Homeಅಂಕಣಗಳುನೂರರ ನೋಟ: ಕರ ನಿರಾಕರಣೆಯನ್ನು ನೆನಪಿಸಿದ ದೆಹಲಿ ರೈತ ಹೋರಾಟ

ನೂರರ ನೋಟ: ಕರ ನಿರಾಕರಣೆಯನ್ನು ನೆನಪಿಸಿದ ದೆಹಲಿ ರೈತ ಹೋರಾಟ

- Advertisement -
- Advertisement -

ಇಂದು ಸರ್ಕಾರಕ್ಕೆ ಸವಾಲಾಗಿರುವ, ಪ್ರಮುಖವಾಗಿ ಪಂಜಾಬ್, ಹರಿಯಾಣಗಳ ಮತ್ತು ದೇಶದೆಲ್ಲೆಡೆಯಿಂದ ಸೇರಿಕೊಳ್ಳುತ್ತಿರುವ ರೈತರ ಚಳವಳಿ ಭಾರತದಲ್ಲಿ ನಡೆಯುತ್ತಿರುವ ಎಲ್ಲ ಚಳವಳಿಗಿಂತ ಭಿನ್ನವಾದುದು ಮತ್ತು ಗಾಂಧಿಯವರ ಸತ್ಯಾಗ್ರಹದಷ್ಟೇ ಪರಿಣಾಮಕಾರಿಯಾದುದು. ಅಹಿಂಸೆಯ ಪ್ರಯೋಗ ಶಾಲೆಯಂತಿದೆ ರೈತ ಹೋರಾಟ.

ಉತ್ತರಕನ್ನಡ ಜಿಲ್ಲೆಯಲ್ಲಿ ನಾಡವ ಜನರು ನಡೆಸಿದ ಕರನಿರಾಕಣೆ ಸತ್ಯಾಗ್ರಹವನ್ನು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಸತ್ಯಾಗ್ರಹ ನೆನಪಿಗೆ ತರುತ್ತದೆ.

ಬ್ರಿಟಿಷರ ಕಾಲದಲ್ಲಿ ರೈತರನ್ನು, ಕಾರ್ಮಿಕರನ್ನು ಕಾಲ ಕೆಳಗಿನ ಕಸವಾಗಿ ಆಡಳಿತ ನಡೆಸುವವರು ಕಾಣುತ್ತಿದ್ದರು. ಕಮ್ಯುನಿಸ್ಟರು ಕಾರ್ಮಿಕ ಸಂಘಟನೆಗೆ ಗಮನ ಕೊಟ್ಟರು ಕಾರ್ಮಿಕರ ಹಕ್ಕು ಬಾಧ್ಯತೆಗಾಗಿ ಹೋರಾಟಗಳನ್ನು ನಡೆಸಿದರು, ಅವರು ಹಿಂಸೆ-ಅಹಿಂಸೆ ಇವೆಲ್ಲದರ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಆಕ್ರಮಣಕಾರಿ ಕಾರ್ಮಿಕ ಸಂಘಟನೆಗಳನ್ನು ಕಟ್ಟಿದರು. ಹೋರಾಟ ನಡೆಸಿದ ಸಂದರ್ಭದಲ್ಲಿ ಹಿಂಸೆ, ಪ್ರತಿಹಿಂಸೆ, ಗೋಲಿಬಾರ್ ಎಲ್ಲವೂ ಸಾಂಗವಾಗಿ ನಡೆದವು. ಮಿಲ್ಲು ಕಾರ್ಖಾನೆಗಳ ಮಾಲೀಕರ ಅವರ ಹತ್ತಿರದ ಅಧಿಕಾರಿಗಳ ಕೊಲೆಗಳು ನಡೆದು ಹೋದವು. ಬಂಡವಾಳಶಾಹಿಗಳು ದಬ್ಬಾಳಿಕೆಯನ್ನು ಮುಂದುವರೆಸಲು ಇನ್ನು ಸಾಧ್ಯವಿಲ್ಲವೆಂದು ಅರಿತರು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಅನಿವಾರ್ಯತೆ ನಿಧಾನವಾಗಿ ಉಂಟಾಯಿತು. ಬ್ರಿಟಿಷ್ ಸರ್ಕಾರಕ್ಕೂ ಕೂಡ ಮುಂದೆ ಕಾರ್ಮಿಕರ ಹಿತರಕ್ಷಣೆಯ ಕಾಯ್ದೆಗಳನ್ನು ರಚಿಸುವುದು ಅನಿವಾರ್ಯವಾಯಿತು.

ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಒಂದೇ ಕಡೆ ಇದ್ದದ್ದರಿಂದ ಅವರನ್ನು ಸಂಘಟಿಸುವುದು ಸುಲಭವಾಯಿತು. ಭಾರತದ ನಾನಾ ಹಳ್ಳಿಗಳಲ್ಲಿ ರೈತರು ಚದುರಿಹೋಗಿದ್ದರಿಂದ ಅವರ ಸಂಘಟನೆ ಯಶಸ್ವಿಯಾಗಲಿಲ್ಲ. ರೈತರ ಶೋಷಣೆ ಮುಂದುವರೆಯಿತು. ಕಮ್ಯುನಿಸ್ಟರು ರೈತರ ಸಂಘಟನೆಗೂ ಕೈ ಹಾಕಿದರಾದರೂ ಅದು ಫಲ ಕೊಡಲಿಲ್ಲ. ಸ್ವಾತಂತ್ರ್ಯ ಪ್ರಾಪ್ತವಾಗುವವರೆಗೂ ರೈತರ ಈ ಬವಣೆ ಮುಂದುವರೆಯಿತು. ಸ್ವಾತಂತ್ರ್ಯ ಪ್ರಾಪ್ತವಾದ ಎಷ್ಟೋ ವರ್ಷಗಳ ನಂತರ ರೈತಸಂಘಗಳು ತಲೆ ಎತ್ತಿದವು. ಅವು ತಮ್ಮ ಇತಿಮಿತಿಯಲ್ಲಿ ರೈತರ ಶೋಷಣೆಯನ್ನು ತಡೆಗಟ್ಟಿದವು. ಈಗ ಪಂಜಾಬ್ ಮತ್ತು ಹರ್ಯಾಣ ರೈತರ ಸಂಘಟನೆಗಳ ಮುಂದಾಳತ್ವದಲ್ಲಿ ರೈತರು ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಡ ತರುವಷ್ಟು ಶಕ್ತಿಯುತವಾದ ಸಂಘಟನೆಯನ್ನು ರೂಪಿಸಿಕೊಂಡಿದ್ದಾರೆ. ಇದು ಒಂದು ವಿಸ್ಮಯಕರವಾದ ಬೆಳವಣಿಗೆ.

ಈಗ ಸರ್ಕಾರ ಈ ಸವಾಲನ್ನು ಎದುರಿಸಬೇಕಾದ ದುಸ್ಥಿತಿಗೆ ತಲುಪಿದೆ. ಸರ್ಕಾರ ಇದನ್ನು ತನ್ನ ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿದೆ. ಅದ್ದರಿಂದ ಹೋರಾಟಕ್ಕಾಗಿ ಸುಮಾರು 60 ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಈ 30 ಸಾವಿರ ರೈತರನ್ನು tire out ಮಾಡುವುದು ಹೇಗೆ ಎಂದು ಸರ್ಕಾರ ತಂತ್ರ ಹೊಸೆಯುತ್ತಿದೆ. ರೈತ ಸಂಘಟನೆಗೆ ಸರ್ಕಾರದ ಆಲೋಚನೆಯ ಅರಿವಿದೆ. ಈ ಕಾನೂನುಗಳಿಂದ ಇದುವರೆಗೆ ತಾನು ಬೆಳೆದ ಬೆಳೆಗೆ ನಿಖರವಾದ ಆದಾಯ ದೊರೆಯುತ್ತದೆ, ಬೆಂಬಲ ಬೆಲೆ ದೊರೆಯುತ್ತದೆ ಎಂಬ ಭರವಸೆಯನ್ನು ಸರ್ಕಾರ ನೀಡುತ್ತಿದೆ. ಆದರೆ ಸರ್ಕಾರ ಎಲ್ಲಿ ತಮ್ಮನ್ನು ಅದಾನಿ, ಅಂಬಾನಿಗಳ ಅಧೀನರನ್ನಾಗಿ ಮಾಡಿಬಿಡುವುದೋ ಎಂಬ ಭಯ ರೈತರದ್ದು.

