Homeಕವನಅನುಷಾ ಚಂದ್ರುರವರ ಕವಿತೆ ಸುಮ್ಮನಿದ್ದೇನೆ ನಾನು…..

ಅನುಷಾ ಚಂದ್ರುರವರ ಕವಿತೆ ಸುಮ್ಮನಿದ್ದೇನೆ ನಾನು…..

- Advertisement -
- Advertisement -

ಹಾ….
ಸುಮ್ಮನಿದ್ದೇನೆ ನಾನು
ಹೇಳಲು ಬಹಳಷ್ಟಿದ್ದರು
ಅನುಭವಿಸಿದ್ದೇನೊ ಕೆಲವು
ಕಂಡದ್ದು ಹಲವು
ಆದರೆ ಎಲ್ಲವೂ ಸ್ವಂತದ್ದು
ಆದರದೇಕೊ ನಕ್ಕೊಮ್ಮೆ ಸುಮ್ಮನಾಗುವೆ ನಾನು
ಹೇಳಲು ಬಹಳಷ್ಟಿದ್ದರು

ಚಿಮಣಿ ಮೇಲಿನ ದೀಪದುರಿಯ ಕಪ್ಪಿನಲಿ
ಹೂತ ಕನಸುಗಳ ಚಿತ್ರವ ಕಂಡು……
ನನ್ನಮ್ಮ ಅಪ್ಪನಿಗೆ ಭರವಸೆಯೊಂದೆ
ಹೊಟ್ಟೆ ತುಂಬಿಸಿದ
ಖಾಲಿ ನೀರವ ರಾತ್ರಿಗಳ ನೆನೆದು

ನೀವು ನಾನಾಗದೆ ನಾನೇ ನೀವಾಗಲೊರಟು
ವಿಳಾಸವಿರದ ಊರಿನಲಿ
ದಾರಿ ತಪ್ಪಿ
ಕೊಳವಾದ ಕಂಗಳಲಿ
ಮಾಡಿದೊಂಟಿ ಯುದ್ಧವ ನೆನೆದು…..
ಸುಮ್ಮನಾದೆ ನಾನು

ಇದ್ದ ಬದುಕಿಗಿಡಿದ ಕನ್ನಡಿಯೆದುರು
ಹೊಸಕಿ‌ – ಕೊಂದ ಕನಸುಗಳ ಬಿಂಬ ಕಂಡು
ಹೆದರಿ ಮುದುರಿ ಮೌನಿಯಾದ ಕ್ಷಣವ ನೆನೆದು
ಸುಮ್ಮನಾಗಿ ಬಿಟ್ಟೆ ನಾನು
ಮಾತು ಬರುವ ಮೂಕಿಯಂತೆ
ಹೇಳಲು ಎಷ್ಟೊ ಅದೆಷ್ಟೋ ಇದ್ದರು

ಶಾಶ್ವತವಲ್ಲದೀ ದುಡ್ಡು
ಮೂಡಿಸಿದ ಶಾಶ್ವತ ಗುರುತುಗಳ
ಲೆಕ್ಕ ಪಟ್ಟಿಯ ಲೆಕ್ಕಗಳಲಿ
ಒದ್ದೆಯಾದ ಕಂಗಳನು
ಹುದುಗಿಸಿಡುತ
ಸುಮ್ಮನಾಗುವೆ ನಾನು
ನಿಮ್ಮಗಳೆದುರು
ನಾಲಿಗೆಯ ತುದಿಯಲ್ಲಿ
ಜಾರಲು ಅವೆಷ್ಟೋ ಮಾತುಗಳು ತವಕಿಸುತ್ತಿದ್ದರು

ಚೆಂದದ ನೋಟ ನಮ್ಮನ್ನಳೆವ ಮಾನದಂಡ
ಬೆಂಗಳೂರಿನಲ್ಲಿಇದೇ ನಾ ಕಲಿತ ಮೊದಲ ಪಾಠ
ಕಲಿಕೆಗೇನು ಕೊನೆಮೊದಲಿಲ್ಲವಲ್ಲ
ಪ್ರದರ್ಶನಕ್ಕೆ ಅಡ್ಡಿ ಮಾಡಿತ್ತು
ಧೂಳು ಹಿಡಿದು ತೂತು ಬಿದ್ದ ಆ ಖಾಲಿ ಪರ್ಸ್‌
ಅದನ್ನೇ ನೆನೆವೆ………ಅದನ್ನೇ ನೆನೆದು
ಸುಮ್ಮನಾಗಿ ಬಿಡುವೆ ನಾನು
ನಿಮ್ಮೆಲ್ಲರ ಇಂದಿನ ಗೇಲಿಗಳಿಗೆ
ಭರ್ತಿ ಪರ್ಸ್‌ ಕಿಸೆಯೊಳಗಿದ್ದರು

ಬೊಗಸೆ ತುಂಬ ಸಂಬಳವೆಣಿಸುತ್ತ
ಖರ್ಚಿಗೊಂದು ಬಾರಿ ಸಂಕಲನ ವ್ಯವಕಲನಕ್ಕೆ
ಓರೇ ಹಚ್ಚುವ ನಾನು
ಕೊಂದ ಕನಸುಗಳ, ಮರೆತ ನೋವುಗಳ
ಪಟ್ಟಿ ಇಟ್ಟು ವಾದ ಮಾಡದ ನಾನು
ಜಿಪುಣತನಕ್ಕೊಂದು ಆದರ್ಶ ಉದಾಹರಣೆ
ನಿಮ್ಮಗಳ ಮುಂದೆ
ಆದರು ಅದೇಕೊ
ನಕ್ಕು ಸುಮ್ಮನಾಗುವೆ ನಾನು
ಇಂದಿನಂತಯೇ ……..ಮುಂದೆಯೂ ಕೂಡ

ಉತ್ತರಿಸಲಾರೆ ಎಂದಲ್ಲ
ನಾ ನಡೆದ ಬದುಕಿನ ದಾರಿಯಲಿ
ಹೆಜ್ಜೆ ಕೂಡ ಇಡದ ನಿಮಗೆ
ಪಯಣದ ವರದಿಯ ನೀಡಿ ಸಾಧಿಸುವುದಾದರು ಏನು ? ನಾನು.

ಹಾ….ಸುಮ್ಮನಿದ್ದೇನೆ ನಾನು
ಹೇಳಲು ಬಹಳಷ್ಟಿದ್ದರು.

ಅನುಷಾ ಚಂದ್ರು

(ಮೂಲತಾ ಚಿಕ್ಕಮಗಳೂರಿನ ಸಖರಾಯಪಟ್ಟಣದವರು. ಕನ್ನಡದಲ್ಲಿ ಎಂ ಎ ಪದವಿಯನ್ನು ಪಡೆದಿದ್ದು, ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.)


ಇದನ್ನೂ ಓದಿ: ಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...