Homeಮುಖಪುಟಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

ಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

- Advertisement -
- Advertisement -

ಭಾರತ ಬ್ರಿಟಿಷ್ ವಸಾಹತುವಾಗಿದ್ದಾಗ ಅಂದಿನ ಬ್ರಿಟಿಷ್ ಸರ್ಕಾರ ತನ್ನ ವಿರುದ್ಧದ ಪ್ರತಿರೋಧವನ್ನು ಹೇಗಾದರೂ ದಮನಿಸಲು ಪ್ರಯತ್ನಿಸುತ್ತಿತ್ತು. ಆದರೆ ಆ ದಮನ ಎಲ್ಲ ರೀತಿಯ ಮಿತಿ ಮೀರಿದ್ದು ಏಪ್ರಿಲ್ 13 1919ರಂದು. ಪಂಜಾಬಿನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಕರಾಳ ರೌಲತ್ ಕಾಯ್ದೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಿಶಸ್ತ್ರ ಜನರ ಮೇಲೆ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ಯಾವುದೇ ಪೂರ್ವಸೂಚನೆ ಇಲ್ಲದೆ, ಜನರನ್ನು ಚದುರಿಸಲು ಸಣ್ಣ ಪ್ರಯತ್ನವನ್ನೂ ಮಾಡದೆ, ಸಾವಿರಾರು ಸುತ್ತು ಗುಂಡುಗಳನ್ನು ಹಾರಿಸಲು ಆದೇಶ ನೀಡಿದ್ದು, ಈ ಹತ್ಯಾಕಾಂಡಕ್ಕೆ ಕಾರಣವಾಗಿತ್ತು. ಈ ಮಾರಣಹೋಮದ ಬಗ್ಗೆ ತದನಂತರ ರಚಿಸಲಾದ ಹಂಟರ್ ಕಮಿಟಿ ಕೂಡ ನಿಷ್ಪಕ್ಷಪಾತ ತನಿಖೆಯನ್ನು ಮಾಡಲು ಸೋತಿತ್ತು. ಗಾಯಕ್ಕೆ ಉಪ್ಪು ಸವರುವಂತೆ ಅಂದು ನಡೆದ ಈ ಹತ್ಯಾಕಾಂಡಕ್ಕೆ ಶೂಟಿಂಗ್ ಆರ್ಡರ್ ನೀಡಿದ್ದ ಡೈಯರ್ ಆಗಲೀ ಅಂದು ಪಂಜಾಬಿನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮೈಕೇಲ್ ಓ ಡ್ವಾಯರ್ ಆಗಲಿ, ಸಣ್ಣ ಮಟ್ಟದ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿರಲಿಲ್ಲ.

ರೆಜಿನಾಲ್ಡ್ ಡೈಯರ್

ಇದಕ್ಕೆ ವ್ಯತಿರಿಕ್ತವಾಗಿ, ಡೈಯರ್ ಹಂಟರ್ ಕಮಿಶನ್ ಎದುರು “ಸಾಧ್ಯವಿತ್ತು, ಗುಂಡು ಹಾರಿಸದೆ ಗುಂಪನ್ನು ಚದುರಿಸಬಹುದಿತ್ತು. ಆದರೆ ಅವರು ಹಿಂದಿರುಗಿ ಬಂದು, ನನ್ನನ್ನು ನೋಡಿ ನಕ್ಕಿ, ನಾನು ಮೂರ್ಖನಂತೆ ಕಾಣುವಂತೆ ಮಾಡುತ್ತಿದ್ದರು” ಎಂದಿದ್ದನಲ್ಲದೆ ಅವಕಾಶ ಸಿಕ್ಕಿದ್ದರೆ ಇನ್ನೂ ಹೆಚ್ಚಿನ ಕ್ರೌರ್ಯಕ್ಕೆ ಸಿದ್ಧನಾಗಿದ್ದೆ ಎಂದಿದ್ದ. ಇಂತಹ ಒಂದು ಕರಾಳ ಘಟನೆ ಭಾರತೀಯರ ಅಂತಸಾಕ್ಷಿಯನ್ನು ಕದಡಿತ್ತು ಎಷ್ಟೋ ವರ್ಷಗಳ ಕಾಲ ಸಂಘಟಿತ ನೆನಪಿನಲ್ಲಿ ನೋವಾಗಿ ಮಡುಗಟ್ಟಿತ್ತು. ವರ್ತಮಾನದಲ್ಲಿಯೂ ಪ್ರಭುತ್ವಗಳು ನಡೆಸುವ ಹತ್ಯಾಕಾಂಡಗಳ ಸಂದರ್ಭಗಳಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ ಪ್ರತಿಧ್ವನಿಸುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ, ಇತ್ತೀಚೆಗಷ್ಟೇ ಒಟಿಟಿ ವೇದಿಕೆಯೊಂದರಲ್ಲಿ ಬಿಡುಗಡೆಯಾಗಿರುವ ಕ್ರಾಂತಿಕಾರಿ ಉಧಮ್ ಸಿಂಗ್ ಅವರ ಜೀವನದ ಒಂದು ಘಟ್ಟವನ್ನು ಕಟ್ಟಿಕೊಡುವ ’ಸರ್ದಾರ್ ಉಧಮ್’ ದೊಡ್ಡಮಟ್ಟದ ಕುತೂಹಲ ಮೂಡಿಸಿದ್ದು ನಿಜ.

