Homeಮುಖಪುಟವಿಲನ್‍ಗೆ ಡ್ಯೂಪ್ ಆದ ಆಪತ್ಭಾಂಧವ ಶಿವರಾಜ್‌ಕುಮಾರ್‌ಗೆ ಜನ್ಮದಿನದ ಶುಭಾಶಯಗಳು: ಚಿ.ಗುರುದತ್

ವಿಲನ್‍ಗೆ ಡ್ಯೂಪ್ ಆದ ಆಪತ್ಭಾಂಧವ ಶಿವರಾಜ್‌ಕುಮಾರ್‌ಗೆ ಜನ್ಮದಿನದ ಶುಭಾಶಯಗಳು: ಚಿ.ಗುರುದತ್

- Advertisement -
- Advertisement -

ನಟ ಶಿವರಾಜ್‌ಕುಮಾರ್ ಇಂದು 58ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಶಿವರಾಜ್ ಅವರ ಆತ್ಮೀಯ ಸ್ನೇಹಿತರೂ ಆದ ನಟ-ನಿರ್ದೇಶಕ ಚಿ.ಗುರುದತ್ ಹ್ಯಾಟ್ರಿಕ್ ಹೀರೋ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಳ್ಳುತ್ತಾ ಶುಭಾಶಯ ಕೋರಿದ್ದಾರೆ.

***

ಬಾಲ್ಯದಲ್ಲಿ ಒಟ್ಟಿಗೇ ಆಡಿಕೊಂಡು ಬೆಳೆದ ಶಿವಣ್ಣ ಮತ್ತು ನಾನು `ಆನಂದ್’ (1986) ಚಿತ್ರದೊಂದಿಗೆ ಒಟ್ಟಿಗೇ ಬಣ್ಣ ಹಚ್ಚಿದವರು. `ಆನಂದ್’ ಚಿತ್ರಕ್ಕಾಗಿ ನನಗೆ ಅವರೇ ಒಂದು ತಿಂಗಳು ಕಾರು ಡ್ರೈವಿಂಗ್ ಹೇಳಿಕೊಟ್ಟಿದ್ದರು. ಚಿತ್ರೀಕರಣದಲ್ಲಿ ಡ್ರೈವಿಂಗ್ ಕೈಕೊಟ್ಟಾಗ ಅಲ್ಲಿಯೂ ಶಿವಣ್ಣನ ನೆರವು ಬೇಕಾಗುತ್ತಿತ್ತು. ಮುಂದೆ ಕೂಡ ನನ್ನ ಸಿನಿಮಾ ಬದುಕಿನ ಪ್ರಮುಖ ಹಂತಗಳಲ್ಲಿ ಅವರ ನೆರವು ಒದಗಿಬಂದಿತು. ನನ್ನನ್ನು ನಿರ್ಮಾಪಕನನ್ನಾಗಿ (ಆನಂದಜ್ಯೋತಿ) ಮತ್ತು ನಿರ್ದೇಶಕನನ್ನಾಗಿ (ಸಮರ) ಮಾಡಿದ್ದು ಕೂಡ ಶಿವಣ್ಣನೇ.

ನಾನು, ಅವರು ಮತ್ತು ಬಾಲು (ಬಾಲರಾಜ್) ನಾಯಕರಾಗಿ ನಟಿಸಿದ `ಸಂಯುಕ್ತ’ ಆಗ ಕನ್ನಡದಲ್ಲೊಂದು ಉತ್ತಮ ಥ್ರಿಲ್ಲರ್ ಸಿನಿಮಾ. ಕಾಕೋಳು ಸರೋಜಾ ರಾವ್ ಅವರ ಕಾದಂಬರಿಯನ್ನು ಆಧರಿಸಿ ಮಾಡಿದ ಈ ಸಿನಿಮಾದ ನಿರ್ದೇಶಕರು ಚಂದ್ರಶೇಖರ ಶರ್ಮಾ. ಹಾಗೆ ನೋಡಿದರೆ ಇದು ನಾನು ಮತ್ತು ಬಾಲರಾಜ್ ನಟಿಸಬೇಕೆಂದಿದ್ದ ಸಿನಿಮಾ. ಅಂತಿಮ ಹಂತದಲ್ಲಿ ಶಿವರಾಜ್‌ಕುಮಾರ್ ತಂಡಕ್ಕೆ ಸೇರಿಕೊಂಡರು. ಆಗ ಹ್ಯಾಟ್ರಿಕ್ ಹೀರೋ (ಆನಂದ್, ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಆಗಿದ್ದ ಶಿವರಾಜಕುಮಾರ್‌ಗೆ ಇದು ನಾಲ್ಕನೇ ಸಿನಿಮಾ. ದೊಡ್ಡ ಯಶಸ್ಸು ಕಂಡ ಹೀರೋ ಎನ್ನುವ ಯಾವುದೇ ಸಣ್ಣ ಹಿಂಜರಿಕೆಯೂ ಇಲ್ಲದೆ ಖುಷಿಯಿಂದ ನಮಗೆ ಜೊತೆಯಾದರು. ನಮ್ಮಿಬ್ಬರ ಸಿನಿಮಾ ಬದುಕಿಗೆ ನೆರವಾಗುತ್ತದೆ ಎನ್ನುವ ದೃಷ್ಟಿಯಿಂದ ಯೋಜನೆಗೆ ಕೈಜೋಡಿಸಿದರು. ಮೊದಲು ಚಿಕ್ಕ ಪ್ರಾಜೆಕ್ಟ್ ಎಂದುಕೊಂಡಿದ್ದ ಇದು ಶಿವರಾಜ್ ಸೇರ್ಪಡೆಯಿಂದ ದೊಡ್ಡ ಸಿನಿಮಾ ಆಗಿ ಯಶಸ್ಸು ಕಂಡಿತು.

