Homeನ್ಯಾಯ ಪಥಡೇವಿಡ್ ಮ್ಯಾಮೆಟ್ ಮತ್ತು ಅವರ ಉಗ್ರವಾದಿ ಸಿನೆಮಾ ಸಿದ್ಧಾಂತ

ಡೇವಿಡ್ ಮ್ಯಾಮೆಟ್ ಮತ್ತು ಅವರ ಉಗ್ರವಾದಿ ಸಿನೆಮಾ ಸಿದ್ಧಾಂತ

- Advertisement -
- Advertisement -

ಸಿನಿಯಾನ:03

| ರಾಜಶೇಖರ್ ಅಕ್ಕಿ |

`ಮೊದಲ ಶಾಟ್ -ಒಬ್ಬ ಮಹಿಳೆ ಅಳುತ್ತ ಕುಳಿತಿದ್ದಾಳೆ, ಎರಡನೇ ಶಾಟ್- ನೇಣುಗಂಬದ ಪಕ್ಕ ನಿಂತಿರುವ ವ್ಯಕ್ತಿ ತನ್ನ ಗಡಿಯಾರ ನೋಡಿ, ಕ್ಯಾಮರಾ ಕಡೆ ನೋಡುತ್ತಾನೆ

ಪ್ರೇಕ್ಷಕರ ಮನದಲ್ಲಿ ಮೂಡುವುದು- ಓಹ್ ಈ ಮಹಿಳೆಯನ್ನು ಗಲ್ಲಿಗೇರಿಸುವ ಸಮಯ, ಅದಕ್ಕೇ ಅಳುತ್ತಿದ್ದಾಳೆ.

ಈಗ ಇನ್ನೊಂದು ಚಿತ್ರ; ಮೊದಲ ಶಾಟ್ – ಮಹಿಳೆ ಅಳುತ್ತ ಕುಳಿತಿದ್ದ ಅದೇ ಶಾಟ್; ಯಾವುದೇ ಬದಲಾವಣೆ ಇಲ್ಲ. ಎರಡನೇ ಶಾಟ್- ಒಬ್ಬ ನಾಲ್ಕೈದು ವರ್ಷದ ಮಗು ಬ್ಯಾಗ್ ಹಾಕಿಕೊಂಡು ಅಳುತ್ತ ಸ್ಕೂಲ್ ಬಸ್ ಹತ್ತುತ್ತಿದ್ದಾನೆ

ಪ್ರೇಕ್ಷಕರ ಮನದಲ್ಲಿ ಮೂಡುವುದು? ಹೇಳುವ ಅಗತ್ಯವಿಲ್ಲ’

ಡೇವಿಡ್ ಮ್ಯಾಮೆಟ್, ಸಿನೆಮಾ ನಿರ್ದೇಶನದ ಬಗ್ಗೆ ಮಾತನಾಡುತ್ತ.

ಇದನ್ನು ಜಕ್ಸ್ಟಾಪೊಸಿಷನ್ ಎನ್ನುತ್ತಾರೆ. ಇದು ಮೋಂಟಾಜ್ ಥಿಯರಿಯ ಒಂದು ಉದಾಹರಣೆ. ಇದನ್ನು ಮೊದಲ ಸಲ ಪ್ರತಿಪಾದಿಸಿದ್ದು ರಷಿಯಾದ ಚಿತ್ರನಿರ್ದೇಶಕ ಸರ್ಗೇಯ್ ಐಸಿನ್‍ಸ್ಟೇನ್. 1925 ರಲ್ಲಿ ಬಂದ ಬ್ಯಾಟಲ್‍ಶಿಪ್ ಪೊಟಮ್ಕಿನ್ ಎನ್ನುವ ಐತಿಹಾಸಿಕ ಸಿನೆಮಾ ನಿರ್ದೇಶಿಸಿದ್ದು ಇದೇ ಐಸಿನ್‍ಸ್ಟೇನ್.

