Homeಕರ್ನಾಟಕಪಠ್ಯ ತಿರುಚೀಕರಣ ವಿವಾದ: ‘ಅಂದು’ ಮತ್ತು ‘ಇಂದು’ ಏನಾಗಿದೆ ಎಂದು ನೋಡೋಣ ಬನ್ನಿ!

ಪಠ್ಯ ತಿರುಚೀಕರಣ ವಿವಾದ: ‘ಅಂದು’ ಮತ್ತು ‘ಇಂದು’ ಏನಾಗಿದೆ ಎಂದು ನೋಡೋಣ ಬನ್ನಿ!

- Advertisement -
- Advertisement -

ಸಂಘ ಪರಿವಾರದ ಬರಹಗಾರ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕಗಳ ಪರಿಶೀಲನೆ ನಡೆದ ಬಳಿಕ ಹಲವಾರು ವಿಷಯಗಳು ಮುನ್ನಲೆಗೆ ಬಂದಿವೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪಠ್ಯದಲ್ಲಿ ಹಲವು ಬದಲಾವಣೆಗಳನ್ನು ತಂದು ಮಕ್ಕಳಿಗೆ ಬೋಧಿಸಲು ಸರ್ಕಾರ ಹೊರಟಿದೆ.

ಜೊತೆಗೆ ಬರಗೂರು ಅವರ ಅಧ್ಯಕ್ಷತೆಯಲ್ಲಿ ಹಲವು ತಪ್ಪುಗಳಾಗಿವೆ ಎಂದು ಕೆಲವು ಸಂಘಟನೆಗಳು ಹೊರಟಿದ್ದು, ರೋಹಿತ್‌ ಚಕ್ರತೀರ್ಥ ಅವರ ವಜಾಕ್ಕೆ ಕೇಳಿ ಬರುತ್ತಿರುವ ಕೂಗನ್ನು ದಮನ ಮಾಡಲು ಯತ್ನಿಸುತ್ತಿವೆ. ಹೀಗಾಗಿ ಪಠ್ಯ ಪುಸ್ತಕ ಪರಿಶೀಲನೆಯಲ್ಲಿ ‘ಅಂದು’ ಮತ್ತು ‘ಇಂದು’ ಏನೇನು ಬದಲಾವಣೆಯಾಗಿದೆ ಎಂದು ಗಮನ ಹರಿಸುವ ಅಗತ್ಯವಿದೆ. ಅಂದಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಹಾಗೂ ಇಂದಿನ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ನಡುವಿನ ವ್ಯತ್ಯಾಸಗಳನ್ನು ಇಲ್ಲಿ ಗುರುತಿಸುವ ಪ್ರಯತ್ನ ಮಾಡಲಾಗಿದೆ.

(ಸೂಚನೆ: ಈ ಪಟ್ಟಿಯೂ ಅಪೂರ್ಣವಾಗಿದ್ದು, ಗಮನಕ್ಕೆ ಬಂದಿರುವ ವಿಷಯಗಳನ್ನಷ್ಟೇ ಇಲ್ಲಿ ಪಟ್ಟಿ ಮಾಡಲಾಗಿದೆ.)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಅಂದು

ಬೆಂಗಳೂರು ವಿವಿ ಕನ್ನಡ ವಿಭಾಗದ ಪ್ರೊಫೆಸರ್, ಎರಡು ವಿವಿಗಳಿಂದ ಗೌರವ ಡಾಕ್ಟರೇಟ್, ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಅನೇಕ ಪ್ರಶಸ್ತಿಗಳನ್ನು ಪಡೆದ ಲೇಖಕರು, ಸಿನಿಮಾ ನಿರ್ದೇಶಕರು, ಕಥೆಗಾರರೂ ಆದ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ನಡೆಸಲಾಯಿತು.

ಇಂದು

ಬಲಪಂಥೀಯ ಬರಹಗಾರ, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಹಾಗೂ ಅಶ್ಲೀಲ ಭಾಷೆಯ ಮೂಲಕ ಟೀಕೆಗಳಿಗೆ ಒಳಗಾದ ರೋಹಿತ್‌ ಚಕ್ರತೀರ್ಥ ಅವರನ್ನು ಪಠ್ಯ ಪರಿಶೀಲನಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಪ್ರಕಾರ ರೋಹಿತ್‌ ಚಕ್ರತೀರ್ಥ ಅವರು ಐಐಟಿ, ಸಿಇಟಿ ಪ್ರೊಫೆಸರ್‌. ಇದನ್ನು ಸ್ವತಃ ರೋಹಿತ್ ಚಕ್ರತೀರ್ಥ ಅವರೇ ಅಲ್ಲಗಳೆದಿದ್ದಾರೆ!


