Homeಅಂತರಾಷ್ಟ್ರೀಯಶಾಪವೇ ವರವಾದಾಗ: ಇರಾನಿನ ಸಿನೆಮಾ, ಒಂದು ಪರಿಚಯ

ಶಾಪವೇ ವರವಾದಾಗ: ಇರಾನಿನ ಸಿನೆಮಾ, ಒಂದು ಪರಿಚಯ

- Advertisement -
- Advertisement -

ನಾನು ಪದೇಪದೇ ಹೇಳುವುದು, ನಮ್ಮ ಕಲೆಗೆ ನಮ್ಮ ಸಮಾಜ, ನಮ್ಮ ಜೀವನ ಪ್ರೇರಣೆಯಾಗಬೇಕು ಹಾಗೂ ನಮ್ಮ ಜೀವನಕ್ಕೆ ಕಲೆಯು ಪ್ರೇರಣೆಯಾಗಬೇಕು.

ಭಾರತೀಯ ಚಿತ್ರರಂಗದ ಮುಂಚೂಣಿಯಲ್ಲಿರುವುದು ಹಿಂದಿ ಚಿತ್ರರಂಗ, ಅದನ್ನು ಬಾಲಿವುಡ್ ಎಂದು ಕರೆಯಲಾಗುತ್ತದೆ. ತಮಿಳು ಚಿತ್ರರಂಗಕ್ಕೆ ಕಾಲಿವುಡ್, ತೆಲುಗಿಗೆ ಟಾಲಿವುಡ್, ಮಲೆಯಾಳಮ್‍ಗೆ ಮಾಲಿವುಡ್ ಹಾಗೂ ಕನ್ನಡ ಚಿತ್ರರಂಗಕ್ಕೆ ಸ್ಯಾಂಡಲ್‍ವುಡ್ ಎಂದೂ ಕರೆಯಲಾಗುತ್ತದೆ. ಈ ರೀತಿಯ ನಾಮಕರಣಕ್ಕೆ ಅನೇಕರ ಆಕ್ಷೇಪಣೆಯಿದೆ, ಆ ಆಕ್ಷೇಪಣೆಗೆ ಸೂಕ್ತ ಕಾರಣಗಳೂ ಇವೆ. ಆದರೆ ಹೀಗೇಕೆ ಕರೆಯಲಾಗುತ್ತದೆ? ಈ ‘ವುಡ್’ ಎನ್ನುವುದು ನಮ್ಮ ಚಿತ್ರರಂಗಕ್ಕೆ ಯಾವ ಕಾರಣಕ್ಕೆ ಥಳುಕುಹಾಕಿಕೊಂಡಿತು? ಅದಕ್ಕೂ ಕಾರಣಗಳಿವೆಯಲ್ಲವೇ?

ಭಾರತದ ಎಲ್ಲಾ ಚಿತ್ರರಂಗಗಳಿಗೆ ತಮ್ಮದೇ ಆದ ವಿಶಿಷ್ಟತೆಗಳಿದ್ದರೂ, ಅವರಂತೆ (ಹಿಂದಿ ಚಿತ್ರರಂಗಕ್ಕೆ ಹಾಲಿವುಡ್‍ನ ಸಿನೆಮಾದಂತಹ ಚಿತ್ರಗಳನ್ನು ಮಾಡಬೇಕು, ಕನ್ನಡದ ಸಿನೆಮಾಗಳು ಹಿಂದಿ, ತೆಲುಗು ಸಿನೆಮಾಗಳಂತೆ ಆಗಿರಲು ಪ್ರಯತ್ನಿಸುತ್ತವೆ) ಆಗಿರಬೇಕು ಎನ್ನುವ ಆಕಾಂಕ್ಷೆಯಂತೂ ಖಂಡಿತ ಕಾಣಿಸಿಕೊಳ್ಳುತ್ತದೆ, ಆ ರೀತಿಯ ಒಂದು aspirational quality ಚಿತ್ರಗಳಲ್ಲಿ, ಕಲಾವಿದರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನೇ ಕೆಲವರು ಅನುಕರಣೆಯೆಂದೂ ಕರೆಯುತ್ತಾರೆ. ಇದು ಸರಿಯೋ ತಪ್ಪೋ ಎನ್ನುವುದು ಬೇರೆ ವಿಷಯ. ಆದರೆ ಈ ಅಂಶದಿಂದಲೇ ಅನೇಕರಿಗೆ ನಮ್ಮ ಚಿತ್ರಗಳು ಅಪಥ್ಯವೂ ಆಗುತ್ತವೆ. ಆದರೆ ಇದು ಸಹಜವೂ ಅಲ್ಲವೇ? ಅಷ್ಟೊಂದು ಅಭಿವೃದ್ಧಿ ಹೊಂದಿರುವ ಯಾವುದೇ ಒಂದು ಚಿತ್ರರಂಗದ ಚಿತ್ರಗಳನ್ನು ನಾವು ನೋಡಿದಾಗ ಅದರಂತೆ ಮಾಡಲು ಇಚ್ಛಿಸುವುದು ಸಹಜವೆಂದು ಹೇಳಿದರೂ ಕೆಲವು ಬಾರಿ ಇದು ಒಂದು ದೊಡ್ಡ ಸಮಸ್ಯೆಗೆ ಎಡೆಮಾಡಬಹುದು; ಅದುವೆ ಅನುಕರಣೆ ಹಾಗೂ ನಮ್ಮೊಳಗೆ, ನಮ್ಮ ಸಮಾಜದೊಳಗೆ ಇಣುಕುವ ಪ್ರವೃತ್ತಿಯನ್ನು, ನಮ್ಮ ಆಳದ ಪ್ರತಿಭೆಯನ್ನು ಹೊರಹೊಮ್ಮಿಸುವುದಕ್ಕೆ ಅಡ್ಡಿಯಾಗಬಲ್ಲದು.

