Homeಮುಖಪುಟಶಾಸ್ತ್ರೀಯ 1: ಪರಂಪರೆಯ ವಸಾಹತೀಕರಣ ಮತ್ತು ಚರಿತ್ರೆಯ ಮರುಕಟ್ಟುವಿಕೆಯ ಅಗತ್ಯ

ಶಾಸ್ತ್ರೀಯ 1: ಪರಂಪರೆಯ ವಸಾಹತೀಕರಣ ಮತ್ತು ಚರಿತ್ರೆಯ ಮರುಕಟ್ಟುವಿಕೆಯ ಅಗತ್ಯ

ಲಿಖಿತ ಆಕರಗಳ ಒಡಲಲ್ಲಿ ಸುಪ್ತವಾಗಿರುವ ಇಂಜನಿಯರಿಂಗ್, ಕುಂಬಾರಿಕೆ, ಕಂಬಾರಿಕೆ, ಚಮ್ಮಾರಿಕೆ, ಬಡಿಗತನ, ಅಕ್ಕಸಾಲಿ ಇತ್ಯಾದಿ ಉದ್ಯಮಗಳನ್ನು ಮತ್ತು ಅವರ ಭೌದ್ದಿಕತೆಯನ್ನು ಯಾವ ಪೇಟೆಂಟ್ ಇಲ್ಲದೇ ಹೈಜಾಕ್ ಮಾಡಿದ ಕಾಲಘಟ್ಟದ ಸತ್ಯವನ್ನು ಈಗ ಪುನರುಜ್ಜೀವನಗೊಳಿಸಬೇಕಿದೆ.

- Advertisement -
- Advertisement -

ಭಾರತದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಚರಿತ್ರೆ ರಚನೆಯಾಗಲು ಬಹುಮುಖ್ಯವಾದ ಆಕರಗಳೆಂದರೆ ಶಾಸನಗಳು. ಕರ್ನಾಟಕ ಚರಿತ್ರೆ ಮತ್ತು ಸಾಂಸ್ಕೃತಿಕ ಇತಿಹಾಸದ ನುಡಿ ನಿರೂಪಣೆಯೂ ವಸಾಹತೀಕರಣದ ಫಲ. ಬಿ.ಎಲ್.ರೈಸ್, ಇ.ಪಿ.ರೈಸ್, ಕರ್ನಲ್ ಮೆಕೆಂಝಿ ಮುಂತಾದ ಬ್ರಿಟಿಷ್ ಮಿಷನರಿಗಳಿಗೆ ಸೇರಿದ ಈ ವ್ಯಕ್ತಿಗಳಂತೆ ಹಲವರು ಸಂಗ್ರಹ ಮಾಡಿದ ಬಹುಸಂಖ್ಯೆಯ ಶಾಸನಗಳು ಮತ್ತು ಹಸ್ತಪ್ರತಿಗಳು ಕನ್ನಡ ನಾಡಿನ ಗತಕಾಲದ ಚಾರಿತ್ರಿಕ ಚಹರೆಯ ಮುಖ್ಯವಾದ ಸಾಮಗ್ರಿಗಳು.

ಬ್ರಿಟಿಷ್ ವಸಾಹತುಶಾಹಿ ರಚನೆಗಳು ಪರಂಪರೆಯೊಂದಿಗೆ ಶಾಸನ ಮತ್ತು ಹಸ್ತಪ್ರತಿಗಳನ್ನು ಮುಖಾಮುಖಿ ಮಾಡಿದವು. ಆದರ ಮೊದಲ ಅಧ್ಯಯನದ ಈ ಘಟ್ಟದಲ್ಲಿ ಸಂಗ್ರಹ, ಸಂಪಾದನೆ, ವಿವರಣೆ ನೆಲೆಯಲ್ಲಿ ತನ್ನ ಚಹರೆಯನ್ನು ಗುರುತಿಸಿಕೊಂಡಿತು. ಈ ಚರಿತ್ರೆಕಾರರ ಮಾದರಿಯಲ್ಲಿ ನಮ್ಮ ದೇಸಿ ವಿದ್ವಾಂಸರು ಎರಡನೇ ಕಾಲಘಟ್ಟದಲ್ಲಿ ಆಕರಮುಖಿ ಅಧ್ಯಯನಕ್ಕೆ ತೆರೆದುಕೊಂಡರು. ಆದರೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಭೌದ್ದಿಕ ಅಹಂಕಾರಿಗಳು ನಮ್ಮ ನೆಲದ ನಿಜ ಚರಿತ್ರೆಯನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಂಡವು.

