Homeಮುಖಪುಟಭಾರತಕ್ಕೆ ಚಹಾ ಬಂದಿದ್ದು... : ಅಂತರಾಷ್ಟ್ರೀಯ ಚಹಾ ದಿನಕ್ಕೊಂದು ಬರಹ.

ಭಾರತಕ್ಕೆ ಚಹಾ ಬಂದಿದ್ದು… : ಅಂತರಾಷ್ಟ್ರೀಯ ಚಹಾ ದಿನಕ್ಕೊಂದು ಬರಹ.

ಇವತ್ತು ಅಂತರಾಷ್ಟ್ರೀಯ ಚಹಾ ದಿನ. ಲೇಖಕ "ಎಸ್. ಕುಮಾರ್" ಬರೆದಿರುವ "ಬುಕ್ ಆಫ್ ಟೀ" ಪುಸ್ತಕದಿಂದ ಆಯ್ದ ಬರಹ. ಅಂತರಾಷ್ಟ್ರೀಯ ಚಹಾ ದಿನಕ್ಕಾಗಿ, ಚಹಾ ಹೀರುತ್ತಾ ಓದಿ..

- Advertisement -
- Advertisement -

ಭಾರತ ಚಹಾ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದ್ದರೆ, ಆಫ್ರಿಕಾದ ಕೀನ್ಯಾ, ಶ್ರೀಲಂಕಾ ನಂತರದ ಸ್ಥಾನದಲ್ಲಿವೆ. ಈ ದೇಶಗಳ ಚಹಾ ಅಲ್ಲಿನ ಭೌಗೋಳಿಕ ಕಾರಣಗಳಿಂದಾಗಿಯೇ ವೈವಿಧ್ಯಮಯವಾಗಿವೆ.

ಭಾರತದಲ್ಲಿ ಚಹಾ ಮೊದಲು ಬೆಳೆದಿದ್ದು ಆಸ್ಸಾಮಿನ ಸದಿಯಾ ಕಣಿವೆಯಲ್ಲಿ. ಆದರೆ ಈ ಕಣಿವೆ ಬ್ರಹ್ಮಪುತ್ರ ನದಿಯ ಹರಿವಿನಲ್ಲಿ ಕಣ್ಮರೆಯಾಗಿ ಹೋಯಿತು.

ಇಲ್ಲಿಗೆ ಚಹಾ ಸಸಿಗಳನ್ನು ತಂದಿದ್ದು ಚಾಲ್ರ್ಸ್ ಬ್ರೂಸ್. ಸಿಂಗ್‍ಪೊ ಅನ್ನೋ ಬುಡಕಟ್ಟಿನವರಿಂದ ಟೀ ಗಿಡದ ಬೀಜಗಳನ್ನು ಸಂಗ್ರಹಿಸಿದ ಈತ ಕೋಲ್ಕತಾದಲ್ಲಿದ್ದ ಸಸ್ಯ ಉದ್ಯಾನಕ್ಕೆ ಪರೀಕ್ಷೆಗೆಂದು ಕಳಿಸಿದ. ಹೀಗೆ ಪರೀಕ್ಷೆಗೆ ಕಳಿಸುವ ಮುನ್ನವೇ ಚಾಲ್ರ್ಸ್‍ಗೆ ಇದು ಚೀನಾದಲ್ಲಿ ಬೆಳೆವ ಟೀ ಸಸ್ಯದ ಕುಟುಂಬಕ್ಕೆ ಸೇರಿದ್ದೇ ಇರಬೇಕೆಂಬ ಗುಮಾನಿ ಇತ್ತು.

