Homeಅಂಕಣಗಳುಯಾವ ಧರ್ಮವೂ ಸಂಕಟವನ್ನು ರೂಪಿಸುವುದಿಲ್ಲ

ಯಾವ ಧರ್ಮವೂ ಸಂಕಟವನ್ನು ರೂಪಿಸುವುದಿಲ್ಲ

- Advertisement -
- Advertisement -

ಸಾರ ಅಬೂಬಕ್ಕರ್ |

ಇದೇ ಡಿಸೆಂಬರ್ ತಿಂಗಳ ದಿನಾಂಕ 10ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಮುಸ್ಲಿಮರ ‘ಶರಿಯತ್ ರಕ್ಷಣ್’ ಎಂಬ ವಿಷಯದ ಕುರಿತು ಸಾರ್ವಜನಿಕ ಸಭೆ ಕರೆಯಲಾಗಿದ್ದು ರಾಜ್ಯಾದ್ಯಂತದಿಂದ ಮುಸ್ಲಿಂ ಪುರುಷರು ಈ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದನ್ನು ಅನುಸರಿಸಿ ರಾಜ್ಯದ ಹಲವು ಜಿಲ್ಲೆಗಳಿಂದ ಮುಸ್ಲಿಂ ಪುರುಷರು ಆಗಮಿಸಿ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಕೇರಳದ ಹಲವಾರು ಧರ್ಮ ಗುರುಗಳು ಬಂದು ಈ ಜನರಿಗೆ ಮಾರ್ಗದರ್ಶನ ನೀಡಿದರು.
1985ರ ಸಂದರ್ಭದಲ್ಲಿ ಶಾಬಾನು ಎಂಬ ಮಹಿಳೆ, ಐದು ಮಕ್ಕಳ ತಾಯಿಯು ವಕೀಲನಾಗಿದ್ದ ಆಕೆಯ ಗಂಡ ತ್ರಿವಳಿ ತಲಾಖ್ ನೀಡಿ ಹೊರ ಹಾಕಿದಾಗ ಆಕೆ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದಳು. ನ್ಯಾಯಾಲಯ ಆಕೆ ಮತ್ತು ಮಕ್ಕಳಿಗೆ ತಿಂಗಳಿಗೆ 185ರೂ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿದಾಗ ಆಗ ಆಕೆಯ ಗಂಡನು ದೇಶಾದ್ಯಂತ ಎಲ್ಲ ಮುಸ್ಲಿಮರನ್ನು ಈ ತೀರ್ಪಿನ ವಿರುದ್ಧ ಎತ್ತಿ ಕಟ್ಟಿ, ತಲಾಖ್ ನೀಡಿದ ಬಳಿಕ ಹೆಂಡತಿಗೆ ಜೀವನಾಂಶ ನೀಡುವುದು ಧರ್ಮ ವಿರುದ್ಧವೆಂದು ಹೋರಾಟವನ್ನಾರಂಭಿಸಿದರು. ಆಗ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರ ದಾರಿ ತಪ್ಪಿಸಿ ‘ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣಾ ಮಸೂದೆ’ ಎಂಬ ಹೊಸ ನಿಯಮವನ್ನು ಜಾರಿಗೊಳಿಸಿದರು. ಈ ನಿಯಮದಂತೆ ತಲಾಖ್ ಪೀಡಿತ ಮಹಿಳೆಯರನ್ನು