Homeಮುಖಪುಟ25 ವರ್ಷದ ದ್ವೇಷ 25 ನಿಮಿಷದಲ್ಲಿ ಶಮನ: ಅಲ್ಲಿಂದ ಶುರುವಾಯಿತು ಮೋದಿಯ ಅಧ:ಪತನ!

25 ವರ್ಷದ ದ್ವೇಷ 25 ನಿಮಿಷದಲ್ಲಿ ಶಮನ: ಅಲ್ಲಿಂದ ಶುರುವಾಯಿತು ಮೋದಿಯ ಅಧ:ಪತನ!

- Advertisement -
- Advertisement -

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಶಾಗೆ ದೊಡ್ಡ ಬ್ರೇಕ್ ನೀಡಿದ ಉತ್ತರಪ್ರದೇಶ ಈ ಸಲ ಉಲ್ಟಾ ಹೊಡೆಯುವ ಲಕ್ಷಣಗಳಿವೆ. 2014ರ ಚುನಾವಣೆ ಫಲಿತಾಂಶ ಮತ್ತು ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಉತ್ತರಪ್ರದೇಶದಲ್ಲಿ ಒಂದು ಸಮಾಲೋಚನೆ ನಡೆಯುತ್ತದೆ. ಅದು ಕೇವಲ 25 ನಿಮಿಷಗಳದ್ದು ಆದರೂ ಅದು 25 ವರ್ಷಗಳ ದ್ವೇಷಕ್ಕೆ ಒಂದು ಕೊನೆ ಹಾಡುತ್ತದೆ. ಅದು ಎಸ್‍ಪಿ ಮತ್ತು ಬಿಎಸ್‍ಪಿ ನಡುವಿನ ಮಾತುಕತೆ… ಅದಿವತ್ತೂ ಮೋದಿ-ಶಾಗಳ ಹುಚ್ಚಾಟಕ್ಕೆ ಕಢಿವಾಣ ಹಾಕುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದೆ…

ಎರಡನೇ ಹಂತದ ಚುನಾವಣೆ ಮುಗಿದ ಈ ಹೊತ್ತಿನಲ್ಲಿ ಮತ್ತೆ ನಾಲ್ಕೈದು ತಿಂಗಳಿನ ಹಿಂದಿನ ರಾಜಕೀಯ ವಾತಾವರಣವನ್ನು ನೆನಪಲ್ಲಿ ಇಟ್ಟುಕೊಂಡು, ಅದನ್ನು ಒಂದು ಉಪ-ಆಧಾರವಾಗಿ ಇಟ್ಟುಕೊಂಡು ಚುನಾವಣಾ ವಿಶ್ಲೇಷಣೆ ಮಾಡಲೇಬೇಕಾದ ಪರಿಸ್ಥಿತಿ ಚುನಾವಣಾ ಪಂಡಿತರುಗಳಿಗೆ ಈಗ ಉದ್ಭವಿಸಿದೆ. ಅಂದರೆ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತಿಸಘಡಗಳಲ್ಲಿ ಬಿಜೆಪಿಯ ಅದರಲ್ಲೂ ಮೋದಿ-ಶಾಗಳ ಸೋಲಿನ ನಂತರ ಹಲವು ಹರಸಾಹಸ ಮಾಡಿದರೂ ಈಗ ಮತ್ತೆ ಬಿಜೆಪಿಗೆ ಅಂದುಕೊಂಡಂತೆ ಆಗುತ್ತಿಲ್ಲ.

ಸದ್ಯ ಉತ್ತರಪ್ರದೇಶದ ವಿಷಯಕ್ಕೆ ಬರೋಣ. ಅಲ್ಲಿ ಏರ್ಪಟ್ಟ ಮೈತ್ರಿಯೊಂದು ಬಿಜೆಪಿಯ ಓಟಕ್ಕೆ ಮೊದಲ ತಡೆ ಹಾಕಿದೆ. ಅದು ಆರಂಭದಲ್ಲಿ ಮಹಾಘಟಬಂಧನವಾಗಿತ್ತು, ಈಗ ಅದರಲ್ಲಿ ಕಾಂಗ್ರೆಸ್ ಇಲ್ಲದೇ ಅದು ಕೇವಲ ಘಟಬಂಧನವಾಗಿದೆ. ಆದರೆ ಈ ಎಸ್ಪಿ-ಬಿಎಸ್‍ಪಿ-ಆರ್‍ಎಲ್‍ಡಿ ಮೈತ್ರಿ ಬಿಜೆಪಿಯಿಂದ 40-50 ಸ್ಥಾನಗಳನ್ನು ಕಿತ್ತುಕೊಳ್ಳುವ ಸಾಧ್ಯತೆ ಇದ್ದೇ ಇದೆ.

