Homeಮುಖಪುಟವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳ ತುಣುಕುಗಳು

ವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳ ತುಣುಕುಗಳು

ನಮ್ಮ ಪ್ರಧಾನಿ ಮೋದಿ ಅವರು ಸಹ ಕೆನಡಿವಾದಿಗಳು ಅಂತ ಕಾಣತದ. ನಾಲ್ಕು ಸಲೆ ಭಾಷಣ ಮಾಡಿದರೂ ಸಹಿತ ನೀವು ಹಿಂಗ ಮಾಡ್ರಿ, ನೀವು ಹಂಗ ಮಾಡಬ್ಯಾಡ್ರಿ ಅಂತ ಹೇಳಿದರು ಹೊರತು, ನಾವು ಏನು ಮಾಡಬೇಕು, ಏನು ಮಾಡಲಿಕ್ಕೆ ಹತ್ತೇವಿ ಅನ್ನೋದನ್ನ ಹೇಳಲಿಲ್ಲ.

- Advertisement -
- Advertisement -

“ಜನರಿಂದ, ಜನರಿಗಾಗಿ ನಡೆಯುವ ಜನರ ಸರಕಾರವನ್ನು ಈ ವಿಶ್ವದಿಂದ ಅಳಿಸಲು ಯಾರಿಗೂ ಸಾಧ್ಯವಿಲ್ಲ,ʼʼ ಈ ಮಾತು ಯಾರಿಗೆ ನನಪಿಲ್ಲ? ಪ್ರಾಥಮಿಕ ಸಾಲಿಯೊಳಗಿನ ಪ್ರಜಾಪ್ರಭುತ್ವದ ಪಾಠ ಕಲಿಯುವಾಗ ನಮಗೆಲ್ಲಾರಿಗೂ ಕೇಳಿಸಿದ ಮೊದಲನೇ ವ್ಯಾಖ್ಯಾನ ಇದು.

ಇದು ಅಮೇರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಗೆಟಿಸಬರ್ಗ್ ಎಂಬ ನಗರದಾಗ 1863ರೊಳಗ ಹುತಾತ್ಮ ಸೈನಿಕರ ಸ್ಮಾರಕ ಉದ್ಘಾಟಿಸುವಾಗ ಮಾಡಿದ ಭಾಷಣದ ಕೊನೆಯ ಸಾಲು.

ಕೇವಲ 275 ಶಬ್ದಗಳ, 3-4 ನಿಮಿಷದ ಈ ಭಾಷಣ ವಿಶ್ವದ ಇತಿಹಾಸದಲ್ಲಿ ದಾಖಲಾಗೇದ. ಅದು ಗುಲಾಮಗಿರಿಯನ್ನು ನಿರ್ಮೂಲನೆ ಮಾಡೋ ಲಿಂಕನ್ ಅವರ ನಿಲುವನ್ನು ಗಟ್ಟಿಯಾಗಿಸಿತು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಲಿಯುವ ಜಗತ್ತಿನ ನೂರಾರು ದೇಶಗಳ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಪಾಠವಾಯಿತು.

ಮಹಾಮಹಿಮ ಪಂತ ಪ್ರಧಾನರು ಇಲ್ಲಿವರೆಗೆ ಕೊರೊನಾದ ಬಗ್ಗೆ ನಾಲ್ಕು ಭಾಷಣ ಮಾಡ್ಯಾರ. ಅದರಾಗ ಮೂರು ಠೀವಿದಾಗ ಬಂದಾವು, ಒಂದು ರೇಡಿಯೋದಾಗ ಬಂದೇತಿ. ಅವು ಭಾರತದ ದಿಕ್ಕು ಬದಲಿಸಿದ ಭಾಷಣಗಳು ಅಂತ ಹೇಳಿ ಅವರ ಬೆಂಬಲಿಗರ ಅಂಬೋಣ.

ಹಂಗಾರ ಈ ಸಲಾ ವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳನ್ನು ಪುನರ್ ಮನನ ಮಾಡೋಣ.

