Homeಚಳವಳಿಜನರ ಉಸಿರಾಗಿರುವ ಹಸಿರು ’ನಲ್ಲಮಲ’ ಕಾಡಿನ ಮೇಲೆ ಕೇಂದ್ರ, ರಾಜ್ಯ ಸರ್ಕಾರದ ಕೆಂಗಣ್ಣು..

ಜನರ ಉಸಿರಾಗಿರುವ ಹಸಿರು ’ನಲ್ಲಮಲ’ ಕಾಡಿನ ಮೇಲೆ ಕೇಂದ್ರ, ರಾಜ್ಯ ಸರ್ಕಾರದ ಕೆಂಗಣ್ಣು..

- Advertisement -
- Advertisement -

‘ನಲ್ಲಮಲ’ ಒಂದು ಕಾಡಿನ ಹೆಸರು. ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಉಸಿರಿನಂತಿರುವ ಹಸಿರ ಹೊದಿಕೆಯ ದಟ್ಟಾರಣ್ಯ ಇದು. ಇಲ್ಲಿ ವಿವಿಧ ಬುಡಕಟ್ಟು ಜನಾಂಗಗಳು ಈಗಲೂ ಸಹ ತಮ್ಮ ಜೀವನವನ್ನ ಸಾಗಿಸುತ್ತಾ ಬಂದಿದ್ದಾರೆ. ಚೆಂಚು ಎಂಬ ಬುಡಕಟ್ಟು ಜನಾಂಗ ಇಲ್ಲಿ ತಲೆ ತಲೆಮಾರುಗಳಿಂದ ಜೀವಿಸುತ್ತಾ ಬಂದಿದ್ದಾರೆ. ಸದಾ ಹಚ್ಚ ಹಸಿರಿನಿಂದ ಕೂಡಿರುವ ಈ ಕಾಡು ಎರಡು ರಾಜ್ಯಗಳ ಮಳೆ, ಬೆಳೆ ಮತ್ತು ವಾತಾವರಣ ಸಮತೋಲನಕ್ಕೆ ಪ್ರಮುಖ ಪಾತ್ರವಹಿಸುತ್ತದೆ.

ನಲ್ಲಮಲ ಕಾಡು ಜೀವಜಂತುಗಳ ವೈವಿಧ್ಯತೆಯಿಂದ ಕೂಡಿದ್ದು ಇಲ್ಲಿ 600ಕ್ಕೂ ವಿವಿಧ ಜಾತಿಯ ಮರಗಳು, 300 ರೀತಿಯ ಪಕ್ಷಿಗಳು, ವಿಶೇಷವಾಗಿ ವಿನಾಶದ ಅಂಚಿನಲ್ಲಿರುವ ಹುಲಿಗಳು, ಚಿರತೆ, ಆನೆ, ಕೃಷ್ಣಮೃಗ, ಮುಂತಾದ 70ಕ್ಕೂ ಅಧಿಕ ಜಾತಿಯ ಪ್ರಾಣಿಗಳು ಇಲ್ಲಿವೆ. ಇಂತಹ ಜೀವ ವೈವಿಧ್ಯತೆಯ ತಾಣಕ್ಕೆ ಈಗ ಗಂಡಾಂತರ ಬಂದೊದಗಿದೆ. ಅದೇನೆಂದರೆ ನಲ್ಲಮಲ ಕಾಡಿನಲ್ಲಿ ಯುರೇನಿಯಂ ಇದೆಯೆಂದು ಕೆಲವು ಸಂಶೋಧನೆಗಳಿಂದ ತಿಳಿದು ಬಂದಿದ್ದು, ಇಲ್ಲಿ ಕೇಂದ್ರ ಸರ್ಕಾರ ರಾಜ್ಯಸರ್ಕಾರದ ಸಹಕಾರದೊಂದಿಗೆ ಯುರೇನಿಯಂ ಗಣಿಗಾರಿಕೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ.

