Homeಮುಖಪುಟತಮಿಳುನಾಡು: ವೀಲ್‌ಚೇರ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ವೃದ್ಧ ತಂದೆಯನ್ನು ಎಳೆದೊಯ್ದ ವ್ಯಕ್ತಿ

ತಮಿಳುನಾಡು: ವೀಲ್‌ಚೇರ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ವೃದ್ಧ ತಂದೆಯನ್ನು ಎಳೆದೊಯ್ದ ವ್ಯಕ್ತಿ

- Advertisement -
- Advertisement -

ಎರಡು ಗಂಟೆ ಕಾದರೂ ವೀಲ್‌ಚೇರ್ ನೀಡದ ಕಾರಣ ಮಗನೊಬ್ಬ ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ಎಳೆದುಕೊಂಡು ಹೋಗುತ್ತಿರುವ ವೀಡಿಯೊ ವೈರಲ್ ಆಗಿದ್ದು, ತಮಿಳುನಾಡಿನ ಕೊಯಮತ್ತೂರು ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

ವಿಡಿಯೊ ವೈರಲ್ ಆದ ಬಳಿಕ ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಗುರುವಾರ ರಾಜ್ಯ ಸರ್ಕಾರವನ್ನು ಆರೋಗ್ಯ ಕ್ಷೇತ್ರದ ಸ್ಥಿತಿಯ ಬಗ್ಗೆ ಟೀಕಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನ ವೀಡಿಯೊ ಹಂಚಿಕೊಂಡಿರುವ ಅವರು, ಘಟನೆಯನ್ನು ಹೃದಯ ವಿದ್ರಾವಕ ಎಂದರು.

“ರಸ್ತೆ ಸೌಲಭ್ಯಗಳಿಲ್ಲದ ಗುಡ್ಡಗಾಡು ಪ್ರದೇಶಗಳಲ್ಲಿ ಬಟ್ಟೆ ಸ್ಟ್ರೆಚರ್‌ಗಳಲ್ಲಿ ರೋಗಿಗಳನ್ನು ಹೊತ್ತೊಯ್ಯುವುದರಿಂದ ಹಿಡಿದು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಎಳೆದುಕೊಂಡು ಹೋಗುವವರೆಗೆ, ವೈದ್ಯಕೀಯ ಆರೈಕೆಗಾಗಿ ಜನರನ್ನು ಪೀಡಿಸುತ್ತಿದೆಯೇ, ‘ವಿಶ್ವಪ್ರಸಿದ್ಧ ಆರೋಗ್ಯ ಮೂಲಸೌಕರ್ಯ’ ಎಂದರೆ ಏನು” ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರವು ಅಗತ್ಯ ಸೇವೆಗಳಿಗಿಂತ ಪ್ರಚಾರಕ್ಕೆ ಆದ್ಯತೆ ನೀಡುತ್ತಿದೆ ಎಂದು ನಾಗೇಂದ್ರನ್ ಆರೋಪಿಸಿದರು. “ಕನಿಷ್ಠ ಸರ್ಕಾರದ ಅವಧಿ ಮುಗಿಯುವ ಅಂಚಿನಲ್ಲಿದೆ, ಹೊಳೆಯುವ ಖಾಲಿ ಜಾಹೀರಾತುಗಳನ್ನು ಬದಿಗಿಟ್ಟು ಮೂಲಭೂತ ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಿ” ಎಂದು ಅವರು ಹೇಳಿದರು.

ಲಡಾಖ್‌ಗೆ ರಾಜ್ಯದ ಸ್ಥಾನಮಾನಕ್ಕಾಗಿ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -