Homeನ್ಯಾಯ ಪಥಡೇವಿಡ್ ಮ್ಯಾಮೆಟ್ ಮತ್ತು ಅವರ ಉಗ್ರವಾದಿ ಸಿನೆಮಾ ಸಿದ್ಧಾಂತ

ಡೇವಿಡ್ ಮ್ಯಾಮೆಟ್ ಮತ್ತು ಅವರ ಉಗ್ರವಾದಿ ಸಿನೆಮಾ ಸಿದ್ಧಾಂತ

- Advertisement -
- Advertisement -

ಸಿನಿಯಾನ:03

| ರಾಜಶೇಖರ್ ಅಕ್ಕಿ |

`ಮೊದಲ ಶಾಟ್ -ಒಬ್ಬ ಮಹಿಳೆ ಅಳುತ್ತ ಕುಳಿತಿದ್ದಾಳೆ, ಎರಡನೇ ಶಾಟ್- ನೇಣುಗಂಬದ ಪಕ್ಕ ನಿಂತಿರುವ ವ್ಯಕ್ತಿ ತನ್ನ ಗಡಿಯಾರ ನೋಡಿ, ಕ್ಯಾಮರಾ ಕಡೆ ನೋಡುತ್ತಾನೆ

ಪ್ರೇಕ್ಷಕರ ಮನದಲ್ಲಿ ಮೂಡುವುದು- ಓಹ್ ಈ ಮಹಿಳೆಯನ್ನು ಗಲ್ಲಿಗೇರಿಸುವ ಸಮಯ, ಅದಕ್ಕೇ ಅಳುತ್ತಿದ್ದಾಳೆ.

ಈಗ ಇನ್ನೊಂದು ಚಿತ್ರ; ಮೊದಲ ಶಾಟ್ – ಮಹಿಳೆ ಅಳುತ್ತ ಕುಳಿತಿದ್ದ ಅದೇ ಶಾಟ್; ಯಾವುದೇ ಬದಲಾವಣೆ ಇಲ್ಲ. ಎರಡನೇ ಶಾಟ್- ಒಬ್ಬ ನಾಲ್ಕೈದು ವರ್ಷದ ಮಗು ಬ್ಯಾಗ್ ಹಾಕಿಕೊಂಡು ಅಳುತ್ತ ಸ್ಕೂಲ್ ಬಸ್ ಹತ್ತುತ್ತಿದ್ದಾನೆ

ಪ್ರೇಕ್ಷಕರ ಮನದಲ್ಲಿ ಮೂಡುವುದು? ಹೇಳುವ ಅಗತ್ಯವಿಲ್ಲ’

ಡೇವಿಡ್ ಮ್ಯಾಮೆಟ್, ಸಿನೆಮಾ ನಿರ್ದೇಶನದ ಬಗ್ಗೆ ಮಾತನಾಡುತ್ತ.

ಇದನ್ನು ಜಕ್ಸ್ಟಾಪೊಸಿಷನ್ ಎನ್ನುತ್ತಾರೆ. ಇದು ಮೋಂಟಾಜ್ ಥಿಯರಿಯ ಒಂದು ಉದಾಹರಣೆ. ಇದನ್ನು ಮೊದಲ ಸಲ ಪ್ರತಿಪಾದಿಸಿದ್ದು ರಷಿಯಾದ ಚಿತ್ರನಿರ್ದೇಶಕ ಸರ್ಗೇಯ್ ಐಸಿನ್‍ಸ್ಟೇನ್. 1925 ರಲ್ಲಿ ಬಂದ ಬ್ಯಾಟಲ್‍ಶಿಪ್ ಪೊಟಮ್ಕಿನ್ ಎನ್ನುವ ಐತಿಹಾಸಿಕ ಸಿನೆಮಾ ನಿರ್ದೇಶಿಸಿದ್ದು ಇದೇ ಐಸಿನ್‍ಸ್ಟೇನ್.

