ಉಧಮ್ ಸಿಂಗ್ ಸ್ವತಃ ಗಾಯಗೊಂಡವರನ್ನು ರಕ್ಷಿಸಲು ಅಲ್ಲಿ ನೆರೆದಿದ್ದರೇ ಎಂಬುದರ ಬಗ್ಗೆ ನಿಖರ ದಾಖಲೆಗಳ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಆದರೆ ಅದೇ ಭಾಗವನ್ನು ನಿರ್ದೇಶಕರು ಹೆಚ್ಚು ವಿಸ್ತೃತವಾಗಿ ಹೆಣೆದಿದ್ದಾರೆ. ಈ ಲಿಬರ್ಟಿಯನ್ನು ಬಳಸಿ ಇಡೀ ಚಿತ್ರದ ಸಂಭಾಷಣೆಯನ್ನು ತಾತ್ವಿಕವಾಗಿ ವಸಾಹತುಶಹಿಯ ವಿರುದ್ಧ, ಪ್ರಭುತ್ವದ ಹಿಂಸೆಯ ವಿರುದ್ಧ ಚಿಂತನಾರ್ಹವಾಗಿ ಕಟ್ಟಿಕೊಡಲು ಬಳಸಬಹುದಿತ್ತು ಎಂಬ ಭಾವನೆ ಮೂಡದೆ ಇರದು

ಉಧಮ್ ಸಿಂಗ್ ಪಾತ್ರವನ್ನು ಪೋಷಿಸಿರುವ ವಿಕ್ಕಿ ಕೌಶಲ್ ಅವರಿಂದ ಮೊದಲು ಮಾಡಿ ಎಲ್ಲಾ ನಟರೂ ಚೊಕ್ಕವಾದ ನಟನೆಯನ್ನು ನೀಡಿರುವುದು ಪ್ರಶಂಸನೀಯ.

ಹಲವು ಕೊರತೆಗಳ ಹೊರತಾಗಿಯೂ, ಭಾರತದ ಸ್ವಾತಂತ್ರ್ಯ ಹೋರಾಟದ ಒಂದು ಪ್ರಮುಖ ಧಾರೆಯನ್ನು ಪ್ರತಿನಿಧಿಸಿರುವ, ಪ್ರಭುತ್ವದ ಹಿಂಸೆಯನ್ನು ಹಿಡಿಯಲು ಪ್ರಯತ್ನಿಸಿರುವ, ಕೇವಲ ಪ್ರತೀಕಾರದ ಕಥೆಯನ್ನಾಗಿಸದೆ ಅದಕ್ಕೆ ದೊಡ್ಡ ಕ್ಯಾನ್ವಾಸ್ ನೀಡಲು ಪ್ರಯತ್ನಿಸಿರುವ ಮತ್ತು ಈ ಹೋರಾಟದ ಧಾರೆಯನ್ನು ಪ್ರಸ್ತುತಪಡಿಸುವಾಗ ಅದು ಇಂದಿನ ದಿನಕ್ಕೆ ಎಲ್ಲ ಸಮುದಾಯಗಳನ್ನು, ಭಾಷಿಕರನ್ನು ಏಕೀಕೃತಗೊಳಿಸುವ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸದಂತೆ ಎಚ್ಚರಿಕೆಯನ್ನು ಹೊಂದಿರುವುದಕ್ಕೆ ಸರ್ದಾರ್ ಉಧಮ್ ಸಿನಿಮಾ ವರ್ತಮಾನಕ್ಕೆ ಅಗತ್ಯವಿದ್ದ ಸೃಜನಶೀಲ ಪ್ರತಿಕ್ರಿಯೆಯಾಗಿ ಮುಖ್ಯವಾಗುತ್ತದೆ.


ಇದನ್ನೂ ಓದಿ: ನರಮೇಧದ ನೆನಪಿಗೆ ಸುಣ್ಣ ಬಣ್ಣ ಬಳಿಯುತ್ತಿರುವುದೇಕೆ?

ಇದನ್ನೂ ಓದಿ: ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...

ದೆಹಲಿ ಫೈಜ್-ಎ-ಇಲಾಹಿ ಮಸೀದಿ ಬಳಿ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ, ಉದ್ವಿಗ್ನತೆ; ಅಶ್ರುವಾಯು ಪ್ರಯೋಗ, 10 ಜನರ ಬಂಧನ

ದೆಹಲಿಯ ತುರ್ಕಮನ್ ಗೇಟ್-ರಾಮ್ಲೀಲಾ ಮೈದಾನ ಪ್ರದೇಶದಲ್ಲಿರುವ ಶತಮಾನಗಳಷ್ಟು ಹಳೆಯದಾದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಬುಧವಾರ ಮುಂಜಾನೆ ನಡೆದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ, ಇದು...

ಮೋದಿ, ಶಾ ವಿರುದ್ಧ ಘೋಷಣೆ ಆರೋಪ: ತನ್ನದೇ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿದ ಜೆಎನ್‌ಯು ಆಡಳಿತ ಮಂಡಳಿ

ಸೋಮವಾರ ರಾತ್ರಿ ವಿದ್ಯಾರ್ಥಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಆ ಘೋಷಣೆಗಳು "ಪ್ರಚೋದನಕಾರಿ, ಪ್ರಚೋದನಕಾರಿ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿ ತನಿಖೆ ಪಕ್ಷಪಾತದಿಂದ ಕೂಡಿದೆ ಎಂಬ ವಿಪಕ್ಷಗಳ ಆರೋಪ ತಿರಸ್ಕರಿಸಿದ ಕೇರಳ ಹೈಕೋರ್ಟ್

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಯು ಪಕ್ಷಪಾತದಿಂದ ಕೂಡಿದೆ ಅಥವಾ ಸರ್ಕಾರದ ಒತ್ತಡದಲ್ಲಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿರುವ ಕೇರಳ ಹೈಕೋರ್ಟ್, ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ...

ಆರ್‌ಎಸ್‌ಎಸ್ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ನಲಪಾಡ್‌ಗೆ ಕೋರ್ಟ್ ನೋಟಿಸ್

ಬೆಂಗಳೂರು: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಸದ/ಶಾಸಕರ...

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...