Homeಅಂಕಣಗಳುಯಾವ ಧರ್ಮವೂ ಸಂಕಟವನ್ನು ರೂಪಿಸುವುದಿಲ್ಲ

ಯಾವ ಧರ್ಮವೂ ಸಂಕಟವನ್ನು ರೂಪಿಸುವುದಿಲ್ಲ

- Advertisement -
- Advertisement -

ಸಾರ ಅಬೂಬಕ್ಕರ್ |

ಇದೇ ಡಿಸೆಂಬರ್ ತಿಂಗಳ ದಿನಾಂಕ 10ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಮುಸ್ಲಿಮರ ‘ಶರಿಯತ್ ರಕ್ಷಣ್’ ಎಂಬ ವಿಷಯದ ಕುರಿತು ಸಾರ್ವಜನಿಕ ಸಭೆ ಕರೆಯಲಾಗಿದ್ದು ರಾಜ್ಯಾದ್ಯಂತದಿಂದ ಮುಸ್ಲಿಂ ಪುರುಷರು ಈ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದನ್ನು ಅನುಸರಿಸಿ ರಾಜ್ಯದ ಹಲವು ಜಿಲ್ಲೆಗಳಿಂದ ಮುಸ್ಲಿಂ ಪುರುಷರು ಆಗಮಿಸಿ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಕೇರಳದ ಹಲವಾರು ಧರ್ಮ ಗುರುಗಳು ಬಂದು ಈ ಜನರಿಗೆ ಮಾರ್ಗದರ್ಶನ ನೀಡಿದರು.
1985ರ ಸಂದರ್ಭದಲ್ಲಿ ಶಾಬಾನು ಎಂಬ ಮಹಿಳೆ, ಐದು ಮಕ್ಕಳ ತಾಯಿಯು ವಕೀಲನಾಗಿದ್ದ ಆಕೆಯ ಗಂಡ ತ್ರಿವಳಿ ತಲಾಖ್ ನೀಡಿ ಹೊರ ಹಾಕಿದಾಗ ಆಕೆ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದಳು. ನ್ಯಾಯಾಲಯ ಆಕೆ ಮತ್ತು ಮಕ್ಕಳಿಗೆ ತಿಂಗಳಿಗೆ 185ರೂ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿದಾಗ ಆಗ ಆಕೆಯ ಗಂಡನು ದೇಶಾದ್ಯಂತ ಎಲ್ಲ ಮುಸ್ಲಿಮರನ್ನು ಈ ತೀರ್ಪಿನ ವಿರುದ್ಧ ಎತ್ತಿ ಕಟ್ಟಿ, ತಲಾಖ್ ನೀಡಿದ ಬಳಿಕ ಹೆಂಡತಿಗೆ ಜೀವನಾಂಶ ನೀಡುವುದು ಧರ್ಮ ವಿರುದ್ಧವೆಂದು ಹೋರಾಟವನ್ನಾರಂಭಿಸಿದರು. ಆಗ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರ ದಾರಿ ತಪ್ಪಿಸಿ ‘ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣಾ ಮಸೂದೆ’ ಎಂಬ ಹೊಸ ನಿಯಮವನ್ನು ಜಾರಿಗೊಳಿಸಿದರು. ಈ ನಿಯಮದಂತೆ ತಲಾಖ್ ಪೀಡಿತ ಮಹಿಳೆಯರನ್ನು