17 ವರ್ಷಗಳ ಗಡಿಪಾರಾದ ನಂತರ ತಾರಿಕ್ ರೆಹಮಾನ್ ರಾಜಕೀಯವಾಗಿ ಪುನರಾಗಮನ ಮಾಡಿದ್ದಾರೆ. 2026 ರ ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದಿದ್ದಾರೆ.
ಬಿಎನ್ಪಿ ಅಧ್ಯಕ್ಷರಾಗಿರುವ ತಾರಿಕ್ ಎರಡು ಕ್ಷೇತ್ರಗಳಿಂದ ಗೆದ್ದಿದ್ದಾರೆ, ಢಾಕಾ 17 ಮತ್ತು ಬೊಗುರಾ 6, ಇದು ದೇಶದ ಇತಿಹಾಸದಲ್ಲಿ ಗಮನಾರ್ಹ ರಾಜಕೀಯ ಚೊಚ್ಚಲ ಪ್ರವೇಶ ಎಂದು ಅನೇಕ ಚುನಾವಣಾ ತಜ್ಞರು ವಿವರಿಸುತ್ತಾರೆ.
ಫೆಬ್ರವರಿ 12 ರಂದು ನಡೆದ ಚುನಾವಣೆಯು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ದೀರ್ಘ ಆಳ್ವಿಕೆಯನ್ನು ಕೊನೆಗೊಳಿಸಿದ 2024 ರ ದಂಗೆಯ ನಂತರ ನಡೆದ ಮೊದಲ ರಾಷ್ಟ್ರೀಯ ಮತದಾನವಾಗಿದೆ.
ಮಾಧ್ಯಮಗಳ ವರದಿಯ ತಾತ್ಕಾಲಿಕ ಫಲಿತಾಂಶಗಳ ಪ್ರಕಾರ, ಬಿಎನ್ಪಿ ಮತ್ತು ಅದರ ಮಿತ್ರಪಕ್ಷಗಳು 299 ಸಂಸದೀಯ ಸ್ಥಾನಗಳಲ್ಲಿ 211 ಸ್ಥಾನಗಳನ್ನು ಪಡೆದುಕೊಂಡವು. ಆದರೆ ಜಮಾತ್-ಇ-ಇಸ್ಲಾಮಿ ನೇತೃತ್ವದ ಮೈತ್ರಿಕೂಟ ಸುಮಾರು 70 ಸ್ಥಾನಗಳನ್ನು ಗೆದ್ದಿದೆ. ಆದರೆ, ಬಾಂಗ್ಲಾದೇಶದ ಚುನಾವಣಾ ಆಯೋಗದಿಂದ ಅಧಿಕೃತ ದೃಢೀಕರಣ ಇನ್ನೂ ಬಿಡುಗಡೆಯಾಗಿಲ್ಲ.
ಫಲಿತಾಂಶಗಳು ಸ್ಪಷ್ಟ ಬಹುಮತವನ್ನು ಸೂಚಿಸಿದ ನಂತರ ಮಾತನಾಡಿದ ರೆಹಮಾನ್, ತಮ್ಮ ಪಕ್ಷವು ವಿಜಯೋತ್ಸವ ರ್ಯಾಲಿ ಆಯೋಜಿಸುವುದಿಲ್ಲ ಎಂದು ಹೇಳಿದರು. ಡಿಸೆಂಬರ್ 25, 2025 ರಂದು ಢಾಕಾಗೆ ಹಿಂದಿರುಗಿದ ನಂತರ ಅವರು ಹಜರತ್ ಶಾ ಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆಲಕ್ಕೆ ಕಾಲಿಟ್ಟು, ಏಕತೆಗೆ ಕರೆ ನೀಡುವ ಮೂಲಕ ಅವರು ಸಮಾಧಾನಕರ ಭಾವನೆ ವ್ಯಕ್ತಪಡಿಸಿದರು. ತಮ್ಮ ಭಾಷಣದಲ್ಲಿ, ಅಂತರ ಕೋಮು ಮತ್ತು ಅಂತರ ಜನಾಂಗೀಯ ಸಾಮರಸ್ಯವನ್ನು ಒತ್ತಿ ಹೇಳಿ, ರಾಜಕೀಯ ವಿರೋಧಿಗಳು, ವಿಶೇಷವಾಗಿ ಅವಾಮಿ ಲೀಗ್ ಮಾಡಿದ ಆರೋಪಗಳನ್ನು ತಿರಸ್ಕರಿಸಿದರು.