ಐಸಿನ್‍ಸ್ಟೇನ್‍ನಿಂದ ಪ್ರಭಾವಿತರಾದ ಡೇವಿಡ್ ಮ್ಯಾಮೆಟ್ ಹುಟ್ಟಿದ್ದು 1947ರಲ್ಲಿ. ಶಿಕಾಗೋದಲ್ಲಿ ಹುಟ್ಟಿ ಬೆಳೆದ ಇವರು ಒಬ್ಬ ನಟನಾಗಿ ತನ್ನ ಕಲಾಜೀವನ ಶುರು ಮಾಡಿದರು, ಅದು ಸರಿಹೊಂದಲಿಲ್ಲ ಎಂದು ನಾಟಕಗಳ ನಿರ್ದೇಶನಕ್ಕಿಳಿದರು. ನಂತರ ನಾಟಕ ಬರೆಯೋಕ್ಕೆ ಶುರು ಮಾಡಿದರು. ಸೆಕ್ಷುವಲ್ ಪರ್ವರ್ಸಿಟಿ ಇನ್ ಷಿಕಾಗೋ, ಗ್ಲೆನ್‍ಗೆರಿ ಗ್ಲೆನ್ ರಾಸ್,  ಎ ಲೈಫ್ ಇನ ಥಿಯೇಟರ್ ಎನ್ನುವ ಅನೇಕ ಯಶಸ್ವೀ ನಾಟಕಗಳನ್ನು ಬರೆದರು. ಬರಹ ಮುಂದುವರೆಸುತ್ತ ಸಿನೆಮಾ ಬರೆಯಲು ಶುರು ಮಾಡಿದರು. ಸಿಡ್ನಿ ಲುಮೆಟ್‍ಯ ವರ್ಡಿಕ್ಟ್‍ನ ಚಿತ್ರಕಥೆಯನ್ನು ಬರೆದದ್ದು ಇವರೆ. ಅನೇಕ ಸಿನೆಮಾಗಳಿಗೆ ಬರೆದರೂ ಅದರ ಕ್ರೆಡಿಟ್ ತೆಗೆದುಕೊಳ್ಳಲಿಲ್ಲ. ಹಾಲಿವುಡ್‍ನ ಸ್ಕ್ರಿಪ್ಟ್ ಡಾಕ್ಟರ್ ಆಗಿಯೂ ಪ್ರಸಿದ್ಧರಾದವರು.  1989 ರಲ್ಲಿ ಶಾನ್ ಪೆನ್ ಮತ್ತು ರಾಬರ್ಟ್ ಡಿನೀರೊ ಅಭಿನಯದ ‘ವಿ ಆರ್ ನೋ ಏಂಜೆಲ್ಸ್’ ಎನ್ನುವ ಚಿತ್ರ ನೋಡಿದರೆ ಇವರ ಬರಹದಲ್ಲಿರುವ ನಿಷ್ಠುರತೆ ಎದ್ದು ಕಾಣುತ್ತದೆ.

ಮ್ಯಾಮೆಟ್ ಅವರು ತಮ್ಮ ಸಂಭಾಷಣೆಯ ಶೈಲಿಗಾಗಿಯೇ ವಿಖ್ಯಾತರಾದವರು.

‘ನೀವು ಸಂಭಾಷಣೆ ಚೆನ್ನಾಗಿ ಬರೆಯುತ್ತೀರಿ ಎಂತಿದ್ದರೆ, ಆ ಸಂಭಾಷಣೆಗಳನ್ನು ಸಿನೆಮಾದಲ್ಲಿ ಬಳಸದಿರುವುದೇ ಉತ್ತಮ.’ ಇದು ಸಂಭಾಷಣೆ ಬಗ್ಗೆ ಮ್ಯಾಮೆಟ್ ಹೇಳಿದ್ದು.  ಇಷ್ಟು ನಿಷ್ಠುರವಾಗಿ ಸಂಭಾಷಣೆ ಹೇಗೆ ಬರೆಯುತ್ತೀರಿ ಎಂದು ಕೇಳಿದಾಗ ‘‘ಆಗಿನ್ನೂ ನಮ್ಮ ಮನೆಗಳಲ್ಲಿ ಟಿವಿ ಬಂದಿರದ ಸಮಯ, ಸಂಜೆ ಮನೆಯ ಎಲ್ಲಾ ಸದಸ್ಯರು ಕುಳಿತುಕೊಂಡು ನಾವೆಷ್ಟು ದುಷ್ಟತನದ ಮಾತುಗಳನ್ನು ಆಡಬಹುದೋ ಎನ್ನುವ ಸಾಮಥ್ರ್ಯದ ಆಧಾರದ ಮೇಲೆ ನಮ್ಮನ್ನು ನಾವು ಶೋಚನೀಯ ಮಾಡಿಕೊಳ್ಳುತ್ತ ನಮ್ಮ ಸಮಯ ಕಳೆಯುತಿದ್ದೆವು. ‘ 

