Homeಕರ್ನಾಟಕಇದು ಖುಷಿಯ ವಿಚಾರ; ಆತಂಕದ್ದೂ ಕೂಡ.... ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

ಇದು ಖುಷಿಯ ವಿಚಾರ; ಆತಂಕದ್ದೂ ಕೂಡ…. ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

- Advertisement -
- Advertisement -

ಯಾವುದೇ ಕಲೆಯ ತರಬೇತಿ ಇಲ್ಲದ, ಅಂತಹ ಯಾವ ಹಿನ್ನಲೆ ಅಥವಾ ಪರಿಸರದಲ್ಲಿ ಬೆಳೆಯದೇ ಇರುವ, ಗಾಂಧಿನಗರದಿಂದ 500 ಕಿ.ಮೀ. ದೂರದ ಉತ್ತರ ಕರ್ನಾಟಕದ ಒಂದು ಪುಟ್ಟ ಗ್ರಾಮದ ಶ್ರಮಜೀವಿ ಯುವಕನೊಬ್ಬನಿಗೆ ಸಿನಿಮಾ ಹೀರೊ ಆಗುವ ಅವಕಾಶ ಸಿಕ್ಕಿದೆ. ಇದು ಖುಷಿಯ ವಿಷಯ. ಇಲ್ಲಿ ಆತಂಕಕ್ಕೆ ಕಾರಣವೆಂದರೆ ಹಿಂದಿನ ಇಂತಹ ಪ್ರಸಂಗಗಳನ್ನೆ ನೆನೆದರೆ ಇಂತಹ ಹುಡುಗರು ಸಿನಿಮಾ ಮಂದಿಯ ತೆವಲು ಮತ್ತು ಸ್ವಾರ್ಥಕ್ಕೆ ಬಲಿಯಾಗಿ ತಮ್ಮ ಬದುಕನ್ನೆ ನಾಶ ಮಾಡಿಕೊಂಡ ದುರಂತ ನಮ್ಮ ಮುಂದೆ ಇದೆ.

ಈಗ ಸ ರಿ ಗ ಮ ಪ ಖ್ಯಾತಿಯ ಹನುಮಂತನನ್ನು ಹೀರೋ ಮಾಡಲು ಹೊರಟ ಯುವಕ ಉಡುಪಿ ಜಿಲ್ಲೆಯ ಕುಂದಾಪುರದ ಸಂದೇಶ ಶೆಟ್ಟಿ ಅಜ್ರಿ. ಸಿನಿಮಾ ನುಡಿಕಟ್ಟು ಮತ್ತು ತಂತ್ರಜ್ಞಾನ ಕೌಶಲ್ಯಗಳ ಮೇಲೆ ಈಗ ತಾನೇ ಹಿಡಿತ ಸಾಧಿಸುತ್ತಿರುವ ಈ ಯುವಕ ಗಾಂಧಿನಗರದ ವ್ಯವಹಾರದ ದೃಷ್ಟಿಯಲ್ಲಿ ನೋಡುವುದಾದರೆ ಒಂದರ್ಥದಲ್ಲೇ ಮುಗ್ಧನೇ. ಗಾಂಧಿನಗರ, ಕನಿಷ್ಕಾ ಇತ್ಯಾದಿ ಸಂಕೀರ್ಣ ‘ಸಿನಿ ಸಂತೆ’ಯಿಂದ ದೂರ ಇರುವಾತನೇ.

