Homeಅಂಕಣಗಳುಮೀಡಿಯಾ ವೈರಸ್ ಎಂದು ಕರೆಯಬೇಕಾದ ಸಂದರ್ಭ ಬಂದಿದೆಯೇ?

ಮೀಡಿಯಾ ವೈರಸ್ ಎಂದು ಕರೆಯಬೇಕಾದ ಸಂದರ್ಭ ಬಂದಿದೆಯೇ?

- Advertisement -
- Advertisement -

ಬೆಂಗಳೂರಿನ ಟಿವಿ ಚಾನೆಲ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ಬಂದ ಕಾರಣಕ್ಕೆ ಹಲವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆಗ ‘ಮೀಡಿಯಾ ವೈರಸ್’ ಎಂದು ಕರೆಯಬೇಡಿ ಎಂದು ನಾವೂ ಮನವಿ ಮಾಡಿಕೊಂಡಿದ್ದೆವು. ಏಕೆಂದರೆ ಅದಕ್ಕೆ ಮುಂಚೆ ಕೊರೊನಾ ವೈರಸ್‍ಅನ್ನು ಅಮೆರಿಕಾದವರು ಚೀನೀ ವೈರಸ್ ಎಂದು ಕರೆದಂತೆ, ಇಲ್ಲಿನ ಮಾಧ್ಯಮಗಳು ತಬ್ಲಿಘಿ ವೈರಸ್ ಎಂದು ಕರೆಯಲಾರಂಭಿಸಿದ್ದರು. ವೈರಸ್‍ಗೂ ಇಲ್ಲದ ಕೊಳಕು ಮನಸ್ಥಿತಿಯನ್ನು ಟಿವಿ ಚಾನೆಲ್‍ಗಳು ತೋರಿದೆವೆಂದು, ಅದೇ ತಪ್ಪನ್ನು ಎಲ್ಲರೂ ಮಾಡಬಾರದೆಂಬುದು ನಮ್ಮ ಕಾಳಜಿಯಾಗಿತ್ತು. ಮೀಡಿಯಾಗಳನ್ನು ಟ್ರೋಲ್ ಮಾಡಲು ಹೋಗಿ, ವೈರಸ್‍ಅನ್ನು ಯಾವುದಾದರೂ ಸಮುದಾಯಕ್ಕೆ ತಳಕು ಹಾಕುವ ಮನೋಭಾವಕ್ಕೆ ಪುಷ್ಟಿ ಕೊಡುವ ಕೆಲಸವನ್ನು ಯಾರೂ ಮಾಡಬಾರದೆಂಬುದು ಅದರ ಹಿಂದಿನ ಉದ್ದೇಶವಾಗಿತ್ತು.

ಆದರೆ ಮೀಡಿಯಾಗೆ ಹತ್ತಿದ್ದ ವೈರಸ್ ಅಷ್ಟು ಬೇಗ ಇಳಿಯಲಿಲ್ಲ. ಅವರು ಬಿಹಾರದ ಕಾರ್ಮಿಕರೊಬ್ಬರಿಗೆ ಸೋಂಕು ಬಂದಿತೆಂಬ ಸುದ್ದಿಯನ್ನು ಹಿಡಿದು ‘ಬಿಹಾರಿ ಬಾಂಬು’ ಎಂದು ಕರೆದರು. ಹಾಗೆಯೇ ಮುಂದುವರೆದು 11ನೇ ಕ್ರಾಸ್ ವೈರಸ್ ಇತ್ಯಾದಿ ಇತ್ಯಾದಿಗಳನ್ನು ಸೃಷ್ಟಿಸುತ್ತಾ, ಇತ್ತೀಚೆಗೆ ಗರ್ಭಿಣಿ ಬಾಂಬ್ ಎಂತಲೂ ಕರೆದರು. ಮುಸ್ಲಿಮರನ್ನು ಗುರಿ ಮಾಡುವ ಅವರ ದುರುದ್ದೇಶದ ಈಡೇರಿಕೆಗಾಗಿ ಕೊರೊನಾ ಸೋಂಕಿನ (ಕ್ರಿಮಿನಲೈಸೇಷನ್) ಅಪರಾಧೀಕರಣವನ್ನು ವ್ಯವಸ್ಥಿತವಾಗಿ ಮಾಡಿದರು. ಈ ಕೆಲಸದಲ್ಲಿ ಅತ್ಯುಗ್ರವಾಗಿ ತೊಡಗಿಕೊಂಡಿದ್ದ ಇನ್ನೊಂದು ಟಿವಿ ಚಾನೆಲ್ ಝೀ ಸಂಸ್ಥೆಗೂ ಕೊರೊನಾ ಬಾಧಿಸಿದೆ. ಕೊರೊನಾ ಸೋಂಕಿತರೆಲ್ಲರೂ ಇಲ್ಲಿಯವರೆಗೂ ಜಿಹಾದಿಗಳಾಗಿದ್ದರೆ, ಈಗ ಇದ್ದಕ್ಕಿದ್ದಂತೆ ಅವರುಗಳು ವಾರಿಯರ್ಸ್‍ಗಳಾಗಿಬಿಟ್ಟಿದ್ದಾರೆ.