ಬರಹಕ್ಕಷ್ಟೇ ನಿಲ್ಲದೇ ಸಿನೆಮಾ ನಿರ್ದೇಶನಕ್ಕೂ ಲಗ್ಗೆ ಇಟ್ಟರು ಮ್ಯಾಮೆಟ್. ಹೌಸ್ ಆಫ್ ಗೇಮ್ಸ್ ಇವರ ನಿರ್ದೇಶನದ ಮೊದಲ ಚಿತ್ರ. ನಂತರ ಹೋಮಿಸೈಡ್, ಸ್ಪಾರ್ಟನ್, ಒಲಿಯಾನಾ, ಸ್ಪ್ಯಾನಿಷ್ ಪ್ರಿಸನರ್ ಇವರು ನಿದೇಶಿಸಿದ ಕೆಲವು ಚಿತ್ರಗಳು. ಇವುಗಳಲ್ಲಿ ಹೆಚ್ಚಿನ ಚಿತ್ರಗಳು ಬಾಕ್ಸಾಫೀಸಿನಲ್ಲಿ ಗೆಲ್ಲಲಿಲ್ಲ.

1991 ರಲ್ಲಿ ಮ್ಯಾಮೆಟ್  ಸಿನೆಮಾ ನಿರ್ದೇಶನದ ಬಗ್ಗೆ ‘ಆನ್ ಡಿರೆಕ್ಟಿಂಗ್ ಫಿಲ್ಮ್’ ಎನ್ನುವ ಪುಸ್ತಕ ಬರೆದರು. ನಮಗೆಲ್ಲಾ ಡೇವಿಡ್ ಮ್ಯಾಮೆಟ್ ಪರಿಚಯವಾಗಿದ್ದು ಈ ಪುಸ್ತಕದಿಂದಲೇ. ಸಿನೆಮಾ ನಿರ್ದೇಶನ ಕಲಿಯುವಾಗ ಓದಲೇಬೇಕಾದ ಪುಸ್ತಕಗಳಾದ ಟಾರ್ಕೋವಸ್ಕಿಯ ‘ಸ್ಕಲ್ಪ್ಟಿಂಗ್ ಇನ್ ಟೈಮ್’, ಸ್ಟೀವನ್ ಕಾಟ್ಜ್‍ನ ‘ಶಾಟ್ ಬೈ ಶಾಟ್’, ಆ್ಯಂಡ್ರಿ ವೈಯದಾ ಅವರ ‘ವೈಯದಾ ಆನ್ ಫಿಲ್ಮ್ಸ್’, ವಾಲ್ಟರ್ ಮರ್ಚ್‍ನ ‘ಇನ್ ದಿ ಬ್ಲಿಂಕ್ ಆಫ್ ಅ್ಯನ್ ಐ’ ಐಸಿನ್‍ಸ್ಟೇನ್ ನ ‘ಫಿಲ್ಮ್ ಸೆನ್ಸ್’ ಇವೆಲ್ಲವುಗಳಲ್ಲಿ ಡೇವಿಡ್ ಮ್ಯಾಮೆಟ್ ಅವರ ಪುಸ್ತಕ ಎಲ್ಲಕ್ಕಿಂತ ಅತಿರೇಕದ ನಿಲುವುಗಳನ್ನು ಹೊಂದಿದ ಪುಸ್ತಕ. ಇವರ ಪುಸ್ತಕದಲ್ಲಿರುವ ಥಿಯರಿ ಮತ್ತು ಇವರು ಪ್ರತಿಪಾದಿಸುವ ಥಿಯರಿಗಳನ್ನು ಅನುಷ್ಠಾನಗೊಳಿಸಿಕೊಳ್ಳಬೇಕೋ ಇಲ್ಲವೋ ಎನ್ನುವದನ್ನು ಚರ್ಚಿಸಬಹುದು ಆದರೆ ಇವರ ಥಿಯರಿಗಳನ್ನು ತಿಳಿದುಕೊಳ್ಳದೇ ಇರುವುದು ಒಬ್ಬ ನಿರ್ದೇಶಕನಿಗೆ ದೊಡ್ಡ ಲಾಸ್.

