Homeಕವನಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

ಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

- Advertisement -
- Advertisement -

ಮೊಳಗುತ್ತಿದೆ ಸೈರನ್!

ನಾನು
ಅಂದೇ ಹೇಳಿದ್ದೆ!
ಕಿರೀಟ ತೊಟ್ಟವರ ನಂಬದಿರಿ ಎಂದು!
ಜೀವ ಹಿಂಡುವ ರಕ್ತ ಹೀರುವ ಮಂದಿ
ನಮ್ಮ ನಿಮ್ಮಂತೆ ಬರುವುದಿಲ್ಲ!
ಕಿರೀಟ ತೊಟ್ಟಿಯೇ ಬರುತ್ತಾರೆ!
ಥೇಟ್ ಈಗ ಬಂದಿರುವ
ಅರೆಜೀವಿಯಂತೆ!
ಪೀಠವಿಲ್ಲದ ಅರಮನೆಯಲ್ಲಿ
ಕಿರೀಟಿ ರಾಜನದ್ದೆ ಆರ್ಭಟ
ನಿರ್ಗತಿಕ ವಲಸೆಗಾರರ ಬಡವರ
ಕೂಳಿಗೂ ಗತಿ ಇಲ್ಲ!
ಮಂದಗತಿಯ ಮೂರ್ಖ ರಾಜನಿಗೆ
ಕೇಳುವವರು ಯಾರು?
ಅಯ್ಯೋ ಹೇಳುವವರು ಯಾರು?
ಎಂದು ಗೊರವಂಕ ಕೂಗುತ್ತಿರುವಾಗ
ಗಲ್ಲಿಗಲ್ಲಿಗಳ ರಸ್ತೆಗಳಲ್ಲಿ
ಒಣಗಿ ಉದುರಿದ ಎಲೆಗಳ ತಳಗಳಲ್ಲಿ
ಹುಳದಂತೆ ಜನರು ಸಾಯುತ್ತಿರುವ ದೃಶ್ಯವನ್ನು
ತದೇಕ ಚಿತ್ತದಿಂದ ಕಂಬಳಿ ಹುಳುವೊಂದು
ಬರೆದು ದಾಖಲು ಮಾಡುತ್ತಿತ್ತು
“ಯಕಶ್ಚಿತ್ ಕಣ್ಣಿಗೆ ಕಾಣದ
ಅರೆಜೀವಿಯೊಂದರಿಂದ
ಮನುಷ್ಯರು ಉಸಿರುಗಟ್ಟಿ
ಸಾಯುತ್ತಿದ್ದಾರೆ ಅಯ್ಯೋ
ಮನುಷ್ಯರು ಉಸಿರುಗಟ್ಟಿ
ಸಾಯುತ್ತಿದ್ದಾರೆ”

ಮರದ ಮೇಲೆ ಕೂತ ಹಕ್ಕಿ
ಅಯ್ಯೋ ಅಯ್ಯೋ ಈ ಮನುಷ್ಯರಿಗೆ ಏನಾಗಿದೆ?
ಯಾಕ್ಹೀಗೆ ಮುಖಕ್ಕೆ ಮುಸುಕು ಹಾಕಿಕೊಂಡಿದ್ದಾರೆ!
ಕಲ್ಲು ಹೊಡೆಯುತ್ತಿದ್ದ ಕೈಗಳೇ ಕಾಣುತ್ತಿಲ್ಲವಲ್ಲ!
ಎಂದು ವ್ಯಂಗ್ಯವಾಗಿ ಚರಮಗೀತೆಯ ಹಾಡುತ್ತಿತ್ತು!
ಬೆಕ್ಕು, ನಾಯಿ, ಇರುವೆ ಮತ್ತು ಕೋಳಿ ಮಾತನಾಡಿಕೊಳ್ಳುತ್ತಿದ್ದವು!
ನೋಡಿದೆಯ ಬೆಕ್ಕಣ್ಣ
‘ನಮ್ಮ ಕುತ್ತಿಗೆಗೆ ಹಗ್ಗ ಜಡಿದು ಮೂಲೆಗೆ ಕಟ್ಟುತ್ತಿದ್ದ
ಈ ಮನುಷ್ಯರ ಪಾಡು ಇಂದು ಈಗ ಏನಾಗಿದೆಯೆಂದು?
ಕಾಲಕ್ಕೆ ಬೆಲೆ ಕಟ್ಟುವರುಂಟೆ?
ಕೆಲಸವಿಲ್ಲದ ಯುವಕರ ಗೋಣು
ನೇಣು ಕುಣಿಕೆಗೆ ಅಯ್ಯೋ ನೋಡಲಾಗುತ್ತಿಲ್ಲ!
ಕೆಲಸವೇ ಸಿಗುತ್ತಿಲ್ಲ!
ಗುಳೆ ಬಂದವರ ಪಾಡು
ಅವರ ಹಸಿವು ಯಾರಿಗೂ ಬೇಡ!’
ಎಂದು ಬೊಗಳಿತು ನಾಯಿ!
ಹೌದಣ್ಣ ಹೌದು
‘ತೋಳಕ್ಕೆ ಸಿಂಹದ ಬಣ್ಣ
ನಾಯಕನ ಬಣ್ಣ ಬಳಿದರೆ
ಎಷ್ಟು ದಿನ ತಾನೇ ಉಳಿದೀತು?
ಮಳೆ ಬಂದಾಗ ಕರಗಿ
ಬಿಸಿಲು ಹೆಚ್ಚಾದಾಗ ಒಣಗಿ
ಹೋಗಲೇಬೇಕಲ್ಲ!
ರಾಜನ ಸತ್ಯದ ಮಿಥ್ಯವು ಜನರಿಗೆ ತಿಳಿಯಲೆ ಬೇಕಲ್ಲ!
ಕ್ಕೊ ಕ್ಕೊ ಕ್ಕೊ ಎಂದು ಕೂಗಿತು ಕೋಳಿ!

