Homeಮುಖಪುಟಭಾರತಕ್ಕೆ ಚಹಾ ಬಂದಿದ್ದು... : ಅಂತರಾಷ್ಟ್ರೀಯ ಚಹಾ ದಿನಕ್ಕೊಂದು ಬರಹ.

ಭಾರತಕ್ಕೆ ಚಹಾ ಬಂದಿದ್ದು… : ಅಂತರಾಷ್ಟ್ರೀಯ ಚಹಾ ದಿನಕ್ಕೊಂದು ಬರಹ.

ಇವತ್ತು ಅಂತರಾಷ್ಟ್ರೀಯ ಚಹಾ ದಿನ. ಲೇಖಕ "ಎಸ್. ಕುಮಾರ್" ಬರೆದಿರುವ "ಬುಕ್ ಆಫ್ ಟೀ" ಪುಸ್ತಕದಿಂದ ಆಯ್ದ ಬರಹ. ಅಂತರಾಷ್ಟ್ರೀಯ ಚಹಾ ದಿನಕ್ಕಾಗಿ, ಚಹಾ ಹೀರುತ್ತಾ ಓದಿ..

- Advertisement -
- Advertisement -

ಭಾರತ ಚಹಾ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದ್ದರೆ, ಆಫ್ರಿಕಾದ ಕೀನ್ಯಾ, ಶ್ರೀಲಂಕಾ ನಂತರದ ಸ್ಥಾನದಲ್ಲಿವೆ. ಈ ದೇಶಗಳ ಚಹಾ ಅಲ್ಲಿನ ಭೌಗೋಳಿಕ ಕಾರಣಗಳಿಂದಾಗಿಯೇ ವೈವಿಧ್ಯಮಯವಾಗಿವೆ.

ಭಾರತದಲ್ಲಿ ಚಹಾ ಮೊದಲು ಬೆಳೆದಿದ್ದು ಆಸ್ಸಾಮಿನ ಸದಿಯಾ ಕಣಿವೆಯಲ್ಲಿ. ಆದರೆ ಈ ಕಣಿವೆ ಬ್ರಹ್ಮಪುತ್ರ ನದಿಯ ಹರಿವಿನಲ್ಲಿ ಕಣ್ಮರೆಯಾಗಿ ಹೋಯಿತು.

ಇಲ್ಲಿಗೆ ಚಹಾ ಸಸಿಗಳನ್ನು ತಂದಿದ್ದು ಚಾಲ್ರ್ಸ್ ಬ್ರೂಸ್. ಸಿಂಗ್‍ಪೊ ಅನ್ನೋ ಬುಡಕಟ್ಟಿನವರಿಂದ ಟೀ ಗಿಡದ ಬೀಜಗಳನ್ನು ಸಂಗ್ರಹಿಸಿದ ಈತ ಕೋಲ್ಕತಾದಲ್ಲಿದ್ದ ಸಸ್ಯ ಉದ್ಯಾನಕ್ಕೆ ಪರೀಕ್ಷೆಗೆಂದು ಕಳಿಸಿದ. ಹೀಗೆ ಪರೀಕ್ಷೆಗೆ ಕಳಿಸುವ ಮುನ್ನವೇ ಚಾಲ್ರ್ಸ್‍ಗೆ ಇದು ಚೀನಾದಲ್ಲಿ ಬೆಳೆವ ಟೀ ಸಸ್ಯದ ಕುಟುಂಬಕ್ಕೆ ಸೇರಿದ್ದೇ ಇರಬೇಕೆಂಬ ಗುಮಾನಿ ಇತ್ತು.

