Homeಅಂತರಾಷ್ಟ್ರೀಯಭಾರತದ ಸೊಸೆಯ ದೇಶೋಚ್ಛಾಟನೆಯ ದಾರುಣ ಕತೆ! ..

ಭಾರತದ ಸೊಸೆಯ ದೇಶೋಚ್ಛಾಟನೆಯ ದಾರುಣ ಕತೆ! ..

- Advertisement -
- Advertisement -

ಆಕೆ ಎಳೆಯ ಪ್ರಾಯದ ಅಮಾಯಕ ಹೆಂಗಸು. ಮೂರು ಪುಟ್ಟ-ಪುಟ್ಟ ಕಂದಮ್ಮಗಳ ತಾಯಿ. ಹುಟ್ಟಿದ್ದು ಪಾಕಿಸ್ತಾನದಲ್ಲಿ. ಆಕೆಯ ಅಜ್ಜನ ಕರುಳುಬಳ್ಳಿ ಸಂಬಂಧ ಭಟ್ಕಳದಲ್ಲಿದೆ. ದೇಶ ವಿಭಜನೆ ಸಂದರ್ಭದಲ್ಲಿ ಆತ ಪಾಕ್ ಪಾಲಾಗಿದ್ದ. ಆದರೆ ಆತನ ಮೊಮ್ಮಗಳು ಹದಿಮೂರು ವರ್ಷದ ಹಿಂದೆ ಭಾರತದ ಭಟ್ಕಳಕ್ಕೆ ಸೊಸೆಯಾಗಿ ಬಂದಿದ್ದಳು. ನವಾಯತ ಮುಸ್ಲಿಂ ಸಮುದಾಯದ “ಲಂಕಾ” ಕುಟುಂಬದ ಹಿರಿಯ ಸೊಸೆಯಾಗಿ ಮನೆ ತುಂಬಿಕೊಂಡಿದ್ದಳು. ಆ ಹುಡುಗಿಯ ಹೆಸರು- ಅರ್ಸೆಲಾ ಅಬೀರಾ!!

ಆರಂಭದಲ್ಲಿ ಆಕೆಯ ಬದುಕು ಚಂದವಾಗೇ ಇತ್ತು. ಸಾಮಾನ್ಯ ಹೆಣ್ಣು ಮಕ್ಕಳಂತೆ ಗಂಡ-ಮಕ್ಕಳು-ಅತ್ತೆ-ಮಾವ-ಅತ್ತೆಮನೆ-ನೆಮ್ಮದಿಯ ಬದುಕು… ಹತ್ತಾರು ಸಹಜ ಕನಸು ಕಟ್ಟಿಕೊಂಡು ಅರ್ಸೆಲಾ ಮದುವೆಯಾಗಿ ಭಟ್ಕಳಕ್ಕೆ ಬಂದಿದ್ದಳು. ಗಂಡ ’ಅಫಾಕ್‌ ಲಂಕಾ’ ಭಟ್ಕಳದಲ್ಲಿ ಯುನಾನಿ ವೈದ್ಯನಾಗಿದ್ದ. ಅರ್ಸೆಲಾ ಗಂಡನಿಗೆ ನೆರವಾಗುತ್ತಿದ್ದಳು. ಆಕೆಯ ಬದುಕಿಗೆ ಬರಸಿಡಿಲು ಬಡಿದು ನುಚ್ಚುನೂರಾಗಿದ್ದು 2015ರಲ್ಲಿ. ಆಗ ಬೆಂಗಳೂರಲ್ಲಿ ಚರ್ಚ್‌ ಸ್ಫೋಟ ಆಗಿತ್ತಲ್ಲ, ಆ ವಿಧ್ವಂಸಕ ಕೃತ್ಯಕ್ಕೆ ಸ್ಫೋಟಕ ಒದಗಿಸಿದ್ದು ಅಫಾಕ್‌ ಲಂಕಾ ಎಂದು ಪೊಲೀಸ್ ಏಜೆನ್ಸಿಗಳು ಶಂಕಿಸಿದ್ದವು. ದೇಶದ ಹಲವು ಸ್ಫೋಟ ಪ್ರಕರಣದಲ್ಲೂ ಅಫಾಕ್‌ನ ಬಾಂಬ್‌ ಕಾರಣವೆಂಬ ಆರೋಪದಲ್ಲಿ ಆತನನ್ನು ಜೈಲಿಗೆ ಅಟ್ಟಲಾಗಿತ್ತು.

