Homeಕರ್ನಾಟಕಇದು ಖುಷಿಯ ವಿಚಾರ; ಆತಂಕದ್ದೂ ಕೂಡ.... ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

ಇದು ಖುಷಿಯ ವಿಚಾರ; ಆತಂಕದ್ದೂ ಕೂಡ…. ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

- Advertisement -
- Advertisement -

ಯಾವುದೇ ಕಲೆಯ ತರಬೇತಿ ಇಲ್ಲದ, ಅಂತಹ ಯಾವ ಹಿನ್ನಲೆ ಅಥವಾ ಪರಿಸರದಲ್ಲಿ ಬೆಳೆಯದೇ ಇರುವ, ಗಾಂಧಿನಗರದಿಂದ 500 ಕಿ.ಮೀ. ದೂರದ ಉತ್ತರ ಕರ್ನಾಟಕದ ಒಂದು ಪುಟ್ಟ ಗ್ರಾಮದ ಶ್ರಮಜೀವಿ ಯುವಕನೊಬ್ಬನಿಗೆ ಸಿನಿಮಾ ಹೀರೊ ಆಗುವ ಅವಕಾಶ ಸಿಕ್ಕಿದೆ. ಇದು ಖುಷಿಯ ವಿಷಯ. ಇಲ್ಲಿ ಆತಂಕಕ್ಕೆ ಕಾರಣವೆಂದರೆ ಹಿಂದಿನ ಇಂತಹ ಪ್ರಸಂಗಗಳನ್ನೆ ನೆನೆದರೆ ಇಂತಹ ಹುಡುಗರು ಸಿನಿಮಾ ಮಂದಿಯ ತೆವಲು ಮತ್ತು ಸ್ವಾರ್ಥಕ್ಕೆ ಬಲಿಯಾಗಿ ತಮ್ಮ ಬದುಕನ್ನೆ ನಾಶ ಮಾಡಿಕೊಂಡ ದುರಂತ ನಮ್ಮ ಮುಂದೆ ಇದೆ.

ಈಗ ಸ ರಿ ಗ ಮ ಪ ಖ್ಯಾತಿಯ ಹನುಮಂತನನ್ನು ಹೀರೋ ಮಾಡಲು ಹೊರಟ ಯುವಕ ಉಡುಪಿ ಜಿಲ್ಲೆಯ ಕುಂದಾಪುರದ ಸಂದೇಶ ಶೆಟ್ಟಿ ಅಜ್ರಿ. ಸಿನಿಮಾ ನುಡಿಕಟ್ಟು ಮತ್ತು ತಂತ್ರಜ್ಞಾನ ಕೌಶಲ್ಯಗಳ ಮೇಲೆ ಈಗ ತಾನೇ ಹಿಡಿತ ಸಾಧಿಸುತ್ತಿರುವ ಈ ಯುವಕ ಗಾಂಧಿನಗರದ ವ್ಯವಹಾರದ ದೃಷ್ಟಿಯಲ್ಲಿ ನೋಡುವುದಾದರೆ ಒಂದರ್ಥದಲ್ಲೇ ಮುಗ್ಧನೇ. ಗಾಂಧಿನಗರ, ಕನಿಷ್ಕಾ ಇತ್ಯಾದಿ ಸಂಕೀರ್ಣ ‘ಸಿನಿ ಸಂತೆ’ಯಿಂದ ದೂರ ಇರುವಾತನೇ.