ಅಂದು

ಮೂರು ವರ್ಷಗಳ ಕಾಲ ಪಠ್ಯ ಪರಿಷ್ಕರಣೆ ನಡೆಯಿತು. 2014-15ರಲ್ಲಿ ಬಜೆಟ್‌ನಲ್ಲಿ ತಜ್ಞರ ಸಮಿತಿ ರಚಿಸಲು ಘೋಷಿಸಲಾಯಿತು. ಒಂದರಿಂದ ಹತ್ತನೇ ತರಗತಿಯವರೆಗೆ ಪಠ್ಯಪುಸ್ತಕಗಳ ಪರಿಷ್ಕರಣೆಗಾಗಿ 27 ಸಮಿತಿಗಳನ್ನು ರಚಿಸಲಾಯಿತು. 2017-18ನೇ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯ ಜಾರಿಯಾಯಿತು. ಪ್ರತಿ ಪಠ್ಯ ಪುಸ್ತಕಕ್ಕೂ ತಜ್ಞರ ನೇತೃತ್ವದಲ್ಲಿ ರಚನಾ ಸಮಿತಿ, ಬರಗೂರು ನೇತೃತ್ವದ ಪರಿಷ್ಕರಣ ಸಮಿತಿ, ಇದಾದ ಬಳಿಕ ಉನ್ನತ ಮಟ್ಟದ ಪರಿಶೀಲನಾ ಸಮಿತಿ ಅಥವಾ ಅನುಮೋದನೆಗೆ ತಜ್ಞರ ಸಮಿತಿ ಇತ್ತು.

ಇಂದು

ಎಲ್ಲ ಪಠ್ಯಗಳನ್ನು ಒಂದೇ ಸಮಿತಿ ಪರಿಶೀಲಿಸಿದೆ. ಆ ಸಮಿತಿ ಮಾಡಿದ ಪರಿಶೀಲನೆಯನ್ನು ಅನುಮೋದನೆ ಮಾಡಿದ್ದು ಯಾರೆಂಬ ವಿವರಣೆಗಳು ಸಾರ್ವಜನಿಕವಾಗಿ ಲಭ್ಯವಿಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಎಲ್ಲ ಪಠ್ಯಗಳನ್ನು ಪರಿಶೀಲಿಸಿ, ತರಾತುರಿಯಲ್ಲಿ ಕೆಲವು ಪಠ್ಯಗಳನ್ನು ಹೊಸದಾಗಿ ಸೇರಿಸಿ, ಹಲವು ಪಠ್ಯಗಳನ್ನು ತೆಗೆದುಹಾಕಲಾಗಿದೆ.


ಅಂದು

ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ ಹಾಗೂ ಲಿಂಗ ಸಮಾನತೆಗೆ ಪಠ್ಯದಲ್ಲಿ ಆದ್ಯತೆ ನೀಡಲಾಯಿತು. 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅನುಸರಿಸಿ ಪಠ್ಯಪುಸ್ತಕ ರಚನೆ ಮಾಡಲಾಯಿತು.

ಇಂದು

ಲಿಂಗ ಸಮಾನತೆ, ಸಾಮಾಜಿಕ ನ್ಯಾಯವನ್ನು ಭಾಷಾ ಪಠ್ಯದಲ್ಲಿ ತುರಕಬಾರದು ಎಂದು ಸಮಿತಿ ಹೇಳಿದೆ. ಪಠ್ಯದ ಮೂಲಕ ಸಂವಿಧಾನ ಆಶಯಗಳನ್ನು ಕಲಿಸಬೇಕೆಂಬುದು ಪಠ್ಯಕ್ರಮ ಚೌಕಟ್ಟು ಸ್ಪಷ್ಟವಾಗಿ ತಿಳಿಸಿದರೂ ಅದನ್ನು ಉಲ್ಲಂಘಿಸಲಾಗಿದೆ.


ಅಂದು

272 ಜನರು ವಿವಿಧ ಸಮಿತಿಗಳಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ವೈವಿಧ್ಯತೆಯನ್ನೂ ಸಮಿತಿ ಒಳಗೊಂಡಿತ್ತು.

ಇಂದು

ಪರಿಶೀಲನೆಯ ಮುಖ್ಯ ಸಮಿತಿಯಲ್ಲಿ ಏಳು ಮಂದಿ ಇದ್ದು, ಬೆಂಗಳೂರು ಆಸುಪಾಸಿನ ಜಿಲ್ಲೆಯವರಾಗಿದ್ದಾರೆ. ಎಲ್ಲರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ.


