Homeಕರ್ನಾಟಕಸಂಸ್ಕೃತ ವಿವಿ ಬೇಡ, ಮಾಗಡಿಯಾದ್ಯಂತ ಪ್ರಚಾರಾಂದೋಲನಕ್ಕೆ ಕೆವಿಎಸ್‌ ನಿರ್ಧಾರ

ಸಂಸ್ಕೃತ ವಿವಿ ಬೇಡ, ಮಾಗಡಿಯಾದ್ಯಂತ ಪ್ರಚಾರಾಂದೋಲನಕ್ಕೆ ಕೆವಿಎಸ್‌ ನಿರ್ಧಾರ

ಸಂಸ್ಕೃತ ಸತ್ತ ಭಾಷೆ ಮಾತ್ರವಲ್ಲ, ಅದು ಕನ್ನಡದ ಕತ್ತು ಹಿಸುಕುತ್ತಿರುವ ಭಾಷೆಯಾಗಿದೆ - ಹರ್ಷಕುಮಾರ್ ಕುಗ್ವೆ

- Advertisement -
- Advertisement -

ಸಂಸ್ಕೃತ ಭಾಷೆ ಯಾವುದೇ ಪ್ರದೇಶದಲ್ಲಿಯೂ ಬಳಕೆಯಲ್ಲಿಲ್ಲದ ಭಾಷೆ. ಆ ಭಾಷೆಗೂ ಈಗಾಗಲೇ 16 ವಿವಿಗಳು ಇವೆ. ಇದೀಗ ಮತ್ತೊಂದು ಸಂಸ್ಕೃತ ವಿವಿಯ ಅಗತ್ಯವಿಲ್ಲ. ಬದಲಾಗಿ ಕನ್ನಡ ವಿವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಒತ್ತಾಯಿಸಿದೆ. ಸಂಸ್ಕೃತ ವಿವಿ ಯಾಕೆ ಬೇಡ ಎಂದು ಮಾಗಡಿ ತಾಲ್ಲೂಕಿನಾದ್ಯಂತ ಪ್ರಚಾರಾಂದೋಲನ ಮಾಡಿ, ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಕೆವಿಎಸ್ ನಿರ್ಧರಿಸಿದೆ.

ಕ್ಲಬ್‌ ಹೌಸ್‌ನಲ್ಲಿ ‘ಸಂಸ್ಕೃತ ವಿವಿ ಯಾಕೆ ಬೇಡ?’ ಎಂಬ ವಿಷಯದ ಬಗ್ಗೆ ಕೆವಿಎಸ್‌ ಚರ್ಚೆಯನ್ನು ಆಯೋಜಿಸಿತ್ತು. ಈ ವೇಳೆ, ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ, ಕೆವಿಎಸ್‌ ಸಂಘಟನೆಯು ಕರವೇ ಜೊತೆಗೂಡಿ ಪ್ರಚಾರಾಂದೋಲನ ನಡೆಸುವುದಾಗಿ ಘೋಷಿಸಿದ್ದಾರೆ.

