ವೈದ್ಯಕೀಯ ಕಾಲೇಜು ಪ್ರವೇಶದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೇ 7.5ರಷ್ಟು ಸೀಟುಗಳನ್ನು ಮೀಸಲಿಡುವ ತಮಿಳುನಾಡು ಸರ್ಕಾರದ ಕಾನೂನನ್ನು ಮದ್ರಾಸ್ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದೆ.
ಮೀಸಲಾತಿ ನೀಡುವ ಸರ್ಕಾರ ಕಾನೂನಿನ ಮಾನ್ಯತೆ ಪ್ರಶ್ನಿಸಿ ಹಲವಾರು ಜನ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮುನೀಶ್ವರನಾಥ್ ಭಂಡಾರಿ ಮತ್ತು ಡಿ.ಭರತ ಚಕ್ರವರ್ತಿಯವರಿದ್ದ ಪೀಠವು ಈ ಕಾನೂನು ಮಾನ್ಯವಾಗಿದ್ದು, ಮೀಸಲಾತಿ ನೀಡುವ ಅಧಿಕಾರ ಸರಕಾರಕ್ಕಿದೆ ಎಂದು ಹೇಳಿದೆ.
ಅರ್ಜಿದಾರರು ಈಗಾಗಲೇ ತಮಿಳುನಾಡಿನಲ್ಲಿ ಶೇ. 69 ರಷ್ಟು ಮೀಸಲಾತಿ ಇದ್ದು ಜನರಲ್ ಕ್ಯಾಟಗರಿ ವಿದ್ಯಾರ್ತಿಗಳಿಗೆ ಕೇವಲ ಶೇ.31 ಮಾತ್ರ ಇದೆ. ಈಗ ಶೇ. 7.5 ಮೀಸಲಾತಿ ನೀಡಿದರೆ ಮತ್ತಷ್ಟು ತೊಂದರೆಯಾಗುತ್ತದೆ ಎಂದು ವಾದಿಸಿದ್ದರು.
ಕಾನೂನನ್ನು ಸಮರ್ಥಿಸಿಕೊಂಡಿದ್ದ ತಮಿಳುನಾಡು ಸರ್ಕಾರ, “ಇದು ಬಡವ-ಶ್ರೀಮಂತ ಹಾಗೂ ನಗರ-ಗ್ರಾಮೀಣ ವಿದ್ಯಾರ್ಥಿಗಳ ನಡುವಿನ ಅಂತರವನ್ನು ತಗ್ಗಿಸಲು ಈ ಮೀಸಲಾತಿಯು ಅಗತ್ಯವಾಗಿದೆ” ಎಂದಿತ್ತು. ಪ್ರಬಲ ಜಾತಿಗಳಿಗೆ ಸಾಮಾಜಿಕ ಬಂಡವಾಳವಿದೆ ಹಾಗಾಗಿ ತಳವರ್ಗದ ಜನರನ್ನು ಮೇಲೆತ್ತುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಈ ರೀತಿಯ ಕಾನೂನುಗಳಿಗೆ ಸುಪ್ರೀಂ ಕೋರ್ಟ್ನ ಬೆಂಬಲವಿದೆ” ಎಂದು ವಾದಿಸಿತು.
