Homeಅಂತರಾಷ್ಟ್ರೀಯಶಾಪವೇ ವರವಾದಾಗ: ಇರಾನಿನ ಸಿನೆಮಾ, ಒಂದು ಪರಿಚಯ

ಶಾಪವೇ ವರವಾದಾಗ: ಇರಾನಿನ ಸಿನೆಮಾ, ಒಂದು ಪರಿಚಯ

- Advertisement -
- Advertisement -

ನಾನು ಪದೇಪದೇ ಹೇಳುವುದು, ನಮ್ಮ ಕಲೆಗೆ ನಮ್ಮ ಸಮಾಜ, ನಮ್ಮ ಜೀವನ ಪ್ರೇರಣೆಯಾಗಬೇಕು ಹಾಗೂ ನಮ್ಮ ಜೀವನಕ್ಕೆ ಕಲೆಯು ಪ್ರೇರಣೆಯಾಗಬೇಕು.

ಭಾರತೀಯ ಚಿತ್ರರಂಗದ ಮುಂಚೂಣಿಯಲ್ಲಿರುವುದು ಹಿಂದಿ ಚಿತ್ರರಂಗ, ಅದನ್ನು ಬಾಲಿವುಡ್ ಎಂದು ಕರೆಯಲಾಗುತ್ತದೆ. ತಮಿಳು ಚಿತ್ರರಂಗಕ್ಕೆ ಕಾಲಿವುಡ್, ತೆಲುಗಿಗೆ ಟಾಲಿವುಡ್, ಮಲೆಯಾಳಮ್‍ಗೆ ಮಾಲಿವುಡ್ ಹಾಗೂ ಕನ್ನಡ ಚಿತ್ರರಂಗಕ್ಕೆ ಸ್ಯಾಂಡಲ್‍ವುಡ್ ಎಂದೂ ಕರೆಯಲಾಗುತ್ತದೆ. ಈ ರೀತಿಯ ನಾಮಕರಣಕ್ಕೆ ಅನೇಕರ ಆಕ್ಷೇಪಣೆಯಿದೆ, ಆ ಆಕ್ಷೇಪಣೆಗೆ ಸೂಕ್ತ ಕಾರಣಗಳೂ ಇವೆ. ಆದರೆ ಹೀಗೇಕೆ ಕರೆಯಲಾಗುತ್ತದೆ? ಈ ‘ವುಡ್’ ಎನ್ನುವುದು ನಮ್ಮ ಚಿತ್ರರಂಗಕ್ಕೆ ಯಾವ ಕಾರಣಕ್ಕೆ ಥಳುಕುಹಾಕಿಕೊಂಡಿತು? ಅದಕ್ಕೂ ಕಾರಣಗಳಿವೆಯಲ್ಲವೇ?

ಭಾರತದ ಎಲ್ಲಾ ಚಿತ್ರರಂಗಗಳಿಗೆ ತಮ್ಮದೇ ಆದ ವಿಶಿಷ್ಟತೆಗಳಿದ್ದರೂ, ಅವರಂತೆ (ಹಿಂದಿ ಚಿತ್ರರಂಗಕ್ಕೆ ಹಾಲಿವುಡ್‍ನ ಸಿನೆಮಾದಂತಹ ಚಿತ್ರಗಳನ್ನು ಮಾಡಬೇಕು, ಕನ್ನಡದ ಸಿನೆಮಾಗಳು ಹಿಂದಿ, ತೆಲುಗು ಸಿನೆಮಾಗಳಂತೆ ಆಗಿರಲು ಪ್ರಯತ್ನಿಸುತ್ತವೆ) ಆಗಿರಬೇಕು ಎನ್ನುವ ಆಕಾಂಕ್ಷೆಯಂತೂ ಖಂಡಿತ ಕಾಣಿಸಿಕೊಳ್ಳುತ್ತದೆ, ಆ ರೀತಿಯ ಒಂದು aspirational quality ಚಿತ್ರಗಳಲ್ಲಿ, ಕಲಾವಿದರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನೇ ಕೆಲವರು ಅನುಕರಣೆಯೆಂದೂ ಕರೆಯುತ್ತಾರೆ. ಇದು ಸರಿಯೋ ತಪ್ಪೋ ಎನ್ನುವುದು ಬೇರೆ ವಿಷಯ. ಆದರೆ ಈ ಅಂಶದಿಂದಲೇ ಅನೇಕರಿಗೆ ನಮ್ಮ ಚಿತ್ರಗಳು ಅಪಥ್ಯವೂ ಆಗುತ್ತವೆ. ಆದರೆ ಇದು ಸಹಜವೂ ಅಲ್ಲವೇ? ಅಷ್ಟೊಂದು ಅಭಿವೃದ್ಧಿ ಹೊಂದಿರುವ ಯಾವುದೇ ಒಂದು ಚಿತ್ರರಂಗದ ಚಿತ್ರಗಳನ್ನು ನಾವು ನೋಡಿದಾಗ ಅದರಂತೆ ಮಾಡಲು ಇಚ್ಛಿಸುವುದು ಸಹಜವೆಂದು ಹೇಳಿದರೂ ಕೆಲವು ಬಾರಿ ಇದು ಒಂದು ದೊಡ್ಡ ಸಮಸ್ಯೆಗೆ ಎಡೆಮಾಡಬಹುದು; ಅದುವೆ ಅನುಕರಣೆ ಹಾಗೂ ನಮ್ಮೊಳಗೆ, ನಮ್ಮ ಸಮಾಜದೊಳಗೆ ಇಣುಕುವ ಪ್ರವೃತ್ತಿಯನ್ನು, ನಮ್ಮ ಆಳದ ಪ್ರತಿಭೆಯನ್ನು ಹೊರಹೊಮ್ಮಿಸುವುದಕ್ಕೆ ಅಡ್ಡಿಯಾಗಬಲ್ಲದು.

