Homeಮುಖಪುಟಬಂಧನದಲ್ಲೂ ಕಾನೂನು ನೆರವು ನೀಡುವುದನ್ನು ಮುಂದುವರೆಸಿರುವ ಸುರೇಂದ್ರ ಗಾಡ್ಲಿಂಗ್

ಬಂಧನದಲ್ಲೂ ಕಾನೂನು ನೆರವು ನೀಡುವುದನ್ನು ಮುಂದುವರೆಸಿರುವ ಸುರೇಂದ್ರ ಗಾಡ್ಲಿಂಗ್

ಖೈರ್ಲಾಂಜಿ ಹತ್ಯಾಕಾಂಡ, ಜಾವಖೇಡ ಹತ್ಯಾಕಾಂಡ, ಮನೋರಮಾ ಕಾಂಬ್ಳೆ ಹತ್ಯಾಕಾಂಡ, ಕಾವಲೇವಾಡ ಸಂಜಯ್ ಕೋಬ್ರಗಾಡೆ ಕೊಲೆ ಪ್ರಕರಣ, ರಾಮಾಬಾಯಿ ಅಂಬೇಡ್ಕರ್ ನಗರ ಹತ್ಯಾಕಾಂಡ ಪ್ರತಿಭಟನೆ ಪ್ರಕರಣಗಳು, ನಕಲಿ ಎನ್‌ಕೌಂಟರ್‌ಗಳಂತಹ ಪ್ರಕರಣಗಳಲ್ಲಿ ಗಾಡ್ಲಿಂಗ್ ಮುಂಚೂಣಿಯ ನ್ಯಾಯವಾದಿಯಾಗಿದ್ದರು.

- Advertisement -
- Advertisement -

ಸುರೇಂದ್ರ ಅವರು ಮೋಕಾ (MCOCA), ಪೋಟಾ (POTA), ಟಾಡಾ (TADA), ಯುಎಪಿಎ (UAPA) ಗಳಂತ ಕಾಯಿದೆಗಳ ಕುರಿತು ಗಮನಾರ್ಹ ತಿಳುವಳಿಕೆ ಹೊಂದಿದ್ದವರು. ಕಳೆದ 24 ವರ್ಷಗಳಲ್ಲಿ ಹೈಕೋರ್ಟ್ ಮತ್ತು ಅನೇಕ ವೇದಿಕೆಗಳ ಮುಂದೆ ವಿವಿಧ ಪ್ರಕರಣಗಳನ್ನು ನಿರ್ವಹಿಸಿದ್ದರು. ವ್ಯಕ್ತಿಯೊಬ್ಬ ಆರೋಪಿಯಾದರೂ ಸಹ ಆತನ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಆತನ ಪರವಾಗಿ ವಕಾಲತ್ತು ವಹಿಸುವುದು ತಮ್ಮ ವೃತ್ತಿಪರ ಉದ್ಯೋಗದ ಮೂಲಭೂತ ಕರ್ತವ್ಯ ಎಂದು ನಂಬಿದ್ದ ಕಾರಣಕ್ಕಾಗಿ ಪೋಲೀಸ್ ವ್ಯವಸ್ಥೆಯ ಹಗೆತನ ಕಟ್ಟಿಕೊಂಡದ್ದಲ್ಲದೆ, ಹಲವು ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಕಾಯಿತು. ಅಲ್ಲಿ ಅನೇಕರು ಹಲವು ಸಂದರ್ಭಗಳಲ್ಲಿ ಇವರಿಗೆ ಬೆದರಿಕೆ ಹಾಕಿದ್ದಿದೆ. ಅವೆಲ್ಲಾ ಟೊಳ್ಳು ಬೆದರಿಕೆಗಳಾಗಿದ್ದವು. ಆ ಮೂಲಕ ಭಯ ಹುಟ್ಟಿಸುವುದು ಹಾಗೂ ಅರ್ಜಿದಾರರು ವಿಚಾರಣೆಯಿಂದ ಹಿಂದಕ್ಕೆ ಸರಿಯುವಂತೆ ಮಾಡುವುದು ಅಥವಾ ವಿಚಲಿತರನ್ನಾಗಿಸುವುದು ಇದರ ಉದ್ದೇಶವಾಗಿತ್ತು. ಆದರೆ ಇವರು ಒಬ್ಬ ಪ್ರಬುದ್ದ ಫಿರ್ಯಾದಿದಾರರಾಗಿದ್ದರಿಂದ ಈ ದಾಳಿಕೋರರನ್ನು ನಿರುತ್ಸಾಹಗೊಳಿಸಿ ಅಲಕ್ಷಿಸುತ್ತಿದ್ದರು

