Homeಅಂಕಣಗಳುನಮ್ಮ ಬೆನ್ನ ಹಿಂದೆ ನಡೆದ ಬೇಸಾಯೋ ಆಟ

ನಮ್ಮ ಬೆನ್ನ ಹಿಂದೆ ನಡೆದ ಬೇಸಾಯೋ ಆಟ

- Advertisement -
- Advertisement -

ಮೊನ್ನೆ ನಾವೆಲ್ಲ ಲಾಕಡೌನಿನ ಛಳಿಯಿಂದ ತಪ್ಪಿಸಿಕೊಳ್ಳಲಿಕ್ಕೆ ಮನಿಯೊಳಗ ಬೆಚ್ಚನೆ ಮಲಗಿದ್ದಾಗ ಹಣಕಾಸು ಸಚಿವೆ ನಿರ್ಮಲಾತಾಯಿ ಅವರು ಮೂರು ಪ್ರಮುಖ ನೀತಿ ಬದಲಾವಣೆಗಳನ್ನ ಘೋಷಣೆ ಮಾಡಿದಾರ.

ಅವು ಯಾವುಪಾ ಅಂದರ ಗುತ್ತಿಗೆ ಬೇಸಾಯ, ಎಪಿಎಂಸಿ ಕಾಯಿದೆ ಬದಲಾವಣೆ ಮತ್ತು ಅವಶ್ಯಕ ವಸ್ತು ಕಾಯಿದೆಗೆ ಅನವಶ್ಯಕ ಬದಲಾವಣೆ. ಇವು ರೈತರ ಬದಕು ಬದಲಾಯಿಸಲಿಕ್ಕೆ ಅವಶ್ಯಕ ಅಂತ ಅವರು ಹೇಳಿದರು.

ಆದರ ಇಷ್ಟ ಗಡಿಬಡಿಯೊಳಗ ರೈತರನ್ನು ಬದಲಾಯಿಸಬೇಕಾಗಿತ್ತೇನು? ಅವರಿಗೆ ಈಗ ಸಧ್ಯಕ್ಕ ಒಂದಿಷ್ಟು ಪರಿಹಾರ ಕೊಟ್ಟರ ಸಾಕಿತ್ತು ಅನ್ನೋ ಪ್ರಶ್ನೆಗೆ. ಹಂಗಲ್ಲಾ, ಈಗಿನ ಕೆಟ್ಟ ಪರಿಸ್ಥಿತಿ ಮುಗಿದ ನಂತರ ಯಾರು ಉಳೀತಾರಲ್ಲಾ, ಅವರನ್ನು ಬದಲಾಯಿಸಿತೇವಿ ಅಂತ ಸರಕಾರದವರ ಉತ್ತರ.

ಎಲ್ಲರಿಗೂ ಕಣ್ಣಿಗೆ ಕಾಣೋ ಕಣ್ಕಟ್ಟು ಅಂದರ ಅವಶ್ಯಕ ವಸ್ತು ಕಾಯಿದೆ ತಿದ್ದುಪಡಿ. ಇದು ಏನಪಾ ಅಂದರ ಕೆಲವು ವಸ್ತುಗಳು ಈ ದೇಶದ ಜನರಿಗೆ ಅವಶ್ಯವಾಗಿ ಬೇಕಾಗಿದ್ದಾವು, ಅವನ್ನು ಯಾರೂ ಕಳ್ಳಸಂತೆಯೊಳಗ ಮಾರಾಟ ಮಾಡಬಾರದು, ವಿನಾಕಾರಣ ಕೊರತೆ ಸೃಷ್ಟಿಸಬಾರದು, ಅಕಾರಣ ಹೆಚ್ಚು ಬೆಲೆಗೆ ಮಾರಾಟ ಮಾಡಬಾರದು, ಮಾಡಿದರ ಅವರನ್ನ ಜೈಲಿಗೆ ಹಾಕತೇವಿ ಅಂತ ಒಂದು ಕಾನೂನು. ಸಂಗ್ರಹ ಮಾಡಿ ಇಟ್ಟದ್ದರಿಂದ ಕೊರತೆ ಉಂಟಾದರ ಜಿಲ್ಲಾಧಿಕಾರಿ ಹೋಗಿ ಆ ಆಹಾರ ಪದಾರ್ಥ ಜಪ್ತು ಮಾಡೋ ಅವಕಾಶ ಇದರಾಗ ಐತಿ.

