Homeಮುಖಪುಟತಮಿಳುನಾಡು ವಿಧಾನಸಭಾ ಚುನಾವಣೆ: ದ್ರಾವಿಡ ರಾಜಕೀಯಕ್ಕೆ ಹೊಸ ಸವಾಲುಗಳು!

ತಮಿಳುನಾಡು ವಿಧಾನಸಭಾ ಚುನಾವಣೆ: ದ್ರಾವಿಡ ರಾಜಕೀಯಕ್ಕೆ ಹೊಸ ಸವಾಲುಗಳು!

- Advertisement -
- Advertisement -

ಭಾರತದ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ಮೆರುಗನ್ನು ಸಾಧಿಸಿದ್ದ ತಮಿಳುನಾಡು ಚುನಾವಣಾ ಇತಿಹಾಸ ಬಹುಶಃ ಇಂತಹ ನಗೆಪಾಟಲಿನ ಮತ್ತು ನಿಸ್ಸಾಹಾಯಕ ಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ. ಕಳೆದ 5 ದಶಕಗಳಿಂದ ವರ್ಗದ ತಮಿಳರ ಪಾಲಿಗೆ ದಂತ ಕತೆಗಳಂತಿದ್ದ ಅಮ್ಮ (ಜಯಲಲಿತ) ಮತ್ತು ಅಯ್ಯ (ಕರುಣಾನಿಧಿ) ಇಬ್ಬರೂ ಇಲ್ಲದೆ ನಡೆಯುತ್ತಿರುವ ಈ ಮೊದಲ ವಿಧಾನಸಭಾ ಚುನಾವಣೆ ದ್ರಾವಿಡ ನಾಡಿನ ರಾಜಕೀಯ ಕಣ್ಣಿಗೆ ರಾಚುವ ಮಟ್ಟಿಗಿನ ನಿಸ್ಸಹಾಯಕ ಸ್ಥಿತಿಗೆ ತಲುಪಿದೆ. ಅದಕ್ಕೆ ಕಾರಣ ಇಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಸ್ವಘೋಷಿತ ಚಾಣಕ್ಯ ಅಮಿತ್ ಶಾ ಎಂದರೆ ತಪ್ಪಾಗಲಾರದು.

ಹೌದು..! ತಮಿಳುನಾಡಿನ ಮಟ್ಟಿಗೆ ಹಿಂದಿ ಮತ್ತು ರಾಷ್ಟ್ರೀಯ ಪಕ್ಷಗಳು ಎಂದಿಗೂ ಮಾರು ದೂರವೇ. ಇದಕ್ಕೆ ಕಾರಣ ದ್ರಾವಿಡ ನಾಡಿನಲ್ಲಿ 30ರ ದಶಕದಲ್ಲಿ ಹುಟ್ಟಿ 60ರ ದಶಕದಲ್ಲಿ ರಾಜಕೀಯ ಪಲ್ಲಟಕ್ಕೆ ಕಾರಣವಾದ ದ್ರಾವಿಡ ಚಳುವಳಿ. ಈ ಚಳುವಳಿಯ ಅಧಿನಾಯಕ ಪೆರಿಯಾರ್ ಎಂಬ ಇ.ವಿ. ರಾಮಸ್ವಾಮಿಯವರು. 1967ರಲ್ಲಿ ಈ ಚಳುವಳಿ ಮೊದಲ ಬಾರಿಗೆ ಫಲ ಕೊಟ್ಟಿತ್ತು. ಕಾಂಗ್ರೆಸ್ಸೇತರ ಮೊದಲ ಮುಖ್ಯಮಂತ್ರಿಯಾಗಿ ತಲೈವರ್ ಖ್ಯಾತಿಯ ಸಿ.ಎನ್. ಅಣ್ಣಾದುರೈ ಮುಖ್ಯಮಂತ್ರಿ ಗದ್ದುಗೆಗೆ ಏರಿದರು.