ಎರಡು ವರ್ಷಕೊಮ್ಮೆ ತನ್ನ ವೀಸಾ ನವೀಕರಿಸುತ್ತಿದ್ದಳು ಅರ್ಸೆಲಾ. ಕಳೆದ ಆಗಸ್ಟ್‌ನಲ್ಲಿ ಕೇಂದ್ರ ವಿದೇಶಾಂಗ ಇಲಾಖೆ ವೀಸಾ ಮುಂದುವರಿಸಲು ನಿರಾಕರಸಿತು. ಭಯೋತ್ಪಾದಕನ ಹೆಂಡತಿ ವೈರಿ ರಾಷ್ಟ್ರ ಪಾಕ್‌ನವಳು. ಇಲ್ಲಿದ್ದರೆ ದೇಶದ ಭದ್ರತೆಗೆ ಗಂಡಾಂತರವೆಂಬ ನಿರ್ಧಾರ ಗೃಹ ಇಲಾಖೆಯದ್ದಾಗಿತ್ತು. ಸ್ವಯಂಪ್ರೇರಣೆಯಿಂದ ದೇಶ ಬಿಟ್ಟು ಹೋಗಬೇಕು, ಮೂರು ತಿಂಗಳಷ್ಟೇ ಕಾಲಾವಕಾಶ. ಭಾರತದಿಂದ ಹೋಗದಿದ್ದರೆ ಪಾಕ್‌ಗೆ ನಾವೇ ಬಿಟ್ಟುಬರಬೇಕಾಗುತ್ತದೆಂದು ಗೃಹ ಇಲಾಖೆ ಅರ್ಸೆಲಾಳಿಗೆ ನೋಟೀಸು ಕಳಿಸಿತ್ತು.

ಹೆತ್ತ ಮೂರು ಮಕ್ಕಳನ್ನು ಬಿಟ್ಟು ಆಕೆ ದೇಶಾಂತರ ಹೋಗುವುದಾದರೂ ಹೇಗೆ? ಮಕ್ಕಳಿನ್ನು ಚಿಕ್ಕವರು; ಅವರೊಂದಿಗಿರಲು ಅವಕಾಶ ಕೊಡುವಂತೆ ಅರ್ಸೆಲಾ ಕೇಂದ್ರಕ್ಕೆ ಮಂಡಿಯೂರಿ ಮೊರೆಯಿಟ್ಟಿದ್ದಳು. ನಾನು ನಿರಪರಾಧಿ. ಗಂಡನ ತಪ್ಪಿಗೆ ನನಗೆ ನನ್ನ ಮಕ್ಕಳಿಗೆ ಶಿಕ್ಷೆ ಕೊಡಬೇಡಿ ಎಂದು ಬೇಡಿಕೊಂಡಿದ್ದಳು. ಇದಕ್ಕೊಪ್ಪದ ಪ್ರಭುತ್ವದ ಪೊಲೀಸರು ಅರ್ಸೇಲಾಳನ್ನು ದಿಲ್ಲಿ ಮೂಲಕ ಪಾಕ್‌ಗೆ ಕರೆದೊಯ್ದು ಬಿಟ್ಟು ಬಂದಿದ್ದಾರೆ!