ಐಸಿನ್‍ಸ್ಟೇನ್‍ನಿಂದ ಪ್ರಭಾವಿತರಾದ ಡೇವಿಡ್ ಮ್ಯಾಮೆಟ್ ಹುಟ್ಟಿದ್ದು 1947ರಲ್ಲಿ. ಶಿಕಾಗೋದಲ್ಲಿ ಹುಟ್ಟಿ ಬೆಳೆದ ಇವರು ಒಬ್ಬ ನಟನಾಗಿ ತನ್ನ ಕಲಾಜೀವನ ಶುರು ಮಾಡಿದರು, ಅದು ಸರಿಹೊಂದಲಿಲ್ಲ ಎಂದು ನಾಟಕಗಳ ನಿರ್ದೇಶನಕ್ಕಿಳಿದರು. ನಂತರ ನಾಟಕ ಬರೆಯೋಕ್ಕೆ ಶುರು ಮಾಡಿದರು. ಸೆಕ್ಷುವಲ್ ಪರ್ವರ್ಸಿಟಿ ಇನ್ ಷಿಕಾಗೋ, ಗ್ಲೆನ್‍ಗೆರಿ ಗ್ಲೆನ್ ರಾಸ್,  ಎ ಲೈಫ್ ಇನ ಥಿಯೇಟರ್ ಎನ್ನುವ ಅನೇಕ ಯಶಸ್ವೀ ನಾಟಕಗಳನ್ನು ಬರೆದರು. ಬರಹ ಮುಂದುವರೆಸುತ್ತ ಸಿನೆಮಾ ಬರೆಯಲು ಶುರು ಮಾಡಿದರು. ಸಿಡ್ನಿ ಲುಮೆಟ್‍ಯ ವರ್ಡಿಕ್ಟ್‍ನ ಚಿತ್ರಕಥೆಯನ್ನು ಬರೆದದ್ದು ಇವರೆ. ಅನೇಕ ಸಿನೆಮಾಗಳಿಗೆ ಬರೆದರೂ ಅದರ ಕ್ರೆಡಿಟ್ ತೆಗೆದುಕೊಳ್ಳಲಿಲ್ಲ. ಹಾಲಿವುಡ್‍ನ ಸ್ಕ್ರಿಪ್ಟ್ ಡಾಕ್ಟರ್ ಆಗಿಯೂ ಪ್ರಸಿದ್ಧರಾದವರು.  1989 ರಲ್ಲಿ ಶಾನ್ ಪೆನ್ ಮತ್ತು ರಾಬರ್ಟ್ ಡಿನೀರೊ ಅಭಿನಯದ ‘ವಿ ಆರ್ ನೋ ಏಂಜೆಲ್ಸ್’ ಎನ್ನುವ ಚಿತ್ರ ನೋಡಿದರೆ ಇವರ ಬರಹದಲ್ಲಿರುವ ನಿಷ್ಠುರತೆ ಎದ್ದು ಕಾಣುತ್ತದೆ.

ಮ್ಯಾಮೆಟ್ ಅವರು ತಮ್ಮ ಸಂಭಾಷಣೆಯ ಶೈಲಿಗಾಗಿಯೇ ವಿಖ್ಯಾತರಾದವರು.

‘ನೀವು ಸಂಭಾಷಣೆ ಚೆನ್ನಾಗಿ ಬರೆಯುತ್ತೀರಿ ಎಂತಿದ್ದರೆ, ಆ ಸಂಭಾಷಣೆಗಳನ್ನು ಸಿನೆಮಾದಲ್ಲಿ ಬಳಸದಿರುವುದೇ ಉತ್ತಮ.’ ಇದು ಸಂಭಾಷಣೆ ಬಗ್ಗೆ ಮ್ಯಾಮೆಟ್ ಹೇಳಿದ್ದು.  ಇಷ್ಟು ನಿಷ್ಠುರವಾಗಿ ಸಂಭಾಷಣೆ ಹೇಗೆ ಬರೆಯುತ್ತೀರಿ ಎಂದು ಕೇಳಿದಾಗ ‘‘ಆಗಿನ್ನೂ ನಮ್ಮ ಮನೆಗಳಲ್ಲಿ ಟಿವಿ ಬಂದಿರದ ಸಮಯ, ಸಂಜೆ ಮನೆಯ ಎಲ್ಲಾ ಸದಸ್ಯರು ಕುಳಿತುಕೊಂಡು ನಾವೆಷ್ಟು ದುಷ್ಟತನದ ಮಾತುಗಳನ್ನು ಆಡಬಹುದೋ ಎನ್ನುವ ಸಾಮಥ್ರ್ಯದ ಆಧಾರದ ಮೇಲೆ ನಮ್ಮನ್ನು ನಾವು ಶೋಚನೀಯ ಮಾಡಿಕೊಳ್ಳುತ್ತ ನಮ್ಮ ಸಮಯ ಕಳೆಯುತಿದ್ದೆವು. ‘ 