ಈ ಕಾಯಿದೆ ಚೌಕಟ್ಟಿನಾಗ – ಆಹಾರ, ನೀರು, ನಾಣ್ಯ ಹಾಗೂ ನೋಟು, ಪೆಟ್ರೋಲು, ಪೋಸ್ಟು, ದೇಶದ ರಕ್ಷಣೆ, ರಸ್ತೆ- ಚರಂಡಿ ಸ್ವಚ್ಛತೆ, ಚುನಾವಣೆ , ಗೊಬ್ಬರ, ವಿದ್ಯುತ್ತು, ಕಲ್ಲಿದ್ದಲು, ಮಣ್ಣು -ಮಸಿ, ಎಲ್ಲಾ ಬರತಾವು.

ಇದರಾಗಿಂದ ಆಹಾರ ಧಾನ್ಯ, ಅಡುಗೆ ಎಣ್ಣೆ, ತರಕಾರಿ ಇತ್ಯಾದಿಗಳನ್ನು ಹೊರಗಡೆ ತೆಗೆಯೋ ತಯಾರಿ ನಡತೇತಿ. ಯಾಕಂದರ ಅವು ಅವಶ್ಯ ಅಲ್ಲನೋಡ್ರಿ. ಮನುಷ್ಯ ಆಹಾರ ಇಲ್ಲದೇ ಇರಬಹುದು, ಆದರ ಪೆಟ್ರೋಲು, ಗೊಬ್ಬರ ಇಲ್ಲದೇ ಇರಲಿಕ್ಕೆ ಆಗೋದಿಲ್ಲಲಾ. ಅದಕ್ಕ. ಇನ್ನ ಹಿಂಗೆಲ್ಲಾ ಬ್ರಿಟಿಷರ ಕಾಲದ ಕಾನೂನುಗಳಿಂದ ನಮ್ಮ ದೇಶದಾಗ ಆಹಾರ ಸಂಗ್ರಹಣೆ ಕಮ್ಮಿ ಆಗೇತಿ, ಕೃಷಿ ಉತ್ಪನ್ನ ರಫ್ತು ಆಗಲೊಲ್ಲದು, ಆಹಾರ ಸಂಸ್ಕರಣೆ ಉದ್ದಿಮೆ ಹಿಂದ ಉಳದೇತಿ ಅಂತ ಕೆಲವು ವ್ಯಾಪಾರಿಗಳು ತಮ್ಮ ಹಿತೈಷಿಗಳಾದ ಆಳುವ ಪಕ್ಷದ ನಾಯಕರ ಜೊತೆಗೆ ತಕರಾರು ತಗದರು. ಬಡವರು- ಹಿಂದುಳಿದವರು- ಅಧಿಕಾರ ಹೀನರು ಮಾತು ತಗದು ಹಾಕಬಹುದು, ಆದರ ಚುನಾವಣೆ ಖರ್ಚು ಕೊಡೋ ಧಣಿ- ಸೇಠುಗಳ ಮಾತು ಪಾಲಿಸಲಾರದಂಗ ಇರಲಿಕ್ಕೆ ಆಗತದೇನು? ಅದಕ್ಕ ಬಂತು ಒಂದು ಘೋಷಣೆ. ಇನ್ನ ಮ್ಯಾಲೆ ಆಹಾರ ಸಂಸ್ಕರಣೆ- ಸಂಗ್ರಹಣೆ- ರಫ್ತು ಮುಂತಾದ ದಂಧೆ ಮಾಡೋರು ಎಲ್ಲಾ ಎಷ್ಟು ಬೇಕು ಅಷ್ಟು ಆಹಾರ- ಎಣ್ಣೆ- ತರಕಾರಿ ಸಂಗ್ರಹ ಮಾಡಬಹುದು. ಯಾವಾನೂ ಅವರಿಗೆ ಬೈಯಂಗಿಲ್ಲ. ಬರಗಾಲ- ಕ್ಷಾಮದಾಗ ಅವರನ್ನ ಜೈಲಿಗೆ ಹಾಕೋದಿರಲಿ, ಅವರಿಗೆ ನೋಟೀಸು ಕೊಡಂಗಿಲ್ಲ.