ಆದರೆ ಒಂದುವೇಳೆ, ಎಲ್ಲರ ದೊಡ್ಡಪ್ಪನಾಗಿರುವ ಹಾಲಿವುಡ್ ಚಿತ್ರಗಳನ್ನು ನೋಡದೇ ಇದ್ದರೆ? ಏನಾಗಬಹುದು. ಇರಾನ್‍ನಲ್ಲಿ ಆಗಿದ್ದು ಅದೆ. (ಇದು ನನ್ನ ಪ್ರಾಕಲ್ಪನೆಯಷ್ಟೆ, ಇದಕ್ಕೆ ಇನ್ನೂ ಹಲವಾರು ಆಯಾಮಗಳಿವೆ ಎನ್ನುವುದು ನನಗೆ ಅರಿವಿದೆ.) ಅಮೆರಿಕದೊಂದಿಗೆ ಇದ್ದ ಹಗೆತನ, 70ರ ದಶಕಕ್ಕಿಂತ ಮುನ್ನ ಇದ್ದ ರಾಜಾಡಳಿತ, ಇರಾನಿನ ಕ್ರಾಂತಿ, ತದನಂತರ ಅಸ್ತಿತ್ವದಲ್ಲಿ ಬಂದ ಇಸ್ಲಾಮಿಕ್ ರಾಷ್ಟ್ರ ಇವೆಲ್ಲವುಗಳು ಒಂದು ರೀತಿಯಲ್ಲಿ ಹಾಲಿವುಡ್‍ನ ಸಿನೆಮಾಗಳು ಇರಾನಿನ ಜನತೆಗೆ ಲಭ್ಯವಾಗದಂತೆ ನೋಡಿಕೊಂಡವು. ಹಾಲಿವುಡ್ ಸಿನೆಮಾಗಳನ್ನು ನೋಡದೇ ಇರುವುದರಿಂದ ಒಂದು ಸಿನೆಮಾ ಹೀಗಿರಬೇಕು ಎಂದು ಹಾಲಿವುಡ್ ವಿಶ್ವಕ್ಕೇ ತೋರಿಸಿದ್ದು ಇರಾನಿನ ಸಿನೆಮಾಸಕ್ತರಿಗೆ ಕಾಣಲಿಲ್ಲ.

