Homeಅಂಕಣಗಳುಯಾವ ಧರ್ಮವೂ ಸಂಕಟವನ್ನು ರೂಪಿಸುವುದಿಲ್ಲ

ಯಾವ ಧರ್ಮವೂ ಸಂಕಟವನ್ನು ರೂಪಿಸುವುದಿಲ್ಲ

- Advertisement -
- Advertisement -

ಸಾರ ಅಬೂಬಕ್ಕರ್ |

ಇದೇ ಡಿಸೆಂಬರ್ ತಿಂಗಳ ದಿನಾಂಕ 10ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಮುಸ್ಲಿಮರ ‘ಶರಿಯತ್ ರಕ್ಷಣ್’ ಎಂಬ ವಿಷಯದ ಕುರಿತು ಸಾರ್ವಜನಿಕ ಸಭೆ ಕರೆಯಲಾಗಿದ್ದು ರಾಜ್ಯಾದ್ಯಂತದಿಂದ ಮುಸ್ಲಿಂ ಪುರುಷರು ಈ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದನ್ನು ಅನುಸರಿಸಿ ರಾಜ್ಯದ ಹಲವು ಜಿಲ್ಲೆಗಳಿಂದ ಮುಸ್ಲಿಂ ಪುರುಷರು ಆಗಮಿಸಿ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಕೇರಳದ ಹಲವಾರು ಧರ್ಮ ಗುರುಗಳು ಬಂದು ಈ ಜನರಿಗೆ ಮಾರ್ಗದರ್ಶನ ನೀಡಿದರು.
1985ರ ಸಂದರ್ಭದಲ್ಲಿ ಶಾಬಾನು ಎಂಬ ಮಹಿಳೆ, ಐದು ಮಕ್ಕಳ ತಾಯಿಯು ವಕೀಲನಾಗಿದ್ದ ಆಕೆಯ ಗಂಡ ತ್ರಿವಳಿ ತಲಾಖ್ ನೀಡಿ ಹೊರ ಹಾಕಿದಾಗ ಆಕೆ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದಳು. ನ್ಯಾಯಾಲಯ ಆಕೆ ಮತ್ತು ಮಕ್ಕಳಿಗೆ ತಿಂಗಳಿಗೆ 185ರೂ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿದಾಗ ಆಗ ಆಕೆಯ ಗಂಡನು ದೇಶಾದ್ಯಂತ ಎಲ್ಲ ಮುಸ್ಲಿಮರನ್ನು ಈ ತೀರ್ಪಿನ ವಿರುದ್ಧ ಎತ್ತಿ ಕಟ್ಟಿ, ತಲಾಖ್ ನೀಡಿದ ಬಳಿಕ ಹೆಂಡತಿಗೆ ಜೀವನಾಂಶ ನೀಡುವುದು ಧರ್ಮ ವಿರುದ್ಧವೆಂದು ಹೋರಾಟವನ್ನಾರಂಭಿಸಿದರು. ಆಗ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರ ದಾರಿ ತಪ್ಪಿಸಿ ‘ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣಾ ಮಸೂದೆ’ ಎಂಬ ಹೊಸ ನಿಯಮವನ್ನು ಜಾರಿಗೊಳಿಸಿದರು. ಈ ನಿಯಮದಂತೆ ತಲಾಖ್ ಪೀಡಿತ ಮಹಿಳೆಯರನ್ನು