PC : Firstpost

ತದನಂತರದ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವ ರಾಷ್ಟ್ರೀಯ ಪಕ್ಷಗಳೆನಿಸಿಕೊಂಡವಕ್ಕೆ ಅಧಿಕಾರದ ಗದ್ದುಗೆಯ ಸನಿಹಕ್ಕೆ ಬರುವುದರಲಿ ಕನಿಷ್ಟ 30ಕ್ಕೂ ಹೆಚ್ಚು ಸ್ಥಾನ ಗಳಿಸುವುದಕ್ಕೂ ಆಗಿರಲಿಲ್ಲ. ದಿವಂಗತ ಮಾಜಿ ಸಿಎಂ ಕಾಮರಾಜ್‌ರ ಕಾರಣಕ್ಕೆ ಕಾಂಗ್ರೆಸ್‌ಗೆ ದ್ರಾವಿಡ ನಾಡಿನಲ್ಲಿ ಕೆಲವಾದರೂ ಸ್ಥಾನಗಳಿವೆ. ಆದರೆ ಬಿಜೆಪಿ ಈವರೆಗೆ ಖಾತೆಯನ್ನೂ ತೆರೆಯಲಾಗದ ಹೀನಾಯ ಸ್ಥಿತಿಯಲ್ಲೇ ಇದೆ.

ಆದರೆ, 1996ರಲ್ಲಿ ಕೇಂದ್ರದಲ್ಲಿ ಅಂದಿನ ವಾಜಪೇಯಿ ಸರ್ಕಾರವನ್ನೇ ಉರುಳಿಸಿ ಉಕ್ಕಿನ ಮಹಿಳೆ ಎಂಬ ಉಪನಾಮಕ್ಕೆ ಪಾತ್ರವಾದ ಜಯಲಲಿತಾ ಮರಣದ ನಂತರ ಇದೀಗ ಇಡೀ ತಮಿಳುನಾಡು ರಾಜಕೀಯ ಚಿತ್ರಣವೇ ಬದಲಾಗಿದೆ. ಅಮ್ಮ ಕಟ್ಟಿ ಆಳಿದ ಎಐಎಡಿಎಂಕೆ ಎಂಬ ಪಕ್ಷವನ್ನು ಬಿಜೆಪಿ ಸಂಪೂರ್ಣವಾಗಿ ಆಪೋಷನ ತೆಗೆದುಕೊಂಡಿದೆ. ಆಡಳಿತರೂಢ ಸರ್ಕಾರದ ಲಾಭ ತೆಗೆದುಕೊಂಡು ದ್ರಾವಿಡ ನಾಡಿನಲ್ಲಿ ಕಮಲವನ್ನು ಅರಳಿಸಿಯೇ ತೀರಬೇಕು ಎಂಬ ನಿರ್ಣಯಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಆದರೆ, ಜನ ಬಿಜೆಪಿ ತಂತ್ರಕ್ಕೆ ಮರುಳಾಗುತ್ತಾರ? ಏನು ಹೇಳುತ್ತಿದ್ದಾನೆ ತಮಿಳು ಮತದಾರ? ಎಐಎಡಿಎಂಕೆ ಪಕ್ಷ ಬಿಜೆಪಿ ಬಿ ಟೀಮ್‌ನಂತೆ ವರ್ತಿಸುತ್ತಿರುವುದೇ? ಚಿನ್ನಮ್ಮ ಶಶಿಕಲಾ ದಿಢೀರೆಂದು ಸೈಡ್ಲೈನ್ ಆಗಿದ್ದೇಕೆ?

ಎಡಿಎಂಕೆಯನ್ನು ಅಪೋಶನಗೈದ ಬಿಜೆಪಿ

2016ರ ವರೆಗೆ ತಮಿಳುನಾಡಿನಲ್ಲಿ ಬಿಜೆಪಿ ಪರಿಸ್ಥಿತಿ ಹೇಗಿತ್ತು ಎಂದರೆ ಪಕ್ಷಕ್ಕೆ ಮತ ಯಾಚಿಸುವುದಿರಲಿ, ಇಂತಹ ಪಕ್ಷ ದ್ರಾವಿಡ ನಾಡಿನಲ್ಲಿ ಜೀವಂತ ಇದೆ ಎಂಬ ಊಹೆಯೂ ಎಷ್ಟೋ ಜನರಿಗೆ ಇದ್ದಿರಲಿಕ್ಕಿಲ್ಲ. ಆದರೆ, 2016ರಲ್ಲಿ ಎಲ್ಲವೂ ಬದಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಟ್, ಜಲ್ಲಿಕಟ್ಟು ನಿಷೇಧ ಎಂದು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಎಲ್ಲಾ ಕಾನೂನುಗಳನ್ನು ಜಯಲಲಿತ ವಿರೋಧಿಸಿದ್ದರು. ಆದರೆ, ದುರಾದೃಷ್ಟವಶಾತ್ ಜಯಲಲಿತಾ ಅದೇ ವರ್ಷ ಮೃತಪಟ್ಟರೆ, ಅವರ ಆಪ್ತೆ ಶಶಿಕಲಾ ಅಲಿಯಾಸ್ ಚಿನ್ನಮ್ಮ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು.