ನಿರ್ದೇಶಕ ಸಂದೇಶ್

ಮುಂಬೈಯಲ್ಲಿ ಹವ್ಯಾಸಿಯಾಗಿ ಸಿನಿಮಾ ಕೌಶಲ್ಯ ಕಲಿತ ಸಂದೇಶ್ ಈಗಾಗಲೇ ‘ಕತ್ತಲ ಕೋಣೆ’ ಎಂಬ ಸಿನಿಮಾವನ್ನು ನಿರ್ದೇಶಿಸಿ ಕೈಸುಟ್ಟುಕೊಂಡಿದ್ದಾರೆ. ಆ ಕತೆಯಲ್ಲಿ ಕರಾವಳಿಯಲ್ಲಿನ ಗಾಂಜಾ ಮಾಫಿಯಾದ ಚಿತ್ರಣವನ್ನು, ಆ ಮಾಫಿಯಾದ ಸದಸ್ಯರು ನಿಗೂಢವಾಗಿದ್ದರೂ, ಅವರು ಸಾರ್ವಜನಿಕ ಜೀವಮದಲ್ಲಿ ಸಭ್ಯ ಗಣ್ಯರಂತೆ ನಟಿಸುವುದನ್ನು ತೋರಿಸುತ್ತಲೇ, ಯುವಶಕ್ತಿಯ ಚೈತನ್ಯವನ್ನು ಹಿಂಡಿ ಹಾಕುತ್ತಿರುವ ಗಾಂಜಾ ದಂಧೆಯ ಬಗ್ಗೆ ಪೊಲೀಸ್ ವ್ಯವಸ್ಥೆ ಜಾಣಕುರುಡನ್ನು ಪ್ರದರ್ಶಿಸುವುದನ್ನು ತೋರಿಸಲು ಯತ್ನಿಸಿದ್ದಾರಂತೆ. ಅಂದಂತೆ ಈ ಚಿತ್ರದಲ್ಲಿ ಗಾಂಜಾ ಮಾಫಿಯದ ಡಾನ್ ಪತ್ರಿಕೆಯೊಂದನ್ನು ನಡೆಸುತ್ತಿರುತ್ತಾನೆ, ಆತನ ಸಂಸ್ಥೆಯಲ್ಲಿರುವ ಪತ್ರಕರ್ತರಿಗೂ ಇದರ ಅರಿವಿರುವುದಿಲ್ಲವಂತೆ. ಕೊಡಗಿನಲ್ಲಿ ಪ್ರವಾಹ ಸಂಭವಿಸಿದ ಕಾರಣಕ್ಕೆ ಆ ಭಾಗದಲ್ಲಿ ಚಿತ್ರಕ್ಕೆ ಹಿನ್ನಡೆ ಆಯಿತು ಎಂಬುದು ಸಂದೇಶ ಅಂಬೋಣ. ಆದರೆ ಈ ಚಿತ್ರವನ್ನು ಮಾರ್ಕೆಟ್ ಮಾಡುವುದರಲ್ಲಿ ಅವರು ಸಂಪೂರ್ಣ ಸೋತಿದ್ದಾರೆ.

ಈಗ ಅದರಿಂದ ಪಾಠ ಕಲಿತಿರುವೆ ಅಂದಿರುವ ಅವರು, ಈಗಾಗಲೇ ಹಲವು ಹೊಸ ನಿರ್ಮಾಪಕರನ್ನು ಸಂಪರ್ಕಿಸಿದ್ದಾರಂತೆ. ಹಾಡುಹಕ್ಕಿ ಹನುಮಂತನ ಮನೆಗೂ ಹೋಗಿ ಅವರ ಕುಟುಂಬದವರಿಗೆ ಭರವಸೆ ನೀಡಿ ಹನುಮಂತನನ್ನು ಸಿನಿಮಾಕ್ಕೆ ಒಪ್ಪಿಸಿದ್ದಾರೆ.

‘ಹನುಮಂತನಲ್ಲಿ ಮುಗ್ಧತೆ ಇರುವುದು ನಿಜವಾದರೂ ಅದು ಪೂರ್ತಿ ಸತ್ಯವಲ್ಲ. ಬಣ್ಣದ ಜಗತ್ತಿನ ಯಾಮಾರಿಸುವ ಕಲೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಆತ ಅದನ್ನು ನೇರವಾಗಿ ಹೇಳುವುದಿಲ್ಲ, ಅದನ್ನು ತನ್ನ ಆಡುಭಾಷೆಯಲ್ಲಿ ವಂಗ್ಯದೊಂದಿಗೆ ಅಭಿವ್ಯಕ್ತಿಸುತ್ತಾನೆ. ಇನ್ನೊಂದು ವಿಷಯವೆಂದರೆ ಹನುಮಂತನಿಗೆ ದಿಢೀರ್ ಖ್ಯಾತಿಯ ಯಾವ ಗೀಳೂ ಇಲ್ಲ. ಈಗ ಆತ ಬೇರೆ ಬೇರೆ ಊರುಗಳಲ್ಲಿ ಸ್ಟೇಜ್ ಶೋಗಳಲ್ಲಿ ಭಾಗವಹಿಸಿ ಅವರು ಕೊಟ್ಟ ಗೌರವಧನ ಪಡೆಯುತ್ತಿದ್ದಾನೆ. ಜನರಿಂದ ಸಿಗುವ ಪ್ರೀತಿಯೇ ಆತನಿಗೆ ಸಂಪತ್ತಾಗಿದೆ. ಆದರೆ ಲೌಕಿಕ ಬದುಕಿಗೆ ಅದೆಲ್ಲ ಸಾಕಾಗುವುದಿಲ್ಲವಲ್ಲ. ನಮ್ಮ ಸಿನಿಮಾದ ಮೂಲಕ ಆತನ ಗಾಯನ ಕಲೆ ಮತ್ತು ಆತನಲ್ಲಿರುವ ನಟನೆಯನ್ನು ಜನರು ಎದುರು ಇಡುವ ಪ್ರಾಮಾಣಿಕ ಯತ್ನವನ್ನು ಮಾಡುತ್ತೇವೆ’ ಎನ್ನುತ್ತಾರೆ ಸಂದೇಶ್.

