Homeಕರ್ನಾಟಕಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

ಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

- Advertisement -
- Advertisement -

ಶಿವಮೊಗ್ಗದಲ್ಲಿ ಆ ದಿನ ಕ್ರಿಸ್‌ಮಸ್ ಹಬ್ಬ. ಎಂದಿನಂತೆ ಶಾಂತಿ ಸಮಾಧಾನದಿಂದ ಕ್ರಿಸ್‌ಮಸ್ ಆಚರಿಸುವ ಕ್ರಿಶ್ಚಿಯನ್ನರು, ಹಬ್ಬದ ದಿನ ಏರ್ಪಡಿಸುವ ಮೆರವಣಿಗೆ ನೋಡುವುದೇ ಚಂದ. ಅವರ ಪ್ರಯರ್ ಮತ್ತು ನಡಿಗೆ ಸಮ್ಮಿಳನಗೊಂಡಿರುತ್ತದೆ; ರಸ್ತೆ ಬದಿಯಲ್ಲಿ ನಿಂತು ನೋಡುವ ಧರ್ಮಸಹಿಷ್ಣು ಜನರಿಗೆ ತಾವೂ ಹೋಗಿ ಶಾಂತಿ ನಡಿಗೆಯಲ್ಲಿ ಭಾಗವಹಿಸಬೇಕೆಂಬ ಆಸೆ ಮೂಡಿದರೂ ಆಶ್ಚರ್ಯವಿಲ್ಲ. ಕ್ರಿಶ್ಚಿಯನ್ನರ ಈ ಹಬ್ಬದಲ್ಲಿ ತಮ್ಮ ಹಿಂದೂ ಗೆಳೆಯರನ್ನ ಕರೆದು ಮಾಂಸಾಹಾರ, ಪಾನೀಯಗಳ ನೀಡಿ ಉಪಚರಿಸುವುದನ್ನು ಅನುಭವಿಸಿ ನೋಡುವುದೇ ಚಂದ. ತಮ್ಮ ಈ ಸಂಭ್ರಮವನ್ನು ಚಾಚು ತಪ್ಪದೆ ನಡೆಸುತ್ತ ಬಂದ ಕ್ರಿಶ್ಚಿಯನ್ನರಿಗೆ ಪ್ರಥಮ ಬಾರಿಗೆ ಈ ವರ್ಷ ಮನಸ್ಸು ಕದಡಿಹೋಗಿತ್ತು. ಕಾರಣ, ಹಿಂದೂ ಜಾಗರಣ ವೇದಿಕೆಯವರು ಮಾಡಿದ ಸಮ್ಮೇಳನ ಮತ್ತು ಅಲ್ಲಿಗೆ ಬಂದಿದ್ದ ಪ್ರಜ್ಞಾ ಸಿಂಗ್ ಎಂಬ ಸಂಸದೆ ಮಾಡಿದ ಭಾಷಣ. ’ಕ್ರಿಶ್ಚಿಯನ್ನರ ಮಿಷನರಿ ಶಾಲೆಗೆ ನಿಮ್ಮ ಮಕ್ಕಳನ್ನ ಕಳುಹಿಸಬೇಡಿ, ಅಲ್ಲಿ ಕಲಿಯುವ ಮಕ್ಕಳು ಸ್ವಾರ್ಥಿಗಳಾಗಿ ತಂದೆ ತಾಯಿಗಳನ್ನ ವೃದ್ಧಾಶ್ರಮಕ್ಕೆ ಸೇರಿಸುತ್ತವೆ. ಆದ್ದರಿಂದ ನಮ್ಮ ಸಂಸ್ಕೃತಿ ಸಂಸ್ಕಾರ ಕಲಿಸುವ ಶಾಲೆಗೆ ಕಳಿಸಿ’ ಎಂದು ಅವರು ಕರೆಕೊಟ್ಟಿದ್ದರು.