ಕೊಲ್ಕತಾದ ಸಸ್ಯಶಾಸ್ತ್ರಜ್ಞರು ಆತನ ಗುಮಾನಿ ನಿಜವೆಂದು ಹೇಳಿದರು. ಆದರೆ ಕೆಲವು ಪ್ರಯೋಗಗಳ ನಂತರ ಈ ಬೀಜಗಳನ್ನು ಅಸ್ಸಾಮ್ ಮತ್ತು ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಬಿತ್ತಲಾಯಿತು. ಆದರೆ ಯಶ ಸಿಗಲಿಲ್ಲ. ಆದರೆ ದಾರ್ಜಿಲಿಂಗ್‍ನಲ್ಲಿ ಟೀ ಸಸಿಗಳು ಚಿಗುರಿದವು.

ಡಾರ್ಜಲಿಂಗ್ ನ ಚಹಾ ಎಸ್ಟೇಟ್ ಒಂದರ ವಿಹಂಗಮ ನೋಟ

1834ರಲ್ಲಿ ಲಾರ್ಡ್ ವಿಲಿಯಂ ಬೆಂಟಿಂಕ್ (ಭಾರತದ ಗವರ್ನರ್ ಜನರಲ್ ಆಗಿದ್ದ ಈತ ಸತಿ ಪದ್ಧತಿಯನ್ನು ವಿರೋಧಿಸಿದ್ದ) ಭಾರತದಲ್ಲಿ ಟೀ ಬೆಳೆಯನ್ನು ಹೆಚ್ಚಿಸುವುದಕ್ಕಾಗಿ ಒಂದು ಸಮಿತಿಯನ್ನು ನೇಮಿಸಿದ. ಬ್ರಿಟಿಷ್ ಸರ್ಕಾರ ಕೂಡ ವಿಜ್ಞಾನಿಗಳ ತಂಡವೊಂದನ್ನು ಅಸ್ಸಾಮಿಗೆ ಅಧ್ಯಯನಕ್ಕೆಂದು ಕಳಿಸಿತು.

1837ರ ಹೊತ್ತಿಗೆ ಮೊದಲ ಟೀ ಫಸಲು ಕೈಗೆ ಸಿಕ್ಕಿತು. 8 ದೊಡ್ಡ ಚಹಾ ಎಲೆಗಳು ತುಂಬಿದ ಪೆಟ್ಟಿಗೆಗಳು ಇಂಗ್ಲೆಂಡಿಗೆ ರವಾನೆಯಾದವು. ಇದೇ ವೇಳೆ ಅಂದ್ರೆ 1839ರಲ್ಲಿ ಅಸ್ಸಾಮಿನ ಸಿಬ್‍ಸಾಗರ್ ಮತ್ತು ಲಾಖಿಮ್‍ಪುರದಲ್ಲಿ ಬ್ರಿಟಿಷ್ ಸರ್ಕಾರ ಟೀಯನ್ನು ಉದ್ಯಮವನ್ನಾಗಿ ರೂಪಿಸುವ ಕೆಲವು ಹೆಜ್ಜೆಗಳನ್ನಿರಿಸಿತು.

ಈ ಬಗ್ಗೆ ಕೇಳಿ ತಿಳಿದ ಲಂಡನ್ ಮತ್ತು ಕೋಲ್ಕತಾ ವ್ಯಾಪಾರಿಗಳೂ ಮುಂದೆ ಬಂದರು. ಬ್ರಿಟಿಷರೊಂದಿಗೆ ಸ್ಪರ್ಧೆಗಿಳಿದು ಒಂದು ಕಂಪನಿ ಹುಟ್ಟುಹಾಕುವಲ್ಲಿ ಭಾರತೀಯರೂ ಯಶ ಕಂಡರು. ಮಣಿರಾಮ್ ದೀವಾನ್ ಎಂಬುವರು ಭಾರತದಲ್ಲಿ ಮೊದಲ ಟೀ ಕಂಪನಿ ಆರಂಭಿಸುವಲ್ಲಿ ಯಶಸ್ವಿಯಾದರು. ಇದು ಜಗತ್ತಿನ ಮೊದಲ ಟೀ ಕಂಪನಿ ಎಂದೂ ಹೇಳಲಾಗುತ್ತದೆ. ಇದರಲ್ಲಿ ರವೀಂದ್ರನಾಥ ಠಾಗೂರ ಅಜ್ಜ ದ್ವಾರಕನಾಥ ಠಾಗೂರ ನಿರ್ದೇಶಕರಾಗಿದ್ದರು.