ಕೆಲವು ಕಾನೂನುಗಳೊಂದಿಗೆ ಸಂಘರ್ಷ ನಡೆಸುತ್ತಿದ್ದ ಹಲವು ಜನರ ಸೇವೆ ಮಾಡುತ್ತಿದ್ದ ಸುರೇಂದ್ರ, ಕೆಲ ಅತಿ ಸೂಕ್ಷ್ಮ ವಿಷಯಗಳನ್ನು ನಿರ್ವಹಿಸಬೇಕಾಗುತ್ತಿತ್ತು ಮತ್ತು ಈ ಕಾರಣಕ್ಕಾಗಿ ಜನರ ನಡುವೆ ಪ್ರಚಾರ ದೊರಕುತ್ತಿತ್ತು ಹಾಗೆಯೆ ಪೋಲೀಸರ ಕೆಂಗಣ್ಣಿಗೂ ಗುರಿಯಾದ್ದಿರು.

ಒಂದು ಬಾರಿ ಮಹಿಳಾ ಸಂಘಟನೆಗಳ ಕೋರಿಕೆಯ ಮೇರೆಗೆ ಇವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿಕೊಂಡಾಗ, ಬಿಗಿಯಾದ ಪೋಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತಿತ್ತು, ಕೋರ್ಟ್‌ನ ಆವರಣವನ್ನು ರಕ್ಷಣಾ ದಳದ ಮೂಲಕ ಸುತ್ತುವರೆಯುತ್ತಿದ್ದರು. ಕೋರ್ಟನಲ್ಲಿ ವಿಚಾರಣೆಯ ದಿನಗಳಂದು ಎಚ್ಚರಿಕೆಯ ನೋಟೀಸು ಹೊರಡಿಸುತ್ತಿದ್ದರು ಮತ್ತು ಇಂತಹ ಪ್ರಕರಣಗಳಲ್ಲಿ ಪೋಲೀಸರು ತಮ್ಮ ನಿರಂಕುಶ ಅಧಿಕಾರವನ್ನು ಪ್ರಯೋಗಿಸುತ್ತಿದ್ದರು. ಇದೆಲ್ಲದರಾಚೆ ಕೋರ್ಟಿಗೆ ವ್ಯಕ್ತಿಗಳ ನಿರ್ದೋಷತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ಮತ್ತು ಬಾಲಿಶವಾದ ಆರೋಪಗಳನ್ನು ತಿರಸ್ಕರಿಸುವುದರಲ್ಲಿ ಗಾಡ್ಲಿಂಗ್ ಸಫಲರಾಗುತ್ತಿದ್ದರು. ಯುಎಪಿಎ, ಟಾಡಾ ಕಾಯಿದೆ ಅಡಿಯಲ್ಲಿ ಆರೋಪಿತರಾದ, ಭಯೋತ್ಪಾದಕರು ಅಥವಾ ನಕ್ಸಲೈಟ್‌ರು ಎಂದು ಹಣೆಪಟ್ಟಿ ಕಟ್ಟಿದ್ದ ಅಮಾಯಕರ ಪರವಾಗಿ ವಕಾಲತ್ತು ವಹಿಸುತ್ತಿದ್ದರು. ಸೌಹಾರ್ದ ಸಮಾಜಕ್ಕಾಗಿ ದುಡಿದ ಇಂತಹವರ ಹೆಸರುಗಳು ಇತಿಹಾಸದ ಭಾಗವಾಗುವುದರಲ್ಲಿ ಅನುಮಾನವಿಲ್ಲ.

ಅರುಣ್ ಫೆರೇರ, ಧನೇಂದ್ರ ಭೂರಿಲೆ, ವೆರ್ನನ್ ಗೋನ್ಸಾಲ್ವಿಸ್, ಸುಧೀರ್ ಧಾವಲೆರಂತಹವರ ಪರ ಗಾಂಡ್ಲಿಂಗ್ ವಕಾಲತ್ತು ವಹಿಸಿದ್ದರ ಜೊತೆಗೆ ವಿಭಿನ್ನ ಸಿದ್ಧಾಂತಗಳ ಹಿನ್ನಲೆಯುಳ್ಳಂತಹ ಹೋರಾಟಗಾರರ ಪರವಾಗಿ ಗಾಡ್ಲಿಂಗ್ ಮುಖ್ಯ ಪಾತ್ರವಹಿಸುತ್ತಿದ್ದರು.

