Homeಮುಖಪುಟ60 ದಿನಗಳಿಂದ ರಸ್ತೆಯಲ್ಲಿದ್ದು ವಲಸೆ ಕಾರ್ಮಿಕರ ಮನಕಲಕುವ ಕತೆ ಹೇಳುತ್ತಿರುವ ದಿಟ್ಟ ಪತ್ರಕರ್ತೆ 'ಬರ್ಖಾ ದತ್'

60 ದಿನಗಳಿಂದ ರಸ್ತೆಯಲ್ಲಿದ್ದು ವಲಸೆ ಕಾರ್ಮಿಕರ ಮನಕಲಕುವ ಕತೆ ಹೇಳುತ್ತಿರುವ ದಿಟ್ಟ ಪತ್ರಕರ್ತೆ ‘ಬರ್ಖಾ ದತ್’

ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪಡೆದಿರುವ ಪತ್ರಕರ್ತೆ 'ಬರ್ಖಾ ದತ್' ಲಾಕ್ ಡೌನ್ ಆದ ನಂತರ ನಿರಂತರವಾಗಿ 60 ದಿನಗಳಿಗಿಂತಲೂ ಹೆಚ್ಚು ಕಾಲ ರಸ್ತೆಯಲ್ಲಿದ್ದೇ ವಲಸೆ ಕಾರ್ಮಿಕರ ಕತೆಯನ್ನು ದೇಶದ ಮುಂದಿಡುತ್ತಿದ್ದಾರೆ.

- Advertisement -
- Advertisement -

ಕೊರೊನಾ ಭಯಕ್ಕೆ ಲಾಕ್ ಡೌನ್ ಆಗಿ ದೇಶದ ಭಾಗಶಃ ಜನರು ಮನೆಯೊಳಗೆ ಕುಳಿತಿರುವಾಗ ಇವರೊಬ್ಬರು ಮಾತ್ರ “ಹೆದ್ದಾರಿಗಳಲ್ಲಿ ಪಾದಗಳಲ್ಲಿ ರಕ್ತ ಸುರಿಸುತ್ತಾ ಹತಾಶರಾಗಿ ನಡೆಯುತ್ತಿರುವ ಕಾರ್ಮಿಕರ ಕಡೆಗೆ ತಮ್ಮ ಕ್ಯಾಮರಾ ಕಣ್ಣನ್ನು ತಿರುಗಿಸಿ, ವಲಸೆ ಕಾರ್ಮಿಕರ ದಾರುಣ ಕತೆಯನ್ನು ದೇಶದ ಎದುರಿಗೆ ಬಿಚ್ಚಿಡುತ್ತಿದ್ದಾರೆ. ಲಾಕ್ ಡೌನ್ ಆಗಿದಂದಿನಿಂದ 60 ದಿನಗಳಿಗಿಂತ ಹೆಚ್ಚು ಕಾಲ ರಸ್ತೆಯಲ್ಲೇ ಇದ್ದು ಪತ್ರಕರ್ತರಾಗಿ ತಮ್ಮ ಬದ್ದತೆಯನ್ನು ಎತ್ತಿ ಹಿಡಿದಿದ್ದಾರೆ. ಅವರೇ ಪ್ರಸಿದ್ದ ಪತ್ರಕರ್ತೆ “ಬರ್ಖಾ ದತ್.”

18 ಡಿಸೆಂಬರ್ 1971 ರಂದು ಜನಿಸಿದ ಬರ್ಖಾ ದತ್, ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಜನವರಿ 2017 ರವರೆಗೂ ಅವರು 21 ವರ್ಷಗಳ ಕಾಲ ಎನ್ಡಿಟಿವಿ ಯಲ್ಲಿ ಕಾರ್ಯ ನಿರ್ವಹಿಸಿದ್ದರು. 1999 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾರ್ಗಿಲ್ ಯುದ್ದದ ವರದಿಯನ್ನು ಯುದ್ದ ಭೂಮಿಯಲ್ಲಿದ್ದೇ ವರದಿ ಮಾಡಿದ ನಂತರ ಬರ್ಖಾ ದತ್ ಹೆಚ್ಚು ಪ್ರಸಿದ್ದಿ ಗಳಿಸಿದರು. ಇವರು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಸೇರಿದಂತೆ, ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಸದ್ಯ ಬರ್ಖಾ ದತ್ ಅವರು ಮೋಜೊ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲಾಕ್ ಡೌನ್‌ ಪ್ರಾರಂಭದಿಂದಲೂ ವಲಸೆ ಕಾರ್ಮಿಕರೊಂದಿಗೆ ಪ್ರಯಾಣಿಸಿ ಅವರ ಬಗೆಗಿನ ವರದಿಗಳನ್ನು ದೇಶದ ಮುಂದೆ ಇಡುತ್ತಿದ್ದಾರೆ.