ಇದರ ಮುಂದುವರಿಕೆಯಾಗಿ ಕನ್ನಡದ ಅಕ್ಷರ ಕಲಿತುಕೊಂಡ ಇಂಗ್ಲೀಷ್ ಶಿಕ್ಷಣ ಪಡೆದ ದೇಸಿ ವಿದ್ವಾಂಸರ ಪಡೆಯು ಸಾಮ್ರಾಜ್ಯಶಾಹಿ ಬೌದ್ಧಿಕ ರಾಜಕಾರಣದ ಜೊತೆ ಒಳರಾಜಿ ಮಾಡಿಕೊಂಡಂತೆ ಮೇಲ್‌ಚಹರೆಯ ಚರಿತ್ರೆಯ ಬರೆಹಕ್ಕೆ, ಇಲ್ಲವೇ ಧರ್ಮಾಧಾರಿತ ಚರಿತ್ರೆಯ ರಚನೆಗೆ ಮುಂದಾದರು. ಇದೊಂದು ಬಗೆಯಲ್ಲಿ ಒಂದು ಕೋಮಿನ ಚರಿತ್ರೆ, ಒಂದು ವರ್ಗದ ಚರಿತ್ರೆ ಆಗಿದ್ದುಕೊಂಡು ಸಂಸ್ಕೃತಿಯ ರೂಪದಂತೆ ನಮ್ಮೆದುರಿಗೆ ಕಾಣುತ್ತಿದೆ ಅಷ್ಟೇ.

ಕರ್ನಾಟಕದ ಶಾಸನ, ಹಸ್ತಪ್ರತಿ, ನಾಣ್ಯ ಮತ್ತು ಸ್ಮಾರಕಗಳ ಸಂಶೋಧನೆ ಅಧ್ಯಯನಗಳು ವಿಭಿನ್ನ ಆಯಾಮಗಳಲ್ಲಿ ನಡೆದಿಲ್ಲ. ಬಹುತೇಕ ಕೆಳ ಚಲನೆಯ ಸತ್ಯಗಳು ಗೈರುಹಾಜರಿಯಲ್ಲಿವೆ. ಶಾಸನದಂತಹ ರಾಜಶಾಹಿ ಕಾನೂನು ಬರಹದ ಒಳಗಡೆ ಸಂಸ್ಕೃತಿ ರೂಪಿಸುವ ಜನ ಸಮುದಾಯದ ಇತಿಹಾಸ ಇದೆಯೆಂಬುದು ಮುಖ್ಯ. ಸಬಾಲ್ಟ್ರನ್ ನೆಲೆಯಲ್ಲಿ ಅದು ಕೇವಲ ಸಾಹಿತ್ಯದ ಅಧ್ಯಯನವಾಗಿದೆಯೇ ಹೊರತು ಚರಿತ್ರೆಯ ಅಧ್ಯಯನವು ಈಗತಾನೆ ಆರಂಭವಾಗಿದೆ ಅಷ್ಟೇ. ಆದರೆ ಇದು ತೋರುಂಬ ಲಾಭ. ತಳಸಮುದಾಯ ಮತ್ತು ಹಿಂದುಳಿದ ವರ್ಗಗಳ ಲೋಕದಿಂದ ಬಂದ ಬೌದ್ಧಿಕ ಜಗತ್ತು ಶಾಸನ, ನಾಣ್ಯ, ಹಸ್ತಪ್ರತಿಗಳ ಸಬಾಲ್ಟ್ರನ್ ಮಾದರಿಯ ಫಲಿತಗಳನ್ನು ನಿರೂಪಿಸಬೇಕಾದ ತುರ್ತು ಇದೆ. ಶಾಸನದಂತಹ ಶಾಸ್ತ್ರೀಯ ಭೌತಿಕ ಆಕರಗಳಿಗೆ ಅಂತರ್‌ಶಿಸ್ತೀಯ ನೆಲೆಯಿಂದ, ಅವುಗಳ ಆಂತರಿಕ ಸಾಂಸ್ಕೃತಿಕ ರಾಜಕಾರಣದ ಸ್ವರೂಪವನ್ನು ಕಟ್ಟಿಕೊಡಬೇಕು.