ಉಧಮ್ ಸಿಂಗ್ ನಕಲಿ ಪಾಸ್‌ಪೋರ್ಟ್ ಬಳಸಿ ಲಂಡನ್‌ಗೆ ಪ್ರಯಾಣ ಬೆಳೆಸುವ, ಅಲ್ಲಿ ಭಾರತೀಯ ಕ್ರಾಂತಿಕಾರಿಗಳ ಜೊತೆಗೆ ಸಂವಹನ ಸಾಧಿಸುವ, ಹಲವು ವರ್ಷಗಳ ಕಾಲ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ತನ್ನ ಕಾರ್ಯಸಾಧನೆಗಾಗಿ ಹವಣಿಸುವ, ಮೈಕೇಲ್ ಡ್ವಾಯರ್‌ಗೆ ಗುಂಡುಹೊಡೆದು ಕೊಲ್ಲುವ ಮೂಲಕ ತನ್ನ ಕಾರ್ಯವನ್ನು ಸಾಧಿಸುವ, ತನಿಖೆಯಲ್ಲಿ ಬ್ರಿಟಿಷ್ ಪೊಲೀಸರ ದೌರ್ಜನ್ಯಕ್ಕೆ ಒಳಗಾಗುವ, ಕೋರ್ಟ್ ವಿಚಾರಣೆಯ ಸಮಯದಲ್ಲಿ ನನಗೆ ಟ್ರಯಲ್ ಬೇಡ ನಮಗೆ ಸ್ವತಂತ್ರ ನೀಡಿ ಎಂದು ಗಲ್ಲು ಶಿಕ್ಷೆಗೆ ಗುರಿಯಾಗುವ ಹಾಗೂ ಫ್ಲಾಷ್‌ಬ್ಯಾಕ್‌ನಲ್ಲಿ ಕಟ್ಟಿಕೊಟ್ಟಿರುವಂತೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಎಲ್ಲ ಜನರ ಚಲನವಲನವನ್ನು ನಿರ್ಬಂಧಿಸಿದ ಮಾರ್ಶಲ್ ಲಾ ಉಲ್ಲಂಘಿಸಿ ಅಪಾರ ಸಾವುನೋವಿನ ನಡುವೆ ಗಾಯಗೊಂಡವರನ್ನು ರಕ್ಷಿಸುವ ಉಧಮ್ ಜೀವನವನ್ನು ಸಿನಿಮಾ ಹಿಡಿದಿಡಲು ಪ್ರಯತ್ನಿಸಿದೆ. ಈ ನಿಟ್ಟಿನಲ್ಲಿ ಮನುಕುಲದಲ್ಲಿಯೇ ಒಂದು ನೀಚ ಘಟನೆಯಾಗಿ ದಾಖಲೆಯಾಗಿರುವ, ಬ್ರಿಟಿಷ್ ಪ್ರಭುತ್ವ ನಡೆಸಿದ ಹತ್ಯಾಕಾಂಡದ ಬಗೆಗಿನ ಸೃಜನಶೀಲ ಅಭಿವ್ಯಕ್ತಿಯಾಗಿ ಹೊಸ ಶತಮಾನದ ಪೀಳಿಗೆಗೆ ಆ ದುರಂತವನ್ನು ದಾಟಿಸಲು ಸಿನಿಮಾ ಪ್ರಯತ್ನಿಸಿದೆ.

