Homeಮುಖಪುಟವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳ ತುಣುಕುಗಳು

ವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳ ತುಣುಕುಗಳು

ನಮ್ಮ ಪ್ರಧಾನಿ ಮೋದಿ ಅವರು ಸಹ ಕೆನಡಿವಾದಿಗಳು ಅಂತ ಕಾಣತದ. ನಾಲ್ಕು ಸಲೆ ಭಾಷಣ ಮಾಡಿದರೂ ಸಹಿತ ನೀವು ಹಿಂಗ ಮಾಡ್ರಿ, ನೀವು ಹಂಗ ಮಾಡಬ್ಯಾಡ್ರಿ ಅಂತ ಹೇಳಿದರು ಹೊರತು, ನಾವು ಏನು ಮಾಡಬೇಕು, ಏನು ಮಾಡಲಿಕ್ಕೆ ಹತ್ತೇವಿ ಅನ್ನೋದನ್ನ ಹೇಳಲಿಲ್ಲ.

- Advertisement -
- Advertisement -

“ಜನರಿಂದ, ಜನರಿಗಾಗಿ ನಡೆಯುವ ಜನರ ಸರಕಾರವನ್ನು ಈ ವಿಶ್ವದಿಂದ ಅಳಿಸಲು ಯಾರಿಗೂ ಸಾಧ್ಯವಿಲ್ಲ,ʼʼ ಈ ಮಾತು ಯಾರಿಗೆ ನನಪಿಲ್ಲ? ಪ್ರಾಥಮಿಕ ಸಾಲಿಯೊಳಗಿನ ಪ್ರಜಾಪ್ರಭುತ್ವದ ಪಾಠ ಕಲಿಯುವಾಗ ನಮಗೆಲ್ಲಾರಿಗೂ ಕೇಳಿಸಿದ ಮೊದಲನೇ ವ್ಯಾಖ್ಯಾನ ಇದು.

ಇದು ಅಮೇರಿಕಾ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಗೆಟಿಸಬರ್ಗ್ ಎಂಬ ನಗರದಾಗ 1863ರೊಳಗ ಹುತಾತ್ಮ ಸೈನಿಕರ ಸ್ಮಾರಕ ಉದ್ಘಾಟಿಸುವಾಗ ಮಾಡಿದ ಭಾಷಣದ ಕೊನೆಯ ಸಾಲು.

ಕೇವಲ 275 ಶಬ್ದಗಳ, 3-4 ನಿಮಿಷದ ಈ ಭಾಷಣ ವಿಶ್ವದ ಇತಿಹಾಸದಲ್ಲಿ ದಾಖಲಾಗೇದ. ಅದು ಗುಲಾಮಗಿರಿಯನ್ನು ನಿರ್ಮೂಲನೆ ಮಾಡೋ ಲಿಂಕನ್ ಅವರ ನಿಲುವನ್ನು ಗಟ್ಟಿಯಾಗಿಸಿತು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಲಿಯುವ ಜಗತ್ತಿನ ನೂರಾರು ದೇಶಗಳ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಪಾಠವಾಯಿತು.

ಮಹಾಮಹಿಮ ಪಂತ ಪ್ರಧಾನರು ಇಲ್ಲಿವರೆಗೆ ಕೊರೊನಾದ ಬಗ್ಗೆ ನಾಲ್ಕು ಭಾಷಣ ಮಾಡ್ಯಾರ. ಅದರಾಗ ಮೂರು ಠೀವಿದಾಗ ಬಂದಾವು, ಒಂದು ರೇಡಿಯೋದಾಗ ಬಂದೇತಿ. ಅವು ಭಾರತದ ದಿಕ್ಕು ಬದಲಿಸಿದ ಭಾಷಣಗಳು ಅಂತ ಹೇಳಿ ಅವರ ಬೆಂಬಲಿಗರ ಅಂಬೋಣ.

