Homeಮುಖಪುಟಬಡಜನರಿಗೆ ವಕೀಲೆಯಾಗಿದ್ದಕ್ಕೆ ಜೈಲಿಗೆ ಹೋದ ಐಐಟಿ ಪದವೀಧರೆ ಸುಧಾ ಭಾರದ್ವಾಜ್!

ಬಡಜನರಿಗೆ ವಕೀಲೆಯಾಗಿದ್ದಕ್ಕೆ ಜೈಲಿಗೆ ಹೋದ ಐಐಟಿ ಪದವೀಧರೆ ಸುಧಾ ಭಾರದ್ವಾಜ್!

ಸುಧಾ ಭಾರದ್ವಾಜ್‌ರವರಿಗೆ ಬಾಂಬೆ ಹೈಕೋರ್ಟ್ ಡೀಫಾಲ್ಟ್ ಜಾಮೀನು ನೀಡಿದೆ. ಸುಪ್ರೀಂ ಅದನ್ನು ಎತ್ತಿ ಹಿಡಿದಿದೆ. ಇಂದು ಅವರು ಮುಂಬೈನ ಬೈಕುಲ್ಲಾ ಮಹಿಳಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

- Advertisement -
- Advertisement -

6ನೇ ಅಂತರಾಷ್ಟ್ರೀಯ ಹಾರ್ವರ್ಡ್ ಕಾನೂನು ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಭಾವಚಿತ್ರ ಪ್ರದರ್ಶನದಲ್ಲಿ ಜಗತ್ತಿನಾದ್ಯಂತ ಕಾನೂನು ಹಾಗೂ ನೀತಿ ನಿರೂಪಣೆಯ ಕ್ಷೇತ್ರದಲ್ಲಿ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿದ ಮಹಿಳೆಯರಿಗೆ ಗೌರವವನ್ನು ಸಲ್ಲಿಸಲಾಯಿತು. ಆ ಎಲ್ಲ ಮಹಿಳಾ ಪ್ರತಿನಿಧಿಗಳನ್ನು ಆಯ್ಕೆ ಮಾಡಿದವರು ಹಾರ್ವರ್ಡ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗ. ಈ ಎಲ್ಲಾ ಮಹಿಳಾ ಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಗಟ್ಟಿಯಾದ ಧ್ವನಿಯನ್ನು ಮೊಳಗಿಸಿದವರು. ಅದು ಹೈಕೋರ್ಟಿನ ಬೆಂಚಿನಲ್ಲಿ ಕುಳಿತಾಗಿರಬಹುದು, ಕ್ಲಾಕ್‌ರೂಮಿನಲ್ಲಿ ವಿದ್ಯಾರ್ಥಿಗಳ ಎದುರು ನಿಂತಾಗಿರಬಹುದು ಅಥವಾ ರಸ್ತೆಗಳಲ್ಲಿ ಪ್ರತಿಭಟಿಸುವುದಾಗಿರಬಹುದು ಅಥವಾ ಜೈಲಿನಲ್ಲಿ ಕುಳಿತದ್ದಿರಬಹುದು.

ಅಡ್ವೋಕೇಟ್ ಸುಧಾ ಭಾರದ್ವಾಜ್‌ 2019ರ ಅಂತರಾಷ್ಟ್ರೀಯ ಹಾರ್ವರ್ಡ್ ಕಾನೂನು ಮಹಿಳಾ ದಿನಾಚರಣೆಯ ಗೌರವಾನ್ವಿತರಲ್ಲಿ ಒಬ್ಬರು. ಪುಣೆಯ ಜೈಲು ಕೋಣೆಯಲ್ಲಿ ಕುಳಿತಿರುವ ಅವರ ಚಿತ್ರ ಪ್ರದರ್ಶನಗೊಂಡಿತು. ಒಂದೇ ಸಮಯದಲ್ಲಿ ಈ ಎರಡು ಬಗೆಯ ವಿರೋಧಾಭಾಸಗಳು ಹೇಗೆ ಸಾಧ್ಯ?

