Homeಮುಖಪುಟಕಾಣದ ನ್ಯಾಯಕ್ಕೆ ಕಾಯುತ್ತಿರುವ ಕಣ್ಣುಗಳು; 58 ದಿನಗಳು ಮತ್ತು....

ಕಾಣದ ನ್ಯಾಯಕ್ಕೆ ಕಾಯುತ್ತಿರುವ ಕಣ್ಣುಗಳು; 58 ದಿನಗಳು ಮತ್ತು….

- Advertisement -
- Advertisement -

ಸಾಂಕ್ರಾಮಿಕ ರೋಗದಿಂದ ವಿಧಿಸಲಾದ ಲಾಕ್‍ಡೌನ್‍ನಿಂದ ಲಕ್ಷಾಂತರ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ನೂರಾರು ಕಿಲೋಮೀಟರ್‍ಗಳ ಪಯಣ ಪ್ರಾರಂಭಿಸಬೇಕಾಯಿತು. ಈ ಕಾಮಿಕರಿಗೆ ಲಾಕ್‍ಡೌನ್ ಎಂಬುದರ ಅರ್ಥ: ಇದ್ದ ಕೆಲಸ ಹೋಯಿತು ಹಾಗೂ ಜೀವಸಲು ಬೇಕಾದ ಹಣ ಇಲ್ಲ. ಹೇಗೋ ಮಾಡಿ ಕೂಡಿಟ್ಟ ಒಂದಿಷ್ಟು ಹಣ ಮೊದಲ ಕೆಲವು ವಾರಗಳಲ್ಲಿ ಬತ್ತಿತು ಹಾಗೂ ಈಗ ತಮಗೆ, ತಮ್ಮ ಕುಟುಂಬಗಳಿಗೆ ತಿನ್ನಲೂ ಏನೂ ಇಲ್ಲದ ಪರಿಸ್ಥಿತಿ ತಲುಪಿದ್ದಾರೆ. ಸರಕಾರದಿಂದ ಇವರ ಸಂಕಷ್ಟಕ್ಕೆ ಯಾವುದೇ ಪರಿಹಾರದ ಕ್ರಮ ಕೈಗೊಳ್ಳದಿರುವುದು ಗಾಯದ ಮೇಲೆ ಬರೆ ಎಳೆದಂತೆ. ಇವರು ಎಲ್ಲಾ ಆಸೆ ಆಕಾಂಕ್ಷೆಗಳನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಸ್ನೇಹಲ್ ಸಿನ್ಹಾ ಅವರು ಬರೆದಿರುವ ಲೇಖನ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಭಾರತದ ಜನತೆಗೆ ಮತ್ತು ಆರ್ಥಿಕತೆಗೆ ಅನುಕೂಲವಾಗಲಿ ಎಂದು 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್‍ಅನ್ನು ಘೋಷಿಸಿ ಒಂದು ವಾರ ಆಗುತ್ತ ಬಂತು. ಅದರ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐದು ಧಾರವಾಹಿಕ ಕಂತುಗಳಲ್ಲಿ ವಿವರಿಸಿದರು. ಅದರಲ್ಲಿ ಅವರು ಆರ್ಥಿಕತೆಯ ಬೇರೆ ಬೇರೆ ವಲಯಗಳಿಗೆ ಏನೆಂಥ ಉತ್ತೇಜನ/ಸ್ಟಿಮ್ಯಲಸ್ ನೀಡಲಾಗುತ್ತವೆ ಹಾಗೂ ಅದರ ಅನುಕೂಲಗಳನ್ನು ವಿವರಿಸಲು ಪ್ರಯತ್ನಪಟ್ಟರು. ಈ ಧಾರವಾಹಿಯ ಎರಡನೇ ಕಂತಿನಲ್ಲಿ ವಲಸೆ ಕಾರ್ಮಿಕರಿಗೆ ಅನುಕೂಲವಾಗುವ ಕೆಲವು ಕ್ರಮಗಳ ಬಗ್ಗೆಯೂ ಹೇಳಿದರು.

