Homeಮುಖಪುಟಭಾರತಕ್ಕೆ ಚಹಾ ಬಂದಿದ್ದು... : ಅಂತರಾಷ್ಟ್ರೀಯ ಚಹಾ ದಿನಕ್ಕೊಂದು ಬರಹ.

ಭಾರತಕ್ಕೆ ಚಹಾ ಬಂದಿದ್ದು… : ಅಂತರಾಷ್ಟ್ರೀಯ ಚಹಾ ದಿನಕ್ಕೊಂದು ಬರಹ.

ಇವತ್ತು ಅಂತರಾಷ್ಟ್ರೀಯ ಚಹಾ ದಿನ. ಲೇಖಕ "ಎಸ್. ಕುಮಾರ್" ಬರೆದಿರುವ "ಬುಕ್ ಆಫ್ ಟೀ" ಪುಸ್ತಕದಿಂದ ಆಯ್ದ ಬರಹ. ಅಂತರಾಷ್ಟ್ರೀಯ ಚಹಾ ದಿನಕ್ಕಾಗಿ, ಚಹಾ ಹೀರುತ್ತಾ ಓದಿ..

- Advertisement -
- Advertisement -

ಭಾರತ ಚಹಾ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದ್ದರೆ, ಆಫ್ರಿಕಾದ ಕೀನ್ಯಾ, ಶ್ರೀಲಂಕಾ ನಂತರದ ಸ್ಥಾನದಲ್ಲಿವೆ. ಈ ದೇಶಗಳ ಚಹಾ ಅಲ್ಲಿನ ಭೌಗೋಳಿಕ ಕಾರಣಗಳಿಂದಾಗಿಯೇ ವೈವಿಧ್ಯಮಯವಾಗಿವೆ.

ಭಾರತದಲ್ಲಿ ಚಹಾ ಮೊದಲು ಬೆಳೆದಿದ್ದು ಆಸ್ಸಾಮಿನ ಸದಿಯಾ ಕಣಿವೆಯಲ್ಲಿ. ಆದರೆ ಈ ಕಣಿವೆ ಬ್ರಹ್ಮಪುತ್ರ ನದಿಯ ಹರಿವಿನಲ್ಲಿ ಕಣ್ಮರೆಯಾಗಿ ಹೋಯಿತು.

ಇಲ್ಲಿಗೆ ಚಹಾ ಸಸಿಗಳನ್ನು ತಂದಿದ್ದು ಚಾಲ್ರ್ಸ್ ಬ್ರೂಸ್. ಸಿಂಗ್‍ಪೊ ಅನ್ನೋ ಬುಡಕಟ್ಟಿನವರಿಂದ ಟೀ ಗಿಡದ ಬೀಜಗಳನ್ನು ಸಂಗ್ರಹಿಸಿದ ಈತ ಕೋಲ್ಕತಾದಲ್ಲಿದ್ದ ಸಸ್ಯ ಉದ್ಯಾನಕ್ಕೆ ಪರೀಕ್ಷೆಗೆಂದು ಕಳಿಸಿದ. ಹೀಗೆ ಪರೀಕ್ಷೆಗೆ ಕಳಿಸುವ ಮುನ್ನವೇ ಚಾಲ್ರ್ಸ್‍ಗೆ ಇದು ಚೀನಾದಲ್ಲಿ ಬೆಳೆವ ಟೀ ಸಸ್ಯದ ಕುಟುಂಬಕ್ಕೆ ಸೇರಿದ್ದೇ ಇರಬೇಕೆಂಬ ಗುಮಾನಿ ಇತ್ತು.

