Homeಕರ್ನಾಟಕಸಂಸ್ಕೃತ ವಿವಿ ಬೇಡ, ಮಾಗಡಿಯಾದ್ಯಂತ ಪ್ರಚಾರಾಂದೋಲನಕ್ಕೆ ಕೆವಿಎಸ್‌ ನಿರ್ಧಾರ

ಸಂಸ್ಕೃತ ವಿವಿ ಬೇಡ, ಮಾಗಡಿಯಾದ್ಯಂತ ಪ್ರಚಾರಾಂದೋಲನಕ್ಕೆ ಕೆವಿಎಸ್‌ ನಿರ್ಧಾರ

ಸಂಸ್ಕೃತ ಸತ್ತ ಭಾಷೆ ಮಾತ್ರವಲ್ಲ, ಅದು ಕನ್ನಡದ ಕತ್ತು ಹಿಸುಕುತ್ತಿರುವ ಭಾಷೆಯಾಗಿದೆ - ಹರ್ಷಕುಮಾರ್ ಕುಗ್ವೆ

- Advertisement -
- Advertisement -

ಸಂಸ್ಕೃತ ಭಾಷೆ ಯಾವುದೇ ಪ್ರದೇಶದಲ್ಲಿಯೂ ಬಳಕೆಯಲ್ಲಿಲ್ಲದ ಭಾಷೆ. ಆ ಭಾಷೆಗೂ ಈಗಾಗಲೇ 16 ವಿವಿಗಳು ಇವೆ. ಇದೀಗ ಮತ್ತೊಂದು ಸಂಸ್ಕೃತ ವಿವಿಯ ಅಗತ್ಯವಿಲ್ಲ. ಬದಲಾಗಿ ಕನ್ನಡ ವಿವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಒತ್ತಾಯಿಸಿದೆ. ಸಂಸ್ಕೃತ ವಿವಿ ಯಾಕೆ ಬೇಡ ಎಂದು ಮಾಗಡಿ ತಾಲ್ಲೂಕಿನಾದ್ಯಂತ ಪ್ರಚಾರಾಂದೋಲನ ಮಾಡಿ, ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಕೆವಿಎಸ್ ನಿರ್ಧರಿಸಿದೆ.

ಕ್ಲಬ್‌ ಹೌಸ್‌ನಲ್ಲಿ ‘ಸಂಸ್ಕೃತ ವಿವಿ ಯಾಕೆ ಬೇಡ?’ ಎಂಬ ವಿಷಯದ ಬಗ್ಗೆ ಕೆವಿಎಸ್‌ ಚರ್ಚೆಯನ್ನು ಆಯೋಜಿಸಿತ್ತು. ಈ ವೇಳೆ, ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ, ಕೆವಿಎಸ್‌ ಸಂಘಟನೆಯು ಕರವೇ ಜೊತೆಗೂಡಿ ಪ್ರಚಾರಾಂದೋಲನ ನಡೆಸುವುದಾಗಿ ಘೋಷಿಸಿದ್ದಾರೆ.