ಈ ಕಾರಣದಿಂದ ಇರಾನಿನ ನಿರ್ದೇಶಕರ ಹುಡುಕಾಟ ಆಂತರಿಕವಾಯಿತು. ಇದರೊಂದಿಗೆ ದೇಶದಲ್ಲಿ ಹೇರಿಕೆಯಾಗಿದ್ದ ಕಟ್ಟುನಿಟ್ಟಿನ ಸೆನ್ಸಾರ್ ಕೂಡ ಇವರ ಹುಡುಕಾಟದ ದಿಕ್ಕನ್ನು ಬದಲಿಸಿತು; ಈ ನಿರ್ದೇಶಕರಿಗೆ ಸೆನ್ಸಾರ್ ರಾಜಕೀಯ ಕಥೆಯನ್ನು ಹೇಳಲು ಅಡ್ಡಿಯಾದರೂ,(ಅನೇಕರು ಜೈಲುವಾಸ ಅನುಭವಿಸಿದ್ದಾರೆ) ಹಿಂಸೆ, ಲೈಂಗಿಕತೆ ಮುಂತಾದವುಗಳನ್ನು ತೋರಿಸಬಾರದು ಎನ್ನುವುದು ಸಮಸ್ಯೆಯಾಗಲಿಲ್ಲ.
ಕಥೆಗಳನ್ನು ಹೇಳುವ ರೀತಿ ಮತ್ತು ಯಾವ ಕಥೆಗಳನ್ನು ಹೇಳಬೇಕು ಎನ್ನುವುದು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಈ ಎರಡು ಅಂಶಗಳು ಇರಾನಿನ ಚಿತ್ರಗಳು ವಿಶ್ವಕ್ಕೆ ಸಿನೆಮಾದ ಒಂದು ಹೊಸ ವ್ಯಾಕರಣವನ್ನು ಪರಿಚಯಿಸುವಂತೆ ಮಾಡಿದವು.

ಇಗ ಇರಾನಿನ ಸಿನೆಮಾದ ಇತಿಹಾಸ ಮತ್ತು ಅದರ ಬೆಳವಣಿಗೆಗೆ ಹೋಗದೆ ಅಲ್ಲಿಯ ಕೆಲವು ಚಿತ್ರಗಳ ಉದಾಹರಣೆ ತೆಗೆದುಕೊಳ್ಳುವ.
‘ಟೇಸ್ಟ್ ಆಫ್ ಚೆರಿ’ ಎನ್ನುವುದು ಇರಾನಿನ ಅತ್ಯಂತ ಯಶಸ್ವಿ ಮತ್ತು ಪ್ರಮುಖ ನಿರ್ದೇಶಕ ಅಬ್ಬಾಸ್ ಕಿಯರಸ್ತಾಮಿ ನಿರ್ದೇಶಿಸಿದ ಚಿತ್ರ. ಈ ಚಿತ್ರದಲ್ಲಿ ಒಬ್ಬ ಇರಾನಿ ವ್ಯಕ್ತಿ ಒಂದು ಜೀಪಿನಲ್ಲಿ ಸುತ್ತಾಡುತ್ತಿದ್ದಾನೆ. ಅವನು ನಿದ್ರೆಗುಳಿಗೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಯೋಚನೆಯಲ್ಲಿದ್ದಾನೆ. ಒಂದು ಗುಂಡಿಯನ್ನು ತೋಡಿ, ಅದರಲ್ಲಿಳಿದು ನಿದ್ರೆಮಾತ್ರೆಗಳನ್ನು ಸೇವಿಸಿ ಸತ್ತಮೇಲೆ ತನ್ನನ್ನು ಯಾರಾದರೂ ಹೂಳಬೇಕು ಅಥವಾ ಮಣ್ಣುಮಾಡಬೇಕು ಎನ್ನುವುದು ಅವನ ಬಯಕೆ. ಆ ಬಯಕೆಯನ್ನು ಯಾರಾದರೂ ಪೂರೈಸಬಲ್ಲರೋ ಎನ್ನುವ ಹುಡುಕಾಟದಲ್ಲಿದ್ದಾನೆ ಅವನು. ಈ ಹುಡುಕಾಟದಲ್ಲಿ ಕೆಲವರನ್ನು ಭೇಟಿಯಾಗುತ್ತಾನೆ, ಅವರೊಂದಿಗೆ ಸಂಭಾಷಿಸುತ್ತಾನೆ; ಇಷ್ಟೇ ಆ ಚಿತ್ರ.

ಚಿತ್ರದಲ್ಲಿ ಯಾವುದೇ ಹಿನ್ನೆಲೆ ಸಂಗೀತವಿಲ್ಲ, ಉದ್ದುದ್ದ ಸಂಭಾಷಣೆಗಳಿವೆ, ಜೀಪು ಚಲಿಸುವ, ಎದುರಿನ ರಸ್ತೆಯ, ರಸ್ತೆಬದಿಯ ಉದ್ದುದ್ದ ಶಾಟ್‍ಗಳಿವೆ. ಆದರೂ ಒಂದು ಸಲವೂ ಬೋರ್ ಹೊಡೆಸುವುದಿಲ್ಲ, ಆ ಉದ್ದುದ್ದದ ಶಾಟ್‍ಗಳು, ಸಂಭಾಷಣೆಗಳು, ಮುಖಗಳು. ಇವೆಲ್ಲವೂ ಜೀವನದ ಅರ್ಥದ ಹುಡುಕಾಟದಲ್ಲಿರುವಂತೆ ಭಾಸವಾಗುತ್ತದೆ.

