Homeಅಂಕಣಗಳುಬಹುಜನ ಭಾರತ; ಸ್ವತಂತ್ರ ಅಸ್ಮಿತೆಯಲ್ಲಿ ಅರಳಿದ ಶಿವರಾಣಿ ದೇವಿ

ಬಹುಜನ ಭಾರತ; ಸ್ವತಂತ್ರ ಅಸ್ಮಿತೆಯಲ್ಲಿ ಅರಳಿದ ಶಿವರಾಣಿ ದೇವಿ

- Advertisement -
- Advertisement -

ಪ್ರಚಂಡ ಪ್ರಸಿದ್ಧ ಜೀವನ ಸಂಗಾತಿಯ ನೆರಳಿನಲ್ಲಿ ಕಳೆದೇ ಹೋದ ಪತ್ನಿಯರು, ಪತಿಯರಿಗೆ ಲೆಕ್ಕವಿಲ್ಲ.

ಆದರೆ ಹಿಂದೀ ಉರ್ದುವಿನಲ್ಲಿ ಬರೆದ ಮಾನವತಾವಾದಿ ಲೇಖಕ ಮುನ್ಷಿ ಪ್ರೇಮ್ ಚಂದ್ ಅವರ ಪತ್ನಿ ಶಿವರಾಣಿ ದೇವಿ, ಪತಿಯ ಪ್ರಕಾಶಮಯ ಪ್ರಭಾವಳಿಯಲ್ಲೂ ಕಳೆದುಹೋಗದೆ ಹೊಳೆದವರು. ಸ್ವಂತ ಅಸ್ಮಿತೆ ಉಳಿಸಿಕೊಂಡವರು.

’ನಮ್ಮ ಕನಸಿನ ರಾಷ್ಟ್ರೀಯತೆಯಲ್ಲಿ ಜನ್ಮಜಾತ ವರ್ಣಗಳ ಗಂಧಗಾಳಿಗೂ ಅವಕಾಶ ಇರದು. ಅದು ಶ್ರಮಿಕರು ಮತ್ತು ರೈತರ ಸಾಮ್ರಾಜ್ಯ. ಬ್ರಾಹ್ಮಣ ಕಾಯಸ್ಥ ಕ್ಷತ್ರಿಯರು ಅಲ್ಲಿರುವುದಿಲ್ಲ. ಸಮಸ್ತರೂ ಭಾರತವಾಸಿಗಳು. ಈ ಎಲ್ಲ ಲಡಾಯಿ ಬೆರಳೆಣಿಕೆಯ ವ್ಯಕ್ತಿಗಳದು. ಇವರಿಂದ ದೂರವಿರುವ ರಾಷ್ಟ್ರದಲ್ಲಿ ಹಿಂದೂಗಳೂ ಇಲ್ಲ, ಮುಸಲ್ಮಾನರೂ ಇಲ್ಲ. ಅಲ್ಲಿರುವವರೆಲ್ಲ ಶ್ರಮಿಕರು ಮತ್ತು ರೈತರು. ಒಬ್ಬರಿಗಿಂತ ಮತ್ತೊಬ್ಬರು ದೀನ ದರಿದ್ರ ದಲಿತರು ಮತ್ತು ಶೋಷಣೆಯ ಗಾಣದಲ್ಲಿ ಅರೆಯಲ್ಪಟ್ಟವರು. ಆರತಿ ನಮಾಜು-ಹಿಂದೀ-ಉರ್ದು ಸಮಸ್ಯೆಗಳು ಇಲ್ಲಿ ಇರುವುದೇ ಇಲ್ಲ’ ಎಂದು 90 ವರ್ಷಗಳ ಹಿಂದೆಯೇ ಹೇಳಿದ್ದವರು ಪ್ರೇಮ್ ಚಂದ್.

ಪ್ರೇಮಚಂದ್ ಅವರ 141ನೆಯ ಜಯಂತಿ ಮೊನ್ನೆ ಜುಲೈ 31ರಂದು ಸರಿದುಹೋಯಿತು. ಪತ್ನಿ ಶಿವರಾಣಿ ದೇವಿಯವರ ಬರೆಹದ ಬದುಕಿಗೆ ನೀರೆರೆದು ಮನಸಾರೆ ಪ್ರೋತ್ಸಾಹಿಸಿದ ಪತಿಯಾಗಿದ್ದರು ಅವರು.