ಅವಳ ಸಂಬಂಧಿಕರು ನೋಡಿಕೊಳ್ಳಬೇಕು ಯಾರೂ ಇಲ್ಲವಾದರೆ ವಕ್ಸ್ ಮಂಡಳಿಯನ್ನು ಆಕೆ ಕೇಳಿಕೊಳ್ಳಬೇಕು. ಈ ನಿಯಮ ತೀರಾ ಹಾಸ್ಯಾಸ್ಪದ ಎಂಬಂತಾಯಿತು. ಹಕ್ಕೇ ಇಲ್ಲದ ಮುಸ್ಲಿಂ ಮಹಿಳೆಯರ ಯಾವ ಹಕ್ಕುಗಳನ್ನು ಈ ನಿಯಮ ರಕ್ಷಿಸುತ್ತದೆ? ವಕ್ಪ್ ಮಂಡಳಿಯ ಅನ್ಯ ಪುರುಷರೊಡನೆ ಆಕೆ ತನಗೆ ಜೀವನಾಂಶ ಕೊಡಿ ಎಂದು ಕೇಳತೊಡಗಿದರೆ ಪರಿಣಾಮವೇನಾಗಬಹುದು ಎಂಬುದನ್ನು ನಾನು ವಿವರಿಸಬೇಕಾಗಿಲ್ಲ. ಇಷ್ಟಕ್ಕೂ ಖುರಾನಿನ 2ನೇ ಸೂರದ 241ನೇ ವಾಕ್ಯ ಸ್ಪಷ್ಟವಾಗಿ ತಲಾಖ್ ಪೀಡಿತ ಮಹಿಳೆಯ ಮುಂದಿನ ಬದುಕಿಗಾಗಿ ಆಕೆಗೆ ಜೀವನಾಂಶ ನೀಡಬೇಕೆಂದು ಬರೆದಿದೆ. ಮುಸ್ಲಿಂ ಪುರುಷರು ಈ ಖುರ್‍ಆನಿನ ಈ ವಾಕ್ಯವನ್ನೇ ಜನರ ಕಣ್ಣಿನಿಂದ ಮಶಿಮಾ ಡಿ, ತಲಾಖ್ ಪೀಡಿತೆಗೆ ಜೀವನಾಂಶ ಧರ್ಮ ವಿರುದ್ಧ. ತಮ್ಮ ಧರ್ಮದಲ್ಲಿ ಸರಕಾರದ ಹಸ್ತಕ್ಷೇಪ ಎಂದು ಘೋಷಣೆ ಕೂಗಿದರು. ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರು ಬದುಕಿನ ಹಾದಿಯನ್ನು ಮುಂಬೈಯ ಕೆಂಪು ದೀಪದ ಅಡಿಯಲ್ಲಿ ಕಂಡುಕೊಂಡರು. ಧರ್ಮ ರಕ್ಷಕರೆಂಬ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಎಂಬ ಸಂಸ್ಥೆ ಧರ್ಮ ರಕ್ಷಣೆ ಆಯಿತೆಂದು ಸಂಭ್ರಮಾಚರಿಸಿದರು. ತಲಾಖ್ ಪೀಡಿತ ಮಹಿಳೆಯರ ಗತಿ ಏನಾಯಿತೆಂದು ಈ ಪುರುಷರು ಯೋಚಿಸುವ ಗೋಜಿಗೆ ಇಂದಿನವರೆಗೂ ಹೋಗಿಯೇ ಇಲ್ಲ. ಈ ಹೊಸ ನಿಯಮದ ವಿರುದ್ಧ ಹೋರಾಡಿದ ವಿದ್ಯಾವಂತ ಮುಸ್ಲಿಂ ಮಹಿಳೆಯರ ಮೇಲೆ ಕೂಡಾ ಈ ಜನರು ಜಾತಿ ಭ್ರಷ್ಟತೆಯ ಆರೋಪ ಹೊರಸಿದರು.
ಈಗಲೂ ತ್ರಿವಳಿ, ಬಾಯಿಮಾತಿನ ತಲಾಖನ್ನು ಕೇಂದ್ರ ಸರಕಾರ ನಿಷೇಧಿಸಿದ ಕಾರಣ ನೀಡಿ ಈ ಜನರು ಶರಿಯತ್ ರಕ್ಷಣೆಯ ನಾಟಕವಾಡುತ್ತಿದ್ದಾರೆ. ಕೇಂದ್ರ ಸರಕಾರ ತ್ರಿವಳಿ ತಲಾಖ್ ರದ್ಧತಿ ನಿಯಮದಿಂದ ಹಿಂದೆ ಸರಿಯಬಾರದೆಂದು ನನ್ನ ಕಳಕಳಿಯ ಮನವಿ.
