HomeಮುಖಪುಟMSMEಗಳಿಗೆ ಮೂರುಲಕ್ಷ ಕೋಟಿ, MSMEಗಳನ್ನ ಉಳಿಸುತ್ತಾ?

MSMEಗಳಿಗೆ ಮೂರುಲಕ್ಷ ಕೋಟಿ, MSMEಗಳನ್ನ ಉಳಿಸುತ್ತಾ?

- Advertisement -
- Advertisement -

ಪ್ರಧಾನಿಯವರ ಕೊರೊನಾ ಪ್ಯಾಕೇಜ್ ಆದ ಇಪ್ಪತ್ತು ಲಕ್ಷ ಕೋಟಿಗಳಲ್ಲಿ ಸಣ್ಣ, ಅತಿಸಣ್ಣ ಮತ್ತು ಮದ್ಯಮ ಗಾತ್ರದ ಉದ್ದಿಮೆಗಳಿಗೆ (MSME – micro, small and medium enterprise) ಕೊಟ್ಟಿರುವ ಪ್ಯಾಕೇಜ್ ಈಗ ಬಹುಚರ್ಚಿತ ವಿಷಯವಾಗಿದೆ. ಕೆಲವರು ಈ ಪ್ಯಾಕೇಜ್ ಒಂದು ಗೇಮ್ ಚೇಂಜರ್ ಎಂದು ಹೇಳುತ್ತಿದ್ದರೆ, ಇನ್ನು ಹಲವರು ಈ ಪ್ಯಾಕೇಜ್ ವಾಸ್ತವದಲ್ಲಿ ಉಂಟುಮಾಡುವ ಪರಿಣಾಮ ನಗಣ್ಯ ಎಂದು ಹೇಳುತ್ತಿದ್ದಾರೆ.

ಈ MSMEಪ್ಯಾಕೇಜ್ ಬಗ್ಗೆ ಇಷ್ಟೊಂದು ಚರ್ಚೆ ಯಾಕೆ ನಡೀತಿದೆ? ನಿಜಕ್ಕೂ ಈ MSMEಗಳು ದೇಶದ ಎಕಾನಮಿಯೊಳಗೆ ಅಷ್ಟೊಂದು ಮುಖ್ಯಾನ? ಕೆಲ ಅಂಕಿಅಂಶಗಳನ್ನ ನೋಡಿದ್ರೆ ಇವುಗಳ ಪ್ರಾಮುಖ್ಯತೆ ಎಷ್ಟು ಅಂತ ನಮಗೆ ತಿಳಿಯುತ್ತೆ. ಇಂಡಿಯಾದಲ್ಲಿ ಒಟ್ಟು 6.3 ಕೋಟಿ MSMEಗಳು ಇವೆ. ಅವುಗಳು ಸೃಷ್ಟಿಮಾಡಿರುವ ಒಟ್ಟು ನೇರ ಉದ್ಯೋಗಗಳು ಬರೋಬ್ಬರಿ ಹನ್ನೊಂದು ಕೋಟಿಗಳಷ್ಟು. ಈ ದೇಶದ ಒಟ್ಟು ಜಿಡಿಪಿಯಲ್ಲಿ 30% ರಷ್ಟು ಅಂದ್ರೆ 60 ಲಕ್ಷ ಕೋಟಿಗಳಿಗಿಂತ ಹೆಚ್ಚು ಈ MSMEಗಳಿಂದನೇ ಬರುತ್ತೆ. ಈ ದೇಶದ ಒಟ್ಟು ತಯಾರಿಕೆಯಲ್ಲಿ (manufacturing) 45% ರಷ್ಟು MSMEಗಳೇ ಮಾಡುತ್ವೆ. ಹಾಗೂ ದೇಶದಿಂದ ಆಗುವ ಒಟ್ಟು ರಫ್ತಿನಲ್ಲಿ 50% ನಷ್ಟು MSMEಗಳಿಂದಲೇ ಆಗುತ್ತೆ.