ಪ್ರೇಮ್ ಚಂದ್ ಅವರ ಬದುಕು ಬರೆಹಗಳ ಬಿಡಿಸಲಾಗದ ಭಾಗವೇ ಆಗಿಹೋಗಿದ್ದರು ಪತ್ನಿ ಶಿವರಾಣಿದೇವಿ. ಪ್ರೇಮ್ ಚಂದ್ ಎರಡನೆಯ ಮದುವೆಯಲ್ಲಿ ಅವರ ಕೈಹಿಡಿದಾಗ ಶಿವರಾಣಿ ಹನ್ನೊಂದು ವರ್ಷ ವಯಸ್ಸಿನ ಬಾಲವಿಧವೆ. ’ಕಾಯಸ್ಥ ಬಾಲ ವಿಧವಾ ಉದ್ಧಾರಕ ಪುಸ್ತಿಕಾ’ದಲ್ಲಿ ಅಚ್ಚಾಗಿದ್ದ ಜಾಹೀರಾತನ್ನು ಓದಿ ಶಿವರಾಣಿದೇವಿಯವರ ತಂದೆಗೆ ಪತ್ರ ಬರೆದು ಆಕೆಯನ್ನು ವರಿಸಿದ್ದರು ಪ್ರೇಮ್ ಚಂದ್.

ಪತಿಯ ನಿಧನಾನಂತರ ನಲವತ್ತು ವರ್ಷಗಳ ಕಾಲ ಜೀವಿಸಿದ್ದವರು. ಬರವಣಿಗೆಯಲ್ಲಿ ತೊಡಗಿಕೊಂಡವರು. ಅಂದಿನ ಕಾಲಘಟ್ಟದ ಮಹತ್ವದ ಕತೆಗಾರ್ತಿಯಾಗಿದ್ದರು ಆಕೆ. ಸ್ತ್ರೀ ವಿಮುಕ್ತಿಯ ವಿಷಯದಲ್ಲಿ ಪತಿಗಿಂತ ಹೆಚ್ಚು ಮುಂದೆ ಸಾಗಿದ್ದ ಆಲೋಚನೆ ಅವರದಾಗಿತ್ತು.

ಆಕೆಯ ಕಥಾನಾಯಕಿಯರು ಅನ್ಯಾಯದ ವಿರುದ್ಧ ಸಿಡಿದೇಳುವವರು. ದಿಟ್ಟರೂ ಆತ್ಮವಿಶ್ವಾಸಭರಿತರೂ, ಉದ್ಧಟರೂ ಆಗಿರುತ್ತಿದ್ದರು. ಬಾಲವಿಧವೆ ಕಾಂತಿ ತನ್ನ ಗ್ರಾಮದ ಲಂಪಟ ಮೋಹನನ ಮೂಗನ್ನೇ ಕತ್ತರಿಸಿ ಶಿಕ್ಷಿಸುತ್ತಾಳೆ. ನಲವತ್ತರ ವಯಸ್ಸಿನ ನಾಲ್ಕು ಮಕ್ಕಳ ತಂದೆಯನ್ನು ಮದುವೆಯಾಗುವ ಅನಿವಾರ್ಯದ ಕತ್ತರಿಯಲ್ಲಿ ಸಿಕ್ಕಿಹಾಕಿಕೊಳ್ಳುವ ರಾಮ್ ಪ್ಯಾರಿ ಪತ್ರ ಬರೆದು ವರನಿಗೆ ಬುದ್ಧಿ ಹೇಳಲು ಪ್ರಯತ್ನಿಸುತ್ತಾಳೆ. ಅವನು ಲೆಕ್ಕಿಸುವುದಿಲ್ಲ. ಮದುವೆ ಮಂಟಪದಲ್ಲಿ ಘೂಂಘಟ್ ಕಿತ್ತೆಸೆದು ವರನನ್ನು ಚಪ್ಪಲಿಯಿಂದ ಬಾರಿಸುತ್ತಾಳೆ. ತಂದೆಯತ್ತ ಮತ್ತೊಂದು ಚಪ್ಪಲಿಯನ್ನು ಎಸೆದು ಹೊರನಡೆಯುತ್ತಾಳೆ. ಅವರ ಕತೆಗಳು ಎಂಬತ್ತು ವರ್ಷಗಳ ನಂತರ ಹಿಂದೀ ಓದುಗರಿಗೆ ಇದೀಗ ಲಭಿಸತೊಡಗಿವೆ.

ಶಿವರಾಣಿಯವರ ಕತೆಗಳನ್ನು ಪ್ರೇಮ್ ಚಂದ್ ಬರೆದುಕೊಡುತಿದ್ದರು ಎಂಬ ಓದುಗರ ಸಂದೇಹ ಕಾಲಕ್ರಮೇಣ ನಿವಾರಣೆಯಾಗುತ್ತದೆ. ಅದನ್ನು ನಿವಾರಿಸಲು ಖುದ್ದು ಪ್ರೇಮ್ ಚಂದ್ ಹೆಣಗುತ್ತಾರೆ. ತಮ್ಮ ಕತೆಗಳು ಪತಿಯ ಕತೆಗಳ ಅನುಕರಣೆ ಆಗದಂತೆ ಪ್ರಜ್ಞಾಪೂರ್ವಕವಾಗಿ ಎಚ್ಚರ ವಹಿಸುತ್ತಾರೆ ಶಿವರಾಣಿ.