ಮೈಕೇಲ್ ಓ ಡ್ವಾಯರ್

ಈ ಕಥನವನ್ನು ಕಟ್ಟುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ತಲೆದೋರುವ ಕೆಲವು ತಾತ್ವಿಕ ಪ್ರಶ್ನೆಗಳನ್ನು ನಿರ್ದೇಶಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿರುವುದು ಕೂಡ ಸಿನಿಮಾ ತನ್ನ ಶೈಲಿಯಲ್ಲಿ ಒಳಗೊಂಡಿದೆ. ಅದರಲ್ಲಿ ಪ್ರಮುಖವಾಗಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿರುವ ಘಟನೆಗಳಿಂದ ಕನಲಿ ಕ್ರಾಂತಿಕಾರಿ ದಾರಿ ಹಿಡಿದಿರುವ ಉಧಮ್‌ನದ್ದು ಕೇವಲ ಪ್ರತೀಕಾರವಷ್ಟೆಯೇ? ಎಂಬುದು. ಅಲ್ಲವೆಂಬಂತೆ, ಫ್ಲಾಷ್‌ಬ್ಯಾಕ್‌ನಲ್ಲಿ ಉಧಮ್, ಭಗತ್ ಸಿಂಗ್ ಜೊತೆಗೆ ನಡೆಸುವ ಸಂಭಾಷಣೆ ಉತ್ತರಿಸುತ್ತದೆ. ’ಕ್ರಾಂತಿಕಾರಿಗಳಿಗೂ ಮತ್ತು ಭಯೋತ್ಪಾದಕರಿಗೂ ವ್ಯತ್ಯಾಸವಿದೆ’ ಎನ್ನುವ ಭಗತ್ ಸಿಂಗ್, ’ಕ್ರಾಂತಿಕಾರಿ ಸ್ವಾತಂತ್ರ್ಯ ಗಳಿಸಿಕೊಳ್ಳಲು ಕೇವಲ ಸಾಂಕೇತಿಕ ಕೃತ್ಯಗಳಿಗೆ ಮುಂದಾಗುತ್ತಾನೆ, ಆದುದರಿಂದ ಕ್ರಾಂತಿಕಾರಿ ಕೋಮುವಾದಿ, ಜಾತಿವಾದಿ ಆಗಿರಲು ಸಾಧ್ಯವಿಲ್ಲ ಮತ್ತು ಅವನಿಗೆ ವರ್ಗವಿಲ್ಲ, ಅವನು ಹೆಚ್ಚು ಮಾನವೀಯವಾಗಿರಬೇಕು’ ಎಂಬಂತಹ ಸಂಭಾಷಣೆ ಮೂಡುತ್ತದೆ. ಹಾಗೆಯೇ ಡ್ವಾಯರ್‌ನನ್ನು ಕೊಂದ ನಂತರ, ಕೋರ್ಟ್ ವಿಚಾರಣೆಯಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಮೊರೆಯಿಡುವ ಉಧಮ್ ಅದಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ಧ ಎನ್ನುತ್ತಾನೆ. ಈ ರೀತಿಯಲ್ಲಿ ದೃಶ್ಯ ಕಟ್ಟಿರುವುದು ಈ ಸಿನಿಮಾವನ್ನು ಕೇವಲ ಪ್ರತೀಕಾರದ ಅಥವಾ ರಾಷ್ಟ್ರೀಯತೆಯನ್ನು ಉದ್ದೀಪಿಸುವ ಸಿನಿಮಾವನ್ನಾಗಿಸದೆ, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ನಿರೂಪಿಸುವ ಸಿನಿಮಾವಾಗಿಯೂ ಬೆಳೆಯಲು ಪ್ರಯತ್ನಿಸಿದೆ. ಒಂದು ಕ್ರೌರ್ಯದ ಪ್ರಭುತ್ವದ ವಿರುದ್ಧದ ಹೋರಾಟವಾಗಿಯೂ ಕಾಣಿಸುತ್ತದೆ.