ಅವರ ಹತ್ತರ ಹೋಗಿ ಮನವಿ ಮಾಡಬಹುದು ಅಷ್ಟ. ಇದಕ್ಕ ಸಂಬಂಧ ಪಟ್ಟದ್ದು ಅಂದರ ಎಪಿಎಂಸಿ ಕಾಯಿದೆ ತಿದ್ದುಪಡಿ. ಇದರ ಪ್ರಕಾರ ರೈತರು ತಮ್ಮ ಉತ್ಪನ್ನಗಳನ್ನ ಎಪಿಎಂಸಿ ಯಾರ್ಡಿನಾಗ, ಟೆಂಡರ ಪ್ರಕ್ರಿಯೆ ಮೂಲಕ ಮಾಡಬೇಕು. ಯಾವುದರ ಕಂಪನಿಗೆ, ಸರಕಾರಕ್ಕ ಅಥವಾ ಕುಟುಂಬಗಳಿಗೆ ನೇರವಾಗಿ ಮಾರಂಗಿಲ್ಲ. ಕಳೆದ ಆರು ದಶಕಗಳಿಂದ ಇದು ನಡಕೊಂಡು ಬಂದದ. ಇದರಿಂದ ರೈತರಿಗೆ ಮಾರಲಿಕ್ಕೆ ಒಂದು ಜಾಗ ಸಿಕ್ಕದ, ಒಬ್ಬರ ಕಡೆ ಮಾರಿಕೊಂಡು ಕೈ ಕಟ್ಟಿಸಿಕೊಳ್ಳೋ ಅನಿವಾರ್ಯದಿಂದ ತಪ್ಪಿಸೇತಿ.

ಆದರ ಇದನ್ನ ಬದಲಿಸಿ, ಇನ್ನ ಮ್ಯಾಲೆ ದೊಡ್ಡ ದೊಡ್ಡ ಕಂಪನಿಗಳು ರೈತರ ಹೊಲದ ಬಾಗಿಲಿಗೆ ಹೋಗಿ ಖರೀದಿಸುವ ನೀತಿ( ಫಾರ್ಮ ಗೇಟು ಪಾಲಿಸಿ) ತರಾಕ ಹತ್ಯಾರು. ಎಪಿಎಂಸಿಯೊಳಗ ಅನೇಕ ತೊಂದರೆ- ಲಫಡಾ ಇರಬಹುದು. ಆದರ ಅದರ ಸದಸ್ಯರು ರೈತರಿಂದ ಚುನಾಯಿತರಾದವರು. ಅವರನ್ನ ಐದು ವರ್ಷದ ನಂತರ ಬದಲಿಸಬಹುದು. ಬಹುರಾಷ್ಟ್ರೀಯ ಕಂಪನಿಯ ಮಾಲಕರನ್ನ ಬದಲಾಯಿಸಲಿಕ್ಕೆ ನಮ್ಮ ಘಾಳೆಪ್ಪಾ ಧೂಳಪ್ಪಾ ಬಟಾಬಯಲಪ್ಪನವರ್ ಅನ್ನೋ ಹೆಸರಿನ ರೈತರು ಏನು ಷೇರು ಮಾರ್ಕೆಟದಾಗ ಆ ಕಂಪನಿಯ ಷೇರು ಖರೀದಿ ಮಾಡಿದಾರೇನು? ಹಳ್ಳಿಯೊಳಗ ಕುಂತ ರೈತನಿಗೆ ಬಂಬಾಯಿ- ದಿಲ್ಲಿ ಕಂಪನಿಗಳ ವಿರುದ್ಧ ಹೋರಾಡೋ ಶಕ್ತಿ ಎಲ್ಲೆ ಬರತೇತಿ. ಈಗಾಗಲೇ ಕೃಷಿ ವಿಮೆ ಕಂಪನಿಗಳ ವಿರುದ್ಧ ಹೋರಾಟ ಮಾಡಲಿಕ್ಕೆ ಆಗಲಾರದೇ ರೈತರು ಸುಮ್ಮನೆ ಆಗಿದಾರು. ಇನ್ನ ಖರೀದಿದಾರರ ವಿರುದ್ಧ ಏನು ಮಾಡತಾರು.