‘ದಿ ಆ್ಯಪಲ್'(1998) ಎನ್ನುವುದು 17 ವರ್ಷದ ಬಾಲಕಿ ಸಮಿರ ಮಖ್ಮಲ್‍ಬಫ್ ನಿರ್ದೇಶಿಸಿದ ಚಿತ್ರ. ಅತ್ಯಂತ ಧಾರ್ಮಿಕನಾದ ಒಬ್ಬ ವ್ಯಕ್ತಿ ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಮನೆಯಲ್ಲಿಯೇ ಕೂಡಿಹಾಕಿದ್ದಾನೆ. ಹನ್ನೆರಡು ವರ್ಷಗಳ ತನಕ ಈ ಪುಟ್ಟಬಾಲಕಿಯರು ಹೊರಜಗತ್ತನ್ನೇ ನೋಡಿಲ್ಲ. ಆಗ ಪಕ್ಕದವರೊಬ್ಬರು ಕೆಲವು ಸಾಮಾಜಿಕ ಕಾರ್ಯಕರ್ತೆಯರಿಗೆ ಇದರ ಬಗ್ಗೆ ತಿಳಿಸಿದಾಗ, ಅವರು ಬಂದು ಅವರನ್ನು ಸೆರೆವಾಸದಿಂದ ಬಿಡುಗಡೆ ಮಾಡುತ್ತಾರೆ. ಈ ಘಟನೆ ಮತ್ತು ಆ ಬಾಲಕಿಯರು ಹೊರಜಗತ್ತಿಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದೇ ಈ ಚಿತ್ರ. ಆ ಬಾಲಕಿಯರ ತಂದೆತಾಯಿ ವಿಲನ್‍ಗಳಾಗಿರಬೇಕಿತ್ತು ಎನ್ನುವುದು ನಮ್ಮ ಅಪೇಕ್ಷೆಯಾಗಿತ್ತು; ಆದರೆ ಹಾಗಾಗುವುದಿಲ್ಲ, ಅವರನ್ನು ವಿಲನ್‍ಗಳಂತೆ ಬಿಂಬಿಸದೇ ಸಾಮಾನ್ಯ ವ್ಯಕ್ತಿಗಳಂತೆ ನೋಡುವಂತೆ ಮಾಡುವುದೂ ಈ ಚಿತ್ರದ ಯಶಸ್ಸು.

ಈ ಚಿತ್ರದ ಮತ್ತು ಇತರ ಇರಾನಿನ ಚಿತ್ರಗಳ ವೈಶಿಷ್ಟವೇನೆಂದರೆ, ಸಾಕ್ಷ್ಯಚಿತ್ರದ ಮತ್ತು ಸಿನೆಮಾದ ನಡುವೆ ಇರುವ ಗೆರೆಯನ್ನು ಇಲ್ಲವಾಗಿಸುವುದು. ಇದು ಸಾಕ್ಷ್ಯಚಿತ್ರವೂ ಹೌದು ಹಾಗೂ ಚಲನಚಿತ್ರವೂ ಹೌದು. ಹಾಗೂ ಇಂತಹ ಚಿತ್ರಗಳಲ್ಲಿ ಇವೆರಡರ ಘರ್ಷಣೆಯಾಗುವುದಿಲ್ಲ, ಇವೆರಡರ ನಡುವೆ ಇರುವುದು ಹುಸಿ ವೈರುಧ್ಯ ಎನ್ನುವುದನ್ನು ಇರಾನಿನ ಅನೇಕ ಚಲನಚಿತ್ರಗಳು ತೋರಿಸಿಕೊಡುತ್ತವೆ.