ಆದರೆ ಒಂದುವೇಳೆ, ಎಲ್ಲರ ದೊಡ್ಡಪ್ಪನಾಗಿರುವ ಹಾಲಿವುಡ್ ಚಿತ್ರಗಳನ್ನು ನೋಡದೇ ಇದ್ದರೆ? ಏನಾಗಬಹುದು. ಇರಾನ್‍ನಲ್ಲಿ ಆಗಿದ್ದು ಅದೆ. (ಇದು ನನ್ನ ಪ್ರಾಕಲ್ಪನೆಯಷ್ಟೆ, ಇದಕ್ಕೆ ಇನ್ನೂ ಹಲವಾರು ಆಯಾಮಗಳಿವೆ ಎನ್ನುವುದು ನನಗೆ ಅರಿವಿದೆ.) ಅಮೆರಿಕದೊಂದಿಗೆ ಇದ್ದ ಹಗೆತನ, 70ರ ದಶಕಕ್ಕಿಂತ ಮುನ್ನ ಇದ್ದ ರಾಜಾಡಳಿತ, ಇರಾನಿನ ಕ್ರಾಂತಿ, ತದನಂತರ ಅಸ್ತಿತ್ವದಲ್ಲಿ ಬಂದ ಇಸ್ಲಾಮಿಕ್ ರಾಷ್ಟ್ರ ಇವೆಲ್ಲವುಗಳು ಒಂದು ರೀತಿಯಲ್ಲಿ ಹಾಲಿವುಡ್‍ನ ಸಿನೆಮಾಗಳು ಇರಾನಿನ ಜನತೆಗೆ ಲಭ್ಯವಾಗದಂತೆ ನೋಡಿಕೊಂಡವು. ಹಾಲಿವುಡ್ ಸಿನೆಮಾಗಳನ್ನು ನೋಡದೇ ಇರುವುದರಿಂದ ಒಂದು ಸಿನೆಮಾ ಹೀಗಿರಬೇಕು ಎಂದು ಹಾಲಿವುಡ್ ವಿಶ್ವಕ್ಕೇ ತೋರಿಸಿದ್ದು ಇರಾನಿನ ಸಿನೆಮಾಸಕ್ತರಿಗೆ ಕಾಣಲಿಲ್ಲ.