ಜಗತ್ತನ್ನೆ ನಾಶ ಮಾಡಲು ಶಕ್ತಿಯುಳ್ಳ ಅಣು ಬಾಂಬ್ ತಯಾರಿಕೆಯಲ್ಲಿ ಬಳಸುವ ‘ಯುರೇನಿಯಂ’ ನಲ್ಲಮಲ ಕಾಡಿನಲ್ಲಿ ಸಿಗಲಿದೆ ಎಂದಿದ್ದೆ ತಡ ಹಿಂದೆ ಮುಂದೆ ನೋಡದೆ ಕೇಂದ್ರ ಮತ್ತು ತೆಲಂಗಾಣ ರಾಜ್ಯ ಸರ್ಕಾರ ಕಾಡನ್ನು ಬಗೆಯಲು ವಿವೇಚನ ರಹಿತವಾಗಿ ಹೊರಟಿವೆ. ಇದನ್ನು ಸ್ಥಳೀಯ ಜನಪರ ಹೋರಾಟಗಾರರು ಮತ್ತು ಪ್ರಜ್ಞಾವಂತರು ತೀವ್ರವಾಗಿ ಖಂಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸ್ವಲ್ಫ ಹಿಂದೇಟು ಹಾಕುತ್ತಿದ್ದರು ಸಹ ಕೇಂದ್ರ ಸರ್ಕಾರ ಸ್ಥಳೀಯ ಗ್ರಾಮಪಂಚಾಯಿತಿಯ ಅನುಮತಿ ಪಡೆಯದೆ ‘ಯುರೇನಿಯಂ ಕಾರ್ಪೋರೇಷನ್’ (ಯು.ಸಿ.ಎಲ್) ಗೆ ಅನುಮತಿ ನೀಡಿ ಗಣಿಗಾರಿಕೆ ಶುರು ಮಾಡುವ ಆತುರದಲ್ಲಿದೆ. ಮೇಲ್ನೋಟಕ್ಕೆ ಇದನ್ನು ವಿರೋಧಿಸುವಂತೆ ಮಾತನಾಡುವ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ಸರ್ಕಾರ, ಕೇಂದ್ರ ಸರ್ಕಾರ ಮಾಡುತ್ತಿರುವ ಕೆಲಸಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸುತ್ತಿಲ್ಲ.

ಯುರೇನಿಯಂನ್ನು ಇತ್ತಿಚಿಗೆ ಅಣು ವಿದ್ಯುತ್ ಉತ್ಪಾದನೆಗೂ ಬಳಸುತ್ತಾರೆ. ಇದು ಬಹಳ ಅಪಾಯಕಾರಿಯಾದ ಖನಿಜವಾಗಿದೆ. ಇದನ್ನು ಸರಿಯಾಗಿ ನಿವರ್ಹಣೆ ಮಾಡದೆ ಹೋದರೆ ಈ ಗಣಿಗಾರಿಕೆ ನಡೆಯುವ ಸುತ್ತಲಿನ ಪ್ರದೇಶ ವಿಷಮಯವಾಗುವ ಎಲ್ಲಾ ಸಾಧ್ಯತೆ ಇದೆ. ಯುರೇನಿಯಂನ್ನು ಇಂಧನವಾಗಿ ಬಳಸುವ ಅಣು ವಿದ್ಯುತ್ ಕೇಂದ್ರಗಳು ಅವಘಡಗಳಾಗಿ ಸ್ಫೋಟಗಳ್ಳದೆ ಇರುವ ಸಮಯದಲ್ಲೂ ಸಹ ಅಣು ವಿದ್ಯುತ್ ಕೇಂದ್ರದ ಮೂಲಕ ಅಲ್ಫಾ, ಬೀಟಾ, ಗಾಮಾ ವಿಕಿರಣಗಳು ಹೋರಸೂಸುತ್ತಲೇ ಇರುತ್ತವೆ. ಕ್ಯಾನ್ಸರ್ ಮತ್ತು ತಲೆಮಾರುಗಳವರೆಗೂ ವಿವಿಧ ಅಂಗ ವೈಕಲ್ಯ ಸೃಷ್ಟಿಸುವ ಅಪಾಯ ಇದರಿಂದಾಗುತ್ತದೆ.

ಇಪ್ಪತ್ತು ಮೂವತ್ತು ವರ್ಷ ಮಾತ್ರ ಇರುವ ಯುರೇನಿಯಂ ಅನ್ನು ಬಳಸಬಹುದು ನಂತರ ಅವು ಕೆಲಸಕ್ಕೆ ಬರೆದೆ ಹೋಗುತ್ತವೆ. ತದ ನಂತರವು ಅವು ಹೊರ ಸೂಸುವ ಕಿರಣಗಳಿಂದ ಅತ್ಯಂತ ಘೋರವಾದ ಪರಿಸರ ಮತ್ತು ಜೀವ ನಾಶವಾಗಲಿದೆ. ಇದೇ ಭಾಗದಲ್ಲಿ ಕೃಷ್ಣಾನದಿ, ಶ್ರೀ ಶೈಲಂ, ನಾಗಾರ್ಜುನ ಸಾಗರ ಜಲಾಶಯಗಳು ಇವೆ. ಇಲ್ಲಿಂದ  ಕುಡಿಯಲು ಮತ್ತು ಬೆಳೆಯಲು ಈ ನೀರನ್ನು ಬಳಸುವುದರಿಂದ ಸ್ವಲ್ಫ ಹೆಚ್ಚುಕಮ್ಮಿ ಆದರೂ ಸಹ ವಿಕಿರಣಗಳು ಈ ನೀರಿನಲ್ಲಿ ಸೇರಿದರೆ ಜನಸಾಮಾನ್ಯರು ಮತ್ತು ಜೀವ ಸಂಕುಲಕ್ಕೆ ಕುತ್ತು ಬರಲಿದೆ.