ಮಿಷನರಿ ಶಾಲೆಯಲ್ಲಿ ಓದಿದ ಮಕ್ಕಳೆಲ್ಲಾ ತಂದೆ ತಾಯಿಗಳನ್ನು ವೃದ್ಧರ ಆಶ್ರಮಕ್ಕೆ ಸೇರಿಸುತ್ತಾರೆ ಎಂದು ಯಾವ ಸಮೀಕ್ಷೆ ಹೇಳಿದೆ ಎಂದು ಸಾದ್ವಿಯವರನ್ನು ಯಾರೂ ಕೇಳಲಿಲ್ಲ; ಅವರೂ ಹೇಳುವ ಗೋಜಿಗೆ ಹೋಗಲಿಲ್ಲ. ಹೇಳಿಕೇಳಿ ಕ್ರಿಸ್‌ಮಸ್ ಹಬ್ಬದ ಸಂಭ್ರಮವನ್ನು ಹಾಳುಮಾಡಲೆಂದೇ ಆಯೋಜಿಸಿದ್ದ ಶೋಭಯಾತ್ರೆ ಅಂಗವಾಗಿ ಇಡೀ ಊರನ್ನು ಕೇಸರಿಮಯಗೊಳಿಸಿದ್ದ ಜಾಗರಣ ವೇದಿಕೆ ಜನರು, ಚರ್ಚಿನ ಎದುರೇ ಹೆಚ್ಚಾಗಿ ಕೇಸರಿ ಧ್ವಜಗಳನ್ನು ಹರಡಿದ್ದರು. ಅಲ್ಲದೆ ಆ ದಿನ ಮದ್ಯಮಾರಟವನ್ನು ನಿಷೇಧಿಸಿದ್ದರು. ಇದಕ್ಕೆ ಪ್ರತಿಯಾಗಿ ಕ್ರಿಶ್ಚಿಯನ್ನರ ಕಡೆಯಿಂದ ಯಾವ ಪ್ರತಿರೋಧವಾಗಲಿ ಪ್ರತಿಕ್ರಿಯೆಯಾಗಲಿ ಇರಲಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯೊಡ್ಡುವಂತೆ ಆದೇಶಿಸಿರುವ ಕ್ರಿಸ್ತನ ಬೋಧನೆಯನ್ನು ಒಂದು ಮಟ್ಟಕ್ಕಾದರೂ ಅನುಸರಿಸುವ ಈ ತೀರ ಅಲ್ಪಸಂಖ್ಯಾತ ಸಮುದಾಯ ಹೇಗೋ ಇಷ್ಟು ದಿನ ನೆಮ್ಮದಿಯನ್ನು ಅರಸಿ ಬದುಕುತ್ತಿದ್ದಾರೆ.

ಶಿವಮೊಗ್ಗದಲ್ಲಿ ಕ್ರಿಶ್ಚಿಯನ್ನರ ಹಬ್ಬಕ್ಕೆ ಹಿಂದೂ ಜಾಗರಣದವರು ತೋರಿದ ಅಸಹನೆ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿತು. ಜನರಿಂದ ಟೀಕೆಗೆ ಗುರಿಯಾದರು; ಅದರಲ್ಲೂ ಕ್ರಿಶ್ಚಿಯನ್ನರ ಶಾಲೆಯಲ್ಲಿ ಓದಿ ಸತ್ಪ್ರಜೆಗಳಾಗಿರುವ ಹೆಣ್ಣುಮಕ್ಕಳ ಆಕ್ರೋಶಕ್ಕೆ ಗುರಿಯಾದರು. ಇಲ್ಲಿ ಮನುಷ್ಯರನ್ನು ಮನುಷ್ಯರಾಗಿ ನೋಡದ ಮನಸ್ಸುಗಳಲ್ಲಿ ದ್ವೇಷವೂ ಶ್ರೇಣೀಕರಣಗೊಂಡಿರುತ್ತದೆ. ಸದ್ಯಕ್ಕೆ ಮುಸ್ಲಿಮರನ್ನ ತನ್ನ ಪರಮವೈರಿ ಎಂದು