ವೀರಗಲ್ಲು, ಮಾಸ್ತಿಗಲ್ಲು, ನಿಸಧಿಗಲ್ಲುಗಳನ್ನು ನಮ್ಮ ಪರಂಪರೆಯ ಚರಿತ್ರೆಯ ಹೆಮ್ಮೆ ಎಂದು ಕಳೆದ ಶತಮಾನದುದ್ದಕ್ಕೂ ಚರಿತ್ರೆ ಬರೆದವರು ಆಖ್ಯಾನ ಮಾಡಿದ್ದಾರೆ. ವೀರ ಮರಣವಾದವರು ಯಾವ ಸಾಮುದಾಯಿಕ ಹಿನ್ನಲೆಯಿಂದ ಬಂದವರು? ಅವರ ನೆಲೆ- ಹಿನ್ನಲೆಗಳೇನು? ಪ್ರಭುತ್ವದ ರಚನೆಗೆ ಅವರ ಕೊಡುಗೆ ಏನು? ಹಾಗೂ ಪ್ರಭುತ್ವದಲ್ಲಿ ಅವರಿಗಿದ್ದ ಸ್ಥಾನಮಾನಗಳೇನು? ಎಂಬ ಸತ್ಯಗಳು ಪರದೆಯ ಹಿಂದೆ ಉಳಿದಿವೆ. ಒಂದು ಪ್ರಭುತ್ವದ ರಚನೆಗೆ ಕಾರಣರಾದ ಈ ವೀರರ ಹೊಸ ಚರಿತ್ರೆಯನ್ನು ಕಟ್ಟಬೇಕಿದೆ. ನಾಡಿನ ತುಂಬ ಕಾಣುವ ಮಾಸ್ತಿಗಲ್ಲುಗಳು ಒಂದು ದೇಶದ ಹೆಮ್ಮೆ ಆಗಬಲ್ಲುವೇ?

ಅದೆಷ್ಟೋ ಮಹಿಳೆಯರ ಪ್ರಾಣಗಳು ಆಹುತಿಯಾದ ನೆಲೆಗಳನ್ನು ಮತ್ತೆ ಮತ್ತೆ ವರ್ತಮಾನದ ಸಂದರ್ಭದಲ್ಲಿಟ್ಟು “ರಿಚೆಕ್” ಮಾಡಬೇಕಿದೆ. ಧರ್ಮದ ಚೌಕಟ್ಟಿನೊಳಗಡೆ ನಿಸಧಿ ಮರಣ ಹೊಂದಿದ ಅಮಾಯಕ ಧರ್ಮ ಅನುಸರಣೆಕಾರರ ಹಿಂದಿರುವ ಪ್ರಲೋಭನೆಗಳನ್ನು ಈ ಕಾಲದಲ್ಲಿ ಅಧ್ಯಯನ ಮಾಡಬೇಕಿದೆ. ವಾಸ್ತವವಾಗಿ ಇಂತಹ ಸ್ಮಾರಕಗಳ ಆಂತರಿಕ ಕವಾಟದಲ್ಲಡಗಿದ ಶೋಷಣೆಯ ಸ್ವರೂಪವನ್ನು ಪ್ರತಿಪಾದಿಸಬೇಕಾಗಿದೆ. ಈ ನೆಲದಲ್ಲಿ ಶಾಸ್ತ್ರೀಯ (ಕ್ಲಾಸಿಕಲ್) ಆಗಿರಲು ಯಾವ ಆಕರಕ್ಕೆ ಸಾಧ್ಯವಿದೆ? ನಿಜವಾಗಿಯೂ ಅದು ಮೊದಲು ದೇಸಿ, ಜನಪದ, ಜನರೂಪಿತ. ಇಂತಹ ಸೈದ್ಧಾಂತಿಕ ಸಂಶ್ಲೇಷಣೆಯನ್ನು ನಮ್ಮ ಪಂಡಿತಮಾನ್ಯ ಚರಿತ್ರೆಕಾರರು ಗಮನಿಸಲೇ ಇಲ್ಲ. ಅಥವಾ ಮುಸುಕು ಹಾಕಿಟ್ಟಿರುವುದು ನಿಚ್ಚಳವಾಗಿದೆ.