ಚರ್ಚೆಯಲ್ಲಿ ಮಾತನಾಡಿದ ಕರವೇ ಸಮಾಜಿಕ ಜಾಲತಾಣ ಸಂಚಾಲಕ ಸಜಿತ್, “ದೇಶದಲ್ಲಿ ಒಟ್ಟು 16 ಸಂಸ್ಕೃತ ವಿವಿಗಳಿವೆ. ಕರ್ನಾಟಕದಲ್ಲಿ 35 ಸಂಸ್ಕೃತ ಶಾಲೆ ಮತ್ತು ಅಧ್ಯಯನ ಕೇಂದ್ರಗಳಿವೆ. ಆದರೆ ಇಡೀ ಭಾರತದಲ್ಲಿ ಕೇವಲ 1 ಕನ್ನಡ ವಿವಿ ಇದೆ. ನಮ್ಮ ಹಂಪಿಯ ಕನ್ನಡ ವಿವಿ ಗಾಗಿ ಆರು ಕೋಟಿ ಅನುದಾನ ಕೊಡಲು ಹೊರಾಟ ಮಾಡಲಾಗಿತ್ತು. ಆದರೆ ಅದನ್ನು ಕೊಡದ ಸರ್ಕಾರ ಸಂಸ್ಕೃತ ವಿವಿ ಗೆ ಪೋಷಣೆ ಮಾಡುತ್ತಿರುವುದು ಕನ್ನಡ ಕೊಲ್ಲುವ ಹುನ್ನಾರ” ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಕಾಲೇಜುಗಳಲ್ಲಿ ಕನ್ನಡ ಕಡ್ಡಾಯಕ್ಕೆ ತಕರಾರು ಎತ್ತಿದವರು ಮುಂದೆ ಶಾಲೆಯಲ್ಲಿ ಕನ್ನಡ ಕಡ್ಡಾಯಕ್ಕೂ ಕೂಡ ತಕರಾರು ಎತ್ತುತ್ತಾರೆ. ಕನ್ನಡದ ಭಾಷೆಯಲ್ಲಿ ಸಂಸ್ಕೃತವನ್ನು ತುರುಕುವ ಕೆಲಸ ನಡೆಯುತ್ತಿದೆ. ಕನ್ನಡದ ಮೇಲೆ ಸಂಸ್ಕೃತದ ಹೇರಿಕೆ ಮಾಡುತ್ತಾ ದೇವನಾಗರಿಗೆ ಉತ್ತೇಜನ ನೀಡುತ್ತಿದೆ. ಕನ್ನಡವನ್ನು ಉಪಯೋಗದ ಭಾಷೆಯನ್ನಾಗಿ ಮಾಡಬೇಕು ಅದರಿಂದ ಕನ್ನಡವನ್ನು ಗಟ್ಟಿಯಾಗಿಸಬಹುದು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಮಾತನಾಡಿ, “ಕನ್ನಡ ಮತ್ತು ಕನ್ನಡ ವಿವಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಯಾವುದೇ ತರಹದ ಅನುದಾನ ಸಿಗುತ್ತಿಲ್ಲ. ವಿವಿಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ದ ಸಂಸ್ಕೃತಪರ ಸಂಘಟನೆಗಳು ಕೋರ್ಟಿಗೆ ಹೋಗುತ್ತಿವೆ. ಕನ್ನಡ ಕಡ್ಡಾಯವಲ್ಲ ಎಂದು ಕೊರ್ಟಿಗೆ ಹೋಗಿರುವ ಸಂಘಟನೆಗಳೊಂದಿಗೆ ಬಿಜೆಪಿ-ಆರ್‌ಎಸ್‌ಎಸ್‌ ಸೇರಿಕೊಂಡಿವೆ. ಮಾತೃಭಾಷೆ ಕಲಿಕೆಯ ವಿಷಯದಲ್ಲಿ ಸರಕಾರ ಹಿಂಜರಿಯುತ್ತಿದೆ. ಕಾಲೇಜುಗಳಲ್ಲಿ ಕನ್ನಡ ಕಡ್ಡಾಯಕ್ಕೆ ತಕರಾರು ಎತ್ತಿದವರು ಮುಂದೆ ಶಾಲೆಯಲ್ಲಿ ಕನ್ನಡ ಕಡ್ಡಾಯಕ್ಕೆ ವಿರುದ್ದ ಬರಬಹುದು. ಪ್ರಾದೇಶಿಕ ಭಾಷೆಗಳನ್ನು ಕೊಲ್ಲುವ ಪ್ರಯತ್ನ ನಡೆಯುತ್ತಿದ್ದು, ಅದರ ಪ್ರಯೋಗ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾನಪದ ವಿವಿ, ಹಂಪಿ ಕನ್ನಡ ವಿವಿ, ಮೈಸೂರು ವಿವಿ ಗಳಲ್ಲಿನ ಸಿಬ್ಬಂದಿ ಮತ್ತು ಉಪನ್ಯಾಸಕರಿಗೆ ಸಂಬಳ ಕೊಡಲು ಸಹ ದುಡ್ಡಿಲ್ಲ. ಆದರೆ, ಭಾರತ ಸರಕಾರ 1200 ಕೋಟಿ ಸಂಸ್ಕೃತಕ್ಕೆ ಕೊಟ್ಟಿದೆ. ಇದರಿಂದ ಜನಸಾಮಾನ್ಯರಿಗೆ ಏನಾದರೂ ಉಪಯೋಗ ಆಗಿದೆಯೇ ಎಂದು ಅವರು ಪ್ರಶ್ನಿಸಿದರು.

