Homeಮುಖಪುಟತಮಿಳುನಾಡು ವಿಧಾನಸಭಾ ಚುನಾವಣೆ: ದ್ರಾವಿಡ ರಾಜಕೀಯಕ್ಕೆ ಹೊಸ ಸವಾಲುಗಳು!

ತಮಿಳುನಾಡು ವಿಧಾನಸಭಾ ಚುನಾವಣೆ: ದ್ರಾವಿಡ ರಾಜಕೀಯಕ್ಕೆ ಹೊಸ ಸವಾಲುಗಳು!

- Advertisement -
- Advertisement -

ಭಾರತದ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ಮೆರುಗನ್ನು ಸಾಧಿಸಿದ್ದ ತಮಿಳುನಾಡು ಚುನಾವಣಾ ಇತಿಹಾಸ ಬಹುಶಃ ಇಂತಹ ನಗೆಪಾಟಲಿನ ಮತ್ತು ನಿಸ್ಸಾಹಾಯಕ ಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ. ಕಳೆದ 5 ದಶಕಗಳಿಂದ ವರ್ಗದ ತಮಿಳರ ಪಾಲಿಗೆ ದಂತ ಕತೆಗಳಂತಿದ್ದ ಅಮ್ಮ (ಜಯಲಲಿತ) ಮತ್ತು ಅಯ್ಯ (ಕರುಣಾನಿಧಿ) ಇಬ್ಬರೂ ಇಲ್ಲದೆ ನಡೆಯುತ್ತಿರುವ ಈ ಮೊದಲ ವಿಧಾನಸಭಾ ಚುನಾವಣೆ ದ್ರಾವಿಡ ನಾಡಿನ ರಾಜಕೀಯ ಕಣ್ಣಿಗೆ ರಾಚುವ ಮಟ್ಟಿಗಿನ ನಿಸ್ಸಹಾಯಕ ಸ್ಥಿತಿಗೆ ತಲುಪಿದೆ. ಅದಕ್ಕೆ ಕಾರಣ ಇಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಸ್ವಘೋಷಿತ ಚಾಣಕ್ಯ ಅಮಿತ್ ಶಾ ಎಂದರೆ ತಪ್ಪಾಗಲಾರದು.

ಹೌದು..! ತಮಿಳುನಾಡಿನ ಮಟ್ಟಿಗೆ ಹಿಂದಿ ಮತ್ತು ರಾಷ್ಟ್ರೀಯ ಪಕ್ಷಗಳು ಎಂದಿಗೂ ಮಾರು ದೂರವೇ. ಇದಕ್ಕೆ ಕಾರಣ ದ್ರಾವಿಡ ನಾಡಿನಲ್ಲಿ 30ರ ದಶಕದಲ್ಲಿ ಹುಟ್ಟಿ 60ರ ದಶಕದಲ್ಲಿ ರಾಜಕೀಯ ಪಲ್ಲಟಕ್ಕೆ ಕಾರಣವಾದ ದ್ರಾವಿಡ ಚಳುವಳಿ. ಈ ಚಳುವಳಿಯ ಅಧಿನಾಯಕ ಪೆರಿಯಾರ್ ಎಂಬ ಇ.ವಿ. ರಾಮಸ್ವಾಮಿಯವರು. 1967ರಲ್ಲಿ ಈ ಚಳುವಳಿ ಮೊದಲ ಬಾರಿಗೆ ಫಲ ಕೊಟ್ಟಿತ್ತು. ಕಾಂಗ್ರೆಸ್ಸೇತರ ಮೊದಲ ಮುಖ್ಯಮಂತ್ರಿಯಾಗಿ ತಲೈವರ್ ಖ್ಯಾತಿಯ ಸಿ.ಎನ್. ಅಣ್ಣಾದುರೈ ಮುಖ್ಯಮಂತ್ರಿ ಗದ್ದುಗೆಗೆ ಏರಿದರು.