ಈಗ ಸರ್ಕಾರದ ಮುಂದೆ ಇರುವ ಪ್ರಶ್ನೆ ಅಪಾಯಕಾರಿ ಖನಿಜವನ್ನು ಬಳಸಿ ವಿದ್ಯುತ್ ಉತ್ಫಾದನೆ ಮಾಡುವ ಅವಶ್ಯಕತೆಯಾದರೂ ಎನಿದೆ? ಈಗಾಗಲೆ ನಮ್ಮಲ್ಲಿ ಸೌರ ಮತ್ತು ಪವನ ವಿದ್ಯುತ್ ಅತ್ಯಂತ ಯಶಸ್ವಿಯಾಗಿ ಉತ್ಫಾದನೆ ಮಾಡಲಾಗುತ್ತಿದೆ. ಇಂತಹ ಮರುಬಳಕೆಯ ಸಂಪನ್ಮೂಲವನ್ನು ಬಳಸಿ ವಿದ್ಯುತ್ ಉತ್ಫಾದನೆ ಮಾಡುವುದನ್ನು ಬಿಟ್ಟು ಯುರೇನಿಯಂನ್ನು ಬಳಸಿ ಅಣು ವಿದ್ಯುತ್ ಅನ್ನೇ ಉತ್ಫಾದಿಸುತ್ತೆವೆ ಎಂಬ ಸರ್ಕಾರದ ಹುನ್ನಾರವೇನು? ಇದು ಬರಿ ಅಣು ವಿದ್ಯುತ್‌ಗೆ ನಿಲ್ಲದೇ ಅಣುಬಾಂಬ್ ತಯಾರಿಕೆಯವರೆಗೂ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ. ಈ ರೀತಿಯ ನಡೆಗಳು ಮುಂದುವರೆದ ದೇಶಗಳೆನಿಸಿಕೊಂಡ ಅಮೆರಿಕಾ, ಕೆನಡಾ, ಇಂಗ್ಲೆಂಡ್, ಫ್ರಾನ್ಸ್ ಮುಂತಾದ ದೇಶಗಳ ಪ್ರಯತ್ನಗಳ ವಿರುದ್ಧ ಅಲ್ಲಿನ ಜನಸಾಮಾನ್ಯರು ಬೃಹತ್‍ಮಟ್ಟದ ಹೋರಾಟಗಳನ್ನು ಮಾಡಿ ಬೀದಿಯಲ್ಲಿ ಪ್ರತಿಭಟಿಸಿದ್ದಾರೆ.

