Homeಕರ್ನಾಟಕಚರಕದ ಮುಂದೆ ಕೂತ ತೇಜಸ್ವಿ ಸೂರ್ಯ: ಮಿತಿಮೀರಿದ ಬೂಟಾಟಿಕೆ ಎಂದ ಜನತೆ

ಚರಕದ ಮುಂದೆ ಕೂತ ತೇಜಸ್ವಿ ಸೂರ್ಯ: ಮಿತಿಮೀರಿದ ಬೂಟಾಟಿಕೆ ಎಂದ ಜನತೆ

- Advertisement -
- Advertisement -

“ಮಹಾತ್ಮ ಗಾಂಧೀಜಿಯವರು ಭಾರತದ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಇಂದು, ಗುಜರಾತ್‌ನ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರೊಂದಿಗೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಾಗಿತ್ತು. ಗಾಂಧೀಜಿಯವರ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನನಗೆ ಅವಕಾಶ ಸಿಕ್ಕಿತು” ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮಾಡಿರುವ ಪೋಸ್ಟ್‌ ಚರ್ಚೆಗೆ ಗ್ರಾಸವಾಗಿದೆ.

ಚರಕದ ಮುಂದೆ ಕೂತು ನೂಲು ಸುತ್ತುತ್ತಿರುವಂತೆ ತೇಜಸ್ವಿ ಸೂರ್ಯ ಅವರು ಫೋಟೋ ತೆಗೆಸಿಕೊಂಡಿದ್ದು, ಗಾಂಧೀಜಿಯವರನ್ನು ಬಣ್ಣಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನು “ಮಿತಿಮೀರಿದ ಬೂಟಾಟಿಕೆ (ಹಿಪೊಕ್ರಸಿ)” ಎಂದು ಜನರು ಟೀಕಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಒಂದು ಕಡೆ ಬಿಜೆಪಿ ನಾಯಕರು ಹಿಂದುತ್ವವನ್ನು ಹೇಳುತ್ತಾ, ಗಾಂಧಿ ಹಂತಕ ಗೋಡ್ಸೆ ಪರ ನಿಲುವು ವ್ಯಕ್ತಪಡಿಸುತ್ತಾರೆ. ಮತ್ತೊಂದೆಡೆ ಗಾಂಧೀಜಿಯನ್ನು ಶ್ಲಾಘಿಸುತ್ತಾರೆ. ಎರಡೂ ರೀತಿಯ ನಿಲುವುಗಳನ್ನು ಬಿಜೆಪಿ ತಾಳುವುದು ಏತಕ್ಕೆ ಎಂಬ ಚರ್ಚೆಗಳು ಮೊದಲಿನಿಂದಲೂ ನಡೆಯುತ್ತಿವೆ.

ಇದನ್ನೂ ಓದಿರಿ: ಕೇಸರಿ ವಸ್ತ್ರ ಪವಿತ್ರವಾದದ್ದು; ಅದನ್ನು ಧರಿಸಿ ಮಾಡಬಾರದ್ದನ್ನು ಮಾಡಬೇಡಿ: ಎಚ್‌ಡಿಕೆ

ಗಾಂಧೀಜಿಯರನ್ನು ಬಿಜೆಪಿಯ ಬೆಂಬಲಿಗರು ಬಹಳ ಕೆಟ್ಟದ್ದಾಗಿ ನಿಂದಿಸುವುದು, ಗೋಡ್ಸೆಯನ್ನು ಹೊಗಳುವುದು ಎಗ್ಗಿಲ್ಲದೆ ನಡೆಯುತ್ತಿದೆ. ಇದರ ವಿರುದ್ಧ ಬಿಜೆಪಿಯ ಹಲವು ನಾಯಕರು ಮಾತನಾಡುವುದಿಲ್ಲ ಎಂಬುದು ತೇಜಸ್ವಿ ಸೂರ್ಯ ಅವರ ಪೋಸ್ಟ್‌ಗೆ ಬಂದಿರುವ ಕಮೆಂಟ್‌ಗಳಲ್ಲಿ ವ್ಯಕ್ತವಾಗುತ್ತದೆ.