ಶಾಸನ ಇತ್ಯಾದಿ ಚರಿತ್ರೆಯ ಆಕರಗಳು ಎಡೆಪಡೆಯುವ ಹಿಂದಣ ಹುನ್ನಾರಗಳನ್ನು ವಸಾಹತು ಮತ್ತು ವಸಾಹತೋತ್ತರ ಸಾಮಾಜಿಕ ಸಂದರ್ಭಗಳ ಜೊತೆ ಹಾಜರುಪಡಿಸಬೇಕಾಗುತ್ತದೆ. ಆಕರ ಸಾಮಗ್ರಿಗಳ ಆಂತರಿಕ ಆರ್ತನಾದದ ಕ್ಷೀಣ ಸ್ವರವನ್ನು ಎಲ್ಲರಿಗೂ ಕೇಳಿಸುವಂತೆ ಮಾಡಬೇಕಿದೆ. ಪ್ರಭುತ್ವಶಾಹಿ, ಪುರೋಹಿತಶಾಹಿಗಳ ಒಡಲಾಗಿವೆಯೆಂಬಂತೆ ತೋರುವ ಆಕರಗಳ ಒಳಗೆ ಈ ನೆಲದ ಮಕ್ಕಳ, ಶ್ರಮಜೀವಿಗಳ ಬಹುಧ್ವನಿಗಳು ಅಡಗಿವೆ. ಇಲ್ಲಿಯವರೆಗೂ ಚರಿತ್ರೆಯ ಅಧ್ಯಯನಗಳನ್ನು “ಯಜಮಾನ ಮಾದರಿ”ಯಲ್ಲಿ ತಂದಿಟ್ಟ ಪಳಯುಳಿಕೆಯನ್ನೆ ವಿಶ್ವವಿದ್ಯಾಲಯಗಳು ಸಂಶೊಧನೆಯ ವೈಧಾನಿಕತೆಯನ್ನಾಗಿ ಮಾಡಿಕೊಂಡ ದುರಂತವು ನಮ್ಮೆದುರಿಗಿದೆ. ವರ್ತಮಾನದ ಸಂದರ್ಭದಲ್ಲಿ ಪರ್ಯಾಯವಾಗಿ ಧರ್ಮ, ವರ್ಗ, ವರ್ಣ, ಲಿಂಗ ನಿಯಂತ್ರಣದಲ್ಲಿರುವ ಮೀಡಿಯಾ ಕಂಟ್ರೋಲ್‌ನ್ನು ಕಳಚಿಕೊಂಡು ಹೊಸರೂಪ ಧರಿಸಬೇಕಿದೆ.

ವಿಕಾಸ ನಾಗರಿಕತೆ ಸಂಸ್ಕೃತಿಯನ್ನು ಈ ನೆಲದಲ್ಲಿ ಕಟ್ಟಿದ ಸಮುದಾಯಗಳ ಪ್ರಾತಿನಿಧಿಕ ಆಕರ ಸಾಮಗ್ರಿಗಳು ಕರ್ನಾಟಕದ ಬೆಟ್ಟ-ಗುಡ್ಡಗಳಲ್ಲಿ ಹೇರಳವಾಗಿವೆ. ಇವು ಅಡವಿ ಮಕ್ಕಳ ಚರಿತ್ರೆಗಳಲ್ಲವೇ? ಜೊತೆಗೆ ಈ ಸಮುದಾಯಗಳು ರೂಪಿಸಿಕೊಂಡ ಭಾಷಿಕ ಸಂಕಥನವು ರೋಚಕವಾಗಿದೆ. ಭಾಷೆಯು ಕ್ಲಾಸಿಕಲ್ ಎಂದು ಶಾಸನಗಳ ಮುಖೇನ ಹೇಳುವಾಗಲೂ ಜನ ಭಾಷೆಯ ಸ್ವರೂಪವನ್ನು ಮುಖ್ಯವಾಗಿ ಗಮನಿಸಬೇಕು. ಶಾಸನೋಕ್ತ ವೃತ್ತಿಗಳ ಸಮಗ್ರ ಅಧ್ಯಯನ ಮಾಡುವುದಿರಲೀ ಪ್ರಾಸ್ತಾವಿಕ ಬರಹಗಳೂ ಧರ್ಮ ನಿಯಂತ್ರಣವಾದಿ ಚೌಕಟ್ಟಿನಲ್ಲಿ ಬಂಧಿಸಲ್ಪಟ್ಟಿವೆ. ಭಾಷೆಯನ್ನು ಕಾಪಿಟ್ಟುಕೊಂಡು ಬಂದ ಅಕ್ಷರೋದ್ಯಮದ ಸಂವಹನಗಳಾದ ಹಸ್ತಪ್ರತಿ, ನಾಣ್ಯ, ಶಾಸನಗಳ ಹಿಂದಿನ ಜನರ ಶ್ರಮದ ನೆಲೆಯನ್ನು ಬಿಡಿಸಬೇಕು.