ಅಲ್ಲದೇ ಆಹಾರ ಕೊರತೆ ಆದಾಗ ಸರಕಾರ ರೈತರಿಂದ ಖರೀದಿಸಿ ಜನರಿಗೆ ಕೊಡಬಹುದು, ಎಪಿಎಂಸಿ ಮ್ಯಾಲೆ ಅವಲಂಬನ ಆಗಬಹುದು. ಅದೆಲ್ಲಾ ಬಿಟ್ಟು ಯಾವಾನೋ ಡೊನಾಲ್ಡ ಟ್ರಂಪನ ಅಳಿಯಾನ ಕಂಪನಿ ಮ್ಯಾಲೆ ಒಬ್ಬ ಜಿಲ್ಲಾಧಿಕಾರಿ ಏನು ಒತ್ತಡ ಹಾಕಲಿಕ್ಕೆ ಬರತೇತಿ?

ಇಷ್ಟರಾಗ ಅತಿ ಎಡವಟ್ಟು ಆಗಿದ್ದು, ಆದರ ಜನರಿಗೆ ಯಾರಿಗೂ ಗೊತ್ತಾಗದೇ ಇರೋದು ಅಂದರ ಗುತ್ತಿಗೆ ಬೇಸಾಯ ಪದ್ಧತಿ. ಇದೇನಪಾ ಅಂದರ ದಶಕಗಳವರೆಗೆ ಬಡಜನರು ಹೋರಾಟ ಮಾಡಿ ಗಿಟ್ಟಿಸಿಕೊಂಡ ಭೂಮಿಯ ಹಕ್ಕಿಗೆ ಬೆನ್ನಿಗೆ ಹಾಕಿದ ಚೂರಿ.

ಮ್ಯಾಲಿನಿಂದ ನೋಡಿದರ ಇದು ಬೆಳೆಯುವವರು ಹಾಗೂ ಖರೀದಿಸುವವರ ನಡುವೆ ಬೀಜಾ ಹಾಕೋ ಟೈಮ್‍ದಾಗ ಒಪ್ಪಂದ ಮಾಡಿಕೊಡಲಿಕ್ಕೆ ಅನುವು ಮಾಡಿಕೊಡೋ ಕಾಯಿದೆ. ಆದರ ಅದರಾಗ ರೈತನ ಬೆಳಿಗೆ ಬೆಲೆ ನಿರ್ಧಾರ ಮಾಡೋದು ಅಂದಿನ ಮಾರುಕಟ್ಟೆ ಅಲ್ಲಾ, ಅವನು ಒಂದು ವರ್ಷದ ಹಿಂದೆ ಯಾವುದೋ ಕಂಪನಿ ಜೊತೆ ಮಾಡಿಕೊಂಡ ಒಪ್ಪಂದ ಅಂತ ಆಗತೇತಿ. ಅದು ರೈತನ ಹಿತದ ವಿರುದ್ಧ ಆದರ ಹೆಂಗ?

