Homeಕವನಅನುಷಾ ಚಂದ್ರುರವರ ಕವಿತೆ ಸುಮ್ಮನಿದ್ದೇನೆ ನಾನು…..

ಅನುಷಾ ಚಂದ್ರುರವರ ಕವಿತೆ ಸುಮ್ಮನಿದ್ದೇನೆ ನಾನು…..

- Advertisement -
- Advertisement -

ಹಾ….
ಸುಮ್ಮನಿದ್ದೇನೆ ನಾನು
ಹೇಳಲು ಬಹಳಷ್ಟಿದ್ದರು
ಅನುಭವಿಸಿದ್ದೇನೊ ಕೆಲವು
ಕಂಡದ್ದು ಹಲವು
ಆದರೆ ಎಲ್ಲವೂ ಸ್ವಂತದ್ದು
ಆದರದೇಕೊ ನಕ್ಕೊಮ್ಮೆ ಸುಮ್ಮನಾಗುವೆ ನಾನು
ಹೇಳಲು ಬಹಳಷ್ಟಿದ್ದರು

ಚಿಮಣಿ ಮೇಲಿನ ದೀಪದುರಿಯ ಕಪ್ಪಿನಲಿ
ಹೂತ ಕನಸುಗಳ ಚಿತ್ರವ ಕಂಡು……
ನನ್ನಮ್ಮ ಅಪ್ಪನಿಗೆ ಭರವಸೆಯೊಂದೆ
ಹೊಟ್ಟೆ ತುಂಬಿಸಿದ
ಖಾಲಿ ನೀರವ ರಾತ್ರಿಗಳ ನೆನೆದು

ನೀವು ನಾನಾಗದೆ ನಾನೇ ನೀವಾಗಲೊರಟು
ವಿಳಾಸವಿರದ ಊರಿನಲಿ
ದಾರಿ ತಪ್ಪಿ
ಕೊಳವಾದ ಕಂಗಳಲಿ
ಮಾಡಿದೊಂಟಿ ಯುದ್ಧವ ನೆನೆದು…..
ಸುಮ್ಮನಾದೆ ನಾನು

ಇದ್ದ ಬದುಕಿಗಿಡಿದ ಕನ್ನಡಿಯೆದುರು
ಹೊಸಕಿ‌ – ಕೊಂದ ಕನಸುಗಳ ಬಿಂಬ ಕಂಡು
ಹೆದರಿ ಮುದುರಿ ಮೌನಿಯಾದ ಕ್ಷಣವ ನೆನೆದು
ಸುಮ್ಮನಾಗಿ ಬಿಟ್ಟೆ ನಾನು
ಮಾತು ಬರುವ ಮೂಕಿಯಂತೆ
ಹೇಳಲು ಎಷ್ಟೊ ಅದೆಷ್ಟೋ ಇದ್ದರು

ಶಾಶ್ವತವಲ್ಲದೀ ದುಡ್ಡು
ಮೂಡಿಸಿದ ಶಾಶ್ವತ ಗುರುತುಗಳ
ಲೆಕ್ಕ ಪಟ್ಟಿಯ ಲೆಕ್ಕಗಳಲಿ
ಒದ್ದೆಯಾದ ಕಂಗಳನು
ಹುದುಗಿಸಿಡುತ
ಸುಮ್ಮನಾಗುವೆ ನಾನು
ನಿಮ್ಮಗಳೆದುರು
ನಾಲಿಗೆಯ ತುದಿಯಲ್ಲಿ
ಜಾರಲು ಅವೆಷ್ಟೋ ಮಾತುಗಳು ತವಕಿಸುತ್ತಿದ್ದರು

ಚೆಂದದ ನೋಟ ನಮ್ಮನ್ನಳೆವ ಮಾನದಂಡ
ಬೆಂಗಳೂರಿನಲ್ಲಿಇದೇ ನಾ ಕಲಿತ ಮೊದಲ ಪಾಠ
ಕಲಿಕೆಗೇನು ಕೊನೆಮೊದಲಿಲ್ಲವಲ್ಲ
ಪ್ರದರ್ಶನಕ್ಕೆ ಅಡ್ಡಿ ಮಾಡಿತ್ತು
ಧೂಳು ಹಿಡಿದು ತೂತು ಬಿದ್ದ ಆ ಖಾಲಿ ಪರ್ಸ್‌
ಅದನ್ನೇ ನೆನೆವೆ………ಅದನ್ನೇ ನೆನೆದು
ಸುಮ್ಮನಾಗಿ ಬಿಡುವೆ ನಾನು
ನಿಮ್ಮೆಲ್ಲರ ಇಂದಿನ ಗೇಲಿಗಳಿಗೆ
ಭರ್ತಿ ಪರ್ಸ್‌ ಕಿಸೆಯೊಳಗಿದ್ದರು

ಬೊಗಸೆ ತುಂಬ ಸಂಬಳವೆಣಿಸುತ್ತ
ಖರ್ಚಿಗೊಂದು ಬಾರಿ ಸಂಕಲನ ವ್ಯವಕಲನಕ್ಕೆ
ಓರೇ ಹಚ್ಚುವ ನಾನು
ಕೊಂದ ಕನಸುಗಳ, ಮರೆತ ನೋವುಗಳ
ಪಟ್ಟಿ ಇಟ್ಟು ವಾದ ಮಾಡದ ನಾನು
ಜಿಪುಣತನಕ್ಕೊಂದು ಆದರ್ಶ ಉದಾಹರಣೆ
ನಿಮ್ಮಗಳ ಮುಂದೆ
ಆದರು ಅದೇಕೊ
ನಕ್ಕು ಸುಮ್ಮನಾಗುವೆ ನಾನು
ಇಂದಿನಂತಯೇ ……..ಮುಂದೆಯೂ ಕೂಡ

ಉತ್ತರಿಸಲಾರೆ ಎಂದಲ್ಲ
ನಾ ನಡೆದ ಬದುಕಿನ ದಾರಿಯಲಿ
ಹೆಜ್ಜೆ ಕೂಡ ಇಡದ ನಿಮಗೆ
ಪಯಣದ ವರದಿಯ ನೀಡಿ ಸಾಧಿಸುವುದಾದರು ಏನು ? ನಾನು.

ಹಾ….ಸುಮ್ಮನಿದ್ದೇನೆ ನಾನು
ಹೇಳಲು ಬಹಳಷ್ಟಿದ್ದರು.

ಅನುಷಾ ಚಂದ್ರು

(ಮೂಲತಾ ಚಿಕ್ಕಮಗಳೂರಿನ ಸಖರಾಯಪಟ್ಟಣದವರು. ಕನ್ನಡದಲ್ಲಿ ಎಂ ಎ ಪದವಿಯನ್ನು ಪಡೆದಿದ್ದು, ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.)


ಇದನ್ನೂ ಓದಿ: ಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...