“ಅಮೇರಿಕಾದ ನನ್ನ ಸಹೋದರ -ಸಹೋದರಿಯರೇ” ಅಂತ ಶುರುವಾಗೋ ಭಾಷಣ ಮಾಡಿದ್ದು ಯಾರು ಅಂತ ಕೇಳಿದರ ಎಲ್ಲಾರು ಕೈ ಎತ್ತುತಾರ. ಸ್ವಾಮಿ ವಿವೇಕಾನಂದ ಅವರು ಷಿಕಾಗೋದಾಗ ಮಾಡಿದ ಐದು ದಿನಗಳ ಭಾಷಣ ಸರಣಿಯೊಳಗ ಇದು ಎಲ್ಲಾರಿಗಿಂತ ಜನಪ್ರಿಯ ಭಾಷಣ. ಇದು ವಿಶ್ವಕ್ಕ ಭಾರತೀಯ ಸಂಸ್ಕೃತಿಯನ್ನ, ಹಿಂದೂ ಧರ್ಮವನ್ನು ಪರಿಚಯಿಸಿತು. ಭಾರತದ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಾಗ ಎತ್ತಿ ಹಿಡೀತುʼʼ ಅನ್ನೋದು ಸರ್ವಾಭಿಪ್ರಾಯ. ಜೀವನ ಪೂರ್ತಿ ಜನಪರ ಕೆಲಸ ಮಾಡಿದ ಸ್ವಾಮಿ ವಿವೇಕಾನಂದರನ್ನು ಈ ಭಾಷಣ ಒಂದರಿಂದನ ಬಲ್ಲವರು ಭಾಳ ಇದ್ದಾರ.

ಜವಾಹರಲಾಲ ನೆಹರೂ ಅವರು ಸ್ವಾತಂತ್ರದ ರಾತ್ರಿ ಮಾಡಿದ ʻʻನಿಯತಿಯೊಂದಿಗೆ ನಮ್ಮ ಮಿಲನದ ಒಪ್ಪಂದʼʼದ ಭಾಷಣ ಜನಪ್ರಿಯವಾಗಿದೆ. ಅದಕ್ಕಿಂತ ಮುಖ್ಯವಾದ ಅವರ ಭಾಷಣವೊಂದಿದೆ. ಉತ್ತರ ಪ್ರದೇಶ ಹಳ್ಳಿಯ ಮಾರ್ಗವಾಗಿ ಮಧ್ಯರಾತ್ರಿ ಪ್ರಯಾಣ ಬೆಳೆಸಿದ್ದ ನೆಹರೂ ಅವರನ್ನು ಅಲ್ಲಿಯ ಜನ ʻಪ್ರಧಾನ ಮಂತ್ರಿಯನ್ನು ನೋಡುವುದಕ್ಕಾಗಿʼ ಅವರ ಕಾರನ್ನು ನಿಲ್ಲಿಸುತ್ತಾರ. ಆಗ ಹೊರ ಬಂದ ನೆಹರೂ ಅವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ʻʻನೀವೆಲ್ಲಾ ʻಜೈ ಹಿಂದʼ ಅಂತ ಘೋಷಣೆ ಕೂಗುತ್ತಾ ಇದ್ದೀರಲ್ಲಾ, ಹಾಗಂದರೇನು?ʼʼ ಅವರು ಇದು ʻʻಈ ದೇಶಕ್ಕ, ನಿಮಗೆ, ನಿಮ್ಮ ಸರಕಾರಕ್ಕೆ ಜೈಕಾರ ಅಂತ ಹೇಳಿದಾಗ, ʻʻಅಲ್ಲ, ಇದು ನಿಮಗೆ ನೀವೆ ಜೈಕಾರ ಹಾಕಿಕೊಂಡಂತೆ. ಇದನ್ನು ನೀವು ಚನ್ನಾಗಿ ಅರಿತುಕೊಳ್ಳಿʼʼ ಅಂತ ಹೇಳತಾರ.

