Homeಮುಖಪುಟಈ ಜನಪ್ರಿಯ ಕೂಸುಮರಿಯ ಫೋಟೋ ಸೆರೆಯಾದದ್ದು ಹೇಗೆ!?| ಚಿ. ಉದಯಶಂಕರ್ ನೆನಪು

ಈ ಜನಪ್ರಿಯ ಕೂಸುಮರಿಯ ಫೋಟೋ ಸೆರೆಯಾದದ್ದು ಹೇಗೆ!?| ಚಿ. ಉದಯಶಂಕರ್ ನೆನಪು

ನಾನು ನೋಡಿದಂತೆ ರಾಜ್ ಮತ್ತು ಉದಯಶಂಕರ್ ಅಪರೂಪದ ಸ್ನೇಹಿತರು. ಇಬ್ಬರಿಗೂ ಪರಸ್ಪರರಲ್ಲಿ ಅಪಾರ ಪ್ರೀತಿ, ಗೌರವ. ಒಂದು ಹಂತದ ಸಲಿಗೆಯೂ ಇತ್ತು. ಉದಯಶಂಕರ್ ಚಿತ್ರಕಥೆ, ಸಂಭಾಷಣೆಯಲ್ಲಿಯೇ ಅಲ್ಲವೇ ರಾಜ್ ಜನರನ್ನು ಸೆಳೆದದ್ದು?

- Advertisement -
- Advertisement -

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಚಿತ್ರಸಾಹಿತಿಗಳಲ್ಲೊಬ್ಬರಾದ ಚಿ. ಉದಯಶಂಕರ್ ಅಗಲಿದ ದಿನವಿದು. ವರನಟ ಡಾ. ರಾಜಕುಮಾರ್ ಮತ್ತು ಚಿ. ಉದಯಶಂಕರ್ ಅತ್ಯಂತ ಆಪ್ತರು. ಇಲ್ಲಿರುವ ಇವರಿಬ್ಬರ ‘ಕೂಸುಮರಿ’ ಫೋಟೋ ಬಹು ಜನಪ್ರಿಯ. ಈ ಫೋಟೋ ಸೆರೆಹಿಡಿದ ಸಂದರ್ಭವನ್ನು ಹಿರಿಯ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಸ್ಮರಿಸಿಕೊಂಡಿದ್ದಾರೆ.


ಬರಹ: ಭವಾನಿ ಲಕ್ಷ್ಮೀನಾರಾಯಣ
ನಿರೂಪಣೆ: ಶಶಿಧರ ಚಿತ್ರದುರ್ಗ

ಸಿನಿಮಾ ಛಾಯಾಗ್ರಾಹಕ ವೃತ್ತಿಯಿಂದಾಗಿ ಜೀವನದಲ್ಲಿ ಹತ್ತಾರು ಮೇರು ಪ್ರತಿಭೆಗಳನ್ನು ಮುಖಾಮುಖಿಯಾಗಲು ನನಗೆ ಸಾಧ್ಯವಾಯ್ತು. ಅಂಥವರಲ್ಲೊಬ್ಬರು ಚಿತ್ರಸಾಹಿತಿ ಚಿ. ಉದಯಶಂಕರ್. ನಾನು ಕಂಡ ಅಪ್ಪಟ ಪ್ರತಿಭೆಗಳಲ್ಲಿ ಅವರೂ ಒಬ್ಬರು. ಸಾಮಾನ್ಯವಾಗಿ ಡಾ. ರಾಜಕುಮಾರ್ ಸಿನಿಮಾಗಳ ಶೂಟಿಂಗ್ ಇದ್ದೆಡೆ ಚಿ. ಉದಯಶಂಕರ್ ಉಪಸ್ಥಿತಿ ಇರುತ್ತಿತ್ತು. ಹಾಗಾಗಿ ಶೂಟಿಂಗ್, ಸ್ಟುಡಿಯೋಗಳಿಗೆ ಭೇಟಿ ನೀಡುತ್ತಿದ್ದ ನನ್ನನ್ನು ಅವರು ವಿಶ್ವಾಸದಿಂದ ಮಾತನಾಡುತ್ತಿದ್ದರು. ಸದಾ ತಮಾಷೆ ಮಾಡುತ್ತಾ ಎಲ್ಲರೊಂದಿಗೆ ಬಹುಬೇಗ ಬೆರೆಯುವ ವ್ಯಕ್ತಿತ್ವ ಅವರದು.