ಅವಳ ಸಂಬಂಧಿಕರು ನೋಡಿಕೊಳ್ಳಬೇಕು ಯಾರೂ ಇಲ್ಲವಾದರೆ ವಕ್ಸ್ ಮಂಡಳಿಯನ್ನು ಆಕೆ ಕೇಳಿಕೊಳ್ಳಬೇಕು. ಈ ನಿಯಮ ತೀರಾ ಹಾಸ್ಯಾಸ್ಪದ ಎಂಬಂತಾಯಿತು. ಹಕ್ಕೇ ಇಲ್ಲದ ಮುಸ್ಲಿಂ ಮಹಿಳೆಯರ ಯಾವ ಹಕ್ಕುಗಳನ್ನು ಈ ನಿಯಮ ರಕ್ಷಿಸುತ್ತದೆ? ವಕ್ಪ್ ಮಂಡಳಿಯ ಅನ್ಯ ಪುರುಷರೊಡನೆ ಆಕೆ ತನಗೆ ಜೀವನಾಂಶ ಕೊಡಿ ಎಂದು ಕೇಳತೊಡಗಿದರೆ ಪರಿಣಾಮವೇನಾಗಬಹುದು ಎಂಬುದನ್ನು ನಾನು ವಿವರಿಸಬೇಕಾಗಿಲ್ಲ. ಇಷ್ಟಕ್ಕೂ ಖುರಾನಿನ 2ನೇ ಸೂರದ 241ನೇ ವಾಕ್ಯ ಸ್ಪಷ್ಟವಾಗಿ ತಲಾಖ್ ಪೀಡಿತ ಮಹಿಳೆಯ ಮುಂದಿನ ಬದುಕಿಗಾಗಿ ಆಕೆಗೆ ಜೀವನಾಂಶ ನೀಡಬೇಕೆಂದು ಬರೆದಿದೆ. ಮುಸ್ಲಿಂ ಪುರುಷರು ಈ ಖುರ್‍ಆನಿನ ಈ ವಾಕ್ಯವನ್ನೇ ಜನರ ಕಣ್ಣಿನಿಂದ ಮಶಿಮಾ ಡಿ, ತಲಾಖ್ ಪೀಡಿತೆಗೆ ಜೀವನಾಂಶ ಧರ್ಮ ವಿರುದ್ಧ. ತಮ್ಮ ಧರ್ಮದಲ್ಲಿ ಸರಕಾರದ ಹಸ್ತಕ್ಷೇಪ ಎಂದು ಘೋಷಣೆ ಕೂಗಿದರು. ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರು ಬದುಕಿನ ಹಾದಿಯನ್ನು ಮುಂಬೈಯ ಕೆಂಪು ದೀಪದ ಅಡಿಯಲ್ಲಿ ಕಂಡುಕೊಂಡರು. ಧರ್ಮ ರಕ್ಷಕರೆಂಬ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಎಂಬ ಸಂಸ್ಥೆ ಧರ್ಮ ರಕ್ಷಣೆ ಆಯಿತೆಂದು ಸಂಭ್ರಮಾಚರಿಸಿದರು. ತಲಾಖ್ ಪೀಡಿತ ಮಹಿಳೆಯರ ಗತಿ ಏನಾಯಿತೆಂದು ಈ ಪುರುಷರು ಯೋಚಿಸುವ ಗೋಜಿಗೆ ಇಂದಿನವರೆಗೂ ಹೋಗಿಯೇ ಇಲ್ಲ. ಈ ಹೊಸ ನಿಯಮದ ವಿರುದ್ಧ ಹೋರಾಡಿದ ವಿದ್ಯಾವಂತ ಮುಸ್ಲಿಂ ಮಹಿಳೆಯರ ಮೇಲೆ ಕೂಡಾ ಈ ಜನರು ಜಾತಿ ಭ್ರಷ್ಟತೆಯ ಆರೋಪ ಹೊರಸಿದರು.
ಈಗಲೂ ತ್ರಿವಳಿ, ಬಾಯಿಮಾತಿನ ತಲಾಖನ್ನು ಕೇಂದ್ರ ಸರಕಾರ ನಿಷೇಧಿಸಿದ ಕಾರಣ ನೀಡಿ ಈ ಜನರು ಶರಿಯತ್ ರಕ್ಷಣೆಯ ನಾಟಕವಾಡುತ್ತಿದ್ದಾರೆ. ಕೇಂದ್ರ ಸರಕಾರ ತ್ರಿವಳಿ ತಲಾಖ್ ರದ್ಧತಿ ನಿಯಮದಿಂದ ಹಿಂದೆ ಸರಿಯಬಾರದೆಂದು ನನ್ನ ಕಳಕಳಿಯ ಮನವಿ.