ಚರ್ಚೆಯಲ್ಲಿ ಮಾತನಾಡಿದ ಕರವೇ ಸಮಾಜಿಕ ಜಾಲತಾಣ ಸಂಚಾಲಕ ಸಜಿತ್, “ದೇಶದಲ್ಲಿ ಒಟ್ಟು 16 ಸಂಸ್ಕೃತ ವಿವಿಗಳಿವೆ. ಕರ್ನಾಟಕದಲ್ಲಿ 35 ಸಂಸ್ಕೃತ ಶಾಲೆ ಮತ್ತು ಅಧ್ಯಯನ ಕೇಂದ್ರಗಳಿವೆ. ಆದರೆ ಇಡೀ ಭಾರತದಲ್ಲಿ ಕೇವಲ 1 ಕನ್ನಡ ವಿವಿ ಇದೆ. ನಮ್ಮ ಹಂಪಿಯ ಕನ್ನಡ ವಿವಿ ಗಾಗಿ ಆರು ಕೋಟಿ ಅನುದಾನ ಕೊಡಲು ಹೊರಾಟ ಮಾಡಲಾಗಿತ್ತು. ಆದರೆ ಅದನ್ನು ಕೊಡದ ಸರ್ಕಾರ ಸಂಸ್ಕೃತ ವಿವಿ ಗೆ ಪೋಷಣೆ ಮಾಡುತ್ತಿರುವುದು ಕನ್ನಡ ಕೊಲ್ಲುವ ಹುನ್ನಾರ” ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಕಾಲೇಜುಗಳಲ್ಲಿ ಕನ್ನಡ ಕಡ್ಡಾಯಕ್ಕೆ ತಕರಾರು ಎತ್ತಿದವರು ಮುಂದೆ ಶಾಲೆಯಲ್ಲಿ ಕನ್ನಡ ಕಡ್ಡಾಯಕ್ಕೂ ಕೂಡ ತಕರಾರು ಎತ್ತುತ್ತಾರೆ. ಕನ್ನಡದ ಭಾಷೆಯಲ್ಲಿ ಸಂಸ್ಕೃತವನ್ನು ತುರುಕುವ ಕೆಲಸ ನಡೆಯುತ್ತಿದೆ. ಕನ್ನಡದ ಮೇಲೆ ಸಂಸ್ಕೃತದ ಹೇರಿಕೆ ಮಾಡುತ್ತಾ ದೇವನಾಗರಿಗೆ ಉತ್ತೇಜನ ನೀಡುತ್ತಿದೆ. ಕನ್ನಡವನ್ನು ಉಪಯೋಗದ ಭಾಷೆಯನ್ನಾಗಿ ಮಾಡಬೇಕು ಅದರಿಂದ ಕನ್ನಡವನ್ನು ಗಟ್ಟಿಯಾಗಿಸಬಹುದು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಮಾತನಾಡಿ, “ಕನ್ನಡ ಮತ್ತು ಕನ್ನಡ ವಿವಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಯಾವುದೇ ತರಹದ ಅನುದಾನ ಸಿಗುತ್ತಿಲ್ಲ. ವಿವಿಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ದ ಸಂಸ್ಕೃತಪರ ಸಂಘಟನೆಗಳು ಕೋರ್ಟಿಗೆ ಹೋಗುತ್ತಿವೆ. ಕನ್ನಡ ಕಡ್ಡಾಯವಲ್ಲ ಎಂದು ಕೊರ್ಟಿಗೆ ಹೋಗಿರುವ ಸಂಘಟನೆಗಳೊಂದಿಗೆ ಬಿಜೆಪಿ-ಆರ್‌ಎಸ್‌ಎಸ್‌ ಸೇರಿಕೊಂಡಿವೆ. ಮಾತೃಭಾಷೆ ಕಲಿಕೆಯ ವಿಷಯದಲ್ಲಿ ಸರಕಾರ ಹಿಂಜರಿಯುತ್ತಿದೆ. ಕಾಲೇಜುಗಳಲ್ಲಿ ಕನ್ನಡ ಕಡ್ಡಾಯಕ್ಕೆ ತಕರಾರು ಎತ್ತಿದವರು ಮುಂದೆ ಶಾಲೆಯಲ್ಲಿ ಕನ್ನಡ ಕಡ್ಡಾಯಕ್ಕೆ ವಿರುದ್ದ ಬರಬಹುದು. ಪ್ರಾದೇಶಿಕ ಭಾಷೆಗಳನ್ನು ಕೊಲ್ಲುವ ಪ್ರಯತ್ನ ನಡೆಯುತ್ತಿದ್ದು, ಅದರ ಪ್ರಯೋಗ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾನಪದ ವಿವಿ, ಹಂಪಿ ಕನ್ನಡ ವಿವಿ, ಮೈಸೂರು ವಿವಿ ಗಳಲ್ಲಿನ ಸಿಬ್ಬಂದಿ ಮತ್ತು ಉಪನ್ಯಾಸಕರಿಗೆ ಸಂಬಳ ಕೊಡಲು ಸಹ ದುಡ್ಡಿಲ್ಲ. ಆದರೆ, ಭಾರತ ಸರಕಾರ 1200 ಕೋಟಿ ಸಂಸ್ಕೃತಕ್ಕೆ ಕೊಟ್ಟಿದೆ. ಇದರಿಂದ ಜನಸಾಮಾನ್ಯರಿಗೆ ಏನಾದರೂ ಉಪಯೋಗ ಆಗಿದೆಯೇ ಎಂದು ಅವರು ಪ್ರಶ್ನಿಸಿದರು.

ಚರ್ಚೆಯಲ್ಲಿ ಮಾತನಾಡಿದ ಕರವೇ ರಾಜ್ಯ ಮುಖಂಡರಾದ ದಿನೇಶ್ ಕುಮಾರ್ ದಿನೂ, “ಆಡಳಿತ ಭಾಷೆ ಒಂದೇ ಇರಬೇಕು ಎಂದು ಹೇಳುವ ಸಂವಿಧಾನದ 343 ರಿಂದ 351ರ ವಿಧಿಯವರೆಗೂ ಇವೆಲ್ಲವೂ ಕನ್ನಡ/ಪ್ರಾದೆಶಿಕ ಬಾಷೆಗಳನ್ನು ಕೊಲ್ಲುವ ವಿಧಿಗಳಾಗಿವೆ. ಕನ್ನಡಿಗರಿಗೆ ತಲೆಮೇಲೆ ಸಂಸ್ಕೃತವನ್ನು ಕೂರಿಸುವುದು ಮೊದಲಿನಿಂದ ನಡೆದುಬಂದಿದೆ. ‘ಒಂದು ದೇಶ, ಒಂದು ಭಾಷೆ’ ಎಂಬುದು ನಾಗಪುರದ ಆರ್ ಎಸ್ ಎಸ್ ಅಜೆಂಡ. ಅದನ್ನು ಜಾರಿಗೆ ತರಲು ಸಂಸ್ಕೃತ ವಿವಿಯ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ” ಎಂದು ಆರೋಪಿಸಿದ್ದಾರೆ.