ನಿರ್ದೇಶಕ ಸಂದೇಶ್

ಮುಂಬೈಯಲ್ಲಿ ಹವ್ಯಾಸಿಯಾಗಿ ಸಿನಿಮಾ ಕೌಶಲ್ಯ ಕಲಿತ ಸಂದೇಶ್ ಈಗಾಗಲೇ ‘ಕತ್ತಲ ಕೋಣೆ’ ಎಂಬ ಸಿನಿಮಾವನ್ನು ನಿರ್ದೇಶಿಸಿ ಕೈಸುಟ್ಟುಕೊಂಡಿದ್ದಾರೆ. ಆ ಕತೆಯಲ್ಲಿ ಕರಾವಳಿಯಲ್ಲಿನ ಗಾಂಜಾ ಮಾಫಿಯಾದ ಚಿತ್ರಣವನ್ನು, ಆ ಮಾಫಿಯಾದ ಸದಸ್ಯರು ನಿಗೂಢವಾಗಿದ್ದರೂ, ಅವರು ಸಾರ್ವಜನಿಕ ಜೀವಮದಲ್ಲಿ ಸಭ್ಯ ಗಣ್ಯರಂತೆ ನಟಿಸುವುದನ್ನು ತೋರಿಸುತ್ತಲೇ, ಯುವಶಕ್ತಿಯ ಚೈತನ್ಯವನ್ನು ಹಿಂಡಿ ಹಾಕುತ್ತಿರುವ ಗಾಂಜಾ ದಂಧೆಯ ಬಗ್ಗೆ ಪೊಲೀಸ್ ವ್ಯವಸ್ಥೆ ಜಾಣಕುರುಡನ್ನು ಪ್ರದರ್ಶಿಸುವುದನ್ನು ತೋರಿಸಲು ಯತ್ನಿಸಿದ್ದಾರಂತೆ. ಅಂದಂತೆ ಈ ಚಿತ್ರದಲ್ಲಿ ಗಾಂಜಾ ಮಾಫಿಯದ ಡಾನ್ ಪತ್ರಿಕೆಯೊಂದನ್ನು ನಡೆಸುತ್ತಿರುತ್ತಾನೆ, ಆತನ ಸಂಸ್ಥೆಯಲ್ಲಿರುವ ಪತ್ರಕರ್ತರಿಗೂ ಇದರ ಅರಿವಿರುವುದಿಲ್ಲವಂತೆ. ಕೊಡಗಿನಲ್ಲಿ ಪ್ರವಾಹ ಸಂಭವಿಸಿದ ಕಾರಣಕ್ಕೆ ಆ ಭಾಗದಲ್ಲಿ ಚಿತ್ರಕ್ಕೆ ಹಿನ್ನಡೆ ಆಯಿತು ಎಂಬುದು ಸಂದೇಶ ಅಂಬೋಣ. ಆದರೆ ಈ ಚಿತ್ರವನ್ನು ಮಾರ್ಕೆಟ್ ಮಾಡುವುದರಲ್ಲಿ ಅವರು ಸಂಪೂರ್ಣ ಸೋತಿದ್ದಾರೆ.

ಈಗ ಅದರಿಂದ ಪಾಠ ಕಲಿತಿರುವೆ ಅಂದಿರುವ ಅವರು, ಈಗಾಗಲೇ ಹಲವು ಹೊಸ ನಿರ್ಮಾಪಕರನ್ನು ಸಂಪರ್ಕಿಸಿದ್ದಾರಂತೆ. ಹಾಡುಹಕ್ಕಿ ಹನುಮಂತನ ಮನೆಗೂ ಹೋಗಿ ಅವರ ಕುಟುಂಬದವರಿಗೆ ಭರವಸೆ ನೀಡಿ ಹನುಮಂತನನ್ನು ಸಿನಿಮಾಕ್ಕೆ ಒಪ್ಪಿಸಿದ್ದಾರೆ.

‘ಹನುಮಂತನಲ್ಲಿ ಮುಗ್ಧತೆ ಇರುವುದು ನಿಜವಾದರೂ ಅದು ಪೂರ್ತಿ ಸತ್ಯವಲ್ಲ. ಬಣ್ಣದ ಜಗತ್ತಿನ ಯಾಮಾರಿಸುವ ಕಲೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಆತ ಅದನ್ನು ನೇರವಾಗಿ ಹೇಳುವುದಿಲ್ಲ, ಅದನ್ನು ತನ್ನ ಆಡುಭಾಷೆಯಲ್ಲಿ ವಂಗ್ಯದೊಂದಿಗೆ ಅಭಿವ್ಯಕ್ತಿಸುತ್ತಾನೆ. ಇನ್ನೊಂದು ವಿಷಯವೆಂದರೆ ಹನುಮಂತನಿಗೆ ದಿಢೀರ್ ಖ್ಯಾತಿಯ ಯಾವ ಗೀಳೂ ಇಲ್ಲ. ಈಗ ಆತ ಬೇರೆ ಬೇರೆ ಊರುಗಳಲ್ಲಿ ಸ್ಟೇಜ್ ಶೋಗಳಲ್ಲಿ ಭಾಗವಹಿಸಿ ಅವರು ಕೊಟ್ಟ ಗೌರವಧನ ಪಡೆಯುತ್ತಿದ್ದಾನೆ. ಜನರಿಂದ ಸಿಗುವ ಪ್ರೀತಿಯೇ ಆತನಿಗೆ ಸಂಪತ್ತಾಗಿದೆ. ಆದರೆ ಲೌಕಿಕ ಬದುಕಿಗೆ ಅದೆಲ್ಲ ಸಾಕಾಗುವುದಿಲ್ಲವಲ್ಲ. ನಮ್ಮ ಸಿನಿಮಾದ ಮೂಲಕ ಆತನ ಗಾಯನ ಕಲೆ ಮತ್ತು ಆತನಲ್ಲಿರುವ ನಟನೆಯನ್ನು ಜನರು ಎದುರು ಇಡುವ ಪ್ರಾಮಾಣಿಕ ಯತ್ನವನ್ನು ಮಾಡುತ್ತೇವೆ’ ಎನ್ನುತ್ತಾರೆ ಸಂದೇಶ್.

