Homeಅಂಕಣಗಳುನಮ್ಮ ಬೆನ್ನ ಹಿಂದೆ ನಡೆದ ಬೇಸಾಯೋ ಆಟ

ನಮ್ಮ ಬೆನ್ನ ಹಿಂದೆ ನಡೆದ ಬೇಸಾಯೋ ಆಟ

- Advertisement -
- Advertisement -

ಮೊನ್ನೆ ನಾವೆಲ್ಲ ಲಾಕಡೌನಿನ ಛಳಿಯಿಂದ ತಪ್ಪಿಸಿಕೊಳ್ಳಲಿಕ್ಕೆ ಮನಿಯೊಳಗ ಬೆಚ್ಚನೆ ಮಲಗಿದ್ದಾಗ ಹಣಕಾಸು ಸಚಿವೆ ನಿರ್ಮಲಾತಾಯಿ ಅವರು ಮೂರು ಪ್ರಮುಖ ನೀತಿ ಬದಲಾವಣೆಗಳನ್ನ ಘೋಷಣೆ ಮಾಡಿದಾರ.

ಅವು ಯಾವುಪಾ ಅಂದರ ಗುತ್ತಿಗೆ ಬೇಸಾಯ, ಎಪಿಎಂಸಿ ಕಾಯಿದೆ ಬದಲಾವಣೆ ಮತ್ತು ಅವಶ್ಯಕ ವಸ್ತು ಕಾಯಿದೆಗೆ ಅನವಶ್ಯಕ ಬದಲಾವಣೆ. ಇವು ರೈತರ ಬದಕು ಬದಲಾಯಿಸಲಿಕ್ಕೆ ಅವಶ್ಯಕ ಅಂತ ಅವರು ಹೇಳಿದರು.

ಆದರ ಇಷ್ಟ ಗಡಿಬಡಿಯೊಳಗ ರೈತರನ್ನು ಬದಲಾಯಿಸಬೇಕಾಗಿತ್ತೇನು? ಅವರಿಗೆ ಈಗ ಸಧ್ಯಕ್ಕ ಒಂದಿಷ್ಟು ಪರಿಹಾರ ಕೊಟ್ಟರ ಸಾಕಿತ್ತು ಅನ್ನೋ ಪ್ರಶ್ನೆಗೆ. ಹಂಗಲ್ಲಾ, ಈಗಿನ ಕೆಟ್ಟ ಪರಿಸ್ಥಿತಿ ಮುಗಿದ ನಂತರ ಯಾರು ಉಳೀತಾರಲ್ಲಾ, ಅವರನ್ನು ಬದಲಾಯಿಸಿತೇವಿ ಅಂತ ಸರಕಾರದವರ ಉತ್ತರ.

ಎಲ್ಲರಿಗೂ ಕಣ್ಣಿಗೆ ಕಾಣೋ ಕಣ್ಕಟ್ಟು ಅಂದರ ಅವಶ್ಯಕ ವಸ್ತು ಕಾಯಿದೆ ತಿದ್ದುಪಡಿ. ಇದು ಏನಪಾ ಅಂದರ ಕೆಲವು ವಸ್ತುಗಳು ಈ ದೇಶದ ಜನರಿಗೆ ಅವಶ್ಯವಾಗಿ ಬೇಕಾಗಿದ್ದಾವು, ಅವನ್ನು ಯಾರೂ ಕಳ್ಳಸಂತೆಯೊಳಗ ಮಾರಾಟ ಮಾಡಬಾರದು, ವಿನಾಕಾರಣ ಕೊರತೆ ಸೃಷ್ಟಿಸಬಾರದು, ಅಕಾರಣ ಹೆಚ್ಚು ಬೆಲೆಗೆ ಮಾರಾಟ ಮಾಡಬಾರದು, ಮಾಡಿದರ ಅವರನ್ನ ಜೈಲಿಗೆ ಹಾಕತೇವಿ ಅಂತ ಒಂದು ಕಾನೂನು. ಸಂಗ್ರಹ ಮಾಡಿ ಇಟ್ಟದ್ದರಿಂದ ಕೊರತೆ ಉಂಟಾದರ ಜಿಲ್ಲಾಧಿಕಾರಿ ಹೋಗಿ ಆ ಆಹಾರ ಪದಾರ್ಥ ಜಪ್ತು ಮಾಡೋ ಅವಕಾಶ ಇದರಾಗ ಐತಿ.