ಕಳೆದ ಶನಿವಾರ, ಲಕ್ನೋದಿಂದ 200 ಕಿಲೋಮೀಟರ್ ದೂರದಲ್ಲಿರುವ ಔರಿಯಾದಲ್ಲಿ 26 ವಲಸೆ ಕಾರ್ಮಿಕರು ಮುಂಜಾನೆ 3.30 ರ ಸುಮಾರಿಗೆ ಅಫಘಾತವಾಗಿ ಸಾವನ್ನಪ್ಪಿದ್ದರು. ಘಟನೆಯಲ್ಲಿ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದರೆ ಉತ್ತರ ಪ್ರದೇಶ ಸರ್ಕಾರ ಈ ವಲಸೆ ಕಾರ್ಮಿಕರ ಶವಗಳನ್ನು ತೆರೆದ ಟ್ರಕ್‌ನಲ್ಲಿ ಐಸ್ ಚಪ್ಪಡಿಗಳ ಮೇಲೆ ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿ ವಾರಸುದಾರರ ಮನೆಗೆ ಸಾಗಹಾಕಲು ನೋಡಿತು.

ಈ ವಿಷಯದ ಬಗ್ಗೆ ಬರ್ಖಾ ಅವರ ವರದಿಯ ನಂತರವೇ, ಸಾಮಾಜಿಕ ಜಾಲತಾಣಗಳು ಹಾಗೂ ಇತರ ಪ್ರಮುಖ ಸುದ್ದಿ ತಾಣಗಳು ಅದನ್ನು ವರದಿ ಮಾಡಿದವು. ಘಟನೆಯನ್ನು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕಟುವಾಗಿ ಟೀಕಿಸಿದ್ದರು. ಇವರ ವರದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ನಂತರ ಎಚ್ಚತ್ತ ಆಡಳಿತವನ್ನು ಶವವನ್ನು ಆಂಬುಲೆನ್ಸ್‌ಗಳಿಗೆ ಸ್ಥಳಾಂತರಿಸಿ ಕೊಂಡೊಯ್ಯಿತು.

ಟ್ರಕ್‌ನ ಹಿಂಭಾಗದಲ್ಲಿ ಆಸನಕ್ಕಾಗಿ ಒಬ್ಬ ಪ್ರಯಾಣಿಕರಿಗೆ 3,000 ರೂಪಾಯಿಗಳನ್ನು ವಿಧಿಸುವ ಕಥೆಯೊಂದಿಗೆ ವಲಸೆ ಕಾರ್ಮಿಕರು ಕತೆಯನ್ನು ಅವರು ದೇಶದ ಮುಂದೆ ಅವರು ತೆರೆದಿಟ್ಟಿದ್ದರು.

ಏಷ್ಯಾದಲ್ಲೇ ಅತ್ಯಂತ ದೊಡ್ಡ ಸ್ಲಂ ಆದ ಧಾರವಿಯಲ್ಲಿ, ಎರಡು ಬಾರಿ ಕೊರೊನಾ ನೆಗೆಟಿವ್ ಪರೀಕ್ಷೆಗೆ ಒಳಪಟ್ಟಿದ್ದರೂ ಬಿಎಂಸಿ ನೌಕರನೊಬ್ಬ ಸಾವನ್ನಪ್ಪಿದ್ದರು. ಅವರ ಮರಣದ 3 ದಿನಗಳ ನಂತರ, ಅವರು ಕೊರೊನಾ ಸೋಂಕಿತ ಎಂದು ಕಂಡುಬಂದಿತ್ತು. ಆ ಸಮಯದಲ್ಲಿ ಅವರ ಕುಟುಂಬದ ಇತರ ಇಬ್ಬರಿಗೂ ಸಹ ಕೊರೊನಾ ಸೋಂಕು ಇರುವುದು ದೃಡಪಟ್ಟಿತ್ತು. ಇದರ ಬಗ್ಗೆ ಬರ್ಖಾ ದತ್ ವಿಶೇಷ ತನಿಖಾ ವರದಿಯನ್ನು ಮಾಡಿದ್ದರು.