1956ರಲ್ಲಿ ಪ್ರಕಟವಾದ ಅವರ ’ಪ್ರೇಮ್ ಚಂದ್ ಘರ್ ಮೇಂ’ (ಮನೆಯೊಳಗೆ ಪ್ರೇಮ್ ಚಂದ್) ಎಂಬ ಅವರ ಕೃತಿ, ಸಾಹಿತ್ಯ ಇತಿಹಾಸಕಾರರ ಪಾಲಿನ ಅಮೂಲ್ಯ ನಿಧಿ. ಪ್ರೇಮ್ ಚಂದ್ ಮತ್ತು ಶಿವರಾಣಿಯವರ ಸುತ್ತ ಸುತ್ತುವ ಈ ಕೃತಿ ಅಲ್ಲಲ್ಲಿ ಶಿವರಾಣಿಯವರ ಸಾಹಿತ್ಯಾಸಕ್ತಿ ಮತ್ತು ಅಂದಿನ ರಾಜಕೀಯ ವಾತಾವರಣ ಕುರಿತು ಬೆಳಕು ಚೆಲ್ಲುತ್ತದೆ. ಪ್ರೇಮ್ ಚಂದ್ ಕುರಿತ ಅವರ ಕೃತಿಯಲ್ಲಿ ಅವರ ಮನಸ್ಸಾಕ್ಷಿ ಮಾತಾಡುತ್ತದೆ. ಜಗತ್ತಿನ ಕಣ್ಣಿಗೆ ಕಾಣದಿರುವ ಪ್ರೇಮ್ ಚಂದ್ ಅವರಿಗೆ ಮಡದಿಯ ಕಣ್ಣಿನ ಕನ್ನಡಿಯನ್ನು ಹಿಡಿಯುತ್ತದೆ. ಈ ಕೃತಿಯು ಸ್ತ್ರೀವಾದಿ ಕಣ್ಣೋಟವನ್ನು ಕಟ್ಟಿಕೊಡುವ ದಸ್ತಾವೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೊತ್ತಗೆಯು ಕೇವಲ ಪ್ರೇಮ್ ಚಂದ್ ಅವರ ಜೀವನ ಚರಿತ್ರೆಯಲ್ಲ, ಶಿವರಾಣಿಯವರ ಆತ್ಮಕತೆಯೂ ಹೌದು ಎಂಬ ನಿಷ್ಕರ್ಷೆಗೆ ಬರಲಾಗಿದೆ. ಮೇಲ್ನೋಟಕ್ಕೆ ಈ ಪುಸ್ತಕ ಮನೆವಾರ್ತೆಯ ನೆನಪುಗಳನ್ನು ಆಧರಿಸಿದ್ದೆಂದು ತೋರಬಹುದು. ಆದರೆ ಪ್ರೇಮ್ ಚಂದ್ ಅವರ ಒಳ-ಹೊರಗುಗಳನ್ನು ಇಣುಕಿ ನೋಡಿ ಅರ್ಥ ಮಾಡಿಕೊಳ್ಳಲು ಅನುವಾಗುವ ಪ್ರಾಮಾಣಿಕ ಕಿಟಕಿಯಿದು. ಅವರ ಸಾಹಿತ್ಯಕ ಮತ್ತು ಮಾನವೀಯ ಗುಣಗಳ ಮೇಲೆ ಬೆಳಕು ಚೆಲ್ಲುವ ಕಿಟಕಿ. ಪ್ರೇಮ್ ಚಂದ್ ಅವರ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುವ ಬರೆಹವಿದು. ಇಲ್ಲಿನ ಪ್ರತಿಯೊಂದು ಪದ ಪದದ ಮೇಲೂ ಅವರ ವ್ಯಕ್ತಿತ್ವದ ಛಾಪು ಮೂಡಿದೆ ಎಂದು ವಿಮರ್ಶಕರು ಹೇಳಿದ್ದಾರೆ.

ದಿನನಿತ್ಯದ ಬದುಕು ಬಾಳುವೆಯ ಸಹಜ ಸರಳ ಮಾತುಕತೆಗಳಲ್ಲೇ ಪ್ರೇಮ್ ಚಂದ್ ಅವರನ್ನು ಶಿವರಾಣಿ ಸಾಕಾರಗೊಳಿಸಿದ್ದಾರೆ. ’ಅವರು ಉಳಿದೆಲ್ಲರಿಗೂ ಮಹಾನ್ ಆಗಿದ್ದಿರಬಹುದು ಆದರೆ ನನ್ನ ಪಾಲಿಗೆ ನನ್ನವರಾಗಿದ್ದರು, ನಾನು ಅವರವಳಾಗಿದ್ದೆ. ನಮ್ಮಿಬ್ಬರ ನಡುವೆ ಮಹಾನತೆಗೆ ಜಾಗವೆಲ್ಲಿಯದು?’ ಎಂಬ ಅವರ ಮಾತುಗಳು ಅರ್ಥಪೂರ್ಣ.