ಅವಳ ಸಂಬಂಧಿಕರು ನೋಡಿಕೊಳ್ಳಬೇಕು ಯಾರೂ ಇಲ್ಲವಾದರೆ ವಕ್ಸ್ ಮಂಡಳಿಯನ್ನು ಆಕೆ ಕೇಳಿಕೊಳ್ಳಬೇಕು. ಈ ನಿಯಮ ತೀರಾ ಹಾಸ್ಯಾಸ್ಪದ ಎಂಬಂತಾಯಿತು. ಹಕ್ಕೇ ಇಲ್ಲದ ಮುಸ್ಲಿಂ ಮಹಿಳೆಯರ ಯಾವ ಹಕ್ಕುಗಳನ್ನು ಈ ನಿಯಮ ರಕ್ಷಿಸುತ್ತದೆ? ವಕ್ಪ್ ಮಂಡಳಿಯ ಅನ್ಯ ಪುರುಷರೊಡನೆ ಆಕೆ ತನಗೆ ಜೀವನಾಂಶ ಕೊಡಿ ಎಂದು ಕೇಳತೊಡಗಿದರೆ ಪರಿಣಾಮವೇನಾಗಬಹುದು ಎಂಬುದನ್ನು ನಾನು ವಿವರಿಸಬೇಕಾಗಿಲ್ಲ. ಇಷ್ಟಕ್ಕೂ ಖುರಾನಿನ 2ನೇ ಸೂರದ 241ನೇ ವಾಕ್ಯ ಸ್ಪಷ್ಟವಾಗಿ ತಲಾಖ್ ಪೀಡಿತ ಮಹಿಳೆಯ ಮುಂದಿನ ಬದುಕಿಗಾಗಿ ಆಕೆಗೆ ಜೀವನಾಂಶ ನೀಡಬೇಕೆಂದು ಬರೆದಿದೆ. ಮುಸ್ಲಿಂ ಪುರುಷರು ಈ ಖುರ್‍ಆನಿನ ಈ ವಾಕ್ಯವನ್ನೇ ಜನರ ಕಣ್ಣಿನಿಂದ ಮಶಿಮಾ ಡಿ, ತಲಾಖ್ ಪೀಡಿತೆಗೆ ಜೀವನಾಂಶ ಧರ್ಮ ವಿರುದ್ಧ. ತಮ್ಮ ಧರ್ಮದಲ್ಲಿ ಸರಕಾರದ ಹಸ್ತಕ್ಷೇಪ ಎಂದು ಘೋಷಣೆ ಕೂಗಿದರು. ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರು ಬದುಕಿನ ಹಾದಿಯನ್ನು ಮುಂಬೈಯ ಕೆಂಪು ದೀಪದ ಅಡಿಯಲ್ಲಿ ಕಂಡುಕೊಂಡರು. ಧರ್ಮ ರಕ್ಷಕರೆಂಬ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಎಂಬ ಸಂಸ್ಥೆ ಧರ್ಮ ರಕ್ಷಣೆ ಆಯಿತೆಂದು ಸಂಭ್ರಮಾಚರಿಸಿದರು. ತಲಾಖ್ ಪೀಡಿತ ಮಹಿಳೆಯರ ಗತಿ ಏನಾಯಿತೆಂದು ಈ ಪುರುಷರು ಯೋಚಿಸುವ ಗೋಜಿಗೆ ಇಂದಿನವರೆಗೂ ಹೋಗಿಯೇ ಇಲ್ಲ. ಈ ಹೊಸ ನಿಯಮದ ವಿರುದ್ಧ ಹೋರಾಡಿದ ವಿದ್ಯಾವಂತ ಮುಸ್ಲಿಂ ಮಹಿಳೆಯರ ಮೇಲೆ ಕೂಡಾ ಈ ಜನರು ಜಾತಿ ಭ್ರಷ್ಟತೆಯ ಆರೋಪ ಹೊರಸಿದರು.
ಈಗಲೂ ತ್ರಿವಳಿ, ಬಾಯಿಮಾತಿನ ತಲಾಖನ್ನು ಕೇಂದ್ರ ಸರಕಾರ ನಿಷೇಧಿಸಿದ ಕಾರಣ ನೀಡಿ ಈ ಜನರು ಶರಿಯತ್ ರಕ್ಷಣೆಯ ನಾಟಕವಾಡುತ್ತಿದ್ದಾರೆ. ಕೇಂದ್ರ ಸರಕಾರ ತ್ರಿವಳಿ ತಲಾಖ್ ರದ್ಧತಿ ನಿಯಮದಿಂದ ಹಿಂದೆ ಸರಿಯಬಾರದೆಂದು ನನ್ನ ಕಳಕಳಿಯ ಮನವಿ.