ಇದೇ ಹೊತ್ತಿನಲ್ಲಿ ಕರ್ನಾಟಕದ ಒಂದು ಮನುಷ್ಯ ವಿರೋಧಿ ಟಿವಿ ಚಾನೆಲ್ ಮುಸ್ಲಿಮರ ವಿರುದ್ಧ ಇನ್ನೊಂದು ಫೇಕ್‍ನ್ಯೂಸ್ ಕುರಿತು ಚರ್ಚಿಸಲು ಶುರುಮಾಡಿದೆ. ದಾವಣಗೆರೆ ಜಿಲ್ಲೆಯಲ್ಲಿ ರಂಜಾನ್ ಸಂದರ್ಭದಲ್ಲಿ ಹಿಂದೂ ಬಟ್ಟೆ ವ್ಯಾಪಾರಿಗಳಿಂದ ಬಟ್ಟೆ ಖರೀದಿಸಬಾರದೆಂದು ಮುಸ್ಲಿಂ ಹೆಣ್ಣುಮಕ್ಕಳನ್ನು ಕೆಲವು ಮುಸ್ಲಿಮರು ಬಲವಂತಪಡಿಸಿದ್ದಾರೆಂಬುದು ಅವರು ಚರ್ಚಿಸುತ್ತಿರುವ ಸುದ್ದಿ. ಈ ಸುದ್ದಿ ಇಲ್ಲಿ ಪ್ರಸಾರವಾಗುವ ಮುಂಚೆಯೇ ದಾವಣಗೆರೆಯಲ್ಲಿ ಯಾವ ಧಾರ್ಮಿಕ ಮುಖಂಡರು ಈ ರೀತಿ ಕರೆ ಕೊಟ್ಟಿದ್ದಾರೆಂದು ಹೇಳಲಾಗಿತ್ತೋ ಅವರು ಪತ್ರಿಕಾಗೋಷ್ಠಿಯನ್ನೂ ಮಾಡಿದ್ದರು.

ಈ ಸಾರಿಯ ರಂಜಾನ್‍ನ ಸಂದರ್ಭದಲ್ಲಿ ಯಾರೂ ದುಂದುವೆಚ್ಚ ಮಾಡಬಾರದು, ಬದಲಿಗೆ ಹಾಗೇನಾದರೂ ಖರ್ಚು ಮಾಡುವುದಿದ್ದಲ್ಲಿ ಅದನ್ನು ಲಾಕ್‍ಡೌನ್‍ನಿಂದ ಸಂತ್ರಸ್ತರಾದ ಬಡವರಿಗೆ ಕೊಡಬೇಕೆಂದು ರಂಜಾನ್ ಶುರುವಾಗುವ ಮುಂಚೆಯೇ ಆ ಸಮುದಾಯದೊಳಗೆ ಚಾಲ್ತಿಯಲ್ಲಿದ್ದ ಸಂದೇಶ. ಅದನ್ನೇ ಅವರು ಅಲ್ಲಿಯೂ ನೀಡಿದ್ದರು. ರಂಜಾನ್ ಸಂದರ್ಭದಲ್ಲಿ ತಮ್ಮ ವಾರ್ಷಿಕ ಆದಾಯದ ಶೇ.2ರಷ್ಟು ಜಕಾತ್‍ಅನ್ನು ದಾನ ಮಾಡುವುದು ಕಡ್ಡಾಯವಾಗಿದ್ದು ಈ ಸಾರಿ ಅದನ್ನು ಹೆಚ್ಚಿಸುವ ಧರ್ಮದ ಕಾರ್ಯ ಅದಾಗಿತ್ತು. ಇದನ್ನು ಅತಿರೇಕಕ್ಕೆ ಒಯ್ದ ಕೆಲವು ಮುಸ್ಲಿಮರು ಕೆಲವೆಡೆ ಅಂಗಡಿಗಳಿಗೆ ಹೋಗಿದ್ದ ಮುಸ್ಲಿಂ ಹೆಣ್ಣುಮಕ್ಕಳನ್ನು ಬಲವಂತದಿಂದ ತಡೆದದ್ದು ಸುದ್ದಿಯಾಗಿತ್ತಲ್ಲದೇ, ಯಥಾಪ್ರಕಾರ ವಿಡಿಯೋಗಳೂ ಚಾಲನೆಯಲ್ಲಿದ್ದವು. ಇನ್ನೊಬ್ಬರ ಇಷ್ಟಾನಿಷ್ಟಗಳನ್ನು ಸರಿಯಾದ ಕಾರಣಗಳಿಗಾಗಿಯೇ ಬದಲಿಸಬಯಸುವವರೂ ಯಾರನ್ನೂ ಬಲವಂತ ಮಾಡುವ ಹಕ್ಕನ್ನು ಹೊಂದಿರುವುದಿಲ್ಲ; ಅದು ಯಾರನ್ನೋ ತಡೆಯುವ ಮಟ್ಟಕ್ಕೆ ಹೋದರೆ ಅದು ಶಿಕ್ಷಾರ್ಹವೂ ಆಗಬೇಕು.

ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ್ದೆಂದರೆ, ಇವೆಲ್ಲಾ ನಡೆಯೋಕೆ ಮುಂಚೆಯೇ ಮುಸ್ಲಿಂ ವ್ಯಾಪಾರಿಗಳು ಜಾತ್ರೆಗೆ ಬರಬಾರದು ಅಥವಾ ಮುಸ್ಲಿಂ ವ್ಯಾಪಾರಿಗಳಿಂದ ಕೊಳ್ಳಬಾರದು ಎಂಬ ಘೋಷಣೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಹಿರಂಗವಾಗಿ ಚಾಲ್ತಿಗೆ ಬಂದಿತ್ತು. ಅದಕ್ಕೂ ನಾಲು ವರ್ಷಗಳ ಮುಂಚೆಯೇ ಇಂತಹ ಭಾವನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಂತರಿಕವಾಗಿ ಇದ್ದುದು ಖುದ್ದು ನನಗೇ ಅನುಭವಕ್ಕೆ ಬಂದ ಘಟನೆ ನೆನಪಿನಿಂದ ಎಂದೂ ಮಾಸುವುದಿಲ್ಲ. ಆದರೆ ಇದ್ಯಾವುದೂ ಈ ಜೀವವಿರೋಧಿ ಚಾನೆಲ್‍ಗಳಲ್ಲಿ ಸುದ್ದಿ, ಸದ್ದು, ಚರ್ಚೆಗೆ ಕಾರಣವಾಗುವುದಿಲ್ಲ. ಏಕೆಂದರೆ ಅವರ ಅಜೆಂಡಾವೇ ಬೇರೆ. ಜೊತೆಗೆ ಅವರುಗಳು ಈಗ ಮನುಷ್ಯರಾಗಿಯೂ ಉಳಿದಿಲ್ಲ. ಧರ್ಮವಂತರಂತೂ ಅಲ್ಲವೇ ಅಲ್ಲ.

