Homeಅಂಕಣಗಳುಪಠ್ಯ ಪರಿಷ್ಕರಣೆ; ಸಂವಿಧಾನದ ಮೇಲೂ ದಾಳಿ, ಮತ್ತೊಂದು ಕಡೆ ಸಂವಿಧಾನಶಿಲ್ಪಿಯ ಮೇಲೆಯೂ!

ಪಠ್ಯ ಪರಿಷ್ಕರಣೆ; ಸಂವಿಧಾನದ ಮೇಲೂ ದಾಳಿ, ಮತ್ತೊಂದು ಕಡೆ ಸಂವಿಧಾನಶಿಲ್ಪಿಯ ಮೇಲೆಯೂ!

- Advertisement -
- Advertisement -

ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಕ್ರಮಗಳು ಬಗೆದಷ್ಟೂ ಸಿಗುತ್ತಿವೆ. ಮೇಲ್ನೋಟಕ್ಕೆ ಇದು ಕೇಸರೀಕರಣ ಮತ್ತು ಬ್ರಾಹ್ಮಣೀಕರಣದ ಪಠ್ಯಗಳು ಎಂದೆನಿಸಿದರೂ, ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸಂವಿಧಾನಕ್ಕೆ ಮತ್ತು ಸಂವಿಧಾನಶಿಲ್ಪಿಗೆ ಅವಮಾನ ಮಾಡುವ ಯಥೇಚ್ಛ ’ಪರಿಷ್ಕರಣೆ’ಗಳು ಕಣ್ಣಿಗೆ ರಾಚುತ್ತಿವೆ. ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ “ಅಂಬೇಡ್ಕರ್ ಅವರ ಕೊಡುಗೆಯನ್ನು ಪರಿಗಣಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ” ಎಂಬ ಹಿಂದಿನ ಪಠ್ಯದ ಸಾಲನ್ನೇ ಕುತಂತ್ರದಿಂದ ಕಿತ್ತೆಸೆಯಲಾಗಿದೆ. ಜನಾಕ್ರೋಶದ ಭಯಕ್ಕೆ, ಒಂದು ಕಡೆ ಶಿಕ್ಷಣ ಮಂತ್ರಿ ಆ ಪಾಠದಲ್ಲಿ ಆ ಸಾಲನ್ನು ಮತ್ತೆ ಸೇರಿಸಿ, ಅದೊಂದು ಪಾಠವನ್ನು ಶಾಲೆಗಳಿಗೆ ಹೊಸದಾಗಿ ಒದಗಿಸಲಾಗುವುದು ಎನ್ನುತ್ತಿದ್ದರೆ, ಮತ್ತೊಂದು ಕಡೆ ಪಠ್ಯ ಪುಸ್ತಕ ಸಮಿತಿಯ ಕೆಲವರು ’ಸಂವಿಧಾನವನ್ನು ಅಂಬೇಡ್ಕರ್ ಅವರು ಒಬ್ಬರೇ ಬರೆದರೆ’ ಎಂಬ ಹಳೆಯ ಕುತ್ಸಿತ ವಾದವನ್ನು ಮುಂದೊಡ್ಡಿ ಸಂಘಪರಿವಾರದ ನಿಜ ಮುಖದ ಕ್ರೌರ್ಯವನ್ನು, ಇಬ್ಬದಿ ನಾಲಗೆಯ ಗುಣವನ್ನು ಅನಾವರಣ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನದ ಮುಖ್ಯ ಶಿಲ್ಪಿಯಾಗಿದ್ದರು ಎಂಬುದನ್ನು ಮರಾಮಾಚಿಸುವುದು ಇವರ ಅಜೆಂಡಾದ ಒಂದು ಭಾಗವಾದರೆ, ಸಾಂವಿಧಾನಿಕ ನೈತಿಕತೆಯನ್ನು ನಾಗರಿಕರು ಎಂದಿಗೂ ಮೈಗೂಡಿಸಿಕೊಳ್ಳದಂತೆ ಮನುಧರ್ಮಶಾಸ್ತ್ರದ ತಾರತಮ್ಯವನ್ನು ಮರುಕಳಿಸುವುದು ಅವರ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ಸಂವಿಧಾನ ಮತ್ತು ಸಂವಿಧಾನದ ಆಶಯಗಳ ಮೇಲೆ ಹಲವು ದಿಕ್ಕುಗಳಿಂದ ದಾಳಿ ನಡೆಸುವ ಪ್ರಯತ್ನಗಳು ಚುರುಕುಗೊಂಡಿವೆ. ಪುನರ್ ಪರಿಷ್ಕರಣೆ ಅದರ ಒಂದು ಭಾಗ.