ಚರ್ಚೆಯಲ್ಲಿ ಮಾತನಾಡಿದ ಕರವೇ ರಾಜ್ಯ ಮುಖಂಡರಾದ ದಿನೇಶ್ ಕುಮಾರ್ ದಿನೂ, “ಆಡಳಿತ ಭಾಷೆ ಒಂದೇ ಇರಬೇಕು ಎಂದು ಹೇಳುವ ಸಂವಿಧಾನದ 343 ರಿಂದ 351ರ ವಿಧಿಯವರೆಗೂ ಇವೆಲ್ಲವೂ ಕನ್ನಡ/ಪ್ರಾದೆಶಿಕ ಬಾಷೆಗಳನ್ನು ಕೊಲ್ಲುವ ವಿಧಿಗಳಾಗಿವೆ. ಕನ್ನಡಿಗರಿಗೆ ತಲೆಮೇಲೆ ಸಂಸ್ಕೃತವನ್ನು ಕೂರಿಸುವುದು ಮೊದಲಿನಿಂದ ನಡೆದುಬಂದಿದೆ. ‘ಒಂದು ದೇಶ, ಒಂದು ಭಾಷೆ’ ಎಂಬುದು ನಾಗಪುರದ ಆರ್ ಎಸ್ ಎಸ್ ಅಜೆಂಡ. ಅದನ್ನು ಜಾರಿಗೆ ತರಲು ಸಂಸ್ಕೃತ ವಿವಿಯ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ” ಎಂದು ಆರೋಪಿಸಿದ್ದಾರೆ.

ಜನರ ನುಡಿಯನ್ನ ಕೊಂದರೆ ಜನರನ್ನೇ ಕೊಂದಂತೆ. ದೆಹಲಿಯಲ್ಲಿ ನಡೆದ ರೈತ ಹೊರಾಟದ ಮಾದರಿಯಲ್ಲಿ ಕನ್ನಡಕ್ಕಾಗಿ ಕರವೇಯಿಂದ ಹೋರಾಟ ನಡೆಯಲ್ಲಿದೆ ಎಂದು ನಾರಾಯಣ ಗೌಡ ರವರು ಕರೆ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ ಕುಗ್ವೆ, ಕಳೆದ 40-50 ವರ್ಷಗಳಿಂದ ಸಂಸ್ಕೃತ ವಿವಿಗಳು ಕೆಲಸ ಮಾಡಿವೆ. ಆದರೆ, ಅದರಿಂದ ಯಾವುದಾದರೂ ಮಹತ್ವದ ಕೆಲಸವಾಗಿದೆಯೇ? ಕೇವಲ ಭಾಷಾ ಅಭಿಮಾನದಿಂದ ಸಂಸ್ಕೃತ ವಿವಿ ಸ್ಥಾಪಿಸುತ್ತಿರುವುದೇಕೆ? ಸಂಸ್ಕೃತದಿಂದ ಜನರಿಗೆ ಜ್ಞಾನವನ್ನು ಹಂಚಿಕೆ ಮಾಡುವ ಉದ್ದೆಶವಲ್ಲ ಇದರ ಹಿಂದೆ ಒಂದು ಅಜೆಂಡವಿದೆ ಎಂದು ಆರೋಪಿಸಿದರು.

ಈಗಾಗಲೇ ಚಾಲ್ತಿಯಲಿಲ್ಲದ ಬಾಷೆಯನ್ನು ಇಸ್ರೇಲ್‌ನಲ್ಲಿ ಹಿಬ್ರೋ ರಾಷ್ಟ್ರಭಾಷೆಯನ್ನಾಗಿ ಮಾಡಿದೆ. ಅದೇ ರೀತಿಯಲ್ಲಿ ಸಂಘ ಪರಿವಾರ ಸಂಸ್ಕೃತ ವನ್ನು ರಾಷ್ಟ್ರಭಾಷೆ ಮಾಡುವ ಹುನ್ನಾರ ನಡೆಸುತ್ತಿದೆ. ಸಂಸ್ಕೃತ ಸತ್ತ ಭಾಷೆ ಮಾತ್ರವಲ್ಲ, ಅದು ಕನ್ನಡದ ಕತ್ತು ಹಿಸುಕುತ್ತಿರುವ ಭಾಷೆಯಾಗಿದೆ. ಈ ಬಗ್ಗೆ ಮಾಗಡಿಯ ಜನರಿಗೆ ಮತ್ತು ರಾಜಕಾರಣಿಗಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಅವರು ತಿಳಿಸಿದರು.


ಇದನ್ನೂ ಓದಿ: ’ಸಂಸ್ಕೃತ’ ಪುನರುತ್ಥಾನ ಮತ್ತು ನೆಲದ ’ನುಡಿ’ಗಳ ಕೂಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಸಂಸ್ಕೃತ ವಿ.ವಿ.ಸ್ಥಾಪನೆಯಿಂದ ಕನ್ನಡ ಜನತೆಗೆ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ಅದು ಬೇಡ.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...