ನಂಟು ಗಂಟಿನ ಹಂಗಿನೊಳಗೆ ಯಾವ
ಸಾಂಕ್ರಾಮಿಕ ರೋಗ ಬಂದರೇನು?
ಮನುಷ್ಯ ಬದಲಾಗುವನೇ?
ಇಲ್ಲ ಅವನು ಬದಲಾಗುವುದೇ ಇಲ್ಲ!
ಜಿಡ್ಡುಗಟ್ಟಿದೆ ಮೆದುಳು
ಮದ ಮತ್ಸರ ಮೋಹ ಸ್ವಾರ್ಥದಿಂದ!
ಹಸಿದ ಹೊಟ್ಟೆಗೆ ಅನ್ನ ಇಕ್ಕುವವರಿಲ್ಲ!
ತಿನ್ನುವವರು ರೋಗದ ಹೆಸರಿನಲ್ಲಿ
ಮತ್ತಷ್ಟು ಮಗದಷ್ಟು ತಿನ್ನುತ್ತಲೆ ಇದ್ದಾರೆ!
ಸಾಯುವವರು ಮಾತ್ರ ಸಾಯುತ್ತಲೆ ಇದ್ದಾರೆ!
ಇದಕ್ಕೆ ಕೊನೆ ಎಲ್ಲಿದೆ ಇಲ್ಲಿ?
ಎಂದು ಬುಸುಗುಟ್ಟಿತು ಹಾವು ಪೊಟರೆಯಲಿ!

ಕಾಲದ ಮೃಗ ಓಡುತ್ತಿದೆ ಓಡುತ್ತಿದೆ
ತನ್ನ ಬೆನ್ನ ತಾನೇ ಕಾಣದಂತೆ!
ಮೃಗ ಖಗಗಳು ವ್ಯಂಗ್ಯವಾಡುತ್ತಿವೆ!
ಅಪರೂಪಕ್ಕೆ ಕೇಳುತ್ತಿದ್ದ
ಆ್ಯಂಬುಲೆನ್ಸಿನ ಸೈರನ್ ಸದ್ದು
ಈಗ ನಿತ್ಯದ ಮಂತ್ರವಾಗಿದೆ!
ರಾಮ ಮಂದಿರದ ಭಜನೆಯಂತೆ
ಭಗವದ್ಗೀತೆಯ ಶ್ಲೋಕದಂತೆ!
ಅಲ್ಲಾವುವಿನ ಆದೇಶದಂತೆ
ಕುರಾನಿನ ವಚನದಂತೆ!
ಶಿಲುಬೆ ಮೇಲಿನ ಅಹಿಂಸಾ ಮೂರ್ತಿಯಂತೆ
ಬೈಬಲ್ಲಿನ ವಾಣಿಯಂತೆ!
ಬುದ್ಧನ ಉಪದೇಶದಂತೆ
ಹೊರಗೆ ಹೆಜ್ಜೆ ಇಟ್ಟರೆ ಸಾಕು ಸೈರನ್ ‌ಮೊಳಗುತ್ತಿದೆ
‘ಎಚ್ಚರ‌ ಮನುಷ್ಯ ಎಚ್ಚರ
ನಿನಗಿನ್ನೂ ಬಹಳ ಸಮಯವಿದೆ ಬದಲಾಗು’ ಎಂದು!

ಶಂಕರ್ ಸಿಹಿಮೊಗೆ

(ಮೂಲತಃ ಶಿವಮೊಗ್ಗದವರಾದ ಶಂಕರ್ ಸಿಹಿಮೊಗೆಯವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ.)


ಇದನ್ನೂ ಓದಿ: ಕವನ | ಅಂತಿಮ ವಲಸೆಯ ಮುನ್ನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....