ಈ ಕಾರಣದಿಂದ ಇರಾನಿನ ನಿರ್ದೇಶಕರ ಹುಡುಕಾಟ ಆಂತರಿಕವಾಯಿತು. ಇದರೊಂದಿಗೆ ದೇಶದಲ್ಲಿ ಹೇರಿಕೆಯಾಗಿದ್ದ ಕಟ್ಟುನಿಟ್ಟಿನ ಸೆನ್ಸಾರ್ ಕೂಡ ಇವರ ಹುಡುಕಾಟದ ದಿಕ್ಕನ್ನು ಬದಲಿಸಿತು; ಈ ನಿರ್ದೇಶಕರಿಗೆ ಸೆನ್ಸಾರ್ ರಾಜಕೀಯ ಕಥೆಯನ್ನು ಹೇಳಲು ಅಡ್ಡಿಯಾದರೂ,(ಅನೇಕರು ಜೈಲುವಾಸ ಅನುಭವಿಸಿದ್ದಾರೆ) ಹಿಂಸೆ, ಲೈಂಗಿಕತೆ ಮುಂತಾದವುಗಳನ್ನು ತೋರಿಸಬಾರದು ಎನ್ನುವುದು ಸಮಸ್ಯೆಯಾಗಲಿಲ್ಲ.
ಕಥೆಗಳನ್ನು ಹೇಳುವ ರೀತಿ ಮತ್ತು ಯಾವ ಕಥೆಗಳನ್ನು ಹೇಳಬೇಕು ಎನ್ನುವುದು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಈ ಎರಡು ಅಂಶಗಳು ಇರಾನಿನ ಚಿತ್ರಗಳು ವಿಶ್ವಕ್ಕೆ ಸಿನೆಮಾದ ಒಂದು ಹೊಸ ವ್ಯಾಕರಣವನ್ನು ಪರಿಚಯಿಸುವಂತೆ ಮಾಡಿದವು.

ಇಗ ಇರಾನಿನ ಸಿನೆಮಾದ ಇತಿಹಾಸ ಮತ್ತು ಅದರ ಬೆಳವಣಿಗೆಗೆ ಹೋಗದೆ ಅಲ್ಲಿಯ ಕೆಲವು ಚಿತ್ರಗಳ ಉದಾಹರಣೆ ತೆಗೆದುಕೊಳ್ಳುವ.
‘ಟೇಸ್ಟ್ ಆಫ್ ಚೆರಿ’ ಎನ್ನುವುದು ಇರಾನಿನ ಅತ್ಯಂತ ಯಶಸ್ವಿ ಮತ್ತು ಪ್ರಮುಖ ನಿರ್ದೇಶಕ ಅಬ್ಬಾಸ್ ಕಿಯರಸ್ತಾಮಿ ನಿರ್ದೇಶಿಸಿದ ಚಿತ್ರ. ಈ ಚಿತ್ರದಲ್ಲಿ ಒಬ್ಬ ಇರಾನಿ ವ್ಯಕ್ತಿ ಒಂದು ಜೀಪಿನಲ್ಲಿ ಸುತ್ತಾಡುತ್ತಿದ್ದಾನೆ. ಅವನು ನಿದ್ರೆಗುಳಿಗೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಯೋಚನೆಯಲ್ಲಿದ್ದಾನೆ. ಒಂದು ಗುಂಡಿಯನ್ನು ತೋಡಿ, ಅದರಲ್ಲಿಳಿದು ನಿದ್ರೆಮಾತ್ರೆಗಳನ್ನು ಸೇವಿಸಿ ಸತ್ತಮೇಲೆ ತನ್ನನ್ನು ಯಾರಾದರೂ ಹೂಳಬೇಕು ಅಥವಾ ಮಣ್ಣುಮಾಡಬೇಕು ಎನ್ನುವುದು ಅವನ ಬಯಕೆ. ಆ ಬಯಕೆಯನ್ನು ಯಾರಾದರೂ ಪೂರೈಸಬಲ್ಲರೋ ಎನ್ನುವ ಹುಡುಕಾಟದಲ್ಲಿದ್ದಾನೆ ಅವನು. ಈ ಹುಡುಕಾಟದಲ್ಲಿ ಕೆಲವರನ್ನು ಭೇಟಿಯಾಗುತ್ತಾನೆ, ಅವರೊಂದಿಗೆ ಸಂಭಾಷಿಸುತ್ತಾನೆ; ಇಷ್ಟೇ ಆ ಚಿತ್ರ.

ಚಿತ್ರದಲ್ಲಿ ಯಾವುದೇ ಹಿನ್ನೆಲೆ ಸಂಗೀತವಿಲ್ಲ, ಉದ್ದುದ್ದ ಸಂಭಾಷಣೆಗಳಿವೆ, ಜೀಪು ಚಲಿಸುವ, ಎದುರಿನ ರಸ್ತೆಯ, ರಸ್ತೆಬದಿಯ ಉದ್ದುದ್ದ ಶಾಟ್‍ಗಳಿವೆ. ಆದರೂ ಒಂದು ಸಲವೂ ಬೋರ್ ಹೊಡೆಸುವುದಿಲ್ಲ, ಆ ಉದ್ದುದ್ದದ ಶಾಟ್‍ಗಳು, ಸಂಭಾಷಣೆಗಳು, ಮುಖಗಳು. ಇವೆಲ್ಲವೂ ಜೀವನದ ಅರ್ಥದ ಹುಡುಕಾಟದಲ್ಲಿರುವಂತೆ ಭಾಸವಾಗುತ್ತದೆ.

