Homeಕರ್ನಾಟಕಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

ಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

- Advertisement -
- Advertisement -

ಶಿವಮೊಗ್ಗದಲ್ಲಿ ಆ ದಿನ ಕ್ರಿಸ್‌ಮಸ್ ಹಬ್ಬ. ಎಂದಿನಂತೆ ಶಾಂತಿ ಸಮಾಧಾನದಿಂದ ಕ್ರಿಸ್‌ಮಸ್ ಆಚರಿಸುವ ಕ್ರಿಶ್ಚಿಯನ್ನರು, ಹಬ್ಬದ ದಿನ ಏರ್ಪಡಿಸುವ ಮೆರವಣಿಗೆ ನೋಡುವುದೇ ಚಂದ. ಅವರ ಪ್ರಯರ್ ಮತ್ತು ನಡಿಗೆ ಸಮ್ಮಿಳನಗೊಂಡಿರುತ್ತದೆ; ರಸ್ತೆ ಬದಿಯಲ್ಲಿ ನಿಂತು ನೋಡುವ ಧರ್ಮಸಹಿಷ್ಣು ಜನರಿಗೆ ತಾವೂ ಹೋಗಿ ಶಾಂತಿ ನಡಿಗೆಯಲ್ಲಿ ಭಾಗವಹಿಸಬೇಕೆಂಬ ಆಸೆ ಮೂಡಿದರೂ ಆಶ್ಚರ್ಯವಿಲ್ಲ. ಕ್ರಿಶ್ಚಿಯನ್ನರ ಈ ಹಬ್ಬದಲ್ಲಿ ತಮ್ಮ ಹಿಂದೂ ಗೆಳೆಯರನ್ನ ಕರೆದು ಮಾಂಸಾಹಾರ, ಪಾನೀಯಗಳ ನೀಡಿ ಉಪಚರಿಸುವುದನ್ನು ಅನುಭವಿಸಿ ನೋಡುವುದೇ ಚಂದ. ತಮ್ಮ ಈ ಸಂಭ್ರಮವನ್ನು ಚಾಚು ತಪ್ಪದೆ ನಡೆಸುತ್ತ ಬಂದ ಕ್ರಿಶ್ಚಿಯನ್ನರಿಗೆ ಪ್ರಥಮ ಬಾರಿಗೆ ಈ ವರ್ಷ ಮನಸ್ಸು ಕದಡಿಹೋಗಿತ್ತು. ಕಾರಣ, ಹಿಂದೂ ಜಾಗರಣ ವೇದಿಕೆಯವರು ಮಾಡಿದ ಸಮ್ಮೇಳನ ಮತ್ತು ಅಲ್ಲಿಗೆ ಬಂದಿದ್ದ ಪ್ರಜ್ಞಾ ಸಿಂಗ್ ಎಂಬ ಸಂಸದೆ ಮಾಡಿದ ಭಾಷಣ. ’ಕ್ರಿಶ್ಚಿಯನ್ನರ ಮಿಷನರಿ ಶಾಲೆಗೆ ನಿಮ್ಮ ಮಕ್ಕಳನ್ನ ಕಳುಹಿಸಬೇಡಿ, ಅಲ್ಲಿ ಕಲಿಯುವ ಮಕ್ಕಳು ಸ್ವಾರ್ಥಿಗಳಾಗಿ ತಂದೆ ತಾಯಿಗಳನ್ನ ವೃದ್ಧಾಶ್ರಮಕ್ಕೆ ಸೇರಿಸುತ್ತವೆ. ಆದ್ದರಿಂದ ನಮ್ಮ ಸಂಸ್ಕೃತಿ ಸಂಸ್ಕಾರ ಕಲಿಸುವ ಶಾಲೆಗೆ ಕಳಿಸಿ’ ಎಂದು ಅವರು ಕರೆಕೊಟ್ಟಿದ್ದರು.