ಇದನ್ನೂ ಓದಿ: ಡೀಫಾಲ್ಟ್ ಜಾಮೀನು ಪ್ರಶ್ನಿಸಿದ್ದ ಎನ್‌ಐಎ ಅರ್ಜಿ ವಜಾಗೊಳಿಸಿದ ಸುಪ್ರೀಂ: ನಾಳೆ ಸುಧಾ ಭಾರದ್ವಾಜ್‌ ಬಿಡುಗಡೆ

ಅತ್ಯಂತ ಪ್ರಸಿದ್ದ ತಂದೆತಾಯಿಯ ಮಗಳಾಗಿ ಅಮೆರಿಕದಲ್ಲಿ ಹುಟ್ಟಿದ ಸುಧಾ ತನ್ನ ವಿದ್ಯಾರ್ಥಿ ಜೀವನದ ಬಹುತೇಕ ಭಾಗವನ್ನು ಅಮೇರಿಕನ್ ಪ್ರಜೆಯಾಗಿ ಕಳೆದರು. ನಂತರ ಐಐಟಿ ಕಾನ್‌ಪುರದಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಗಳಿಸಿದರು. ಮುಂದಿನ 30 ವರ್ಷ ಛತ್ತಿಸಗಡ ಮುಕ್ತಿ ಮೋರ್ಚಾದ (CMM)ದಲ್ಲಿ ಟ್ರೇಡ್ ಯೂನಿಯನ್‌ನ ಭಾಗವಾಗಿ ನಿರಂತರ ಹೋರಾಟದಲ್ಲಿ ಕಳೆದರು. ಅದರ ನಂತರ ವಕೀಲಿ ವೃತ್ತಿ ಆರಂಭಿಸಿದರು. ಅದಕ್ಷ ವಕೀಲರುಗಳಿಂದ ಹಿನ್ನಡೆ ಅನುಭವಿಸುತ್ತಿದ್ದವರಿಗೆ ಸುಧಾ ಅವರ ದಕ್ಷತೆ, ಪ್ರಾಮಾಣಿಕತೆಯಲ್ಲಿ ಪ್ರಭಾವಶಾಲಿ ವಿರೋಧಿಗಳನ್ನು ಎದುರಿಸುವ ಹೊಸ ಭರವಸೆ ಕಂಡಿತು.

ಸುಧಾ ಅವರು ‘ಜನಹಿತ’ ಸ್ಥಾಪಿಸಿ ಅದರಿಂದ ಕಾರ್ಮಿಕರು, ಗಣಿ ಹಾಗೂ ಭೂಕಬಳಿಕೆಯ ವಿರುದ್ದ ಹೋರಾಡುತ್ತಿದ್ದ ಹಳ್ಳಿಗರು, ಅರಣ್ಯದಲ್ಲಿ ಹಕ್ಕುಗಳಿಗಾಗಿ ಹೋರಾಡುತ್ತಿರುವ ಆದಿವಾಸಿಗಳು ಪರವಾಗಿ ಮತ್ತು ಪರಿಸರ ರಕ್ಷಣೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಮುಂತಾದ ಕಡೆ ತೊಡಗಿಸಿಕೊಂಡರು. ಇಲ್ಲಿಯವರೆಗೆ ‘ಜನಹಿತ’ ಅನೇಕ ಪ್ರಭಾವಶಾಲಿ ಉದ್ಯಮಿಗಳ ವಿರುದ್ಧ ಕೇಸುಗಳನ್ನು ಹಾಕಿದೆ. ಅದರಲ್ಲಿ ಪ್ರಮುಖವಾಗಿ ಜಿಂದಾಲ್, ವೇದಾಂತ, ಬಾಲ್ಕೋ, ಲಫಾರ್ಚ್ ಹಾಲ್ಸಮ್, ಡಿ.ಬಿ ಪವರ್, ವಂದನಾ ವಿದ್ಯುತ್, SECL, , ಭಿಲಾಯ್ ಸ್ಟೀಲ್ ಪ್ಲಾಂಟ್, ಮಾನೆಟ್ ಸ್ಟೀಟ್, ಅದಾನಿ, ಹಿಂಡಾಲ್ಕೋ, ಗ್ರಾನೆಮ್, ಅಲ್ಟಾçಟೆಕ್ ಮತ್ತಿತರಿದ್ದಾರೆ.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (PUCL)ನ ಅಂದಿನ ಅಧ್ಯಕ್ಷ ಬಿನಾಯಕ್ ಸೇನ್ ಅವರ ಬಂಧನದ ನಂತರ ಆ ಗುಂಪನ್ನು ಪುನರ್‌ರಚಿಸುವಲ್ಲಿ ಹಾಗೂ ಒಗ್ಗೂಡಿಸುವಲ್ಲಿ ಸುಧಾ ಅವರ ಕೊಡುಗೆ ಅಪಾರ. ನಂತರ ಸುಧಾ ಭಾರದ್ವಾಜ್ ಆ ಸಂಘಟನೆಗೆ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆ ಆದರು. ಹಾಗೂ ಅಲ್ಪಸಂಖ್ಯಾತರು ಮತ್ತು ಮಾನವ ಕಳ್ಳ ಸಾಗಾಣಿಕೆಯಂತಹ ವಿಷಯಗಳಲ್ಲಿ ಕೆಲಸ ಮಾಡಿದರು. ಬಸ್ತರ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಲಿಪಶುಗಳಾದವರಿಗೆ ಸಹಾಯಹಸ್ತ ಚಾಚಿದರು. ಜೊತೆಗೆ ಆಡಳಿತದ ದೌರ್ಜನ್ಯ ಹಾಗೂ ದರ್ಪದ ವಿರುದ್ಧ ಧೈರ್ಯದಿಂದ ಎದುರುನಿಂತ ಕಾರ್ಯಕರ್ತರು ಹಾಗೂ ಪತ್ರಕರ್ತರಿಗೆ ಆಸರೆ ಒದಗಿಸಿದರು. ಇತ್ತೀಚೆಗೆ ‘ಇಂಡಿಯನ್ ಅಸೋಸಿಯೇಷನ್ ಆಫ್ ಪೀಪಲ್ಸ್ ಲಾರ‍್ಸ್ (IAPL)ಗೆ ಉಪಾಧ್ಯಕ್ಷೆಯಾಗಿ ಆಯ್ಕೆ ಆದರು.