ಈ ಕಾಯಿದೆ ಚೌಕಟ್ಟಿನಾಗ – ಆಹಾರ, ನೀರು, ನಾಣ್ಯ ಹಾಗೂ ನೋಟು, ಪೆಟ್ರೋಲು, ಪೋಸ್ಟು, ದೇಶದ ರಕ್ಷಣೆ, ರಸ್ತೆ- ಚರಂಡಿ ಸ್ವಚ್ಛತೆ, ಚುನಾವಣೆ , ಗೊಬ್ಬರ, ವಿದ್ಯುತ್ತು, ಕಲ್ಲಿದ್ದಲು, ಮಣ್ಣು -ಮಸಿ, ಎಲ್ಲಾ ಬರತಾವು.

ಇದರಾಗಿಂದ ಆಹಾರ ಧಾನ್ಯ, ಅಡುಗೆ ಎಣ್ಣೆ, ತರಕಾರಿ ಇತ್ಯಾದಿಗಳನ್ನು ಹೊರಗಡೆ ತೆಗೆಯೋ ತಯಾರಿ ನಡತೇತಿ. ಯಾಕಂದರ ಅವು ಅವಶ್ಯ ಅಲ್ಲನೋಡ್ರಿ. ಮನುಷ್ಯ ಆಹಾರ ಇಲ್ಲದೇ ಇರಬಹುದು, ಆದರ ಪೆಟ್ರೋಲು, ಗೊಬ್ಬರ ಇಲ್ಲದೇ ಇರಲಿಕ್ಕೆ ಆಗೋದಿಲ್ಲಲಾ. ಅದಕ್ಕ. ಇನ್ನ ಹಿಂಗೆಲ್ಲಾ ಬ್ರಿಟಿಷರ ಕಾಲದ ಕಾನೂನುಗಳಿಂದ ನಮ್ಮ ದೇಶದಾಗ ಆಹಾರ ಸಂಗ್ರಹಣೆ ಕಮ್ಮಿ ಆಗೇತಿ, ಕೃಷಿ ಉತ್ಪನ್ನ ರಫ್ತು ಆಗಲೊಲ್ಲದು, ಆಹಾರ ಸಂಸ್ಕರಣೆ ಉದ್ದಿಮೆ ಹಿಂದ ಉಳದೇತಿ ಅಂತ ಕೆಲವು ವ್ಯಾಪಾರಿಗಳು ತಮ್ಮ ಹಿತೈಷಿಗಳಾದ ಆಳುವ ಪಕ್ಷದ ನಾಯಕರ ಜೊತೆಗೆ ತಕರಾರು ತಗದರು. ಬಡವರು- ಹಿಂದುಳಿದವರು- ಅಧಿಕಾರ ಹೀನರು ಮಾತು ತಗದು ಹಾಕಬಹುದು, ಆದರ ಚುನಾವಣೆ ಖರ್ಚು ಕೊಡೋ ಧಣಿ- ಸೇಠುಗಳ ಮಾತು ಪಾಲಿಸಲಾರದಂಗ ಇರಲಿಕ್ಕೆ ಆಗತದೇನು? ಅದಕ್ಕ ಬಂತು ಒಂದು ಘೋಷಣೆ. ಇನ್ನ ಮ್ಯಾಲೆ ಆಹಾರ ಸಂಸ್ಕರಣೆ- ಸಂಗ್ರಹಣೆ- ರಫ್ತು ಮುಂತಾದ ದಂಧೆ ಮಾಡೋರು ಎಲ್ಲಾ ಎಷ್ಟು ಬೇಕು ಅಷ್ಟು ಆಹಾರ- ಎಣ್ಣೆ- ತರಕಾರಿ ಸಂಗ್ರಹ ಮಾಡಬಹುದು. ಯಾವಾನೂ ಅವರಿಗೆ ಬೈಯಂಗಿಲ್ಲ. ಬರಗಾಲ- ಕ್ಷಾಮದಾಗ ಅವರನ್ನ ಜೈಲಿಗೆ ಹಾಕೋದಿರಲಿ, ಅವರಿಗೆ ನೋಟೀಸು ಕೊಡಂಗಿಲ್ಲ.