ಹಂಗಾರ ಈ ಸಲಾ ವಿಶ್ವದ ದಿಕ್ಕು ಬದಲಿಸಿದ ಮಹಾನ್ ನಾಯಕರ ಕೆಲವು ಭಾಷಣಗಳನ್ನು ಪುನರ್ ಮನನ ಮಾಡೋಣ.

“ಅಮೇರಿಕಾದ ನನ್ನ ಸಹೋದರ -ಸಹೋದರಿಯರೇ” ಅಂತ ಶುರುವಾಗೋ ಭಾಷಣ ಮಾಡಿದ್ದು ಯಾರು ಅಂತ ಕೇಳಿದರ ಎಲ್ಲಾರು ಕೈ ಎತ್ತುತಾರ. ಸ್ವಾಮಿ ವಿವೇಕಾನಂದ ಅವರು ಷಿಕಾಗೋದಾಗ ಮಾಡಿದ ಐದು ದಿನಗಳ ಭಾಷಣ ಸರಣಿಯೊಳಗ ಇದು ಎಲ್ಲಾರಿಗಿಂತ ಜನಪ್ರಿಯ ಭಾಷಣ. ಇದು ವಿಶ್ವಕ್ಕ ಭಾರತೀಯ ಸಂಸ್ಕೃತಿಯನ್ನ, ಹಿಂದೂ ಧರ್ಮವನ್ನು ಪರಿಚಯಿಸಿತು. ಭಾರತದ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಾಗ ಎತ್ತಿ ಹಿಡೀತುʼʼ ಅನ್ನೋದು ಸರ್ವಾಭಿಪ್ರಾಯ. ಜೀವನ ಪೂರ್ತಿ ಜನಪರ ಕೆಲಸ ಮಾಡಿದ ಸ್ವಾಮಿ ವಿವೇಕಾನಂದರನ್ನು ಈ ಭಾಷಣ ಒಂದರಿಂದನ ಬಲ್ಲವರು ಭಾಳ ಇದ್ದಾರ.

ಜವಾಹರಲಾಲ ನೆಹರೂ ಅವರು ಸ್ವಾತಂತ್ರದ ರಾತ್ರಿ ಮಾಡಿದ ʻʻನಿಯತಿಯೊಂದಿಗೆ ನಮ್ಮ ಮಿಲನದ ಒಪ್ಪಂದʼʼದ ಭಾಷಣ ಜನಪ್ರಿಯವಾಗಿದೆ. ಅದಕ್ಕಿಂತ ಮುಖ್ಯವಾದ ಅವರ ಭಾಷಣವೊಂದಿದೆ. ಉತ್ತರ ಪ್ರದೇಶ ಹಳ್ಳಿಯ ಮಾರ್ಗವಾಗಿ ಮಧ್ಯರಾತ್ರಿ ಪ್ರಯಾಣ ಬೆಳೆಸಿದ್ದ ನೆಹರೂ ಅವರನ್ನು ಅಲ್ಲಿಯ ಜನ ʻಪ್ರಧಾನ ಮಂತ್ರಿಯನ್ನು ನೋಡುವುದಕ್ಕಾಗಿʼ ಅವರ ಕಾರನ್ನು ನಿಲ್ಲಿಸುತ್ತಾರ. ಆಗ ಹೊರ ಬಂದ ನೆಹರೂ ಅವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ʻʻನೀವೆಲ್ಲಾ ʻಜೈ ಹಿಂದʼ ಅಂತ ಘೋಷಣೆ ಕೂಗುತ್ತಾ ಇದ್ದೀರಲ್ಲಾ, ಹಾಗಂದರೇನು?ʼʼ ಅವರು ಇದು ʻʻಈ ದೇಶಕ್ಕ, ನಿಮಗೆ, ನಿಮ್ಮ ಸರಕಾರಕ್ಕೆ ಜೈಕಾರ ಅಂತ ಹೇಳಿದಾಗ, ʻʻಅಲ್ಲ, ಇದು ನಿಮಗೆ ನೀವೆ ಜೈಕಾರ ಹಾಕಿಕೊಂಡಂತೆ. ಇದನ್ನು ನೀವು ಚನ್ನಾಗಿ ಅರಿತುಕೊಳ್ಳಿʼʼ ಅಂತ ಹೇಳತಾರ.