ಸುಧಾ ದಲಿತರು ಹಾಗೂ ಮಾನವಹಕ್ಕು ವಕೀಲರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಚಳವಳಿ ಪ್ರಾರಂಭಿಸಿದ್ದರು ಹಾಗೂ ಆ ವಿಷಯಗಳಲ್ಲಿ ಸತ್ಯಶೋಧಕ ಸಮಿತಿಯನ್ನು ರಚಿಸಿದ್ದರು.

ಸುಧಾ ಅವರನ್ನು ಅವರ ಫರೀದಾಬಾದ್‌ನ ಮನೆಯಿಂದ ಬಂಧಿಸಲಾಯಿತು. ಅಲ್ಲಿ ಅವರು ತಮ್ಮ ಮಗಳು ‘ಮಾಯ್‌ಶಾ’ ಜೊತೆ ಇರುತ್ತಿದ್ದರು. ಈ ಸಮಯದಲ್ಲಿ ಅವರು ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯಲ್ಲಿ ಅತಿಥಿ ಪ್ರಾಧ್ಯಾಪಕಿಯಾಗಿ, ಬುಡಕಟ್ಟು ಜನರ ಹಕ್ಕುಗಳು, ಭೂಕಬಳಿಕೆ, 5 ಮತ್ತು 6ನೇ ಶೆಡ್ಯೂಲುಗಳ ಮೇಲೆ ಸೆಮಿನಾರ್ ನೀಡುತ್ತಿದ್ದರು. ಈ ವರ್ಷ ಅವರು ‘ಪ್ರಪಂಚದ ಜಾಗತೀಕರಣದಲ್ಲಿ ಕಾನೂನು ಹಾಗೂ ನ್ಯಾಯ’ ಎಂಬ ವಿಷಯದ ಮೇಲೆ ಪಾಠ ಮಾಡಬೇಕಿತ್ತು. ದುರದೃಷ್ಟವಶಾತ್ ಅವರು ಜೈಲಿಗೆ ಹೋಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅಲ್ಲಿಯ ವಿದ್ಯಾರ್ಥಿಗಳು ವಿಷಾದ ವ್ಯಕ್ತಪಡಿಸುತ್ತಾರೆ.

ಸುಧಾ ಅವರ ಮಗಳು ಮಾಯ್‌ಶಾ ತಮ್ಮ ತಾಯಿಯ ದಣಿವರಿಯದ ಚೈತನ್ಯ ಹಾಗೂ ಅವರ ಕೆಲಸದ ಬಗೆಗಿನ ನಿಷ್ಠೆ ಬಗ್ಗೆ ‘ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವುದು, ಕಾರ್ಮಿಕರ ಮತ್ತು ರೈತರ ಮೇಲಾಗುವ ದಬ್ಬಾಳಿಕೆ ಹಾಗೂ ದೌರ್ಜನ್ಯಗಳ ವಿರುದ್ಧ ಹೋರಾಡುವುದು, ತಮ್ಮ ಇಡೀ ಜೀವನವನ್ನು ಇದಕ್ಕಾಗಿ ಮುಡಿಪಾಗಿಡುವುದನ್ನು ನಕ್ಸಲಿಸಂ ಎನ್ನುವುದಾದರೆ ನನಗನ್ನಿಸುವ ಮಟ್ಟಿಗೆ ನಕ್ಸಲರು ಒಳ್ಳೆಯವರು ಎಂದಾಯಿತು’ ಎಂದು ಹೇಳುತ್ತಾರೆ.

