Homeಕರ್ನಾಟಕಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

ಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

- Advertisement -
- Advertisement -

ಶಿವಮೊಗ್ಗದಲ್ಲಿ ಆ ದಿನ ಕ್ರಿಸ್‌ಮಸ್ ಹಬ್ಬ. ಎಂದಿನಂತೆ ಶಾಂತಿ ಸಮಾಧಾನದಿಂದ ಕ್ರಿಸ್‌ಮಸ್ ಆಚರಿಸುವ ಕ್ರಿಶ್ಚಿಯನ್ನರು, ಹಬ್ಬದ ದಿನ ಏರ್ಪಡಿಸುವ ಮೆರವಣಿಗೆ ನೋಡುವುದೇ ಚಂದ. ಅವರ ಪ್ರಯರ್ ಮತ್ತು ನಡಿಗೆ ಸಮ್ಮಿಳನಗೊಂಡಿರುತ್ತದೆ; ರಸ್ತೆ ಬದಿಯಲ್ಲಿ ನಿಂತು ನೋಡುವ ಧರ್ಮಸಹಿಷ್ಣು ಜನರಿಗೆ ತಾವೂ ಹೋಗಿ ಶಾಂತಿ ನಡಿಗೆಯಲ್ಲಿ ಭಾಗವಹಿಸಬೇಕೆಂಬ ಆಸೆ ಮೂಡಿದರೂ ಆಶ್ಚರ್ಯವಿಲ್ಲ. ಕ್ರಿಶ್ಚಿಯನ್ನರ ಈ ಹಬ್ಬದಲ್ಲಿ ತಮ್ಮ ಹಿಂದೂ ಗೆಳೆಯರನ್ನ ಕರೆದು ಮಾಂಸಾಹಾರ, ಪಾನೀಯಗಳ ನೀಡಿ ಉಪಚರಿಸುವುದನ್ನು ಅನುಭವಿಸಿ ನೋಡುವುದೇ ಚಂದ. ತಮ್ಮ ಈ ಸಂಭ್ರಮವನ್ನು ಚಾಚು ತಪ್ಪದೆ ನಡೆಸುತ್ತ ಬಂದ ಕ್ರಿಶ್ಚಿಯನ್ನರಿಗೆ ಪ್ರಥಮ ಬಾರಿಗೆ ಈ ವರ್ಷ ಮನಸ್ಸು ಕದಡಿಹೋಗಿತ್ತು. ಕಾರಣ, ಹಿಂದೂ ಜಾಗರಣ ವೇದಿಕೆಯವರು ಮಾಡಿದ ಸಮ್ಮೇಳನ ಮತ್ತು ಅಲ್ಲಿಗೆ ಬಂದಿದ್ದ ಪ್ರಜ್ಞಾ ಸಿಂಗ್ ಎಂಬ ಸಂಸದೆ ಮಾಡಿದ ಭಾಷಣ. ’ಕ್ರಿಶ್ಚಿಯನ್ನರ ಮಿಷನರಿ ಶಾಲೆಗೆ ನಿಮ್ಮ ಮಕ್ಕಳನ್ನ ಕಳುಹಿಸಬೇಡಿ, ಅಲ್ಲಿ ಕಲಿಯುವ ಮಕ್ಕಳು ಸ್ವಾರ್ಥಿಗಳಾಗಿ ತಂದೆ ತಾಯಿಗಳನ್ನ ವೃದ್ಧಾಶ್ರಮಕ್ಕೆ ಸೇರಿಸುತ್ತವೆ. ಆದ್ದರಿಂದ ನಮ್ಮ ಸಂಸ್ಕೃತಿ ಸಂಸ್ಕಾರ ಕಲಿಸುವ ಶಾಲೆಗೆ ಕಳಿಸಿ’ ಎಂದು ಅವರು ಕರೆಕೊಟ್ಟಿದ್ದರು.