ಪರಿಗಣಿಸಿರುವ ಪ್ರಜ್ಞಾಸಿಂಗ್ ಮನಸ್ಸು ಬಿಡುವು ಸಿಕ್ಕಾಗ ಕ್ರಿಶ್ಚಿಯನ್ನರ ಮೇಲೆ ಹರಿಹಾಯುತ್ತೆ; ಆ ನಂತರ ದಲಿತರ ಮೇಲೆರಗುತ್ತದೆ. ಸದ್ಯಕ್ಕೆ ಅವರ ಪರಮ ವೈರಿ ಮುಸ್ಲಿಮರಾಗಿರುವುದರಿಂದ ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ನೇರವಾಗಿ ಮುಸ್ಲಿಂ ವಿರುದ್ಧ ಸಮರದ ಹೇಳಿಕೆ ಕೊಡುತ್ತಾರೆ. ಸಾಲದ್ದಕ್ಕೆ, ಭಾರತದ ಚೈತನ್ಯವಾದ ಮತ್ತು ಜಾತ್ಯತೀತ ಪರಿಕಲ್ಪನೆಯನ್ನ ಎತ್ತಿಹಿಡಿದ ಸಂವಿಧಾನದ ಅಡಿಯಲ್ಲಿ ಗೆದ್ದು ಬಂದು, ಸಂಸತ್ ಭವನದಲ್ಲಿ ಕುಳಿತ ಗೌರವಾನ್ವಿತ ಸಂಸದೆ ಬೇರೆ ಇವರು! (ಬಾಂಬ್ ಬ್ಲಾಸ್ಟ್ ಆಪಾದನೆಯಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ಇವರು, ಸದ್ಯ ಸಂಸದೆಯಾಗಿ ಅದರ ಸ್ಥಾನಮಾನಕ್ಕೂ ಬಿಡಿಗಾಸು ಗೌರವ ನೀಡುತ್ತಿಲ್ಲ!) ತಮ್ಮ ಸ್ಥಾನಮಾನದ ಘನತೆಯ ಅರಿವಿಲ್ಲದ ಇವರಿಂದ ಉದುರಿದ ಮಾತುಗಳು ಇಂತಿದ್ದವು: ’ಮುಂದೆ ಎಂತಹ ಸಂದರ್ಭ ಬರುತ್ತದೋ ಗೊತ್ತಿಲ್ಲ; ಆದ್ದರಿಂದ ನಮ್ಮ ಹೆಣ್ಣುಮಕ್ಕಳು ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತ ಮಾಡಿಸಿ ಇಟ್ಟುಕೊಳ್ಳಿ. ನಮ್ಮ ಹೆಣ್ಣುಮಕ್ಕಳು ನಡೆದಾಡುವ ಅಟಂಬಾಂಬುಗಳಂತಿರಬೇಕು’ ಎಂದು ಕರೆಕೊಟ್ಟಿದ್ದಾರೆ. ಜೊತೆಗೆ ತನ್ನ ಇಡೀ ಭಾಷಣವನ್ನು ಹಿಂಸಾಪ್ರಚೋದಕವಾಗಿ ಮಾಡಿಮುಗಿಸಿದರು. ಈ ಸಾಧ್ವಿಯ ಮಾತು ನೆರೆದವರಲ್ಲಿ ರೋಮಾಂಚನವುಂಟು ಮಾಡಿ ಚಪ್ಪಾಳೆ ಗಿಟ್ಟಿಸಿತು! ಅಂದರೆ ಈ ಭಾಷಣ ಬರೀ ಪ್ರಜ್ಞಾಸಿಂಗ್ ಭಾಷಣ ಮಾತ್ರವಾಗಿರದೆ ಎಲ್ಲಾ ಬಿಜೆಪಿಗಳು ಚಪ್ಪರಿಸುತ್ತಿದ್ದಾರೆ!