ನಮ್ಮ ಸಂವಿಧಾನವು ಎಲ್ಲರಿಗೂ ತಮ್ಮ ಧಾರ್ಮಿಕ ನಿಯಮಗಳನ್ನು ಪಾಲಿಸುವ ಅಧಿಕಾರವನ್ನು ನೀಡಿದೆ. ಆದರೆ ಯಾವ ಧರ್ಮ ಕೂಡಾ ಮನುಷ್ಯರನ್ನು ಬದುಕಿನಲ್ಲಿ ಸಂಕಟ ಪಡುವಂತಹ ನಿಯಮಗಳನ್ನು ರೂಪಿಸುವುದಿಲ್ಲ. 1500 ವರ್ಷಗಳ ಹಿಂದೆ ಪ್ರವಾದಿಗಳು ಹೆಂಡತಿ ಬೇಡವಾದರೆ ಬೀದಿಗೆಸೆಯಿರಿ ಎಂದು ಹೇಳಿಯೂ ಇರಲಿಲ್ಲ. ಅವರು ಪುರುಷರಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ನೋಡಿಯೇ ಇಸ್ಲಾಂ(ಶಾಂತಿ) ಎಂಬ ಧರ್ಮ ಸ್ಥಾಪನೆ ಮಾಡಿದರು.
ಧರ್ಮದ ನಿಯಮಗಳು 1500 ವರ್ಷಗಳ ಹಿಂದೆ ನಡೆಯುತ್ತಿದ್ದಂತೆ ಈಗಲೂ ಇರಬೇಕೆನ್ನುವುದೇ ಮೂರ್ಖತನವಾಗುತ್ತದೆ. ಶರಿಯತ್ ರಕ್ಷಣೆಗೆ ಹೊರಟವರಿಗೆ ಶರಿಯತ್ ಎಂಬ ಕರ್ಮ ಶಾಸ್ತ್ರ ಯಾವಾಗ ಜಾರಿಯಾಯಿತೆಂದು ತಿಳಿದಿದೆಯೇ? ಪ್ರವಾದಿಗಳ ಮರಣಾನಂತರ 150 ವರ್ಷಗಳ ಬಳಿಕವಷ್ಟೆ ಧಾರ್ಮಿಕ ಗುರುಗಳು ಶರಿಯತ್‍ನ್ನು ಜಾರಿಗೊಳಿಸಿದರು. ಇಸ್ಲಾಂ ಧಾರ್ಮಿಕ ನಿಯಮಗಳು ಮಹಿಳೆಯರ ಮೇಲೆ ಅಧಿಕಾರ ಚಲಾಯಿಸಲು ಪುರುಷರಿಗೆ ಸಾಧ್ಯವಾಗುವಂತಹ ನಿಯಮಗಳನ್ನು ಶರಿಯತ್ ಎಂಬ ಹೆಸರಿನಲ್ಲಿ ಜಾರಿಗೊಳಿಸಿದರು.
ನಮ್ಮ ಸಂವಿಧಾನ ಸರ್ವರಿಗೂ ಸಮಾನತೆ ನೀಡಿದೆ. ವಿವಿಧ ಧಾರ್ಮಿಕ ನಿಯಮಗಳಿಂದಾಗಿ ಈ ಸಮಾನತೆ ಮುಸ್ಲಿಂ ಮಹಿಳೆಯರಿಗೆ ದೊರೆಯುತ್ತಿಲ್ಲ. ವಿವಾಹ, ವಿಚ್ಛೇದನ ಇವು ಯಾವುದು ಧಾರ್ಮಿಕ ನಿಯಮಗಳಲ್ಲ. ಇವೆಲ್ಲವೂ ಸಾಮಾಜಿಕ ನಿಯಮಗಳು ಇಂತಹ ಸಾಮಾಜಿಕ ನಿಯಮಗಳು ಮಹಿಳೆಯರಿಗೆ ಬದುಕಲು ಸಾಧ್ಯವಾಗದ ರೀತಿಯಲ್ಲಿ ಅವರಿಗೆ ಉಸಿರುಗಟ್ಟುವಂತಾದರೆ ಅವುಗಳನ್ನು ಕಾಲಕ್ಕನುಸಾರವಾಗಿ ಬದಲಾಯಿಸಬಹುದು. ನೀವು ಯಾವ ದೇಶದಲ್ಲಿ ಬದುಕುತಿದ್ದೀರೋ ಆ ದೇಶದ ಸಾಮಾಜಿಕ ನಿಯಮವನ್ನು ಅನುಸರಿಸಬಹುದು ಎಂಬುದು ಪ್ರವಾದಿಗಳ ಬೋಧನೆಯಾ.