‘ದಿ ಆ್ಯಪಲ್'(1998) ಎನ್ನುವುದು 17 ವರ್ಷದ ಬಾಲಕಿ ಸಮಿರ ಮಖ್ಮಲ್‍ಬಫ್ ನಿರ್ದೇಶಿಸಿದ ಚಿತ್ರ. ಅತ್ಯಂತ ಧಾರ್ಮಿಕನಾದ ಒಬ್ಬ ವ್ಯಕ್ತಿ ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಮನೆಯಲ್ಲಿಯೇ ಕೂಡಿಹಾಕಿದ್ದಾನೆ. ಹನ್ನೆರಡು ವರ್ಷಗಳ ತನಕ ಈ ಪುಟ್ಟಬಾಲಕಿಯರು ಹೊರಜಗತ್ತನ್ನೇ ನೋಡಿಲ್ಲ. ಆಗ ಪಕ್ಕದವರೊಬ್ಬರು ಕೆಲವು ಸಾಮಾಜಿಕ ಕಾರ್ಯಕರ್ತೆಯರಿಗೆ ಇದರ ಬಗ್ಗೆ ತಿಳಿಸಿದಾಗ, ಅವರು ಬಂದು ಅವರನ್ನು ಸೆರೆವಾಸದಿಂದ ಬಿಡುಗಡೆ ಮಾಡುತ್ತಾರೆ. ಈ ಘಟನೆ ಮತ್ತು ಆ ಬಾಲಕಿಯರು ಹೊರಜಗತ್ತಿಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದೇ ಈ ಚಿತ್ರ. ಆ ಬಾಲಕಿಯರ ತಂದೆತಾಯಿ ವಿಲನ್‍ಗಳಾಗಿರಬೇಕಿತ್ತು ಎನ್ನುವುದು ನಮ್ಮ ಅಪೇಕ್ಷೆಯಾಗಿತ್ತು; ಆದರೆ ಹಾಗಾಗುವುದಿಲ್ಲ, ಅವರನ್ನು ವಿಲನ್‍ಗಳಂತೆ ಬಿಂಬಿಸದೇ ಸಾಮಾನ್ಯ ವ್ಯಕ್ತಿಗಳಂತೆ ನೋಡುವಂತೆ ಮಾಡುವುದೂ ಈ ಚಿತ್ರದ ಯಶಸ್ಸು.

ಈ ಚಿತ್ರದ ಮತ್ತು ಇತರ ಇರಾನಿನ ಚಿತ್ರಗಳ ವೈಶಿಷ್ಟವೇನೆಂದರೆ, ಸಾಕ್ಷ್ಯಚಿತ್ರದ ಮತ್ತು ಸಿನೆಮಾದ ನಡುವೆ ಇರುವ ಗೆರೆಯನ್ನು ಇಲ್ಲವಾಗಿಸುವುದು. ಇದು ಸಾಕ್ಷ್ಯಚಿತ್ರವೂ ಹೌದು ಹಾಗೂ ಚಲನಚಿತ್ರವೂ ಹೌದು. ಹಾಗೂ ಇಂತಹ ಚಿತ್ರಗಳಲ್ಲಿ ಇವೆರಡರ ಘರ್ಷಣೆಯಾಗುವುದಿಲ್ಲ, ಇವೆರಡರ ನಡುವೆ ಇರುವುದು ಹುಸಿ ವೈರುಧ್ಯ ಎನ್ನುವುದನ್ನು ಇರಾನಿನ ಅನೇಕ ಚಲನಚಿತ್ರಗಳು ತೋರಿಸಿಕೊಡುತ್ತವೆ.