ಗಾಂಧೀಜಿಯವರು ಅಹಿಂಸಾ ಮಾರ್ಗದ ಬಹುದೊಡ್ಡ ಸಂಕೇತ. ಸರ್ವಧರ್ಮ ಸಹಿಷ್ಠುತೆಯ ಪ್ರತೀಕ. ಒಂದು ಕೋಮಿನ ವಿರುದ್ಧ ನಿರಂತರ ದ್ವೇಷ ಹರಡುತ್ತಿರುವ ಮತೀಯ ಶಕ್ತಿಗಳು ಹೆಚ್ಚಾಗುತ್ತಿದ್ದು ಸರ್ಕಾರ ಮೌನವಾಗಿದೆ. ಬಿಜೆಪಿ ನಾಯಕರು ಮೌನ ಸಮ್ಮತಿ ನೀಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ತೇಜಸ್ವಿ ಸೂರ್ಯ ಅವರು ಈ ಹಿಂದೆ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ಸಾಕಷ್ಟು ನೀಡಿದ್ದು ಚರ್ಚೆಯಾಗಿದೆ. ಆದರೆ ಹಿಂದೂ ಮುಸ್ಲಿಂ ಏಕತೆಯನ್ನು ಸಾರಿದ ಗಾಂಧೀಜಿಯವರನ್ನು ತೇಜಸ್ವಿ ಸೂರ್ಯ ಬಣ್ಣಿಸಿರುವುದು ಟೀಕೆಗೆ ಒಳಗಾಗಿದೆ.

ತೇಜಸ್ವಿ ಸೂರ್ಯರ ಪೋಸ್ಟ್‌ಗೆ ಬಂದ ಕೆಲವು ಕಮೆಂಟ್‌ಗಳು

“ಕೇಜ್ರಿವಾಲ್ ಅವರ ವೃದ್ಧ ತಂದೆ-ತಾಯಿ, ಹೆಂಡತಿ ಮತ್ತು ಮಕ್ಕಳು ವಾಸಿಸುವ ಮನೆಯ ಮೇಲೆ ದಾಳಿ ಮಾಡಿದ ಹಿಂಸಾಚಾರದ ಗುಂಪಿನ ನಾಯಕ ನೀವು. ನಾಚಿಕೆ ಆಗುತ್ತಿದೆ ತೇಜಸ್ವಿ ಎಂದು ರಾಜೀವ್ ಕುಮಾರ್‌ ಎಂಬವರು ಕಮೆಂಟ್ ಮಾಡಿದ್ದಾರೆ.

‘ಖಾತಾಬುಕ್‌’ ಸಂಸ್ಥಾಪಕ ರವೀಶ್‌ನರೇಶ್‌ ಇತ್ತೀಚೆಗೆ ಟ್ವೀಟ್ ಮಾಡಿ, ಬೆಂಗಳೂರಿನಲ್ಲಿ ಮೂಲಸೌಕರ್ಯಗಳ ಕೊರತೆ ಬಗ್ಗೆ ಹಂಚಿಕೊಂಡಿದ್ದರು. ಅದನ್ನು ಉಲ್ಲೇಖಿಸಿ ಕಮೆಂಟ್ ಮಾಡಿರುವ ವಿವೇಕಾನಂದ ರೆಡ್ಡಿ, “ನಕಲಿ ಭಾಷಣ ಮತ್ತು ಪ್ರಚಾರಕ್ಕಾಗಿ ಭಾರತದಾದ್ಯಂತ ಅಲೆದಾಡಬೇಡಿ. ನಮ್ಮ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳು ಬಹಳಷ್ಟಿವೆ. ಬೆಂಗಳೂರು ದಕ್ಷಿಣದಲ್ಲಿ ಪ್ರಮುಖ ಐಟಿ ಕಂಪನಿಗಳು ಮತ್ತು ಟೆಕ್ ಪಾರ್ಕ್‌ಗಳು ಬರುತ್ತವೆ. ಮೊದಲು ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಿ. ಸಮಸ್ಯೆಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳಿ. ಮೂಲಸೌಕರ್ಯಗಳನ್ನು ಸುಧಾರಿಸಲು, ಸ್ಟಾರ್ಟ್‌ಅಪ್‌ಗಳು ಮತ್ತು ಕಂಪನಿಗಳನ್ನು ಬೆಂಗಳೂರಿಗೆ ತರಲು ಸೌಕರ್ಯ ಒದಗಿಸಿ…” ಎಂದು ಕೋರಿದ್ದಾರೆ.