ಈ ವಿಷಯವಾಗಿ ಪರಿಷ್ಕರಣೆ ಸಮಿತಿ ಸದಸ್ಯರೊಬ್ಬರನ್ನು ’ನಾನುಗೌರಿ.ಕಾಂ’ ಸಂಪರ್ಕಿಸಿದಾಗ, “ಸಂವಿಧಾನವನ್ನು ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ? ಶಿಲ್ಪಿ ಎಂದರೆ ಒಬ್ಬರು. ಈ ಶಬ್ದವನ್ನು ಯಾರೋ ಒಬ್ಬರು 90ರ ದಶಕದಲ್ಲಿ ಪ್ರಯೋಗ ಮಾಡಿದ್ದಾರೆ” ಎಂದದ್ದಲ್ಲದೆ, “ಸಂವಿಧಾನ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಐದು ಜನರಿದ್ದರು, ಅದನ್ನು ಒಬ್ಬರೇ ಕೂತು ಬರೆದಿರಲು ಸಾಧ್ಯವೇ ಇಲ್ಲ? ಮತ್ತೆ ಯಾಕೆ ಎಂಟು ಜನರ ಕಮಿಟಿ ಮಾಡಿದ್ದರು? ಅವರಿಗೇನು ಬೇರೆ ಕೆಲಸ ಇರಲಿಲ್ಲವೆ?” ಎಂದು ತಮ್ಮ ಅಜೆಂಡಾವನ್ನು ಹಸಿಹಸಿಯಾಗಿ ಪ್ರತಿಪಾದಿಸಿದ್ದರು.