ಇಪ್ಪತ್ತು ಸಾವಿರ ಟನ್ನುನಷ್ಟು ಯುರೇನಿಯಂ ಇರಬಹುದೆಂದು ಅಂದಾಜು ಮಾಡಲಾಗಿದೆ. ಇದನ್ನು ತೆಗೆಯಲು ಅನುಕೂಲವಾಗುವಂತೆ ಸುಮಾರು ನಾಲ್ಕು ಸಾವಿರ ಬೋರ್‍ವೆಲ್‍ಗಳನ್ನು ಕೊರೆಯಬೇಕಾಗುತ್ತದೆ ಎನ್ನಲಾಗುತ್ತಿದೆ. 2030ರ ಹೊತ್ತಿಗೆ 40ಸಾವಿರ ಮೆಗಾವ್ಯಾಟ್‌ಗಳ ಅಣುವಿದ್ಯುತ್ ಉತ್ಫಾದನೆ ಮಾಡಬೇಕೆಂಬ ಗುರಿ ಇಟ್ಟುಕೊಳ್ಳಲಾಗಿದ್ದು, ಸರ್ಕಾರ ಮಾಡುತ್ತಿರುವ ಆತುರಕ್ಕೆ ಬಹುರಾಷ್ಟ್ರಿಯ ಕಂಪನಿಗೆಳ ಒತ್ತಡ ಕಾರಣವಾಗಿದೆ ಎಂದು ಕೆಲವು ಜನಪರ ಚಿಂತಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ರಾಜ್ಯ ಸಚಿವ ಕೆಟಿಆರ್ ಸಂಪುಟದಲ್ಲಿ ‘ನಲ್ಲಮಲ’ ಯರೇನಿಯಂ ಗಣಿ ಯೋಜನೆಗೆ ವಿರುದ್ಧವಾಗಿ ಬಿಲ್ ಮಂಡಿಸಿದ್ದಾರೆ. ಮತ್ತು ಸಿನೆಮಾ ನಿರ್ದೇಶಕ ಪೂರಿ ಜಗನ್ನಾತ್, ನಟ ಪವನ್ ಕಲ್ಯಾಣ್, ವಿಜಯ್ ದೇವರಕೊಂಡ, ನಟಿ ಸಮಂತ ಮತ್ತಿತರರು ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಯೋಜನೆಯನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಈ ಟ್ವಿಟ್ಟರ್‍ ಅಭಿಯಾನವನ್ನು ಡಿವೈಎಫ್‍ಐ ಸಂಘಟನೆ ಫ್ರಾರಂಬಿಸಿದ್ದು ಟ್ರೆಂಡ್ ಆಗಿತ್ತು.

ಬೆಲ್ಲ ಇದ್ದ ಕಡೆ ಇರುವೆಯ ಜಾಡು ಮೂಡುವ ಹಾಗೆ ಬಹುರಾಷ್ಟ್ರೀಯ ಕಂಪನಿಗಳು ಸದಾ ನೈಸರ್ಗಿಕ ಸಂಪನ್ಮೂಲಗಳಿರುವ ಕಡೆ ಕಣ್ಣು ಹಾಕಿರುತ್ತಾರೆ. ಅವರಿಗೆ ಪೂರಕವಾದ ಸರ್ಕಾರಗಳಿದ್ದರಂತು ಮುಗಿದೆ ಹೋಯಿತು. ಕಡಿಮೆ ಸಮಯದಲ್ಲಿ ಹೆಚ್ಚು ತಿಂದು ತೇಗಲು ಬೇಕಾದ ವಾತಾವರಣ ರೂಪಿಸಿಕೊಂಡು ಕಾರ್ಯಕ್ಕಿಳಿಯುತ್ತವೆ. ಇತ್ತಿಚಿಗೆ ಅಮೇಜಾನ್ ಕಾಡು ಮನುಷ್ಯನ ದುರಂಹಾಕರಕ್ಕೆ ಹೊತ್ತಿ ಉರಿದ ಹಾಗೆ ನಲ್ಲಮಲ ಕಾಡು ಮನುಷ್ಯನ ದುರಾಸೆಗೆ ಬಲಿಯಾಗದೆ ಇರಲಿ. ಅಲ್ಲಿನ ಮೂಲ ನಿವಾಸಿಗಳಾದ ‘ಚೆಂಚು’, ’ಕೋಯಾ’ ಬುಡಕಟ್ಟು ಜನಾಂಗಗಳು ಇದುವರೆಗೂ ಆ ಕಾಡನ್ನು ನಾಶವಾಗದೆ ಕಾಪಾಡಿಕೊಂಡು ಬಂದಿದ್ಧಾರೆ. ಸರ್ಕಾರದ ಈ ಆತುರದ ತೀರ್ಮಾನಗಳಿಂದ ಈ ಜನಾಂಗ ನಾಶವಾಗದಂತೆ ಕಪಾಡಿಕೊಳ್ಳಬೇಕಾಗಿದೆ.

ಅದಕ್ಕಾಗಿ ನಲ್ಲಮಲ್ಲ ಕಾಡು ಉಳಿಸಲು ನಡೆಸುತ್ತಿರುವ ಹೋರಾಟ ಮತ್ತಷ್ಟು ದೃಢಗೊಳ್ಳಬೇಕಿದೆ. ಬೀದಿಯಲ್ಲಿ ನಡೆಯುವ ಹೋರಾಟಕ್ಕೆ ಸಿನಿಮಾ ತಾರೆಯರು ಜೊತೆಗೂಡಬೇಕಿದೆ ಮತ್ತು ನಾವೆಲ್ಲರೂ ಬೆಂಬಲಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...