ಜಯಲಲಿತಾ ಸಾವಿನಲ್ಲಿ ಅನೇಕ ಸಂಶಯಗಳಿವೆ, ಆ ಸಾವಿನ ಸತ್ಯಾಸತ್ಯತೆ ಕುರಿತು ಪ್ರಸ್ತುತ ತನಿಖೆಯೂ ಆಗುತ್ತಿದೆ ಎಂಬುದು ಬೇರೆ ವಿಚಾರ. ಆದರೆ, ಈ ಬೆಳವಣಿಗೆಯ ನಂತರ ಎಡಿಎಂಕೆ ನಾವಿಕನಿಲ್ಲದ ದೋಣಿಯಂತಾದದ್ದು ಮಾತ್ರ ಅಕ್ಷರಶಃ ಸತ್ಯ. ಈ ಸಮಯದಲ್ಲೇ ಬಿಜೆಪಿ ಇದರ ಲಾಭ ಪಡೆಯಲು ಮುಂದಾದದ್ದು ಮತ್ತು ಅಮಿತ್ ಶಾ ಕಣವನ್ನು ಪ್ರವೇಶಿಸಿದ್ದು. ಹಾಗೆ ನೋಡಿದರೆ ಇಡೀ ಎಐಎಡಿಎಂಕೆ ಎಂಬುದು ಭ್ರಷ್ಟಾಚಾರದ ಕೂಪವಾಗಿ ಹೋಗಿತ್ತು. ಎಲ್ಲಾ ಶಾಸಕರ ಹಾಗೂ ಸಚಿವರ ಮೇಲೂ ಭ್ರಷ್ಟಾಚಾರದ ಆರೋಪಗಳಿವೆ. ಇದೇ ಸಮಯದಲ್ಲಿ ಚಿನ್ನಮ್ಮ ಶಶಿಕಲಾ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಅನೇಕ ಸಚಿವರ ಪಾಲಿಗೆ ಭಯದ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಸುಳ್ಳಲ್ಲ.

PC : Firstpost

ಈ ವೇಳೆ ಜಯಲಲಿತಾ ಮತ್ತು ಶಶಿಕಲಾ ಅವರ ರಬ್ಬರ್ ಸ್ಟಾಂಪ್‌ಗಳಾಗಿಯೇ ದೀರ್ಘ ಕಾಲ ತಮ್ಮ ರಾಜಕೀಯ ಏಳಿಗೆ ಕಂಡಿದ್ದ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ಓ. ಪನ್ನೀರ್ ಸೆಲ್ವಂ ಇಬ್ಬರನ್ನೂ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕಿರಲಿಲ್ಲ. ಕೇಂದ್ರ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಹೆದರಿಯೇ ಬಹುತೇಕ ಎಲ್ಲಾ ಸಚಿವರು ಬಿಜೆಪಿ ಶರಣಾಗಿ ಹೋಗಿದ್ದರು. ಈ ಬ್ಲಾಕ್‌ಮೇಲ್ ತಂತ್ರದಿಂದಾಗಿಯೇ 2016ರಿಂದ ಈಚೆಗೆ ತಮಿಳುನಾಡಿನಲ್ಲಿ ನಡೆದದ್ದೆಲ್ಲ ಬಿಜೆಪಿ ಆಡಳಿತವೇ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ ಎನ್ನುತ್ತಾರೆ ಅಲ್ಲಿನ ರಾಜಕೀಯ ವಿಶ್ಲೇಷಕರು.