ರಾಜೇಂದ್ರ ಪ್ರಸಾದ್

ಇವೆಲ್ಲಾ ಎಂತಹ ಹಸಿ ಸುಳ್ಳುಗಳು ಎಂಬುದಕ್ಕೆ ಸಂವಿಧಾನ ನಡಾವಳಿ ಸಭೆಯ ದಾಖಲೆಗಳೇ ಉತ್ತರಿಸುತ್ತವೆ. ಅಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ರಾಜೇಂದ್ರ ಪ್ರಸಾದ್ ಅವರು ಹೇಳಿರುವ ಮಾತುಗಳನ್ನು ನೋಡಿ: “ಅತಿ ಉತ್ಸಾಹದಿಂದ ಮತ್ತು ಶ್ರದ್ಧೆಯಿಂದ ಸಂವಿಧಾನ ಕರಡು ರಚನಾ ಸಮಿತಿಯ ಸದಸ್ಯರು ಮತ್ತು ಅದರ ಅಧ್ಯಕ್ಷ ಡಾ. ಅಂಬೇಡ್ಕರ್ ಅವರು ಕೆಲಸ ಮಾಡಿದ್ದಾರೆ. ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಅವರಿಗೆ ಜವಾಬ್ದಾರಿ ವಹಿಸಿದ್ದಕ್ಕಿಂತಲೂ ಉತ್ತಮ ನಿರ್ಧಾರವನ್ನು ನಾವು ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡದ್ದಷ್ಟೇ ಅಲ್ಲ, ತಾವು ಮಾಡಿದ ಕೆಲಸಕ್ಕೆ ಛಾಪು ತಂದಿದ್ದಾರೆ” ಎಂದಿದ್ದರು. 1962ರಿಂದ 67ರವರೆಗೆ ಭಾರತದ ರಾಷ್ಟ್ರಾಧ್ಯಕರಾಗಿದ್ದ ಎಸ್ ರಾಧಾಕೃಷ್ಣನ್ ಅವರು “ನಾನು ಅವರು ಕೆಲಸ ಮಾಡುವುದನ್ನು ನೋಡಿದ್ದೇನೆ, ನಮ್ಮ ಸಂವಿಧಾನವನ್ನು ಕಡೆದು ಕಟ್ಟುತ್ತಾ ಎಲ್ಲಾ ಬಗೆಯ ಸಮಸ್ಯೆಗಳಿಗೆ ಉತ್ತರಿಸುತ್ತಿದ್ದುದನ್ನು..” ಎಂದು ಅಂಬೇಡ್ಕರ್ ಬಗೆಗೆ ಹೇಳಿದ್ದಾರೆ. ಇನ್ನು 69ರಲ್ಲಿ ರಾಷ್ಟ್ರಾಧ್ಯಕ್ಷರಾಗಿದ್ದ ವಿವಿ ಗಿರಿ ಅವರು “ಸ್ವಾತಂತ್ರ್ಯ ಭಾರತದ ಸಂವಿಧಾನಕ್ಕೆ ಮುಖ್ಯ ಶಿಲ್ಪಿಯಾಗಿ ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅದಕ್ಕೆ ಅರ್ಹನಾಗಿದ್ದವರಿಗೆ ನೀಡಿದ ವಿರಳ ಪದವಿ ಮತ್ತು ಗೌರವವದು. ಜ್ಞಾನಕ್ಕಾಗಿ ತಮ್ಮ ದಣಿವಿಲ್ಲದ ಶೋಧ, ಸರಿಗಟ್ಟಲಾಗದ ತೀವ್ರತೆಯ ಕೆಲಸ, ಸಂವಿಧಾನ ನಡಾವಳಿ ಸಭೆಯ ಕೆಲಸದಲ್ಲಿ ಪರಿಣಾಮಕಾರಿಯಾದ ಅವರ ತೀಕ್ಷ್ಣ ಗುರಿಗಳ ಕಾರಣದಿಂದ ಡಾ. ಅಂಬೇಡ್ಕರ್ ಸಂವಿಧಾನದ ಮೂಲತತ್ವಗಳನ್ನು ನೀಡಿ ಮುನ್ನಡೆಸಿದರು” ಎನ್ನುತ್ತಾರೆ. ಹೀಗೆ ಸಂವಿಧಾನ ಜಾರಿಯಾದಾಗಲಿಂದಲೂ ಅಂಬೇಡ್ಕರ್ ಅವರ ಕೊಡುಗೆಯನ್ನು ಗುರುತಿಸಿ ಹೇಳಿದ ಮತ್ತು ಅವರನ್ನು ಸಂವಿಧಾನದ ಶಿಲ್ಪಿ ಎಂದು ಕರೆದದ್ದು ದಾಖಲಾಗಿದೆ. ಆದರೆ ಸಂಘಪರಿವಾರದವರಿಗೆ ಅದೇ ಅಪಥ್ಯವಾಗಿ ಹೋಗಿದ್ದು ಇದನ್ನು ತಿರುಚಲು ಇನ್ನಿಲ್ಲದ ಆಟಗಳನ್ನು ಹೂಡುತ್ತಿದ್ದಾರೆ!