ಭಟ್ಕಳ ಬಿಡಲೇಬೇಕಾದ ಸಂದರ್ಭದಲ್ಲಿ ಆ ಮುಗ್ಧೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಚಡಪಡಿಸಿದ್ದಾಳೆ. ಕರುಳ ಕುಡಿಗಳನ್ನು ಬಲವಂತವಾಗಿ ತೊರೆಯಬೇಕಾದ ದುರ್ವಿಧಿಗೆ ಹಳಿಯುತ್ತ ಕಣ್ಣೀರ ಕೋಡಿಯಾಗಿದ್ದಾಳೆ. ಭಟ್ಕಳದ ಪರಿಸರ, ಮುದಿ ಅತ್ತೆ-ಮಾವಂದೀರು, ಮಕ್ಕಳಿಂದ ದೂರಾಗುವ ದಿನ ಹತ್ತಿರ ಬಂದಂತೆ ಹೇಳತೀರದ ಸಂಕಟ ಅನುಭವಿಸಿದ್ದಾಳೆ. ಆ ಕ್ಷಣದಿಂದ ಪಾಕ್‌ನ ತವರು ಮನೆ ಸೇರಿದ ನಂತರದವರೆಗಿನ ಹಿಂಸೆಗೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿದ್ದಾಳೆ. ತನ್ನ ಸುದೀರ್ಘ ಪತ್ರದಲ್ಲಿ ವೈವಾಹಿಕ ಬದುಕಿನ ಕನಸು-ಕಷ್ಟ, ಅತ್ತೆ ಮನೆ ಪ್ರೀತಿ-ಹೊಣೆಗಾರಿಕೆ, ಗಂಡ ಶಂಕಿತ ಭಯೋತ್ಪಾದಕನೆಂದು ಸುದ್ದಿಯಾಗಿ ಜೈಲುಪಾಲಾದಾಗಿನ ನಂತರದ ಸಾಮಾಜಿಕ ಅಪನಿಂದನೆ, ಅವಮಾನ, ಗಂಡನ ನಿರೀಕ್ಷೆಯಲ್ಲಿ ಕಳೆದ ಭ್ರಮೆಯ ಕಾಲ…. ಹೀಗೆ ಹಲವು ಸಂಗತಿಗಳನ್ನು ದಾಖಲಿಸಿ ಆಪ್ತೇಷ್ಟರಿಗೆ ಕಳಿಸಿದ್ದಾಳೆ.

ಅರ್ಸೆಲಾಳನ್ನು ಪೊಲೀಸರು ಭಟ್ಕಳದಿಂದ ಕರೆದೊಯ್ಯುವ ಮುನ್ನ ದಿನ ಆಕೆ ಭಾವನಾತ್ಮಕ ತಳಮಳಕ್ಕೆ ಈಡಾಗಿದ್ದಳೆಂದು ಪತ್ರಾಕಥನವೇ ಹೇಳುತ್ತದೆ. ಆ ಪತ್ರದ ಸಾರ ಈ ಮುಂದಿನಂತಿದೆ…

ಅರೇ! ನನ್ನ ಮನೆಯಲ್ಲೇ ನಾನೀಗ ಅಪರಿಚಿತಳು. ನನಗೆ ನನ್ನದೆ ಪರಿಚಯ ಸಿಗುತ್ತಿಲ್ಲ. ಕೋಣೆಯಲ್ಲಿರುವ ಬಟ್ಟೆ ಬರೆಗಳು ಬೇರೆಯವರದ್ಯಾರವೋ ಅನ್ನಿಸುತ್ತದೆ. ಕೋಣೆಯ ಗೋಡೆಗಳು ’ನೀನು ಭಟ್ಕಳಕ್ಕೆ ಮತ್ತೆ ಬರ್‍ತಿಯೋ?  ಇಲ್ಲವೋ? ಇದೇ ಕೊನೆಯದಾ? ಎಂದು ಕೇಳುತ್ತಿವೆ. ನನ್ನ ನೋವನ್ನು ನನ್ನ ಮಕ್ಕಳಿಗೂ ತೋರಿಸಿಕೊಳ್ಳುವಂತಿಲ್ಲ. ಆ ಮೂರೂ ಮಕ್ಕಳ ಮುಖ ಕಂಡಾಗ ಹೃದಯ ಛಿದ್ರಛಿದ್ರವಾಗುತ್ತಿದೆ. ಇದ್ದಕ್ಕಿದ್ದಂತೆ ರಾತ್ರಿ ಆವರಿಸಿಕೊಳ್ಳುತ್ತಿದೆ. ಇದೊಂದು ಕೆಟ್ಟರಾತ್ರಿ. ನಾಳೆ ಹೊರಡಲೇಬೇಕು. ಬ್ಯಾಗು ಕಟ್ಟಿಕೊಳ್ಳುವಾಗ ಮಕ್ಕಳು ಎಲ್ಲಿಗಮ್ಮ? ಎನ್ನುತ್ತವೆ. ಅವರಿಗೇನೂ ಹೇಳುವಂತಿಲ್ಲ. ಅಯ್ಯೋ ದೇವರೆ, ಈ ಕಂದಮ್ಮಗಳನ್ನು ಚೆನ್ನಾಗಿ ನೋಡಿಕೋ ಎಂದಷ್ಟೇ ಬೇಡುತ್ತೇನೆ.