ಸರ್ವೋಚ್ಚ ನ್ಯಾಯಾಲಯ ಈ ಮೂರು ರೈತ ವಿರೋಧಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆಯಾದರೂ, ಅಂತಿಮವಾಗಿ ಈ ಮೂರು ಕಾಯ್ದೆಗಳನ್ನು ಅಲ್ಲಲ್ಲಿ ತಿದ್ದುಪಡಿ ಮಾಡಿ ರೈತರು ಇದಕ್ಕೆ ಒಪ್ಪಿಕೊಳ್ಳಬೇಕೆಂದು ತೀರ್ಪುಕೊಡಬಹುದು ಎಂಬ ಭಯ ರೈತ ಸಂಘಟನೆಗಳಿಗೆ ಇದೆ. ಅಷ್ಟೇ ಅಲ್ಲ ಸರ್ಕಾರ ಕೂಡ ರೈತ ಹೋರಾಟದ ತೀವ್ರತೆಯನ್ನು ಅಡಗಿಸಲು ಬೇರೆ ಬೇರೆ ತಂತ್ರಗಳನ್ನು ಹರಿಯಬಿಡಬಹುದು. ಆದರೆ ದೆಹಲಿಯಲ್ಲಿ ಝಾಂಡಾ ಹೂಡಿರುವ ಈ ರೈತ ಸಂಘಟನೆಯವರು ಸರ್ಕಾರದ ನಿಲುವು ಬದಲಾದಂತೆ ಕೂಡಲೇ ಆ ನಿಲುವನ್ನು ಬೆತ್ತಲೆ ಮಾಡುವುದಕ್ಕೆ ಅಷ್ಟೇ ಚಾಕಚಕ್ಯತೆಯನ್ನು ತೋರುತ್ತಾರೆ. ’ರೈತರ ಸಮಸ್ಯೆ ಪರಿಹಾರಕ್ಕೆ ದಾರಿಯನ್ನು ಹುಡುಕಲು ತೊಡಗಿದರೆ, ಈಗಾಗಲೇ ತರಲಾಗಿರುವ CAA ಮುಂತಾದ ಕಾನೂನುಗಳ ವಿಚಾರಕ್ಕೆ ಅದೇ ಮಾನದಂಡವನ್ನು ಉಪಯೋಗಿಸಿ ಎಂದು ಸರ್ಕಾರದ ಮೇಲೆ ಒತ್ತಡ ಬಂದೇಬರುತ್ತದೆ. ಆ ಭಯವೂ ಸರ್ಕಾರವನ್ನು ಕಾಡುತ್ತಿರಬಹುದು’ ಎಂದು ಹಿಂದೆ ಕೇರಳ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿದ್ದ ಕೆ. ಜಯಕುಮಾರ್ ಅಭಿಪ್ರಾಯ ಪಡುತ್ತಾರೆ.

PC : The Week

ರೈತರ ಈ ಚಳವಳಿ ಸೋಲನ್ನು ಒಪ್ಪಿಕೊಳ್ಳುವ ಸಂಭವವೇ ಇಲ್ಲ. ಏಕೆಂದರೆ ಈಗಾಗಲೇ ಈ ರೈತ ಸಂಘಟನೆಗಳ ಮುಖಂಡರು ಭಾರತದ ಎಲ್ಲ ರಾಜ್ಯಗಳಲ್ಲಿರುವ ರೈತ ಸಂಘಟನೆಗಳನ್ನು ಸಂಧಿಸಿ, ಅವನ್ನೂ ಬಲಗೊಳಿಸುವ ಹೋರಾಟಕ್ಕೆ ಅನುಗೊಳಿಸುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಆದ್ದರಿಂದ ಸರ್ಕಾರ ತಮ್ಮ ಪ್ರತಿಷ್ಠೆಯ ನಿಲುವನ್ನು ಸಡಿಲಿಸಿ ರೈತರ ಕೋರಿಕೆಯಾದ ಈ ರೈತ ವಿರೋಧಿ ಶಾಸನಗಳನ್ನು ರದ್ದುಗೊಳಿಸುವುದು ವಿವೇಕಯುತವಾದ ನಿಲುವು.

ಇನ್ನು ಅದಾನಿ, ಅಂಬಾನಿಗಳ ಪಾತ್ರದ ಬಗೆಗೆ ಎರಡು ಮಾತು. ಮೋದಿಯವರು ಅಧಿಕಾರ ಹಿಡಿಯುವ ಮೊದಲು ಇದ್ದ ಸರ್ಕಾರಗಳೂ ಬಂಡವಾಳಶಾಹಿ ಕಾರ್ಪೊರೆಟ್‌ಗಳನ್ನು ಬೆಂಬಲಿಸುತ್ತಲೇ ಇದ್ದರು. ಅಂದಿನ ದಿನಗಳಲ್ಲಿ ಟಾಟಾ, ಬಿರ್ಲಾಗಳ ಹಾವಳಿಯ ಬಗೆಗೆ ಬಹಳ ಕೇಳಿಬರುತ್ತಿತ್ತು, ಆದರೆ ಇಂದಿನ ಅದಾನಿ, ಅಂಬಾನಿಗಳಂತೆ ಸರ್ಕಾರದೊಡನೆ ಹೆಣೆದುಕೊಳ್ಳಲು ಆಗಿನ ಸರ್ಕಾರಗಳು ಅವಕಾಶ ಕಲ್ಪಿಸುತ್ತಿರಲಿಲ್ಲ. ದೊಡ್ಡ ದೊಡ್ಡ ಕಂಟ್ರಾಕ್ಟುಗಳನ್ನು ಅವರ ಪಾಲಾಗಲು ಸರ್ಕಾರ ನಡೆಸುವವರು ನೆರವಾಗುತ್ತಿದ್ದರು. ಆದರೆ ಅವರ ತೆಕ್ಕೆಗೆ ಸರ್ಕಾರ ಎಂದೂ ಬಿದ್ದದ್ದಿಲ್ಲ.