ನಾನು ಸಿಲುಕಿಕೊಂಡಿರುವ ಕಾರ್ಮಿಕರ ಬಗ್ಗೆ ಕೆಲಸ ಮಾಡುತ್ತಿರುವ Stranded Workers Action Network (SWAN)ನೊಂದಿಗೆ ವಾಲಂಟೀರ್ ಆಗಿ ಕೆಲಸ ಮಾಡುತ್ತಿರುವುದರಿಂದ ಈ ವಲಸೆ ಕಾರ್ಮಿಕರೊಂದಿಗೆ ನೇರವಾಗಿ ಸಂಪರ್ಕಕ್ಕೆ ಬಂದಿದ್ದೇನೆ. ಹಾಗೂ ಈ ಕಾರ್ಮಿಕರಿಗೆ ರೇಷನ್, ಹಣ ಮತ್ತಿತರ ಸಹಾಯ ಮಾಡುತ್ತಿರುವ ಅನೇಕ ಜನರೊಂದಿಗೆ ಮಾತನಾಡಿ ಅವರ ಅನುಭವಗಳನ್ನು ಕೇಳಿದ್ದೇನೆ. ಈ ವೇದಿಕೆಯ ಜನರು ಮಾರ್ಚ್ 27 ರಿಂದ ವಲಸೆ ಕಾರ್ಮಿಕರು ಎದುರಿಸುತ್ತಿರುವ ಬಿಕ್ಕಟ್ಟಿನ ಮೇಲೆ ಕೆಲಸ ಮಾಡುತ್ತಿದ್ದಾರೆ. ಇಂದಿನರೆಗೆ 22 ಸಾವಿರಕ್ಕಿಂತಲೂ ಹೆಚ್ಚು ವಲಸೆ ಕಾರ್ಮಿಕರ ನೆರವಿಗೆ ಬಂದಿದ್ದಾರೆ. ವಿದ್ಯಾರ್ಥಿಗಳು, ಶೈಕ್ಷಣಿಕ ವಲಯದಲ್ಲಿ ಕೆಲಸ ಮಾಡುತ್ತಿರುವವರು, ಕಾರ್ಮಿಕ ಮುಖಂಡರು, ಸಂಶೋಧಕರು ಹಾಗೂ ಇತರ ಸಾಮಾಜಿಕ ಕಾರ್ಯಕರ್ತರು ಸೇರಿ ಈ ತಂಡ ರಚಿಸಿದ್ದಾರೆ. ನಾನೂ ಖುದ್ದಾಗಿ ಕೆಲಸ ಮಾಡುತ್ತಿರುವುದರಿಂದ ವಾಸ್ತವದಲ್ಲಿ ಅವರ ಪರಿಸ್ಥಿತಿ ಹೇಗಿದೆ ಎಂಬುದು ನನಗೆ ತಿಳಿದಿದೆ, ಸರಕಾರ ಏನು ಬಿಂಬಿಸಲು ಪ್ರಯತ್ನಿಸುತ್ತಿದೆಯೋ ಅದಕ್ಕೆ ವಿರುದ್ಧವಾಗಿದೆ ವಲಸೆ ಕಾರ್ಮಿಕರ ಪರಿಸ್ಥಿತಿ; ಇಷ್ಟಂತೂ ಸುಲಭವಾಗಿ ಹೇಳಬಲ್ಲೆ.