ಪತಿಯ ಮಾನವೀಯತೆಯನ್ನು ಮೆಚ್ಚುತ್ತಲೇ ಕಟಕಟೆಯಲ್ಲಿ ನಿಲ್ಲಿಸಿ ಆತನ ವಿವಾಹೇತರ ಪ್ರೇಮ ಪ್ರಸಂಗವನ್ನು ಪ್ರಶ್ನಿಸಿದ್ದಾರೆ.

ಮೊದಲ ಪತ್ನಿ ಇದ್ದಾಗಲೇ ಮತ್ತೊಬ್ಬ ಹೆಣ್ಣುಮಗಳ ಸಂಗ ಮಾಡಿದ್ದೆ. ನೀನು ಬಂದ ನಂತರವೂ ಈ ಸಂಬಂಧ ಮುಂದುವರೆದಿತ್ತು ಎಂದು ಶಿವರಾಣಿಯವರ ಮುಂದೆ ಪ್ರೇಮ್ ಚಂದ್ ತಪ್ಪೊಪ್ಪಿಕೊಂಡಿದ್ದರು. ಆದರೆ ತಾವು ಪ್ರೇಮ್‌ಚಂದ್ ಬದುಕಿನಲ್ಲಿ ಕಾಲಿಟ್ಟ ನಂತರವೂ ಆತ ಮತ್ತೊಬ್ಬ ಹೆಣ್ಣುಮಗಳ ಸಂಗ ಮುಂದುವರೆಸಿದ್ದ ಶಿವರಾಣಿಯವರಿಗೆ ತಿಳಿದಿತ್ತು. ಆದರೆ ಪತಿಯ ಮುಂದೆ ಆ ಬಗ್ಗೆ ಬಾಯಿ ಬಿಡಲಿಲ್ಲ. ಈ ವಿಷಯ ಪ್ರೇಮ್ ಚಂದ್ ಅವರಿಗೆ ಗೊತ್ತಾಯಿತು. ಹೃದಯವಂತಿಕೆಯಲ್ಲಿ ನೀನು ನನಗಿಂತ ದೊಡ್ಡವಳು ಎಂದು ಪ್ರತಿಕ್ರಿಯಿಸುತ್ತಾರೆ.

ಪ್ರೇಮ್ ಚಂದ್ ಅವರ ಮೇಲೆ ಆದ ಗಾಂಧೀ ಪ್ರಭಾವ ಶಿವರಾಣಿಯವರನ್ನೂ ತಾಗುತ್ತದೆ. ಗಾಂಧೀ ಆಂದೋಲನದಲ್ಲಿ ಭಾಗವಹಿಸುತ್ತಾರೆ. ಗೋರಖಪುರಕ್ಕೆ ಗಾಂಧೀ ಬಂದ ವರ್ಷ ಒಡವೆ ಧರಿಸುವುದಿಲ್ಲವೆಂದು ಮಾಡಿದ ಪ್ರತಿಜ್ಞೆಯನ್ನು ಆಕೆ ಕಡೆಯುಸಿರ ತನಕ ಪಾಲಿಸುತ್ತಾರೆ. 1930ರ ದಶಕದಲ್ಲಿ ಲಕ್ನೋದ ಮಹಿಳಾ ಆಶ್ರಮದ ಸಭೆಯೊಂದರಲ್ಲಿ 12 ಸಾವಿರ ಮಂದಿಯನ್ನು ಉದ್ದೇಶಿಸಿ ಸುಡುಗೆಂಡದ ಭಾಷಣ ಮಾಡುತ್ತಾರೆ. ವಿದೇಶೀ ವಸ್ತ್ರ ಸುಟ್ಟಿದ್ದಕ್ಕಾಗಿ ಬಂಧನಕ್ಕೆ ಒಳಗಾಗುತ್ತಾರೆ.

ಇಂತಹ ವಿಶಿಷ್ಟ ವ್ಯಕ್ತಿತ್ವದ ಶಿವರಾಣಿಯವರ ಹೂತು ಹೋಗಿದ್ದ ಕತೆಗಳು ಇದೀಗ ಬೆಳಕಿಗೆ ಬರತೊಡಗಿವೆ.


ಇದನ್ನೂ ಓದಿ: ಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...