PC : Firstpost

ತದನಂತರದ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವ ರಾಷ್ಟ್ರೀಯ ಪಕ್ಷಗಳೆನಿಸಿಕೊಂಡವಕ್ಕೆ ಅಧಿಕಾರದ ಗದ್ದುಗೆಯ ಸನಿಹಕ್ಕೆ ಬರುವುದರಲಿ ಕನಿಷ್ಟ 30ಕ್ಕೂ ಹೆಚ್ಚು ಸ್ಥಾನ ಗಳಿಸುವುದಕ್ಕೂ ಆಗಿರಲಿಲ್ಲ. ದಿವಂಗತ ಮಾಜಿ ಸಿಎಂ ಕಾಮರಾಜ್‌ರ ಕಾರಣಕ್ಕೆ ಕಾಂಗ್ರೆಸ್‌ಗೆ ದ್ರಾವಿಡ ನಾಡಿನಲ್ಲಿ ಕೆಲವಾದರೂ ಸ್ಥಾನಗಳಿವೆ. ಆದರೆ ಬಿಜೆಪಿ ಈವರೆಗೆ ಖಾತೆಯನ್ನೂ ತೆರೆಯಲಾಗದ ಹೀನಾಯ ಸ್ಥಿತಿಯಲ್ಲೇ ಇದೆ.

ಆದರೆ, 1996ರಲ್ಲಿ ಕೇಂದ್ರದಲ್ಲಿ ಅಂದಿನ ವಾಜಪೇಯಿ ಸರ್ಕಾರವನ್ನೇ ಉರುಳಿಸಿ ಉಕ್ಕಿನ ಮಹಿಳೆ ಎಂಬ ಉಪನಾಮಕ್ಕೆ ಪಾತ್ರವಾದ ಜಯಲಲಿತಾ ಮರಣದ ನಂತರ ಇದೀಗ ಇಡೀ ತಮಿಳುನಾಡು ರಾಜಕೀಯ ಚಿತ್ರಣವೇ ಬದಲಾಗಿದೆ. ಅಮ್ಮ ಕಟ್ಟಿ ಆಳಿದ ಎಐಎಡಿಎಂಕೆ ಎಂಬ ಪಕ್ಷವನ್ನು ಬಿಜೆಪಿ ಸಂಪೂರ್ಣವಾಗಿ ಆಪೋಷನ ತೆಗೆದುಕೊಂಡಿದೆ. ಆಡಳಿತರೂಢ ಸರ್ಕಾರದ ಲಾಭ ತೆಗೆದುಕೊಂಡು ದ್ರಾವಿಡ ನಾಡಿನಲ್ಲಿ ಕಮಲವನ್ನು ಅರಳಿಸಿಯೇ ತೀರಬೇಕು ಎಂಬ ನಿರ್ಣಯಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಆದರೆ, ಜನ ಬಿಜೆಪಿ ತಂತ್ರಕ್ಕೆ ಮರುಳಾಗುತ್ತಾರ? ಏನು ಹೇಳುತ್ತಿದ್ದಾನೆ ತಮಿಳು ಮತದಾರ? ಎಐಎಡಿಎಂಕೆ ಪಕ್ಷ ಬಿಜೆಪಿ ಬಿ ಟೀಮ್‌ನಂತೆ ವರ್ತಿಸುತ್ತಿರುವುದೇ? ಚಿನ್ನಮ್ಮ ಶಶಿಕಲಾ ದಿಢೀರೆಂದು ಸೈಡ್ಲೈನ್ ಆಗಿದ್ದೇಕೆ?

ಎಡಿಎಂಕೆಯನ್ನು ಅಪೋಶನಗೈದ ಬಿಜೆಪಿ

2016ರ ವರೆಗೆ ತಮಿಳುನಾಡಿನಲ್ಲಿ ಬಿಜೆಪಿ ಪರಿಸ್ಥಿತಿ ಹೇಗಿತ್ತು ಎಂದರೆ ಪಕ್ಷಕ್ಕೆ ಮತ ಯಾಚಿಸುವುದಿರಲಿ, ಇಂತಹ ಪಕ್ಷ ದ್ರಾವಿಡ ನಾಡಿನಲ್ಲಿ ಜೀವಂತ ಇದೆ ಎಂಬ ಊಹೆಯೂ ಎಷ್ಟೋ ಜನರಿಗೆ ಇದ್ದಿರಲಿಕ್ಕಿಲ್ಲ. ಆದರೆ, 2016ರಲ್ಲಿ ಎಲ್ಲವೂ ಬದಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಟ್, ಜಲ್ಲಿಕಟ್ಟು ನಿಷೇಧ ಎಂದು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಎಲ್ಲಾ ಕಾನೂನುಗಳನ್ನು ಜಯಲಲಿತ ವಿರೋಧಿಸಿದ್ದರು. ಆದರೆ, ದುರಾದೃಷ್ಟವಶಾತ್ ಜಯಲಲಿತಾ ಅದೇ ವರ್ಷ ಮೃತಪಟ್ಟರೆ, ಅವರ ಆಪ್ತೆ ಶಶಿಕಲಾ ಅಲಿಯಾಸ್ ಚಿನ್ನಮ್ಮ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು.