’ಸಂವಿಧಾನ ಕರಡು ಸಭೆಯಲ್ಲಿ ಅಂಬೇಡ್ಕರ್ ಒಬ್ಬರೇ ಇದ್ದರಾ’ ಎಂದು ದಾರ್ಷ್ಟ್ಯದ ಮಾತುಗಳನ್ನಾಡುವ ಇವರುಗಳಿಗೆ ಕರಡು ಸಮಿತಿ ಹೇಗೆ ಕೆಲಸ ನಿರ್ವಹಿಸಿತು ಮತ್ತು ನಡಾವಳಿ ಸಭೆಗಳಲ್ಲಿ ನಡೆದ ಚರ್ಚೆಗಳಲ್ಲಿ ಕರಡು ಸಮಿತಿಯ ಅಧ್ಯಕ್ಷರಾಗಿ ಕರಡನ್ನು ಸಮರ್ಥಿಸಿಕೊಳ್ಳುವ ಮತ್ತು ತಿದ್ದುಪಡಿಗಳಿಗೆ ತಾತ್ವಿಕ ಚಿಂತನೆಗಳನ್ನು ನೀಡುವ, ಸದಸ್ಯರುಗಳೊಂದಿಗೆ ಸಂವಾದಿಸುವ ಕೆಲಸ ಬಹುತೇಕ ಬಾಬಾಸಾಹೇಬರ ಹೆಗಲ ಮೇಲೆ ಬಿದ್ದಷ್ಟು ಇನ್ನು ಯಾರ ಮೇಲೆಯೂ ಬಿದ್ದಿರಲಿಲ್ಲ ಎಂಬುದನ್ನು ತಿಳಿದುಕೊಳ್ಳುವ ವ್ಯವಧಾನವಿಲ್ಲ ಅಥವಾ ಸತ್ಯವನ್ನು ತಿರುಚುವ ಕೆಲಸಕ್ಕೆ ಬಿದ್ದಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದು ಸಂವಿಧಾನ ನಡಾವಳಿ ಸಭೆಯ ಪ್ರಾರಂಭದಲ್ಲಿ ಗುರಿ ಮತ್ತು ನಿರ್ಧಾರಗಳ ನಿರ್ಣಯವನ್ನು ಮಂಡಿಸಿದಾಗ, ಮುಸ್ಲಿಂ ಲೀಗ್‌ನ ಭಾಗೀದಾರಿಕೆ ಇಲ್ಲದ್ದರ ಬಗ್ಗೆ ಒಬ್ಬರು ಆಕ್ಷೇಪ ವ್ಯಕ್ತಪಡಿಸಿದಾಗ, ತಮ್ಮ ಚೊಚ್ಚಲ ಭಾಷಣದಲ್ಲಿಯೇ, ಆಕ್ಷೇಪ ಪರಿಹರಿಸಿ ನಡಾವಳಿ ಸಭೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವುದರಿಂದ ಹಿಡಿದು, ಮೂಲಭೂತ ಹಕ್ಕುಗಳನ್ನು ವಿವರವಾಗಿ ಸೇರಿಸುವ, ರಾಜ್ಯ ನಿರ್ದೇಶಿತ ತತ್ವಗಳನ್ನು ಸೇರಿಸುವ, ಸಾರ್ವತ್ರಿಕ ವಯಸ್ಕ ಮತದಾನಕ್ಕೆ ಕಾರಣವಾಗುವ, ಅಧ್ಯಕ್ಷೀಯ ಮಾದರಿಯ ಬದಲು ಸಂಸದೀಯ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವ ಹೀಗೆ ಸಂವಿಧಾನದ ಕೇಂದ್ರ ವಿಷಯಗಳಲ್ಲಿ ಅಂಬೇಡ್ಕರ್ ಅವರು ವಹಿಸಿದ್ದ ಮುಖ್ಯ ಪಾತ್ರವನ್ನು 50ರ ದಶಕದಿಂದಲೇ ಗುರುತಿಸಿ, ದಾಖಲಿಸಿರುವ ಕೆಲಸ ಆಗಿದ್ದರೂ ಅದನ್ನು ಮರೆಮಾಚುವ ಹೀನ ತಂತ್ರಗಾರಿಕೆಗೆ ಸಂಘಪರಿವಾರದವರು ಇಳಿದಿರುವುದಕ್ಕೆ ಏನನ್ನಬೇಕೋ?

’ಕರಡು ಸಮಿತಿಯಲ್ಲಿ ಏಳೆಂಟು ಸದಸ್ಯರಿದ್ದರು, ಅವರಿಗೇನು ಬೇರೆ ಕೆಲಸವಿರಲಿಲ್ಲವೇ’ ಎಂಬ ಸದರಿ ಪಠ್ಯ ಪರಿಷ್ಕರಣೆ ಸಮಿತಿ ಸದಸ್ಯರ ಮಾತುಗಳಿಗೆ, ಸಂವಿಧಾನ ಕರಡು ಸಮಿತಿಯ ಸದಸ್ಯರೇ ಆಗಿದ್ದ ಟಿ ಟಿ ಕೃಷ್ಣಮಾಚಾರಿ ಅವರು ಹೇಳಿದ ಮಾತುಗಳು ಕೇಳಿಸಿರುವುದಿಲ್ಲ. ಅವರು ಹೇಳಿದ್ದು ಹೀಗೆ: “ಕರಡು ಸಮಿತಿಯ ಮೂಲ ಏಳು ಸದಸ್ಯರಲ್ಲಿ, ಒಬ್ಬರು ಅಸು ನೀಗಿದರು, ಒಬ್ಬರು ಅಮೆರಿಕದಲ್ಲಿ ಇದ್ದರು, ಒಬ್ಬರು ಪ್ರಭುತ್ವದ ಕೆಲಸಗಳಲ್ಲಿ ನಿರತರಾಗಿದ್ದರು, ಇನ್ನಿಬ್ಬರು ತಮ್ಮ ಅನಾರೋಗ್ಯದ ಕಾರಣ ದೆಹಲಿಯಲ್ಲಿ ಇರಲಾಗಲಿಲ್ಲ. ಆದುದರಿಂದ ಸಂವಿಧಾನದ ಕರಡು ರಚಿಸುವ ಭಾರವೆಲ್ಲಾ ಕೊನೆಗೆ ಡಾ. ಅಂಬೇಡ್ಕರ್ ಅವರ ಮೇಲೆಯೇ ಬಿತ್ತು. ಯಾವುದೇ ಸಂದೇಹವಿಲ್ಲದೆ ಇಂತಹ ಮಹಾನ್ ಕಾರ್ಯವನ್ನು ಸಾಧಿಸಿರುವ ಅವರಿಗೆ ನಾವು ಆಭಾರಿಯಾಗಿದ್ದೇವೆ” ಎನ್ನುತ್ತಾರೆ ಕೃಷ್ಣಮಾಚಾರಿ. ಸಂವಿಧಾನ ಶಿಲ್ಪಿ ಎಂದು ಕರೆಯಲು ಇದಕ್ಕಿಂತಲೂ ಹೆಚ್ಚಿನ ಸಾಕ್ಷ್ಯಗಳು ಬೇಕೇ?