ಮಿಷನರಿ ಶಾಲೆಯಲ್ಲಿ ಓದಿದ ಮಕ್ಕಳೆಲ್ಲಾ ತಂದೆ ತಾಯಿಗಳನ್ನು ವೃದ್ಧರ ಆಶ್ರಮಕ್ಕೆ ಸೇರಿಸುತ್ತಾರೆ ಎಂದು ಯಾವ ಸಮೀಕ್ಷೆ ಹೇಳಿದೆ ಎಂದು ಸಾದ್ವಿಯವರನ್ನು ಯಾರೂ ಕೇಳಲಿಲ್ಲ; ಅವರೂ ಹೇಳುವ ಗೋಜಿಗೆ ಹೋಗಲಿಲ್ಲ. ಹೇಳಿಕೇಳಿ ಕ್ರಿಸ್‌ಮಸ್ ಹಬ್ಬದ ಸಂಭ್ರಮವನ್ನು ಹಾಳುಮಾಡಲೆಂದೇ ಆಯೋಜಿಸಿದ್ದ ಶೋಭಯಾತ್ರೆ ಅಂಗವಾಗಿ ಇಡೀ ಊರನ್ನು ಕೇಸರಿಮಯಗೊಳಿಸಿದ್ದ ಜಾಗರಣ ವೇದಿಕೆ ಜನರು, ಚರ್ಚಿನ ಎದುರೇ ಹೆಚ್ಚಾಗಿ ಕೇಸರಿ ಧ್ವಜಗಳನ್ನು ಹರಡಿದ್ದರು. ಅಲ್ಲದೆ ಆ ದಿನ ಮದ್ಯಮಾರಟವನ್ನು ನಿಷೇಧಿಸಿದ್ದರು. ಇದಕ್ಕೆ ಪ್ರತಿಯಾಗಿ ಕ್ರಿಶ್ಚಿಯನ್ನರ ಕಡೆಯಿಂದ ಯಾವ ಪ್ರತಿರೋಧವಾಗಲಿ ಪ್ರತಿಕ್ರಿಯೆಯಾಗಲಿ ಇರಲಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯೊಡ್ಡುವಂತೆ ಆದೇಶಿಸಿರುವ ಕ್ರಿಸ್ತನ ಬೋಧನೆಯನ್ನು ಒಂದು ಮಟ್ಟಕ್ಕಾದರೂ ಅನುಸರಿಸುವ ಈ ತೀರ ಅಲ್ಪಸಂಖ್ಯಾತ ಸಮುದಾಯ ಹೇಗೋ ಇಷ್ಟು ದಿನ ನೆಮ್ಮದಿಯನ್ನು ಅರಸಿ ಬದುಕುತ್ತಿದ್ದಾರೆ.