ಮುಂದೇನಾಗಬೇಕು ಎಂದು ತಿಳಿದುಕೊಳ್ಳಲು ಪ್ರೇಕ್ಷಕನನ್ನು ತುದಿಗಾಲಲ್ಲಿ ನಿಲ್ಲಿಸಬೇಕು, ಪ್ರತಿಯೊಂದು ಶಾಟ್ ಕೂಡ ಅದರ ಮುಂಚಿನ ಶಾಟ್‍ದಿಂದ ಕಥೆಯನ್ನು ಮುಂದುವರೆಸುವಂತಿರಬೇಕು, ಪ್ರೇಕ್ಷಕರಿಗೆ ಎಲ್ಲವನ್ನೂ ಹೇಳುವ ಅವಶ್ಯಕತೆ ಇಲ್ಲ,  ‘ಯಾವುದೇ ಸಿನೆಮಾದ ಮೊದಲ ಹತ್ತು ನಿಮಿಷಗಳನ್ನು ಕತ್ತರಿಸಿಬಿಡಿ, ಚೆನ್ನಾಗಾಗುತ್ತೆ.’ ‘ಸಿನೆಮಾ ಮಾಡುವುದು ಒಂದು ಜೋಕ್ ಇದ್ದಂತೆ, ಪ್ರೇಕ್ಷಕರು ಇನ್ನೇನೋ ನಿರೀಕ್ಸಿಸುತ್ತಿದ್ದಾಗ ಬೇರೇನೋ ಆಗುತ್ತೆ. ಹಾಗಿಲ್ಲದಿದ್ದರೆ ಏನಕ್ಕೆ ನೋಡಬೇಕು ನಿಮ್ಮ ಸಿನೆಮಾ?’

2003ರಲ್ಲಿ ಇರ್ಫಾನ್ ಮತ್ತು ನವಾಝುದ್ದಿನ್ ಸಿದ್ದಿಕಿ ಅಭಿನಯದ ‘ದಿ ಬೈಪಾಸ್’ ಎನ್ನುವ ಕಿರುಚಿತ್ರ ಬಿಡುಗಡೆಯಾಯಿತು. ಆ ಸಿನೆಮಾ ನೋಡಿದರೆ ಅದರ ನಿರ್ದೇಶಕ ಡೇವಿಡ್ ಮ್ಯಾಮೆಟ್‍ನಿಂದ ಎಷ್ಟು ಪ್ರಭಾವಿತರಾಗಿದ್ದಾರೆ ಎಂದು ಸುಲಭವಾಗಿ ತಿಳಿಯುತ್ತದೆ. ಆ ಚಿತ್ರಕ್ಕೆ ನೋಡುಗರಿಂದ, ವಿಮರ್ಶಕರಿಂದ ಮೆಚ್ಚುಗೆಯ ಸುರಿಮಳೆಯಾಯಿತು. ಅನೇಕ ಸಿನಿಹಬ್ಬಗಳಲ್ಲಿ ಪ್ರದರ್ಶಿತವಾಯಿತು. ಆಗತಾನೇ ಮ್ಯಾಮೆಟ್ ಅವರ ಪುಸ್ತಕ ಓದಿ ಪ್ರಭಾವಿತನಾಗಿದ್ದ ನನಗೆ ಆ ಚಿತ್ರ ನೋಡಿ ವಾಕರಿಗೆ ಬಂತು. ನಮಗೆಲ್ಲರಿಗೂ ಗೊತ್ತಿರುವಂತೆ ಸಿನೆಮಾ ಎನ್ನುವುದು ಕಥೆ ಹೇಳುವ ಒಂದು ಮಾಧ್ಯಮ. ದಿ ಬ್ಯಪಾಸ್ ಎನ್ನುವ ಚಿತ್ರದಲ್ಲಿ ಅದನ್ನು ಬಿಟ್ಟು ಆ ಮತಿಗೆಟ್ಟ ನಿರ್ದೇಶಕ ತನ್ನ ಕೌಶಲ್ಯವನ್ನು ಪ್ರದರ್ಶಿಸಲೆಂದೇ ಆ ಚಿತ್ರ ಮಾಡಿದ್ದು.