ಸ್ವತಃ ಸಚಿವರೊಬ್ಬರು “ಮೋದಿ ನಮ್ಮ ಡ್ಯಾಡಿ” ಎಂದು ಬಹಿರಂಗ ಹೇಳಿಕೆ ನೀಡುತ್ತಾರೆ ಎಂದರೆ ದ್ರಾವಿಡ ನಾಡಿನಲ್ಲಿ ಬಿಜೆಪಿ ಯಾವ ಮಟ್ಟಿಗೆ ಆಡಳಿತರೂಢ ಪಕ್ಷವನ್ನು ಅಪೋಶನ ಮಾಡಿಕೊಂಡಿದೆ ಎಂಬುದನ್ನು ಊಹಿಸಬಹುದು. ಈ ನಡುವೆ ಪ್ರಸ್ತುತ ಚುನಾವಣೆಯಲ್ಲಿ ಎಐಡಿಎಂಕೆ ಮೈತ್ರಿಯಾಗಿರುವ ಬಿಜೆಪಿ ತಮಿಳುನಾಡಿನಲ್ಲಿ ಶೇ.1 ರಷ್ಟು ಕೂಡ ಮತಬ್ಯಾಂಕ್ ಹೊಂದಿರದಿದ್ದರೂ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚೌಕಾಶಿ ಮಾಡಿದೆ. ಮೊದಲ ಬಾರಿಗೆ ಇಷ್ಟು ದೊಡ್ಡಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಗೆ ಎಐಎಡಿಎಂಕೆ ಎಲ್ಲಾ ಸಹಾಯ ಮಾಡುತ್ತಿದೆ. ದ್ರಾವಿಡ ನಾಡಿನಲ್ಲಿ ತಮ್ಮ ತತ್ವ ಸಿದ್ಧಾಂತಗಳಿಗೆ ವಿರುದ್ಧವಾದ ಕೋಮುವಾದಿ ಪಕ್ಷಕ್ಕೆ ಕೆಂಪುಹಾಸು ಹಾಸಿದೆ ಎಂದರೆ ಎಐಎಡಿಎಂಕೆ ಪಕ್ಷದ ಅಸಹಾಕತೆಯನ್ನೂ ಇಲ್ಲಿ ಗಮನಿಸಬೇಕಿದೆ.

ಚಿನ್ನಮ್ಮ ಸೈಡ್ಲೈನ್

ಒಂದು ಹಂತದಲ್ಲಿ ಚಿನ್ನಮ್ಮ ಶಶಿಕಲಾ ಅವರೇ ತಮಿಳುನಾಡಿನ ಮುಂದಿನ ಸಿಎಂ ಎನ್ನಲಾಗಿತ್ತು. ಶಶಿಕಲಾ ಜೈಲಿನಲ್ಲಿದ್ದರೂ ಸಹ ಅವರ ಸಂಬಂಧಿ ಟಿಟಿವಿ ದಿನಕರನ್ ತಮಿಳುನಾಡಿನಲ್ಲಿ ಎಡಿಎಂಕೆಗೆ ಸೆಡ್ಡು ಹೊಡೆದಿದ್ದರು. ಶಶಿಕಲಾಗಾಗಿಯೇ ’ಅಮ್ಮಾ ದ್ರಾವಿಡ ಮುನ್ನೇಟ್ರ ಕಳಗಂ’ ಎಂಬ ಪಕ್ಷವನ್ನು ಕೂಡ ಸ್ಥಾಪಿಸಿದ್ದರು. ಈ ಮೂಲಕ ಜಯಲಲಿತಾ ಅಭಿಮಾನದ ಮತಗಳ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದರು.

PC : Prajavani

ಇದಕ್ಕೆ ಪೂರಕವಾಗಿ ಕಳೆದ ತಿಂಗಳು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಶಶಿಕಲಾ ಅವರನ್ನು ಬೆಂಗಳೂರಿನಿಂದ ಚೆನ್ನೈವರೆಗೆ ದೊಡ್ಡ ಜನ ಬೆಂಬಲದೊಂದಿಗೆ ಸ್ವಾಗತ ಮಾಡಲಾಗಿತ್ತು. ಈ ಜನ ಬೆಂಬಲವನ್ನು ಕಂಡ ರಾಜಕೀಯ ತಜ್ಞರೇ ಸ್ವತಃ ಥಂಡ ಹೊಡೆದಿದ್ದರು. ಅಲ್ಲದೆ, ಭವಿಷ್ಯದಲ್ಲಿ ಶಶಿಕಲಾ ತಮಿನಾಡಿನ ರಾಜಕೀಯದಲ್ಲಿ ನಿರ್ಣಾಯಕವಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಎಡಿಎಂಕೆ ಪಕ್ಷದ ಅನೇಕ ಸಚಿವರು ಸಹ ಶಶಿಕಲಾ ಪರವಾಗಿ ಬಹಿರಂಗವಾಗಿ ಬ್ಯಾಟ್ ಬೀಸಿದ್ದರು.