’ಸಂವಿಧಾನ ಶಿಲ್ಪಿ’ ಎಂಬ ಮಾತು ಕೇವಲ ಪಂಡಿತರು ಮತ್ತು ರಾಜಕಾರಣಿಗಳು ಮಾತ್ರವಷ್ಟೇ ಹೇಳಿರುವುದಲ್ಲ. ಕೋಟ್ಯಂತರ ಭಾರತೀಯರಿಗೆ ಘನತೆಯನ್ನು ಒದಗಿಸಿಕೊಟ್ಟ ಸಂವಿಧಾನದ ಬಗ್ಗೆ ಗೌರವವಿರುವ ಸಾಮಾನ್ಯ ಜನರ ಆಡುಮಾತಿನಲ್ಲಿ ಜನಪದದಲ್ಲಿ ಬಳಕೆಯಾಗಿ ವ್ಯಾಪಕಗೊಂಡಿರುವ ಮಾತದು. ಈಗ ಅದಕ್ಕೇ ಕೊಡಲಿಯೇಟು ನೀಡಲು ಪರಿಷ್ಕರಣೆಯ ಹೆಸರಿನಲ್ಲಿ ಹೊರಟಿರುವ ಇವರ ಹುನ್ನಾರವನ್ನು ಅರಿಯದಷ್ಟು ಮುಗ್ಧರೇ ಜನರ? ಅಷ್ಟೇ ಅಲ್ಲ ಅಂದು ಡಾ. ಬಿ ಆರ್ ಅಂಬೇಡ್ಕರ್ ಅವರು ರಾಜಕೀಯ ಪ್ರಜಾಪ್ರಭುತ್ವ ಸಾಧಿಸಿಕೊಳ್ಳಲು ಸಾಮಾಜಿಕ ಪ್ರಜಾಪ್ರಭುತ್ವ ಅತ್ಯಗತ್ಯವಾದದ್ದು ಎಂದು ಪ್ರತಿಪಾದಿಸಿದ್ದರು. ಇದನ್ನು ಇಲ್ಲಿಯವರೆಗೂ ಭಾರತೀಯರು ಸಾಧಿಸಿಕೊಂಡಿಲ್ಲದಿರುವುದರಿಂದ ಸಂವಿಧಾನ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸಾಧಿಸಿಕೊಳ್ಳುವುದಕ್ಕೆ ರಥವಾಗಬೇಕು ಎಂದು ನಂಬಿ ಅದರಲ್ಲಿ ಸಮಾನತೆ ಮತ್ತು ಭ್ರಾತೃತ್ವದ ಕಲ್ಪನೆಗಳನ್ನು ಕಡೆದಿದ್ದರು. ಈ ಕಲ್ಪನೆಗಳು ಭಾರತೀಯರಲ್ಲಿ ನೆಲೆಗೊಳ್ಳದಂತೆ ತಡೆದದ್ದು ಇಲ್ಲಿನ ಪ್ರಾಚೀನ ಸ್ಮೃತಿಗಳು. ಅದರಲ್ಲಿ ಅತಿ ಹೆಚ್ಚು ಅಪಾಯಾಕಾರಿಯಾಗಿದ್ದುದು ಮನುಸ್ಮೃತಿ. ತಾರತಮ್ಯದ ನೀಚತನವನ್ನು ಪ್ರತಿಪಾದಿಸಿದ್ದ ಇದು ಯಾವತ್ತಿಗೂ ಸಮಾಜಕ್ಕೆ ಮಾರಕ ಎಂದು ಖಂಡತುಂಡಾಗಿ ತಿರಸ್ಕರಿಸಿದ್ದರು ಬಾಬಾಸಾಹೇಬರು. ಈಗ ಬಾಬಾಸಾಹೇಬರ ಹೆಸರಿಗೆ ಅವಮಾನ ಮಾಡುವ ಕೆಲಸದ ಜೊತೆಜೊತೆಗೇ ಮನುಸ್ಮೃತಿಯನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವನ್ನೂ ಇದೇ ಪರಿಷ್ಕರಣೆಯ ಸಮಿತಿ ಮಾಡಲು ಹೊರಟಿದೆ. ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ’ಸ್ಮೃತಿ ಸಾಹಿತ್ಯದ ಮೂರು ವಿಭಾಗಗಳು’ ಉಪಶೀರ್ಷಿಕೆಯಲ್ಲಿ ಬರೆಯುತ್ತಾ, “ಧರ್ಮಶಾಸ್ತ್ರವು ವ್ಯಕ್ತಿಯ ಧಾರ್ಮಿಕ ಬದುಕಿಗೆ ಮತ್ತು ಸುಸಂಸ್ಕೃತ ಸಮಾಜ ವ್ಯವಸ್ಥೆಗೆ ಅಗತ್ಯವಾದ ನಿಯಮಗಳನ್ನು ತಿಳಿಸುತ್ತದೆ. ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಪರಾಶನ ಸ್ಮೃತಿ ಮುಂತಾದ ಹಲವು ಗ್ರಂಥಗಳಲ್ಲಿ ಸಮಾಜವು ಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂಬ ಸೂಚನೆಗಳಿವೆ” ಎಂದು ಉಲ್ಲೇಖಿಸಲಾಗಿದೆ. ಇಂತಹ ಕುತಂತ್ರದ ಮತ್ತು ಸಮಾಜಕ್ಕೆ ಮಾರಕವಾದ ಸಂವಿಧಾನ ವಿರೋಧಿ ಸಾಲನ್ನು ಸೇರಿಸುವ ಮೂಲಕ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ತಮ್ಮ ದೀರ್ಘ ಅಜೆಂಡಾಕ್ಕೆ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಅಡಿಪಾಯ ಹಾಕಲಾಗಿದೆ.