“ಅತ್ಯಂತ ಕೆಟ್ಟ ರಾಜಕಾರಣಿ. ಭಾರತದ ಇತಿಹಾಸದಲ್ಲೇ ಕೆಟ್ಟ ರಾಜಕಾರಣಿ. ಮಹಾತ್ಮರ ಸ್ಥಾನದಲ್ಲಿ ಕುಳಿತುಕೊಳ್ಳಬೇಡಿ. ನೀವು ಅದಕ್ಕೆ ಅರ್ಹರಲ್ಲ” ಎಂದು ಕಿರಣ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

“ಗೋಡ್ಸೆ ಕೋಪಗೊಳ್ಳುತ್ತಾನೆ ಗಾಂಧಿಯನ್ನು ಹೆಚ್ಚು ಹೊಗಳಬೇಡಿ” ಎಂದು ತನ್‌ಹಕ್‌ ಎಂಬವರು ತಿಳಿಸಿದ್ದಾರೆ.

“ಗೋಡ್ಸೆ ಮುರ್ದಾಬಾದ್ ಎಂದು ಒಮ್ಮೆಯಾದರೂ ಹೇಳಿ” ರಾಜು ಟಾಕೂರ್‌ ಒತ್ತಾಯಿಸಿದ್ದಾರೆ.

“ಗಾಂಧಿ ತತ್ವ ಸಿದ್ಧಾಂತವನ್ನು ವಿರೋಧ ಮಾಡಿ ಅವರ ಸಾವನ್ನು ಸಂಭ್ರಮಿಸುವ ಯಾವ ವ್ಯಕ್ತಿಯಾದರೂ ಅಲ್ಲಿಗೆ ಹೋಗಬಾರದು” ಎಂದು ಡಿ.ಎಸ್.ಗೌರೀಶ್‌ ತಿಳಿಸಿದ್ದಾರೆ.

“ತಮ್ಮ ಹೇಳಿಕೆಗಳ ಬಗ್ಗೆ ಪ್ರಾಯಶ್ಚಿತ ಮಾಡಿಕೊಳ್ಳಲು ತೇಜಸ್ವಿ ಸೂರ್ಯ ಅವರು ಸಬರಮತಿ ಆಶ್ರಮಕ್ಕೆ ಹೋಗಿದ್ದಾರೆ ಅನ್ನಿಸುತ್ತದೆ. ಲೋಕಸಭೆ ಸದಸ್ಯರಾಗಿ ಮನಪರಿವರ್ತನೆ ಮಾಡಿಕೊಳ್ಳುವುದು ಒಳ್ಳೆಯ ಬೆಳವಣಿಗೆ” ಎಂದು ಡಿ.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದರೆ.

“ಭಾರತದ ಪ್ರಪ್ರಥಮ ಭಯೋತ್ಪಾದಕ ಗೋಡ್ಸೆಯನ್ನು ಏನೆನ್ನುವಿರಿ” ಎಂದು ಮಾರುತಿ ಸೂರಕುಂಟೆ ಪ್ರಶ್ನಿಸಿದ್ದಾರೆ.

