Homeಮುಖಪುಟಶಿಕ್ಷಕ; ಅರಿವು ಮತ್ತು ಆಚರಣೆ - ಡಾ. ಸಿ.ಬಿ. ಐನಳ್ಳಿ

ಶಿಕ್ಷಕ; ಅರಿವು ಮತ್ತು ಆಚರಣೆ – ಡಾ. ಸಿ.ಬಿ. ಐನಳ್ಳಿ

ಶಿಕ್ಷಕರನ್ನ ದೈವತ್ವಕ್ಕೇರಿಸುವ ಸಂದೇಶಗಳಿಗೂ ಮತ್ತು ಶಿಕ್ಷಕರ ಉಪನ್ಯಾಸವನ್ನು ಬಹಳಷ್ಟು ವಿದ್ಯಾರ್ಥಿಗಳು ಎಳ್ಳಷ್ಟೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿರುವುದಕ್ಕೂ ಸಂಬಂಧವಿದೆ

- Advertisement -
- Advertisement -

ಶಿಕ್ಷಕರ ದಿನಾಚರಣೆಯ ದಿನ ಹರಿದಾಡುವ ವಾಟ್ಸಪ್ ಸಂದೇಶಗಳು ಮತ್ತು ಪ್ರೊಫೈಲ್ ಫೋಟೋಗಳು ಶಿಕ್ಷಕರನ್ನ ದೈವತ್ವಕ್ಕೇರಿಸಿ ಏಕಮುಖಿಯಾಗಿ ವೈಭವೀಕರಿಸುತ್ತಿರುತ್ತವೆ. ಗೌರವಿಸುವುದು ಅಪೇಕ್ಷಣೀಯ. ಆದರೆ ಇಂಥ ವೈಭವೀಕೃತ ಸಂದೇಶಗಳಿಗೂ ಮತ್ತು ನಮ್ಮ ತರಗತಿಗಳಲ್ಲಿ ಶಿಕ್ಷಕರ ಉಪನ್ಯಾಸವನ್ನು ಬಹಳಷ್ಟು ವಿದ್ಯಾರ್ಥಿಗಳು ಎಳ್ಳಷ್ಟೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿರುವುದಕ್ಕೂ ಸಂಬಂಧವಿದೆ ಎನಿಸುತ್ತದೆ. ಜ್ಞಾನವೆಂದರೆ ಅಕ್ಷರದ ತಿಳುವಳಿಕೆಯ ಮೂಲಕ ಗಳಿಸುವ ಮಾಹಿತಿ ಮತ್ತು ಶಿಕ್ಷಕರೆಂದರೆ ಅಕ್ಷರದ ತಿಳುವಳಿಕೆ ನೀಡಿ ಸಿದ್ಧಜ್ಞಾನವನ್ನು ನಮಗೆ ಪೂರೈಸುವವರು ಎಂಬ ದೃಷ್ಟಿಕೋನದಿಂದ ಉಂಟಾಗಿರುವ ಪರಿಣಾಮವಿದು.     ಅನಾರೋಗ್ಯಕರ ಸ್ಪರ್ಧೆಯಿಂದ ನರಳುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಈ ಕಾಲಘಟ್ಟದಲ್ಲಂತೂ, ಸುಲಭೋಪಾಯಗಳ ಮೂಲಕ ಅತಿ ಹೆಚ್ಚು ಅಂಕಗಳಿಸುವ ಕಲೆಯನ್ನ ಕಲಿಸುವವರು ಶ್ರೇಷ್ಠ ಶಿಕ್ಷಕರು ಎಂಬಂತಾಗಿದೆ; ಪರಿಣಾಮವಾಗಿ ಶಿಕ್ಷಕರಿಗೆ ಇರಬೇಕಿದ್ದ ಅರಿವಿನ ಪ್ರಚೋದಕ ಮತ್ತು ಅರಿವಿನ ಉತ್ಪಾದಕರ ಪಾತ್ರ ಅಲಕ್ಷ್ಯಕ್ಕೊಳಗಾದಂತಿದೆ.