ಮಕ್ಕಳು ಉತ್ತರವಿಲ್ಲದ ಪ್ರಶ್ನೆ ಕೇಳಿ, ಕೇಳಿ ಸುಸ್ತಾಗಿ ನಿದ್ದೆಗೆ ಜಾರಿವೆ. ರೂಮಿನಲ್ಲಿ ನೀರವ ಮೌನ! ಕಿಟಕಿಯಿಂದ ಚಂದ್ರ ಇಣುಕುತ್ತಿದ್ದಾನೆ. ಆ ಚಂದ್ರ ಏನೇನೋ ಹೇಳುತ್ತಿದ್ದಾನೆ ಅನ್ನಿಸುತ್ತದೆ. ಬೆಳಿಗ್ಗೆ ಕಿವಿಯಲ್ಲಿ ನಮಾಜಿನ ಕತೆ! ಬೆಳಗು ಹರಿಯುತ್ತಿದ್ದಂತೆಯೇ ನೆಂಟರು, ಆಚೀಚೆ ಮನೆಯವರು ಬರುತ್ತಿದ್ದಾರೆ. ನನ್ನಿಂದ ಮಾತೇ ಹೊರಡುತ್ತಿಲ್ಲ. ಅವರೂ ಭಾವುಕರಾಗಿದ್ದಾರೆ. ದೇವರ ನೆನೆಯುವುದು ಬಿಟ್ಟು ಇನ್ನೇನೂ ನನ್ನಿಂದ ಮಾತಲಾಗುತ್ತಿಲ್ಲ. ಮಕ್ಕಳ ಮುಖ ಕಂಡಾಗ ದುಃಖ ಉಮ್ಮಳಿಸಿ ಬರುತ್ತಿತ್ತು. ಈ ಥರ ಮಕ್ಕಳನ್ನು ಬಿಟ್ಟುಹೋಗುವ ಸ್ಥಿತಿ ಯಾವ ತಾಯಿಗೂ ಬರುವುದು ಬೇಡ. ದೇವರೇ ನನ್ನನ್ನು ಕೊಂದುಬಿಡು ಎಂದು ಮನದಲ್ಲೇ ಹೇಳತೊಡಗಿದೆ!!

ನನ್ನನ್ನು ಕರೆದೊಯ್ಯಲು ಪೊಲೀಸರ ವಾಹನ ಬಂದೇ ಬಿಟ್ಟಿತು. ಅದು ನಂಗೆ ಶವ ಪೆಟ್ಟಿಗೆಯಂತೆ ಕಾಣಿಸುತ್ತಿತ್ತು. ಅನಿವಾರ್ಯವಾಗಿ ಗಾಡಿ ಹತ್ತಿದೆ. ಆ ವಾಹನದಲ್ಲಿ ನನ್ನ ದೇಹವಷ್ಟೇ ಇತ್ತು; ಅದಕ್ಕೆ ಜೀವವೇ ಇರಲಿಲ್ಲ!! ನನ್ನ ಕೊನೆಯ ಮಗ ಪದೇ ಪದೇ ಫೋನು ಮಾಡುತ್ತಿದ್ದ. “ನನ್ನನ್ನು ಬಿಟ್ಟು ನೀನೊಬ್ಬಳೇ ಹೊಗುತ್ತೀಯಲ್ಲಾ… ನೀನೆಷ್ಟು ಕೆಟ್ಟವಳು” ಅಂತಿದ್ದ. ನಾನೀಗ ತವರು ಸೇರಿದ್ದೇನೆ. ಇಲ್ಲಿಯೂ ನಾನು ಅಪರಿಚಿತಳೇ!!….