ಅವರ ಹತ್ತರ ಹೋಗಿ ಮನವಿ ಮಾಡಬಹುದು ಅಷ್ಟ. ಇದಕ್ಕ ಸಂಬಂಧ ಪಟ್ಟದ್ದು ಅಂದರ ಎಪಿಎಂಸಿ ಕಾಯಿದೆ ತಿದ್ದುಪಡಿ. ಇದರ ಪ್ರಕಾರ ರೈತರು ತಮ್ಮ ಉತ್ಪನ್ನಗಳನ್ನ ಎಪಿಎಂಸಿ ಯಾರ್ಡಿನಾಗ, ಟೆಂಡರ ಪ್ರಕ್ರಿಯೆ ಮೂಲಕ ಮಾಡಬೇಕು. ಯಾವುದರ ಕಂಪನಿಗೆ, ಸರಕಾರಕ್ಕ ಅಥವಾ ಕುಟುಂಬಗಳಿಗೆ ನೇರವಾಗಿ ಮಾರಂಗಿಲ್ಲ. ಕಳೆದ ಆರು ದಶಕಗಳಿಂದ ಇದು ನಡಕೊಂಡು ಬಂದದ. ಇದರಿಂದ ರೈತರಿಗೆ ಮಾರಲಿಕ್ಕೆ ಒಂದು ಜಾಗ ಸಿಕ್ಕದ, ಒಬ್ಬರ ಕಡೆ ಮಾರಿಕೊಂಡು ಕೈ ಕಟ್ಟಿಸಿಕೊಳ್ಳೋ ಅನಿವಾರ್ಯದಿಂದ ತಪ್ಪಿಸೇತಿ.

ಆದರ ಇದನ್ನ ಬದಲಿಸಿ, ಇನ್ನ ಮ್ಯಾಲೆ ದೊಡ್ಡ ದೊಡ್ಡ ಕಂಪನಿಗಳು ರೈತರ ಹೊಲದ ಬಾಗಿಲಿಗೆ ಹೋಗಿ ಖರೀದಿಸುವ ನೀತಿ( ಫಾರ್ಮ ಗೇಟು ಪಾಲಿಸಿ) ತರಾಕ ಹತ್ಯಾರು. ಎಪಿಎಂಸಿಯೊಳಗ ಅನೇಕ ತೊಂದರೆ- ಲಫಡಾ ಇರಬಹುದು. ಆದರ ಅದರ ಸದಸ್ಯರು ರೈತರಿಂದ ಚುನಾಯಿತರಾದವರು. ಅವರನ್ನ ಐದು ವರ್ಷದ ನಂತರ ಬದಲಿಸಬಹುದು. ಬಹುರಾಷ್ಟ್ರೀಯ ಕಂಪನಿಯ ಮಾಲಕರನ್ನ ಬದಲಾಯಿಸಲಿಕ್ಕೆ ನಮ್ಮ ಘಾಳೆಪ್ಪಾ ಧೂಳಪ್ಪಾ ಬಟಾಬಯಲಪ್ಪನವರ್ ಅನ್ನೋ ಹೆಸರಿನ ರೈತರು ಏನು ಷೇರು ಮಾರ್ಕೆಟದಾಗ ಆ ಕಂಪನಿಯ ಷೇರು ಖರೀದಿ ಮಾಡಿದಾರೇನು? ಹಳ್ಳಿಯೊಳಗ ಕುಂತ ರೈತನಿಗೆ ಬಂಬಾಯಿ- ದಿಲ್ಲಿ ಕಂಪನಿಗಳ ವಿರುದ್ಧ ಹೋರಾಡೋ ಶಕ್ತಿ ಎಲ್ಲೆ ಬರತೇತಿ. ಈಗಾಗಲೇ ಕೃಷಿ ವಿಮೆ ಕಂಪನಿಗಳ ವಿರುದ್ಧ ಹೋರಾಟ ಮಾಡಲಿಕ್ಕೆ ಆಗಲಾರದೇ ರೈತರು ಸುಮ್ಮನೆ ಆಗಿದಾರು. ಇನ್ನ ಖರೀದಿದಾರರ ವಿರುದ್ಧ ಏನು ಮಾಡತಾರು.