ಉಧಮ್ ಸಿಂಗ್ ಇಂಗ್ಲೆಂಡಿನಲ್ಲಿ ತನ್ನ ಕಾರ್ಯಸಾಧನೆಗಾಗಿ ಹಲವು ವರ್ಷಗಳ ಕಾಲ ಹತ್ತು ಹಲವು ಕೆಲಸಗಳನ್ನು ಮಾಡಿಕೊಂಡು ಜೀವನ ಸವೆಸುವ ದೃಶ್ಯಗಳು ಸಿನಿಮಾದ ಬಹುಭಾಗವನ್ನು ಆಕ್ರಮಿಸಿವೆ. ಅದರಲ್ಲಿ ಡ್ವಾಯರ್ ಜೊತೆಗೆ ಸ್ವಲ್ಪ ಸಮಯ ಕಳೆಯುವ ದೃಶ್ಯಗಳು, ಹೇಗೆ ಹತ್ಯಾಕಾಂಡದ ರೂವಾರಿಗಳು, ಸಾವಿರಾರು ನಿರಾಯುಧ ಜನರನ್ನು ಕೊಂದ ಬಗ್ಗೆ ಸಣ್ಣ ಪಶ್ಚಾತ್ತಾಪವನ್ನೂ ಉಳಿಸಿಕೊಂಡಿಲ್ಲ ಎಂಬುದನ್ನು ಚಿತ್ರಿಸುತ್ತದೆ. ಉಳಿದಂತೆ ಐರಿಷ್ ರೆವೊಲ್ಯೂಷನರಿ ಅಸೋಸಿಯೇಶನ್, ಎರಡನೇ ಮಹಾಯುದ್ಧದ ಸಂದರ್ಭ, ಕಮ್ಯುನಿಸ್ಟ್ ಚಳವಳಿ, ಎಚ್ ಎಸ್ ಆರ್ ಎ, ಇವೆಲ್ಲವೂ ಸಿನಿಮಾದ ಭಾಗವಾಗಿ ಹಾದುಹೋದರೂ ವಿವರಗಳ ಕೊರತೆಯಿಂದ ಸೊರಗುತ್ತವೆ. ಸಾಂದರ್ಭಿಕವಾಗಿ ಬಳಕೆಯಾಗಿರುವಂತೆ ಕಾಣುವ ಈ ಸಂಗತಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒಳಗೊಂಡಿದ್ದರೆ ಆ ಪ್ರಕ್ಷುಬ್ಧ ದಿನಗಳ ಚಿತ್ರಣದ ವಿವರಗಳ ಹಿನ್ನೆಲೆಯಲ್ಲಿ ಉಧಮ್ ಸಿಂಗ್‌ನ ಕಥೆ ಇನ್ನಷ್ಟು ಜೀವಂತವಾಗಿರುತ್ತಿತ್ತು.