ಗುನೀತ್ ಅಹುಜಾ ಎಂಬ ದೆಹಲಿಯ ವಕೀಲರು ಸುಧಾ ಅವರ ಬಗ್ಗೆ ಬಹಿರಂಗ ಪತ್ರ ಬರೆಯುತ್ತಾ ‘ನಾನು ಮೊದಲ ಬಾರಿ ಸುಧಾ ಅವರನ್ನು ಭೆಟ್ಟಿ ಮಾಡಿದಾಗ 47ರ ಸ್ವಾತಂತ್ಯ್ರದ ಅನ್ವೇಷಣೆ ಹಾಗೂ 48ರ ಬಸ್ತರ್‌ದಲ್ಲಿನ ಸ್ವಾತಂತ್ರ‍್ಯದ ಅನ್ವೇಷಣೆ ಮತ್ತು ಅದರ ಸ್ಫರ್ಧಾತ್ಮಕ ನಿರೂಪಣೆಗಳ ಬಗ್ಗೆ ಮಾತಾಡಿದ್ದೆ. ಅವರು ನೀಡಿದ ಉತ್ತರ ನನ್ನ ಮೇಲೆ ಬಹಳ ದೊಡ್ಡ ಪ್ರಭಾವವನ್ನು ಬೀರಿದೆ’ ಎಂದು ಹೇಳುತ್ತಾರೆ.

ಸುಧಾ ಅವರು ತಾವು ಹೋರಾಡುವ ಪ್ರತಿಯೊಬ್ಬರಿಗೂ ಜೊತೆ ಸಾಗುವ ದಾರಿಹೋಕರಂತೆ. ಅವರು ಆ ದಾರಿ ನಮಗೆಲ್ಲರಿಗೂ ಸೇರಿದ್ದು ಎಂದು ನಂಬುತ್ತಾರೆ. ರಾಜ್ಯ ಆಡಳಿತ ಎಂಬುದು ಒಂದು ಕಾರಿದ್ದಂತೆ, ಅದಕ್ಕೆ ದಾರಿಯಲ್ಲಿ ಹೋಗುವ ಜನರನ್ನು ಕಂಡರೆ ಅಸಡ್ಡೆ ಹಾಗೂ ಅದು ರಸ್ತೆ ತನಗೆ ಸೇರಿದ್ದು ಎಂದುಕೊಳ್ಳುತ್ತದೆ. ಅದು ತನ್ನ ಆಪ್ತರ ಕೆಲಸಗಳಲ್ಲಿ ತನ್ನನ್ನು ಗುರುತಿಸಿಕೊಳ್ಳಬಯಸುತ್ತದೆ. ಆಡಳಿತಕ್ಕೆ ಸುಧಾ ಅವರ ಜಾಗ ಜೈಲು ಆದರೆ ನಮಗೆಲ್ಲ ಅವರೊಬ್ಬ ಮಾನವ ಹಕ್ಕುಗಳ ಪ್ರತಿಪಾದಕಿ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ
ಅನುವಾದ: ರಾಜಲಕ್ಷ್ಮಿಅಂಕಲಗಿ


ಇದನ್ನೂ ಓದಿ: ದೇಶದ ಸಾಕ್ಷಿಪ್ರಜ್ಞೆ ಬಾಬಾಸಾಹೇಬರ ಬೌದ್ಧಿಕ ವಾರಸುದಾರ: ಚಿಂತಕ ಆನಂದ್ ತೇಲ್ತುಂಬ್ಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸುದಾ ಭಾರದ್ವಾಜ್ ಮತ್ತು ಸಹವರ್ತಿ ಹೋರಾಟಗಾರರನ್ನು ಸರ್ಕಾರ ಈ ಕೂಡಲೇ ಬಿಡುಗಡೆ ಮಾಡಬೇಕು.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...