ಜಯಲಲಿತಾ ಸಾವಿನಲ್ಲಿ ಅನೇಕ ಸಂಶಯಗಳಿವೆ, ಆ ಸಾವಿನ ಸತ್ಯಾಸತ್ಯತೆ ಕುರಿತು ಪ್ರಸ್ತುತ ತನಿಖೆಯೂ ಆಗುತ್ತಿದೆ ಎಂಬುದು ಬೇರೆ ವಿಚಾರ. ಆದರೆ, ಈ ಬೆಳವಣಿಗೆಯ ನಂತರ ಎಡಿಎಂಕೆ ನಾವಿಕನಿಲ್ಲದ ದೋಣಿಯಂತಾದದ್ದು ಮಾತ್ರ ಅಕ್ಷರಶಃ ಸತ್ಯ. ಈ ಸಮಯದಲ್ಲೇ ಬಿಜೆಪಿ ಇದರ ಲಾಭ ಪಡೆಯಲು ಮುಂದಾದದ್ದು ಮತ್ತು ಅಮಿತ್ ಶಾ ಕಣವನ್ನು ಪ್ರವೇಶಿಸಿದ್ದು. ಹಾಗೆ ನೋಡಿದರೆ ಇಡೀ ಎಐಎಡಿಎಂಕೆ ಎಂಬುದು ಭ್ರಷ್ಟಾಚಾರದ ಕೂಪವಾಗಿ ಹೋಗಿತ್ತು. ಎಲ್ಲಾ ಶಾಸಕರ ಹಾಗೂ ಸಚಿವರ ಮೇಲೂ ಭ್ರಷ್ಟಾಚಾರದ ಆರೋಪಗಳಿವೆ. ಇದೇ ಸಮಯದಲ್ಲಿ ಚಿನ್ನಮ್ಮ ಶಶಿಕಲಾ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಅನೇಕ ಸಚಿವರ ಪಾಲಿಗೆ ಭಯದ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಸುಳ್ಳಲ್ಲ.

PC : Firstpost

ಈ ವೇಳೆ ಜಯಲಲಿತಾ ಮತ್ತು ಶಶಿಕಲಾ ಅವರ ರಬ್ಬರ್ ಸ್ಟಾಂಪ್‌ಗಳಾಗಿಯೇ ದೀರ್ಘ ಕಾಲ ತಮ್ಮ ರಾಜಕೀಯ ಏಳಿಗೆ ಕಂಡಿದ್ದ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ಓ. ಪನ್ನೀರ್ ಸೆಲ್ವಂ ಇಬ್ಬರನ್ನೂ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕಿರಲಿಲ್ಲ. ಕೇಂದ್ರ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಹೆದರಿಯೇ ಬಹುತೇಕ ಎಲ್ಲಾ ಸಚಿವರು ಬಿಜೆಪಿ ಶರಣಾಗಿ ಹೋಗಿದ್ದರು. ಈ ಬ್ಲಾಕ್‌ಮೇಲ್ ತಂತ್ರದಿಂದಾಗಿಯೇ 2016ರಿಂದ ಈಚೆಗೆ ತಮಿಳುನಾಡಿನಲ್ಲಿ ನಡೆದದ್ದೆಲ್ಲ ಬಿಜೆಪಿ ಆಡಳಿತವೇ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ ಎನ್ನುತ್ತಾರೆ ಅಲ್ಲಿನ ರಾಜಕೀಯ ವಿಶ್ಲೇಷಕರು.