ಎರಡನೇ ಕಂತಿನಲ್ಲಿ ಮಾತನಾಡುತ್ತ ಹಣಕಾಸು ಸಚಿವರು ಹೇಳಿದ್ದು; ದೇಶಾದ್ಯಂತ ವಲಸೆ ಕಾರ್ಮಿಕರಿಗೆ ಸರಕಾರಿ ಆಶ್ರಯಗಳಲ್ಲಿ ಮೂರು ಹೊತ್ತಿನ ಊಟ ನೀಡಲಾಗುತ್ತಿದೆ. ಈ ಮಾತು ಸತ್ಯಕ್ಕೆ ಅತ್ಯಂತ ದೂರವಾದ ಮಾತು. ನನ್ನ ಅನುಭವದಲ್ಲಿ ಹೇಳಿದರೆ, ಈ ಕಾರ್ಮಿಕರಿಗೆ ತಾವು ಸರಕಾರದಿಂದ ರೇಷನ್ ಅಥವಾ ಹಣ ಪಡೆದಿದ್ದಾರೆಯೋ ಎಂದು ಕೇಳಿದಾಗ ಕೆಲವು ಅಪವಾದಗಳನ್ನು ಬಿಟ್ಟು ಎಲ್ಲರೂ ತಮಗೆ ಯಾವುದೇ ಸಹಾಯ ಸರಕಾರದಿಂದ ಆಗಿಲ್ಲ ಎಂದೇ ಹೇಳಿದರು. ಅವರಲ್ಲಿ ಕೆಲವರಿಗೆ ಕೆಲವೊಮ್ಮೆ ಸರಕಾರೇತರ ಸಂಘ ಸಂಸ್ಥೆಗಳಿಂದ ಆಹಾರ ಮತ್ತು ಆಹಾರಧಾನ್ಯಗಳನ್ನು ಒದಗಿಸಲಾಗಿದೆ. ಇದೇ ವಾಸ್ತವ.

ಪ್ರಧಾನಿಯವರು ಆತ್ಮನಿರ್ಭರ ಭಾರತ ಅಭಿಯಾನವನ್ನು ಘೋಷಿಸಿದಾಗ, ಈಗ ಸರಕಾರ ವಲಸೆ ಕಾರ್ಮಿಕರಿಗೆ ಒಂದಿಷ್ಟು ಸಹಾಯವಾಗುವಂತೆ ಏನಾದರೂ ಮಾಡಬಹುದು ಎನ್ನುವ ಆಶಾಭಾವನೆಯಲ್ಲಿದ್ದೆ, ಆದರೆ ಅದು ಸುಳ್ಳಾಯಿತು. ನೀವು 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಅನ್ನು ಕೂಲಂಕುಷವಾಗಿ ನೋಡಿದರೆ, ಜನರಿಗೆ ತಕ್ಷಣದಲ್ಲಿ ಸಹಾಯವಾಗುವಂತ ಯಾವುದೇ ಕ್ರಮಗಳು ಅಲ್ಲಿ ಕಾಣುವುದಿಲ್ಲ.

ಸಾಂಕ್ರಾಮಿಕ ರೋಗದಿಂದ ವಿಧಿಸಲಾದ ಲಾಕ್‍ಡೌನ್‍ನಿಂದ ಲಕ್ಷಾಂತರ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ನೂರಾರು ಕಿಲೋಮೀಟರ್‍ಗಳ ಪಯಣ ಪ್ರಾರಂಭಿಸಬೇಕಾಯಿತು. ಈ ಕಾಮಿಕರಿಗೆ ಲಾಕ್‍ಡೌನ್ ಎಂಬುದರ ಅರ್ಥ: ಇದ್ದ ಕೆಲಸ ಹೋಯಿತು ಹಾಗೂ ಜೀವಸಲು ಬೇಕಾದ ಹಣ ಇಲ್ಲ. ಹೇಗೋ ಮಾಡಿ ಕೂಡಿಟ್ಟ ಒಂದಿಷ್ಟು ಹಣ ಮೊದಲ ಕೆಲವು ವಾರಗಳಲ್ಲಿ ಬತ್ತಿತು ಹಾಗೂ ಈಗ ತಮಗೆ, ತಮ್ಮ ಕುಟುಂಬಗಳಿಗೆ ತಿನ್ನಲೂ ಏನೂ ಇಲ್ಲದ ಪರಿಸ್ಥಿತಿ ತಲುಪಿದ್ದಾರೆ. ಸರಕಾರದಿಂದ ಇವರ ಸಂಕಷ್ಟಕ್ಕೆ ಯಾವುದೇ ಪರಿಹಾರದ ಕ್ರಮ ಕೈಗೊಳ್ಳದಿರುವುದು ಗಾಯದ ಮೇಲೆ ಬರೆ ಎಳೆದಂತೆ. ಇವರು ಎಲ್ಲಾ ಆಸೆ ಆಕಾಂಕ್ಷೆಗಳನ್ನು ಕಳೆದುಕೊಂಡಿದ್ದಾರೆ. ಆರ್ಥಿಕ ತಜ್ಞರು ಈ ಆರ್ಥಿಕ ಪ್ಯಾಕೇಜ್‍ಅನ್ನು ತಡವಾಗಿ ಬಂದಿದ್ದು ಹಾಗೂ ಈ ಕಾರ್ಮಿಕರಿಗೆ ಸಹಾಯವಾಗುವಂತಹದ್ದು ಹೆಚ್ಚಿನದ್ದೇನೂ ಇಲ್ಲ ಎಂದು ಹೇಳಿದ್ದಾರೆ.