ನನಗೆ ಇಷ್ಟವಾದ ಇನ್ನೊಬ್ಬ ನಿರ್ದೇಶಕಿಯ ಚಿತ್ರ ‘ದ ಬ್ಲೂ ವೇಲಡ್’ (ರುಸಾರಿ ಅಬಿ). ರಖ್‍ಶಾನ್ ಬನಿ-ಎತೆಮಾದ್ ನಿರ್ದೇಶಿಸಿದ ಈ ಚಿತ್ರದಲ್ಲಿ ಒಬ್ಬ ಟೊಮಾಟೊ ಸಾಸ್ ಕಾರ್ಖಾನೆಯ ಮಾಲೀಕ ಮತ್ತು ಕಾರ್ಖಾನೆಯಲ್ಲಿ ಕೆಲಸ ಮಾಡುವ ಒಬ್ಬ ಮಹಿಳೆಯ ಪ್ರೇಮದ ಕಥೆಯನ್ನು ಹೇಳಲಾಗಿದೆ. ಈ ಚಿತ್ರವನ್ನು ನೋಡುತ್ತಿದ್ದಾಗ, ಒಂದು ಸಿನೆಮಾ ನೋಡಿದಂತೆ ಭಾಸವಾಗದೆ, ನಮ್ಮ ಪಕ್ಕದೂರಿನಲ್ಲಿ ಆದ ಘಟನೆಗಳನ್ನು ನೋಡಿದಂತೆ ಭಾಸವಾಗುತ್ತದೆ. ವಯಸ್ಸಾದ ಕಾರ್ಖಾನೆಯ ಮಾಲೀಕ, ಅವನ ಮಕ್ಕಳು, ಅಳಿಯಂದಿರು ಇವರೆಲ್ಲರೂ ನಮ್ಮೂರಿನವರಾಗೇ ಕಂಡು, ಮಕ್ಕಳ ಮತ್ತು ಅಳಿಯಂದಿರಿಗೆ ಈ ಪ್ರೇಮಪ್ರಕರಣದೊಂದಿಗೆ ಇರುವ ಸಮಸ್ಯೆಯೂ ಬೇರೆ ಲೋಕದ್ದು ಎನಿಸುವುದಿಲ್ಲ. ಇದರರ್ಥ ಚಿತ್ರದ ನಿರ್ದೇಶಕಿಯು ವಿಶ್ವದ ಎಲ್ಲಾ ಜನರಿಗೂ ತಟ್ಟಲಿ ಎಂದು ಕಥೆಯನ್ನಾಗಲಿ ಅಥವಾ ಕಥೆಯನ್ನು ಹೇಳುವ ಶೈಲಿಯನ್ನಾಗಲಿ ಆಯ್ಕೆ ಮಾಡಿಕೊಂಡಿಲ್ಲ. ತನ್ನ ಕಥೆ(ತಾನಿರುವ ಸಮಾಜ) ಮತ್ತು ಶೈಲಿಗೆ ಸಂಪೂರ್ಣ ಪ್ರಾಮಾಣಿಕತೆ ಬದ್ಧತೆಯನ್ನು ಪ್ರದರ್ಶಿಸಿದಿಂದಲೇ ವಿಶ್ವದ ಇನ್ನೊಂದು ಮೂಲೆಯಲ್ಲಿ ಕುಳಿತವರಿಗೆ ತಟ್ಟಿದ್ದು.

ಮೊಹ್ಸೆನ್ ಮಖ್ಮಲ್‍ಬಫ್ ಅವರ ‘ಸೈಕ್ಲಿಸ್ಟ್’ ಎನ್ನುವ ಚಿತ್ರದಲ್ಲಿ ಇರಾನಿನಲ್ಲಿ ವಾಸಿಸುತ್ತಿರುವ ಒಬ್ಬ ಅಫ್ಘಾನಿ ನಿರಾಶ್ರಿತ ತನ್ನ ಹೆಂಡತಿಯ ಚಿಕಿತ್ಸೆಗೆ ಹಣ ಒದಗಿಸಲೆಂದು ಒಂದು ವಾರ ನಿಲ್ಲಿಸದೇ ಸೈಕಲ್ ತುಳಿಯುವ ಸಾಹಸಕ್ಕೆ ಕೈಹಾಕಿದ್ದಾನೆ. ಇಂತಹವುಗಳನ್ನು ಎಷ್ಟು ನೋಡಿಲ್ಲ ನಮ್ಮ ದೇಶದಲ್ಲಿ, ಆದರೆ ಇವರ ಕಥೆಗಳು ಚಿತ್ರವಾಗಿದ್ದು ತುಂಬಾ ಕಡಿಮೆ. ಒಂದು ವೇಳೆ ಚಿತ್ರವಾದರೂ, ಆ ಕಥೆಯನ್ನು ಸೈಕಲ್ ತುಳಿಯುವ ವ್ಯಕ್ತಿಗೆ ಮತ್ತು ಅವನ ಪರಿಸ್ಥಿತಿ, ಸನ್ನಿವೇಶಕ್ಕಷ್ಟೇ ಮೀಸಲಿಡದೆ ಅಲ್ಲಿ ಮತ್ತೊಂದು ಆಯಾಮವನ್ನು ತಂದುಬಿಡುತ್ತಾರೆ. ಸಿನೆಮಾ ಅಂದರೆ ಅಲ್ಲಿ ಟ್ವಿಸ್ಟ್ ಆ್ಯಂಡ್ ಟರ್ನ್‍ಗಳು ಇರಲೇಬೇಕೆಂದು ಇಂತಹವರ ಕಥೆಗಳಲ್ಲೂ ಇನ್ನೊಂದನ್ನು ತುರುಕಿ, ಸಮಾಜವನ್ನು ಪರಿಶೀಲಿಸುವ, ಪ್ರಶ್ನಿಸುವ, ಆಳಕ್ಕೆ ಹೋಗುವ ಉದ್ದೇಶವನ್ನು ಸುಲಭವಾಗಿ ಮೊಟಕುಗೊಳಿಸಲಾಗುತ್ತದೆ.

