Homeಮುಖಪುಟಶಾಹಿನ್ ಬಾಗ್‍ಗಳು ಬಂಧುತ್ವ ಬೆಸೆಯುತ್ತಿವೆ

ಶಾಹಿನ್ ಬಾಗ್‍ಗಳು ಬಂಧುತ್ವ ಬೆಸೆಯುತ್ತಿವೆ

- Advertisement -
- Advertisement -

ದಾವಣಗೆರೆಯಲ್ಲೂ ಕೂಡ ಶಾಹಿನ್ ಬಾಗ್ ಮಾದರಿ ಹೋರಾಟ ನಡೆಯುತ್ತಿದೆ. (ಫೆಬ್ರವರಿ 22) ಇವತ್ತಿಗೆ 22ನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟದಲ್ಲಿ ಬರೀ ಮುಸ್ಲಿಂ ಸಮುದಾಯವಲ್ಲದೆ ಸುತ್ತಮುತ್ತ ಹಳ್ಳಿಯ ದಲಿತ ಸಮುದಾಯವರು ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ. ಯಾಕೆಂದರೆ ಎಲ್ಲರೂ ಪರಸ್ಪರ ಪ್ರೀತಿ ಸಮಾನತೆ, ಸಹಬಾಳ್ವೆ, ಸಹೋದರತೆಯನ್ನು ಬಯಸುವ ಮನಸುಳ್ಳವರಾಗಿದ್ದಾರೆ.

ಶಹೀದ್ ಅಶ್ಫಾಕುಲ್ಲಾ ಖಾನ್ ಒಂದು ಮಾತನ್ನು ಹೇಳುತ್ತಾರೆ, ‘ಪ್ರೀತಿ ಯಾವ ಮನುಷ್ಯನ ಹೃದಯದಲ್ಲಿ ಇರುತ್ತೋ ಆತ ದೇಶಕ್ಕಾಗಿ, ದೇಶದ ಜನರಿಗಾಗಿ, ಎಲ್ಲರಿಗಾಗಿ ಎಲ್ಲರ ಹಿತಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾನೆ. ಮಾನವ ಪ್ರೇಮವೆ ದೇವ ಪ್ರೇಮವಾಗಿ ಮನುಷ್ಯ ಜೀವಿಸಬೇಕು, ಅದುವೆ ನಿಜವಾದ ದೇಶಪ್ರೇಮ’. ಈ ಮಾತುಗಳು ಪ್ರಸ್ತುತ ಕಾಲಘಟ್ಟದಲ್ಲಿ ವಿಚಿತ್ರ ಅನ್ನಿಸುತ್ತದೆ. ಯಾಕೆಂದರೆ ಬೆಳಕು ಹರಿದರೆ ಸಾಕು ದನದ ಹೆಸರಿನಲ್ಲಿ ಮನುಷ್ಯನ ಕಗ್ಗೊಲೆಗಳು ನಡೆಯುತ್ತಿವೆ.