ಝೀ ಟಿವಿಯಲ್ಲಿ ಈ ಹಿಂದೆ ಶಿರಹಟ್ಟಿ ಕಡೆಯ ಹನುಮಂತನ ಹೆಸರಿನ ಇನ್ನೊಬ್ಬ ತಳಸಮುದಾದಯದ ಯುವಕ ಪ್ರಶಸ್ತಿ ಪಡೆದ ನಂತರ ಸಿನಿಮಾದಲ್ಲಿ ಹಾಡಲು ಅವಕಾಶ ಎಂದೆಲ್ಲ ಪ್ರಚಾರವಾಯಿತಾದರೂ ಈಗ ಆತನ ಹೆಸರೇ ಇಲ್ಲ. ‘ಜಂಗ್ಲಿ ಜಾಕಿ’ ಹೆಸರಿನ ಸಿನಿಮಾ ಎಂಬ ಎಂಬ ವಂಚಕ ಜಾಲದಲ್ಲಿ ಸಿಕ್ಕ ಆದಿವಾಸಿ ಯುವಕ ರಾಜೇಶ್ ಮಾನಸಿಕ ಅಸ್ವಸ್ಥನಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ ದುರಂತ ನಮ್ಮ ಮುಂದೆ ಇದೆ.

ಇದರ ಬಗ್ಗೆ ಸ್ಪಷ್ಟ ಅರಿವಿರುವ ಸಂದೇಶ್, ಈ ಸಿನಿಮಾ ಕತೆಯಲ್ಲಿ ಇಂತಹ ವಂಚನೆಯ ವಿಷಯವೂ ಮತ್ತು ಹಳ್ಳುಗಾಡಿನ ಪ್ರತಿಭೆಗಳಿಗೆ ಅವಕಾಶ ಕೊಡುತ್ತಲೇ ಅವರ ಸಹಜ ಸ್ವಭಾವವನ್ನು ಟಿಆರ್ಪಿಗೆಂದು ಬಳಸಿಕೊಳ್ಳುವ ಆತುರದಲ್ಲಿ ಅವರನ್ನ ಬಫುನ್‍ಗಳನ್ನಂತೆ ಮಾಡುವ ಕ್ರೌರ್ಯವನ್ನು ಸೂಕ್ಷ್ಮವಾಗಿ ತೋರಿಸುತ್ತಿದ್ದೇವೆ. ಹನುಮಂತನ ಬದುಕಿನ ಚಿತ್ರಣದ ವಿವರಗಳು ಮನೋಜ್ಞವಾಗಿ ಮೂಡಿ ಬರಲಿವೆ ಎಂದರು ಸಂದೇಶ್.

ಹಾಡು ಮತ್ತು ಗಾಯನ ಕಲೆ ಹಿಂದಿರುವ ಸಾಂಸ್ಕೃತಿಕ ರಾಜಕಾರಣ, ಆ ಕಾರಣಕ್ಕಾಗಿ ಸಮುದಾಯವೊಂದರ ಹಿಡಿತದಲ್ಲಿ ಈ ಕಲೆಗಳು ಬಂಧಿಯಾಗಿದ್ದ ಇತುಹಾಸವನ್ನೂ ಸಂದೇಶ್ ನಮ್ಮ ಮುಂದಿಡಲಿದ್ದಾರಂತೆ. ಹನುಮಂತ ಮತ್ತು ಸಂದೇಶ ಇಬ್ಬರಿಗೂ ಒಳ್ಳೆಯದಾಗಲಿ. ನಮ್ಮಲ್ಲಿರುವ ಆತಂಕವನ್ನು ಸಂದೇಶ್ ದೂರ ಮಾಡಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಧನ್ಯವಾದ ಸರ್ ಕಲಾವಿದರು ನಿಮ್ಮಂತಹ ಪತ್ರಕರ್ತರ ಬರಹಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ,

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...