ಅಂದು

ಯಜ್ಞಗಳಲ್ಲಿ ಮಾಡಲಾಗುತ್ತಿದ್ದ ಆಹಾರದ ಪೋಲು, ವೇದ ಕಾಲದ ಡಂಬಾಚಾರಗಳಿಂದಾಗಿ ಹೊಸಧರ್ಮಗಳ ಉದಯ ಎಂದು ಹೇಳಲಾಗಿತ್ತು. ಈ ವಿಚಾರಗಳು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬರಹಗಳಲ್ಲಿ ದಾಖಲಾಗಿವೆ.

ಇಂದು

ಯಜ್ಞಗಳನ್ನು ದಾನದ ಸಂಕೇತ ಎಂದು ಬಿಂಬಿಸುವ ಶತಾವಧಾನಿ ಗಣೇಶ್ ಅವರ ಪಠ್ಯವನ್ನು ಹತ್ತನೇ ತರಗತಿ ಪ್ರಥಮ ಭಾಷಾ ವಿಷಯವಾಗಿ ಇಡಲಾಗಿದೆ.


ಅಂದು

ಸಾಹಿತ್ಯ ಕ್ಷೇತ್ರ ವಿವಿಧ ಪ್ರಕಾರಗಳನ್ನು ಮಕ್ಕಳಿಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಹತ್ತನೇ ತರಗತಿ ಪ್ರಥಮ ಭಾಷಾ ಪಠ್ಯವನ್ನು ರೂಪಿಸಲಾಗಿತ್ತು. ವೈಚಾರಿಕ ಚಿಂತಕ ಎ.ಎನ್‌.ಮೂರ್ತಿ ರಾವ್ ಅವರು ಬರೆದ ‘ಲಲಿತ ಪ್ರಬಂಧ’, ಸಾ.ರಾ.ಅಬೂಬುಕರ್‌ ಅವರ ‘ಕಥೆ’, ಲಂಕೇಶ್ ಅವರು ಅನುವಾದಿಸಿರುವ ‘ಕಾ‌ಲ್ಪನಿಕ ಕಥೆ’ಯನ್ನು ನೀಡಲಾಗಿತ್ತು.

ಇಂದು

10ನೇ ತರಗತಿ ಪಠ್ಯದಲ್ಲಿ ಈ ವೈವಿಧ್ಯತೆ ನಾಶವಾದಂತೆ ಕಾಣುತ್ತಿದೆ. ಭಾಷಣ ಹಾಗೂ ಬೋಧಪ್ರದ ಪಠ್ಯಗಳನ್ನು ನೀಡಲಾಗಿದೆ. ಇಂಥವುಗಳೇ ಹೆಚ್ಚಾಗಿವೆ. ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಭಾಷಣ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’, ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಸನ ಉಪದೇಶ’, ಶತವಾಧಾನಿ ಗಣೇಶ್ ಅವರು ಬರೆದಿರುವ ವೈದಿಕತೆಯನ್ನು ವೈಭವೀಕರಿಸುವ ‘ಭಾರತೀಯ ಶ್ರೇಷ್ಠ ಚಿಂತನೆಗಳು’ ಪಾಠಗಳು ಬೋಧಪ್ರಧವಾಗಿವೆ.


ಅಂದು

ಅಕ್ಷರದ ಅವ್ವ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೋರಾಡಿದ ಸಾವಿತ್ರಿಬಾಯಿ ಫುಲೆಯವರ ವಿವರಣೆಗಳನ್ನು ನೀಡಲಾಗಿತ್ತು. ಮಹಿಳಾ ಸಮಾಜ ಸುಧಾರಕಿಯರನ್ನು ಪರಿಚಯಿಸಲಾಯಿತು.

ಇಂದು

ಸಾವಿತ್ರಿಬಾಯಿ ಫುಲೆ ಕುರಿತ ವಿವರಗಳನ್ನು ತೆಗೆಯಲಾಗಿದೆ. ಅಕ್ಷರ ಮಾತೆಯ ವಿಚಾರಗಳಿಗೆ ವಿರುದ್ಧವಾಗಿರುವ ಬನ್ನಂಜೆಯವರ ಪಾಠಗಳನ್ನು ನೀಡಲಾಗಿದೆ. ‘ಕೆಟ್ಟ ನಡತೆಯ ಸಿರಿಯೆಂಬ ಹೆಣ್ಣು’ ಎಂಬ ಸಾಲನ್ನು ಬನ್ನಂಜೆ ಬರೆದಿದ್ದಾರೆ. (ವಿರೋಧಗಳು ಬಂದ ಮೇಲೆ ಹಣವನ್ನು ಹೆಣ್ಣಿಗೆ ಹೋಲಿಸಿರುವುದನ್ನು ತೆಗೆದು ಹಾಕಲಾಗಿದೆ. ಲೇಖಕರೊಬ್ಬರು ತೀರಿಹೋದ ಮೇಲೆ ಅವರ ಲೇಖನವನ್ನು ತಿದ್ದುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ವಿಮರ್ಶಕರು ಕೇಳಿದ್ದಾರೆ.)