ಜನರ ನುಡಿಯನ್ನ ಕೊಂದರೆ ಜನರನ್ನೇ ಕೊಂದಂತೆ. ದೆಹಲಿಯಲ್ಲಿ ನಡೆದ ರೈತ ಹೊರಾಟದ ಮಾದರಿಯಲ್ಲಿ ಕನ್ನಡಕ್ಕಾಗಿ ಕರವೇಯಿಂದ ಹೋರಾಟ ನಡೆಯಲ್ಲಿದೆ ಎಂದು ನಾರಾಯಣ ಗೌಡ ರವರು ಕರೆ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ ಕುಗ್ವೆ, ಕಳೆದ 40-50 ವರ್ಷಗಳಿಂದ ಸಂಸ್ಕೃತ ವಿವಿಗಳು ಕೆಲಸ ಮಾಡಿವೆ. ಆದರೆ, ಅದರಿಂದ ಯಾವುದಾದರೂ ಮಹತ್ವದ ಕೆಲಸವಾಗಿದೆಯೇ? ಕೇವಲ ಭಾಷಾ ಅಭಿಮಾನದಿಂದ ಸಂಸ್ಕೃತ ವಿವಿ ಸ್ಥಾಪಿಸುತ್ತಿರುವುದೇಕೆ? ಸಂಸ್ಕೃತದಿಂದ ಜನರಿಗೆ ಜ್ಞಾನವನ್ನು ಹಂಚಿಕೆ ಮಾಡುವ ಉದ್ದೆಶವಲ್ಲ ಇದರ ಹಿಂದೆ ಒಂದು ಅಜೆಂಡವಿದೆ ಎಂದು ಆರೋಪಿಸಿದರು.

ಈಗಾಗಲೇ ಚಾಲ್ತಿಯಲಿಲ್ಲದ ಬಾಷೆಯನ್ನು ಇಸ್ರೇಲ್‌ನಲ್ಲಿ ಹಿಬ್ರೋ ರಾಷ್ಟ್ರಭಾಷೆಯನ್ನಾಗಿ ಮಾಡಿದೆ. ಅದೇ ರೀತಿಯಲ್ಲಿ ಸಂಘ ಪರಿವಾರ ಸಂಸ್ಕೃತ ವನ್ನು ರಾಷ್ಟ್ರಭಾಷೆ ಮಾಡುವ ಹುನ್ನಾರ ನಡೆಸುತ್ತಿದೆ. ಸಂಸ್ಕೃತ ಸತ್ತ ಭಾಷೆ ಮಾತ್ರವಲ್ಲ, ಅದು ಕನ್ನಡದ ಕತ್ತು ಹಿಸುಕುತ್ತಿರುವ ಭಾಷೆಯಾಗಿದೆ. ಈ ಬಗ್ಗೆ ಮಾಗಡಿಯ ಜನರಿಗೆ ಮತ್ತು ರಾಜಕಾರಣಿಗಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಅವರು ತಿಳಿಸಿದರು.


ಇದನ್ನೂ ಓದಿ: ’ಸಂಸ್ಕೃತ’ ಪುನರುತ್ಥಾನ ಮತ್ತು ನೆಲದ ’ನುಡಿ’ಗಳ ಕೂಗು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಸಂಸ್ಕೃತ ವಿ.ವಿ.ಸ್ಥಾಪನೆಯಿಂದ ಕನ್ನಡ ಜನತೆಗೆ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ಅದು ಬೇಡ.

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

0
ಪರೀಕ್ಷೆಗಳಿಗೆ ಬರೆದಿರುವ ಉತ್ತರಗಳ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರಪ್ರದೇಶದ  ಜೌನ್‌ಪುರದಲ್ಲಿರುವ ವೀರ್‌ ಬಹದ್ದೂರ್‌ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿನ ಪರೀಕ್ಷೆಯಲ್ಲಿನ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಮತ್ತು ಕ್ರಿಕೆಟ್‌ ಆಟಗಾರರ ಹೆಸರುಗಳನ್ನು...