ನಾನು ನೋಡಿದಂತೆ ರಾಜ್ ಮತ್ತು ಉದಯಶಂಕರ್ ಅಪರೂಪದ ಸ್ನೇಹಿತರು. ಇಬ್ಬರಿಗೂ ಪರಸ್ಪರರಲ್ಲಿ ಅಪಾರ ಪ್ರೀತಿ, ಗೌರವ. ಒಂದು ಹಂತದ ಸಲಿಗೆಯೂ ಇತ್ತು. ಉದಯಶಂಕರ್ ಚಿತ್ರಕಥೆ, ಸಂಭಾಷಣೆಯಲ್ಲಿಯೇ ಅಲ್ಲವೇ ರಾಜ್ ಜನರನ್ನು ಸೆಳೆದದ್ದು? ರಾಜ್‍ರನ್ನು ಹತ್ತಿರದಿಂದ ಒಡನಾಡಿದ್ದರಿಂದ ಅವರ ಇಮೇಜ್‍ಗೆ ಸರಿಹೊಂದುವಂತೆ ಬರೆಯಲು ಉದಯಶಂಕರ್ ಅವರಿಗೆ ಸಾಧ್ಯವಾಗಿರಬಹುದು. ರಾಜ್ ಸಿನಿಮಾಗಳ ಚಿತ್ರೀಕರಣಗಳಿಗೆ ಹೋದ ಬಹಳಷ್ಟು ಸಂದರ್ಭಗಳಲ್ಲಿ ಚಿ. ಉದಯಶಂಕರ್ ಅವರನ್ನು ಭೇಟಿಯಾಗಿದ್ದೇನೆ. ಸಾಕಷ್ಟು ಬಾರಿ ಅವರು ನನ್ನ ಕ್ಯಾಮರಾಗೆ ರೂಪದರ್ಶಿಯಾಗಿದ್ದಾರೆ.ನಂದಿಬೆಟ್ಟದಲ್ಲೊಮ್ಮೆ ರಾಜ್ ಮತ್ತು ಉದಯಶಂಕರ್ ಜೋಡಿಯ ಚಿತ್ರ ತೆಗೆದದ್ದು ನನಗೆ ಬಹುವಾಗಿ ಕಾಡುತ್ತದೆ. ರಾಜ್‍ರ ಚಿತ್ರವೊಂದಕ್ಕೆ ನಂದಿಬೆಟ್ಟದ ಟಿಪ್ಪು ಡ್ರಾಪ್‍ನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಉದಯಶಂಕರ್ ಕೂಡ ಸೆಟ್‍ನಲ್ಲಿದ್ದರು. ನಾನಲ್ಲಿಗೆ ಹೋದಾಗ ಇಬ್ಬರೂ ಸನ್ನಿವೇಶವೊಂದರ ಬಗ್ಗೆ ಚರ್ಚಿಸುತ್ತಿದ್ದರೆಂದು ಕಾಣುತ್ತದೆ. ಅವರ ಗಂಭೀರ ಮಾತುಕತೆ ಮುಗಿಯುತ್ತಿದ್ದಂತೆ ನಾನಲ್ಲಿಗೆ ಹೋದೆ. ಅಪರೂಪದ ಪೋಸ್ ಬೇಕೆಂದಾಗ, ಉತ್ಸಾಹಿ ರಾಜ್ ಕ್ಷಣಕಾಲ ಯೋಚಿಸಿದರು.

‘ಉದಯಶಂಕರ್‍ರನ್ನು ಕೂಸು ಮರಿ ಮಾಡಿದರೆ ಹೇಗೆ?’ ಎಂದು ಕೇಳಿದ ರಾಜ್, ಅದಕ್ಕೆ ಸಜ್ಜಾದರು. ಉದಯಶಂಕರ್ ನಗುತ್ತಲೇ ರಾಜ್ ಬೆನ್ನೇರಿದರು. ಸ್ಥೂಲಕಾಯದ ಅವರನ್ನು ಹೊರುತ್ತಲೇ ರಾಜ್ ಒಂದೆಡೆ ಕೊಂಚ ವಾಲಿದರು. ಆಕಸ್ಮಾತ್ ಇಬ್ಬರೂ ಬಿದ್ದರೇನು ಗತಿ ಎಂದು ನನಗೆ ಗಾಬರಿಯಾಯ್ತು. ಯಾಕಾದರೂ ಭಿನ್ನ ಪೋಸ್ ಕೊಡಿ ಎಂದು ಕೇಳಿದೆನೋ ಎಂದು ಪರಿತಪಿಸಿದೆ. ಹಾಗೇನೂ ಆಗಲಿಲ್ಲ. ರಾಜ್ ತಮ್ಮ ಸ್ನೇಹಿತನನ್ನು ಕೂಸು ಮರಿ ಮಾಡುವ ಅಪರೂಪದ ಪೋಸ್ ನನ್ನ ಕ್ಯಾಮರಾಗೆ ದಕ್ಕಿತು. ಮುಂದೆ ಈ ಫೋಟೋ ನೋಡಿ ಅವರಿಬ್ಬರೂ ತುಂಬಾ ಖುಷಿಪಟ್ಟಿದ್ದರು.


ಓದಿ: ನಿರಾಶ್ರಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಈ ಐದು ಚಲನಚಿತ್ರಗಳು


ನಮ್ಮ ಯೂಟ್ಯೂನ್ ಚಾನೆಲ್ ನ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...