ಇದನ್ನೂ ಓದಿರಿ: ಜನಸಾಮಾನ್ಯರನ್ನು ಕೆರಳಿಸಿದ ಪಠ್ಯಪುಸ್ತಕ ಪರಿಷ್ಕರಣೆ


ಅಂದು

ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಬೌದ್ಧಧರ್ಮ‌ಕ್ಕೆ ಸೇರಿದ್ದು ಏಕೆಂಬ ವಿವರ ನೀಡಲಾಗಿತ್ತು.

ಇಂದು

ಸಂವಿಧಾನಶಿಲ್ಪಿ ಅಂಬೇಡ್ಕರ್‌ ಏಕೆ ಹಿಂದೂಧರ್ಮ ತ್ಯಜಿಸಿದರೆಂಬ ವಿವರ ಕಿತ್ತುಹಾಕಲಾಗಿದೆ.


ಅಂದು

ಬಸವಣ್ಣನವರ ಸಾಧನೆಯನ್ನು ಸರಿಯಾಗಿ ಚಿತ್ರಿಸಲಾಗಿದೆ.

ಇಂದು

ಬಸವಣ್ಣನವರ ಮೂಲವನ್ನು ತಿರುಚಲಾಗಿದೆ.


ಅಂದು

ಹತ್ತನೇ ತರಗತಿ ಪಠ್ಯದಲ್ಲಿತ್ತು ನಾರಾಯಣಗುರು ಹಾಗೂ ಪೆರಿಯಾರ್ ರಾಮಸ್ವಾಮಿ ನಾಯ್ಕರ್‌ ಪಾಠ.

ಇಂದು

ನಾರಾಯಣಗುರು, ಪೆರಿಯಾರ್‌ ಪಾಠ ತೆಗೆಯಲಾಗಿದೆ.


ಅಂದು

ಏಳನೇ ತರಗತಿಯಲ್ಲಿತ್ತು ‘ಭಕ್ತಿ ಪಂಥ ಮತ್ತು ಸೂಫಿ ಪಂಥ ಪರಂಪರೆ’ಯ ಪಾಠ.

ಇಂದು

ಈಗ ಈ ಪಾಠವನ್ನು ತೆಗೆಯಲಾಗಿದೆ.


ಅಂದು

ಪಠ್ಯದಲ್ಲಿತ್ತು ಶಾಂತಿ ಸಾರಿದ ಗೌತಮ ಬುದ್ದನ ಪದ್ಯ

ಬುದ್ದನ ಪದ್ಯ ತೆಗೆಯಲಾಗಿದೆ.


ಅಂದು

ಲೇಖಕರ ಮೂಲ ಪಠ್ಯವನ್ನು ಸಂಕ್ಷಿಪ್ತಗೊಳಿಸಿ ಪಠ್ಯವಾಗಿ ರೂಪಿಸಿದ್ದರು.

ಇಂದು

ಲೇಖಕರ ಮೂಲ ಪಠ್ಯದಲ್ಲಿನ ಲೇಖಕರ ಆಶಯಗಳನ್ನೇ ತಿದ್ದಲಾಗುತ್ತಿದೆ. ಉದಾಹರಣೆಗೆ ‘ಭಗವಾಧ್ವಜ’ ಎಂದಿರುವುದನ್ನು ‘ಧ್ವಜ’ ಎಂದು ತಿದ್ದಲಾಗಿದೆ. ಮುಂದಿನ ದಿನಗಳಲ್ಲಿ ಯಾರಾದರೂ ಡಾ.ಬಿ.ಆರ್‌.ಅಂಬೇಡ್ಕರ್‌, ಗಾಂಧೀಜಿ, ಕುವೆಂಪು ಅವರಂತಹ ಮಹಾನೀಯರ ಆಶಯವನ್ನು ತಿರುಚಬಹುದಲ್ಲ, ಎಂಬ ಪ್ರಶ್ನೆ ಮೂಡಿಬಂದಿದೆ.

(ಮುಂದುವರಿಯಲಿದೆ…)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...