ನಮ್ಮ ಸಂವಿಧಾನವು ಎಲ್ಲರಿಗೂ ತಮ್ಮ ಧಾರ್ಮಿಕ ನಿಯಮಗಳನ್ನು ಪಾಲಿಸುವ ಅಧಿಕಾರವನ್ನು ನೀಡಿದೆ. ಆದರೆ ಯಾವ ಧರ್ಮ ಕೂಡಾ ಮನುಷ್ಯರನ್ನು ಬದುಕಿನಲ್ಲಿ ಸಂಕಟ ಪಡುವಂತಹ ನಿಯಮಗಳನ್ನು ರೂಪಿಸುವುದಿಲ್ಲ. 1500 ವರ್ಷಗಳ ಹಿಂದೆ ಪ್ರವಾದಿಗಳು ಹೆಂಡತಿ ಬೇಡವಾದರೆ ಬೀದಿಗೆಸೆಯಿರಿ ಎಂದು ಹೇಳಿಯೂ ಇರಲಿಲ್ಲ. ಅವರು ಪುರುಷರಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ನೋಡಿಯೇ ಇಸ್ಲಾಂ(ಶಾಂತಿ) ಎಂಬ ಧರ್ಮ ಸ್ಥಾಪನೆ ಮಾಡಿದರು.
ಧರ್ಮದ ನಿಯಮಗಳು 1500 ವರ್ಷಗಳ ಹಿಂದೆ ನಡೆಯುತ್ತಿದ್ದಂತೆ ಈಗಲೂ ಇರಬೇಕೆನ್ನುವುದೇ ಮೂರ್ಖತನವಾಗುತ್ತದೆ. ಶರಿಯತ್ ರಕ್ಷಣೆಗೆ ಹೊರಟವರಿಗೆ ಶರಿಯತ್ ಎಂಬ ಕರ್ಮ ಶಾಸ್ತ್ರ ಯಾವಾಗ ಜಾರಿಯಾಯಿತೆಂದು ತಿಳಿದಿದೆಯೇ? ಪ್ರವಾದಿಗಳ ಮರಣಾನಂತರ 150 ವರ್ಷಗಳ ಬಳಿಕವಷ್ಟೆ ಧಾರ್ಮಿಕ ಗುರುಗಳು ಶರಿಯತ್‍ನ್ನು ಜಾರಿಗೊಳಿಸಿದರು. ಇಸ್ಲಾಂ ಧಾರ್ಮಿಕ ನಿಯಮಗಳು ಮಹಿಳೆಯರ ಮೇಲೆ ಅಧಿಕಾರ ಚಲಾಯಿಸಲು ಪುರುಷರಿಗೆ ಸಾಧ್ಯವಾಗುವಂತಹ ನಿಯಮಗಳನ್ನು ಶರಿಯತ್ ಎಂಬ ಹೆಸರಿನಲ್ಲಿ ಜಾರಿಗೊಳಿಸಿದರು.
ನಮ್ಮ ಸಂವಿಧಾನ ಸರ್ವರಿಗೂ ಸಮಾನತೆ ನೀಡಿದೆ. ವಿವಿಧ ಧಾರ್ಮಿಕ ನಿಯಮಗಳಿಂದಾಗಿ ಈ ಸಮಾನತೆ ಮುಸ್ಲಿಂ ಮಹಿಳೆಯರಿಗೆ ದೊರೆಯುತ್ತಿಲ್ಲ. ವಿವಾಹ, ವಿಚ್ಛೇದನ ಇವು ಯಾವುದು ಧಾರ್ಮಿಕ ನಿಯಮಗಳಲ್ಲ. ಇವೆಲ್ಲವೂ ಸಾಮಾಜಿಕ ನಿಯಮಗಳು ಇಂತಹ ಸಾಮಾಜಿಕ ನಿಯಮಗಳು ಮಹಿಳೆಯರಿಗೆ ಬದುಕಲು ಸಾಧ್ಯವಾಗದ ರೀತಿಯಲ್ಲಿ ಅವರಿಗೆ ಉಸಿರುಗಟ್ಟುವಂತಾದರೆ ಅವುಗಳನ್ನು ಕಾಲಕ್ಕನುಸಾರವಾಗಿ ಬದಲಾಯಿಸಬಹುದು. ನೀವು ಯಾವ ದೇಶದಲ್ಲಿ ಬದುಕುತಿದ್ದೀರೋ ಆ ದೇಶದ ಸಾಮಾಜಿಕ ನಿಯಮವನ್ನು ಅನುಸರಿಸಬಹುದು ಎಂಬುದು ಪ್ರವಾದಿಗಳ ಬೋಧನೆಯಾ.
