Homeಎಲೆಮರೆಹಿರೇಹಾಳು ಇಬ್ರಾಹಿಂ ಸಾಬರ ತೋಟದಲ್ಲಿ ಅರಳಿದ ರಂಗಭೂಮಿಯ ಹೂ ಪಿಂಜಾರ ಅಬ್ದುಲ್

ಹಿರೇಹಾಳು ಇಬ್ರಾಹಿಂ ಸಾಬರ ತೋಟದಲ್ಲಿ ಅರಳಿದ ರಂಗಭೂಮಿಯ ಹೂ ಪಿಂಜಾರ ಅಬ್ದುಲ್

- Advertisement -
- Advertisement -
ಎಲೆಮರೆ – 24

ಮಾರ್ಚ್ 13 ರಿಂದ 15 ರ ತನಕ ಬಳ್ಳಾರಿಯ ರಂಗತೋರಣ ಸಂಸ್ಥೆಯು 13ನೇ `ರಾಜ್ಯ ವಿದ್ಯಾರ್ಥಿ ನಾಟಕೋತ್ಸವ’ ಆಯೋಜಿಸಿತ್ತು. ಬಳ್ಳಾರಿ ಭಾಗದಲ್ಲಿ ರಂಗಭೂಮಿ ಕುರಿತು ವಿಶೇಷ ಅರಿವು ಮತ್ತು ಕಾಳಜಿ ಮೂಡಿಸುತ್ತ ನಿರಂತರ ಕ್ರಿಯಾಶೀಲವಾಗಿರುವ ರಂಗತೋರಣ ಸಂಸ್ಥೆಯು ಈ ನಾಟಕೋತ್ಸವಕ್ಕೆ ಸರ್ವಾಧ್ಯಕ್ಷರನ್ನಾಗಿ ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಯ ರಂಗಜಂಗಮ ಪಿಂಜಾರ ಅಬ್ದುಲ್ಲ ಅವರನ್ನು ಆಯ್ಕೆ ಮಾಡಿತ್ತು. ಇದು ತೆರೆಮರೆಯಲ್ಲಿ ಪಿ.ಅಬ್ದುಲ್ ಅವರು ನಡೆಸುತ್ತಿರುವ ರಂಗಚಟುವಟಿಕೆಗಳಿಗೆ ಸಾರ್ಥಕ ಗೌರವ ಸಲ್ಲಿಕೆಯಾಗಿತ್ತು.

ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಯ ಕೊಳಗೇರಿಯಲ್ಲಿ `ಶಿಶುನಾಳ ಶರೀಫ’ ರ ಹೆಸರಿನ ಪುಟ್ಟ ರಂಗಮಂದಿರವಿದೆ. ಈ ವೇದಿಕೆಯ ಹಿಂದಣ ಬೆಳಕು `ಭಾವೈಕ್ಯತಾ ವೇದಿಕೆ’. ಈ ವೇದಿಕೆ ರೂಪುಗೊಂಡದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ, ವೇದಿಕೆಯನ್ನು ರೂಪಿಸುವಲ್ಲಿ ತನ್ನನ್ನೇ ತೇಯ್ದುಕೊಂಡ ಪಿ.ಅಬ್ದುಲ್ ಅವರು ತಮ್ಮದೇ ಆತ್ಮಕಥನದ ಮುಖ್ಯ ಎಳೆ ಎಂಬಂತೆ `ಪಯಣ’ದ ಹೆಜ್ಜೆಗಳನ್ನು ವಿವರಿಸುತ್ತಾರೆ. ಇದು ವೇದಿಕೆಯ ಆತ್ಮಕಥನದಂತೆಯೂ ಕೇಳಿಸತೊಡಗುತ್ತದೆ.

