Homeಕವನಅನುಷಾ ಚಂದ್ರುರವರ ಕವಿತೆ ಸುಮ್ಮನಿದ್ದೇನೆ ನಾನು…..

ಅನುಷಾ ಚಂದ್ರುರವರ ಕವಿತೆ ಸುಮ್ಮನಿದ್ದೇನೆ ನಾನು…..

- Advertisement -
- Advertisement -

ಹಾ….
ಸುಮ್ಮನಿದ್ದೇನೆ ನಾನು
ಹೇಳಲು ಬಹಳಷ್ಟಿದ್ದರು
ಅನುಭವಿಸಿದ್ದೇನೊ ಕೆಲವು
ಕಂಡದ್ದು ಹಲವು
ಆದರೆ ಎಲ್ಲವೂ ಸ್ವಂತದ್ದು
ಆದರದೇಕೊ ನಕ್ಕೊಮ್ಮೆ ಸುಮ್ಮನಾಗುವೆ ನಾನು
ಹೇಳಲು ಬಹಳಷ್ಟಿದ್ದರು

ಚಿಮಣಿ ಮೇಲಿನ ದೀಪದುರಿಯ ಕಪ್ಪಿನಲಿ
ಹೂತ ಕನಸುಗಳ ಚಿತ್ರವ ಕಂಡು……
ನನ್ನಮ್ಮ ಅಪ್ಪನಿಗೆ ಭರವಸೆಯೊಂದೆ
ಹೊಟ್ಟೆ ತುಂಬಿಸಿದ
ಖಾಲಿ ನೀರವ ರಾತ್ರಿಗಳ ನೆನೆದು

ನೀವು ನಾನಾಗದೆ ನಾನೇ ನೀವಾಗಲೊರಟು
ವಿಳಾಸವಿರದ ಊರಿನಲಿ
ದಾರಿ ತಪ್ಪಿ
ಕೊಳವಾದ ಕಂಗಳಲಿ
ಮಾಡಿದೊಂಟಿ ಯುದ್ಧವ ನೆನೆದು…..
ಸುಮ್ಮನಾದೆ ನಾನು

ಇದ್ದ ಬದುಕಿಗಿಡಿದ ಕನ್ನಡಿಯೆದುರು
ಹೊಸಕಿ‌ – ಕೊಂದ ಕನಸುಗಳ ಬಿಂಬ ಕಂಡು
ಹೆದರಿ ಮುದುರಿ ಮೌನಿಯಾದ ಕ್ಷಣವ ನೆನೆದು
ಸುಮ್ಮನಾಗಿ ಬಿಟ್ಟೆ ನಾನು
ಮಾತು ಬರುವ ಮೂಕಿಯಂತೆ
ಹೇಳಲು ಎಷ್ಟೊ ಅದೆಷ್ಟೋ ಇದ್ದರು

ಶಾಶ್ವತವಲ್ಲದೀ ದುಡ್ಡು
ಮೂಡಿಸಿದ ಶಾಶ್ವತ ಗುರುತುಗಳ
ಲೆಕ್ಕ ಪಟ್ಟಿಯ ಲೆಕ್ಕಗಳಲಿ
ಒದ್ದೆಯಾದ ಕಂಗಳನು
ಹುದುಗಿಸಿಡುತ
ಸುಮ್ಮನಾಗುವೆ ನಾನು
ನಿಮ್ಮಗಳೆದುರು
ನಾಲಿಗೆಯ ತುದಿಯಲ್ಲಿ
ಜಾರಲು ಅವೆಷ್ಟೋ ಮಾತುಗಳು ತವಕಿಸುತ್ತಿದ್ದರು

ಚೆಂದದ ನೋಟ ನಮ್ಮನ್ನಳೆವ ಮಾನದಂಡ
ಬೆಂಗಳೂರಿನಲ್ಲಿಇದೇ ನಾ ಕಲಿತ ಮೊದಲ ಪಾಠ
ಕಲಿಕೆಗೇನು ಕೊನೆಮೊದಲಿಲ್ಲವಲ್ಲ
ಪ್ರದರ್ಶನಕ್ಕೆ ಅಡ್ಡಿ ಮಾಡಿತ್ತು
ಧೂಳು ಹಿಡಿದು ತೂತು ಬಿದ್ದ ಆ ಖಾಲಿ ಪರ್ಸ್‌
ಅದನ್ನೇ ನೆನೆವೆ………ಅದನ್ನೇ ನೆನೆದು
ಸುಮ್ಮನಾಗಿ ಬಿಡುವೆ ನಾನು
ನಿಮ್ಮೆಲ್ಲರ ಇಂದಿನ ಗೇಲಿಗಳಿಗೆ
ಭರ್ತಿ ಪರ್ಸ್‌ ಕಿಸೆಯೊಳಗಿದ್ದರು

ಬೊಗಸೆ ತುಂಬ ಸಂಬಳವೆಣಿಸುತ್ತ
ಖರ್ಚಿಗೊಂದು ಬಾರಿ ಸಂಕಲನ ವ್ಯವಕಲನಕ್ಕೆ
ಓರೇ ಹಚ್ಚುವ ನಾನು
ಕೊಂದ ಕನಸುಗಳ, ಮರೆತ ನೋವುಗಳ
ಪಟ್ಟಿ ಇಟ್ಟು ವಾದ ಮಾಡದ ನಾನು
ಜಿಪುಣತನಕ್ಕೊಂದು ಆದರ್ಶ ಉದಾಹರಣೆ
ನಿಮ್ಮಗಳ ಮುಂದೆ
ಆದರು ಅದೇಕೊ
ನಕ್ಕು ಸುಮ್ಮನಾಗುವೆ ನಾನು
ಇಂದಿನಂತಯೇ ……..ಮುಂದೆಯೂ ಕೂಡ

ಉತ್ತರಿಸಲಾರೆ ಎಂದಲ್ಲ
ನಾ ನಡೆದ ಬದುಕಿನ ದಾರಿಯಲಿ
ಹೆಜ್ಜೆ ಕೂಡ ಇಡದ ನಿಮಗೆ
ಪಯಣದ ವರದಿಯ ನೀಡಿ ಸಾಧಿಸುವುದಾದರು ಏನು ? ನಾನು.

ಹಾ….ಸುಮ್ಮನಿದ್ದೇನೆ ನಾನು
ಹೇಳಲು ಬಹಳಷ್ಟಿದ್ದರು.

ಅನುಷಾ ಚಂದ್ರು

(ಮೂಲತಾ ಚಿಕ್ಕಮಗಳೂರಿನ ಸಖರಾಯಪಟ್ಟಣದವರು. ಕನ್ನಡದಲ್ಲಿ ಎಂ ಎ ಪದವಿಯನ್ನು ಪಡೆದಿದ್ದು, ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.)


ಇದನ್ನೂ ಓದಿ: ಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...