ಸದಾ ಚಟುವಟಿಕೆಯಿಂದಿರುವ ಶಿವರಾಜ್ ಶೂಟಿಂಗ್ ಸೆಟ್‍ನಲ್ಲಿದ್ದರೆ ಒಂದು ರೀತಿ ಉತ್ಸಾಹ. ದಿನೇಶ್‍ಬಾಬು ನಿರ್ದೇಶನದ `ಇನ್‍ಸ್ಪೆಕ್ಟರ್ ವಿಕ್ರಂ’ ಶೂಟಿಂಗ್ ಸಂದರ್ಭವೊಂದು ನನಗೆ ನೆನಪಾಗುತ್ತದೆ. ಶಿವಣ್ಣ ಹೀರೋ ಆಗಿ ನಟಿಸಿದ್ದ ಚಿತ್ರದಲ್ಲಿ ನನಗೊಂದು ಪ್ರಮುಖ ಪಾತ್ರವಿತ್ತು. ಕೆಮ್ಮಣ್ಣುಗುಂಡಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ನಾವೆಲ್ಲರೂ ಪಾಲ್ಗೊಂಡಿದ್ದೆವು. ನಿರ್ದೇಶಕ ದಿನೇಶ್ ಬಾಬು ಅವರ ಆತ್ಮೀಯರೂ ಆಗಿದ್ದ ತಮಿಳು ನಟ ನಾರಾಯಣ್ ಚಿತ್ರದ ಖಳ ಪಾತ್ರದಲ್ಲಿ ನಟಿಸುತ್ತಿದ್ದರು. ಸನ್ನಿವೇಶವೊಂದರಲ್ಲಿ ನಾರಾಯಣ್ ವೇಗವಾಗಿ ಕಾರು ಓಡಿಸಿಕೊಂಡು ಬಂದು ಒಮ್ಮೆಗೇ ಬ್ರೇಕ್ ಹಾಕಿ ಕಾರನ್ನು ತಿರುಗಿಸಿ ನಿಲ್ಲಿಸಬೇಕಿತ್ತು. ನಾಲ್ಕೈದು ಟೇಕ್‍ಗಳಾದರೂ ಶಾಟ್ ಓಕೆಯಾಗಲಿಲ್ಲ. ಕೊನೆಗೆ ನಾರಾಯಣ್‍ಗೆ ತಾವು ಡ್ಯೂಪ್ ಆಗುವುದಾಗಿ ಶಿವಣ್ಣ ಎದ್ದುನಿಂತರು! ಅದು ರಿಸ್ಕೀ ಶಾಟ್ ಆದ್ದರಿಂದ ಎಲ್ಲರೂ ಬೇಡವೆಂದೆವು. ನಮ್ಮ ಮಾತು ಕೇಳದ ಶಿವಣ್ಣ, ನಾರಾಯಣ್‍ರ ಷರ್ಟ್ ಹಾಕಿಕೊಂಡು ಕಾರು ಹತ್ತಿದರು. ಡ್ರೈವಿಂಗ್ ಎಕ್ಸ್‌ಪರ್ಟ್ ಆಗಿದ್ದರಿಂದ ಅವರಿಗೊಂದಿಷ್ಟು ಟೆಕ್ನಿಕ್‍ಗಳು ಗೊತ್ತಿದ್ದವು. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಒಂದೇ ಟೇಕ್‍ಗೆ ರಿಸ್ಕೀ ಶಾಟ್ ಓಕೆ ಮಾಡಿದರು. ಕೊಂಚ ಎಡವಟ್ಟಾಗಿದ್ದರೂ ಕಾರು ಪಲ್ಟಿಯಾಗುವ ಸಾಧ್ಯತೆಗಳಿದ್ದವು. ಹೆದರದ ಶಿವಣ್ಣ ವಿಲನ್‍ಗೆ `ಡ್ಯೂಪ್’ ಆಗಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿದರು!