ಉಧಮ್ ಸಿಂಗ್

ಇನ್ನು ಸಿನಿಮಾದ ಕೊನೆಯ ಭಾಗದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ವಿಸ್ತೃತವಾಗಿ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಇದನ್ನು ಕೂಡ ಮುಖ್ಯ ಕಥನದ ನಡುನಡುವಿನಲ್ಲಿ ಸೇರಿಸಿ, ಫ್ಲಾಷ್‌ಬ್ಯಾಕ್ ತಂತ್ರದ ಮೂಲಕ ಹೇಳಬಹುದಿತ್ತಾದರೂ, ಅದನ್ನು ವಿಭಿನ್ನ ಅಧ್ಯಾಯವನ್ನಾಗಿಸಿರುವುದು ಹೆಚ್ಚು ಪರಿಣಾಮ ಬೀರಲಿ ಎಂದೇನೋ! ಆದರೆ ಅದು ಸಿನಿಮಾದ ಕೊನೆಯ ಭಾಗಕ್ಕೆ ಪ್ರತ್ಯೇಕವಾದ ಸೇರ್ಪಡೆಯೆನಿಸಿ, ಸಿನಿಮಾದ ಇಡಿಯಾದ ನಿರೂಪಣೆಯ ಭಾಗವಾಗಿ ಸೇರಲಿಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಜಲಿಯನ್ ವಾಲಾಬಾಗ್‌ಗೆ ಮೊದಲು ಮತ್ತು ನಂತರದ ದಮನಕಾರಿ ಘಟನೆಗಳ ಐತಿಹಾಸಿಕ ಚಿತ್ರಣವನ್ನು ದೃಶ್ಯರೂಪದಲ್ಲಿ ಕಾಣದೆ ಇರುವುದು ಕೂಡ ಅದಕ್ಕೆ ಕಾರಣವಾಗಿರಬಹುದು. ರೌಲತ್ ಆಕ್ಟ್ ಜಾರಿ, ಮಹಾತ್ಮ ಗಾಂಧಿಯವರ ಪ್ರತಿರೋಧ, ಡಾ. ಸತ್ಯಪಾಲ್ ಮತ್ತು ಸೈಫುದ್ದೀನ್ ಕಿಚ್‌ಲ್ಯೂ ಅವರ ಬಂಧನ ಇವೆಲ್ಲವೂ ಸಂಭಾಷಣೆಯಲ್ಲಿ ಮಾತ್ರ ಹೊಕ್ಕಿವೆ. ಇವುಗಳ ಜೊತೆಗೆ ಹತ್ಯಾಕಾಂಡದ ನಂತರದ ಹಲವು ದೌರ್ಜನ್ಯದ ಘಟನೆಗಳು (ಒಂದು ರಸ್ತೆಯನ್ನು ದಾಟುವಾಗ ಎಲ್ಲ ಭಾರತೀಯರೂ ತೆವಳಿ ಹೋಗಬೇಕು ಎಂಬ ಆದೇಶವನ್ನು ಡೈಯರ್ ನೀಡಿದ್ದು, ಸಾರ್ವಜನಿಕ್ವಾಗಿ ಜನರನ್ನು ನಗ್ನಗೊಳಿಸಿ ಥಳಿಸಿದ್ದು) ದೃಶ್ಯರೂಪದಲ್ಲಿ ಜಾಗಪಡೆಯಲು ಸಾಧ್ಯವಾಗಿದ್ದರೆ, ಅಂದರೆ ವಿವರಗಳು ಇನ್ನೂ ಪಕ್ವವಾಗಿ ದಾಖಲಾಗಿದ್ದರೆ ಸಿನಿಮಾ ಇನ್ನೂ ಮಹತ್ವದ್ದನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ದಾಟಿಸಲು ಸಾಧ್ಯವಾಗುತ್ತಿತ್ತು. ಜೊತೆಗೆ ಜಲಿಯನ್ ವಾಲಾಬಾಗ್ ಅನ್ನು ಬ್ರಿಟನ್ ಜನರಿಗೆ ತಿಳಿಸಲು ಪ್ರಯತ್ನಿಸಿದ ಪತ್ರಕರ್ತ ಹಾರ್ನಿಮನ್, ಹಂಟರ್ ಕಮಿಶನ್ ಭಾಗವಾಗಿದ್ದ ಮತ್ತು ದಿಟ್ಟತನದಿಂದ ವಿಚಾರಣೆ ನಡೆಸಿದ ಅಂದಿನ ಬ್ಯಾರಿಸ್ಟರ್ ಸೆತಲ್ವಾಡ್ – ಹೀಗೆ ಈ ಘಟನೆಗೆ ಸಂಬಂಧಿಸಿದ ಪ್ರಮುಖ ಐತಿಹಾಸಿಕ ವ್ಯಕ್ತಿಗಳನ್ನುಸಣ್ಣ ಅವಧಿಗಾದರೂ ಕಟ್ಟಿಕೊಡುವ ಅವಕಾಶವನ್ನು ನಿರ್ದೇಶಕರು ಕಳೆದುಕೊಂಡಿದ್ದಾರೆ.