ಝೀ ಟಿವಿಯಲ್ಲಿ ಈ ಹಿಂದೆ ಶಿರಹಟ್ಟಿ ಕಡೆಯ ಹನುಮಂತನ ಹೆಸರಿನ ಇನ್ನೊಬ್ಬ ತಳಸಮುದಾದಯದ ಯುವಕ ಪ್ರಶಸ್ತಿ ಪಡೆದ ನಂತರ ಸಿನಿಮಾದಲ್ಲಿ ಹಾಡಲು ಅವಕಾಶ ಎಂದೆಲ್ಲ ಪ್ರಚಾರವಾಯಿತಾದರೂ ಈಗ ಆತನ ಹೆಸರೇ ಇಲ್ಲ. ‘ಜಂಗ್ಲಿ ಜಾಕಿ’ ಹೆಸರಿನ ಸಿನಿಮಾ ಎಂಬ ಎಂಬ ವಂಚಕ ಜಾಲದಲ್ಲಿ ಸಿಕ್ಕ ಆದಿವಾಸಿ ಯುವಕ ರಾಜೇಶ್ ಮಾನಸಿಕ ಅಸ್ವಸ್ಥನಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ ದುರಂತ ನಮ್ಮ ಮುಂದೆ ಇದೆ.

ಇದರ ಬಗ್ಗೆ ಸ್ಪಷ್ಟ ಅರಿವಿರುವ ಸಂದೇಶ್, ಈ ಸಿನಿಮಾ ಕತೆಯಲ್ಲಿ ಇಂತಹ ವಂಚನೆಯ ವಿಷಯವೂ ಮತ್ತು ಹಳ್ಳುಗಾಡಿನ ಪ್ರತಿಭೆಗಳಿಗೆ ಅವಕಾಶ ಕೊಡುತ್ತಲೇ ಅವರ ಸಹಜ ಸ್ವಭಾವವನ್ನು ಟಿಆರ್ಪಿಗೆಂದು ಬಳಸಿಕೊಳ್ಳುವ ಆತುರದಲ್ಲಿ ಅವರನ್ನ ಬಫುನ್‍ಗಳನ್ನಂತೆ ಮಾಡುವ ಕ್ರೌರ್ಯವನ್ನು ಸೂಕ್ಷ್ಮವಾಗಿ ತೋರಿಸುತ್ತಿದ್ದೇವೆ. ಹನುಮಂತನ ಬದುಕಿನ ಚಿತ್ರಣದ ವಿವರಗಳು ಮನೋಜ್ಞವಾಗಿ ಮೂಡಿ ಬರಲಿವೆ ಎಂದರು ಸಂದೇಶ್.

ಹಾಡು ಮತ್ತು ಗಾಯನ ಕಲೆ ಹಿಂದಿರುವ ಸಾಂಸ್ಕೃತಿಕ ರಾಜಕಾರಣ, ಆ ಕಾರಣಕ್ಕಾಗಿ ಸಮುದಾಯವೊಂದರ ಹಿಡಿತದಲ್ಲಿ ಈ ಕಲೆಗಳು ಬಂಧಿಯಾಗಿದ್ದ ಇತುಹಾಸವನ್ನೂ ಸಂದೇಶ್ ನಮ್ಮ ಮುಂದಿಡಲಿದ್ದಾರಂತೆ. ಹನುಮಂತ ಮತ್ತು ಸಂದೇಶ ಇಬ್ಬರಿಗೂ ಒಳ್ಳೆಯದಾಗಲಿ. ನಮ್ಮಲ್ಲಿರುವ ಆತಂಕವನ್ನು ಸಂದೇಶ್ ದೂರ ಮಾಡಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಧನ್ಯವಾದ ಸರ್ ಕಲಾವಿದರು ನಿಮ್ಮಂತಹ ಪತ್ರಕರ್ತರ ಬರಹಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ,

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...