ಈ ಮೇಲಿನ ಅಂಕಿಅಂಶಗಳು MSMEಗಳು ಈ ದೇಶದ ಎಕಾನಮಿಯ ಆರೋಗ್ಯಕ್ಕೆ ಎಷ್ಟು ಮುಖ್ಯ ಅಂತ ಯಾರಿಗೇ ಆದ್ರೂ ಸುಲಭವಾಗಿ ಗೊತ್ತಾಗುತ್ತೆ. ಅದರಲ್ಲೂ ಈ ದೇಶದ ವರ್ಕ್ ಫೋರ್ಸಿನ ಶೇಖಡಾ ಇಪ್ಪತ್ತರಷ್ಟು ಮಂದಿ MSMEಗಳಲ್ಲೇ ಕೆಲಸ ಮಾಡ್ತಿದಾರೆ ಅಂದರೆ ಉದ್ಯೋಗ ಸೃಷ್ಟಿಯಲ್ಲಿ ಇವುಗಳ ಮಹತ್ವ ಎಂಥದು ಅಂತ ಅರಿವಾಗುತ್ತೆ. ಆದರೆ, ಬಹುತೇಕ MSMEಗಳ ಅತಿಮುಖ್ಯವಾದ ಪ್ರಾಬ್ಲಮ್ ಏನು ಅಂದ್ರೆ ಶೇಕಡಾ ತೊಂಬತ್ತರಷ್ಟು MSMEಗಳು ಅತ್ಯಂತ ಕಡಿಮೆ ಹೆಚ್ಚುವರಿ ನಗದಿನ ಲಭ್ಯತೆಯಲ್ಲಿಯೇ ಉದ್ಯಮ ನಿರ್ವಹಣೆ ಮಾಡಬೇಕಾದ ಸ್ಥಿತಿಯಲ್ಲಿವೆ. ಹಾಗಾಗಿ, ಇವುಗಳಿಗೆ ನಗದಿನ ಹರಿವು ಸ್ವಲ್ಪ ಕಡಿಮೆಯಾದರೂ workkng capital ಇಲ್ಲದಂತಾಗಿ ಈ MSMEಗಳು ಸಂಕಷ್ಟಕ್ಕೆ ಸಿಲುಕುತ್ತವೆ.

ನಮಗೆ ತಿಳಿದಿರುವಂತೆ ದೇಶದ ಕಡೆಯ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿಯ ಬೆಳವಣಿಗೆ ಶೇ.5 ಮತ್ತು ಶೇ.4.5 ಕ್ಕಿಳಿದಿತ್ತು. ಅದಕ್ಕೆ ಮುಖ್ಯ ಕಾರಣ ಮಾರುಕಟ್ಟೆಯಲ್ಲುಂಟಾದ ಬೇಡಿಕೆಯ ಕೊರತೆ. ಅಂದರೆ ಜನಗಳ ಕೈಯಲ್ಲಿ ಹಣವಿಲ್ಲದ ಕಾರಣ ಅವರ ಕೊಳ್ಳುವ ಶಕ್ತಿ ಕಡಿಮೆಯಾಗಿದ್ದು. ಇದರ ಹೊಡೆತ ಅತಿ ಬೇಗನೆ ಬಿದ್ದಿದ್ದೇ ಈ MSMEಗಳಿಗೆ ಮತ್ತು ಅದರಿಂದಾಗಿಯೇ ಅನೇಕವು ಮುಚ್ಚುವ ಸ್ಥಿತಿಗೆ ಬಂದಿದ್ದವು. ಆದರೆ, ಈಗ ಕೊರೋನಾ ಲಾಕ್‍ಡೌನಿಂದಾಗಿ ಕೋಟ್ಯಂತರ ಜನ ಕೆಲಸ ಕಳೆದುಕೊಂಡಿದ್ದು ಅವರ ಕೊಳ್ಳುವ ಶಕ್ತಿ ಶೂನ್ಯವಾಗಿದೆ. ಇದರಿಂದಾಗಿ ಅತಿ ಹೆಚ್ಚು ಮತ್ತು ಅತಿ ಶೀಘ್ರವಾಗಿ ಹೊಡೆತ ತಿನ್ನುತ್ತಿರುವುದು MSMEಗಳೇ. ತಾತ್ಕಾಲಿಕವಾಗಿಯಾದರೂ ಅತಿ ಹೆಚ್ಚು ಉದ್ಯೋಗ ನಷ್ಟವಾಗಿರುವುದೂ ಕೂಡ MSMEಗಳಲ್ಲಿಯೇ.

ಈ ಎಲ್ಲ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಈ MSMEಗಳ ಪುನಶ್ಚೇತನಕ್ಕೆಂದೇ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜು ಒಟ್ಟಾರೆಯಾಗಿ MSMEಗಳಿಗೆ ಸುಲಭವಾಗಿ ಸಾಲಕೊಡುವ ಯೋಜನೆಯಾಗಿದ್ದು ಇದರಲ್ಲಿ ನಾಲ್ಕೈದು ಅಂಶಗಳಿದ್ದರೂ ಅವುಗಳಲ್ಲಿ ಅತಿದೊಡ್ಡ ಪ್ಯಾಕೇಜಿನ ಪರಿಣಾಮದ ಬಗ್ಗೆ ಇಲ್ಲಿ ಚರ್ಚಿಸೋಣ. ಅದು ನೂರು ಕೋಟಿಯ ತನಕ ಟರ್ನೋವರ್ ಇರುವ MSMEಗಳಿಗೆ ಮೂರುಲಕ್ಷ ಕೋಟಿಗಳಷ್ಟು ಸಾಲವನ್ನು ಪ್ರಕಟಿಸಿರುವ ಪ್ಯಾಕೇಜ್. ಈ ಸಾಲ ತೆಗೆದುಕೊಂಡರೆ ಒಂದು ವರ್ಷದವರೆಗೆ moratorium ಅಂದರೆ ಅಸಲು ಮತ್ತು ಬಡ್ಡಿಯನ್ನು ಕಟ್ಟುವಂತಿಲ್ಲ. ನಾಲ್ಕು ವರ್ಷಗಳ ಅವಧಿ ಇರುತ್ತದೆ.