ಅಮೇರಿಕಾದ ಸ್ವಾತಂತ್ರ‍್ಯ ಹೋರಾಟಗಾರರು ಹಾಗೂ ಸಂಸ್ಥಾಪಕ ನಾಯಕರಲ್ಲಿ ಒಬ್ಬನಾದ ಪ್ಯಾಟ್ರಿಕ್ ಹೆನ್ರಿ ಅವರು ಭಾಷಣದಲ್ಲಿ ಹೇಳಿದ ʻʻನನಗೆ ಸ್ವಾತಂತ್ರ‍್ಯ ಕೊಡಿ ಅಥವಾ ಮರಣವನ್ನು ನೀಡಿʼʼ ಅನ್ನುವ ಮಾತು ಇಂಗ್ಲಂಡಿನ ವಸಾಹತುಶಾಹಿ ನೀತಿಯ ವಿರುದ್ಧ ಹೋರಾಟದಲ್ಲಿ ಮೈಲಿಗಲ್ಲಾಗಿ ಪರಿಗಣಿಸಿತು. ಇದೇ ಧಾಟಿಯ ಮಾಡು ಇಲ್ಲವೇ ಮಡಿ ಅನ್ನುವ ಮಹಾತ್ಮಾ ಗಾಂಧಿಯವರ ಭಾರತ ಬಿಟ್ಟು ತೊಲಗಿ ಭಾಷಣ ಬ್ರಿಟಿಷರ ವಿರುದ್ಧ ʻಯುದ್ಧಘೋಷʼವಾಗಿ ಪರಿಗಣಿಸಿತು.

ಬಾಲಗಂಗಾಧರ ತಿಲಕರ ʻʻಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆʼʼ ಎನ್ನುವ ಮಾತು ಅವರನ್ನು ಅಮರರಾಗಿಸಿತು.

ದುಂಡು ಮೇಜಿನ ಪರಿಷತ್ತಿನ ಸಭೆಯೊಳಗ ಡಾ. ಅಂಬೇಡ್ಕರ್ ‘ಸಾಮಾಜಿಕ -ಆರ್ಥಿಕ ಸ್ವಾತಂತ್ರ‍್ಯವಿಲ್ಲದ ರಾಜಕೀಯ ಸ್ವಾತಂತ್ರ‍್ಯ ಅರ್ಥಹೀನ’ ಅಂತ ಹೇಳಿದ್ದು, ಪಂಜಾಬಿನ ಜಾತ ಪಾತ ತೋಡಕ ಮಂಡಲದಲ್ಲಿ ಮಾಡಿದ ಜಾತಿ ವಿನಾಶ ಭಾಷಣಗಳು ಐತಿಹಾಸಿಕ. ಅವರ ವಿರೋಧಿಗಳು ಸಹ ಉಲ್ಲೇಖಿಸುವ ʻʻಸಕಲ ಸವಲತ್ತುಗಳನ್ನು ಪಡೆದು ಬೆಳೆದ ನನ್ನವರೇ ನನಗೆ ವಿಶ್ವಾಸದ್ರೋಹ ಮಾಡಿದರು. ಅವರು ತಮ್ಮ ದೌರ್ಭಾಗ್ಯಪೂರ್ಣ ಅಣ್ಣ-ತಮ್ಮಂದಿರ ಕಾಳಜಿ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ತಮ್ಮ ಗಳಿಕೆಯ ಶೇಕಡಾ ಐದರಷ್ಟಾನದರೂ ಸಮಾಜದ ಕಲ್ಯಾಣಕ್ಕೆ ಬಳಸಬೇಕುʼʼ ಅನ್ನುವ 1956ರ ಹಿಂದಿ ಭಾಷಣ ಸಹ ಗಮನಾರ್ಹ.