ರೈತರ ಈ ಹೋರಾಟ 2024ರ ಪಾರ್ಲಿಮೆಂಟ್ ಚುನಾವಣೆವರೆಗೂ ನಡೆಯುತ್ತದೆ ಎಂದು ದೆಹಲಿಯಲ್ಲಿ ಸತ್ಯಾಗ್ರಹ ನಡೆಸುತ್ತಿರುವ ರೈತ ಸಂಘಟನೆಗಳ ಒಕ್ಕೂಟ ನಿರ್ಧರಿಸಿ ಹೇಳಿದೆ. ಮೋದಿಯವರು ಮರ್ಯಾದೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೊಂಡುತನಕ್ಕೆ ಬಿದ್ದರೆ, ಸರ್ಕಾರ ಮುಂದೆರಡು ವರ್ಷಗಳ ಕಾಲ ನೆಮ್ಮದಿಯಾಗಿ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೋದಿಯವರು ’ನಾನು ತಂದ ಈ ಕಾಯ್ದೆಗಳ ಬಗ್ಗೆ ನಿಮಗೆ ಆತಂಕ ಇದೆ. ಆದ್ದರಿಂದ ಈ ಮೂರು ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿ ರೈತರ ಹೋರಾಟವನ್ನು ಮುಕ್ತಾಯಗೊಳಿಸಿ ಎಂದು ರೈತ ಮುಖಂಡರಿಗೆ ತಿಳಿಸಬೇಕು.

ರೈತ ಸಂಘಟನೆ ಬೆಳೆದು ಸದೃಢವಾಗಿಸಲು ಬಹಳ ಕಾಲಬೇಕಾಯಿತು. ರೈತರು ಬೆಳೆದದ್ದನ್ನು ಸರ್ಕಾರವೇ ಕೊಳ್ಳಬೇಕು. ಈಗ ನಾವು ಮಧ್ಯವರ್ತಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದೇವೆ. ಈ ಮಿಡಲ್‌ಮ್ಯಾನ್ ಮತ್ತು ಸಗಟು ವರ್ತಕರು ನಮ್ಮನ್ನು ಅಡಕತ್ತರಿಯಲ್ಲಿ ಸಿಕ್ಕಿಸಿಕೊಂಡು ಅಪಾರವಾಗಿ ಲಾಭ ಸಂಪಾದಿಸುತ್ತಿದ್ದಾರೆ. ಬೆಳೆದ ಬೆಳೆಗೆ ಬೆಂಬಲ ನೀಡಿ ರೈತರಿಗಾಗುತ್ತಿರುವ ಶೋಷಣೆಯನ್ನು ತಪ್ಪಿಸಲು ಸರ್ಕಾರ ನೆರವಿಗೆ ಬರಬೇಕು ಆದರೆ ಈಗ ರೈತ ವಿರೋಧಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ.

ಬಂಡವಾಳಶಾಹಿ ಗ್ಯಾಂಗ್‌ನವರು ಈಗಾಗಲೇ ಆಹಾರ ಧಾನ್ಯಗಳನ್ನು ದೋಚಲು 53 ವ್ಯವಸಾಯಾಧಾರಿತ ತಳಹದಿಯ ಕಂಪನಿಗಳನ್ನು ರಿಜಿಸ್ಟರ್ ಮಾಡಿದ್ದಾರೆ. ರೈತರ ಸುಲಿಗೆ ಯಾನಕ್ಕೆ ಸಕಲ ಸಿದ್ಧತೆಯೂ ಆಗಿದೆ. ಕಾನೂನನ್ನು ನುಗ್ಗಿಸುವುದು ಮಾತ್ರ ಉಳಿದಿತ್ತು. ಎಚ್ಚೆತ್ತ ಪಂಜಾಬ್ ಮತ್ತು ಹರ್ಯಾಣ ರೈತರ ಮುಂದಾಳತ್ವದಲ್ಲಿ ದೇಶದ ರೈತರೆಲ್ಲ ಒಗ್ಗೂಡಿ ಸಕಾಲದಲ್ಲಿ ಆಂದೋಲನ ಆರಂಭಿಸಿ ಈ ಅನಾಹುತವನ್ನು ತಡೆ ಹಿಡಿದಿದ್ದಾರೆ.


ಇದನ್ನೂ ಓದಿ: ರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...