ಇಂದು ನಮ್ಮ ಸುತ್ತಮುತ್ತಲಿನ ಸುಮಾರು ಹತ್ತಿಪ್ಪತ್ತು ದೇಶಗಳಲ್ಲಿ ತ್ರಿವಳಿ ತಲಾಖ್ ಪದ್ದತಿಯನ್ನು ರದ್ದುಪಡಿಸಲಾಗಿದೆ. ಅಲ್ಲಿ ಯಾರೂ ನಮ್ಮ ಧರ್ಮದಲ್ಲಿ ಹಸ್ತಕ್ಷೇಪವೆಂದು ಕಿರುಚಾಡಲಿಲ್ಲವಲ್ಲಾ? ಇತರ ಮುಸ್ಲಿಂ ರಾಷ್ಟ್ರಗಳು ಇಂತಹ ಅನ್ಯಾಯದ ನಿಯಮವನ್ನು ತಿದ್ದುಪಡಿ ಮಾಡಿದರೆ ಇಂಡಿಯಾ ಕೂಡಾ ಅದನ್ನು ಮಾಡಲು ಯಾರ ಅನುಮತಿಯನ್ನು ಪಡೆಯಬೇಕಾಗಿಲ್ಲ.
ನಾವೆಲ್ಲರೂ ನಮ್ಮ ಸಂವಿಧಾನಕ್ಕನುಸಾರವಾಗಿ ಬದುಕಬೇಕು. ನಮಗೆ ನಮ್ಮ ಧರ್ಮವೆನ್ನುವುದಾದರೆ ಮುಸ್ಲಿಮೇತರರೂ ಮನುಧರ್ಮಶಾಸ್ತ್ರ ನಮ್ಮ ಧರ್ಮವೆನ್ನುತ್ತಾರೆ. ಪೇಜಾವರ ಗುರುಗಳು ಹಾಗೂ ವಾರಣಾಸಿಯ ಧರ್ಮಗುರುಗಳೂ ನಮಗೆ ಸಂವಿಧಾನದಲ್ಲಿ ವಿಶ್ವಾಸವಿಲ್ಲ. ನಾವು ಮನುವಾದವನನುಸರಿಸುತ್ತೇವೆ ಎಂದು ಹೇಳತೊಡಗಿದ್ದಾರೆ. ನಮ್ಮ ದೇಶದಲ್ಲಿ ಅತ್ಯುತ್ತಮ ಸಂವಿಧಾನವಿದೆ. ನಾವೆಲ್ಲರೂ ಸೌಹಾರ್ದದಿಂದ ಈ ಸಂವಿಧಾನಕ್ಕನುಸಾರವಾಗಿ ವರ್ತಿಸತೊಡಗಿದರೆ ದೇಶದಲ್ಲಿ ಶಾಂತಿ ನೆಲೆಯೂರಬಹುದು. ಮುಸ್ಲಿಮರು ಎಷ್ಟು ಮಸೀದಿ ಕಟ್ಟಿಸಿಕೊಳ್ಳಲೂ ಅಭ್ಯಂತರವಿಲ್ಲ. ಒಂದೇ ಬೀದಿಯಲ್ಲಿ ಮೂರೋ ನಾಲ್ಕೋ ಮಸೀದಿಗಳಿರುವುದೂ ಇದೆ. ನಮ್ಮ ಧಾರ್ಮಿಕ ನಿಯಮಗಳನ್ನು ಯಾರೂ ತಡೆಯಲಾರರು. ನಮಗೆ ಎಲ್ಲರನ್ನು ಅರ್ಥ ಮಾಡಿಕೊಳ್ಳುವಂತಹ ಹೃದಯ ವಾತ್ಸಲ್ಯತೆ ಇರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...