1947 ರಲ್ಲಿ ವಿಭಜನೆಯಾದ ನಂತರ ಭಾರತ ಕಂಡ ಅತಿದೊಡ್ಡ ಸಾಮೂಹಿಕ ವಲಸೆಯ ಹೃದಯ ಕಲಕುವ ಕಥೆಗಳನ್ನು ಮಾತ್ರ ಇವರು ನೀಡುತ್ತಿಲ್ಲ. ಕೊರೊನಾದಂತಹ ಬಿಕ್ಕಟ್ಟಿನಲ್ಲಿಯೂ ಕೆಲವು ಕೋಮುವಾದ ಹರಡುವ ನಿರೂಪಕರಿಗೆ ವಿರುದ್ದವಾಗಿ ಭರವಸೆ ತುಂಬುವ ಹಾಗೂ ಸೌಹಾರ್ಧದ ಹೃದಯಂಗಮ ಕಥೆಗಳನ್ನು ಸಹ ದೇಶದ ಮುಂದೆ ಇಡುತ್ತಿದ್ದಾರೆ.

ಲಾಕ್ ಡೌನ್ ನಿಂದ ಉಂಟಾದ ಯುದ್ಧದಂತಹ ಪರಿಸ್ಥಿತಿಯಲ್ಲಿ, ಹಸಿವೆಂದರೆ ಏನೆಂದು ಕಂಡ 12 ವರ್ಷದ ಬಾಲಕಿಯ, “ತಾನು ದೊಡ್ಡವಳಾದರೆ ಹಸಿವು ತಣಿಸುತ್ತೇನೆ” ಎನ್ನುವ ಕನಸುಗಳ ಕತೆಯನ್ನು ಬರ್ಖಾ ದೇಶಕ್ಕೆ ಹೇಳುತ್ತಾರೆ.

ತಮ್ಮ 63 ದಿನಗಳ ಪ್ರಯಾಣದುದ್ದಕ್ಕೂ ಭರವಸೆ, ಹತಾಶೆ, ದುಃಖ, ಸಾವು ನೋವಿನ ಈ ರೀತಿಯ ನೂರಾರು ಕಥೆಗಳನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದಾಸೀನತೆಯನ್ನು ದೇಶದ ಮುಂದೆ ತೋರಿಸುತ್ತಾರೆ.

ಕೊರೊನಾದಂತಹ ಸಾಂಕ್ರಮಿಕ ರೋಗದ ಸಮಯದಲ್ಲಿ 60 ದಿನಗಳಿಗಿಂತ ಹೆಚ್ಚು ಕಾಲ ರಸ್ತೆಯಲ್ಲಿ ಇದ್ದು ವರದಿ ಮಾಡುವುದೆಂದರೆ ಅದು ಮನೆಯಲ್ಲಿದ್ದು ಓದಿದಂತೆ, ಕೇಳಿದಂತೆ ಸುಲಭ ಮಾತೇನಲ್ಲ ಎಂದು ಬಹಳಷ್ಟು ಜನರು ಇವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾಗರಿಕ ರಾಷ್ಟ್ರದ ಮುಖವಾಗಿದ್ದ ಬರ್ಖಾ ದತ್, ಕೊರೊನಾ ಕಾಲದ ಯುದ್ಧದಲ್ಲಿ ನಾಗರಿಕರ ಧ್ವನಿಯಾಗಿ ಮತ್ತೊಮ್ಮೆ ನಮ್ಮೆದುರಿಗೆ ನಿಂತದ್ದಾರೆ. ಆದರೆ ಕಿವುಡರಲ್ಲದ ಆದರೆ ಕಿವುಡರಂತೆ ನಟಿಸುತ್ತಿರುವ ಆಡಳಿತಗಾರರು ಇನ್ನೂ ಹಾಗೆಯೆ ಇದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕೃಪೆ:ಸ್ಕೂಪ್ ವೂಪ್


ಓದಿ:  ಕೊರೊನಾ ಬಿಕ್ಕಟ್ಟು: ವಿರೋಧ ಪಕ್ಷವೆಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿತು?


ಓದಿ: ತಾನು ಮಾಡುವ ಮಹಾನ್‌ ತಪ್ಪುಗಳಿಗೆ ಮೋದಿ ಬೆಲೆತೆರದೆ ಉಳಿದುಕೊಳ್ಳುವುದಾದರೂ ಹೇಗೆ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...