ಮಾನವಿಕಗಳಂತಹ ಜ್ಞಾನಶಿಸ್ತುಗಳಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಅರಿವಿನ ಕೊಡು-ಕೊಳ್ಳುವಿಕೆಯಲ್ಲಿ ಕೆಲವೊಮ್ಮೆ ವಿದ್ಯಾರ್ಥಿಗಿರುವ ನೈಜ ಬದುಕಿನ ತಿಳುವಳಿಕೆ ಶಿಕ್ಷಕರ ಅಕಾಡೆಮಿಕ್ ಜ್ಞಾನವನ್ನು ಗೊಂದಲಕ್ಕೀಡುಮಾಡಿರುವುದು ಕೂಡಾ ಸೂಕ್ಷ್ಮ  ಸಂವೇದನೆಯುಳ್ಳ ಶಿಕ್ಷಕರ ಅನುಭವಕ್ಕೆ ಬಂದಿರುತ್ತದೆ. ಆದರೆ ನಿಗದಿಪಡಿಸಿದ ಪಠ್ಯದಲ್ಲಿರುವ ಸಂಗತಿಯೇ ಆತ್ಯಂತಿಕ ಸತ್ಯವೆಂಬ ಹುಸಿನಂಬಿಕೆಯಲ್ಲಿರುವವರಿಗೆ ಇದು ಗಮನಿಸಬೇಕಾದ ಸಂಗತಿಯೆನಿಸುವುದಿಲ್ಲ. ಬಹಳಷ್ಟು ಸಲ, ನಮ್ಮ ಸಾಂಪ್ರದಾಯಿಕ ಬೋಧನೆ-ಕಲಿಕೆಯ ಸಂದರ್ಭಗಳಲ್ಲಿ ಶಿಕ್ಷಕ-ವಿದ್ಯಾರ್ಥಿ ಸಂಬಂಧವನ್ನ ಒಂದು ಅಧಿಕಾರದ  ಶ್ರೇಣಿಕೃತ  ಸಂಬಂಧದಂತೆ ಗ್ರಹಿಸಿರುವುದು ವಿದ್ಯಾರ್ಥಿಗಳ ಅರಿವಿನ ಸ್ವಚ್ಛಂದ ಮತ್ತು ಸ್ವತಂತ್ರ  ಅರಳುವಿಕೆಯನ್ನು ಸ್ವಲ್ಪಮಟ್ಟಿಗೆ ತಡೆದಂತೆ  ಕಾಣುತ್ತದೆ.

ಇಂತಹ ಗ್ರಹಿಕೆಗೆ ಕಾರಣವಾಗಿರುವ ನಮ್ಮ ಒಟ್ಟಾರೆ ಶಿಕ್ಷಣದ ಕ್ರಮವನ್ನು ನಿಕಷಕ್ಕೊಡ್ಡಬೇಕಿದೆ.  ಕಂಠಪಾಠ, ನೆನಪಿನ ಶಕ್ತಿ, ಸಾಮಾಜಿಕವಾಗಿ ವಿನಯಶೀಲ ನಡೆ-ನುಡಿ, ಸಮಾಜದ ಮುಖ್ಯಧಾರೆಯ ಮೌಲ್ಯವ್ಯವಸ್ಥೆ – ಇವುಗಳನ್ನು ಮಕ್ಕಳಲ್ಲಿ ರೂಢಿಸುವುದಕ್ಕೆ ಮಾತ್ರ  ಶಿಕ್ಷಣದ ವ್ಯವಸ್ಥೆ ಸೀಮಿತವಾದಂತಿದೆ.  ಪದವಿ ಹಂತದ ಸಮಾಜವಿಜ್ಞಾನಗಳು ಮತ್ತು ಮಾನವಿಕಗಳ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಚಿಂತನಶೀಲರನ್ನಾಗಿ ಮಾಡುವ ಪಾಠಗಳ ಪ್ರಮಾಣ ಎಷ್ಟಿದೆ? ಚಿಂತನಶೀಲತೆಯನ್ನು ಹುಟ್ಟಿಸದ ಶಿಕ್ಷಣ ಸ್ಥಾಪಿತವ್ಯವಸ್ಥೆ ಮತ್ತು ಯಥಾಸ್ಥಿತಿಯನ್ನು  ರಕ್ಷಿಸುತ್ತದೆ. ಆದ್ದರಿಂದ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆ ಯಾರ ದೃಷ್ಟಿಕೋನದಿಂದ ರೂಪಿಸಲ್ಪಟ್ಟಿದೆ ಎಂಬುದನ್ನು ಪುನರ್ ವಿಮರ್ಶಿಸಿಕೊಳ್ಳಬೇಕಿದೆ.