ಅಬ್ದುಲ್ ಅವರು `ಪಿಂಜಾರ’ ಸಮುದಾಯದವರು. ಹತ್ತಿಯನ್ನು ಹದಗೊಳಿಸಿ ದಿಂಬು, ಗಾದಿಯನ್ನು ಹೊಲಿಯುವ `ಪಿಂಜಾರ’ ಸಮುದಾಯ ಮೂಲತಃ ಧಾರ್ಮಿಕ ಸಂಕರತೆಯ ಸೃಷ್ಟಿ. ಅಂತೆಯೇ ಇವರು ಹಿಂದೂಮುಸ್ಲಿಂ ಬೆಸುಗೆಯ ಸಾಂಸ್ಕೃತಿಕ ವಕ್ತಾರರಂತೆ ಕಾಣುತ್ತಾರೆ. ಹಾಗಾಗಿ ಮುಸ್ಲಿಂ ಧರ್ಮದಲ್ಲಿ ಪಿಂಜಾರರು ಒಂದು ಬಗೆಯಲ್ಲಿ ಅಸ್ಪೃಶ್ಯರು. ಮೂಲತಃ ಎರಡು ಸಂಗತಿಗಳನ್ನು ಹೊಲಿದು ಜೋಡಿಸುವ ಈ ಸಮುದಾಯ ಎರಡು ಧರ್ಮಗಳ ಜನರನ್ನು `ಬಂಧುತ್ವ’ `ಸಾಮರಸ್ಯ’ದ ನೆಲೆಯಲ್ಲಿ ಹೊಲಿಯುವ ಕೆಲಸವನ್ನೂ ಮಾಡುತ್ತಿದೆ. ಅಬ್ದುರ್ ಅವರ ಕುಟುಂಬದವರು `ಅಮೀನ್ ಬೆಡ್ಸ್’ ಮೂಲಕ ಮೂಲ ಕುಲವೃತ್ತಿಯನ್ನೂ, ಜತೆಗೆ ಸಾಮರಸ್ಯದ ಸಮುದಾಯಿಕ ಪ್ರಜ್ಞೆಯ `ಭಾವೈಕ್ಯತಾ ವೇದಿಕೆ’ಯನ್ನೂ ಕಾಪಿಟ್ಟುಕೊಂಡಿದ್ದಾರೆ.

ಈ ವೇದಿಕೆಯ ಕನಸು ಅಬ್ದುಲ್ ಅವರದಾದರೂ, ಈ ಕನಸಿನ ಬೇರುಗಳು ರೂಪುಗೊಂಡಿದ್ದು ಶಿವಮೊಗ್ಗದ ಹೆಚ್.ಇಬ್ರಾಹಿಂ ಸಾಹೇಬರ ಮನೆಯ ಸಾಂಸ್ಕೃತಿಕ ವಾತಾವರಣದಲ್ಲಿ. ಸ್ವತಃ ಇಬ್ರಾಹಿಂ ಸಾಹೇಬರು ರೂಪುಗೊಂಡ ಕತೆಯೂ ಕುತೂಹಲಕಾರಿಯಾಗಿದೆ. ಪ್ಲೇಗ್ ಭೀಕರತೆಗೆ ಹೆದರಿ ಬಾಲಕ ಇಬ್ರಾಹಿಂ ತಂದೆ ಹುಸೇನಪ್ಪ ತನ್ನೂರು ತೊರೆದು ಬಳ್ಳಾರಿ ಸಮೀಪದ ದಂಡಿನ ಹಿರೇಹಾಳು ಗ್ರಾಮಕ್ಕೆ ಬರಿಗೈಯಲ್ಲಿ ಬರುತ್ತಾರೆ. ತನ್ನ ಪ್ರಾಮಾಣಿಕತೆ ಮತ್ತು ಅವಿರತ ದುಡಿಮೆಯ ಕಾರಣಕ್ಕೆ ಊರಜನರ ಮನಸ್ಸು ಗೆಲ್ಲುತ್ತಾರೆ. ಅಲ್ಲಿನ ನೀಲಕಂಠೇಶ್ವರ ದೇವಾಲಯದ ಎದುರು ಮನೆ ಕಟ್ಟಿಕೊಂಡು ನೆಲೆಯೂರುತ್ತಾರೆ. ವ್ಯವಹಾರದ ಸೋಲುಗೆಲುವಿನ ಆಟದಲ್ಲಿ ಹುಸೇನಪ್ಪ ತನ್ನ ಕುಲವೃತ್ತಿಯಾದ ಗಾದಿ ಹೊಲಿಯುವುದನ್ನು ಬಿಟ್ಟು, ಆಕಸ್ಮಿಕವಾಗಿ ಅಬಕಾರಿ ಗುತ್ತಿಗೆ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ. ಇದು ಇವರನ್ನು ಹಿರೇಹಾಳಿನಿಂದ ಶಿವಮೊಗ್ಗಕ್ಕೆ ತೆರಳುವಂತೆ ಮಾಡುತ್ತದೆ. ಮಗ ಇಬ್ರಾಹಿಂನನ್ನು ಹೆಚ್ಚು ಓದಿಸಬೇಕೆಂಬ ಕನಸಿದ್ದರೂ, ಮಗನೂ ಅಬಕಾರಿ ವ್ಯವಹಾರದಲ್ಲೆ ಮುಂದುವರಿಯುತ್ತಾನೆ. ಈ ಕ್ಷೇತ್ರದಲ್ಲಿ ದುಡಿದು ದೊಡ್ಡ ಉದ್ಯಮಿಯಾಗುತ್ತಾರೆ. ಮುಂದೆ ವೃತ್ತಿಗೆ ವಿರುದ್ಧವೆಂಬಂತೆ ಸಾಂಸ್ಕೃತಿಕ ವಲಯದ ಒಡನಾಡಿಯಾಗಿ ಬದಲಾಗುತ್ತಾರೆ.