ಇದೇ ಇರಾನಿನ ಸಿನೆಮಾಗಳ ಶ್ರೇಷ್ಠತೆ. ಆ ಸಿನೆಮಾಗಳು ಯಾರನ್ನೂ ಸಂತೋಷಪಡಿಸಲು ಹೊರಡುವುದಿಲ್ಲ; ಸಿನೆಮಾದ ನಾವು ಕಲಿತ ಯಾವ ಸಿದ್ಧಾಂತಗಳನ್ನು ಸಂತೋಷಪಡಿಸುವ ಪ್ರಯತ್ನ ಮಾಡುವುದಿಲ್ಲ; ವಿಷಯದ ಆಳಕ್ಕೆ ಹೋಗುವುದು, ಸರಳವಾಗಿ ಅವುಗಳನ್ನು ಚಿತ್ರಿಸುವುದೇ ಆ ಕಥೆಗಾರರ ಉದ್ದೇಶ. ದೇವನೂರ ಮಹಾದೇವರ ಕಥೆ ‘ಅಮಾಸ’ ಇಲ್ಲಿ ನನಗೆ ನೆನಪಾಗುತ್ತಿದೆ. ಯಾವುದೋ ಒಂದು ಹಳ್ಳಿಯಲ್ಲಿ ಒಂದು ದೇವಸ್ಥಾನದ ಆವರಣದಲ್ಲಿ ಬೆಳೆಯುತ್ತಿರುವ ಅನಾಥಬಾಲಕ ಈ ಅಮಾಸ. ಅಮಾಸ ಕೊನೆಯವರೆಗೂ ಅಮಾಸನಾಗಿಯೇ ಇರುತ್ತಾನೆ. ಅವನ ಕುಣಿತ ನೋಡಿ, ಅವನ ಹಾವಭಾವ ನೋಡಿ, ಅವನ ಪ್ರಸಿದ್ಧಿ ಎಲ್ಲೆಡೆ ತಲುಪಿ ‘ಓಹ್, ಇವನು ಆ ಜಮೀನದಾರನ ಮಗ, ಆ ವರ್ಷ ನೆರೆ ಬಂದಾಗ, ಹಂಗಾಗಿತ್ತು, ನೋಡಿ, ಅನಾಥನಾದ ಕಂದ’ ಎಂದು ಹೇಳಿ, ಕೊನೆಯಲ್ಲಿ ಅವನನ್ನು ಆ ಜಮೀನುದಾರರಿಗೆ ಕೊಂಡೊಯ್ಯುವಂತಹ ತಿರುವನ್ನು ಪಡೆದುಕೊಳ್ಳುವುದಿಲ್ಲ ಅಮಾಸನ ಕಥೆ. ಅ ಕಾರಣಕ್ಕಾಗೇ ಅಮಾಸ ನಮಗೆ ತಟ್ಟುವುದು. ಅಮಾಸನಂತೆ ಇರಾನಿನ ಚಿತ್ರಗಳಲ್ಲಿ ಬರುವ ಪಾತ್ರಗಳೂ ತಟ್ಟುತ್ತಲೇ ಇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...