ಆದರೆ, ಅವರನ್ನೂ ಸಹ ಇದೀಗ ಸೈಡ್ಲೈನ್ ಮಾಡಲಾಗಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಶಶಿಕಲಾ ದಿಢೀರೆಂದು ರಾಜಕೀಯ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ನಿರ್ಧಾರದ ಹಿಂದೆ ’ಚಾಣಕ್ಯ’ನ ಅದೇ ಬ್ಲಾಕ್‌ಮೇಲ್ ತಂತ್ರ ಇದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಪಕ್ಷದ ಇತ್ತೀಚಿನ ನಡೆಗಳೂ ಸಹ ಈ ಅನುಮಾನಗಳಿಗೆ ಇಂಬು ನೀಡುವಂತಿರುವುದು ಸುಳ್ಳಲ್ಲ.

ಮತದಾರನ ಒಲವೇನು?

ಅಸಲಿಗೆ ತಮಿಳುನಾಡಿನಲ್ಲಿ ಹಲವು ದಶಕಗಳ ನಂತರ ಸಾಮಾನ್ಯ ಜನ ಮತ್ತು ವಿದ್ಯಾರ್ಥಿ ಸಮೂಹ ಮುಂದೆ ನಿಂತು ನಡೆಸಿದ ಬಹುದೊಡ್ಡ ಹೋರಾಟ ಎಂದರೆ ಅದು ಜಲ್ಲಿಕಟ್ಟು ಹೋರಾಟ. ಇಂದು ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆ ಮುಂದುವರೆಯಲು ಸಾಧ್ಯವಾಗಿರುವುದಕ್ಕೆ ಈ ಹೋರಾಟಗಾರರ ಶ್ರಮ ನಿರ್ಣಾಯಕ. ಆದರೆ, ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, “ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಮುಂದುವರೆಯಲು ನರೇಂದ್ರ ಮೋದಿಯೇ ಕಾರಣ. ತಮಿಳುನಾಡಿನ ಅಭಿವೃದ್ಧಿಗೆ ಮೋದಿಯೇ ಸೂತ್ರಧಾರ” ಎಂದು ಬಹಿರಂಗವಾಗಿ ಹೇಳಿಕೆ ನೀಡಿಬಿಟ್ಟರು. ಈ ಹೇಳಿಕೆ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ತಮಿಳುನಾಡಿನ ವಾಸ್ತವ ರಾಜಕಾರಣದಲ್ಲಿ ಬಿಜೆಪಿಗೆ ಯಾವುದೇ ಸ್ಥಾನಮಾನ ಇಲ್ಲ. ಇನ್ನೂ ಕಳೆದ 50 ವರ್ಷ ದ್ರಾವಿಡ ನಾಡನ್ನು ಆಳ್ವಿಕೆ ಮಾಡಿರುವ ಪ್ರಬಲ ದ್ರಾವಿಡ ಪಕ್ಷವೊಂದು, ತಮ್ಮ ಜೀವಾಳವಾಗಿದ್ದ ಅಮ್ಮ ಜಯಲಲಿತಾ ಅವರನ್ನೇ ಸೈಡಿಗೆ ಸರಿಸಿ ತಮ್ಮ ಮತಗಳಿಗಾಗಿ ಮೋದಿಯನ್ನು ಹೊಗಳುವಂತಹ ಹೀನಾಯ ಸ್ಥಿತಿಗೆ ತೆರಳಿತೇ? ಎಂಬ ಪ್ರಶ್ನೆಗಳು ಇದೀಗ ತಮಿಳುನಾಡಿನ ಎಲ್ಲೆಡೆ ಹರಿದಾಡುತ್ತಿದೆ.

ಅಸಲಿಗೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಬ್ಯಾನ್ ಆಗಲು ಕೇಂದ್ರ ಬಿಜೆಪಿ ಸರ್ಕಾರವೂ ಕಾರಣ ಎಂಬುದು ತಮಿಳರಿಗೆ ತಿಳಿಯದ ವಿಚಾರವೇನಲ್ಲ. ಹೀಗಾಗಿ ಓ. ಪನ್ನೀರ್ ಸೆಲ್ವಂ ಅವರ ಮಾತು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ.