ಇದನ್ನೂ ಓದಿ: ಚುನಾವಣಾ ಪರ್ವ: ಜನವರಿಯಲ್ಲಿ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಭಾರತದ ಸಂವಿಧಾನಕ್ಕೆ ಗೌರವ ಕೊಡುವ ಯಾವೊಬ್ಬ ಬಿಜೆಪಿಯವನೂ ಇಲ್ಲವೇ? ಇದ್ದರೆ ಸಾಧ್ವಿಯ ಭಾಷಣವನ್ನು ಖಂಡಿಸಬೇಕಿತ್ತು ಮತ್ತು ಅವರನ್ನು ಪ್ರಶ್ನಿಸಬೇಕಿತ್ತು. ಆದರೆ ಅದಾಗಲಿಲ್ಲ. ಎಂತಹ ನರಹತ್ಯೆಯ ಮಾತನ್ನಾಡಿದರೂ ಅದನ್ನು ಖಂಡಿಸುವ-ಪ್ರಶ್ನಿಸುವ ಮನುಷ್ಯರು ಬಿಜೆಪಿಯಲ್ಲಿ ಯಾರೂ ಇಲ್ಲ. ಅವರುಗಳ ಅಂತರಂಗದ ಮಾತುಗಳು ಪ್ರಜ್ಞಾಸಿಂಗ್ ಬಾಯಲ್ಲಿ ಉದುರತ್ತವಷ್ಟೇ. ಪ್ರಜ್ಞಾಸಿಂಗರ ಚಾಕು ಚೂರಿ ಮಾತಿಗೆ ಹರ್ಷನನ್ನು ಕೊಂದವರ ಕಡೆಯವರ್‍ಯಾರೂ ತಲೆಕೆಡಿಸಿಕೊಂಡಂತಿಲ್ಲ. ಈ ಶಿವಮೊಗ್ಗದ ಇತಿಹಾಸವನ್ನು ಕೆದಕಿದರೆ ಕೋಮು ರಾಡಿ ಹಬ್ಬಿಸಿದಾಗಲೆಲ್ಲಾ ಕೊಲೆಗಳಾಗಿವೆ. ಕೊಲೆಯಾದವನ ಶವವನ್ನು ಊರ ತುಂಬ ಮೆರವಣಿಗೆ ಮಾಡಿ ಈಶ್ವರಪ್ಪನಂತಹವರು ಗೆದ್ದು ಬರುತ್ತಿದ್ದಾರೆ. ಆದರೆ ಈ ಬಾರಿ ಅವರು ತೊಂದರೆಯಲ್ಲಿದ್ದಾರೆ. ಅದಕ್ಕಾಗಿ ಹರ್ಷನ ಕೊಲೆಯನ್ನು ಜೀವಂತವಾಗಿಟ್ಟಿದ್ದಾರೆ ಮತ್ತು ಸಾವರ್ಕರ್ ಸಾಮ್ರಾಜ್ಯ ಎಂಬ ಕಾರ್ಯಕ್ರಮ ಮಾಡಿದ್ದಾರೆ. ಜೊತೆಗೆ ಪ್ರಜ್ಞಾಸಿಂಗ್ ಕರೆಸಿ ಚಾಕು ಚೂರಿ ಸಾಣೆ ಹಿಡಿಸಲು ಸಲಹೆಕೊಡಿಸಿದ್ದಾರೆ. ಈಶ್ವರಪ್ಪನವರ ಕೆಲಸಗಳಿಗೆ ಪ್ರತಿಯಾಗಿ ಕೆಲವು ಮುಸ್ಲಿಂ ಮೂಲಭೂತವಾದಿಗಳು ಕೂಡ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದ ಹಿಂದೂ ಮುಸ್ಲಿಂ ದ್ವೇಷಕ್ಕೆ ಶತಮಾನದ ಇತಿಹಾಸವಿದೆ. ಆದರೆ, ಇದರ ನಡುವೆ ರಂಜಾನ್ ಹಬ್ಬದಲ್ಲಿ ಬಿರಿಯಾನಿಗಾಗಿ ಹಂಬಲಿಸುವ ಹಿಂದೂಗಳಿದ್ದಾರೆ; ಹಾಗೆಯೇ ಕ್ರಿಸ್‌ಮಸ್ ಹಬ್ಬದ ಊಟಕ್ಕಾಗಿ ಕಾಯುವ ಕೆಲ ಹಿಂದೂಗಳು ಸದ್ದಿಲ್ಲದೆ ಧರ್ಮ ಸಾಮರಸ್ಯದ ಝರಿ ಬತ್ತದಂತೆ ಕಾಯ್ದುಕೊಂಡು ಹೋಗುತ್ತಿದ್ದಾರೆ. ಇವರ ನಡುವೆ ಪ್ರಜ್ಞಾ ಮತ್ತು ಈಶ್ವರಪ್ಪನ ದನಿ ಕರ್ಕಷವಾಗುತ್ತಿದೆಯಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...