ಕೊಲ್ಕತಾದ ಸಸ್ಯಶಾಸ್ತ್ರಜ್ಞರು ಆತನ ಗುಮಾನಿ ನಿಜವೆಂದು ಹೇಳಿದರು. ಆದರೆ ಕೆಲವು ಪ್ರಯೋಗಗಳ ನಂತರ ಈ ಬೀಜಗಳನ್ನು ಅಸ್ಸಾಮ್ ಮತ್ತು ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಬಿತ್ತಲಾಯಿತು. ಆದರೆ ಯಶ ಸಿಗಲಿಲ್ಲ. ಆದರೆ ದಾರ್ಜಿಲಿಂಗ್‍ನಲ್ಲಿ ಟೀ ಸಸಿಗಳು ಚಿಗುರಿದವು.

ಡಾರ್ಜಲಿಂಗ್ ನ ಚಹಾ ಎಸ್ಟೇಟ್ ಒಂದರ ವಿಹಂಗಮ ನೋಟ

1834ರಲ್ಲಿ ಲಾರ್ಡ್ ವಿಲಿಯಂ ಬೆಂಟಿಂಕ್ (ಭಾರತದ ಗವರ್ನರ್ ಜನರಲ್ ಆಗಿದ್ದ ಈತ ಸತಿ ಪದ್ಧತಿಯನ್ನು ವಿರೋಧಿಸಿದ್ದ) ಭಾರತದಲ್ಲಿ ಟೀ ಬೆಳೆಯನ್ನು ಹೆಚ್ಚಿಸುವುದಕ್ಕಾಗಿ ಒಂದು ಸಮಿತಿಯನ್ನು ನೇಮಿಸಿದ. ಬ್ರಿಟಿಷ್ ಸರ್ಕಾರ ಕೂಡ ವಿಜ್ಞಾನಿಗಳ ತಂಡವೊಂದನ್ನು ಅಸ್ಸಾಮಿಗೆ ಅಧ್ಯಯನಕ್ಕೆಂದು ಕಳಿಸಿತು.

1837ರ ಹೊತ್ತಿಗೆ ಮೊದಲ ಟೀ ಫಸಲು ಕೈಗೆ ಸಿಕ್ಕಿತು. 8 ದೊಡ್ಡ ಚಹಾ ಎಲೆಗಳು ತುಂಬಿದ ಪೆಟ್ಟಿಗೆಗಳು ಇಂಗ್ಲೆಂಡಿಗೆ ರವಾನೆಯಾದವು. ಇದೇ ವೇಳೆ ಅಂದ್ರೆ 1839ರಲ್ಲಿ ಅಸ್ಸಾಮಿನ ಸಿಬ್‍ಸಾಗರ್ ಮತ್ತು ಲಾಖಿಮ್‍ಪುರದಲ್ಲಿ ಬ್ರಿಟಿಷ್ ಸರ್ಕಾರ ಟೀಯನ್ನು ಉದ್ಯಮವನ್ನಾಗಿ ರೂಪಿಸುವ ಕೆಲವು ಹೆಜ್ಜೆಗಳನ್ನಿರಿಸಿತು.

ಈ ಬಗ್ಗೆ ಕೇಳಿ ತಿಳಿದ ಲಂಡನ್ ಮತ್ತು ಕೋಲ್ಕತಾ ವ್ಯಾಪಾರಿಗಳೂ ಮುಂದೆ ಬಂದರು. ಬ್ರಿಟಿಷರೊಂದಿಗೆ ಸ್ಪರ್ಧೆಗಿಳಿದು ಒಂದು ಕಂಪನಿ ಹುಟ್ಟುಹಾಕುವಲ್ಲಿ ಭಾರತೀಯರೂ ಯಶ ಕಂಡರು. ಮಣಿರಾಮ್ ದೀವಾನ್ ಎಂಬುವರು ಭಾರತದಲ್ಲಿ ಮೊದಲ ಟೀ ಕಂಪನಿ ಆರಂಭಿಸುವಲ್ಲಿ ಯಶಸ್ವಿಯಾದರು. ಇದು ಜಗತ್ತಿನ ಮೊದಲ ಟೀ ಕಂಪನಿ ಎಂದೂ ಹೇಳಲಾಗುತ್ತದೆ. ಇದರಲ್ಲಿ ರವೀಂದ್ರನಾಥ ಠಾಗೂರ ಅಜ್ಜ ದ್ವಾರಕನಾಥ ಠಾಗೂರ ನಿರ್ದೇಶಕರಾಗಿದ್ದರು.