ಬಾಂಗ್ಲಾದೇಶದ ರಾಜಕೀಯ ಭೂದೃಶ್ಯವು ಬಹಳ ಹಿಂದಿನಿಂದಲೂ ಎರಡು ಪ್ರತಿಸ್ಪರ್ಧಿ ಶಿಬಿರಗಳಾದ ಅವಾಮಿ ಲೀಗ್ ಮತ್ತು ಬಿಎನ್ಪಿಯಿಂದ ಪ್ರಾಬಲ್ಯ ಹೊಂದಿದೆ. ಡಿಸೆಂಬರ್ನಲ್ಲಿ ನಿಧನರಾದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ರೆಹಮಾನ್, ರಾಜಕೀಯ ಪ್ರಕ್ಷುಬ್ಧತೆಯ ನಡುವೆ 2006 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಕಳೆದ ವರ್ಷದ ಕೊನೆಯಲ್ಲಿ ಅವರ ಮರಳುವಿಕೆ ದೇಶದ ರಾಜಕೀಯದಲ್ಲಿ ಹೊಸ ಹಂತವನ್ನು ಸೂಚಿಸಿತು.
ಜಮಾತೆ ಇ ಇಸ್ಲಾಮಿ ನಾಯಕರು ಮತ ಎಣಿಕೆಯಿಂದ ತೃಪ್ತರಾಗಿಲ್ಲ ಎಂದು ಹೇಳಿದ್ದಾರೆ. ಫಲಿತಾಂಶ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಚುನಾವಣೆಯ ಜೊತೆಗೆ, ಪ್ರಧಾನ ಮಂತ್ರಿಯ ಸಂಭಾವ್ಯ ಅವಧಿ ಮಿತಿಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರದ ಮೇಲೆ ಬಲವಾದ ಪರಿಶೀಲನೆಗಳು ಸೇರಿದಂತೆ ರಾಜಕೀಯ ಸುಧಾರಣೆಗಳ ಕುರಿತು ಜನಾಭಿಪ್ರಾಯ ಸಂಗ್ರಹವನ್ನು ಸಹ ನಡೆಸಲಾಯಿತು.
ಬಾಂಗ್ಲಾ ಚುನಾಔಣೆ ಕುರಿತು ಅಂತರರಾಷ್ಟ್ರೀಯ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ರೆಹಮಾನ್ ಅವರು ತಾರಿಕ್ ಅವರನ್ನು ಅಭಿನಂದಿಸಿ, ಭಾರತವು ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಕೂಡ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು. ಈ ವಿಜಯವನ್ನು ನಿರ್ಣಾಯಕ ಮತ್ತು ಅದ್ಭುತ ಎಂದು ಕರೆದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಸಂದೇಶದಲ್ಲಿ, ರೆಹಮಾನ್ ಮತ್ತು ಬಿಎನ್ಪಿಯ ಐತಿಹಾಸಿಕ ಚುನಾವಣಾ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಹೇಳಿದರು.
127 ಮಿಲಿಯನ್ಗಿಂತಲೂ ಹೆಚ್ಚು ಅರ್ಹ ಮತದಾರರಲ್ಲಿ ಶೇಕಡಾ 55 ಕ್ಕಿಂತ ಹೆಚ್ಚು ಮತದಾನ ವರದಿಯಾಗಿದ್ದು, 2026 ರ ಬಾಂಗ್ಲಾದೇಶ ಚುನಾವಣೆಯು ಒಂದು ಮಹತ್ವದ ತಿರುವು ಎಂದು ಗುರುತಿಸುತ್ತದೆ.