ಮಿಷನರಿ ಶಾಲೆಯಲ್ಲಿ ಓದಿದ ಮಕ್ಕಳೆಲ್ಲಾ ತಂದೆ ತಾಯಿಗಳನ್ನು ವೃದ್ಧರ ಆಶ್ರಮಕ್ಕೆ ಸೇರಿಸುತ್ತಾರೆ ಎಂದು ಯಾವ ಸಮೀಕ್ಷೆ ಹೇಳಿದೆ ಎಂದು ಸಾದ್ವಿಯವರನ್ನು ಯಾರೂ ಕೇಳಲಿಲ್ಲ; ಅವರೂ ಹೇಳುವ ಗೋಜಿಗೆ ಹೋಗಲಿಲ್ಲ. ಹೇಳಿಕೇಳಿ ಕ್ರಿಸ್‌ಮಸ್ ಹಬ್ಬದ ಸಂಭ್ರಮವನ್ನು ಹಾಳುಮಾಡಲೆಂದೇ ಆಯೋಜಿಸಿದ್ದ ಶೋಭಯಾತ್ರೆ ಅಂಗವಾಗಿ ಇಡೀ ಊರನ್ನು ಕೇಸರಿಮಯಗೊಳಿಸಿದ್ದ ಜಾಗರಣ ವೇದಿಕೆ ಜನರು, ಚರ್ಚಿನ ಎದುರೇ ಹೆಚ್ಚಾಗಿ ಕೇಸರಿ ಧ್ವಜಗಳನ್ನು ಹರಡಿದ್ದರು. ಅಲ್ಲದೆ ಆ ದಿನ ಮದ್ಯಮಾರಟವನ್ನು ನಿಷೇಧಿಸಿದ್ದರು. ಇದಕ್ಕೆ ಪ್ರತಿಯಾಗಿ ಕ್ರಿಶ್ಚಿಯನ್ನರ ಕಡೆಯಿಂದ ಯಾವ ಪ್ರತಿರೋಧವಾಗಲಿ ಪ್ರತಿಕ್ರಿಯೆಯಾಗಲಿ ಇರಲಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯೊಡ್ಡುವಂತೆ ಆದೇಶಿಸಿರುವ ಕ್ರಿಸ್ತನ ಬೋಧನೆಯನ್ನು ಒಂದು ಮಟ್ಟಕ್ಕಾದರೂ ಅನುಸರಿಸುವ ಈ ತೀರ ಅಲ್ಪಸಂಖ್ಯಾತ ಸಮುದಾಯ ಹೇಗೋ ಇಷ್ಟು ದಿನ ನೆಮ್ಮದಿಯನ್ನು ಅರಸಿ ಬದುಕುತ್ತಿದ್ದಾರೆ.

ಶಿವಮೊಗ್ಗದಲ್ಲಿ ಕ್ರಿಶ್ಚಿಯನ್ನರ ಹಬ್ಬಕ್ಕೆ ಹಿಂದೂ ಜಾಗರಣದವರು ತೋರಿದ ಅಸಹನೆ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿತು. ಜನರಿಂದ ಟೀಕೆಗೆ ಗುರಿಯಾದರು; ಅದರಲ್ಲೂ ಕ್ರಿಶ್ಚಿಯನ್ನರ ಶಾಲೆಯಲ್ಲಿ ಓದಿ ಸತ್ಪ್ರಜೆಗಳಾಗಿರುವ ಹೆಣ್ಣುಮಕ್ಕಳ ಆಕ್ರೋಶಕ್ಕೆ ಗುರಿಯಾದರು. ಇಲ್ಲಿ ಮನುಷ್ಯರನ್ನು ಮನುಷ್ಯರಾಗಿ ನೋಡದ ಮನಸ್ಸುಗಳಲ್ಲಿ ದ್ವೇಷವೂ ಶ್ರೇಣೀಕರಣಗೊಂಡಿರುತ್ತದೆ. ಸದ್ಯಕ್ಕೆ ಮುಸ್ಲಿಮರನ್ನ ತನ್ನ ಪರಮವೈರಿ ಎಂದು