ಗೆಸ್ಟ್‍ಹೌಸ್ ಪ್ರಕರಣದಿಂದ ಘಟಬಂಧನದ ಕತೆ
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಇತಿಹಾಸದಲ್ಲಿ ಅವು ಪರಸ್ಪರ ಎದುರಾಳಿಯಾಗಿದ್ದೇ ಹೆಚ್ಚಾದರೂ, ಆಗಾಗ ಅವುಗಳ ನಡುವೆ ಒಲವು ಚಿಗುರಿದ್ದೂ ಉಂಟು. ಸುಮಾರು 25 ವರ್ಷಗಳ ಹಿಂದೆ ಮುಲಾಯಂ ನೇತೃತ್ವದ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯ ಸರ್ಕಾರ ಬಿದ್ದಾಗ ಎಸ್ಪಿ ಕಾರ್ಯಕರ್ತರು ಮಾಯಾವತಿಯವರನ್ನು ಗೆಸ್ಟ್‍ಹೌಸ್ ಒಂದರಲ್ಲಿ ಲಾಕ್ ಮಾಡಿ ಸತಾಯಿಸಿದ್ದರು. ಅಂದಿನಿಂದ ಎಸ್ಪಿ ಮತ್ತು ಬಿಎಸ್ಪಿ ನಡುವೆ ಒಂದು ದೊಡ್ಡ ಕಂದಕ ನಿರ್ಮಾಣವಾಗಿತ್ತು.

ಅದಾದ 26 ವರ್ಷಗಳ ನಂತರ, ಮೋದಿ-ಶಾ ಉತ್ತರಪ್ರದೇಶದಲ್ಲಿ 80ರಲ್ಲಿ 71 ಸೀಟು (ಅಪ್ನಾದಳ್ 2 ಸೇರಿದರೆ 73) ಗೆದ್ದಾಗ ಈ ಎರಡೂ ಪಕ್ಷಗಳೂ ತತ್ತರಿಸಿದ್ದವು. ಮುಂದೆ ಕೆಲ ವರ್ಷಗಳ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಬಹುಮತ ಪಡೆಯಿತು. ಅಷ್ಟೊತ್ತಿಗೆ ತಂದೆಯಿಂದ ಬೇರೆಯಾಗಿ ಗುರ್ತಿಸಿಕೊಂಡಿದ್ದ ನಿಕಟಪೂರ್ವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎಚ್ಚೆತ್ತುಕೊಂಡರು.
ಅದರ ಫಲವೇ ಅವರು, ಬಿಎಸ್ಪಿಯ ಮಾಯಾವತಿಯವರೊಂದಿಗೆ 25 ನಿಮಿಷಗಳ ಒಂದು ಮುಕ್ತ ಸಮಾಲೋಚನೆ, ಸಂಧಾನವನ್ನು ನಡೆಸಿದರು. ಇಡೀ ಮಾತುಕತೆಯ ಉದ್ದೇಶ ಬಿಜೆಪಿ, ಮುಖ್ಯವಾಗಿ, ಮೋದಿ-ಶಾಗಳನ್ನು ಅಧಿಕಾರದಿಂದ ದೂರ ಇಡುವುದಾಗಿತ್ತು.
ಸಭೆಯ ನಂತರ ಅಖಿಲೇಶ್ ಹೇಳಿದ್ದು ಒಂದೇ ಮಾತು: ‘ಎಸ್ಪಿ ಕಾರ್ಯಕರ್ತರು ಮಾಯಾವತಿಯನ್ನು ಅವಮಾನಿಸಿದರೆ ಅದು ನನ್ನನ್ನೇ ಅವಮಾನಿಸಿದಂತೆ….’

ಆಗ ಆರ್‍ಎಲ್‍ಡಿ ಮತ್ತು ಕಾಂಗ್ರೆಸ್ ಈ ಮೈತ್ರಿ ಜೊತೆ ಸೇರಿಕೊಂಡವು. ನಂತರ ಈ ಮಹಾಘಟಬಂಧನವು 3 ಲೋಕಸಭಾ ಉಪ ಚುನಾವಣೆಗಳನ್ನು ಭಾರಿ ಅಂತರದಿಂದ ಗೆದ್ದಿತು. ಆ ಮೂಲಕ ಬಿಜೆಪಿ ವಿರೋಧಿ ಮತಗಳು ಸೇರಿದರೆ ಮೋದಿ-ಶಾ ಆಟ ಝೀರೊ ಎಂಬುದನ್ನು ಸಾಬೀತು ಮಾಡಲಾಗಿತು. ಇದು ಕರ್ನಾಟಕದ ರಾಜಕಾರಣದ ಮೇಲೂ ಪ್ರಭಾವ ಬೀರಿದ ಪರಿಣಾಮವಾಗಿಯೇ ಇಲ್ಲಿ ಮೈತ್ರಿ ಸರ್ಕಾರ ರಚನೆಗೊಂಡಿತು. ಇಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆಯ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿತು.
ಈಗ ಬಿಜೆಪಿಯ ಅಂದಾಜಿತ ನಾಗಾಲೋಟಕ್ಕೆ ಉತ್ತರಪ್ರದೇಶವೇ ಮೊದಲ ಬ್ರೇಕ್ ಹಾಕುತ್ತಿದೆ. ಕರ್ನಾಟಕದಲ್ಲೂ ಬಿಜೆಪಿಗೆ ಬ್ರೇಕ್ ಬೀಳದೇ ಇರುತ್ತಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...