ಹಾಗೆಯೇ ದೇವಾಲಯ ಮತ್ತು ರಥಗಳ ಮಹತ್ತರ ನಿರ್ಮಾಣ, ಕರಕುಶಲಗಾರಿಕೆ ಅಜ್ಞಾತ ಇಂಜಿನಿಯರಿಂಗ್ ಕುರಿತ ಯಾವ ಪಾಠಗಳನ್ನು ನಾವು ಕಲಿತಿದ್ದೇವೆ? ಹಾಗೆಯೇ ಕನ್ನಡ ರಾಜಮನೆತನಗಳ ಚರಿತ್ರೆಯಲ್ಲಿಯೂ ಕುಲದ ಕಾರಣಕ್ಕಾಗಿ ಪ್ರಸಿದ್ಧ ದೊರೆಗಳು ಅವರ ಲೋಕೋಪಯೋಗಿ ಕೆಲಸಗಳು ಪಠ್ಯಗಳಲ್ಲಿ ಗೈರುಹಾಜರಾದ ಕೆಲ ಪ್ರಸಂಗಗಳಿವೆ. ಇವೆಲ್ಲಾ ದೊಡ್ಡ ಪ್ರಶ್ನೆಗಳು.

ಭೂತ ಮತ್ತು ವರ್ತಮಾನದ ಸಂಬಂಧಗಳನ್ನು ಬೆಸೆಯುವ ತಳಸಮುದಾಯಗಳ ವೃತ್ತಿಪರತೆಯನ್ನು ಕಟ್ಟಿಕೊಡುವ ಕೆಲಸ ಸಾಕಷ್ಟಿದೆ. ನಮ್ಮ ಗತಕಾಲದ ಕೇಳು ಮತ್ತು ಹೇಳು ಪರಂಪರೆಯು ಶಾಸ್ತ್ರೀಯವಾದದ್ದು ಯಾವ ಸಂದರ್ಭದಲ್ಲಿ? ಎಂಬುದನ್ನು ಹುಡುಕಬೇಕು. ಲಿಖಿತ ಆಕರಗಳ ಒಡಲಲ್ಲಿ ಸುಪ್ತವಾಗಿರುವ ಇಂಜನಿಯರಿಂಗ್, ಕುಂಬಾರಿಕೆ, ಕಂಬಾರಿಕೆ, ಚಮ್ಮಾರಿಕೆ, ಬಡಿಗತನ, ಅಕ್ಕಸಾಲಿ ಇತ್ಯಾದಿ ಉದ್ಯಮಗಳನ್ನು ಮತ್ತು ಅವರ ಭೌದ್ದಿಕತೆಯನ್ನು ಯಾವ ಪೇಟೆಂಟ್ ಇಲ್ಲದೇ ಹೈಜಾಕ್ ಮಾಡಿದ ಕಾಲಘಟ್ಟದ ಸತ್ಯವನ್ನು ಈಗ ಪುನರುಜ್ಜೀವನಗೊಳಿಸಬೇಕಿದೆ. ಇಂತಹ ಕೆಲವು ಸಂಗತಿಗಳ ಕೆಲವು ಟಿಪ್ಪಣಿಗಳನ್ನು ಈ ಅಂಕಣದಲ್ಲಿ ಮಂಡಿಸುವ ಪ್ರಯತ್ನ ಮುಂದಿನ ಕಂತುಗಳಲ್ಲಿ ಮಾಡಲಾಗುತ್ತದೆ.

ಡಾ. ಜಾಜಿ ದೇವೇಂದ್ರಪ್ಪ, ಸಂಯೋಜಕರು, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ


ಇದನ್ನೂ ಓದಿ: 35,000 ಕ್ಕೂ ಹೆಚ್ಚು ಖಾಸಗಿ ಶಾಲಾ ಶಿಕ್ಷಕರು ವಜಾ: 8 ಅತಿಥಿ ಉಪನ್ಯಾಸಕರ ಆತ್ಮಹತ್ಯೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚರಿತ್ರೆಯ ಮರು ಅವಲೋಕನ ಮಾಡುವ ವಿಧಾನ ಮತ್ತು ಸಬಾಲ್ಟ್ರನ್ ಅಧ್ಯಯನ ಇಂದಿನ ಅಗತ್ಯ… ಗತಕಾಲದ ಹೇಳು ಮತ್ತು ಕೇಳು ಸಂಪ್ರದಾಯ ಗಳು ಶಾಸ್ತ್ರೀಯ ಆದದ್ದು ಎಂದು ಎಂಬುದರ ಅವಲೋಕನ ಮತ್ತು ರೀಚೆಕ್… ಹೀಗೆ ಅನೇಕ ವಿಚಾರಗಳನ್ನು ಶಾಸನ ಚರಿತ್ರೆಯ ಕುರಿತ ಡಾ. ಜಾಜಿ ದೇವೇಂದ್ರಪ್ಪ ಅವರ ಬರಹ ಅರ್ಥಪೂರ್ಣ….

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...