ಪರಿಗಣಿಸಿರುವ ಪ್ರಜ್ಞಾಸಿಂಗ್ ಮನಸ್ಸು ಬಿಡುವು ಸಿಕ್ಕಾಗ ಕ್ರಿಶ್ಚಿಯನ್ನರ ಮೇಲೆ ಹರಿಹಾಯುತ್ತೆ; ಆ ನಂತರ ದಲಿತರ ಮೇಲೆರಗುತ್ತದೆ. ಸದ್ಯಕ್ಕೆ ಅವರ ಪರಮ ವೈರಿ ಮುಸ್ಲಿಮರಾಗಿರುವುದರಿಂದ ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ನೇರವಾಗಿ ಮುಸ್ಲಿಂ ವಿರುದ್ಧ ಸಮರದ ಹೇಳಿಕೆ ಕೊಡುತ್ತಾರೆ. ಸಾಲದ್ದಕ್ಕೆ, ಭಾರತದ ಚೈತನ್ಯವಾದ ಮತ್ತು ಜಾತ್ಯತೀತ ಪರಿಕಲ್ಪನೆಯನ್ನ ಎತ್ತಿಹಿಡಿದ ಸಂವಿಧಾನದ ಅಡಿಯಲ್ಲಿ ಗೆದ್ದು ಬಂದು, ಸಂಸತ್ ಭವನದಲ್ಲಿ ಕುಳಿತ ಗೌರವಾನ್ವಿತ ಸಂಸದೆ ಬೇರೆ ಇವರು! (ಬಾಂಬ್ ಬ್ಲಾಸ್ಟ್ ಆಪಾದನೆಯಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ಇವರು, ಸದ್ಯ ಸಂಸದೆಯಾಗಿ ಅದರ ಸ್ಥಾನಮಾನಕ್ಕೂ ಬಿಡಿಗಾಸು ಗೌರವ ನೀಡುತ್ತಿಲ್ಲ!) ತಮ್ಮ ಸ್ಥಾನಮಾನದ ಘನತೆಯ ಅರಿವಿಲ್ಲದ ಇವರಿಂದ ಉದುರಿದ ಮಾತುಗಳು ಇಂತಿದ್ದವು: ’ಮುಂದೆ ಎಂತಹ ಸಂದರ್ಭ ಬರುತ್ತದೋ ಗೊತ್ತಿಲ್ಲ; ಆದ್ದರಿಂದ ನಮ್ಮ ಹೆಣ್ಣುಮಕ್ಕಳು ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತ ಮಾಡಿಸಿ ಇಟ್ಟುಕೊಳ್ಳಿ. ನಮ್ಮ ಹೆಣ್ಣುಮಕ್ಕಳು ನಡೆದಾಡುವ ಅಟಂಬಾಂಬುಗಳಂತಿರಬೇಕು’ ಎಂದು ಕರೆಕೊಟ್ಟಿದ್ದಾರೆ. ಜೊತೆಗೆ ತನ್ನ ಇಡೀ ಭಾಷಣವನ್ನು ಹಿಂಸಾಪ್ರಚೋದಕವಾಗಿ ಮಾಡಿಮುಗಿಸಿದರು. ಈ ಸಾಧ್ವಿಯ ಮಾತು ನೆರೆದವರಲ್ಲಿ ರೋಮಾಂಚನವುಂಟು ಮಾಡಿ ಚಪ್ಪಾಳೆ ಗಿಟ್ಟಿಸಿತು! ಅಂದರೆ ಈ ಭಾಷಣ ಬರೀ ಪ್ರಜ್ಞಾಸಿಂಗ್ ಭಾಷಣ ಮಾತ್ರವಾಗಿರದೆ ಎಲ್ಲಾ ಬಿಜೆಪಿಗಳು ಚಪ್ಪರಿಸುತ್ತಿದ್ದಾರೆ!

