Homeಮುಖಪುಟ25 ವರ್ಷದ ದ್ವೇಷ 25 ನಿಮಿಷದಲ್ಲಿ ಶಮನ: ಅಲ್ಲಿಂದ ಶುರುವಾಯಿತು ಮೋದಿಯ ಅಧ:ಪತನ!

25 ವರ್ಷದ ದ್ವೇಷ 25 ನಿಮಿಷದಲ್ಲಿ ಶಮನ: ಅಲ್ಲಿಂದ ಶುರುವಾಯಿತು ಮೋದಿಯ ಅಧ:ಪತನ!

- Advertisement -
- Advertisement -

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಶಾಗೆ ದೊಡ್ಡ ಬ್ರೇಕ್ ನೀಡಿದ ಉತ್ತರಪ್ರದೇಶ ಈ ಸಲ ಉಲ್ಟಾ ಹೊಡೆಯುವ ಲಕ್ಷಣಗಳಿವೆ. 2014ರ ಚುನಾವಣೆ ಫಲಿತಾಂಶ ಮತ್ತು ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಉತ್ತರಪ್ರದೇಶದಲ್ಲಿ ಒಂದು ಸಮಾಲೋಚನೆ ನಡೆಯುತ್ತದೆ. ಅದು ಕೇವಲ 25 ನಿಮಿಷಗಳದ್ದು ಆದರೂ ಅದು 25 ವರ್ಷಗಳ ದ್ವೇಷಕ್ಕೆ ಒಂದು ಕೊನೆ ಹಾಡುತ್ತದೆ. ಅದು ಎಸ್‍ಪಿ ಮತ್ತು ಬಿಎಸ್‍ಪಿ ನಡುವಿನ ಮಾತುಕತೆ… ಅದಿವತ್ತೂ ಮೋದಿ-ಶಾಗಳ ಹುಚ್ಚಾಟಕ್ಕೆ ಕಢಿವಾಣ ಹಾಕುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದೆ…

ಎರಡನೇ ಹಂತದ ಚುನಾವಣೆ ಮುಗಿದ ಈ ಹೊತ್ತಿನಲ್ಲಿ ಮತ್ತೆ ನಾಲ್ಕೈದು ತಿಂಗಳಿನ ಹಿಂದಿನ ರಾಜಕೀಯ ವಾತಾವರಣವನ್ನು ನೆನಪಲ್ಲಿ ಇಟ್ಟುಕೊಂಡು, ಅದನ್ನು ಒಂದು ಉಪ-ಆಧಾರವಾಗಿ ಇಟ್ಟುಕೊಂಡು ಚುನಾವಣಾ ವಿಶ್ಲೇಷಣೆ ಮಾಡಲೇಬೇಕಾದ ಪರಿಸ್ಥಿತಿ ಚುನಾವಣಾ ಪಂಡಿತರುಗಳಿಗೆ ಈಗ ಉದ್ಭವಿಸಿದೆ. ಅಂದರೆ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತಿಸಘಡಗಳಲ್ಲಿ ಬಿಜೆಪಿಯ ಅದರಲ್ಲೂ ಮೋದಿ-ಶಾಗಳ ಸೋಲಿನ ನಂತರ ಹಲವು ಹರಸಾಹಸ ಮಾಡಿದರೂ ಈಗ ಮತ್ತೆ ಬಿಜೆಪಿಗೆ ಅಂದುಕೊಂಡಂತೆ ಆಗುತ್ತಿಲ್ಲ.

ಸದ್ಯ ಉತ್ತರಪ್ರದೇಶದ ವಿಷಯಕ್ಕೆ ಬರೋಣ. ಅಲ್ಲಿ ಏರ್ಪಟ್ಟ ಮೈತ್ರಿಯೊಂದು ಬಿಜೆಪಿಯ ಓಟಕ್ಕೆ ಮೊದಲ ತಡೆ ಹಾಕಿದೆ. ಅದು ಆರಂಭದಲ್ಲಿ ಮಹಾಘಟಬಂಧನವಾಗಿತ್ತು, ಈಗ ಅದರಲ್ಲಿ ಕಾಂಗ್ರೆಸ್ ಇಲ್ಲದೇ ಅದು ಕೇವಲ ಘಟಬಂಧನವಾಗಿದೆ. ಆದರೆ ಈ ಎಸ್ಪಿ-ಬಿಎಸ್‍ಪಿ-ಆರ್‍ಎಲ್‍ಡಿ ಮೈತ್ರಿ ಬಿಜೆಪಿಯಿಂದ 40-50 ಸ್ಥಾನಗಳನ್ನು ಕಿತ್ತುಕೊಳ್ಳುವ ಸಾಧ್ಯತೆ ಇದ್ದೇ ಇದೆ.