ಬರಹಕ್ಕಷ್ಟೇ ನಿಲ್ಲದೇ ಸಿನೆಮಾ ನಿರ್ದೇಶನಕ್ಕೂ ಲಗ್ಗೆ ಇಟ್ಟರು ಮ್ಯಾಮೆಟ್. ಹೌಸ್ ಆಫ್ ಗೇಮ್ಸ್ ಇವರ ನಿರ್ದೇಶನದ ಮೊದಲ ಚಿತ್ರ. ನಂತರ ಹೋಮಿಸೈಡ್, ಸ್ಪಾರ್ಟನ್, ಒಲಿಯಾನಾ, ಸ್ಪ್ಯಾನಿಷ್ ಪ್ರಿಸನರ್ ಇವರು ನಿದೇಶಿಸಿದ ಕೆಲವು ಚಿತ್ರಗಳು. ಇವುಗಳಲ್ಲಿ ಹೆಚ್ಚಿನ ಚಿತ್ರಗಳು ಬಾಕ್ಸಾಫೀಸಿನಲ್ಲಿ ಗೆಲ್ಲಲಿಲ್ಲ.

1991 ರಲ್ಲಿ ಮ್ಯಾಮೆಟ್  ಸಿನೆಮಾ ನಿರ್ದೇಶನದ ಬಗ್ಗೆ ‘ಆನ್ ಡಿರೆಕ್ಟಿಂಗ್ ಫಿಲ್ಮ್’ ಎನ್ನುವ ಪುಸ್ತಕ ಬರೆದರು. ನಮಗೆಲ್ಲಾ ಡೇವಿಡ್ ಮ್ಯಾಮೆಟ್ ಪರಿಚಯವಾಗಿದ್ದು ಈ ಪುಸ್ತಕದಿಂದಲೇ. ಸಿನೆಮಾ ನಿರ್ದೇಶನ ಕಲಿಯುವಾಗ ಓದಲೇಬೇಕಾದ ಪುಸ್ತಕಗಳಾದ ಟಾರ್ಕೋವಸ್ಕಿಯ ‘ಸ್ಕಲ್ಪ್ಟಿಂಗ್ ಇನ್ ಟೈಮ್’, ಸ್ಟೀವನ್ ಕಾಟ್ಜ್‍ನ ‘ಶಾಟ್ ಬೈ ಶಾಟ್’, ಆ್ಯಂಡ್ರಿ ವೈಯದಾ ಅವರ ‘ವೈಯದಾ ಆನ್ ಫಿಲ್ಮ್ಸ್’, ವಾಲ್ಟರ್ ಮರ್ಚ್‍ನ ‘ಇನ್ ದಿ ಬ್ಲಿಂಕ್ ಆಫ್ ಅ್ಯನ್ ಐ’ ಐಸಿನ್‍ಸ್ಟೇನ್ ನ ‘ಫಿಲ್ಮ್ ಸೆನ್ಸ್’ ಇವೆಲ್ಲವುಗಳಲ್ಲಿ ಡೇವಿಡ್ ಮ್ಯಾಮೆಟ್ ಅವರ ಪುಸ್ತಕ ಎಲ್ಲಕ್ಕಿಂತ ಅತಿರೇಕದ ನಿಲುವುಗಳನ್ನು ಹೊಂದಿದ ಪುಸ್ತಕ. ಇವರ ಪುಸ್ತಕದಲ್ಲಿರುವ ಥಿಯರಿ ಮತ್ತು ಇವರು ಪ್ರತಿಪಾದಿಸುವ ಥಿಯರಿಗಳನ್ನು ಅನುಷ್ಠಾನಗೊಳಿಸಿಕೊಳ್ಳಬೇಕೋ ಇಲ್ಲವೋ ಎನ್ನುವದನ್ನು ಚರ್ಚಿಸಬಹುದು ಆದರೆ ಇವರ ಥಿಯರಿಗಳನ್ನು ತಿಳಿದುಕೊಳ್ಳದೇ ಇರುವುದು ಒಬ್ಬ ನಿರ್ದೇಶಕನಿಗೆ ದೊಡ್ಡ ಲಾಸ್.