ಅಮೇರಿಕಾದ ವರ್ಣಬೇಧ ನೀತಿಯ ವಿರುದ್ಧ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಅವರ ʻನನಗೊಂದು ಕನಸಿದೆʼ ಭಾಷಣ ಜಗತ್ತಿನಾದ್ಯಂತ ಎಲ್ಲಿ ಶೋಷಣೆ ಕಂಡುಬಂದರೂ ಅದನ್ನು ವಿರೋಧಿಸುವವರಿಗೆ ಮಂತ್ರ ವಾಯಿತು.

ʻʻಸಮಾನತೆ ಹಾಗೂ ಸ್ವಾತಂತ್ರ‍್ಯ ನಮ್ಮ ಜೀವ ಉಳಿಸುವ ಮೌಲ್ಯಗಳು. ಇವುಗಳನ್ನು ಪಡೆಯಲು ನಾನು ನನ್ನ ಜೀವನದಾದ್ಯಂತ ಹೋರಾಡುತ್ತೇನೆ. ಅಗತ್ಯ ಬಿದ್ದರೆ ನನ್ನ ಪ್ರಾಣ ಕೊಡಲೂ ಸಹ ತಯಾರುʼʼ ಎಂದು ರಿವೋನಿಯಾದ ನ್ಯಾಯಾಲಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ನೆಲ್ಸನ್ ಮಂಡೇಲಾ ಮಾಡಿದ ಭಾಷಣ ಇಡೀ ಆಫ್ರಿಕಾ ಖಂಡದಲ್ಲಿ ಮಾರ್ದನಿ ಗೈದಿತು.

ಅಮೇರಿಕಾದ ಕರಿಯರ ನಾಯಕ ಫ್ರೆಡರಿಕ್ ಡಗ್ಲಸ್ ಅವರು ʻʻನೀವು ನಮಗೆ ತೋರಿಸುತ್ತಿರುವ ಕರುಣೆ ಸುಳ್ಳು ಮತ್ತು ತೋರಿಕೆಯಿಂದ ಕೂಡಿದ್ದು. ಅದು ನಿನ್ನೆಯೂ ಸುಳ್ಳಾಗಿತ್ತು. ಇಂದೂ ಸುಳ್ಳಾಗಿದೆ, ನಾಳೆಯೂ ಸುಳ್ಳಾಗಿಯೇ ಇರಲಿದೆʼʼ ಅಂತ ರಸ್ತೆ ಬದಿಯಲ್ಲಿ ಮಾಡಿದ ಭಾಷಣ ಅನೇಕ ಬಿಳಿಯರ ಹೃದಯ ಪರಿವರ್ತನೆಗೆ ಕಾರಣವಾಯಿತು.

ಜರ್ಮನಿಯ ವಿರುದ್ಧ ಹೋರಾಡಲು ಕೇವಲ ಒಂದು ವಾರ ಸಮಯ ಇದ್ದಾಗ ಬ್ರಿಟಿಷ್ ಪ್ರಧಾನಿ ವಿನಸ್ಟನ್ ಚರ್ಚಿಲ್ ಅವರು ಮಾಡಿದ ‘ನಾವು ಸತ್ತರೂ ಗೆದ್ದು ಸಾಯುತ್ತೇವೆ, ಇದ್ದರೂ ಗೆಲ್ಲುತ್ತೇವೆ. ಸಮುದ್ರ ದಂಡೆಯಲ್ಲೂ ಹೋರಾಡುತ್ತೇವೆ, ರಸ್ತೆಯಲ್ಲಿಯೂ ಹೋರಾಡುತ್ತೇವೆ, ಆಕಾಶದಲ್ಲಿ, ಸಮುದ್ರದಲ್ಲಿಯೂ ಹೋರಾಡುತ್ತೇವೆ. ನಮಗೆ ಇರುವ ಗುರು ಗೆಲುವು ಒಂದೇ’ ಅಂತ ಮಾಡಿದ ರೇಡಿಯೋ ಭಾಷಣ, ಅಲ್ಲಿನ ಯುವಕರನ್ನು ರೊಚ್ಚಿಗೆಬ್ಬಿಸಿತು. ಅವರು ದೊಡ್ಡ ಸಂಖ್ಯೆಯಲ್ಲಿ ಸೈನ್ಯ ಸೇರಿದರು, ಜರ್ಮನಿಯನ್ನು ಸೋಲಿಸಿದರು.