ಅಮೇರಿಕಾದ ಸ್ವಾತಂತ್ರ‍್ಯ ಹೋರಾಟಗಾರರು ಹಾಗೂ ಸಂಸ್ಥಾಪಕ ನಾಯಕರಲ್ಲಿ ಒಬ್ಬನಾದ ಪ್ಯಾಟ್ರಿಕ್ ಹೆನ್ರಿ ಅವರು ಭಾಷಣದಲ್ಲಿ ಹೇಳಿದ ʻʻನನಗೆ ಸ್ವಾತಂತ್ರ‍್ಯ ಕೊಡಿ ಅಥವಾ ಮರಣವನ್ನು ನೀಡಿʼʼ ಅನ್ನುವ ಮಾತು ಇಂಗ್ಲಂಡಿನ ವಸಾಹತುಶಾಹಿ ನೀತಿಯ ವಿರುದ್ಧ ಹೋರಾಟದಲ್ಲಿ ಮೈಲಿಗಲ್ಲಾಗಿ ಪರಿಗಣಿಸಿತು. ಇದೇ ಧಾಟಿಯ ಮಾಡು ಇಲ್ಲವೇ ಮಡಿ ಅನ್ನುವ ಮಹಾತ್ಮಾ ಗಾಂಧಿಯವರ ಭಾರತ ಬಿಟ್ಟು ತೊಲಗಿ ಭಾಷಣ ಬ್ರಿಟಿಷರ ವಿರುದ್ಧ ʻಯುದ್ಧಘೋಷʼವಾಗಿ ಪರಿಗಣಿಸಿತು.

ಬಾಲಗಂಗಾಧರ ತಿಲಕರ ʻʻಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆʼʼ ಎನ್ನುವ ಮಾತು ಅವರನ್ನು ಅಮರರಾಗಿಸಿತು.

ದುಂಡು ಮೇಜಿನ ಪರಿಷತ್ತಿನ ಸಭೆಯೊಳಗ ಡಾ. ಅಂಬೇಡ್ಕರ್ ‘ಸಾಮಾಜಿಕ -ಆರ್ಥಿಕ ಸ್ವಾತಂತ್ರ‍್ಯವಿಲ್ಲದ ರಾಜಕೀಯ ಸ್ವಾತಂತ್ರ‍್ಯ ಅರ್ಥಹೀನ’ ಅಂತ ಹೇಳಿದ್ದು, ಪಂಜಾಬಿನ ಜಾತ ಪಾತ ತೋಡಕ ಮಂಡಲದಲ್ಲಿ ಮಾಡಿದ ಜಾತಿ ವಿನಾಶ ಭಾಷಣಗಳು ಐತಿಹಾಸಿಕ. ಅವರ ವಿರೋಧಿಗಳು ಸಹ ಉಲ್ಲೇಖಿಸುವ ʻʻಸಕಲ ಸವಲತ್ತುಗಳನ್ನು ಪಡೆದು ಬೆಳೆದ ನನ್ನವರೇ ನನಗೆ ವಿಶ್ವಾಸದ್ರೋಹ ಮಾಡಿದರು. ಅವರು ತಮ್ಮ ದೌರ್ಭಾಗ್ಯಪೂರ್ಣ ಅಣ್ಣ-ತಮ್ಮಂದಿರ ಕಾಳಜಿ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ತಮ್ಮ ಗಳಿಕೆಯ ಶೇಕಡಾ ಐದರಷ್ಟಾನದರೂ ಸಮಾಜದ ಕಲ್ಯಾಣಕ್ಕೆ ಬಳಸಬೇಕುʼʼ ಅನ್ನುವ 1956ರ ಹಿಂದಿ ಭಾಷಣ ಸಹ ಗಮನಾರ್ಹ.