ಖೈರ್ಲಾಂಜಿ ಹತ್ಯಾಕಾಂಡ, ಜಾವಖೇಡ ಹತ್ಯಾಕಾಂಡ, ಮನೋರಮಾ ಕಾಂಬ್ಳೆ ಹತ್ಯಾಕಾಂಡ, ಕಾವಲೇವಾಡ ಸಂಜಯ್ ಕೋಬ್ರಗಾಡೆ ಕೊಲೆ ಪ್ರಕರಣ, ರಾಮಾಬಾಯಿ ಅಂಬೇಡ್ಕರ್ ನಗರ ಹತ್ಯಾಕಾಂಡ ಪ್ರತಿಭಟನೆ ಪ್ರಕರಣಗಳು, ನಕಲಿ ಎನ್‌ಕೌಂಟರ್‌ಗಳಂತಹ ಪ್ರಕರಣಗಳಲ್ಲಿ ಗಾಡ್ಲಿಂಗ್ ಮುಂಚೂಣಿಯ ನ್ಯಾಯವಾದಿಯಾಗಿದ್ದರು. ಇದರ ಜೊತೆಗೆ ಭೀಮ್ ಕೊರೆಗಾಂವ್ ಗಲಭೆಯ ತನಿಖೆ ನಡೆಸುತ್ತಿದ್ದ ಸತ್ಯಶೋಧನಾ ಸಮಿತಿಯ ಭಾಗವಾಗಿದ್ದರು.

ಇಂತ ಒಂದು ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಮಹಿಳಾ ಸಂಘಟನೆಗಳು ಅರ್ಜಿದಾರರನ್ನೇ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಆಗಿ ನೇಮಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದವು. ನಂತರ ಒತ್ತಡಕ್ಕೆ ಮಣಿದು ಗಾಡ್ಲಿಂಗ್ ಅವರನ್ನು ನೇಮಿಸಿಕೊಳ್ಳಲಾಯಿತು ಮತ್ತು ಪ್ರತಿಕೂಲ ತನಿಖಾ ತಂಡದ ನಡುವೆಯೂ ಆರೋಪಿ ಗಂಡನಿಗೆ ದೋಷಿಯೆಂದು ಸಾಬೀತುಪಡಿಸುವಲ್ಲಿ ಅವರು ಯಶಸ್ವಿಯಾದರು. ಈ ಪ್ರಕರಣದ ಮುಕ್ತಾಯದ ನಂತರ ತನಿಖಾ ತಂಡದ ಪೋಲೀಸರ ಒಡಕುಂಟು ಮಾಡುವ ವರ್ತನೆಯ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒಬ್ಬ ಅರ್ಜಿದಾರ, ಪ್ರಾಸಿಕ್ಯೂಟರ್‌ನ ಹೊಣೆಗಾರಿಕೆಯುಳ್ಳವನಾಗಿ ಹಿರಿಯ ಅಧಿಕಾರಿಗಳಿಗೆ ಪತ್ರವನ್ನು ಬರೆದರು