ಅಲ್ಲದೇ ಆಹಾರ ಕೊರತೆ ಆದಾಗ ಸರಕಾರ ರೈತರಿಂದ ಖರೀದಿಸಿ ಜನರಿಗೆ ಕೊಡಬಹುದು, ಎಪಿಎಂಸಿ ಮ್ಯಾಲೆ ಅವಲಂಬನ ಆಗಬಹುದು. ಅದೆಲ್ಲಾ ಬಿಟ್ಟು ಯಾವಾನೋ ಡೊನಾಲ್ಡ ಟ್ರಂಪನ ಅಳಿಯಾನ ಕಂಪನಿ ಮ್ಯಾಲೆ ಒಬ್ಬ ಜಿಲ್ಲಾಧಿಕಾರಿ ಏನು ಒತ್ತಡ ಹಾಕಲಿಕ್ಕೆ ಬರತೇತಿ?

ಇಷ್ಟರಾಗ ಅತಿ ಎಡವಟ್ಟು ಆಗಿದ್ದು, ಆದರ ಜನರಿಗೆ ಯಾರಿಗೂ ಗೊತ್ತಾಗದೇ ಇರೋದು ಅಂದರ ಗುತ್ತಿಗೆ ಬೇಸಾಯ ಪದ್ಧತಿ. ಇದೇನಪಾ ಅಂದರ ದಶಕಗಳವರೆಗೆ ಬಡಜನರು ಹೋರಾಟ ಮಾಡಿ ಗಿಟ್ಟಿಸಿಕೊಂಡ ಭೂಮಿಯ ಹಕ್ಕಿಗೆ ಬೆನ್ನಿಗೆ ಹಾಕಿದ ಚೂರಿ.

ಮ್ಯಾಲಿನಿಂದ ನೋಡಿದರ ಇದು ಬೆಳೆಯುವವರು ಹಾಗೂ ಖರೀದಿಸುವವರ ನಡುವೆ ಬೀಜಾ ಹಾಕೋ ಟೈಮ್‍ದಾಗ ಒಪ್ಪಂದ ಮಾಡಿಕೊಡಲಿಕ್ಕೆ ಅನುವು ಮಾಡಿಕೊಡೋ ಕಾಯಿದೆ. ಆದರ ಅದರಾಗ ರೈತನ ಬೆಳಿಗೆ ಬೆಲೆ ನಿರ್ಧಾರ ಮಾಡೋದು ಅಂದಿನ ಮಾರುಕಟ್ಟೆ ಅಲ್ಲಾ, ಅವನು ಒಂದು ವರ್ಷದ ಹಿಂದೆ ಯಾವುದೋ ಕಂಪನಿ ಜೊತೆ ಮಾಡಿಕೊಂಡ ಒಪ್ಪಂದ ಅಂತ ಆಗತೇತಿ. ಅದು ರೈತನ ಹಿತದ ವಿರುದ್ಧ ಆದರ ಹೆಂಗ?

ಇನ್ನೊಂದು ಮಾತಂದರ ಕೃಷಿ ಭೂಮಿಯನ್ನ ಲೀಸು ಕೊಡಲಿಕ್ಕೆ ಇಲ್ಲಿವರೆಗೂ ಅವಕಾಶ ಇಲ್ಲ. ಹಳ್ಳಿಯೊಳಗ ಉತ್ಪನ್ನ ಹಂಚಿಕೆ ಆಧಾರದ ಮೇಲೆ ಮಾಲಿಕರು – ರೈತರ ನಡುವೆ ಬಾಯಿ ಮಾತಿನ ಒಪ್ಪಂದ ನಡದಾವು. ಅದು ಬ್ಯಾರೆ. ಆದರ ಗುತ್ತಿಗೆ ಬೇಸಾಯ ಕಾನೂನು ಅಂದರ ಬಡ ರೈತರ ಭೂಮಿಯನ್ನ ನೂರು ವರ್ಷ ಯಾವುದೋ ದೊಡ್ಡ ಕಂಪನಿಗೆ ಲೀಸು ಕೊಡಿಸೋ ಕಾಯಿದೆ. ಅಂದರ ಸುಮಾರು ನಾಲ್ಕು ತಲೆಮಾರು ಆ ಜಮೀನಿನ ಕಡೆ ಆ ರೈತರ ಕುಟುಂಬದವರು ನೋಡಂಗಿಲ್ಲ. ನೂರು ವರ್ಷ ರಂಟಿ – ಕುಂಟಿ ಹೊಡಿಯೋ ಅಭ್ಯಾಸ ಬಿಟ್ಟು ಹೋತು ಅಂದರ ಆಮ್ಯಾಲೆ ಏನು ಮಾಡತಾರ? ಆವಾಗ ರೈತರ ಮರಿ ಮಕ್ಕಳಿಗೆ ಬೀಜಾ ಹಾಕೋದು, ನೀರಾವರಿ ಮಾಡೋದು ಯಾರು ಹೇಳಿ ಕೊಡಬೇಕು?

