Homeದಲಿತ್ ಫೈಲ್ಸ್ಪ್ರತಿಭಟನೆ ಕಾರಣಕ್ಕೆ ಅಮಾನತುಗೊಂಡಿದ್ದ ದಲಿತ ವಿದ್ಯಾರ್ಥಿಗೆ ಸುಪ್ರೀಂ ಕೋರ್ಟ್ ಪರಿಹಾರ; ಪಿಎಚ್‌ಡಿ ಮುಂದುವರಿಸಲು ಅವಕಾಶ

ಪ್ರತಿಭಟನೆ ಕಾರಣಕ್ಕೆ ಅಮಾನತುಗೊಂಡಿದ್ದ ದಲಿತ ವಿದ್ಯಾರ್ಥಿಗೆ ಸುಪ್ರೀಂ ಕೋರ್ಟ್ ಪರಿಹಾರ; ಪಿಎಚ್‌ಡಿ ಮುಂದುವರಿಸಲು ಅವಕಾಶ

- Advertisement -
- Advertisement -

ದುಷ್ಕೃತ್ಯ ಹಾಗೂ ದೇಶವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಈ ಹಿಂದೆ ಅಮಾನತುಗೊಂಡಿದ್ದ ದಲಿತ ಪಿಎಚ್‌ಡಿ ಸಂಶೋಧಕ ಮತ್ತು ಎಡಪಂಥೀಯ ವಿದ್ಯಾರ್ಥಿ ನಾಯಕ ರಾಮದಾಸ್ ಕೆ.ಎಸ್ ಅವರಿಗೆ ಸುಪ್ರೀಂ ಕೋರ್ಟ್ ಪರಿಹಾರ ನೀಡಿದ್ದು, ಪಿಎಚ್‌ಡಿ ಮುಂದುವರಿಸಲು ವಿದ್ಯಾರ್ಥಿಗೆ ಅವಕಾಶ ನೀಡುವಂತೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠವು ಅಮಾನತು ಅಮಾನ್ಯಗೊಳಿಸಲಿಲ್ಲ. ಆದರೂ, ಈಗಾಗಲೇ ನಿನ್ನೆಯವರೆಗೆ ಅಅನುಭವಿಸಿದ ಮಾನತು ಇಂದಿಗೆ ಇಳಿಸಬೇಕೆಂದು ನಿರ್ದೇಶಿಸಿತು. ರಾಮದಾಸ್ ಅವರ ಪಿಎಚ್‌ಡಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಏಪ್ರಿಲ್ 2024 ರಲ್ಲಿ ಟಿಐಎಸ್‌ಎಸ್ ರಾಮದಾಸ್ ಅವರನ್ನು ಸಂಸ್ಥೆಯಿಂದ ಎರಡು ವರ್ಷಗಳ ಕಾಲ ಅಮಾನತುಗೊಳಿಸಿತು. ಟಿಸ್‌ನ ಎಲ್ಲ ಕ್ಯಾಂಪಸ್‌ಗಳಲ್ಲಿ ಅವರ ಪ್ರವೇಶವನ್ನು ನಿಷೇಧಿಸಿತು. ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧದ ಪ್ರತಿಭಟನೆಯಲ್ಲಿ ರಾಮದಾಸ್ ಭಾಗವಹಿಸಿದ ನಂತರ, ಜನವರಿ 2024 ರಲ್ಲಿ ಟಿಐಎಸ್‌ಎಸ್- ಪಿಎಸ್‌ಎಫ್ (ಪ್ರಗತಿಶೀಲ ವಿದ್ಯಾರ್ಥಿಗಳ ವೇದಿಕೆ) ಬ್ಯಾನರ್ ಅಡಿಯಲ್ಲಿ ‘ಸಂಸತ್ತಿನ ಮೆರವಣಿಗೆ’ ಎಂಬ ಪ್ರದರ್ಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನವನ್ನು ವಿರೋಧಿಸಿದ ನಂತರ ಈ ಕ್ರಮ ಕೈಗೊಳ್ಳಲಾಯಿತು.

ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ರಾಮದಾಸ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಹೈಕೋರ್ಟ್‌ ರಾಮ್‌ದಾಸ್‌ರವರ ಅಮಾನತು ಎತ್ತಿಹಿಡಿದಿದೆ. ಈ ಪ್ರತಿಭಟನೆ/ಮೆರವಣಿಗೆ ರಾಜಕೀಯ ಪ್ರೇರಿತವಾಗಿದೆ ಎಂದು ಹೈಕೋರ್ಟ್ ಗಮನಿಸಿತು. ಮೆರವಣಿಗೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಸಂಸ್ಥೆಯ ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತವೆ ಮತ್ತು ಇದು ಸಂಸ್ಥೆಗೆ ಅಪಖ್ಯಾತಿ ತರುತ್ತದೆ ಎಂಬ ಅಭಿಪ್ರಾಯವನ್ನು ರಾಮದಾಸ್ ಸೃಷ್ಟಿಸಿದ್ದಾರೆ ಎಂದು ಟಿಐಎಸ್‌ಎಸ್‌ ಕಂಡುಕೊಂಡಿದ್ದು ಸರಿಯಾಗಿದೆ ಎಂದು ಗಮನಿಸಿತು.

2015 ರಲ್ಲಿ ರಾಮದಾಸ್ ಮೊದಲು ಮಾಧ್ಯಮ ಮತ್ತು ಸಾಂಸ್ಕೃತಿಕ ಅಧ್ಯಯನ ಕೋರ್ಸ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ ಟಿಐಎಸ್‌ಎಸ್‌ಗೆ ಸೇರಿಕೊಂಡರು. ಅವರಿಗೆ ಸಂಸ್ಥೆಯಿಂದ ವಿದ್ಯಾರ್ಥಿವೇತನ ನೀಡಲಾಯಿತು. 2018 ರಲ್ಲಿ, ಅವರು ಅಭಿವೃದ್ಧಿ ಅಧ್ಯಯನದಲ್ಲಿ ಸಂಯೋಜಿತ ಎಂಪಿಲ್. ಮತ್ತು ಪಿಎಚ್‌ಡಿ ಕೋರ್ಸ್‌ಗೆ ಸೇರಿಕೊಂಡರು. 2023 ರಲ್ಲಿ, ಯುಜಿಸಿ-ನೆಟ್‌ ಪರೀಕ್ಷೆಯಲ್ಲಿ ಅವರ ಸಾಧನೆಯನ್ನು ಪರಿಗಣಿಸಿ, ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯವು ಅವರಿಗೆ ಪರಿಶಿಷ್ಟ ಜಾತಿಯಲ್ಲಿ ರಾಷ್ಟ್ರೀಯ ಫೆಲೋಶಿಪ್ ನೀಡಿತು.

ಜಾಮೀನು ಪಡೆದ ಆರೋಪಿಗೆ ವಿದೇಶ ಪ್ರವಾಸಕ್ಕೆ ಅನುಮತಿ ಕೋರುವ ಹಕ್ಕಿಲ್ಲ: ಅಲಹಾಬಾದ್ ಹೈಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -