Homeಕವನ'ಬಾ ಇಲ್ಲಿ ‌ಸಂಭವಿಸು'ವ ಹೊಸ‌ ಅವತಾರದಲ್ಲೇ : ನಟರಾಜ್ ಹೊನ್ನವಳ್ಳಿಯವರ ಪದ್ಯ

‘ಬಾ ಇಲ್ಲಿ ‌ಸಂಭವಿಸು’ವ ಹೊಸ‌ ಅವತಾರದಲ್ಲೇ : ನಟರಾಜ್ ಹೊನ್ನವಳ್ಳಿಯವರ ಪದ್ಯ

- Advertisement -
- Advertisement -

ಒಂದು ಪದ್ಯ

ಹೊರಗೆ ಮಳೆಹನಿಗಳ ಶಬ್ಧ
ರಂಗಮಂದಿರ
ನಿಶ್ಯಬ್ದ
ಏಕತಾರಿಯ ಮೇಲೆ ಧೂಳು
ಹಾರ್ಮೋನಿಯಂನ
ಮೇಲೆ
ಹಾಕಿದ‌ ಕವರ್ ತೆಗೆದಿಲ್ಲ
ಕರೀ ಮೂರು, ಬಿಳಿ ನಾಲ್ಕರ ಮನೆಗಳ ಮೇಲೆ ಬೆರಳಿಲ್ಲ
ಡೈರೆಕ್ಟರ್‌ನ ಟೇಬಲ್‌ ಮೇಲೆ ಜಿರಳೆಗಳು.

ಎಲ್ಲಿ ಹೋದಿರಿ
ಮೋಹಕ
ನಟ-ನಟಿಯರೇ?
ಬಣ್ಣ ಹಚ್ಚುತ್ತಿದ್ದ
ಕೈಗಳೇ
ಖಾಲಿಬಿದ್ದ
ಬಣ್ಣ ಬಿಳುಚಿದ
ಖಾಲಿ
ಕಂಕಾಲ ಮುಖಗಳೇ.

ಎಂದು ಬಂದೀರಿ
ಪಾತ್ರವಾಗಿ
ಏನ ತಂದೀರಿ ಹೃದಯಕ್ಕೆ ಆಪ್ತವಾಗಿ
ಬನ್ನಿ
ಈಗಾಗಲೇ ತಡವಾಗಿದೆ
ಮೂರನೇ ಬೆಲ್
ಹೊಡೆದಾಗಿದೆ.

ಲಿಪ್ ಸ್ಟಿಕ್‌ಗೆ ತುಟಿಗಳಿಲ್ಲ
ವಾರ್ಡ್ರೋಬ್‌ನಲ್ಲಿನ
ಉಡುಪು
ಪ್ಯಾನ್ ಕೇಕ್, ಮಾಸ್ಕರಾ
ನಿಮ್ಮ ದೇಹ
ಮುಖ
ಕಣ್ಣುಗಳನ್ನೇ ಕಾಯುತ್ತಿವೆ
ಎಂದು
ಬಂದೀರಿ‌ ಎಂದು
ಮತ್ತೆ
ಹಳೆಯ ಲಯಕ್ಕೆ
ಹೇಗೆ
ಮರಳುವಿರಿ‌ ಎಂದು.

ಲೈಟಿಂಗ್ ರೂಂನಲ್ಲಿ
ಯಾರಿಲ್ಲ
ರಂಗಕ್ಕೆ ಬೆಳಕಿಲ್ಲ
ಡಿಮ್ಮರ್‌ಗಳು ರೆಸ್ಟಿನಲ್ಲಿವೆ.
ವಿದ್ಯುತ್ ಬಿಲ್
ಜಾಸ್ತಿಯಾಗಿದೆ.

ಹೊರಗೆ
ಬೀದಿಯಲ್ಲಿ ಲಕ್ಷಾಂತರ ಹೆಜ್ಜೆ ಸಪ್ಪಳ
ನಿಟ್ಟುಸಿರು
ರೈಲುಗಾಡಿಯ ಸಿಳ್ಳು
ಸಾವಿನ ವಾಸನೆ
ಬೀದಿಯಲ್ಲಿ ಚಲ್ಲಿದ ಹಾಲು
ಟೊಮ್ಯಾಟೊ
ಹಾಸಿಗೆ, ಪೆಟ್ಟಿಗೆ ಟ್ರಂಕ್ ಹೊತ್ತು
ಮಂದಿ
ಪುಟ್ಟ ಮಕ್ಕಳು
ಎಲ್ಲೆಲ್ಲೂ ಶಂಖ
ಜಾಗಟೆಯ
ತಟ್ಟೆ ಬಡಿತದ ಕೇಕೆ