ಈ ಪತ್ರದ ಶುರುವಿನಲ್ಲಿ ಅರ್ಸೆಲಾ ತನ್ನ ವೈವಾಹಿಕ ಬದುಕಿನ ಆರಂಭದ ಸಂತಸ, ನಂತರದ ಅತ್ತೆ ಮನೆ ಜವಾಬ್ದಾರಿ, ಮೈದುನರು, ಅತ್ತೆ-ಮಾವ ತೋರಿಸಿದ ಪ್ರೀತಿ-ವಾತ್ಸಲ್ಯ, ಜೈಲು ಸೇರಿದ ಗಂಡ ನಿರಪರಾಧಿಯಾಗಿ ಬರುತ್ತಾನೆಂದು ನಿರೀಕ್ಷಿಸಿದ್ದು, ಸುಳ್ಳಾಗಿದ್ದು, ಪೊಲೀಸರ ಭಯ, ಮಕ್ಕಳೊಂದಿಗೆ ಕೋಣೆಯಲ್ಲಿರುವಾಗ ಕಾಡುತ್ತಿದ್ದ ಆತಂಕ, ಮನೆಯ ಗೇಟಿನ ಸದ್ದಾದಾಗ ಗಂಡನೇ ಬಂದಂತೆ ಭ್ರಮೆ, ಭಯೋತ್ಪಾದಕನ ಮಡದಿಯೆಂದು ಸಂಬಂಧಿಕರು ಮಾತಾಡದೆ ಅಡ್ಡ ಮುಖ ಹಾಕಿ ಹೋಗುತ್ತಿದ್ದುದ್ದು, ಮೂರು ತಿಂಗಳು ಭಟ್ಕಳ(ಭಾರತ)ದಲ್ಲಿ ಉಳಿಯಲು ಕೇಂದ್ರ ಸರ್ಕಾರ ಅವಕಾಶ ಕೊಟ್ಟಾಗ ಆದ ಗೊಂದಲ, ಒತ್ತಡಕ್ಕೆ ಸಿಲುಕಿದ್ದು, ಅಧಿಕಾರಿಗಳ ಬಗ್ಗೆ ಅನುಮಾನ ಬಂದಿದ್ದನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾಳೆ.

ಗಂಡನ ಮೇಲೆ ಆರೋಪ; ನಿಷ್ಕಳಂಕಿತ ಹೆಂಡತಿಗೆ ಚಿತ್ರಹಿಂಸೆ, ಆಡಳಿತ ವ್ಯವಸ್ಥೆ ಪಾಪದ ಅರ್ಸೆಲಾಳನ್ನು ತವರಿಗಟ್ಟಿದೆ. ಆಕೆಯ ಗಂಡ ನಿಜವಾಯಿಗೂ ಅಪರಾಧಿಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಆದರೆ ಆಕೆ ಮಾತ್ರ ಎರಡೂ ನನ್ನದೇ ದೇಶಗಳು ಅಂತಿದ್ದಾಳೆ. ಗಡಿ ಮೀರಿ ಬದುಕು ಕಟ್ಟಿಕೊಂಡಿದ್ದ ಅರ್ಸೆಲಾ ಈಗ ಖಾಲಿ-ಖಾಲಿ!! ಆಕೆಯ ಅನಾಥ ಪ್ರಜ್ಞೆ, ಯಾಚನೆ, ಕಣ್ಣಾಚೆಯ ದೂರದಲ್ಲಿರುವ ಮಕ್ಕಳ ಗೋಳು, ಆಕೆಯ ಪತ್ರದ ಒಂದೊಂದು ಪದ ನೂರು ಪ್ರಶ್ನೆಗಳನ್ನು ವಿಶ್ವಮಾನವ ಪ್ರಪಂಚದಲ್ಲಿ ಕೇಳುತ್ತಲೇ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...