ಎರಡನೇ ಕಂತಿನಲ್ಲಿಯ ಒಂದು ಕ್ರಮದಲ್ಲಿ ವಲಸೆ ಕಾರ್ಮಿಕರಿಗೆ ಮತ್ತು ಅವರ ಕುಟುಂಬಕ್ಕೆ 5ಕೆಜಿ ಅಕ್ಕಿ/ಗೋಧಿ ಹಾಗೂ 1ಕೆಜಿ ಕಡಲೆ ಎರಡು ತಿಂಗಳಿಗಾಗಿ ಉಚಿತವಾಗಿ ನೀಡಲಾಗುವುದು ಎಂದು ಹೇಳಲಾಗಿತ್ತು. ಅಧಿಕೃತ ಸರಕಾರಿ ಅಂಶಗಳ ಪ್ರಕಾರ, ಭಾರತೀಯ ಆಹಾರ ನಿಗಮ (ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ) ಹಾಗೂ ಇತರ ರಾಜ್ಯ ಸರಕಾರಗಳ ನಿಗಮಗಳ ಬಳಿ ಮಾರ್ಚ್ 2020 ರ ಹೊತ್ತಿಗೆ 7.8 ಕೋಟಿ ಟನ್ನಗಳಷ್ಟು ಅಕ್ಕಿ ಹಾಗೂ ಗೋಧಿಯ ದಾಸ್ತಾನು ಇದೆ. ಇದಕ್ಕೆ ಭತ್ತವನ್ನು ಸೇರಿಸಿದರೆ 9.8 ಕೋಟಿ ಟನ್ನುಗಳ ದಾಸ್ತಾನು ಸರಕಾರಿ ನಿಗಮಗಳ ಬಳಿ ಇದ್ದಂತೆ. ಯಾವುದೇ ವರ್ಷದಲ್ಲಿ ಏಪ್ರಿಲ್ ತಿಂಗಳಲ್ಲಿ ಇರಬೇಕಾದ ಹೆಚ್ಚುವರಿ ದಾಸ್ತಾನಾದ (ಬಫರ್ ಸ್ಟಾಕ್) 2.1 ಕೋಟಿ ಟನ್ನುಗಳಿಗಿಂತ ಕೆಲವು ಪಟ್ಟು ಹೆಚ್ಚು. ಒಂದು ವೇಳೆ ಜನಸಂಖ್ಯೆಯ 80% ಜನರಿಗೆ (100ಕೋಟಿ) ಮೇಲೆ ಹೇಳಿದ 5 ಕೆಜಿ ಆಹಾರ ಧಾನ್ಯವನ್ನು ಎರಡಲ್ಲ ಆರು ತಿಂಗಳು ಹಂಚಿದರೂ ಆಗುವುದು ಕೇವಲ 30 ಕೋಟಿ ಟನ್ನುಗಳಷ್ಟು. ಅದು ಈಗ ಲಭ್ಯವಿರುವ ದಾಸ್ತಾನಿನ ಅರ್ಧದಷ್ಟೂ ಅಲ್ಲ. ಹಾಗಾದರೆ ಕೇವಲ ಎರಡು ತಿಂಗಳಿಗೋಸ್ಕರ ಏಕೆ ಈ ಅವಕಾಶ?