ಛಕ್ಕನೆ ಬೆಳಕಾರಿ
ಮತ್ತೊಂದು
ದೃಶ್ಯ
ಕಾಣಿಸುತ್ತಿದ್ದ ನೀವೆಲ್ಲ ಎಲ್ಲಿ?
ಯಾವ
ನಾಟಕಗಳಲ್ಲಿ ‌ಅಡಗಿದ್ದೀರಿ
ವೇಷ
ಮರೆಸಿದ್ದೀರಿ
ಎಲ್ಲಿ‌ ನಡೆಸಿದ್ದೀರಿ ತಾಲೀಮು
ಬೀದಿಯಲ್ಲೇ
ಲಾಕ್ ಡೌನಾದ
ಮನೆಗಳಲ್ಲೇ
‘ಬಾ ಇಲ್ಲಿ‌ಸಂಭವಿಸು’ವ
ಹೊಸ‌
ಅವತಾರದಲ್ಲೇ.

ನಟರಾಜ್ ಹೊನ್ನವಳ್ಳಿ
೨೦-೦೫-೨೦೨೦, ಬುಧವಾರ


ಇದನ್ನೂ ಓದಿ: ತೀರ ಸೇರದ ಬದುಕು: ಮಿಸ್ರಿಯಾ.ಐ.ಪಜೀರ್‌ರವರ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ರಂಗ ಮಂದಿರದ ಈಗಿನ ಒಳ ನೋಟವನ್ನು
    ಮರೆ ಮಾಚಿದ ತೆರೆಮರೆಯ ಕಲಾವಿದನ
    ಅಂತರಂಗದ ಬಣ್ಣಮಾಸಿದ ಬದುಕಿನ ಭಾವನೆಗಳನ್ನು
    ರಂಗಮಂದಿರ ನಡುವೆ ನಿಂತ ಕಲಾಜೀವಿ
    ಲಯ ಬದ್ದ ವಾದ್ಯಗಳ ಸಂಗೀತವಿಲ್ಲದೆ ಅನಾಥವಾಗಿ
    ನುಡಿಸುವ ನಾಡಿಯ ನಾವಿಕನಿಲ್ಲದೆ
    ದೂಳು ತುಂಬಿ ಪಾಳುಬಿದ್ದ ಮನೆಯ ರೀತಿ ಗೋಚರಿಸುತ್ತಿದೆ. ಪಾತ್ರಗಳಿಗೆ ಜೀವ ತುಂಬಿ ಬಣ್ಣದ ಬದುಕ ನಂಬಿ, ಕಲಾಭಿಮಾನಿಗಳ ಕಣ್ಣುಗಳಿಗೆ ರಂಗು ತುಂಬುತ್ತಿದ್ದ ಪಾತ್ರಧಾರಿಗಳೇ ಎಲ್ಲಿ ಕಳೆದು ಹೊದಿರಿ ಬಣ್ಣವಿಲ್ಲದ ಮುಖವಾಡ ಧರಿಸಿ….
    ಕೋವಿಡ್19 ಸ್ವಾಗತಿಸಿದ ಭ್ರಷ್ಟ ಸರ್ಕಾರಗಳೇ ಚಪ್ಪಾಳೆ ಜಾಗಟೆ ಭಾರಿಸುತ್ತ ಆನಂದದಿ ರಜೆ ಉಂಡ ಅಜ್ಞಾನಿಗಳೇ ನಿಮಗೆ ಹಸಿವಿನಿಂದ ನೊಂದು ಬೆಂದು ಬೆಂಡಾಗಿ ಜೀವ ಬಿಟ್ಟ ಸಾಮಾನ್ಯ ಪ್ರಜೆಯ ಕೂಗು ಕೇಳದೇ?! ಇಂತಹ ಪರಿಸ್ಥಿತಿಯ ಅಬ್ಬರಕ್ಕೆ ಕೊಚ್ಚಿಹೋಗದೆ ಮಂಕು ಕವಿದ ಮನೆಯ ಚಿಲಕ ಹೊಡೆದು ಹೊರ ಬನ್ನಿ ಹೊಸ ಅವತಾರದಲ್ಲಿ ರಂಗಿನ ರಂಗ ಮಂದಿರಕ್ಕೆ ನಟ ನಟಿಯರೇ ಎಂದು ಕಲಾವಿದನ ಬದುಕನ್ನು ಪದ್ಯದ ಪದಗಳಲ್ಲಿ ತೋರಿದ ಕನ್ನಡನಾಡಿನ ಹೆಮ್ಮೆಯ ರಂಗಭೂಮಿ ನಿರ್ದೇಶಕರು,ಸಾಹಿತಿಗಳು,ಪ್ರಗತಿಪರ ಚಿಂತಕರು, ಆದ ಗುರುಗಳು ಆದ ಶ್ರೀಯುತ ನಟರಾಜು ಹೊನ್ನವಳ್ಳಿಯವರಿಗೆ ಅನಂತಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...