Homeಕವನಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

ಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

- Advertisement -
- Advertisement -

ಮೊಳಗುತ್ತಿದೆ ಸೈರನ್!

ನಾನು
ಅಂದೇ ಹೇಳಿದ್ದೆ!
ಕಿರೀಟ ತೊಟ್ಟವರ ನಂಬದಿರಿ ಎಂದು!
ಜೀವ ಹಿಂಡುವ ರಕ್ತ ಹೀರುವ ಮಂದಿ
ನಮ್ಮ ನಿಮ್ಮಂತೆ ಬರುವುದಿಲ್ಲ!
ಕಿರೀಟ ತೊಟ್ಟಿಯೇ ಬರುತ್ತಾರೆ!
ಥೇಟ್ ಈಗ ಬಂದಿರುವ
ಅರೆಜೀವಿಯಂತೆ!
ಪೀಠವಿಲ್ಲದ ಅರಮನೆಯಲ್ಲಿ
ಕಿರೀಟಿ ರಾಜನದ್ದೆ ಆರ್ಭಟ
ನಿರ್ಗತಿಕ ವಲಸೆಗಾರರ ಬಡವರ
ಕೂಳಿಗೂ ಗತಿ ಇಲ್ಲ!
ಮಂದಗತಿಯ ಮೂರ್ಖ ರಾಜನಿಗೆ
ಕೇಳುವವರು ಯಾರು?
ಅಯ್ಯೋ ಹೇಳುವವರು ಯಾರು?
ಎಂದು ಗೊರವಂಕ ಕೂಗುತ್ತಿರುವಾಗ
ಗಲ್ಲಿಗಲ್ಲಿಗಳ ರಸ್ತೆಗಳಲ್ಲಿ
ಒಣಗಿ ಉದುರಿದ ಎಲೆಗಳ ತಳಗಳಲ್ಲಿ
ಹುಳದಂತೆ ಜನರು ಸಾಯುತ್ತಿರುವ ದೃಶ್ಯವನ್ನು
ತದೇಕ ಚಿತ್ತದಿಂದ ಕಂಬಳಿ ಹುಳುವೊಂದು
ಬರೆದು ದಾಖಲು ಮಾಡುತ್ತಿತ್ತು
“ಯಕಶ್ಚಿತ್ ಕಣ್ಣಿಗೆ ಕಾಣದ
ಅರೆಜೀವಿಯೊಂದರಿಂದ
ಮನುಷ್ಯರು ಉಸಿರುಗಟ್ಟಿ
ಸಾಯುತ್ತಿದ್ದಾರೆ ಅಯ್ಯೋ
ಮನುಷ್ಯರು ಉಸಿರುಗಟ್ಟಿ
ಸಾಯುತ್ತಿದ್ದಾರೆ”

ಮರದ ಮೇಲೆ ಕೂತ ಹಕ್ಕಿ
ಅಯ್ಯೋ ಅಯ್ಯೋ ಈ ಮನುಷ್ಯರಿಗೆ ಏನಾಗಿದೆ?
ಯಾಕ್ಹೀಗೆ ಮುಖಕ್ಕೆ ಮುಸುಕು ಹಾಕಿಕೊಂಡಿದ್ದಾರೆ!
ಕಲ್ಲು ಹೊಡೆಯುತ್ತಿದ್ದ ಕೈಗಳೇ ಕಾಣುತ್ತಿಲ್ಲವಲ್ಲ!
ಎಂದು ವ್ಯಂಗ್ಯವಾಗಿ ಚರಮಗೀತೆಯ ಹಾಡುತ್ತಿತ್ತು!
ಬೆಕ್ಕು, ನಾಯಿ, ಇರುವೆ ಮತ್ತು ಕೋಳಿ ಮಾತನಾಡಿಕೊಳ್ಳುತ್ತಿದ್ದವು!
ನೋಡಿದೆಯ ಬೆಕ್ಕಣ್ಣ
‘ನಮ್ಮ ಕುತ್ತಿಗೆಗೆ ಹಗ್ಗ ಜಡಿದು ಮೂಲೆಗೆ ಕಟ್ಟುತ್ತಿದ್ದ
ಈ ಮನುಷ್ಯರ ಪಾಡು ಇಂದು ಈಗ ಏನಾಗಿದೆಯೆಂದು?
ಕಾಲಕ್ಕೆ ಬೆಲೆ ಕಟ್ಟುವರುಂಟೆ?
ಕೆಲಸವಿಲ್ಲದ ಯುವಕರ ಗೋಣು
ನೇಣು ಕುಣಿಕೆಗೆ ಅಯ್ಯೋ ನೋಡಲಾಗುತ್ತಿಲ್ಲ!
ಕೆಲಸವೇ ಸಿಗುತ್ತಿಲ್ಲ!
ಗುಳೆ ಬಂದವರ ಪಾಡು
ಅವರ ಹಸಿವು ಯಾರಿಗೂ ಬೇಡ!’
ಎಂದು ಬೊಗಳಿತು ನಾಯಿ!
ಹೌದಣ್ಣ ಹೌದು
‘ತೋಳಕ್ಕೆ ಸಿಂಹದ ಬಣ್ಣ
ನಾಯಕನ ಬಣ್ಣ ಬಳಿದರೆ
ಎಷ್ಟು ದಿನ ತಾನೇ ಉಳಿದೀತು?
ಮಳೆ ಬಂದಾಗ ಕರಗಿ
ಬಿಸಿಲು ಹೆಚ್ಚಾದಾಗ ಒಣಗಿ
ಹೋಗಲೇಬೇಕಲ್ಲ!
ರಾಜನ ಸತ್ಯದ ಮಿಥ್ಯವು ಜನರಿಗೆ ತಿಳಿಯಲೆ ಬೇಕಲ್ಲ!
ಕ್ಕೊ ಕ್ಕೊ ಕ್ಕೊ ಎಂದು ಕೂಗಿತು ಕೋಳಿ!