ಶಿವಮೊಗ್ಗದಲ್ಲಿ ಕ್ರಿಶ್ಚಿಯನ್ನರ ಹಬ್ಬಕ್ಕೆ ಹಿಂದೂ ಜಾಗರಣದವರು ತೋರಿದ ಅಸಹನೆ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿತು. ಜನರಿಂದ ಟೀಕೆಗೆ ಗುರಿಯಾದರು; ಅದರಲ್ಲೂ ಕ್ರಿಶ್ಚಿಯನ್ನರ ಶಾಲೆಯಲ್ಲಿ ಓದಿ ಸತ್ಪ್ರಜೆಗಳಾಗಿರುವ ಹೆಣ್ಣುಮಕ್ಕಳ ಆಕ್ರೋಶಕ್ಕೆ ಗುರಿಯಾದರು. ಇಲ್ಲಿ ಮನುಷ್ಯರನ್ನು ಮನುಷ್ಯರಾಗಿ ನೋಡದ ಮನಸ್ಸುಗಳಲ್ಲಿ ದ್ವೇಷವೂ ಶ್ರೇಣೀಕರಣಗೊಂಡಿರುತ್ತದೆ. ಸದ್ಯಕ್ಕೆ ಮುಸ್ಲಿಮರನ್ನ ತನ್ನ ಪರಮವೈರಿ ಎಂದು ಪರಿಗಣಿಸಿರುವ ಪ್ರಜ್ಞಾಸಿಂಗ್ ಮನಸ್ಸು ಬಿಡುವು ಸಿಕ್ಕಾಗ ಕ್ರಿಶ್ಚಿಯನ್ನರ ಮೇಲೆ ಹರಿಹಾಯುತ್ತೆ; ಆ ನಂತರ ದಲಿತರ ಮೇಲೆರಗುತ್ತದೆ. ಸದ್ಯಕ್ಕೆ ಅವರ ಪರಮ ವೈರಿ ಮುಸ್ಲಿಮರಾಗಿರುವುದರಿಂದ ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ನೇರವಾಗಿ ಮುಸ್ಲಿಂ ವಿರುದ್ಧ ಸಮರದ ಹೇಳಿಕೆ ಕೊಡುತ್ತಾರೆ. ಸಾಲದ್ದಕ್ಕೆ, ಭಾರತದ ಚೈತನ್ಯವಾದ ಮತ್ತು ಜಾತ್ಯತೀತ ಪರಿಕಲ್ಪನೆಯನ್ನ ಎತ್ತಿಹಿಡಿದ ಸಂವಿಧಾನದ ಅಡಿಯಲ್ಲಿ ಗೆದ್ದು ಬಂದು, ಸಂಸತ್ ಭವನದಲ್ಲಿ ಕುಳಿತ ಗೌರವಾನ್ವಿತ ಸಂಸದೆ ಬೇರೆ ಇವರು! (ಬಾಂಬ್ ಬ್ಲಾಸ್ಟ್ ಆಪಾದನೆಯಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ಇವರು, ಸದ್ಯ ಸಂಸದೆಯಾಗಿ ಅದರ ಸ್ಥಾನಮಾನಕ್ಕೂ ಬಿಡಿಗಾಸು ಗೌರವ ನೀಡುತ್ತಿಲ್ಲ!) ತಮ್ಮ ಸ್ಥಾನಮಾನದ ಘನತೆಯ ಅರಿವಿಲ್ಲದ ಇವರಿಂದ ಉದುರಿದ ಮಾತುಗಳು ಇಂತಿದ್ದವು: ’ಮುಂದೆ ಎಂತಹ ಸಂದರ್ಭ ಬರುತ್ತದೋ ಗೊತ್ತಿಲ್ಲ; ಆದ್ದರಿಂದ ನಮ್ಮ ಹೆಣ್ಣುಮಕ್ಕಳು ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತ ಮಾಡಿಸಿ ಇಟ್ಟುಕೊಳ್ಳಿ. ನಮ್ಮ ಹೆಣ್ಣುಮಕ್ಕಳು ನಡೆದಾಡುವ ಅಟಂಬಾಂಬುಗಳಂತಿರಬೇಕು’ ಎಂದು ಕರೆಕೊಟ್ಟಿದ್ದಾರೆ. ಜೊತೆಗೆ ತನ್ನ ಇಡೀ ಭಾಷಣವನ್ನು ಹಿಂಸಾಪ್ರಚೋದಕವಾಗಿ ಮಾಡಿಮುಗಿಸಿದರು. ಈ ಸಾಧ್ವಿಯ ಮಾತು ನೆರೆದವರಲ್ಲಿ ರೋಮಾಂಚನವುಂಟು ಮಾಡಿ ಚಪ್ಪಾಳೆ ಗಿಟ್ಟಿಸಿತು! ಅಂದರೆ ಈ ಭಾಷಣ ಬರೀ ಪ್ರಜ್ಞಾಸಿಂಗ್ ಭಾಷಣ ಮಾತ್ರವಾಗಿರದೆ ಎಲ್ಲಾ ಬಿಜೆಪಿಗಳು ಚಪ್ಪರಿಸುತ್ತಿದ್ದಾರೆ!