ಕೊಲ್ಕತಾದ ಸಸ್ಯಶಾಸ್ತ್ರಜ್ಞರು ಆತನ ಗುಮಾನಿ ನಿಜವೆಂದು ಹೇಳಿದರು. ಆದರೆ ಕೆಲವು ಪ್ರಯೋಗಗಳ ನಂತರ ಈ ಬೀಜಗಳನ್ನು ಅಸ್ಸಾಮ್ ಮತ್ತು ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಬಿತ್ತಲಾಯಿತು. ಆದರೆ ಯಶ ಸಿಗಲಿಲ್ಲ. ಆದರೆ ದಾರ್ಜಿಲಿಂಗ್‍ನಲ್ಲಿ ಟೀ ಸಸಿಗಳು ಚಿಗುರಿದವು.

ಡಾರ್ಜಲಿಂಗ್ ನ ಚಹಾ ಎಸ್ಟೇಟ್ ಒಂದರ ವಿಹಂಗಮ ನೋಟ

1834ರಲ್ಲಿ ಲಾರ್ಡ್ ವಿಲಿಯಂ ಬೆಂಟಿಂಕ್ (ಭಾರತದ ಗವರ್ನರ್ ಜನರಲ್ ಆಗಿದ್ದ ಈತ ಸತಿ ಪದ್ಧತಿಯನ್ನು ವಿರೋಧಿಸಿದ್ದ) ಭಾರತದಲ್ಲಿ ಟೀ ಬೆಳೆಯನ್ನು ಹೆಚ್ಚಿಸುವುದಕ್ಕಾಗಿ ಒಂದು ಸಮಿತಿಯನ್ನು ನೇಮಿಸಿದ. ಬ್ರಿಟಿಷ್ ಸರ್ಕಾರ ಕೂಡ ವಿಜ್ಞಾನಿಗಳ ತಂಡವೊಂದನ್ನು ಅಸ್ಸಾಮಿಗೆ ಅಧ್ಯಯನಕ್ಕೆಂದು ಕಳಿಸಿತು.

1837ರ ಹೊತ್ತಿಗೆ ಮೊದಲ ಟೀ ಫಸಲು ಕೈಗೆ ಸಿಕ್ಕಿತು. 8 ದೊಡ್ಡ ಚಹಾ ಎಲೆಗಳು ತುಂಬಿದ ಪೆಟ್ಟಿಗೆಗಳು ಇಂಗ್ಲೆಂಡಿಗೆ ರವಾನೆಯಾದವು. ಇದೇ ವೇಳೆ ಅಂದ್ರೆ 1839ರಲ್ಲಿ ಅಸ್ಸಾಮಿನ ಸಿಬ್‍ಸಾಗರ್ ಮತ್ತು ಲಾಖಿಮ್‍ಪುರದಲ್ಲಿ ಬ್ರಿಟಿಷ್ ಸರ್ಕಾರ ಟೀಯನ್ನು ಉದ್ಯಮವನ್ನಾಗಿ ರೂಪಿಸುವ ಕೆಲವು ಹೆಜ್ಜೆಗಳನ್ನಿರಿಸಿತು.

ಈ ಬಗ್ಗೆ ಕೇಳಿ ತಿಳಿದ ಲಂಡನ್ ಮತ್ತು ಕೋಲ್ಕತಾ ವ್ಯಾಪಾರಿಗಳೂ ಮುಂದೆ ಬಂದರು. ಬ್ರಿಟಿಷರೊಂದಿಗೆ ಸ್ಪರ್ಧೆಗಿಳಿದು ಒಂದು ಕಂಪನಿ ಹುಟ್ಟುಹಾಕುವಲ್ಲಿ ಭಾರತೀಯರೂ ಯಶ ಕಂಡರು. ಮಣಿರಾಮ್ ದೀವಾನ್ ಎಂಬುವರು ಭಾರತದಲ್ಲಿ ಮೊದಲ ಟೀ ಕಂಪನಿ ಆರಂಭಿಸುವಲ್ಲಿ ಯಶಸ್ವಿಯಾದರು. ಇದು ಜಗತ್ತಿನ ಮೊದಲ ಟೀ ಕಂಪನಿ ಎಂದೂ ಹೇಳಲಾಗುತ್ತದೆ. ಇದರಲ್ಲಿ ರವೀಂದ್ರನಾಥ ಠಾಗೂರ ಅಜ್ಜ ದ್ವಾರಕನಾಥ ಠಾಗೂರ ನಿರ್ದೇಶಕರಾಗಿದ್ದರು.