ನಂಟು ಗಂಟಿನ ಹಂಗಿನೊಳಗೆ ಯಾವ
ಸಾಂಕ್ರಾಮಿಕ ರೋಗ ಬಂದರೇನು?
ಮನುಷ್ಯ ಬದಲಾಗುವನೇ?
ಇಲ್ಲ ಅವನು ಬದಲಾಗುವುದೇ ಇಲ್ಲ!
ಜಿಡ್ಡುಗಟ್ಟಿದೆ ಮೆದುಳು
ಮದ ಮತ್ಸರ ಮೋಹ ಸ್ವಾರ್ಥದಿಂದ!
ಹಸಿದ ಹೊಟ್ಟೆಗೆ ಅನ್ನ ಇಕ್ಕುವವರಿಲ್ಲ!
ತಿನ್ನುವವರು ರೋಗದ ಹೆಸರಿನಲ್ಲಿ
ಮತ್ತಷ್ಟು ಮಗದಷ್ಟು ತಿನ್ನುತ್ತಲೆ ಇದ್ದಾರೆ!
ಸಾಯುವವರು ಮಾತ್ರ ಸಾಯುತ್ತಲೆ ಇದ್ದಾರೆ!
ಇದಕ್ಕೆ ಕೊನೆ ಎಲ್ಲಿದೆ ಇಲ್ಲಿ?
ಎಂದು ಬುಸುಗುಟ್ಟಿತು ಹಾವು ಪೊಟರೆಯಲಿ!

ಕಾಲದ ಮೃಗ ಓಡುತ್ತಿದೆ ಓಡುತ್ತಿದೆ
ತನ್ನ ಬೆನ್ನ ತಾನೇ ಕಾಣದಂತೆ!
ಮೃಗ ಖಗಗಳು ವ್ಯಂಗ್ಯವಾಡುತ್ತಿವೆ!
ಅಪರೂಪಕ್ಕೆ ಕೇಳುತ್ತಿದ್ದ
ಆ್ಯಂಬುಲೆನ್ಸಿನ ಸೈರನ್ ಸದ್ದು
ಈಗ ನಿತ್ಯದ ಮಂತ್ರವಾಗಿದೆ!
ರಾಮ ಮಂದಿರದ ಭಜನೆಯಂತೆ
ಭಗವದ್ಗೀತೆಯ ಶ್ಲೋಕದಂತೆ!
ಅಲ್ಲಾವುವಿನ ಆದೇಶದಂತೆ
ಕುರಾನಿನ ವಚನದಂತೆ!
ಶಿಲುಬೆ ಮೇಲಿನ ಅಹಿಂಸಾ ಮೂರ್ತಿಯಂತೆ
ಬೈಬಲ್ಲಿನ ವಾಣಿಯಂತೆ!
ಬುದ್ಧನ ಉಪದೇಶದಂತೆ
ಹೊರಗೆ ಹೆಜ್ಜೆ ಇಟ್ಟರೆ ಸಾಕು ಸೈರನ್ ‌ಮೊಳಗುತ್ತಿದೆ
‘ಎಚ್ಚರ‌ ಮನುಷ್ಯ ಎಚ್ಚರ
ನಿನಗಿನ್ನೂ ಬಹಳ ಸಮಯವಿದೆ ಬದಲಾಗು’ ಎಂದು!

ಶಂಕರ್ ಸಿಹಿಮೊಗೆ

(ಮೂಲತಃ ಶಿವಮೊಗ್ಗದವರಾದ ಶಂಕರ್ ಸಿಹಿಮೊಗೆಯವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ.)


ಇದನ್ನೂ ಓದಿ: ಕವನ | ಅಂತಿಮ ವಲಸೆಯ ಮುನ್ನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...