ಗೆಸ್ಟ್‍ಹೌಸ್ ಪ್ರಕರಣದಿಂದ ಘಟಬಂಧನದ ಕತೆ
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಇತಿಹಾಸದಲ್ಲಿ ಅವು ಪರಸ್ಪರ ಎದುರಾಳಿಯಾಗಿದ್ದೇ ಹೆಚ್ಚಾದರೂ, ಆಗಾಗ ಅವುಗಳ ನಡುವೆ ಒಲವು ಚಿಗುರಿದ್ದೂ ಉಂಟು. ಸುಮಾರು 25 ವರ್ಷಗಳ ಹಿಂದೆ ಮುಲಾಯಂ ನೇತೃತ್ವದ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯ ಸರ್ಕಾರ ಬಿದ್ದಾಗ ಎಸ್ಪಿ ಕಾರ್ಯಕರ್ತರು ಮಾಯಾವತಿಯವರನ್ನು ಗೆಸ್ಟ್‍ಹೌಸ್ ಒಂದರಲ್ಲಿ ಲಾಕ್ ಮಾಡಿ ಸತಾಯಿಸಿದ್ದರು. ಅಂದಿನಿಂದ ಎಸ್ಪಿ ಮತ್ತು ಬಿಎಸ್ಪಿ ನಡುವೆ ಒಂದು ದೊಡ್ಡ ಕಂದಕ ನಿರ್ಮಾಣವಾಗಿತ್ತು.

ಅದಾದ 26 ವರ್ಷಗಳ ನಂತರ, ಮೋದಿ-ಶಾ ಉತ್ತರಪ್ರದೇಶದಲ್ಲಿ 80ರಲ್ಲಿ 71 ಸೀಟು (ಅಪ್ನಾದಳ್ 2 ಸೇರಿದರೆ 73) ಗೆದ್ದಾಗ ಈ ಎರಡೂ ಪಕ್ಷಗಳೂ ತತ್ತರಿಸಿದ್ದವು. ಮುಂದೆ ಕೆಲ ವರ್ಷಗಳ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಬಹುಮತ ಪಡೆಯಿತು. ಅಷ್ಟೊತ್ತಿಗೆ ತಂದೆಯಿಂದ ಬೇರೆಯಾಗಿ ಗುರ್ತಿಸಿಕೊಂಡಿದ್ದ ನಿಕಟಪೂರ್ವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎಚ್ಚೆತ್ತುಕೊಂಡರು.
ಅದರ ಫಲವೇ ಅವರು, ಬಿಎಸ್ಪಿಯ ಮಾಯಾವತಿಯವರೊಂದಿಗೆ 25 ನಿಮಿಷಗಳ ಒಂದು ಮುಕ್ತ ಸಮಾಲೋಚನೆ, ಸಂಧಾನವನ್ನು ನಡೆಸಿದರು. ಇಡೀ ಮಾತುಕತೆಯ ಉದ್ದೇಶ ಬಿಜೆಪಿ, ಮುಖ್ಯವಾಗಿ, ಮೋದಿ-ಶಾಗಳನ್ನು ಅಧಿಕಾರದಿಂದ ದೂರ ಇಡುವುದಾಗಿತ್ತು.
ಸಭೆಯ ನಂತರ ಅಖಿಲೇಶ್ ಹೇಳಿದ್ದು ಒಂದೇ ಮಾತು: ‘ಎಸ್ಪಿ ಕಾರ್ಯಕರ್ತರು ಮಾಯಾವತಿಯನ್ನು ಅವಮಾನಿಸಿದರೆ ಅದು ನನ್ನನ್ನೇ ಅವಮಾನಿಸಿದಂತೆ….’

ಆಗ ಆರ್‍ಎಲ್‍ಡಿ ಮತ್ತು ಕಾಂಗ್ರೆಸ್ ಈ ಮೈತ್ರಿ ಜೊತೆ ಸೇರಿಕೊಂಡವು. ನಂತರ ಈ ಮಹಾಘಟಬಂಧನವು 3 ಲೋಕಸಭಾ ಉಪ ಚುನಾವಣೆಗಳನ್ನು ಭಾರಿ ಅಂತರದಿಂದ ಗೆದ್ದಿತು. ಆ ಮೂಲಕ ಬಿಜೆಪಿ ವಿರೋಧಿ ಮತಗಳು ಸೇರಿದರೆ ಮೋದಿ-ಶಾ ಆಟ ಝೀರೊ ಎಂಬುದನ್ನು ಸಾಬೀತು ಮಾಡಲಾಗಿತು. ಇದು ಕರ್ನಾಟಕದ ರಾಜಕಾರಣದ ಮೇಲೂ ಪ್ರಭಾವ ಬೀರಿದ ಪರಿಣಾಮವಾಗಿಯೇ ಇಲ್ಲಿ ಮೈತ್ರಿ ಸರ್ಕಾರ ರಚನೆಗೊಂಡಿತು. ಇಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆಯ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿತು.
ಈಗ ಬಿಜೆಪಿಯ ಅಂದಾಜಿತ ನಾಗಾಲೋಟಕ್ಕೆ ಉತ್ತರಪ್ರದೇಶವೇ ಮೊದಲ ಬ್ರೇಕ್ ಹಾಕುತ್ತಿದೆ. ಕರ್ನಾಟಕದಲ್ಲೂ ಬಿಜೆಪಿಗೆ ಬ್ರೇಕ್ ಬೀಳದೇ ಇರುತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...