ಒಬ್ಬ ನ್ಯಾಯವಾದಿ, ಅರ್ಜಿದಾರನಾಗಿ ಹಿಂದುಳಿದ ಸಮುದಾಯಗಳಿಗೆ ಸಂಬಂಧಿಸಿದಂತೆ, ಮೀಸಲಾತಿಯ ಸಮರ್ಥಕನಾಗಿ, ನ್ಯಾಯಾಂಗದ ಸ್ವಾತಂತ್ರ್ಯ ಕುರಿತಂತೆ ಧ್ವನಿಯೆತ್ತಲು ಗಾಡ್ಲಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮಾನವ ಹಕ್ಕುಗಳಿಗೆ ಸಂಬಂದಿಸಿದಂತೆ ಜನರಿಗೆ ಅರಿವು ಮೂಡಿಸುವ ಸಾರ್ವಜನಿಕ ಸಬೆಗಳನ್ನು ಆಯೋಜಿಸುವುದರಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ಹಿರಿಯ ನಿವೃತ್ತ ನ್ಯಾಯಾಧೀಶರ ಜೊತೆಗೂಡಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ರಚನೆಗೊಂಡ ಸತ್ಯಶೋಧನ ಸಮಿತಿಗಳ ಭಾಗವಾಗಿದ್ದರು. ಪೋಲಿಸ್ ವ್ಯವಸ್ಥೆಯು ನ್ಯಾಯವಾದಿಗಳಿಗೆ ಉಪದ್ರವ ಕೊಡುವುದನ್ನು ವಿರೋಧಿಸುತ್ತಿದ್ದರು. ಚತ್ತೀಸಘಡದಲ್ಲಿ ಯುಎಪಿಎ ಜಾಲಕ್ಕೆ ಬಲಿಯಾದ ಆದಿವಾಸಿಗಳ ಪರ ವಕಾಲತ್ತು ವಹಿಸಿದ್ದ ವಕೀಲರಿಗೆ ಪೀಡಿಸಿ ತೊಂದರೆ ಕೊಟ್ಟ ಪ್ರಕರಣದ ಕುರಿತು ಸತ್ಯಶೋಧನೆ ನಡೆಸಿ ವರದಿಯನ್ನು ಮಂಡಿಸಿದರು

ಸಾಮಾಜಿಕ ಹೋರಾಟಗಾರನಾಗಿ ಇವೇ ಕಾರಣಗಳಿಗೆ ಪೋಲಿಸ್ ಇಲಾಖೆಯಲ್ಲಿನ ಪಟ್ಟಭದ್ರ ಹಿತಾಸಕ್ತಿಗಳಿಗೆ, ಅಧಿಕಾರ ವರ್ಗಕ್ಕೆ ಗಾಡ್ಲಿಂಗ್ ಹಿತಕರನಲ್ಲದ ಅಪ್ರಿಯರಾಗಿದ್ದರು. ಪ್ರತಿವಾದಿ ಪರವಾಗಿ ಅವರು ವಾದಿಸುವುದರ ಮೂಲಕ ಇಡೀ ಪ್ರಕರಣದ ಫಲಿತಾಂಶವನ್ನು ಬದಲಿಸುತ್ತಿದ್ದರು. ಬಾರ್ ಅಸೋಶಿಯೇಶನ್‌ನ ಬಲವಾದ ವಿರೋಧದ ನಡುವೆಯೂ ನಿರ್ಭೀತಿಯಿಂದ ಹಲವು ದಮನಿತರನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಇದರಿಂದ ಮಾಧ್ಯಮಗಳಲ್ಲಿ ನಕರಾತ್ಮಕ ಪ್ರಚಾರ ಮತ್ತು ತನಿಖಾ ತಂಡಗಳಿಂದ ಬಹಿರಂಗವಾಗಿಯೆ ಬೆದರಿಕೆಯ ಕರೆಗಳು ಬರತೊಡಗಿದವು. ನಕ್ಸಲ್‌ರು ಎಂದು ವರ್ಗೀಕರಿಸ್ಪಟ್ಟವರ ಪರವಾಗಿ ವಾದಿಸುವ ಇವರ ನಡೆಯಿಂದ ಪೋಲೀಸರು ಗಾಡ್ಲಿಂಗ್ ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದರು. ಇಂತಹ ಪ್ರಕರಣಗಳನ್ನು ಕೈಗೆತ್ತಿಕೊಳ್ಳವುದಕ್ಕೆ ಅಥವಾ ಈ ಮಾದರಿಯ ಆರೋಪಿಗಳನ್ನು ಪ್ರತಿನಿಧಿಸುವುದನ್ನು ವಿರೋಧಿಸಿ ಪೋಲೀಸ್ ಅದಿಕಾರಿಗಳು ಅನೇಕ ಬಾರಿ ತಮ್ಮ ಅಸಂತುಷ್ಟಿ ವ್ಯಕ್ತಪಡಿಸಿದ್ದರು