ಬೇಸಾಯ ಅಂದರೆ ನೀ ಸಾಯ, ನಾ ಸಾಯ, ಮನೆ ಮಂದಿಎಲ್ಲ ಸಾಯಾ ಅನ್ನೋದು ಹಳೇ ಮೈಸೂರು ಕಡೆಯ ಹಳೇ ಜೋಕು. ಈ ಗುತ್ತಿಗೆ ಬೇಸಾಯದ ಸ್ಪೆಲಿಂಗ್ ಬದಲಾಗಿ ಗುದ್ದಿಗೆ ಬಿದ್ದು ಸಾಯ ಅಂತ ಆಗಬಾರದು ಅಷ್ಟ.

ಕೃಷಿಗೆ ಅಗ್ರಿಕಲ್ಚರ್ ಅಂತ ಅನ್ನೋದು ಯಾಕಂದರ ಅದು ಬರೇ ವ್ಯಾಪಾರ – ವ್ಯವಹಾರ ಅಲ್ಲ. ಅದು ನಮ್ಮ ಜೀವನ ಶೈಲಿ ಅಂತ ತಿಳಕೊಂಡು ಭಾಳ ಮಂದಿ ರೈತರು ಮಾಡತಾರು. ಬರೇ ಲಾಭ- ನಷ್ಟದ ಲೆಕ್ಕಾಚಾರ ಇದ್ದಿದರ ಅವರು ಜಮೀನು ಬಿಟಗೊಟ್ಟು ಹೋಗಿ ನಾವೆಲ್ಲಾ ಅಕ್ಕಿ ಬದಲಿ ಮ್ಯಾಗಿ ತಿನಬೇಕಾಗಿತ್ತು.

ಅದನ್ನ ಬಿಟ್ಟು ಇದು ಆಹಾರ ತಯಾರಿಕೆ ಉದ್ದಿಮೆ ಅಂತ ಹೇಳಿ ಷೇರು ಮಾರ್ಕೆಟ್ಟಿನ ದಲ್ಲಾಳಿಗಳೆಲ್ಲಾ ಇದರಾಗ ರೊಕ್ಕಾ ಹಾಕಿ ಇದನ್ನ ತೇಜಿ- ಮಂದಿ ವ್ಯಾಪಾರ ಮಾಡಿದರ ಕಷ್ಟ.

ಈ ಎಲ್ಲಾ ತಿದ್ದುಪಡಿಗಳನ್ನ ಎಲ್ಲಾ ರಾಜ್ಯಗಳು ಇದನ್ನು ಪಾಲಿಸಬೇಕು ಅಂತ ಬ್ಯಾರೆ ದೆಹಲಿ ದೊರೆಗಳು ಫರಮಾನು ಹೊರಡಿಸಿದಾರ.

ಒಕ್ಕೂಟ ವ್ಯವಸ್ಥೆಗೆ ಕ್ಯಾರೆ ಅನ್ನದ ಈ ಸರಕಾರ ರಾಜ್ಯಗಳು ಅಂದರ ತಮ್ಮ ಗೊಂಬೆ ಆಟದ ಪಾತ್ರಧಾರಿಗಳು ಅಂತ ತಿಳಕೊಂಡೇತಿ. ಹಿಂಗಾಗಿ ಬ್ಯಾರೆ ದಾರಿ ಇಲ್ಲ.

ಅದೂ ಆಳುವ ಪಕ್ಷದ- ವಿರೋಧ ಪಕ್ಷದ ಸರಕಾರಗಳ ನಡುವೆ ವಿರೋಧ ತಂದು ಇಡಬಹುದು.

ವಿದ್ಯುತ್ ದರ ನಿರ್ಧಾರದ ಬಗ್ಗೆ ಅಧ್ಯಯನ ನಡೆಸಿದ ಅನುಭಾವಿ ಆರ್ಥಿಕ ತಜ್ಞ ಡಾ. ನಂಜುಂಡಪ್ಪ ಅವರು ಒಂದು ಉದಾಹರಣೆ ಕೊಡತಿದ್ದರು.

ಬಿಹಾರದ ಕೆಲವು ಪ್ರದೇಶಗಳಲ್ಲಿ ಎಷ್ಟೋ ವರ್ಷಗಳ ತನಕಾ ವಿದ್ಯುತ ಸಾಗಣೆಯೊಳಗ ಹಾನಿ ಆಗಿರಲಿಲ್ಲ. ಅದನ್ನ ನೋಡಲಿಕ್ಕೆ ಹೋದ ವಿಶ್ವ ಬ್ಯಾಂಕಿನ ತಂಡಕ್ಕ ಇಂಜಿನಿಯರ ಒಬ್ಬರು ಹೇಳಿದರಂತ “ನೋಡ್ರಿ ಸರ್, ಈ ಯೋಜನೆ ಆರಂಭ ಆದಾಗಿನಿಂದ ಇದರಾಗ ವಿದ್ಯುತ್ ಹರದೇ ಇಲ್ಲ. ಇನ್ನ ಹಾನಿ ಆಗಲಿಕ್ಕೆ ಹೆಂಗ ಸಾಧ್ಯ ಐತಿ?”

ಹಂಗನ ಇನ್ನೂವರೆಗೆ ದೇಶದ ಕೆಲವು ಹಿಂದುಳಿದ ರಾಜ್ಯಗಳು- ಬಿಹಾರ- ಒಡಿಷಾ- ಛತ್ತೀಸಗಡ- ಜಾರಖಂಡ ಇತ್ಯಾದಿಗಳೊಳಗ ಎಪಿಎಂಸಿ ವ್ಯವಸ್ಥೆನೇ ಇಲ್ಲ. ಇದ್ದರೂ ಪರಿಣಾಮಕಾರಿಯಾಗಿಲ್ಲ. ಇನ್ನ ಅಲ್ಲಿನ ರೈತರಿಗೆ ಈ ತಿದ್ದುಪಡಿಯಿಂದ ಏನು ಕೇಡು ಆಗಲಿಕ್ಕೆ ಸಾಧ್ಯ ಐತಿ?

ಈ ರೀತಿಯ ನೀತಿಗಳಿಗೆ ಯುರೋಪಿನ್ಯಾಗ `ಲೆಸೇ ಫೇರು’ (`ತಿಳದದ್ದು ಮಾಡಿಕೋಳಿ ಬಿಡ್ರಿ’) ಅಂತ ಅಂತಾರ. ಇದನ್ನೆಲ್ಲಾ ಮಾಡಿದ ಸರಕಾರಕ್ಕ- ಪಕ್ಷಕ್ಕ ನಮ್ಮ ಜನಾ ಮುಂದಿನ ಚುನಾವಣೆಯೊಳಗ ತಿಳದದ್ದು ಮಾಡಿದರ, ಏನು ಗತಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ನ ಕಿರೀಟ ರತ್ನ ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್ ದಾಳಿ : ಟ್ರಂಪ್ ಹೇಳಿಕೆ

ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ 'ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿ' ನಡೆಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ದ್ವೀಪದಲ್ಲಿರುವ ತೈಲ ಮೂಲಸೌಕರ್ಯಗಳನ್ನು ನಾಶಪಡಿಸದೆ ಇರಲು ನಿರ್ಧರಿಸಿದ ಅಮೆರಿಕ ಪಡೆಗಳು, ಅಲ್ಲಿನ ಮಿಲಿಟರಿ ಕೇಂದ್ರಗಳನ್ನು...

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...