ಇದನ್ನೂ ಓದಿ: ಚುನಾವಣಾ ಪರ್ವ: ಜನವರಿಯಲ್ಲಿ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಭಾರತದ ಸಂವಿಧಾನಕ್ಕೆ ಗೌರವ ಕೊಡುವ ಯಾವೊಬ್ಬ ಬಿಜೆಪಿಯವನೂ ಇಲ್ಲವೇ? ಇದ್ದರೆ ಸಾಧ್ವಿಯ ಭಾಷಣವನ್ನು ಖಂಡಿಸಬೇಕಿತ್ತು ಮತ್ತು ಅವರನ್ನು ಪ್ರಶ್ನಿಸಬೇಕಿತ್ತು. ಆದರೆ ಅದಾಗಲಿಲ್ಲ. ಎಂತಹ ನರಹತ್ಯೆಯ ಮಾತನ್ನಾಡಿದರೂ ಅದನ್ನು ಖಂಡಿಸುವ-ಪ್ರಶ್ನಿಸುವ ಮನುಷ್ಯರು ಬಿಜೆಪಿಯಲ್ಲಿ ಯಾರೂ ಇಲ್ಲ. ಅವರುಗಳ ಅಂತರಂಗದ ಮಾತುಗಳು ಪ್ರಜ್ಞಾಸಿಂಗ್ ಬಾಯಲ್ಲಿ ಉದುರತ್ತವಷ್ಟೇ. ಪ್ರಜ್ಞಾಸಿಂಗರ ಚಾಕು ಚೂರಿ ಮಾತಿಗೆ ಹರ್ಷನನ್ನು ಕೊಂದವರ ಕಡೆಯವರ್‍ಯಾರೂ ತಲೆಕೆಡಿಸಿಕೊಂಡಂತಿಲ್ಲ. ಈ ಶಿವಮೊಗ್ಗದ ಇತಿಹಾಸವನ್ನು ಕೆದಕಿದರೆ ಕೋಮು ರಾಡಿ ಹಬ್ಬಿಸಿದಾಗಲೆಲ್ಲಾ ಕೊಲೆಗಳಾಗಿವೆ. ಕೊಲೆಯಾದವನ ಶವವನ್ನು ಊರ ತುಂಬ ಮೆರವಣಿಗೆ ಮಾಡಿ ಈಶ್ವರಪ್ಪನಂತಹವರು ಗೆದ್ದು ಬರುತ್ತಿದ್ದಾರೆ. ಆದರೆ ಈ ಬಾರಿ ಅವರು ತೊಂದರೆಯಲ್ಲಿದ್ದಾರೆ. ಅದಕ್ಕಾಗಿ ಹರ್ಷನ ಕೊಲೆಯನ್ನು ಜೀವಂತವಾಗಿಟ್ಟಿದ್ದಾರೆ ಮತ್ತು ಸಾವರ್ಕರ್ ಸಾಮ್ರಾಜ್ಯ ಎಂಬ ಕಾರ್ಯಕ್ರಮ ಮಾಡಿದ್ದಾರೆ. ಜೊತೆಗೆ ಪ್ರಜ್ಞಾಸಿಂಗ್ ಕರೆಸಿ ಚಾಕು ಚೂರಿ ಸಾಣೆ ಹಿಡಿಸಲು ಸಲಹೆಕೊಡಿಸಿದ್ದಾರೆ. ಈಶ್ವರಪ್ಪನವರ ಕೆಲಸಗಳಿಗೆ ಪ್ರತಿಯಾಗಿ ಕೆಲವು ಮುಸ್ಲಿಂ ಮೂಲಭೂತವಾದಿಗಳು ಕೂಡ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದ ಹಿಂದೂ ಮುಸ್ಲಿಂ ದ್ವೇಷಕ್ಕೆ ಶತಮಾನದ ಇತಿಹಾಸವಿದೆ. ಆದರೆ, ಇದರ ನಡುವೆ ರಂಜಾನ್ ಹಬ್ಬದಲ್ಲಿ ಬಿರಿಯಾನಿಗಾಗಿ ಹಂಬಲಿಸುವ ಹಿಂದೂಗಳಿದ್ದಾರೆ; ಹಾಗೆಯೇ ಕ್ರಿಸ್‌ಮಸ್ ಹಬ್ಬದ ಊಟಕ್ಕಾಗಿ ಕಾಯುವ ಕೆಲ ಹಿಂದೂಗಳು ಸದ್ದಿಲ್ಲದೆ ಧರ್ಮ ಸಾಮರಸ್ಯದ ಝರಿ ಬತ್ತದಂತೆ ಕಾಯ್ದುಕೊಂಡು ಹೋಗುತ್ತಿದ್ದಾರೆ. ಇವರ ನಡುವೆ ಪ್ರಜ್ಞಾ ಮತ್ತು ಈಶ್ವರಪ್ಪನ ದನಿ ಕರ್ಕಷವಾಗುತ್ತಿದೆಯಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹನೂರು ಶೂಟೌಟ್ ಪ್ರಕರಣ: ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು.!

ಕಾವೇರಿ ವನ್ಯಜೀವಿ ಅಭಯಾರಣ್ಯದ ಹನೂರು ವ್ಯಾಪ್ತಿಯಲ್ಲಿ ಮೂವರು ಮೃತಪಟ್ಟಿದ್ದ ವಿವಾದಾತ್ಮಕ ಗುಂಡಿನ ದಾಳಿ ಪ್ರಕರಣಕ್ಕೆ ಇದೀಗ ಕಾನೂನು ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೂವರು ಅರಣ್ಯ ಸಿಬ್ಬಂದಿಗೆ ಕೊಳ್ಳೇಗಾಲದ ಮೊದಲ ಹೆಚ್ಚುವರಿ...

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...