ನನಗೆ ಇಷ್ಟವಾದ ಇನ್ನೊಬ್ಬ ನಿರ್ದೇಶಕಿಯ ಚಿತ್ರ ‘ದ ಬ್ಲೂ ವೇಲಡ್’ (ರುಸಾರಿ ಅಬಿ). ರಖ್‍ಶಾನ್ ಬನಿ-ಎತೆಮಾದ್ ನಿರ್ದೇಶಿಸಿದ ಈ ಚಿತ್ರದಲ್ಲಿ ಒಬ್ಬ ಟೊಮಾಟೊ ಸಾಸ್ ಕಾರ್ಖಾನೆಯ ಮಾಲೀಕ ಮತ್ತು ಕಾರ್ಖಾನೆಯಲ್ಲಿ ಕೆಲಸ ಮಾಡುವ ಒಬ್ಬ ಮಹಿಳೆಯ ಪ್ರೇಮದ ಕಥೆಯನ್ನು ಹೇಳಲಾಗಿದೆ. ಈ ಚಿತ್ರವನ್ನು ನೋಡುತ್ತಿದ್ದಾಗ, ಒಂದು ಸಿನೆಮಾ ನೋಡಿದಂತೆ ಭಾಸವಾಗದೆ, ನಮ್ಮ ಪಕ್ಕದೂರಿನಲ್ಲಿ ಆದ ಘಟನೆಗಳನ್ನು ನೋಡಿದಂತೆ ಭಾಸವಾಗುತ್ತದೆ. ವಯಸ್ಸಾದ ಕಾರ್ಖಾನೆಯ ಮಾಲೀಕ, ಅವನ ಮಕ್ಕಳು, ಅಳಿಯಂದಿರು ಇವರೆಲ್ಲರೂ ನಮ್ಮೂರಿನವರಾಗೇ ಕಂಡು, ಮಕ್ಕಳ ಮತ್ತು ಅಳಿಯಂದಿರಿಗೆ ಈ ಪ್ರೇಮಪ್ರಕರಣದೊಂದಿಗೆ ಇರುವ ಸಮಸ್ಯೆಯೂ ಬೇರೆ ಲೋಕದ್ದು ಎನಿಸುವುದಿಲ್ಲ. ಇದರರ್ಥ ಚಿತ್ರದ ನಿರ್ದೇಶಕಿಯು ವಿಶ್ವದ ಎಲ್ಲಾ ಜನರಿಗೂ ತಟ್ಟಲಿ ಎಂದು ಕಥೆಯನ್ನಾಗಲಿ ಅಥವಾ ಕಥೆಯನ್ನು ಹೇಳುವ ಶೈಲಿಯನ್ನಾಗಲಿ ಆಯ್ಕೆ ಮಾಡಿಕೊಂಡಿಲ್ಲ. ತನ್ನ ಕಥೆ(ತಾನಿರುವ ಸಮಾಜ) ಮತ್ತು ಶೈಲಿಗೆ ಸಂಪೂರ್ಣ ಪ್ರಾಮಾಣಿಕತೆ ಬದ್ಧತೆಯನ್ನು ಪ್ರದರ್ಶಿಸಿದಿಂದಲೇ ವಿಶ್ವದ ಇನ್ನೊಂದು ಮೂಲೆಯಲ್ಲಿ ಕುಳಿತವರಿಗೆ ತಟ್ಟಿದ್ದು.

ಮೊಹ್ಸೆನ್ ಮಖ್ಮಲ್‍ಬಫ್ ಅವರ ‘ಸೈಕ್ಲಿಸ್ಟ್’ ಎನ್ನುವ ಚಿತ್ರದಲ್ಲಿ ಇರಾನಿನಲ್ಲಿ ವಾಸಿಸುತ್ತಿರುವ ಒಬ್ಬ ಅಫ್ಘಾನಿ ನಿರಾಶ್ರಿತ ತನ್ನ ಹೆಂಡತಿಯ ಚಿಕಿತ್ಸೆಗೆ ಹಣ ಒದಗಿಸಲೆಂದು ಒಂದು ವಾರ ನಿಲ್ಲಿಸದೇ ಸೈಕಲ್ ತುಳಿಯುವ ಸಾಹಸಕ್ಕೆ ಕೈಹಾಕಿದ್ದಾನೆ. ಇಂತಹವುಗಳನ್ನು ಎಷ್ಟು ನೋಡಿಲ್ಲ ನಮ್ಮ ದೇಶದಲ್ಲಿ, ಆದರೆ ಇವರ ಕಥೆಗಳು ಚಿತ್ರವಾಗಿದ್ದು ತುಂಬಾ ಕಡಿಮೆ. ಒಂದು ವೇಳೆ ಚಿತ್ರವಾದರೂ, ಆ ಕಥೆಯನ್ನು ಸೈಕಲ್ ತುಳಿಯುವ ವ್ಯಕ್ತಿಗೆ ಮತ್ತು ಅವನ ಪರಿಸ್ಥಿತಿ, ಸನ್ನಿವೇಶಕ್ಕಷ್ಟೇ ಮೀಸಲಿಡದೆ ಅಲ್ಲಿ ಮತ್ತೊಂದು ಆಯಾಮವನ್ನು ತಂದುಬಿಡುತ್ತಾರೆ. ಸಿನೆಮಾ ಅಂದರೆ ಅಲ್ಲಿ ಟ್ವಿಸ್ಟ್ ಆ್ಯಂಡ್ ಟರ್ನ್‍ಗಳು ಇರಲೇಬೇಕೆಂದು ಇಂತಹವರ ಕಥೆಗಳಲ್ಲೂ ಇನ್ನೊಂದನ್ನು ತುರುಕಿ, ಸಮಾಜವನ್ನು ಪರಿಶೀಲಿಸುವ, ಪ್ರಶ್ನಿಸುವ, ಆಳಕ್ಕೆ ಹೋಗುವ ಉದ್ದೇಶವನ್ನು ಸುಲಭವಾಗಿ ಮೊಟಕುಗೊಳಿಸಲಾಗುತ್ತದೆ.