ಕತೆಗಾರ್ತಿ ವೈದೇಹಿಯವರು ಹೇಳುವಂತೆ, `ಎಚ್. ಇಬ್ರಾಹಿಂ ಎಲ್ಲಿಂದಲೋ ಬಂದವರು ಎಲ್ಲರ ಮನ ಗೆದ್ದರು, ಎಲ್ಲದಕ್ಕೂ ಬೇಕಾದವರಾದರು. ಸಂಗೀತಕಛೇರಿ, ವಿಚಾರಸಂಕಿರಣ, ಸಾಹಿತ್ಯ ಸಮ್ಮೇಳನ, ನಾಟಕೋತ್ಸವ, ಪುಸ್ತಕ ಬಿಡುಗಡೆ, ಗಣೇಶೋತ್ಸವ, ಈದ್ ಮಿಲಾದ್ ಶಿವಮೊಗ್ಗೆಯಲ್ಲಿ ಏನೇ ನಡೆಯಲಿ, ಅಲ್ಲಿ ಎದುರಿಗೆ ಕಾಣಿಸದೆ, ಹಿಂದೆಯೇ ಇದ್ದು ಎಲ್ಲವನ್ನೂ ಸಾಂಗವಾಗಿ ನಡೆವಂತೆ ಸಹಕಾರ, ಸಹಯೋಗವಿತ್ತು ಕಣ್ಣಿಡುವ ದಾಕ್ಷಿಣ್ಯವಂತ ಈ ಇಬ್ರಾಹಿಂ’ ಎನ್ನುತ್ತಾರೆ.

ಹೀಗೆ ಇಬ್ರಾಹಿಂ ಅವರ ಮನೆಯೆಂದರೆ ಸಾಹಿತಿಗಳು, ನಾಟಕಕಾರರು, ಸಂಸ್ಕøತಿ ಚಿಂತಕರು, ಜನಪದ ಕಲಾವಿದರು ಒಡನಾಡುವ ಸಾಂಸ್ಕೃತಿಕ ಕೇಂದ್ರವಾಗಿ ಬದಲಾಯಿತು. ಸಾಹಿತ್ಯದ ಚರ್ಚೆಗಳು, ನಾಟಕದ ಅಭಿನಯಗಳು ಶಿವಮೊಗ್ಗದಲ್ಲಿ ಗರಿಗೆದರಲು ಇಬ್ರಾಹಿಂ ಸಾಹೇಬರು ಒತ್ತಾಸೆಯಾದರು. ಹಿಂದು ಮುಸ್ಲಿಂ ಎನ್ನುವ ಗಡಿರೇಖೆಗಳು ಅಳಿಸಿ ಸೌಹಾರ್ದದ ಸಾಂಸ್ಕೃತಿಕ ಪರಿಸರವೊಂದು ಸದ್ದಿಲ್ಲದೆ ಅರಳತೊಡಗಿತು. ಇಂತಹ ಪರಿಸರದ ಭಾಗವಾಗಿ ಚಿಕ್ಕಪ್ಪನ ಮನೆಯಲ್ಲಿ ಅಬ್ದುಲ್ ಅವರ ಬಾಲ್ಯ ರೂಪುಗೊಂಡಿತು. ಆಗಲೆ ಅವರ ಒಳಗೊಂದು ಸೌಹಾರ್ದದ ಕನಸಿನ ಕೂಸು ಮೊಳಕೆಯೊಡೆಯಿತು. ರಂಗಭೂಮಿಯ ಜತೆಗಿನ ನಂಟು ಗಾಢವಾಯಿತು, ಹೋರಾಟದ ಪ್ರಾಥಮಿಕ ಪಾಠವೆಂಬಂತೆ ಗೋಕಾಕ್ ಚಳವಳಿಯಲ್ಲಿ ಉಪವಾಸ ಕೈಗೊಂಡು ಜೈಲುವಾಸವನ್ನೂ ಅನುಭವಿಸಿದರು. ಹೀಗೆ ಅಬ್ದುಲ್ ಅವರಿಗೆ ಪ್ರೇರಕಶಕ್ತಿಯಾಗಿದ್ದ ಹೆಚ್.ಇಬ್ರಾಹಿಂ ಸಾಹೇಬರು ಆಗಸ್ಟ್ 1, 2014 ರಲ್ಲಿ ದೇಹ ತ್ಯಜಿಸಿದರು. ಆ ಹೊತ್ತಿಗೆ ಅವರ ಸೌಹಾರ್ದದ ಕನಸು ಭಾವೈಕ್ಯತಾ ವೇದಿಕೆ 23 ವರ್ಷ ಪೂರೈಸಿ ಬೆಳ್ಳಿಹಬ್ಬದತ್ತ ಹೆಜ್ಜೆ ಇಟ್ಟಿತ್ತು.