ಇಂತಹದ್ದೇ ದೌರ್ಬಲ್ಯವನ್ನು ಸ್ವತಃ ಮ್ಯಾಮೆಟ್ ಕೂಡ 2008ರಲ್ಲಿ ಬಂದ ತಮ್ಮ ‘ರೆಡ್‍ಬೆಲ್ಟ್’ ಮಿಕ್ಸಡ್ ಮಾರ್ಷಿಯಲ್ ಆರ್ಟ್‍ನ ಚಿತ್ರದಲ್ಲಿ ಪ್ರದರ್ಶಿಸಿದರು. ಅದು ಒಬ್ಬ ಮಾರ್ಷಿಯಲ್ ಆರ್ಟ್ ತರಬೇತುದಾರನ ಕಥೆ. ಅವನು ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುವುದು, ಅವನ ಹೆಂಡತಿ ಮಾಡಿಕೊಳ್ಳುವ ಸಾಲ, ಇವನ ಸಣ್ಣ ತಪ್ಪಿನಿಂದಾಗಿ ಒಬ್ಬ ಪೋಲೀಸ್ ಅಧಿಕಾರಿಯ ಆತ್ಮಹತ್ಯೆ, ಬಿಕ್ಕಟ್ಟಿನಿಂದ ಹೊರಬರುವ ಯಾವುದೇ ದಾರಿಕಾಣದಿದ್ದಾಗ ಇವನೇನು ಮಾಡುತ್ತಾನೆ ಎನ್ನವುದು ಚಿತ್ರದ ಸಾರಾಂಶ. ಚಿತ್ರ ಒಂದು ಕ್ಷಣವೂ ಬೋರ್ ಹೊಡೆಸುವುದಿಲ್ಲ, ಪ್ರತಯೊಂದು ಶಾಟ್‍ಗೆ ತನ್ನದೇ ಆದ ಉದ್ದೇಶವಿದ್ದು ಕಥೆಯನ್ನು ಯಶಸ್ವಿಯಾಗಿ ಮುಂದೊಯ್ಯುತ್ತದೆ.  ಚಿತ್ರಕಥೆ, ಅಭಿನಯ, ತಾಂತ್ರಿಕತೆ, ನಿರ್ದೇಶನ ಎಲ್ಲವೂ ಸರಿಯಾಗಿಯೇ ಇದ್ದರೂ ಮ್ಯಾಮೆಟ್ ಅವರು ತಮ್ಮ ಬರಹ ಮತ್ತು ನಿರ್ದೇಶನದ ತಮ್ಮದೇ ಸಿದ್ಧಾಂತಗಳಿಗೆ ಜೋತುಬೀಳುವುದರಿಂದ ಚಿತ್ರ ಸೋಲುತ್ತದೆ.

ಆದರೆ ಡೇವಿಡ್ ಮ್ಯಾಮೆಟ್ ಸಿನೆಮಾ ಇತಿಹಾಸದಲ್ಲಿ ಬಹುಮುಖ್ಯ ವ್ಯಕ್ತಿ.  ಸಂಭಾಷಣೆಗಳಲ್ಲಿ, ನಿರ್ದೇಶನದಲ್ಲಿ, ಚಿತ್ರಕಥೆಯಲ್ಲಿ ನಿಷ್ಠುರತೆಯನ್ನು ಕಲಿಸುತ್ತಿರುವ ಮ್ಯಾಮೆಟ್ ಇಂದಿಗೂ ಸಕ್ರಿಯವಾಗಿದ್ದಾರೆ. ವಿಶ್ವಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಒಳ್ಳೇ ಸಿನೆಮಾ ಮಾಡಲು ತಮ್ಮ ವಿಶಿಷ್ಟ್ ‘ಮ್ಯಾಮೆಟ್‍ಸ್ಪೀಕ್’ ನಿಂದ ಹುರಿದುಂಬಿಸುತ್ತಲೇ ಇದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...