ಅದೇ ವರ್ಷ ಹಲವು ಕಂಪನಿಗಳು ಹುಟ್ಟಿಕೊಂಡವು. ನಂತರದ ದಿನಗಳಲ್ಲಿ ಅವೆಲ್ಲ ಕಂಪನಿಗಳನ್ನು ಅಸ್ಸಾಮ್ ಕಂಪನಿ ಹೆಸರಿನಲ್ಲಿ ಒಂದೇ ಸೂರಿನಡಿ ತರಲಾಯಿತು. 1856ರ ಹೊತ್ತಿಗೆ ದಾರ್ಜಿಲಿಂಗ್‍ನಲ್ಲಿ ಟೀ ತೋಟಗಳು ಹೆಚ್ಚಿದವು. ದಾರ್ಜಿಲಿಂಗ್ ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಕಚಾರ್, ದುವಾರ್ಸ್, ತೆರಾಯ್‍ಗಳಲ್ಲಿ ಟೀ ಉತ್ಪಾದನೆ ಶುರುವಾಯಿತು. ನಿಧಾನವಾಗಿ ದೆಹ್ರಾದೂನ್, ಕಾಂಗ್ರ, ಪಶ್ಚಿಮ ಹಿಮಾಲಯ ಪ್ರದೇಶಗಳ ಮೂಲಕ ದಕ್ಷಿಣಕ್ಕೂ ವ್ಯಾಪಿಸಿತು.

ನೀಲಗಿರಿ ಬೆಟ್ಟದಲ್ಲಿರುವ ಟೀ ಎಸ್ಟೇಟ್

ದಕ್ಷಿಣ ಭಾರತದಲ್ಲಿ ನೀಲಗಿರಿ ಪರ್ವತ ಶ್ರೇಣಿಯಲ್ಲಿ ಟೀ ಸಮೃದ್ಧವಾಗಿ ಬೆಳೆಯಿತು. ವೈನಾಡ್, ತಿರುವಾಂಕೂರುಗಳಲ್ಲಿ ಟೀ ತೋಟಗಳ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದವು. ಅಸ್ಸಾಮಿನ ಆ ಸಿಂಗ್‍ಪೊ ಬುಡಕಟ್ಟಿನವರಿಗೆ ಟೀ ಗಿಡ ಸಿಕ್ಕಾಗ ಬಹುಶಃ ಇದೊಂದು ಜಗತ್ತಿನ ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳಬಹುದು, ಮನೆ ಮನೆಯಲ್ಲೂ ಸ್ಥಾನ ಪಡೆದುಕೊಳ್ಳಬಹುದು ಊಹೆ ಬಂದಿರಲಿಕ್ಕಿಲ್ಲ ಅನ್ನಿಸುತ್ತೆ.

ಪ್ರಸ್ತುತ ಭಾರತದಲ್ಲೇ 39 ಸಾವಿರಕ್ಕೂ ಹೆಚ್ಚು ಟೀ ಎಸ್ಟೇಟ್‍ಗಳಿವೆ. ಈ ಪೈಕಿ 30 ಸಾವಿರ ತೋಟಗಳು ದಕ್ಷಿಣ ಭಾರತದಲ್ಲೇ ಇವೆ.


ಓದಿ:  60 ದಿನಗಳಿಂದ ರಸ್ತೆಯಲ್ಲಿದ್ದು ವಲಸೆ ಕಾರ್ಮಿಕರ ಮನಕಲಕುವ ಕತೆ ಹೇಳುತ್ತಿರುವ ದಿಟ್ಟ ಪತ್ರಕರ್ತೆ ‘ಬರ್ಖಾ ದತ್’


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...