ಸ್ವತಃ ಸಚಿವರೊಬ್ಬರು “ಮೋದಿ ನಮ್ಮ ಡ್ಯಾಡಿ” ಎಂದು ಬಹಿರಂಗ ಹೇಳಿಕೆ ನೀಡುತ್ತಾರೆ ಎಂದರೆ ದ್ರಾವಿಡ ನಾಡಿನಲ್ಲಿ ಬಿಜೆಪಿ ಯಾವ ಮಟ್ಟಿಗೆ ಆಡಳಿತರೂಢ ಪಕ್ಷವನ್ನು ಅಪೋಶನ ಮಾಡಿಕೊಂಡಿದೆ ಎಂಬುದನ್ನು ಊಹಿಸಬಹುದು. ಈ ನಡುವೆ ಪ್ರಸ್ತುತ ಚುನಾವಣೆಯಲ್ಲಿ ಎಐಡಿಎಂಕೆ ಮೈತ್ರಿಯಾಗಿರುವ ಬಿಜೆಪಿ ತಮಿಳುನಾಡಿನಲ್ಲಿ ಶೇ.1 ರಷ್ಟು ಕೂಡ ಮತಬ್ಯಾಂಕ್ ಹೊಂದಿರದಿದ್ದರೂ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚೌಕಾಶಿ ಮಾಡಿದೆ. ಮೊದಲ ಬಾರಿಗೆ ಇಷ್ಟು ದೊಡ್ಡಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಗೆ ಎಐಎಡಿಎಂಕೆ ಎಲ್ಲಾ ಸಹಾಯ ಮಾಡುತ್ತಿದೆ. ದ್ರಾವಿಡ ನಾಡಿನಲ್ಲಿ ತಮ್ಮ ತತ್ವ ಸಿದ್ಧಾಂತಗಳಿಗೆ ವಿರುದ್ಧವಾದ ಕೋಮುವಾದಿ ಪಕ್ಷಕ್ಕೆ ಕೆಂಪುಹಾಸು ಹಾಸಿದೆ ಎಂದರೆ ಎಐಎಡಿಎಂಕೆ ಪಕ್ಷದ ಅಸಹಾಕತೆಯನ್ನೂ ಇಲ್ಲಿ ಗಮನಿಸಬೇಕಿದೆ.

ಚಿನ್ನಮ್ಮ ಸೈಡ್ಲೈನ್

ಒಂದು ಹಂತದಲ್ಲಿ ಚಿನ್ನಮ್ಮ ಶಶಿಕಲಾ ಅವರೇ ತಮಿಳುನಾಡಿನ ಮುಂದಿನ ಸಿಎಂ ಎನ್ನಲಾಗಿತ್ತು. ಶಶಿಕಲಾ ಜೈಲಿನಲ್ಲಿದ್ದರೂ ಸಹ ಅವರ ಸಂಬಂಧಿ ಟಿಟಿವಿ ದಿನಕರನ್ ತಮಿಳುನಾಡಿನಲ್ಲಿ ಎಡಿಎಂಕೆಗೆ ಸೆಡ್ಡು ಹೊಡೆದಿದ್ದರು. ಶಶಿಕಲಾಗಾಗಿಯೇ ’ಅಮ್ಮಾ ದ್ರಾವಿಡ ಮುನ್ನೇಟ್ರ ಕಳಗಂ’ ಎಂಬ ಪಕ್ಷವನ್ನು ಕೂಡ ಸ್ಥಾಪಿಸಿದ್ದರು. ಈ ಮೂಲಕ ಜಯಲಲಿತಾ ಅಭಿಮಾನದ ಮತಗಳ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದರು.

PC : Prajavani

ಇದಕ್ಕೆ ಪೂರಕವಾಗಿ ಕಳೆದ ತಿಂಗಳು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಶಶಿಕಲಾ ಅವರನ್ನು ಬೆಂಗಳೂರಿನಿಂದ ಚೆನ್ನೈವರೆಗೆ ದೊಡ್ಡ ಜನ ಬೆಂಬಲದೊಂದಿಗೆ ಸ್ವಾಗತ ಮಾಡಲಾಗಿತ್ತು. ಈ ಜನ ಬೆಂಬಲವನ್ನು ಕಂಡ ರಾಜಕೀಯ ತಜ್ಞರೇ ಸ್ವತಃ ಥಂಡ ಹೊಡೆದಿದ್ದರು. ಅಲ್ಲದೆ, ಭವಿಷ್ಯದಲ್ಲಿ ಶಶಿಕಲಾ ತಮಿನಾಡಿನ ರಾಜಕೀಯದಲ್ಲಿ ನಿರ್ಣಾಯಕವಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಎಡಿಎಂಕೆ ಪಕ್ಷದ ಅನೇಕ ಸಚಿವರು ಸಹ ಶಶಿಕಲಾ ಪರವಾಗಿ ಬಹಿರಂಗವಾಗಿ ಬ್ಯಾಟ್ ಬೀಸಿದ್ದರು.