ಇನ್ನೊಂದು ಮಾತಂದರ ಕೃಷಿ ಭೂಮಿಯನ್ನ ಲೀಸು ಕೊಡಲಿಕ್ಕೆ ಇಲ್ಲಿವರೆಗೂ ಅವಕಾಶ ಇಲ್ಲ. ಹಳ್ಳಿಯೊಳಗ ಉತ್ಪನ್ನ ಹಂಚಿಕೆ ಆಧಾರದ ಮೇಲೆ ಮಾಲಿಕರು – ರೈತರ ನಡುವೆ ಬಾಯಿ ಮಾತಿನ ಒಪ್ಪಂದ ನಡದಾವು. ಅದು ಬ್ಯಾರೆ. ಆದರ ಗುತ್ತಿಗೆ ಬೇಸಾಯ ಕಾನೂನು ಅಂದರ ಬಡ ರೈತರ ಭೂಮಿಯನ್ನ ನೂರು ವರ್ಷ ಯಾವುದೋ ದೊಡ್ಡ ಕಂಪನಿಗೆ ಲೀಸು ಕೊಡಿಸೋ ಕಾಯಿದೆ. ಅಂದರ ಸುಮಾರು ನಾಲ್ಕು ತಲೆಮಾರು ಆ ಜಮೀನಿನ ಕಡೆ ಆ ರೈತರ ಕುಟುಂಬದವರು ನೋಡಂಗಿಲ್ಲ. ನೂರು ವರ್ಷ ರಂಟಿ – ಕುಂಟಿ ಹೊಡಿಯೋ ಅಭ್ಯಾಸ ಬಿಟ್ಟು ಹೋತು ಅಂದರ ಆಮ್ಯಾಲೆ ಏನು ಮಾಡತಾರ? ಆವಾಗ ರೈತರ ಮರಿ ಮಕ್ಕಳಿಗೆ ಬೀಜಾ ಹಾಕೋದು, ನೀರಾವರಿ ಮಾಡೋದು ಯಾರು ಹೇಳಿ ಕೊಡಬೇಕು?

ಬೇಸಾಯ ಅಂದರೆ ನೀ ಸಾಯ, ನಾ ಸಾಯ, ಮನೆ ಮಂದಿಎಲ್ಲ ಸಾಯಾ ಅನ್ನೋದು ಹಳೇ ಮೈಸೂರು ಕಡೆಯ ಹಳೇ ಜೋಕು. ಈ ಗುತ್ತಿಗೆ ಬೇಸಾಯದ ಸ್ಪೆಲಿಂಗ್ ಬದಲಾಗಿ ಗುದ್ದಿಗೆ ಬಿದ್ದು ಸಾಯ ಅಂತ ಆಗಬಾರದು ಅಷ್ಟ.

ಕೃಷಿಗೆ ಅಗ್ರಿಕಲ್ಚರ್ ಅಂತ ಅನ್ನೋದು ಯಾಕಂದರ ಅದು ಬರೇ ವ್ಯಾಪಾರ – ವ್ಯವಹಾರ ಅಲ್ಲ. ಅದು ನಮ್ಮ ಜೀವನ ಶೈಲಿ ಅಂತ ತಿಳಕೊಂಡು ಭಾಳ ಮಂದಿ ರೈತರು ಮಾಡತಾರು. ಬರೇ ಲಾಭ- ನಷ್ಟದ ಲೆಕ್ಕಾಚಾರ ಇದ್ದಿದರ ಅವರು ಜಮೀನು ಬಿಟಗೊಟ್ಟು ಹೋಗಿ ನಾವೆಲ್ಲಾ ಅಕ್ಕಿ ಬದಲಿ ಮ್ಯಾಗಿ ತಿನಬೇಕಾಗಿತ್ತು.

ಅದನ್ನ ಬಿಟ್ಟು ಇದು ಆಹಾರ ತಯಾರಿಕೆ ಉದ್ದಿಮೆ ಅಂತ ಹೇಳಿ ಷೇರು ಮಾರ್ಕೆಟ್ಟಿನ ದಲ್ಲಾಳಿಗಳೆಲ್ಲಾ ಇದರಾಗ ರೊಕ್ಕಾ ಹಾಕಿ ಇದನ್ನ ತೇಜಿ- ಮಂದಿ ವ್ಯಾಪಾರ ಮಾಡಿದರ ಕಷ್ಟ.

ಈ ಎಲ್ಲಾ ತಿದ್ದುಪಡಿಗಳನ್ನ ಎಲ್ಲಾ ರಾಜ್ಯಗಳು ಇದನ್ನು ಪಾಲಿಸಬೇಕು ಅಂತ ಬ್ಯಾರೆ ದೆಹಲಿ ದೊರೆಗಳು ಫರಮಾನು ಹೊರಡಿಸಿದಾರ.