ಸರ್ಕಾರದ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯಗಳನ್ನು ಅರ್ಜಿಗಳನ್ನು ವಜಾ ಮಾಡಿದೆ. ಅಲ್ಲದೆ ಐದು ವರ್ಷಗಳ ನಂತರ ಈ ಮೀಸಲಾತಿಯನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ತೀರ್ಪನ್ನು ಐತಿಹಾಸಿಕ ಎಂದು ಬಣ್ಣಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, “ಸಾಮಾಜಿಕ ನ್ಯಾಯದ ಪಯಣದಲ್ಲಿ ನಮ್ಮ ಪ್ರತಿ ಹೆಜ್ಜೆಯೂ ಗಟ್ಟಿಯಾಗಿದೆ ಎಂಬುದನ್ನು ಹೈಕೋರ್ಟ್ ತೀರ್ಪು ತೋರಿಸುತ್ತದೆ. ಕಳೆದ 10 ತಿಂಗಳ ಡಿಎಂಕೆ ಆಡಳಿತದ ಸರ್ಕಾರಕ್ಕೆ ಇದು ಮೂರನೇ ಗೆಲುವು. ಸರಿಯಾದ ಅಂಕಿಅಂಶಗಳು ಮತ್ತು ಚರ್ಚೆಗಳ ಆಧಾರದ ಮೇಲೆ ಈ ಕಾನೂನನ್ನು ತರಲಾಗಿದೆ” ಎಂದಿದ್ದಾರೆ.
மருத்துவக் கல்வியைத் தொடர்ந்து, நாம் ஆட்சிக்கு வந்ததும், தொழிற்கல்விப் படிப்புகளில் அரசுப்பள்ளி மாணவர்களுக்கு #Reservation அளித்தோம்! கல்வி, விடுதிக் கட்டணங்களை ஏற்றோம்!
உயர்நீதிமன்றத் தீர்ப்பு #SocialJustice பயணத்தில் நம்முடைய ஒவ்வொரு அடியும் திடமானது எனக் காட்டியுள்ளது! pic.twitter.com/gGPLfnumrN
— M.K.Stalin (@mkstalin) April 7, 2022
ಕಾನೂನನ್ನು ಎಐಎಡಿಎಂಕೆ ಸರ್ಕಾರ ತಂದಿದ್ದರೂ, ವನ್ನಿಯಾರ್ ಮೀಸಲಾತಿ ಪ್ರಕರಣದಲ್ಲಿ ನಾವು ಪ್ರಬಲವಾಗಿ ವಾದಿಸಿದ್ದೇವೆ. ಆದರೆ, ತರಾತುರಿಯಲ್ಲಿ ಎಐಎಡಿಎಂಕೆ ಮಾಡಿದ ತಪ್ಪಿನಿಂದ ತೀರ್ಪು ಸಂಪೂರ್ಣವಾಗಿ ನಮ್ಮ ಪರವಾಗಿ ಬರಲಿಲ್ಲ. ಈಗ ಅದನ್ನು ಸಾಧಿಸಿದ್ದೇವೆ ಎಂದಿದ್ದಾರೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಎಐಎಡಿಎಂಕೆ ಸರ್ಕಾರ ಘೋಷಿಸಿತ್ತು. ಆದರೆ ಕೆಲವು ದೋಷಗಳು ಎದುರಾದ್ದರಿಂದ ಜಾರಿಯಾಗಿರಲಿಲ್ಲ. ಪ್ರಸ್ತುತ ಡಿಎಂಕೆ ಸರ್ಕಾರವು ಕಾನೂನು ಆಗಿ ಜಾರಿಗೆ ತಂದಿದೆ.
ಡಿಎಂಕೆ ಸರ್ಕಾರವು ಇದೇ ರೀತಿಯಾಗಿ ಇಂಜಿನಿಯರಿಂಗ್/ಕೃಷಿ/ಮೀನುಗಾರಿಕೆ/ಪಶುವೈದ್ಯಕೀಯ ಕೋರ್ಸ್ಗಳಲ್ಲಿ ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಪ್ರಮುಖ ಸ್ವ-ಹಣಕಾಸು ಕಾಲೇಜುಗಳಲ್ಲಿ 7.5 ಪ್ರತಿಶತ ಮೀಸಲಾತಿಯನ್ನು ಒದಗಿಸಲು ಕಾನೂನನ್ನು ಅಂಗೀಕರಿಸಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
Correct decision by court.
Except BJP all the parties policies are pro poor.
ನಮ್ಮ ರಾಜ್ಯದಲ್ಲಿಯೂ ಇಂತಹ ಕಾನೂನು ಜಾರಿಯಾಗಬೇಕು.