ಇದನ್ನೂ ಓದಿ: ಚುನಾವಣಾ ಪರ್ವ: ಜನವರಿಯಲ್ಲಿ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಭಾರತದ ಸಂವಿಧಾನಕ್ಕೆ ಗೌರವ ಕೊಡುವ ಯಾವೊಬ್ಬ ಬಿಜೆಪಿಯವನೂ ಇಲ್ಲವೇ? ಇದ್ದರೆ ಸಾಧ್ವಿಯ ಭಾಷಣವನ್ನು ಖಂಡಿಸಬೇಕಿತ್ತು ಮತ್ತು ಅವರನ್ನು ಪ್ರಶ್ನಿಸಬೇಕಿತ್ತು. ಆದರೆ ಅದಾಗಲಿಲ್ಲ. ಎಂತಹ ನರಹತ್ಯೆಯ ಮಾತನ್ನಾಡಿದರೂ ಅದನ್ನು ಖಂಡಿಸುವ-ಪ್ರಶ್ನಿಸುವ ಮನುಷ್ಯರು ಬಿಜೆಪಿಯಲ್ಲಿ ಯಾರೂ ಇಲ್ಲ. ಅವರುಗಳ ಅಂತರಂಗದ ಮಾತುಗಳು ಪ್ರಜ್ಞಾಸಿಂಗ್ ಬಾಯಲ್ಲಿ ಉದುರತ್ತವಷ್ಟೇ. ಪ್ರಜ್ಞಾಸಿಂಗರ ಚಾಕು ಚೂರಿ ಮಾತಿಗೆ ಹರ್ಷನನ್ನು ಕೊಂದವರ ಕಡೆಯವರ್‍ಯಾರೂ ತಲೆಕೆಡಿಸಿಕೊಂಡಂತಿಲ್ಲ. ಈ ಶಿವಮೊಗ್ಗದ ಇತಿಹಾಸವನ್ನು ಕೆದಕಿದರೆ ಕೋಮು ರಾಡಿ ಹಬ್ಬಿಸಿದಾಗಲೆಲ್ಲಾ ಕೊಲೆಗಳಾಗಿವೆ. ಕೊಲೆಯಾದವನ ಶವವನ್ನು ಊರ ತುಂಬ ಮೆರವಣಿಗೆ ಮಾಡಿ ಈಶ್ವರಪ್ಪನಂತಹವರು ಗೆದ್ದು ಬರುತ್ತಿದ್ದಾರೆ. ಆದರೆ ಈ ಬಾರಿ ಅವರು ತೊಂದರೆಯಲ್ಲಿದ್ದಾರೆ. ಅದಕ್ಕಾಗಿ ಹರ್ಷನ ಕೊಲೆಯನ್ನು ಜೀವಂತವಾಗಿಟ್ಟಿದ್ದಾರೆ ಮತ್ತು ಸಾವರ್ಕರ್ ಸಾಮ್ರಾಜ್ಯ ಎಂಬ ಕಾರ್ಯಕ್ರಮ ಮಾಡಿದ್ದಾರೆ. ಜೊತೆಗೆ ಪ್ರಜ್ಞಾಸಿಂಗ್ ಕರೆಸಿ ಚಾಕು ಚೂರಿ ಸಾಣೆ ಹಿಡಿಸಲು ಸಲಹೆಕೊಡಿಸಿದ್ದಾರೆ. ಈಶ್ವರಪ್ಪನವರ ಕೆಲಸಗಳಿಗೆ ಪ್ರತಿಯಾಗಿ ಕೆಲವು ಮುಸ್ಲಿಂ ಮೂಲಭೂತವಾದಿಗಳು ಕೂಡ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದ ಹಿಂದೂ ಮುಸ್ಲಿಂ ದ್ವೇಷಕ್ಕೆ ಶತಮಾನದ ಇತಿಹಾಸವಿದೆ. ಆದರೆ, ಇದರ ನಡುವೆ ರಂಜಾನ್ ಹಬ್ಬದಲ್ಲಿ ಬಿರಿಯಾನಿಗಾಗಿ ಹಂಬಲಿಸುವ ಹಿಂದೂಗಳಿದ್ದಾರೆ; ಹಾಗೆಯೇ ಕ್ರಿಸ್‌ಮಸ್ ಹಬ್ಬದ ಊಟಕ್ಕಾಗಿ ಕಾಯುವ ಕೆಲ ಹಿಂದೂಗಳು ಸದ್ದಿಲ್ಲದೆ ಧರ್ಮ ಸಾಮರಸ್ಯದ ಝರಿ ಬತ್ತದಂತೆ ಕಾಯ್ದುಕೊಂಡು ಹೋಗುತ್ತಿದ್ದಾರೆ. ಇವರ ನಡುವೆ ಪ್ರಜ್ಞಾ ಮತ್ತು ಈಶ್ವರಪ್ಪನ ದನಿ ಕರ್ಕಷವಾಗುತ್ತಿದೆಯಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...