ಇತ್ತ ಮನುಷ್ಯವಿರೋಧಿಗಳಲ್ಲದವರೂ ಚರ್ಚೆಯನ್ನು ‘ಆ ಮುಸ್ಲಿಂ ಹುಡುಗರು ಬಟ್ಟೆ ತೆಗೆದುಕೊಳ್ಳದಂತೆ ಒತ್ತಾಯಿಸುವುದು ಸರಿಯೇ’ ಎಂಬುದರ ಸುತ್ತ ಕೇಂದ್ರೀಕರಿಸುವಂತೆ ಆಗುತ್ತದೆ. ಏಕೆಂದರೆ ಯಾರೋ ಒಬ್ಬರು ‘ಎಲ್ಲಾ ಸರಿ, ನೀವುಗಳು ಆ ಮುಸ್ಲಿಂ ಹುಡುಗರನ್ನೇಕೆ ಸಮರ್ಥಿಸುತ್ತಿದ್ದೀರಿ?’ ಎಂದು ಹೇಳಿರುತ್ತಾರೆ. ‘ಹೌದಲ್ಲವೇ, ನಾವು ಮೊದಲು ಅದನ್ನು ಖಂಡಿಸಬೇಕು ತಾನೇ?’, ‘ಹಿಂದೂ ಅಂಗಡಿಗಳಿಗೆ ಹೋಗಬಾರದೆಂದು ಹೇಳಿಲ್ಲದೇ ಇರಬಹುದು, ಆದರೆ ಹಬ್ಬವನ್ನು ಸರಳವಾಗಿಯೇ ಆಚರಿಸಬೇಕೆಂದು ಬಲವಂತ ಪಡಿಸುವುದು ತಪ್ಪಲ್ಲವೇ?’, ‘ನಾವು ಯಾವ ಮೂಲಭೂತವಾದವನ್ನೂ ಸಮರ್ಥಿಸುವುದಿಲ್ಲ’, ‘ಇವರೂ ಹಾಗೇ ಮಾಡುತ್ತಾರೆ’ ಇತ್ಯಾದಿ ಟ್ರ್ಯಾಪ್‍ಗಳಲ್ಲಿ ಬೀಳಲು ಕೆಲವರು ಉತ್ಸುಕರಾಗಿರುತ್ತಾರೆ. ಏಕೆಂದರೆ ಮನುಷ್ಯವಿರೋಧಿಗಳು ಸೃಷ್ಟಿಸುವ ಅಜೆಂಡಾವನ್ನು ಕೌಂಟರ್ ಮಾಡುವ ಸರಿಯಾದ ದಾರಿಯನ್ನು ಇವರಿನ್ನೂ ಹುಡುಕಿಕೊಂಡಿಲ್ಲ.

ಸತ್ಯ, ಸೌಹಾರ್ದತೆ, ಮನುಷ್ಯ ಪ್ರೀತಿಯ ಪರವಾಗಿರಬೇಕಿದ್ದ ಮಾಧ್ಯಮಗಳು ಮೆದುಳಿಗೆ ಸೋಂಕನ್ನು ಹಬ್ಬಿಸಿಕೊಂಡುಬಿಟ್ಟಿವೆ. ಅದನ್ನು ಮೀಡಿಯಾ ವೈರಸ್ ಎಂದು ಕರೆಯಬೇಕಾದ ಸಂದರ್ಭ ಬಂದುಬಿಟ್ಟಿದೆ. ಸೋಂಕಿನ ತಡೆಗೆ ಮುನ್ನೆಚ್ಚರಿಕೆ ಕ್ರಮಗಳು, ಕೆಲವೊಮ್ಮೆ ಲಾಕ್‍ಡೌನ್ ಮತ್ತು ಚಿಕಿತ್ಸೆಯ ಅಗತ್ಯ ಬೀಳುತ್ತದೆ. ಕರ್ನಾಟಕದ ಜಾಣಜಾಣೆಯರು ಅದಕ್ಕೆ ‘ಸಂಪೂರ್ಣವಾಗಿ ಫೀಲ್ಡಿಗಿಳಿಯಬೇಕು’ ಅಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...