ಅಮೇರಿಕಾದ ವರ್ಣಬೇಧ ನೀತಿಯ ವಿರುದ್ಧ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಅವರ ʻನನಗೊಂದು ಕನಸಿದೆʼ ಭಾಷಣ ಜಗತ್ತಿನಾದ್ಯಂತ ಎಲ್ಲಿ ಶೋಷಣೆ ಕಂಡುಬಂದರೂ ಅದನ್ನು ವಿರೋಧಿಸುವವರಿಗೆ ಮಂತ್ರ ವಾಯಿತು.

ʻʻಸಮಾನತೆ ಹಾಗೂ ಸ್ವಾತಂತ್ರ‍್ಯ ನಮ್ಮ ಜೀವ ಉಳಿಸುವ ಮೌಲ್ಯಗಳು. ಇವುಗಳನ್ನು ಪಡೆಯಲು ನಾನು ನನ್ನ ಜೀವನದಾದ್ಯಂತ ಹೋರಾಡುತ್ತೇನೆ. ಅಗತ್ಯ ಬಿದ್ದರೆ ನನ್ನ ಪ್ರಾಣ ಕೊಡಲೂ ಸಹ ತಯಾರುʼʼ ಎಂದು ರಿವೋನಿಯಾದ ನ್ಯಾಯಾಲಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ನೆಲ್ಸನ್ ಮಂಡೇಲಾ ಮಾಡಿದ ಭಾಷಣ ಇಡೀ ಆಫ್ರಿಕಾ ಖಂಡದಲ್ಲಿ ಮಾರ್ದನಿ ಗೈದಿತು.

ಅಮೇರಿಕಾದ ಕರಿಯರ ನಾಯಕ ಫ್ರೆಡರಿಕ್ ಡಗ್ಲಸ್ ಅವರು ʻʻನೀವು ನಮಗೆ ತೋರಿಸುತ್ತಿರುವ ಕರುಣೆ ಸುಳ್ಳು ಮತ್ತು ತೋರಿಕೆಯಿಂದ ಕೂಡಿದ್ದು. ಅದು ನಿನ್ನೆಯೂ ಸುಳ್ಳಾಗಿತ್ತು. ಇಂದೂ ಸುಳ್ಳಾಗಿದೆ, ನಾಳೆಯೂ ಸುಳ್ಳಾಗಿಯೇ ಇರಲಿದೆʼʼ ಅಂತ ರಸ್ತೆ ಬದಿಯಲ್ಲಿ ಮಾಡಿದ ಭಾಷಣ ಅನೇಕ ಬಿಳಿಯರ ಹೃದಯ ಪರಿವರ್ತನೆಗೆ ಕಾರಣವಾಯಿತು.

ಜರ್ಮನಿಯ ವಿರುದ್ಧ ಹೋರಾಡಲು ಕೇವಲ ಒಂದು ವಾರ ಸಮಯ ಇದ್ದಾಗ ಬ್ರಿಟಿಷ್ ಪ್ರಧಾನಿ ವಿನಸ್ಟನ್ ಚರ್ಚಿಲ್ ಅವರು ಮಾಡಿದ ‘ನಾವು ಸತ್ತರೂ ಗೆದ್ದು ಸಾಯುತ್ತೇವೆ, ಇದ್ದರೂ ಗೆಲ್ಲುತ್ತೇವೆ. ಸಮುದ್ರ ದಂಡೆಯಲ್ಲೂ ಹೋರಾಡುತ್ತೇವೆ, ರಸ್ತೆಯಲ್ಲಿಯೂ ಹೋರಾಡುತ್ತೇವೆ, ಆಕಾಶದಲ್ಲಿ, ಸಮುದ್ರದಲ್ಲಿಯೂ ಹೋರಾಡುತ್ತೇವೆ. ನಮಗೆ ಇರುವ ಗುರು ಗೆಲುವು ಒಂದೇ’ ಅಂತ ಮಾಡಿದ ರೇಡಿಯೋ ಭಾಷಣ, ಅಲ್ಲಿನ ಯುವಕರನ್ನು ರೊಚ್ಚಿಗೆಬ್ಬಿಸಿತು. ಅವರು ದೊಡ್ಡ ಸಂಖ್ಯೆಯಲ್ಲಿ ಸೈನ್ಯ ಸೇರಿದರು, ಜರ್ಮನಿಯನ್ನು ಸೋಲಿಸಿದರು.