ನಾಯಕನೇ ನೃತ್ಯ ಸಂಯೋಜಿಸಿದಾಗ…

ಶಿವರಾಜ್ ಪ್ರೋತ್ಸಾಹದ ಮೇರೆಗೆ `ಸಮರ’ ಚಿತ್ರದ ಮೂಲಕ ನಾನು ನಿರ್ದೇಶಕನ ಹ್ಯಾಟ್ ಧರಿಸುವಂತಾಯ್ತು. ಶಿವರಾಜಕುಮಾರ್ ಮತ್ತು ಸುಧಾರಾಣಿ ಚಿತ್ರದ ಹೀರೋ-ಹಿರೋಯಿನ್. ಸಿಂಗಾಪೂರದಲ್ಲಿ ಚಿತ್ರದ ಎರಡು ಹಾಡುಗಳನ್ನು ಚಿತ್ರಿಸುವುದೆಂದು ನಿರ್ಧರಿಸಿದ್ದೆವು. ಅಂದುಕೊಂಡಂತೆಯೇ ಬೆಂಗಳೂರಿನಿಂದ ನಮ್ಮದೊಂದು ಚಿಕ್ಕ ತಂಡದೊಂದಿಗೆ ಸಿಂಗಾಪೂರಕ್ಕೆ ಹೋದೆವು. ನೃತ್ಯ ನಿರ್ದೇಶಕ ಜಾನ್ ಬಾಲು ಚೆನ್ನೈನಿಂದ ಬಂದು ನಮ್ಮನ್ನು ಕೂಡಿಕೊಳ್ಳಬೇಕಿತ್ತು. ಕಾರಣಾಂತರಗಳಿಂದಾಗಿ ಅವರು ಚೆನ್ನೈನಲ್ಲೇ ಉಳಿಯುವಂತಾದಾಗ ನಾವು ಕಂಗಾಲಾದೆವು.

ನಮಗೆ ಅಲ್ಲಿ ಚಿತ್ರಿಸಲು ಅನುಮತಿ ಸಿಕ್ಕಿದ್ದು ನಾಲ್ಕು ದಿನವಷ್ಟೇ. ನಿರ್ದೇಶಕನಾದ ನಾನು ತಲೆ ಮೇಲೆ ಕೈಹೊತ್ತು ಕುಳಿತಿದ್ದರೆ, ಶಿವಣ್ಣ ತಾವೇ `ನೃತ್ಯ ನಿರ್ದೇಶಕ’ನಾಗುವುದಾಗಿ ಹೇಳಿದರು! ಸಂಪೂರ್ಣ ವಿಫಲವಾಗಬೇಕಿದ್ದ ಸಿಂಗಾಪೂರ್ ಟೂರ್‌ಗೆ ಮತ್ತೆ ಜೀವ ಬಂದಂತಾಯಿತು. ನಾನು ಮೇಕಪ್-ಟಚ್‍ಅಪ್, ಟ್ರ್ಯಾಲಿ ಹ್ಯಾಂಡ್ಲಿಂಗ್ ನೋಡಿಕೊಂಡರೆ ಹೀರೋ ಶಿವಣ್ಣ ನೃತ್ಯ ನಿರ್ದೇಶಕರಾದರು. ನೃತ್ಯದಲ್ಲಿ ಅಪಾರ ಪರಿಣತಿಯಿರುವ ಶಿವಣ್ಣ ಚಿತ್ರದ ಎರಡು ಹಾಡುಗಳಿಗೆ ನೃತ್ಯ ಸಂಯೋಜಿಸಿದರು. ತಮ್ಮ ನೃತ್ಯ ಸಂಯೋಜನೆಗೆ ತಾವೇ ಹೆಜ್ಜೆ ಹಾಕುತ್ತಾ ಸಿಂಗಾಪೂರ ಪ್ರವಾಸವನ್ನು ಯಶಸ್ವಿಗೊಳಿಸಿದರು.

  • ಚಿ.ಗುರುದತ್ 

(ನಿರೂಪಣೆ: ಶಶಿಧರ ಚಿತ್ರದುರ್ಗ)


ಇದನ್ನೂ ಓದಿ: ಈ ಜನಪ್ರಿಯ ಕೂಸುಮರಿಯ ಫೋಟೋ ಸೆರೆಯಾದದ್ದು ಹೇಗೆ!?| ಚಿ. ಉದಯಶಂಕರ್ ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...