ಉಧಮ್ ಸಿಂಗ್‌ನ ಈ ಕಥೆಯನ್ನು ಕಟ್ಟುವಾಗ ನಿರ್ದೇಶಕ ಶೂಜಿತ್ ಸರ್ಕಾರ್ ಹಲವು ಲಿಬರ್ಟಿಗಳನ್ನು ತೆಗೆದುಕೊಂಡಿದ್ದಾರೆ. ಅದಕ್ಕೆ ಒಂದು ಸಣ್ಣ ಉದಾಹರಣೆಯೆಂದರೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ದಿನ ಉಧಮ್ ಸಿಂಗ್ ಸ್ವತಃ ಗಾಯಗೊಂಡವರನ್ನು ರಕ್ಷಿಸಲು ಅಲ್ಲಿ ನೆರೆದಿದ್ದರೇ ಎಂಬುದರ ಬಗ್ಗೆ ನಿಖರ ದಾಖಲೆಗಳ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಆದರೆ ಅದೇ ಭಾಗವನ್ನು ನಿರ್ದೇಶಕರು ಹೆಚ್ಚು ವಿಸ್ತೃತವಾಗಿ ಹೆಣೆದಿದ್ದಾರೆ. ಈ ಲಿಬರ್ಟಿಯನ್ನು ಬಳಸಿ ಇಡೀ ಚಿತ್ರದ ಸಂಭಾಷಣೆಯನ್ನು ತಾತ್ವಿಕವಾಗಿ ವಸಾಹತುಶಹಿಯ ವಿರುದ್ಧ, ಪ್ರಭುತ್ವದ ಹಿಂಸೆಯ ವಿರುದ್ಧ ಚಿಂತನಾರ್ಹವಾಗಿ ಕಟ್ಟಿಕೊಡಲು ಬಳಸಬಹುದಿತ್ತು ಎಂಬ ಭಾವನೆ ಮೂಡದೆ ಇರದು

ಉಧಮ್ ಸಿಂಗ್ ಪಾತ್ರವನ್ನು ಪೋಷಿಸಿರುವ ವಿಕ್ಕಿ ಕೌಶಲ್ ಅವರಿಂದ ಮೊದಲು ಮಾಡಿ ಎಲ್ಲಾ ನಟರೂ ಚೊಕ್ಕವಾದ ನಟನೆಯನ್ನು ನೀಡಿರುವುದು ಪ್ರಶಂಸನೀಯ.

ಹಲವು ಕೊರತೆಗಳ ಹೊರತಾಗಿಯೂ, ಭಾರತದ ಸ್ವಾತಂತ್ರ್ಯ ಹೋರಾಟದ ಒಂದು ಪ್ರಮುಖ ಧಾರೆಯನ್ನು ಪ್ರತಿನಿಧಿಸಿರುವ, ಪ್ರಭುತ್ವದ ಹಿಂಸೆಯನ್ನು ಹಿಡಿಯಲು ಪ್ರಯತ್ನಿಸಿರುವ, ಕೇವಲ ಪ್ರತೀಕಾರದ ಕಥೆಯನ್ನಾಗಿಸದೆ ಅದಕ್ಕೆ ದೊಡ್ಡ ಕ್ಯಾನ್ವಾಸ್ ನೀಡಲು ಪ್ರಯತ್ನಿಸಿರುವ ಮತ್ತು ಈ ಹೋರಾಟದ ಧಾರೆಯನ್ನು ಪ್ರಸ್ತುತಪಡಿಸುವಾಗ ಅದು ಇಂದಿನ ದಿನಕ್ಕೆ ಎಲ್ಲ ಸಮುದಾಯಗಳನ್ನು, ಭಾಷಿಕರನ್ನು ಏಕೀಕೃತಗೊಳಿಸುವ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸದಂತೆ ಎಚ್ಚರಿಕೆಯನ್ನು ಹೊಂದಿರುವುದಕ್ಕೆ ಸರ್ದಾರ್ ಉಧಮ್ ಸಿನಿಮಾ ವರ್ತಮಾನಕ್ಕೆ ಅಗತ್ಯವಿದ್ದ ಸೃಜನಶೀಲ ಪ್ರತಿಕ್ರಿಯೆಯಾಗಿ ಮುಖ್ಯವಾಗುತ್ತದೆ.


ಇದನ್ನೂ ಓದಿ: ನರಮೇಧದ ನೆನಪಿಗೆ ಸುಣ್ಣ ಬಣ್ಣ ಬಳಿಯುತ್ತಿರುವುದೇಕೆ?

ಇದನ್ನೂ ಓದಿ: ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...