“ಹೈ ಲೆವೆಲ್‌ ಆಫ್ ಹಿಪೊಕ್ರಸಿ” ಎಂದು ಅನಿಲ್‌ಕುಮಾರ್‌ ಚಿಕ್ಕದಾಳವಟ್ಟ ಟೀಕಿಸಿದ್ದಾರೆ.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಬೆಂಬಲಿಸುವ ಹಲವಾರು ಪ್ರೊಪೈಲ್‌ಗಳು ತೇಜಸ್ವಿ ಸೂರ್ಯರನ್ನು ಹಾಗೂ ಗಾಂಧೀಜಿಯನ್ನು ನಿಂದಿಸಿ ಕಮೆಂಟ್ ಮಾಡಿವೆ. ಪೋಸ್ಟ್‌ಅನ್ನು ವಿರೋಧಿಸುವ ನೆಪದಲ್ಲಿ ರಾಷ್ಟ್ರಪಿತ ಗಾಂಧೀಜಿಯವರನ್ನು ಹೀಯಾಳಿಸಿರುವುದನ್ನು, ಅಸಂವಿಧಾನಿಕ ಪದಗಳನ್ನು ಬಳಸಿರುವುದನ್ನು ಇಲ್ಲಿನ ಕಮೆಂಟ್‌ಗಳಲ್ಲಿ ಕಾಣಬಹುದು.

ಬಿಜೆಪಿ ಫಾಲೋಯರ್ಸ್‌‌ಗಳ ಕಮೆಂಟ್‌ಗಳನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿರುವ ಚಿದಾನಂದ ಎಂ.ಪಡುವರಹಳ್ಳಿ, “ನೀವು ನೋಡುದ್ರೆ ಗಾಂಧೀಜಿ ಆಶ್ರಮಕ್ಕೆ ಭೇಟಿ ಕೊಟ್ಟಿದ್ದೀರಿ. ಜೊತೆಗೆ ಗುಜರಾತ್‌ನಲ್ಲಿ ಗಾಂಧೀಜಿಯ ಜೀವನದ ಪಾಠವನ್ನು ಕಲಿಯೋಕೆ ಹೋಗಿದ್ದೀರಿ. ಗಾಂಧೀಜಿ ಆಶ್ರಮಕ್ಕೆ ಹೋಗಿರುವ ಉದ್ದೇಶ, ಗಾಂಧೀಜಿ ಅವರ ಮೇಲಿನ ಪ್ರೀತಿಯೋ ಅಥವಾ ದ್ವೇಷವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಏಕೆಂದರೆ ನಿಮ್ಮ ಈ ಪೋಸ್ಟ್‌ನಲ್ಲಿ ಹಾಕಿರುವ ಕಾಮೆಂಟ್ ಗಳನ್ನು ಒಮ್ಮೆ ನೋಡಿ. ಗಾಂಧೀಜಿ ಅವರ ಬಗ್ಗೆ ಎಷ್ಟು ಅಸಹ್ಯ ಪದಬಳಕೆ ಮಾಡಿದ್ದಾರೆ! ಹಾಗಾಗಿ ನನಗೆ ಅನುಮಾನ ಇದೆ ಬಗೆಹರಿಸಿ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಗಾಂಧೀಜಿ ಅವರ ಬಗ್ಗೆ ಹಗುರವಾಗಿ ಕಮೆಂಟ್ ಮಾಡ್ತಿರೋರಲ್ಲಿ ನೂರಕ್ಕೆ ತೊಂಬತ್ತು ಭಾಗ ನಿಮ್ಮವರೆ ಅನ್ನೋದು ಅಷ್ಟೆ ಸತ್ಯ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿರಿ: ಮಸೀದಿಯಿಂದ ಬಲವಂತವಾಗಿ ಧ್ವನಿವರ್ಧಕ ತೆಗೆಯುವುದಿಲ್ಲ: ಸಿಎಂ ಬೊಮ್ಮಾಯಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ತೇಜಸ್ವಿಯವರೆ. ನಿಮ್ಮ ಯೋಚನಾಲಹರಿಗಳೇ ಬೇರೆ. ಮಹಾತ್ಮಾ ಗಾಂಧೀಜಿಯವರ ತೃಣಕ್ಕೂ ನೀವು ಸಮಾನರಲ್ಲಾ. ಅದು ಹೇಗೆ ನಿಮ್ಮನ್ನ ಅಲ್ಲಿ ಕೂಡಲು ಬಿಟ್ಟರು..?

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...