ಅಮೇರಿಕಾದ ಮಾಜಿ ಅಧ್ಯಕ್ಷ ಜಾನ್ ಕೆನಡಿ ಅವರು ಯಾವ ಮುಹೂರ್ತದಲ್ಲಿ ನಿಮ್ಮ ದೇಶ ನಿಮಗೇನು ಮಾಡಿದೆ ಅಂತ ಕೇಳಬೇಡಿ. ನೀವು ನಿಮ್ಮ ದೇಶಕ್ಕೆ ಏನು ಮಾಡಿದ್ದೀರಿ ಅಂತ ಕೇಳಿ ಅಂತ ಹೇಳಿದರೋ ಗೊತ್ತಿಲ್ಲ. ಇವತ್ತಿನ ಅನೇಕ ನಾಯಕರು ಅದೇ ಧಾಟಿಯಲ್ಲಿ ಮಾತನಾಡಲಿಕ್ಕೆ ಹತ್ಯಾರ. ನಮ್ಮ ಪ್ರಧಾನಿ ಮೋದಿ ಅವರು ಸಹ ಕೆನಡಿವಾದಿಗಳು ಅಂತ ಕಾಣತದ. ನಾಲ್ಕು ಸಲೆ ಭಾಷಣ ಮಾಡಿದರೂ ಸಹಿತ ನೀವು ಹಿಂಗ ಮಾಡ್ರಿ, ನೀವು ಹಂಗ ಮಾಡಬ್ಯಾಡ್ರಿ ಅಂತ ಹೇಳಿದರು ಹೊರತು, ನಾವು ಏನು ಮಾಡಬೇಕು, ಏನು ಮಾಡಲಿಕ್ಕೆ ಹತ್ತೇವಿ ಅನ್ನೋದನ್ನ ಹೇಳಲಿಲ್ಲ.

ಅಮೇರಿಕಾ ಸ್ವಾತಂತ್ರ‍್ಯದ 300 ವರ್ಷದ ನಂತರ ಗೆದ್ದ ಕರಿಯ ಬರಾಕ್ ಒಬಾಮಾ ಅವರು ಮಾಡಿದ ಯಸ್ ವಿ ಕ್ಯಾನ್ ಭಾಷಣವನ್ನು ನೀವು ಮತ್ತ ಮತ್ತ ನೋಡಿದರ ಒಂದು ಮಜಾ ವಿಷಯ ತಿಳೀತದ. ಅವರು ನ್ಯೂಹೆಂಪಶಾಯರ್‌ನ ನೋಷುವಾದಲ್ಲಿ ಅವರ ಬೆಂಬಲಿಗರ ಮಧ್ಯ ಭಾಷಣ ಮಾಡತಾರ. ಬೆಂಬಲಿಗರ ʻʻಓಬಾಮಾ, ಓಬಾಮಾʼʼ ಅನ್ನುವ ಘೋಷಣೆಗಳ ನಡುವೆ ಆರಂಭವಾದ ಭಾಷಣ ಯಸ್ ವಿ ಕ್ಯಾನ್ ಅಂತ ಮುಕ್ತಾಯ ಆಗತದ.

ನಮ್ಮಲ್ಲೂ ಹಾಗಾಗಬಹುದೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬಲಾಢ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ..’; ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ

'ಬಲಾಢ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ ಮಾಡಲಾಗಿದೆ; ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ ಎಂದು 'ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ' ಸಿದ್ದರಾಮಯ್ಯ ಅವರ ಬಜೆಟ್‌ ಕುರಿತು ಅಸಮಾಧಾನ ಹೊರಹಾಕಿದೆ. ಈ ಕುರಿತು...