ಹೀಗೆ ಹತ್ತು ಹಲವು ದಿಕ್ಕುಗಳಿಂದ ಸಂವಿಧಾನಕ್ಕೂ ಮತ್ತು ಸಂವಿಧಾನ ಶಿಲ್ಪಿಗೂ ಅವಮಾನ ಮಾಡಿ, ದಾಳಿ ನಡೆಸುತ್ತಿರುವ ರೋಹಿತ ಚಕ್ರತೀರ್ಥ ಸಮಿತಿಯ ಪುನರ್ ಪರಿಷ್ಕೃತ ಪಠ್ಯಗಳನ್ನು ಹಿಂಪಡೆಯುವಂತೆ ಗಟ್ಟಿ ದನಿಯಲ್ಲಿ ಆಗ್ರಹಿಸಿ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳುವುದು ಇಂದಿನ ಆದ್ಯ ಕರ್ತವ್ಯವಾಗಿದೆ. ಮನುಸೃತಿಯನ್ನು ಸಂವಿಧಾನದ ಜಾಗದಲ್ಲಿ ಪ್ರತಿಷ್ಠಾಪಿಸುವ ವೈದಿಕ ಪುರೋಹಿತಶಾಹಿಯ ಹುನ್ನಾರವನ್ನು ಸೋಲಿಸುವ ಜವಾವ್ದಾರಿ ಎಲ್ಲ ನಾಗರಿಕರ ಮೇಲಿದೆ.


ಇದನ್ನೂ ಓದಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...