ಹೀಗೆ ಅಬ್ದುಲ್ ಅವರು ಇಂತಹ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದು, ಪದವಿವರೆಗೂ ಓದಿ ಕ್ರಾಂತಿಯ ಕನಸೊತ್ತು, ಸಮಾಜವನ್ನು ಬದಲಿಸಬೇಕೆಂಬ ಉತ್ಸಾಹದಲ್ಲಿ ತಾನು ಹುಟ್ಟಿದ ಇದೇ ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಗೆ ವಾಪಸಾದರು. ಮಹಿಳೆಯರ ಕಳ್ಳ ಸಾಗಣೆ ವಿರುದ್ಧ ಸಮುದಾಯದವರು ಹೇಳಿದ ದೂರನ್ನು ದಾಖಲಿಸಿದ್ದಕ್ಕೆ ಹಲ್ಲೆಗೆ ಒಳಗಾದರು, ಊರು ಬಿಟ್ಟು ಓಡಿದರು. ಸುಳ್ಳು ಕೇಸುಗಳ ಜಾಲದಲ್ಲಿ ಸಿಲುಕಿ ಕೆಲಕಾಲ ತಲೆಮರೆಸಿಕೊಂಡರು, ಕುಟುಂಬ ನಲುಗಿತು. ಇಷ್ಟಾಗಿಯೂ ಇದೇ ಚೌಕಿಯಲ್ಲಿ ಏನನ್ನಾದರೂ ಮಾಡಬೇಕೆಂದು ಪಣತೊಟ್ಟರು.

1991 ರಲ್ಲಿ ಹೊಸಪೇಟೆ ಭಾಗದಲ್ಲಿ ನಡೆದ ಕೋಮುಗಲಭೆಯಿಂದಾಗಿ ಇಡೀ ನಗರ ಮತ್ತು ಸುತ್ತಮುತ್ತಣ ಹಳ್ಳಿಗಳಲ್ಲಿ ಆತಂಕದ ಛಾಯೆಯಿತ್ತು. ಸೌಹಾರ್ದದಿಂದ ಬದುಕುವ ಜನಬದುಕಿನಲ್ಲಿ ದೊಡ್ಡದೊಂದು ಗಾಯವಾಗಿ ನೋಯತೊಡಗಿತ್ತು. ಇಂತಹದ್ದೊಂದು ಗಾಯಕ್ಕೆ ಮುಲಾಮು ಹುಡುಕುವ ಯೋಚನೆ ಅಬ್ದುಲ್ ಅವರನ್ನು ನಿದ್ದೆಗೆಡಿಸಿತು. ಫಲವಾಗಿ ಹೊಸಪೇಟೆಯ ಜಂಬಯ್ಯ ನಾಯಕ, ನಾರಾಯಣಭಟ್, ಕಲ್ಲಂಭಟ್, ಪರುಷರಾಮ ಕಲಾಲ್ ಮೊದಲಾದವರು ಸೇರಿ ಚರ್ಚಿಸಿದರು. ಹಿಂದು ಮುಸ್ಲಿಂ ಸೌಹಾರ್ದತೆಯ ಕುರುಹಾದ ಮೊಹರಂ ಹಾಡುಗಳ ಸ್ಪರ್ಧೆಯನ್ನು ಆಯೋಜಿಸಿದರು. ಈ ಸಮಾವೇಶಕ್ಕೆ ಹೆಸರಿಡುವ ಚರ್ಚೆ ಬಂದಾಗ ಕನ್ನಡ ವಿಶ್ವವಿದ್ಯಾಲಯದಿಂದ ಬರುತ್ತಿದ್ದ ಕಿರಂ ನಾಗರಾಜ ಅವರು ಸೂಚಿಸಿದ `ಭಾವೈಕ್ಯತೆ’ ಎನ್ನುವ ಹೆಸರು ಅಂತಿಮವಾಯ್ತು. ಮುಂದೆ ಅದೇ ಹೆಸರಿನ ವೇದಿಕೆಯೊಂದು ರೂಪುಗೊಂಡಿತು. ಅಬ್ದುಲ್ ವೇದಿಕೆಯ ಖಜಾನ್ಸಿಯಾದರು. ಇದೀಗ ಇಪ್ಪತ್ತೆಂಟರ ಹರೆಯದಲ್ಲಿ ವೇದಿಗೆ ತನ್ನದೇ ಆದ ಛಾಪು ಮೂಡಿಸುತ್ತಾ ಹೊಸ ಶೋಧಗಳಿಗೆ ಮುಖಮಾಡಿದೆ.