ಒಳಮೀಸಲಾತಿ ಇಲ್ಲದೇ ಉದ್ಯೋಗ ಭರ್ತಿಗೆ ವಿರೋಧ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ

ಒಳಮೀಸಲಾತಿ ಇಲ್ಲದೇ 56 ಸಾವಿರ ಉದ್ಯೋಗ ಭರ್ತಿಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಒಳಮೀಸಲಾತಿ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು, ಇದೇ ತಿಂಗಳ 12 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಈ...

ನಾಸಿರ್–ಜುನೈದ್ ಕೊಲೆ ಪ್ರಕರಣ: ಜಾಮೀನಿನ ಮೇಲೆ ಹೊರಬಂದ ಹಿಂದುತ್ವ ಕಾರ್ಯಕರ್ತ ಮೋನು ಮಾನೇಸರ್ ಗೆ ಗುರುಗ್ರಾಮದಲ್ಲಿ ಭವ್ಯ ಸ್ವಾಗತ 

2023 ರಲ್ಲಿ ಹರಿಯಾಣದಲ್ಲಿ ಗೋರಕ್ಷಣೆ ಹೆಸರಿನಲ್ಲಿ ಇಬ್ಬರು ಮುಸ್ಲಿಂ ಪುರುಷರ ಹತ್ಯೆ ಪ್ರಕರಣದ ಆರೋಪಿಯಾಗಿರುವ ಹಿಂದುತ್ವ ಕಾರ್ಯಕರ್ತ ಮೋನು ಮಾನೇಸರ್ ಅವರಿಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ನೀಡಿದ ನಂತರ ಶನಿವಾರ ಸಂಜೆ ಭರತ್‌ಪುರ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ನಾಯಕರನ್ನು ಗುರಿಯಾಗಿಸುವ ಇಸ್ರೇಲ್ ಬೆದರಿಕೆಗೆ ಚೀನಾ ವಿರೋಧ

ಇರಾನ್‌ನಲ್ಲಿ ಸರ್ವೋಚ್ಛ ನಾಯಕರಾಗಿ ಯಾರೇ ಆಯ್ಕೆಯಾದರು ಅವರು ನಮ್ಮ ಮುಂದಿನ ಗುರಿಯಾಗಿರುತ್ತಾರೆ ಎಂದು ಬೆದರಿಕೆ ಹಾಕಿದ್ದ ಇಸ್ರೇಲ್ ನಡೆಯನ್ನು ಚೀನಾ ಖಂಡಿಸಿದೆ. ಸದ್ಯ ಸರ್ವೋಚ್ಛ ನಾಯಕರಾಗಿ ನೇಮಕವಾಗಿರುವ ಅಲಿ ಖಮೇನಿ ಅವರ ಪುತ್ರ...

ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಚರ್ಚೆಗೆ ಒತ್ತಾಯ : ಸಂಸತ್ ಆವರಣದಲ್ಲಿ ವಿಪಕ್ಷ ಸಂಸದರಿಂದ ಪ್ರತಿಭಟನೆ

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಮತ್ತು ಅದಕ್ಕೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಬಗ್ಗೆ ಸರ್ಕಾರ ಮೌನ ವಹಿಸಿರುವುದನ್ನು ಖಂಡಿಸಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್...

ಇರಾನಿನ ತೈಲ ಸಂಗ್ರಹಾಗಾರಗಳ ಮೇಲೆ ಇಸ್ರೇಲ್ ದಾಳಿ; ಅಮೆರಿಕಾ ಅಸಮಾಧಾನಗೊಂಡಿರುವುದಾಗಿ ವರದಿ

ವಾಷಿಂಗ್ಟನ್, ಡಿಸಿ: ಇರಾನಿನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದೊಡ್ಡ ಪ್ರಮಾಣದ ವೈಮಾನಿಕ ದಾಳಿಯ ಬಗ್ಗೆ ಅಮೆರಿಕ ಮತ್ತು ಇಸ್ರೇಲ್ ನಡುವೆ ಭಿನ್ನಾಭಿಪ್ರಾಯ ಹೊರಹೊಮ್ಮಿದೆ ಎಂದು ವರದಿಯಾಗಿದೆ. ಅಮೆರಿಕದ ಅಧಿಕಾರಿಗಳು ಕಾರ್ಯಾಚರಣೆಯ...

ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು : ಲೋಕಸಭೆ ಕಲಾಪ ಮುಂದೂಡಿಕೆ

ಲೋಕಸಭೆಯ ಬಜೆಟ್ ಅಧಿವೇಶನದ ಎರಡನೇ ಹಂತದ ಕಾರ್ಯ ಕಲಾಪಗಳು ಸೋಮವಾರ (ಮಾ.9) ಭಾರೀ ಗದ್ದಲದೊಂದಿಗೆ ಆರಂಭಗೊಂಡಿತು. ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಚರ್ಚಿಸಲು ಆಗ್ರಹಿಸಿ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆ, ಸ್ಪೀಕರ್...

Parliament Budget Session | ಇಂಧನ ಭದ್ರತೆ ಕುರಿತು ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪ : ರಾಜ್ಯಸಭೆಯಲ್ಲಿ ಗದ್ದಲ

ಸಂಸತ್ತಿನ 2026-27ನೇ ಸಾಲಿನ ಬಜೆಟ್ ಅಧಿವೇಶನದ ಎರಡನೇ ಹಂತದ ಕಾರ್ಯ ಕಲಾಪಗಳು ಸೋಮವಾರದಿಂದ (ಮಾ.9) ಪ್ರಾರಂಭಗೊಂಡಿವೆ. ಮೊದಲ ದಿನ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು...

ಯುದ್ಧದ ನಡುವೆಯೇ ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಖಮೇನಿ ಪುತ್ರ ಮೊಜ್ತಬಾ ನೇಮಕ

ಇರಾನ್‌ನ ತಜ್ಞರ ಸಭೆಯು ಮೊಜ್ತಾಬಾ ಖಮೇನಿ ಅವರನ್ನು ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಅವರ ಸ್ಥಾನಕ್ಕೆ ದೇಶದ ಹೊಸ ಸರ್ವೋಚ್ಚ ನಾಯಕನನ್ನಾಗಿ ಘೋಷಿಸಿದೆ ಎಂದು ರಾಜ್ಯ ಮಾಧ್ಯಮ ಭಾನುವಾರ ವರದಿ ಮಾಡಿದೆ. "ತಜ್ಞರ...

‘ಮಧ್ಯಪ್ರಾಚ್ಯ ಉದ್ವಿಗ್ನತೆ’: ಸೌದಿ ವಸತಿ ಪ್ರದೇಶದ ಮೇಲಿನ ಕ್ಷಿಪಣಿ ದಾಳಿಯಲ್ಲಿ ಯಾವುದೇ ಭಾರತೀಯ ಸಾವನ್ನಪ್ಪಿಲ್ಲ; ರಿಯಾದ್‌ ರಾಯಭಾರ ಕಚೇರಿ

ಸೌದಿ ಅರೇಬಿಯಾದ ವಸತಿ ಸ್ಥಳದ ಮೇಲೆ ಭಾನುವಾರ ಶೆಲ್ ಬಿದ್ದ ಪರಿಣಾಮ ಯಾವುದೇ ಭಾರತೀಯ ಸಾವು ಸಂಭವಿಸಿಲ್ಲ ಎಂದು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಸೌದಿ ಅರೇಬಿಯಾದ ಅಲ್-ಖಾರ್ಜ್ ಗವರ್ನರೇಟ್‌ನಲ್ಲಿರುವ ವಸತಿ ಪ್ರದೇಶದಲ್ಲಿ...