ಅದೇ ವರ್ಷ ಹಲವು ಕಂಪನಿಗಳು ಹುಟ್ಟಿಕೊಂಡವು. ನಂತರದ ದಿನಗಳಲ್ಲಿ ಅವೆಲ್ಲ ಕಂಪನಿಗಳನ್ನು ಅಸ್ಸಾಮ್ ಕಂಪನಿ ಹೆಸರಿನಲ್ಲಿ ಒಂದೇ ಸೂರಿನಡಿ ತರಲಾಯಿತು. 1856ರ ಹೊತ್ತಿಗೆ ದಾರ್ಜಿಲಿಂಗ್‍ನಲ್ಲಿ ಟೀ ತೋಟಗಳು ಹೆಚ್ಚಿದವು. ದಾರ್ಜಿಲಿಂಗ್ ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಕಚಾರ್, ದುವಾರ್ಸ್, ತೆರಾಯ್‍ಗಳಲ್ಲಿ ಟೀ ಉತ್ಪಾದನೆ ಶುರುವಾಯಿತು. ನಿಧಾನವಾಗಿ ದೆಹ್ರಾದೂನ್, ಕಾಂಗ್ರ, ಪಶ್ಚಿಮ ಹಿಮಾಲಯ ಪ್ರದೇಶಗಳ ಮೂಲಕ ದಕ್ಷಿಣಕ್ಕೂ ವ್ಯಾಪಿಸಿತು.

ನೀಲಗಿರಿ ಬೆಟ್ಟದಲ್ಲಿರುವ ಟೀ ಎಸ್ಟೇಟ್

ದಕ್ಷಿಣ ಭಾರತದಲ್ಲಿ ನೀಲಗಿರಿ ಪರ್ವತ ಶ್ರೇಣಿಯಲ್ಲಿ ಟೀ ಸಮೃದ್ಧವಾಗಿ ಬೆಳೆಯಿತು. ವೈನಾಡ್, ತಿರುವಾಂಕೂರುಗಳಲ್ಲಿ ಟೀ ತೋಟಗಳ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದವು. ಅಸ್ಸಾಮಿನ ಆ ಸಿಂಗ್‍ಪೊ ಬುಡಕಟ್ಟಿನವರಿಗೆ ಟೀ ಗಿಡ ಸಿಕ್ಕಾಗ ಬಹುಶಃ ಇದೊಂದು ಜಗತ್ತಿನ ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳಬಹುದು, ಮನೆ ಮನೆಯಲ್ಲೂ ಸ್ಥಾನ ಪಡೆದುಕೊಳ್ಳಬಹುದು ಊಹೆ ಬಂದಿರಲಿಕ್ಕಿಲ್ಲ ಅನ್ನಿಸುತ್ತೆ.

ಪ್ರಸ್ತುತ ಭಾರತದಲ್ಲೇ 39 ಸಾವಿರಕ್ಕೂ ಹೆಚ್ಚು ಟೀ ಎಸ್ಟೇಟ್‍ಗಳಿವೆ. ಈ ಪೈಕಿ 30 ಸಾವಿರ ತೋಟಗಳು ದಕ್ಷಿಣ ಭಾರತದಲ್ಲೇ ಇವೆ.


ಓದಿ:  60 ದಿನಗಳಿಂದ ರಸ್ತೆಯಲ್ಲಿದ್ದು ವಲಸೆ ಕಾರ್ಮಿಕರ ಮನಕಲಕುವ ಕತೆ ಹೇಳುತ್ತಿರುವ ದಿಟ್ಟ ಪತ್ರಕರ್ತೆ ‘ಬರ್ಖಾ ದತ್’


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...