ಆದರೆ, ಅವರನ್ನೂ ಸಹ ಇದೀಗ ಸೈಡ್ಲೈನ್ ಮಾಡಲಾಗಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಶಶಿಕಲಾ ದಿಢೀರೆಂದು ರಾಜಕೀಯ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ನಿರ್ಧಾರದ ಹಿಂದೆ ’ಚಾಣಕ್ಯ’ನ ಅದೇ ಬ್ಲಾಕ್‌ಮೇಲ್ ತಂತ್ರ ಇದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಪಕ್ಷದ ಇತ್ತೀಚಿನ ನಡೆಗಳೂ ಸಹ ಈ ಅನುಮಾನಗಳಿಗೆ ಇಂಬು ನೀಡುವಂತಿರುವುದು ಸುಳ್ಳಲ್ಲ.

ಮತದಾರನ ಒಲವೇನು?

ಅಸಲಿಗೆ ತಮಿಳುನಾಡಿನಲ್ಲಿ ಹಲವು ದಶಕಗಳ ನಂತರ ಸಾಮಾನ್ಯ ಜನ ಮತ್ತು ವಿದ್ಯಾರ್ಥಿ ಸಮೂಹ ಮುಂದೆ ನಿಂತು ನಡೆಸಿದ ಬಹುದೊಡ್ಡ ಹೋರಾಟ ಎಂದರೆ ಅದು ಜಲ್ಲಿಕಟ್ಟು ಹೋರಾಟ. ಇಂದು ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆ ಮುಂದುವರೆಯಲು ಸಾಧ್ಯವಾಗಿರುವುದಕ್ಕೆ ಈ ಹೋರಾಟಗಾರರ ಶ್ರಮ ನಿರ್ಣಾಯಕ. ಆದರೆ, ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, “ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಮುಂದುವರೆಯಲು ನರೇಂದ್ರ ಮೋದಿಯೇ ಕಾರಣ. ತಮಿಳುನಾಡಿನ ಅಭಿವೃದ್ಧಿಗೆ ಮೋದಿಯೇ ಸೂತ್ರಧಾರ” ಎಂದು ಬಹಿರಂಗವಾಗಿ ಹೇಳಿಕೆ ನೀಡಿಬಿಟ್ಟರು. ಈ ಹೇಳಿಕೆ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ತಮಿಳುನಾಡಿನ ವಾಸ್ತವ ರಾಜಕಾರಣದಲ್ಲಿ ಬಿಜೆಪಿಗೆ ಯಾವುದೇ ಸ್ಥಾನಮಾನ ಇಲ್ಲ. ಇನ್ನೂ ಕಳೆದ 50 ವರ್ಷ ದ್ರಾವಿಡ ನಾಡನ್ನು ಆಳ್ವಿಕೆ ಮಾಡಿರುವ ಪ್ರಬಲ ದ್ರಾವಿಡ ಪಕ್ಷವೊಂದು, ತಮ್ಮ ಜೀವಾಳವಾಗಿದ್ದ ಅಮ್ಮ ಜಯಲಲಿತಾ ಅವರನ್ನೇ ಸೈಡಿಗೆ ಸರಿಸಿ ತಮ್ಮ ಮತಗಳಿಗಾಗಿ ಮೋದಿಯನ್ನು ಹೊಗಳುವಂತಹ ಹೀನಾಯ ಸ್ಥಿತಿಗೆ ತೆರಳಿತೇ? ಎಂಬ ಪ್ರಶ್ನೆಗಳು ಇದೀಗ ತಮಿಳುನಾಡಿನ ಎಲ್ಲೆಡೆ ಹರಿದಾಡುತ್ತಿದೆ.

ಅಸಲಿಗೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಬ್ಯಾನ್ ಆಗಲು ಕೇಂದ್ರ ಬಿಜೆಪಿ ಸರ್ಕಾರವೂ ಕಾರಣ ಎಂಬುದು ತಮಿಳರಿಗೆ ತಿಳಿಯದ ವಿಚಾರವೇನಲ್ಲ. ಹೀಗಾಗಿ ಓ. ಪನ್ನೀರ್ ಸೆಲ್ವಂ ಅವರ ಮಾತು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ.