ಅದೇ ವರ್ಷ ಹಲವು ಕಂಪನಿಗಳು ಹುಟ್ಟಿಕೊಂಡವು. ನಂತರದ ದಿನಗಳಲ್ಲಿ ಅವೆಲ್ಲ ಕಂಪನಿಗಳನ್ನು ಅಸ್ಸಾಮ್ ಕಂಪನಿ ಹೆಸರಿನಲ್ಲಿ ಒಂದೇ ಸೂರಿನಡಿ ತರಲಾಯಿತು. 1856ರ ಹೊತ್ತಿಗೆ ದಾರ್ಜಿಲಿಂಗ್‍ನಲ್ಲಿ ಟೀ ತೋಟಗಳು ಹೆಚ್ಚಿದವು. ದಾರ್ಜಿಲಿಂಗ್ ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಕಚಾರ್, ದುವಾರ್ಸ್, ತೆರಾಯ್‍ಗಳಲ್ಲಿ ಟೀ ಉತ್ಪಾದನೆ ಶುರುವಾಯಿತು. ನಿಧಾನವಾಗಿ ದೆಹ್ರಾದೂನ್, ಕಾಂಗ್ರ, ಪಶ್ಚಿಮ ಹಿಮಾಲಯ ಪ್ರದೇಶಗಳ ಮೂಲಕ ದಕ್ಷಿಣಕ್ಕೂ ವ್ಯಾಪಿಸಿತು.

ನೀಲಗಿರಿ ಬೆಟ್ಟದಲ್ಲಿರುವ ಟೀ ಎಸ್ಟೇಟ್

ದಕ್ಷಿಣ ಭಾರತದಲ್ಲಿ ನೀಲಗಿರಿ ಪರ್ವತ ಶ್ರೇಣಿಯಲ್ಲಿ ಟೀ ಸಮೃದ್ಧವಾಗಿ ಬೆಳೆಯಿತು. ವೈನಾಡ್, ತಿರುವಾಂಕೂರುಗಳಲ್ಲಿ ಟೀ ತೋಟಗಳ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದವು. ಅಸ್ಸಾಮಿನ ಆ ಸಿಂಗ್‍ಪೊ ಬುಡಕಟ್ಟಿನವರಿಗೆ ಟೀ ಗಿಡ ಸಿಕ್ಕಾಗ ಬಹುಶಃ ಇದೊಂದು ಜಗತ್ತಿನ ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳಬಹುದು, ಮನೆ ಮನೆಯಲ್ಲೂ ಸ್ಥಾನ ಪಡೆದುಕೊಳ್ಳಬಹುದು ಊಹೆ ಬಂದಿರಲಿಕ್ಕಿಲ್ಲ ಅನ್ನಿಸುತ್ತೆ.

ಪ್ರಸ್ತುತ ಭಾರತದಲ್ಲೇ 39 ಸಾವಿರಕ್ಕೂ ಹೆಚ್ಚು ಟೀ ಎಸ್ಟೇಟ್‍ಗಳಿವೆ. ಈ ಪೈಕಿ 30 ಸಾವಿರ ತೋಟಗಳು ದಕ್ಷಿಣ ಭಾರತದಲ್ಲೇ ಇವೆ.


ಓದಿ:  60 ದಿನಗಳಿಂದ ರಸ್ತೆಯಲ್ಲಿದ್ದು ವಲಸೆ ಕಾರ್ಮಿಕರ ಮನಕಲಕುವ ಕತೆ ಹೇಳುತ್ತಿರುವ ದಿಟ್ಟ ಪತ್ರಕರ್ತೆ ‘ಬರ್ಖಾ ದತ್’


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...