ಇದೇ ಇರಾನಿನ ಸಿನೆಮಾಗಳ ಶ್ರೇಷ್ಠತೆ. ಆ ಸಿನೆಮಾಗಳು ಯಾರನ್ನೂ ಸಂತೋಷಪಡಿಸಲು ಹೊರಡುವುದಿಲ್ಲ; ಸಿನೆಮಾದ ನಾವು ಕಲಿತ ಯಾವ ಸಿದ್ಧಾಂತಗಳನ್ನು ಸಂತೋಷಪಡಿಸುವ ಪ್ರಯತ್ನ ಮಾಡುವುದಿಲ್ಲ; ವಿಷಯದ ಆಳಕ್ಕೆ ಹೋಗುವುದು, ಸರಳವಾಗಿ ಅವುಗಳನ್ನು ಚಿತ್ರಿಸುವುದೇ ಆ ಕಥೆಗಾರರ ಉದ್ದೇಶ. ದೇವನೂರ ಮಹಾದೇವರ ಕಥೆ ‘ಅಮಾಸ’ ಇಲ್ಲಿ ನನಗೆ ನೆನಪಾಗುತ್ತಿದೆ. ಯಾವುದೋ ಒಂದು ಹಳ್ಳಿಯಲ್ಲಿ ಒಂದು ದೇವಸ್ಥಾನದ ಆವರಣದಲ್ಲಿ ಬೆಳೆಯುತ್ತಿರುವ ಅನಾಥಬಾಲಕ ಈ ಅಮಾಸ. ಅಮಾಸ ಕೊನೆಯವರೆಗೂ ಅಮಾಸನಾಗಿಯೇ ಇರುತ್ತಾನೆ. ಅವನ ಕುಣಿತ ನೋಡಿ, ಅವನ ಹಾವಭಾವ ನೋಡಿ, ಅವನ ಪ್ರಸಿದ್ಧಿ ಎಲ್ಲೆಡೆ ತಲುಪಿ ‘ಓಹ್, ಇವನು ಆ ಜಮೀನದಾರನ ಮಗ, ಆ ವರ್ಷ ನೆರೆ ಬಂದಾಗ, ಹಂಗಾಗಿತ್ತು, ನೋಡಿ, ಅನಾಥನಾದ ಕಂದ’ ಎಂದು ಹೇಳಿ, ಕೊನೆಯಲ್ಲಿ ಅವನನ್ನು ಆ ಜಮೀನುದಾರರಿಗೆ ಕೊಂಡೊಯ್ಯುವಂತಹ ತಿರುವನ್ನು ಪಡೆದುಕೊಳ್ಳುವುದಿಲ್ಲ ಅಮಾಸನ ಕಥೆ. ಅ ಕಾರಣಕ್ಕಾಗೇ ಅಮಾಸ ನಮಗೆ ತಟ್ಟುವುದು. ಅಮಾಸನಂತೆ ಇರಾನಿನ ಚಿತ್ರಗಳಲ್ಲಿ ಬರುವ ಪಾತ್ರಗಳೂ ತಟ್ಟುತ್ತಲೇ ಇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...