ಲವ್‍ಜಿಹಾದ್, ಗೋಮಾಂಸ ಇತ್ಯಾದಿಗಳ ಹೆಸರಿನಲ್ಲಿ ಮುಸ್ಲಿಮರ ಹತ್ಯೆ, ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಕೊಲೆಗಳು, ಕಾರ್ಮಿಕರಿಗೆ ಕನಿಷ್ಟ ಕೂಲಿ ಸಿಗದೆ ಪರದಾಟ, ನಿರುದ್ಯೋಗ/ಬಡತನದ ಸಲುವಾಗಿ ಆತ್ಮಹತ್ಯೆಗಳು, ಹಸಿವಿನಿಂದ ಹಾಹಾಕಾರ – ಇವುಗಳು ದೇಶದ ಇಂದಿನ ಸ್ಥಿತಿ. ಮಹಾತ್ಮ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್, ಭಗತ್ ಸಿಂಗ್, ಆಶ್ಫಾಖ್‍ವುಲ್ಲಾಖಾನ್‍ರಂಥವರು ಬಯಸಿದ ದೇಶ ಇದಾ ಅಂತ ಪ್ರಶ್ನೆಯಾಗಿ ಕಾಡುತ್ತೆ. ಬಡತನ, ಅಪೌಷ್ಟಿಕತೆ, ನಿರುದ್ಯೋಗ,  ಅಸ್ಪೃಶ್ಯತೆ, ಅತ್ಯಾಚಾರಗಳು ತುಂಬಿ ತುಳುಕುತ್ತಿರುವಾಗ ನಾವು ಪ್ರಪಂಚಕ್ಕೇ ಮಾದರಿಯಾಗುವ ರಾಷ್ಟ್ರ ಆಗಲು ಸಾಧ್ಯವಾ? ಇಂತಹ ಜ್ವಲಂತ ಸಮಸ್ಯೆಗಳನ್ನು ಬದಿಗಿಟ್ಟು ಇವತ್ತು NPR, NRC, CAA ಅಂಥ ಕರಾಳ ಕಾಯ್ದೆಯನ್ನು ತಂದು ಧರ್ಮ/ಜಾತಿಗಳ ಮಧ್ಯೆ ಜಗಳವನ್ನು ಹಚ್ಚುವುದನ್ನು ಆಡಳಿತ ಎನ್ನುವುದು ಸಾಧ್ಯವಾ?

ಇದರ ಮೂಲಕ ತನ್ನ ರಾಜಕೀಯದ ಬೆಳೆಯನ್ನು ಬೇಯಿಸಿಕೊಳ್ಳಲು ತುಂಬಾ ಆತುರದಲ್ಲಿ ನಮ್ಮ ದೇಶದ ಮೋದಿಶಾ ಜೋಡಿ ಇತ್ತು. ಅವರ ಈ ಆಸೆಯನ್ನು ಹುಸಿಯಾಗಿಸುವ ರೀತಿಯಲ್ಲಿ ದೇಶದಾದ್ಯಂತ ನಾವು ಭಾರತಿಯರು ಒಂದೆ ಬ್ಯಾನರ್ ಅಡಿಯಲ್ಲಿ ಕೆಂಪು, ನೀಲಿ, ಹಸಿರು ವಿಚಾರ ಉಳ್ಳವರು, ಪ್ರಗತಿಪರರು, ಬರಹಗಾರರು, ವಿದ್ಯಾರ್ಥಿ ಯುವಜನರು ಬೀದಿಗಿಳಿದರು. ಅದರಲ್ಲಿ ಮುಖ್ಯವಾಗಿ ಮಹಿಳೆಯರು ಹೋರಾಟದ ಮುಂಚೂಣಿಯಲ್ಲಿದ್ದು ಇವತ್ತು ಹೋರಾಟವನ್ನು ನಡೆಸಿಕೊಂಡು ಹೋಗುತಿದ್ದಾರೆ. ಶಾಹಿನ್ ಬಾಗ್‍ನ ತಾಯಂದಿರ ಹೋರಾಟ ಜಗತ್ತೇ ನೋಡುವಂತಹ ಮಾದರಿಯಾಗಿದೆ. ಆ ತಾಯಂದಿಯರಿಗೆ ನನ್ನ ಸಾವಿರ ಸಾವಿರ ಸಲಾಂ. ಇದೆ ಮಾದರಿಯಲ್ಲಿ ದಾವಣಗೆರೆ ಇಮಾಂ ಅಹ್ಮದ್ ರಜಾ ಪಾರ್ಕಿನಲ್ಲಿ ಅನಿರ್ದಿಷ್ಟ್ಟ ಹೋರಾಟ ಮುಂದುವರೆದಿದೆ. ಈ ಹೋರಾಟದಲ್ಲಿ ಕೂಡ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ನಾನು ಅದರ ಭಾಗವಾಗಿದ್ದೇನೆ ಎಂದುಕೊಳ್ಳಲು ಹೆಮ್ಮೆಯೆನಿಸುತ್ತದೆ.