ಇಲ್ಲಿ ಮುಖ್ಯ ಅಂಶವೆಂದರೆ ಈ ಸಾಲಕ್ಕೆ ಮತ್ತು ಇದರ ಮೇಲಿನ ಬಡ್ಡಿ ಗೆ ಸರ್ಕಾರವೇ ಸಂಪೂರ್ಣ ಗ್ಯಾರಂಟಿ ಕೊಡುತ್ತದೆ. ಇದರಿಂದಾಗಿ ಬ್ಯಾಂಕುಗಳು ಸುಲಭವಾಗಿ ಸಾಲ ಕೊಡುತ್ತವೆ ಮತ್ತು ಈ ಕ್ರಮದಿಂದಾಗಿ ಸುಮಾರು 45 ಲಕ್ಷ MSMEಗಳಿಗೆ ಈ ರೀತಿಯ ಅಡಮಾನ ಕೇಳದ ಸಾಲ ಸಿಗಲಿದೆ. ಅದೇ ರೀತಿ ಈಗಾಗಲೇ ಸಾಲದ ಸುಳಿಯಲ್ಲಿರುವ MSMEಗಳಿಗೆ 20000 ಕೋಟಿ ರೂಗಳ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದ್ದು ಅದಕ್ಕೆ ಸರ್ಕಾರ 4000 ಕೋಟಿ ರೂಗಳಷ್ಟು ಗ್ಯಾರಂಟಿ ನೀಡಲಿದೆ. ಇದರಿಂದ ಒಟ್ಟು ಎರಡು ಲಕ್ಷ MSMEಗಳಿಗೆ ಸಹಾಯವಾಗಲಿದೆ.

ಇದರ ಉದ್ದೇಶ: ಇದು ಅಡಮಾನರಹಿತ ಸಾಲವಾಗಿರುವುದರಿಂದ MSMEಗಳು ಈ ಸಾಲವನ್ನು ತೆಗೆದುಕೊಳ್ಳುತ್ತವೆ. ಈ ಹಣವನ್ನು ಬೇಕಾದ ಕಚ್ಚಾವಸ್ತು ಖರೀದಿಗೆ, ಉತ್ಪಾದನಾ ಸಾಮಥ್ರ್ಯ ಹೆಚ್ಚಿಸುವಿಕೆಗೆ ಮತ್ತು ಸಿಬ್ಬಂದಿಗಳಿಗೆ ಮೂರ್ನಾಲ್ಕು ತಿಂಗಳ ವೇತನ ಕೊಡಲು ಬಳಸುತ್ತವೆ. ಇದರಿಂದ ಈ MSMEಗಳು ತಡೆರಹಿತ ಉತ್ಪಾದನೆ ಮಾಡುವಂತಾಗಿ ಇಡೀ ಈ ವಲಯವು ಮತ್ತಷ್ಟು ಉದ್ಯೋಗವನ್ನೂ ಸೃಷ್ಟಿಸಿ ದೇಶದ ಎಕಾನಮಿ ಮತ್ತೆ ಪುಟಿದೇಳಲು ಸಹಾಯವಾಗುತ್ತದೆ ಎಂಬುದು.