ಪಡಿತರ ಚೀಟಿಯನ್ನು ಹೊಂದದೇ ಇರುವವರಿಗೂ ಇದೇ ಪ್ರಮಾಣದಲ್ಲಿ ಆಹಾರಧಾನ್ಯಗಳು ಲಭ್ಯವಾಗುವವು ಎಂದು ಹೇಳಲಾಗಿದೆ; ಆದರೆ ಇದು ಸುಳ್ಳು. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಅಡಿ ಬರುವ ಪಡಿತರ ಚೀಟಿಯನ್ನು ಹೊಂದಿರುವ ಜನರಿಗೆ 5 ಕೆಜಿ ಅಕ್ಕಿ/ಗೋದಿ ಲಭ್ಯವಿದ್ದು, ಅದಕ್ಕೆ ಅವರು ಹಣ ಪಾವತಿಸಬೇಕಾಗುತ್ತದೆ ಹಾಗೂ ಅದರೊಂದಿಗೆ ಉಚಿತವಾಗಿ 5 ಕೆಜಿ ಸಿಗುವುದು, ಹಾಗಾಗಿ ನೋಂದಿತರಾಗದ ಜನರಿಗೆ ಸಿಗುವ ಧಾನ್ಯದ ಎರಡು ಪಟ್ಟು ಧಾನ್ಯ ಪಡಿತರ ಚೀಟಿ ಹೊಂದಿದವರಿಗೆ ಸಿಗುತ್ತಿದೆ. ಆರ್ಥಿಕ ತಜ್ಞರು ಹೇಳುವುದೇನೆಂದರೆ, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟವನ್ನು ಬಗೆಹರಿಸಲು ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳಿಗಾಗಿ ನೀಡಲಾಗುತ್ತಿರುವ 3,500 ಕೋಟಿ ರೂಪಾಯಿಯ ಪ್ಯಾಕೇಜನ್ನು ಸಾರ್ವತ್ರಿಕಗೊಳಿಸಬೇಕು; ಅದನ್ನು ಮಾಡಲು ಸರಕಾರಕ್ಕೆ ಸಾಧ್ಯವಿದೆ.

ಪ್ಯಾಕೇಜಿನ ಈ ಕಂತಿನಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುತ್ತಿರುವ ವಲಸೆ ಕಾರ್ಮಿಕರಿಗಾಗಿ ಕೈಗೆಟುಕುವ ಬಾಡಿಗೆ ವಸತಿ ಸಮುಚ್ಚಯಗಳ Affordable Rental Housing Complexes (ARHC) ಬಗ್ಗೆ ಉಲ್ಲೇಖವಿದೆ. ಇದನ್ನು ಅನುಷ್ಠಾನಗೊಳಿಸಲು ಸಾಕಷ್ಟು ಸಮಯ(ವರ್ಷಗಳು) ಬೇಕಾಗುವುದು ಹಾಗೂ ಈ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಈಗಲೇ ಬೇಕಾಗಿದೆ. ಅದರಲ್ಲಿ ಬೀದಿ ವ್ಯಾಪಾರಿಗಳಿಗೆ 5,000 ಕೋಟಿ ರೂಪಾಯಿಗಳ ಸಾಲದ ಸೌಲಭ್ಯದ ಬಗ್ಗೆಯೂ ಉಲ್ಲೇಖವಿದೆ; ‘ಸರಕಾರವು ಒಂದು ವಿಶೇಷ ಯೋಜನೆಯನ್ನು ಒಂದು ತಿಂಗಳಲ್ಲಿ ಪ್ರಾರಂಭಿಸುವುದು..” ಎಂಬ ಈ ಸರಕಾರಿ ಭಾಷೆಯಲ್ಲಿರುವುದನ್ನು ಹಾಗೂ ಸರಕಾರದ ಹಿಂದಿನ ದಾಖಲೆಗಳನ್ನು ಗಮನಿಸಿದರೆ, ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ನನಗೆ ನಂಬಿಕೆಯಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ, ಕೆಲವು ಚಕಿತಗೊಳಿಸುವ ಅಂಕಿಅಂಶಗಳಿವೆ. ಏಪ್ರಿಲ್ ತಿಂಗಳಲ್ಲಿ 19 ಕೋಟಿ ಕುಟುಂಬಗಳಿಗೆ ವಿತರಿಸಬೇಕಿದ್ದ 1.96 ಲಕ್ಷ ಟನ್ನು ಧಾನ್ಯಗಳಲ್ಲಿ ಕೇವಲ 30,000 ಟನ್(ಏಪ್ರಿಲ್ 28 ರಂದು ಇದ್ದ ಸ್ಥಿತಿ) ವಿತರಿಸಲಾಗಿದೆ; ಇದನ್ನು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಅದರೊಂದಿಗೆ ಕೇವಲ 15% ಬಡಕುಟುಂಬಗಳು 1 ಕೆಜಿ ದ್ವಿದಳ ಧಾನ್ಯಗಳನ್ನು ಪಡೆದಿವೆ.