ಬಿಜೆಪಿ-ಎಡಿಎಂಕೆ ಎರಡಕ್ಕೂ ಇಲ್ಲ ಚಾರ್ಮ್

ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಒಟ್ಟು 20 ಜನರನ್ನು ಬಿಜೆಪಿ ಕಣಕ್ಕಿಳಿಸಿದೆ. ಆದರೆ, ಯಾವೊಬ್ಬ ಸ್ಪರ್ಧಿಗೂ ಜನರನ್ನು ಸೆಳೆಯುವ ಸಾಮರ್ಥ್ಯವಿಲ್ಲ. ಎಡಿಎಂಕೆ 170ಕ್ಕೂ ಅಧಿಕ ಕ್ಷೇತ್ರದಲ್ಲಿ ತಮಿಳುನಾಡಿನಲ್ಲಿ ಕಣಕ್ಕಿಳಿಯುತ್ತಿದೆ. ಆದರೆ, ಜಯಲಲಿತಾ ಮರಣದ ನಂತರ ಎಐಎಡಿಎಂಕೆ ಸಂಪೂರ್ಣವಾಗಿ ತನ್ನ ಚಾರ್ಮ್ ಕಳೆದುಕೊಂಡಿದೆ. ಜನರನ್ನು ಸೆಳೆಯಬಲ್ಲ ಒಬ್ಬೇ ಒಬ್ಬ ನಾಯಕನೂ ಆ ಪಕ್ಷದಲ್ಲಿ ಇಲ್ಲ ಎಂಬುದೇ ಸತ್ಯ.

PC : Nakkheeran

ಈ ನಡುವೆ ಬೆಲೆ ಏರಿಕೆ, ನೀಟ್, ಜಲ್ಲಿಕಟ್ಟು ನಿಷೇಧ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಿರುವ ಬಿಜೆಪಿ ಜೊತೆಗೆ ಎಡಿಎಂಕೆ ಮೈತ್ರಿ ತಮಿಳರಿಗೆ ಸುತಾರಾಂ ಇಷ್ಟವಿಲ್ಲ. ಈ ಹಿಂದೆ 2019ರ ಲೋಕಸಭಾ ಚುನಾವಣೆಯಲ್ಲೇ ಎಡಿಎಂಕೆ-ಬಿಜೆಪಿ ಮೈತ್ರಿಗೆ ಅಲ್ಲಿನ ಮತದಾರ ಶೂನ್ಯ ಸಂಪಾದನೆ ನೀಡಿ ತಿರಸ್ಕರಿಸಿದ್ದ. ಇನ್ನು ಈಗಂತೂ ತಮಿಳುನಾಡಿನಲ್ಲಿ ಬಿಜೆಪಿ ವಿರೋಧಿ ಅಲೆ ಜೊತೆಗೆ ಎಡಿಎಂಕೆ ಆಡಳಿತ ವಿರೋಧಿ ಅಲೆ ಕೂಡ ಸೇರಿಕೊಂಡಿದ್ದು, ಬಿಜೆಪಿ ದೆಸೆಯಿಂದ ಎಐಎಡಿಎಂಕೆ ಸಹ ತನ್ನ ಕ್ಷೇತ್ರಗಳನ್ನು ಅಧಿಕ ಸಂಖ್ಯೆಯಲ್ಲಿ ಕಳೆದುಕೊಳ್ಳಲಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಸಿ-ವೋಟರ್ ಸಮೀಕ್ಷೆಯೂ ಇದೇ ಫಲಿತಾಂಶ ನೀಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

’ಮತ್ತೊಂದೆಡೆ ಡಿಎಂಕೆ ಕಳೆದ ಒಂದು ವರ್ಷದಿಂದ ಜನರ ನಡುವೆ ಕೆಲಸ ಮಾಡುತ್ತಿದೆ. ಜನ ಪಂಚಾಯತ್ ನಡೆಸುವ ಮೂಲಕ ಜನರಿಗೆ ಹತ್ತಿರವಾಗಿದೆ. ಅಲ್ಲದೆ, ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸುವಲ್ಲಿ ಸಫಲವಾಗಿದೆ. ಹೀಗಾಗಿ ಕರುಣಾನಿಧಿ ಮಗ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಈ ಭಾರಿ ಜಯಭೇರಿ ಭಾರಿಸಲಿದೆ. 10 ವರ್ಷಗಳ ನಂತರ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ’ ಎಂದೇ ಹೇಳಲಾಗುತ್ತಿದೆ. ಆದರೆ, ಈ ಎಲ್ಲಾ ಲೆಕ್ಕಾಚಾರಗಳ ಅಸಲಿಯತ್ತು ಚುನಾವಣಾ ಫಲಿತಾಂಶದ ನಂತರವೇ ತಿಳಿಯಲಿದೆ.


ಇದನ್ನೂ ಓದಿ: 18 ಪಕ್ಷಾಂತರಿಗಳಿಗೆ ಟಿಕೆಟ್, ತಮಿಳುನಾಡು BJP ಪರಿಸ್ಥಿತಿ ಇಲ್ಲಿಗೆ ಬಂತು: ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...