ಇಂದು ನಮ್ಮ ಸುತ್ತಮುತ್ತಲಿನ ಸುಮಾರು ಹತ್ತಿಪ್ಪತ್ತು ದೇಶಗಳಲ್ಲಿ ತ್ರಿವಳಿ ತಲಾಖ್ ಪದ್ದತಿಯನ್ನು ರದ್ದುಪಡಿಸಲಾಗಿದೆ. ಅಲ್ಲಿ ಯಾರೂ ನಮ್ಮ ಧರ್ಮದಲ್ಲಿ ಹಸ್ತಕ್ಷೇಪವೆಂದು ಕಿರುಚಾಡಲಿಲ್ಲವಲ್ಲಾ? ಇತರ ಮುಸ್ಲಿಂ ರಾಷ್ಟ್ರಗಳು ಇಂತಹ ಅನ್ಯಾಯದ ನಿಯಮವನ್ನು ತಿದ್ದುಪಡಿ ಮಾಡಿದರೆ ಇಂಡಿಯಾ ಕೂಡಾ ಅದನ್ನು ಮಾಡಲು ಯಾರ ಅನುಮತಿಯನ್ನು ಪಡೆಯಬೇಕಾಗಿಲ್ಲ.
ನಾವೆಲ್ಲರೂ ನಮ್ಮ ಸಂವಿಧಾನಕ್ಕನುಸಾರವಾಗಿ ಬದುಕಬೇಕು. ನಮಗೆ ನಮ್ಮ ಧರ್ಮವೆನ್ನುವುದಾದರೆ ಮುಸ್ಲಿಮೇತರರೂ ಮನುಧರ್ಮಶಾಸ್ತ್ರ ನಮ್ಮ ಧರ್ಮವೆನ್ನುತ್ತಾರೆ. ಪೇಜಾವರ ಗುರುಗಳು ಹಾಗೂ ವಾರಣಾಸಿಯ ಧರ್ಮಗುರುಗಳೂ ನಮಗೆ ಸಂವಿಧಾನದಲ್ಲಿ ವಿಶ್ವಾಸವಿಲ್ಲ. ನಾವು ಮನುವಾದವನನುಸರಿಸುತ್ತೇವೆ ಎಂದು ಹೇಳತೊಡಗಿದ್ದಾರೆ. ನಮ್ಮ ದೇಶದಲ್ಲಿ ಅತ್ಯುತ್ತಮ ಸಂವಿಧಾನವಿದೆ. ನಾವೆಲ್ಲರೂ ಸೌಹಾರ್ದದಿಂದ ಈ ಸಂವಿಧಾನಕ್ಕನುಸಾರವಾಗಿ ವರ್ತಿಸತೊಡಗಿದರೆ ದೇಶದಲ್ಲಿ ಶಾಂತಿ ನೆಲೆಯೂರಬಹುದು. ಮುಸ್ಲಿಮರು ಎಷ್ಟು ಮಸೀದಿ ಕಟ್ಟಿಸಿಕೊಳ್ಳಲೂ ಅಭ್ಯಂತರವಿಲ್ಲ. ಒಂದೇ ಬೀದಿಯಲ್ಲಿ ಮೂರೋ ನಾಲ್ಕೋ ಮಸೀದಿಗಳಿರುವುದೂ ಇದೆ. ನಮ್ಮ ಧಾರ್ಮಿಕ ನಿಯಮಗಳನ್ನು ಯಾರೂ ತಡೆಯಲಾರರು. ನಮಗೆ ಎಲ್ಲರನ್ನು ಅರ್ಥ ಮಾಡಿಕೊಳ್ಳುವಂತಹ ಹೃದಯ ವಾತ್ಸಲ್ಯತೆ ಇರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...