ಮುಂದೇನಾಗಬೇಕು ಎಂದು ತಿಳಿದುಕೊಳ್ಳಲು ಪ್ರೇಕ್ಷಕನನ್ನು ತುದಿಗಾಲಲ್ಲಿ ನಿಲ್ಲಿಸಬೇಕು, ಪ್ರತಿಯೊಂದು ಶಾಟ್ ಕೂಡ ಅದರ ಮುಂಚಿನ ಶಾಟ್‍ದಿಂದ ಕಥೆಯನ್ನು ಮುಂದುವರೆಸುವಂತಿರಬೇಕು, ಪ್ರೇಕ್ಷಕರಿಗೆ ಎಲ್ಲವನ್ನೂ ಹೇಳುವ ಅವಶ್ಯಕತೆ ಇಲ್ಲ,  ‘ಯಾವುದೇ ಸಿನೆಮಾದ ಮೊದಲ ಹತ್ತು ನಿಮಿಷಗಳನ್ನು ಕತ್ತರಿಸಿಬಿಡಿ, ಚೆನ್ನಾಗಾಗುತ್ತೆ.’ ‘ಸಿನೆಮಾ ಮಾಡುವುದು ಒಂದು ಜೋಕ್ ಇದ್ದಂತೆ, ಪ್ರೇಕ್ಷಕರು ಇನ್ನೇನೋ ನಿರೀಕ್ಸಿಸುತ್ತಿದ್ದಾಗ ಬೇರೇನೋ ಆಗುತ್ತೆ. ಹಾಗಿಲ್ಲದಿದ್ದರೆ ಏನಕ್ಕೆ ನೋಡಬೇಕು ನಿಮ್ಮ ಸಿನೆಮಾ?’

2003ರಲ್ಲಿ ಇರ್ಫಾನ್ ಮತ್ತು ನವಾಝುದ್ದಿನ್ ಸಿದ್ದಿಕಿ ಅಭಿನಯದ ‘ದಿ ಬೈಪಾಸ್’ ಎನ್ನುವ ಕಿರುಚಿತ್ರ ಬಿಡುಗಡೆಯಾಯಿತು. ಆ ಸಿನೆಮಾ ನೋಡಿದರೆ ಅದರ ನಿರ್ದೇಶಕ ಡೇವಿಡ್ ಮ್ಯಾಮೆಟ್‍ನಿಂದ ಎಷ್ಟು ಪ್ರಭಾವಿತರಾಗಿದ್ದಾರೆ ಎಂದು ಸುಲಭವಾಗಿ ತಿಳಿಯುತ್ತದೆ. ಆ ಚಿತ್ರಕ್ಕೆ ನೋಡುಗರಿಂದ, ವಿಮರ್ಶಕರಿಂದ ಮೆಚ್ಚುಗೆಯ ಸುರಿಮಳೆಯಾಯಿತು. ಅನೇಕ ಸಿನಿಹಬ್ಬಗಳಲ್ಲಿ ಪ್ರದರ್ಶಿತವಾಯಿತು. ಆಗತಾನೇ ಮ್ಯಾಮೆಟ್ ಅವರ ಪುಸ್ತಕ ಓದಿ ಪ್ರಭಾವಿತನಾಗಿದ್ದ ನನಗೆ ಆ ಚಿತ್ರ ನೋಡಿ ವಾಕರಿಗೆ ಬಂತು. ನಮಗೆಲ್ಲರಿಗೂ ಗೊತ್ತಿರುವಂತೆ ಸಿನೆಮಾ ಎನ್ನುವುದು ಕಥೆ ಹೇಳುವ ಒಂದು ಮಾಧ್ಯಮ. ದಿ ಬ್ಯಪಾಸ್ ಎನ್ನುವ ಚಿತ್ರದಲ್ಲಿ ಅದನ್ನು ಬಿಟ್ಟು ಆ ಮತಿಗೆಟ್ಟ ನಿರ್ದೇಶಕ ತನ್ನ ಕೌಶಲ್ಯವನ್ನು ಪ್ರದರ್ಶಿಸಲೆಂದೇ ಆ ಚಿತ್ರ ಮಾಡಿದ್ದು.