ಒಮ್ಮೆ ಚೌಕಿಯಲ್ಲಿ ಹೆಣ್ಣೊಬ್ಬಳ ಅಸಹಜ ಸಾವು ಕೊಲೆಯಾಗಿರಬಹುದೆಂಬ ಪಿಸುಮಾತುಗಳು ಧ್ವನಿಗೂಡಿದಾಗ, ಈ ಘಟನೆ ಅಬ್ದುಲ್‍ರನ್ನು ಕಾಡುತ್ತದೆ. ಕೂಡಲೆ ತಮ್ಮ ಓಣಿಯ ಹುಡುಗರಿಂದ ಜಾಗೃತಿ ಮೂಡಿಸಲು ಬೀದಿ ನಾಟಕ ರೂಪಿಸುತ್ತಾರೆ. ಅದು ಮನೆಯಿಂದ ಮನೆಗೆ ಹಬ್ಬುತ್ತದೆ. `ಈ ಸಾವು ನ್ಯಾಯವೇ? ಎನ್ನುವ ಪ್ರತಿಧ್ವನಿಯನ್ನು ಮೂಡಿಸುತ್ತದೆ. ಪರಿಣಾಮವಾಗಿ ಇಡೀ ಚೌಕಿಯಲ್ಲಿ ಮಹಿಳೆಯ ಸಾವಿನ ಬಗ್ಗೆ ತಳೆದಿದ್ದ ಮೌನದ ಕಟ್ಟೊಡೆದು, ಪೊಲೀಸರಿಗೆ ದೂರು ಕೊಡಲು ಜನರು ಮುಂದಾಗುತ್ತಾರೆ. ಈ ಪ್ರಯೋಗ ಹೆಣ್ಣಿನ ದಾರುಣ ಅಂತ್ಯಕ್ಕೆ ಹೋರಾಟದ ಆಯಾಮ ನೀಡುತ್ತದೆ. ಈ ಘಟನೆಯೇ ಭಾವೈಕ್ಯತಾ ವೇದಿಕೆಯ ಬಹುಮುಖ್ಯ ಸಂವಹನದ ಗುರುತಾಗಿ `ಬೀದಿನಾಟಕ’ ಮುನ್ನಲೆಗೆ ಬರುತ್ತದೆ.

ಅಬ್ದುಲ್ ಅವರು ಮಾತನಾಡುತ್ತ `ರಂಗಭೂಮಿಗೆ ಜನರನ್ನು ಕರೆಯುವ ಬದಲು ಜನರ ಬಳಿಗೆ ಹೋಗುವ ಮಾಧ್ಯಮವಾದ ಬೀದಿನಾಟಕವನ್ನು ಮೊದಲಿಗೆ ಆಯ್ದುಕೊಂಡೆವು. ತೀರಾ ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರನ್ನು ಮುಟ್ಟುವ ತಟ್ಟುವ ಮಾಧ್ಯಮ ಇದಾಗಿದೆ. ಅಂತೆಯೇ ವಿಷಯಗಳನ್ನು ಸರಳವಾಗಿಯೂ, ನೇರವಾಗಿಯೂ ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಭಾವೈಕ್ಯತಾ ವೇದಿಕೆಯ ಮುಖ್ಯ ಮಾಧ್ಯಮ ಬೀದಿ ನಾಟಕವಾಯಿತು’ ಎನ್ನುತ್ತಾರೆ. ಹೀಗೆ ನಿರಂತರವಾಗಿ ರಂಗಭೂಮಿಯನ್ನು ಉಸಿರಾಡುತ್ತಾ ಪ್ರಚಾರ ಬಯಸದೆ, ಪದವಿ ಹುದ್ದೆಗಳಿಗಾಗಿ ಅಂಗಲಾಚದೆ ತಮ್ಮದೇ ಕಾಲುದಾರಿಯಲ್ಲಿ ಬೀದಿ ನಾಟಕದ ಕನಸು ಕಾಣುವ ಪಿ.ಅಬ್ದುಲ್ ಅವರ ಕನಸುಗಳು ನನಸಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...