ಯಾವ ಸೈದ್ಧಾಂತಿಕತೆಯೂ ವೈಚಾರಿಕತೆಯೂ ಮತ್ತು ಜ್ಞಾನ ವ್ಯವಸ್ಥೆಯೂ ಆತ್ಯಂತಿಕವಲ್ಲ.   ಮನುಷ್ಯನ ನಾಗರಿಕತೆಯ ವಿಕಸನ ಪರಿಪೂರ್ಣವಾಗಿಲ್ಲ ; ಅದೊಂದು ಪ್ರಕ್ರಿಯೆಯಾದ್ದರಿಂದ  ಪರಿಪೂರ್ಣತೆ ಎಂಬುದು ಇರುವುದೂ ಇಲ್ಲ. ಸದ್ಯ, ನಾಗರೀಕತೆಯ ವಿಕಸನದ ಯಾವುದೋ ಒಂದು ಬಿಂದುವಿನಲ್ಲಿರುವ ನಾವು, ಸ್ಥಾಪಿತ ಸಂಪ್ರದಾಯಗಳು ಸಾಮಾಜಿಕ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನ ನಿರಂತರ ನಿಕಷಕ್ಕೊಡ್ಡುತ್ತಾ ವಿಕಸನದ ಪರಿಪೂರ್ಣತೆ ಎಂಬ ಮುಗಿಯದ ಹಾದಿಯಲ್ಲಿ ನಾಲ್ಕು ಹೊಸ ಹೆಜ್ಜೆ ಮುಂದಿಡಬೇಕಿದೆ. ಈ ಹಾದಿಯಲ್ಲಿ  ಮುನ್ನಡೆಸಲು, ಸಮಾಜದ ನಾನಾ ಸಮಸ್ಯೆಗಳಿಗೆ ತಾತ್ವಿಕ ಕಾರಣಗಳನ್ನು ತಿಳಿದು, ಅವುಗಳಿಗೆ  ಮದ್ದು ಅರೆಯುವಂತಹ ಚಿಂತನಶೀಲತೆಯನ್ನು ಹುಟ್ಟಿಸುವ ಶಿಕ್ಷಣಕ್ರಮ ಇಂದಿನ ಅಗತ್ಯ.  ಜಿಡ್ಡು ಕೃಷ್ಣಮೂರ್ತಿ ಮುಕ್ತವಾಗಿ ಮತ್ತು ನಿರ್ಭಯವಾಗಿ ಆಲೋಚಿಸುವಂತೆ ಕಲಿಸುವುದೇ ಶಿಕ್ಷಣದ ಬಹುಮುಖ್ಯವಾದ ಕಾರ್ಯ ಎನ್ನುತ್ತಾರೆ. ಈ  ದಿಸೆಯಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಿದ್ದಾರೆಯೇ? ಇದಕ್ಕೆ  ಅನುವು ಮಾಡಿಕೊಡುವಂತಹ ಶೈಕ್ಷಣಿಕ ನೀತಿ ರೂಪಿಸುವ ರಾಜಕೀಯ ವ್ಯವಸ್ಥೆ ನಮ್ಮಲ್ಲಿದೆಯೇ? ಇಂಥ ಮುಕ್ತ ಮತ್ತು ನಿರ್ಭಯ ಆಲೋಚನಾಕ್ರಮವನ್ನು ಪ್ರೋತ್ಸಾಹಿಸುವ ಕೆಲವೇ ಕೆಲವು ಉನ್ನತ ಶಿಕ್ಷಣದ ಸಂಸ್ಥೆಗಳು ಇಂದು ಕೇಡಿನ ಕೇಂದ್ರಗಳಂತೆ ಕೀಳೀಕರಿಸಲ್ಪಟ್ಟಿರುವುದು ಈ ಬಗ್ಗೆ ನಮ್ಮನ್ನು ನಿರಾಶರನ್ನಾಗಿಸುತ್ತದೆ.