ಪ್ರ್ರೊ. ಜಿ.ಎನ್. ಸಾಯಿಬಾಬ ಅವರ ವಿಚಾರಣೆಯ ಸಂದರ್ಭದಲ್ಲಿ ಆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಬವಾಚೆ ಅವರು ಒಮ್ಮೆ ಸಾಯಿಬಾಬಾರನ್ನು ಜೈಲಿಗೆ ಕಳುಹಿಸಿದ ನಂತರ ವಕೀಲ ಸುರೇಂದ್ರ ಗಾಡ್ಲಿಂಗ್ ಅವರ ಸರದಿ ಎಂದು ಬಹಿರಂಗವಾಗಿ ಕೋರ್ಟ್ ಆವರಣದಲ್ಲಿ ಹೇಳಿದ್ದರು. ಗಾಡ್ಲಿಂಗ್ ಅವರ ಜ್ಯೂನಿಯರ್/ಸಹಾಯಕರ ಮುಂದೆಯೆ ಈ ಬಹಿರಂಗ ಬೆದರಿಕೆ ನೀಡಿಲಾಗಿತ್ತು. ಪ್ರತಿವಾದಿಯು ಮುಕ್ತ ಮನಸ್ಸಿನಿಂದ, ನಿರ್ಭೀತಿಯಿಂದ ವಕಾಲತ್ತು ಮುಂದುವರೆಸುವುದನ್ನು ನಿರ್ಭಂಧಿಸುವುದೇ ಈ ಬೆದರಿಕೆಯ ಉದ್ದೇಶವಾಗಿತ್ತು. ಈ ಹೆದರಿಸುವ ತಂತ್ರಕ್ಕೆ ಪೂರಕವಾಗಿ ಶರಣಾಗತನಾದ ನಕ್ಸಲೈಟ್ ಒಬ್ಬ ಗಾಡ್ಲಿಂಗ್ ವಿರುದ್ದ 164 ಹೇಳಿಕೆಗಳನ್ನು ನೀಡಿ ಬಾಲಿಶವಾದ ಅಪಾದನೆಗಳನ್ನು ಹೊರೆಸಿದ್ದ. ಈ ಪ್ರಸಕ್ತ ತನಿಖೆಯ ಅಧಿಕೃತ ಭಾಗವಾಗಿಲ್ಲದಿದ್ದರೂ ಇದೇ ಅಧಿಕಾರಿಯು ಇನ್ನೂ ಹಲವು ಅಪರಿಚಿತ ಅಧಿಕಾರಿಗಳ ಜೊತೆಯೊಂದಿಗೆ ಈ ತನಿಖೆಯನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದರು. 1990ರ ದಶಕದಿಂದಲೂ ಗಾಡ್ಲಿಂಗ್ ಅವರು ಈ ಬೆದರಿಕೆಗಳಿಗೆ ಜಗ್ಗಲಿಲ್ಲವಾದರೂ ಸಹ ತನ್ನ ಮದುವೆಯ ದಿನ ಜೇಬಿನಲ್ಲಿ ನಿರೀಕ್ಷಣಾ ಜಾಮೀನಿನ ಪ್ರತಿಯನ್ನಿಟ್ಟುಕೊಂಡಿದ್ದರು. ಆದಾಗ್ಯೂ ಪೋಲೀಸರು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷದ ಜೊತೆ ಸೇರಿ ತಾತ್ಕಲಿಕವಾಗಿ ಗಾಡ್ಲಿಂಗ್ ಅವರನ್ನು ಮೌನಗೊಳಿಸಲು ಸಫಲರಾದರು.

ಆದರೆ ಹುಟ್ಟಾ ಹೋರಾಟಗಾರನನ್ನು ಮೌನಗೊಳಿಸಲು ಸಾದ್ಯವಿಲ್ಲ. ಯೆರವಾಡ ಜೈಲಿನಲ್ಲಿ ಬಂಧಿಸಿಟ್ಟರೂ ಸಹ ಗಾಡ್ಲಿಂಗ್ 10 ಖೈದಿಗಳಿಗೆ ಕಾನೂನು ನೆರವು ನೀಡುವುದರ ಮೂಲಕ ಅವರು ಜೈಲಿನಿಂದ ಬಿಡುಗಡೆಯಾಗಲು ನೆರವಾದರು. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ತಲೋಜಾದಲ್ಲಿನ ಅವರ ವಾಸವನ್ನು ಅಹಿತಕರವಾಗಿಸಲಾಗಿದೆ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಬಿ. ಶ್ರೀಪಾದ ಭಟ್


ಇದನ್ನೂ ಓದಿ: ಬಡಜನರಿಗೆ ವಕೀಲೆಯಾಗಿದ್ದಕ್ಕೆ ಜೈಲಿಗೆ ಹೋದ ಐಐಟಿ ಪದವೀಧರೆ ಸುಧಾ ಭಾರದ್ವಾಜ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...