ಬಿಜೆಪಿ-ಎಡಿಎಂಕೆ ಎರಡಕ್ಕೂ ಇಲ್ಲ ಚಾರ್ಮ್

ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಒಟ್ಟು 20 ಜನರನ್ನು ಬಿಜೆಪಿ ಕಣಕ್ಕಿಳಿಸಿದೆ. ಆದರೆ, ಯಾವೊಬ್ಬ ಸ್ಪರ್ಧಿಗೂ ಜನರನ್ನು ಸೆಳೆಯುವ ಸಾಮರ್ಥ್ಯವಿಲ್ಲ. ಎಡಿಎಂಕೆ 170ಕ್ಕೂ ಅಧಿಕ ಕ್ಷೇತ್ರದಲ್ಲಿ ತಮಿಳುನಾಡಿನಲ್ಲಿ ಕಣಕ್ಕಿಳಿಯುತ್ತಿದೆ. ಆದರೆ, ಜಯಲಲಿತಾ ಮರಣದ ನಂತರ ಎಐಎಡಿಎಂಕೆ ಸಂಪೂರ್ಣವಾಗಿ ತನ್ನ ಚಾರ್ಮ್ ಕಳೆದುಕೊಂಡಿದೆ. ಜನರನ್ನು ಸೆಳೆಯಬಲ್ಲ ಒಬ್ಬೇ ಒಬ್ಬ ನಾಯಕನೂ ಆ ಪಕ್ಷದಲ್ಲಿ ಇಲ್ಲ ಎಂಬುದೇ ಸತ್ಯ.

PC : Nakkheeran

ಈ ನಡುವೆ ಬೆಲೆ ಏರಿಕೆ, ನೀಟ್, ಜಲ್ಲಿಕಟ್ಟು ನಿಷೇಧ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಿರುವ ಬಿಜೆಪಿ ಜೊತೆಗೆ ಎಡಿಎಂಕೆ ಮೈತ್ರಿ ತಮಿಳರಿಗೆ ಸುತಾರಾಂ ಇಷ್ಟವಿಲ್ಲ. ಈ ಹಿಂದೆ 2019ರ ಲೋಕಸಭಾ ಚುನಾವಣೆಯಲ್ಲೇ ಎಡಿಎಂಕೆ-ಬಿಜೆಪಿ ಮೈತ್ರಿಗೆ ಅಲ್ಲಿನ ಮತದಾರ ಶೂನ್ಯ ಸಂಪಾದನೆ ನೀಡಿ ತಿರಸ್ಕರಿಸಿದ್ದ. ಇನ್ನು ಈಗಂತೂ ತಮಿಳುನಾಡಿನಲ್ಲಿ ಬಿಜೆಪಿ ವಿರೋಧಿ ಅಲೆ ಜೊತೆಗೆ ಎಡಿಎಂಕೆ ಆಡಳಿತ ವಿರೋಧಿ ಅಲೆ ಕೂಡ ಸೇರಿಕೊಂಡಿದ್ದು, ಬಿಜೆಪಿ ದೆಸೆಯಿಂದ ಎಐಎಡಿಎಂಕೆ ಸಹ ತನ್ನ ಕ್ಷೇತ್ರಗಳನ್ನು ಅಧಿಕ ಸಂಖ್ಯೆಯಲ್ಲಿ ಕಳೆದುಕೊಳ್ಳಲಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಸಿ-ವೋಟರ್ ಸಮೀಕ್ಷೆಯೂ ಇದೇ ಫಲಿತಾಂಶ ನೀಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

’ಮತ್ತೊಂದೆಡೆ ಡಿಎಂಕೆ ಕಳೆದ ಒಂದು ವರ್ಷದಿಂದ ಜನರ ನಡುವೆ ಕೆಲಸ ಮಾಡುತ್ತಿದೆ. ಜನ ಪಂಚಾಯತ್ ನಡೆಸುವ ಮೂಲಕ ಜನರಿಗೆ ಹತ್ತಿರವಾಗಿದೆ. ಅಲ್ಲದೆ, ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸುವಲ್ಲಿ ಸಫಲವಾಗಿದೆ. ಹೀಗಾಗಿ ಕರುಣಾನಿಧಿ ಮಗ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಈ ಭಾರಿ ಜಯಭೇರಿ ಭಾರಿಸಲಿದೆ. 10 ವರ್ಷಗಳ ನಂತರ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ’ ಎಂದೇ ಹೇಳಲಾಗುತ್ತಿದೆ. ಆದರೆ, ಈ ಎಲ್ಲಾ ಲೆಕ್ಕಾಚಾರಗಳ ಅಸಲಿಯತ್ತು ಚುನಾವಣಾ ಫಲಿತಾಂಶದ ನಂತರವೇ ತಿಳಿಯಲಿದೆ.


ಇದನ್ನೂ ಓದಿ: 18 ಪಕ್ಷಾಂತರಿಗಳಿಗೆ ಟಿಕೆಟ್, ತಮಿಳುನಾಡು BJP ಪರಿಸ್ಥಿತಿ ಇಲ್ಲಿಗೆ ಬಂತು: ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...