ಅಮೇರಿಕಾದ ಮಾಜಿ ಅಧ್ಯಕ್ಷ ಜಾನ್ ಕೆನಡಿ ಅವರು ಯಾವ ಮುಹೂರ್ತದಲ್ಲಿ ನಿಮ್ಮ ದೇಶ ನಿಮಗೇನು ಮಾಡಿದೆ ಅಂತ ಕೇಳಬೇಡಿ. ನೀವು ನಿಮ್ಮ ದೇಶಕ್ಕೆ ಏನು ಮಾಡಿದ್ದೀರಿ ಅಂತ ಕೇಳಿ ಅಂತ ಹೇಳಿದರೋ ಗೊತ್ತಿಲ್ಲ. ಇವತ್ತಿನ ಅನೇಕ ನಾಯಕರು ಅದೇ ಧಾಟಿಯಲ್ಲಿ ಮಾತನಾಡಲಿಕ್ಕೆ ಹತ್ಯಾರ. ನಮ್ಮ ಪ್ರಧಾನಿ ಮೋದಿ ಅವರು ಸಹ ಕೆನಡಿವಾದಿಗಳು ಅಂತ ಕಾಣತದ. ನಾಲ್ಕು ಸಲೆ ಭಾಷಣ ಮಾಡಿದರೂ ಸಹಿತ ನೀವು ಹಿಂಗ ಮಾಡ್ರಿ, ನೀವು ಹಂಗ ಮಾಡಬ್ಯಾಡ್ರಿ ಅಂತ ಹೇಳಿದರು ಹೊರತು, ನಾವು ಏನು ಮಾಡಬೇಕು, ಏನು ಮಾಡಲಿಕ್ಕೆ ಹತ್ತೇವಿ ಅನ್ನೋದನ್ನ ಹೇಳಲಿಲ್ಲ.

ಅಮೇರಿಕಾ ಸ್ವಾತಂತ್ರ‍್ಯದ 300 ವರ್ಷದ ನಂತರ ಗೆದ್ದ ಕರಿಯ ಬರಾಕ್ ಒಬಾಮಾ ಅವರು ಮಾಡಿದ ಯಸ್ ವಿ ಕ್ಯಾನ್ ಭಾಷಣವನ್ನು ನೀವು ಮತ್ತ ಮತ್ತ ನೋಡಿದರ ಒಂದು ಮಜಾ ವಿಷಯ ತಿಳೀತದ. ಅವರು ನ್ಯೂಹೆಂಪಶಾಯರ್‌ನ ನೋಷುವಾದಲ್ಲಿ ಅವರ ಬೆಂಬಲಿಗರ ಮಧ್ಯ ಭಾಷಣ ಮಾಡತಾರ. ಬೆಂಬಲಿಗರ ʻʻಓಬಾಮಾ, ಓಬಾಮಾʼʼ ಅನ್ನುವ ಘೋಷಣೆಗಳ ನಡುವೆ ಆರಂಭವಾದ ಭಾಷಣ ಯಸ್ ವಿ ಕ್ಯಾನ್ ಅಂತ ಮುಕ್ತಾಯ ಆಗತದ.

ನಮ್ಮಲ್ಲೂ ಹಾಗಾಗಬಹುದೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...