ಜ್ಞಾನವೆಂಬುದು ಕೂಡ ಒಂದು ನಿರ್ಮಿತಿ. ಹಾಗಾಗಿ ಶಿಕ್ಷಣವೆಂದರೆ ಲೋಕವನ್ನು ಮತ್ತು ಅದು ಜ್ಞಾನವೆಂದು ಮುಂದಿಡುವ ಸಂಗತಿಯನ್ನು ವ್ಯಾಖ್ಯಾನಿಸುವ ವಿಶ್ಲೇಷಿಸುವ ತಾತ್ವಿಕರಿಸುವ ಸಾಮರ್ಥ್ಯವನ್ನು ಕೊಡುವುದು; ಆ ಮೂಲಕ ಲೋಕದ ಬಗೆಗಿನ ಜ್ಞಾನವನ್ನು ತಾವೇ ಕಟ್ಟಿಕೊಳ್ಳುವಂತೆ ಮಾಡುವುದು. ಬಸವಣ್ಣ, ಅಂಬೇಡ್ಕರ್, ಗಾಂಧಿ ತಮ್ಮ ಲೋಕಜ್ಞಾನವನ್ನು  ಸೃಜಿಸಿಕೊಂಡದ್ದು ಹೀಗೆಯೇ ಅಲ್ಲವೇ? ಬದುಕಿನ ಬಗೆಗಿನ ಸಹಜ ಕುತೂಹಲ, ಗುಮಾನಿ,  ಪ್ರಶ್ನಿಸುವಿಕೆ ಮತ್ತು ಪರ್ಯಾಯ ಆಲೋಚನಾ ಕ್ರಮಗಳು ಸಂಶೋಧನಾ ಹಂತದಲ್ಲಿ ಮಾತ್ರ  ಹುಟ್ಟಬೇಕಾದ ಮತ್ತು ಚರ್ಚಿಸಬೇಕಾದ ಸಂಗತಿಗಳೆಂದುಕೊಳ್ಳದೆ, ಇದಕ್ಕೆ ಪೂರಕವಾದ ಪಠ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಿದೆ.  ಯಾಕೆಂದರೆ, ಇಂದು ಮಾಹಿತಿ ಮತ್ತು ಜ್ಞಾನದ ನಡುವಿನ ವ್ಯತ್ಯಾಸವನ್ನು ಕೂಡ ಗುರುತಿಸದಂತಹ ಸ್ಥಿತಿಯಲ್ಲಿ ಯುವಜನಾಂಗವಿದೆ.

‘ಅರಿವಿಂಗೆ ಬಂಧವುಂಟಲ್ಲದೆ ಅರುಹಿಸಿಕೊಂಬವಂಗುಂಟೆ ಬಂಧ? ಅರಿದಿಹೆನೆಂಬ ಭ್ರಮೆ, ಅರುಹಿಸಿಕೊಂಡಿಹೆನೆಂಬ ಕುರುಹು, ಉಭಯನಾಸ್ತಿಯಾಗಿಯಲ್ಲದೆ ಭಾವಶುದ್ಧವಿಲ್ಲ’. ವಚನಕಾರ ಮಾದಾರ ದೂಳಯ್ಯನ ಈ  ಮಾತುಗಳಲ್ಲಿರುವ ಎಚ್ಚರ ನಮಗಿಂದು ಅಗತ್ಯವೆನಿಸುತ್ತದೆ. ನೀಡಿದ ಜ್ಞಾನದ ಬಗ್ಗೆ ಶಿಕ್ಷಕ ಮತ್ತು  ಗಳಿಸಿದ ಜ್ಞಾನದ ಬಗ್ಗೆ ವಿದ್ಯಾರ್ಥಿ ಇಬ್ಬರೂ ಅದು ಆತ್ಯಂತಿಕವೆಂದು ಭಾವಿಸದೆ, ಜ್ಞಾನವೆಂಬುದು ಒಂದು ಮುಕ್ತ ಅಂತ್ಯವುಳ್ಳ ಅರಿವಿನ ಪ್ರವಾಹವೆಂಬುದನ್ನು ಅರಿತು, ನಿರಂತರವಾಗಿ ಕ್ರಿಯಾಶೀಲರಾಗಿದ್ದಾಗ ಹೊಸ ಸಂಶೋಧಕರು, ಚಿಂತಕರು, ತತ್ವಜ್ಞಾನಿಗಳು, ವಿಜ್ಞಾನಿಗಳು  ಹುಟ್ಟಬಲ್ಲರು.

  • ಡಾ. ಸಿ.ಬಿ. ಐನಳ್ಳಿ
ಡಾ. ಸಿ. ಬಿ. ಐನಳ್ಳಿ

(ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.)


ಇದನ್ನೂ ಓದಿ: ವೈಚಾರಿಕತೆಯನ್ನು ಕಡೆಗಣಿಸಿ ಅಬ್ಬರಿಸುವ ಜನಪ್ರಿಯ ನಟರ ಸಿನಿಮಾದಾಚೆಗಿನ ವಿಚಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...