ಆದರೆ ಇಲ್ಲಿ ಸರ್ಕಾರ ಅರ್ಥ ಮಾಡಿಕೊಳ್ಳದಂತೆ ನಟಿಸುತ್ತಿರುವ ಬಹುಮುಖ್ಯ ಅಂಶವೊಂದಿದೆ. ಕೊರೋನಾಕ್ಕೂ ಮೊದಲು ಈ ದೇಶದ ಆರ್ಥಿಕತೆ ತಗ್ಗಿದ್ದು ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದ್ದರಿಂದ. ಅದು MSMEಗಳ ಮೇಲೂ ಭಾರೀ ನಕಾರಾತ್ಮಕ ಪರಿಣಾಮ ಬೀರಿತ್ತು. ಈಗ ಕೊರೊನಾ ಅಟ್ಯಾಕ್ ನಂತರವಂತೂ ಜನರ ಕೊಳ್ಳುವ ಶಕ್ತಿ ಪಾತಾಳಕ್ಕಿಳಿದಿದೆ. ಇಂಥಾ ಸನ್ನಿವೇಶದಲ್ಲಿ MSMEಗಳು ಸಾಲ ತೆಗೆದುಕೊಂಡು ಉತ್ಪಾದನೆ ಮಾಡಿದರೂ ಕೂಡ ಆ ಉತ್ಪನ್ನಗಳನ್ನು ಕೊಳ್ಳುವವರಿಲ್ಲದೆ ಆ ಸಾಲವೆಲ್ಲ ಮತ್ತಷ್ಟು NPA ಆಗುವುದಲ್ಲದೆ ಈ MSMEಗಳು ಮತ್ತೆ ಏಳಲಾರದಂತೆ ಮುಗಿದುಹೋಗುವ ಸಾಧ್ಯತೆಗಳಿವೆ.

ಇದರಿಂದಾಗಿಯೇ ಈ MSMEಗಳ ಹಲವು ಪ್ರಮುಖ ಉದ್ದಿಮೆದಾರರು ನಮಗೆ ಈ ಸಾಲಕ್ಕಿಂತ ಸಿಬ್ಬಂದಿಗಳ ಕನಿಷ್ಟ ಮೂರು ತಿಂಗಳ ವೇತನಕ್ಕೆ ಮತ್ತು ಕಚ್ಚಾ ವಸ್ತು ಖರೀದಿಗೆ ಸರ್ಕಾರ ಫ್ರೀಯಾಗಿ ಹಣಕೊಟ್ಟಿದ್ದರೆ ಅದು ನಿಜಕ್ಕೂ ಅತ್ಯುತ್ತಮ ಕ್ರಮವಾಗುತ್ತಿತ್ತು ಎಂದಿದ್ದಾರೆ. ಆಗ ಅದು ಒಂದೇ ಸಲ ಉತ್ಪಾದನೆ ಮತ್ತು ಬೇಡಿಕೆ ಎರಡನ್ನೂ ಹೆಚ್ಚಿಸುತ್ತಿತ್ತು ಎಂಬ ಕಾರಣಕ್ಕೆ. ಒಟ್ಟಿನಲ್ಲಿ ಸರ್ಕಾರ MSMEಗಳಿಗೆ ಅಡಮಾನ ರಹಿತ ಸಾಲ ಕೊಡಲು ವ್ಯವಸ್ಥೆ ಮಾಡುವುದು MSMEಗಳಿಗೆ ಒಳ್ಳೆಯ ಉತ್ತೇಜನಾ ಕ್ರಮವೇ ಆದರೂ ಕೂಡ ಆ ಕ್ರಮ ಫಲಪ್ರದವಾಗಬೇಕಾದರೆ ಸರ್ಕಾರ ಜನರ ಕೈಗೆ ನೇರ ಮತ್ತು ಪರೋಕ್ಷ ಕ್ರಮಗಳ ಮೂಲಕ ನಗದು ಸಿಗುವಂತೆ ಮಾಡಬೇಕಿದೆ.
ಈಗಾಗಲೇ ತುಂಬಾ ವಿಳಂಬವಾಗಿದ್ದರೂ, ಈಗಲಾದರೂ ಜನರಿಗೆ ನಗದು ಸಿಗುವಂತ ಕ್ರಮಗಳನ್ನ ತೆಗೆದುಕೊಂಡರೆ ಮಾತ್ರ MSMEಗಳಿಗೆ ಅಡಮಾನ ರಹಿತ ಸಾಲ ಕೊಡುವ ಈ ಕ್ರಮ ನಿರಿಕ್ಷಿತ ಫಲ ಕೊಡುವ ಸಾಧ್ಯತೆಯಿದೆ ಅಷ್ಟೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

24 ವರ್ಷಗಳ ಮೋದಿ ವರ್ಚಸ್ಸನ್ನು 2 ವಾರಗಳಲ್ಲಿ ಧೂಳೀಪಟ ಮಾಡಿದ ಸಿಜೆಪಿ: CJP ಆಂದೋಲನಕ್ಕೆ ಅರುಂಧತಿ ರಾಯ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ವರ್ಚಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನಾ ಆಂದೋಲನವು ಕೇವಲ ಎರಡು ವಾರಗಳಲ್ಲಿ ಬುಡಸಮೇತ ಅಲ್ಲಾಡಿಸಿದೆ. ಇದು ಯಾವುದೇ...

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್ ಗೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆಯಿಂದ ಬಹಿರಂಗ ಪತ್ರ

ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ...

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...