ಇಲ್ಲಿಯವರೆಗೆ ಸುಮಾರು 600 ವಲಸೆ ಕಾರ್ಮಿಕರು ಹೆದ್ದಾರಿಗಳಲ್ಲಿ ಆದ ಅಪಘಾತಗಳಿಂದ, ಹಸಿವಿನಿಂದ ಅಥವಾ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. ಇದರ ದತ್ತಾಂಶವನ್ನ ಕನಿಕಾ ಶರ್ಮ ಮತ್ತು ಇತರರು ಕಲೆಹಾಕಿದ್ದಾರೆ. ಟಿವಿ ವಾಹಿನಿಯ ಚರ್ಚೆಯೊಂದರಲ್ಲಿ ಓರ್ವರು ಇಷ್ಟು ಸಮಯದಲ್ಲಿ ಈ ಕಾರ್ಮಿಕರಿಂದ ಒಂದು ಬೃಹತ್ ಬಂಡಾಯವೇ ಆಗಬೇಕಿತ್ತು ಎಂದರು. ಆದರೆ ಇದು ಆಗುತ್ತಿಲ್ಲ, ಏಕೆಂದರೆ ಈ ಕಾರ್ಮಿಕರಿಗೆ ಈ ಸರಕಾರದಲ್ಲಿ ಯಾವುದೇ ಭರವಸೆ ಅಥವಾ ಆಸೆ ಉಳಿದಿಲ್ಲ. ಹಾಗಾಗಿ ಬಂಡಾಯವೇಳಲು ಸ್ಪೂರ್ತಿ ಅವರಲ್ಲಿಲ್ಲ. ಈ ಸಂಪೂರ್ಣ ಆರ್ಥಿಕ ಪ್ಯಾಕೇಜ್ ಭಾರತವನ್ನು ದೀರ್ಘಾವಧಿಯಲ್ಲಿ ಸಹಾಯ ಮಾಡಬಹುದು. ಆದರೆ ವಲಸೆ ಕಾರ್ಮಿಕರಿಗೆ ಈ ತಕ್ಷಣ ಸಹಾಯ ಬೇಕಿದೆ. ಕಳೆದೆ 57 ದಿನಗಳಿಂದ ಸಹಾಯದ ಅವಶ್ಯಕತೆಯಲ್ಲಿದ್ದಾರೆ. ಇವರೆಲ್ಲರೂ ಅನುಭವಿಸಿದ ಸಮಸ್ಯೆಗಳ ತೀವ್ರತೆಯನ್ನು ಪದಗಳಲ್ಲಿ ವರ್ಣಿಸಲಾಗದು.

ಸ್ನೇಹಲ್ ಸಿನ್ಹಾ

ಕನ್ನಡಕ್ಕೆ: ರಾಜಶೇಖರ್‌ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...