ಒಕ್ಕೂಟ ವ್ಯವಸ್ಥೆಗೆ ಕ್ಯಾರೆ ಅನ್ನದ ಈ ಸರಕಾರ ರಾಜ್ಯಗಳು ಅಂದರ ತಮ್ಮ ಗೊಂಬೆ ಆಟದ ಪಾತ್ರಧಾರಿಗಳು ಅಂತ ತಿಳಕೊಂಡೇತಿ. ಹಿಂಗಾಗಿ ಬ್ಯಾರೆ ದಾರಿ ಇಲ್ಲ.

ಅದೂ ಆಳುವ ಪಕ್ಷದ- ವಿರೋಧ ಪಕ್ಷದ ಸರಕಾರಗಳ ನಡುವೆ ವಿರೋಧ ತಂದು ಇಡಬಹುದು.

ವಿದ್ಯುತ್ ದರ ನಿರ್ಧಾರದ ಬಗ್ಗೆ ಅಧ್ಯಯನ ನಡೆಸಿದ ಅನುಭಾವಿ ಆರ್ಥಿಕ ತಜ್ಞ ಡಾ. ನಂಜುಂಡಪ್ಪ ಅವರು ಒಂದು ಉದಾಹರಣೆ ಕೊಡತಿದ್ದರು.

ಬಿಹಾರದ ಕೆಲವು ಪ್ರದೇಶಗಳಲ್ಲಿ ಎಷ್ಟೋ ವರ್ಷಗಳ ತನಕಾ ವಿದ್ಯುತ ಸಾಗಣೆಯೊಳಗ ಹಾನಿ ಆಗಿರಲಿಲ್ಲ. ಅದನ್ನ ನೋಡಲಿಕ್ಕೆ ಹೋದ ವಿಶ್ವ ಬ್ಯಾಂಕಿನ ತಂಡಕ್ಕ ಇಂಜಿನಿಯರ ಒಬ್ಬರು ಹೇಳಿದರಂತ “ನೋಡ್ರಿ ಸರ್, ಈ ಯೋಜನೆ ಆರಂಭ ಆದಾಗಿನಿಂದ ಇದರಾಗ ವಿದ್ಯುತ್ ಹರದೇ ಇಲ್ಲ. ಇನ್ನ ಹಾನಿ ಆಗಲಿಕ್ಕೆ ಹೆಂಗ ಸಾಧ್ಯ ಐತಿ?”

ಹಂಗನ ಇನ್ನೂವರೆಗೆ ದೇಶದ ಕೆಲವು ಹಿಂದುಳಿದ ರಾಜ್ಯಗಳು- ಬಿಹಾರ- ಒಡಿಷಾ- ಛತ್ತೀಸಗಡ- ಜಾರಖಂಡ ಇತ್ಯಾದಿಗಳೊಳಗ ಎಪಿಎಂಸಿ ವ್ಯವಸ್ಥೆನೇ ಇಲ್ಲ. ಇದ್ದರೂ ಪರಿಣಾಮಕಾರಿಯಾಗಿಲ್ಲ. ಇನ್ನ ಅಲ್ಲಿನ ರೈತರಿಗೆ ಈ ತಿದ್ದುಪಡಿಯಿಂದ ಏನು ಕೇಡು ಆಗಲಿಕ್ಕೆ ಸಾಧ್ಯ ಐತಿ?

ಈ ರೀತಿಯ ನೀತಿಗಳಿಗೆ ಯುರೋಪಿನ್ಯಾಗ `ಲೆಸೇ ಫೇರು’ (`ತಿಳದದ್ದು ಮಾಡಿಕೋಳಿ ಬಿಡ್ರಿ’) ಅಂತ ಅಂತಾರ. ಇದನ್ನೆಲ್ಲಾ ಮಾಡಿದ ಸರಕಾರಕ್ಕ- ಪಕ್ಷಕ್ಕ ನಮ್ಮ ಜನಾ ಮುಂದಿನ ಚುನಾವಣೆಯೊಳಗ ತಿಳದದ್ದು ಮಾಡಿದರ, ಏನು ಗತಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...