ನಮ್ಮ ಸಂವಿಧಾನವು ಎಲ್ಲರಿಗೂ ತಮ್ಮ ಧಾರ್ಮಿಕ ನಿಯಮಗಳನ್ನು ಪಾಲಿಸುವ ಅಧಿಕಾರವನ್ನು ನೀಡಿದೆ. ಆದರೆ ಯಾವ ಧರ್ಮ ಕೂಡಾ ಮನುಷ್ಯರನ್ನು ಬದುಕಿನಲ್ಲಿ ಸಂಕಟ ಪಡುವಂತಹ ನಿಯಮಗಳನ್ನು ರೂಪಿಸುವುದಿಲ್ಲ. 1500 ವರ್ಷಗಳ ಹಿಂದೆ ಪ್ರವಾದಿಗಳು ಹೆಂಡತಿ ಬೇಡವಾದರೆ ಬೀದಿಗೆಸೆಯಿರಿ ಎಂದು ಹೇಳಿಯೂ ಇರಲಿಲ್ಲ. ಅವರು ಪುರುಷರಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ನೋಡಿಯೇ ಇಸ್ಲಾಂ(ಶಾಂತಿ) ಎಂಬ ಧರ್ಮ ಸ್ಥಾಪನೆ ಮಾಡಿದರು.
ಧರ್ಮದ ನಿಯಮಗಳು 1500 ವರ್ಷಗಳ ಹಿಂದೆ ನಡೆಯುತ್ತಿದ್ದಂತೆ ಈಗಲೂ ಇರಬೇಕೆನ್ನುವುದೇ ಮೂರ್ಖತನವಾಗುತ್ತದೆ. ಶರಿಯತ್ ರಕ್ಷಣೆಗೆ ಹೊರಟವರಿಗೆ ಶರಿಯತ್ ಎಂಬ ಕರ್ಮ ಶಾಸ್ತ್ರ ಯಾವಾಗ ಜಾರಿಯಾಯಿತೆಂದು ತಿಳಿದಿದೆಯೇ? ಪ್ರವಾದಿಗಳ ಮರಣಾನಂತರ 150 ವರ್ಷಗಳ ಬಳಿಕವಷ್ಟೆ ಧಾರ್ಮಿಕ ಗುರುಗಳು ಶರಿಯತ್‍ನ್ನು ಜಾರಿಗೊಳಿಸಿದರು. ಇಸ್ಲಾಂ ಧಾರ್ಮಿಕ ನಿಯಮಗಳು ಮಹಿಳೆಯರ ಮೇಲೆ ಅಧಿಕಾರ ಚಲಾಯಿಸಲು ಪುರುಷರಿಗೆ ಸಾಧ್ಯವಾಗುವಂತಹ ನಿಯಮಗಳನ್ನು ಶರಿಯತ್ ಎಂಬ ಹೆಸರಿನಲ್ಲಿ ಜಾರಿಗೊಳಿಸಿದರು.
ನಮ್ಮ ಸಂವಿಧಾನ ಸರ್ವರಿಗೂ ಸಮಾನತೆ ನೀಡಿದೆ. ವಿವಿಧ ಧಾರ್ಮಿಕ ನಿಯಮಗಳಿಂದಾಗಿ ಈ ಸಮಾನತೆ ಮುಸ್ಲಿಂ ಮಹಿಳೆಯರಿಗೆ ದೊರೆಯುತ್ತಿಲ್ಲ. ವಿವಾಹ, ವಿಚ್ಛೇದನ ಇವು ಯಾವುದು ಧಾರ್ಮಿಕ ನಿಯಮಗಳಲ್ಲ. ಇವೆಲ್ಲವೂ ಸಾಮಾಜಿಕ ನಿಯಮಗಳು ಇಂತಹ ಸಾಮಾಜಿಕ ನಿಯಮಗಳು ಮಹಿಳೆಯರಿಗೆ ಬದುಕಲು ಸಾಧ್ಯವಾಗದ ರೀತಿಯಲ್ಲಿ ಅವರಿಗೆ ಉಸಿರುಗಟ್ಟುವಂತಾದರೆ ಅವುಗಳನ್ನು ಕಾಲಕ್ಕನುಸಾರವಾಗಿ ಬದಲಾಯಿಸಬಹುದು. ನೀವು ಯಾವ ದೇಶದಲ್ಲಿ ಬದುಕುತಿದ್ದೀರೋ ಆ ದೇಶದ ಸಾಮಾಜಿಕ ನಿಯಮವನ್ನು ಅನುಸರಿಸಬಹುದು ಎಂಬುದು ಪ್ರವಾದಿಗಳ ಬೋಧನೆಯಾ.