ದಾವಣಗೆರೆಯ ಶಾಹೀನ್‌ಬಾಗ್‌

ಇವರು ಭಾರತೀಯರಾದ ನಮ್ಮೆಲ್ಲರನ್ನು ಹೊರಗೆ ಹಾಕಲು ಸಾಧ್ಯವೆಂದು ನನಗನ್ನಿಸುವುದಿಲ್ಲ. ಆದರೆ, ಸಂಘ ಪರಿವಾರದ ಉದ್ದೇಶವೇನೆಂದರೆ ಎಲ್ಲರನ್ನೂ ಆತಂಕದಲ್ಲಿಟ್ಟು ಜೀ ಹುಜೂರ್ ಅಂತ ಅನ್ನಿಸುತ್ತಿರಬೇಕು. ಬಾಂಗ್ಲಾದೇಶ್, ಆಫ್ಘಾನಿಸ್ತಾನ್, ಪಾಕಿಸ್ತಾನದಲ್ಲಿ ಧಾರ್ಮಿಕ ದಮನಕ್ಕೆ ತುತ್ತಾಗಿದ್ದಾರೆಂದು ಅರ್ಜಿಯನ್ನು ಕೊಟ್ಟಿದ್ದರಾ? ಆದರೆ, ನಾವು ಬೀಡಿ ಸುತ್ತುವವರ ಪರವಾಗಿ, ಕಟ್ಟಡ ಕಟ್ಟುವವರ ಪರವಾಗಿ, ಮನೆಯಿಲ್ಲದವರ ಪರವಾಗಿ ನಿಮಗೆ ಸಾವಿರಾರು ಅರ್ಜಿಗಳನ್ನು ಕೊಟ್ಟಿದ್ದೆವಲ್ಲಾ? ಅರ್ಜಿ ಕೊಟ್ಟ ಸ್ವಂತ ದೇಶದವರಿಗೇ ನ್ಯಾಯ ಕೊಡದವರು ಬೇರೆ ದೇಶದವರಿಗೆ ಯಾವ ನ್ಯಾಯ ಕೊಡಿಸಬಲ್ಲಿರಿ?

ಒಂದು ಪ್ರಶ್ನೆ ನಿಮಗೆ. ಈ ದೇಶದಲ್ಲಿರುವ ಕೋಟಿಗಟ್ಟಲೇ ಆದಿವಾಸಿಗಳು ಅತಂತ್ರ ಸ್ಥಿತಿಯಲ್ಲಿದ್ದಾರಲ್ಲಾ ಅವರ್ಯಾರು, ದನದ ಚರ್ಮ ಸುಲಿದಿದ್ದಾರೆಂದು ಸಾಯೋ ಬದುಕುವ ಹಾಗೆ ದಲಿತರಿಗೆ ಹೊಡೆದಿದ್ದರಲ್ಲಾ ಅವರ್ಯಾರು? ಇವತ್ತು ನಿಮಿಷಕ್ಕೊಂದು ದಲಿತ ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡಿತಾಯಿದೆ ಅಲ್ವಾ ಅವರ್ಯಾರು? ಈ ಎಲ್ಲರನ್ನೂ ಸೋದರರಂತೆ ಭಾವಿಸಿ ಬದುಕದೇ ಇದ್ದಲ್ಲಿ ನಮ್ಮದೊಂದು ದೇಶವಾಗಿ ಉಳಿದೀತೇ?

ಈ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿಲ್ಲ. ಆದರೆ ಶಾಹೀನ್‍ಬಾಗ್‍ಗಳಲ್ಲಿ ಕೂತವರಲ್ಲಿ ಉತ್ತರವಿದೆ. ಅಲ್ಲಿ ಬಂಧುತ್ವವನ್ನು ಬೆಸೆಯಲಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....