ಇಂತಹದ್ದೇ ದೌರ್ಬಲ್ಯವನ್ನು ಸ್ವತಃ ಮ್ಯಾಮೆಟ್ ಕೂಡ 2008ರಲ್ಲಿ ಬಂದ ತಮ್ಮ ‘ರೆಡ್‍ಬೆಲ್ಟ್’ ಮಿಕ್ಸಡ್ ಮಾರ್ಷಿಯಲ್ ಆರ್ಟ್‍ನ ಚಿತ್ರದಲ್ಲಿ ಪ್ರದರ್ಶಿಸಿದರು. ಅದು ಒಬ್ಬ ಮಾರ್ಷಿಯಲ್ ಆರ್ಟ್ ತರಬೇತುದಾರನ ಕಥೆ. ಅವನು ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುವುದು, ಅವನ ಹೆಂಡತಿ ಮಾಡಿಕೊಳ್ಳುವ ಸಾಲ, ಇವನ ಸಣ್ಣ ತಪ್ಪಿನಿಂದಾಗಿ ಒಬ್ಬ ಪೋಲೀಸ್ ಅಧಿಕಾರಿಯ ಆತ್ಮಹತ್ಯೆ, ಬಿಕ್ಕಟ್ಟಿನಿಂದ ಹೊರಬರುವ ಯಾವುದೇ ದಾರಿಕಾಣದಿದ್ದಾಗ ಇವನೇನು ಮಾಡುತ್ತಾನೆ ಎನ್ನವುದು ಚಿತ್ರದ ಸಾರಾಂಶ. ಚಿತ್ರ ಒಂದು ಕ್ಷಣವೂ ಬೋರ್ ಹೊಡೆಸುವುದಿಲ್ಲ, ಪ್ರತಯೊಂದು ಶಾಟ್‍ಗೆ ತನ್ನದೇ ಆದ ಉದ್ದೇಶವಿದ್ದು ಕಥೆಯನ್ನು ಯಶಸ್ವಿಯಾಗಿ ಮುಂದೊಯ್ಯುತ್ತದೆ.  ಚಿತ್ರಕಥೆ, ಅಭಿನಯ, ತಾಂತ್ರಿಕತೆ, ನಿರ್ದೇಶನ ಎಲ್ಲವೂ ಸರಿಯಾಗಿಯೇ ಇದ್ದರೂ ಮ್ಯಾಮೆಟ್ ಅವರು ತಮ್ಮ ಬರಹ ಮತ್ತು ನಿರ್ದೇಶನದ ತಮ್ಮದೇ ಸಿದ್ಧಾಂತಗಳಿಗೆ ಜೋತುಬೀಳುವುದರಿಂದ ಚಿತ್ರ ಸೋಲುತ್ತದೆ.

ಆದರೆ ಡೇವಿಡ್ ಮ್ಯಾಮೆಟ್ ಸಿನೆಮಾ ಇತಿಹಾಸದಲ್ಲಿ ಬಹುಮುಖ್ಯ ವ್ಯಕ್ತಿ.  ಸಂಭಾಷಣೆಗಳಲ್ಲಿ, ನಿರ್ದೇಶನದಲ್ಲಿ, ಚಿತ್ರಕಥೆಯಲ್ಲಿ ನಿಷ್ಠುರತೆಯನ್ನು ಕಲಿಸುತ್ತಿರುವ ಮ್ಯಾಮೆಟ್ ಇಂದಿಗೂ ಸಕ್ರಿಯವಾಗಿದ್ದಾರೆ. ವಿಶ್ವಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಒಳ್ಳೇ ಸಿನೆಮಾ ಮಾಡಲು ತಮ್ಮ ವಿಶಿಷ್ಟ್ ‘ಮ್ಯಾಮೆಟ್‍ಸ್ಪೀಕ್’ ನಿಂದ ಹುರಿದುಂಬಿಸುತ್ತಲೇ ಇದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...