ಇಂದು ನಮ್ಮ ಸುತ್ತಮುತ್ತಲಿನ ಸುಮಾರು ಹತ್ತಿಪ್ಪತ್ತು ದೇಶಗಳಲ್ಲಿ ತ್ರಿವಳಿ ತಲಾಖ್ ಪದ್ದತಿಯನ್ನು ರದ್ದುಪಡಿಸಲಾಗಿದೆ. ಅಲ್ಲಿ ಯಾರೂ ನಮ್ಮ ಧರ್ಮದಲ್ಲಿ ಹಸ್ತಕ್ಷೇಪವೆಂದು ಕಿರುಚಾಡಲಿಲ್ಲವಲ್ಲಾ? ಇತರ ಮುಸ್ಲಿಂ ರಾಷ್ಟ್ರಗಳು ಇಂತಹ ಅನ್ಯಾಯದ ನಿಯಮವನ್ನು ತಿದ್ದುಪಡಿ ಮಾಡಿದರೆ ಇಂಡಿಯಾ ಕೂಡಾ ಅದನ್ನು ಮಾಡಲು ಯಾರ ಅನುಮತಿಯನ್ನು ಪಡೆಯಬೇಕಾಗಿಲ್ಲ.
ನಾವೆಲ್ಲರೂ ನಮ್ಮ ಸಂವಿಧಾನಕ್ಕನುಸಾರವಾಗಿ ಬದುಕಬೇಕು. ನಮಗೆ ನಮ್ಮ ಧರ್ಮವೆನ್ನುವುದಾದರೆ ಮುಸ್ಲಿಮೇತರರೂ ಮನುಧರ್ಮಶಾಸ್ತ್ರ ನಮ್ಮ ಧರ್ಮವೆನ್ನುತ್ತಾರೆ. ಪೇಜಾವರ ಗುರುಗಳು ಹಾಗೂ ವಾರಣಾಸಿಯ ಧರ್ಮಗುರುಗಳೂ ನಮಗೆ ಸಂವಿಧಾನದಲ್ಲಿ ವಿಶ್ವಾಸವಿಲ್ಲ. ನಾವು ಮನುವಾದವನನುಸರಿಸುತ್ತೇವೆ ಎಂದು ಹೇಳತೊಡಗಿದ್ದಾರೆ. ನಮ್ಮ ದೇಶದಲ್ಲಿ ಅತ್ಯುತ್ತಮ ಸಂವಿಧಾನವಿದೆ. ನಾವೆಲ್ಲರೂ ಸೌಹಾರ್ದದಿಂದ ಈ ಸಂವಿಧಾನಕ್ಕನುಸಾರವಾಗಿ ವರ್ತಿಸತೊಡಗಿದರೆ ದೇಶದಲ್ಲಿ ಶಾಂತಿ ನೆಲೆಯೂರಬಹುದು. ಮುಸ್ಲಿಮರು ಎಷ್ಟು ಮಸೀದಿ ಕಟ್ಟಿಸಿಕೊಳ್ಳಲೂ ಅಭ್ಯಂತರವಿಲ್ಲ. ಒಂದೇ ಬೀದಿಯಲ್ಲಿ ಮೂರೋ ನಾಲ್ಕೋ ಮಸೀದಿಗಳಿರುವುದೂ ಇದೆ. ನಮ್ಮ ಧಾರ್ಮಿಕ ನಿಯಮಗಳನ್ನು ಯಾರೂ ತಡೆಯಲಾರರು. ನಮಗೆ ಎಲ್ಲರನ್ನು ಅರ್ಥ ಮಾಡಿಕೊಳ್ಳುವಂತಹ ಹೃದಯ ವಾತ್ಸಲ್ಯತೆ ಇರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...