Homeಮುಖಪುಟವಿರೋಧ ಪಕ್ಷಗಳನ್ನು ನಾಮಾವಶೇಷ ಮಾಡುವುದೇ ಗುರಿ ಎಂದವರು ಈಗ ಸಹಕರಿಸಬೇಕು ಎನ್ನುತ್ತಿದ್ದಾರೆ!

ವಿರೋಧ ಪಕ್ಷಗಳನ್ನು ನಾಮಾವಶೇಷ ಮಾಡುವುದೇ ಗುರಿ ಎಂದವರು ಈಗ ಸಹಕರಿಸಬೇಕು ಎನ್ನುತ್ತಿದ್ದಾರೆ!

ಸರಕಾರಕ್ಕೆ ಸಲಹೆ ನೀಡಿ ಅದಕ್ಕೆ ಮಾರ್ಗದರ್ಶನ ಮಾಡಬೇಕಾದ ಸಂಸ್ಥೆಗಳನ್ನು ಸ್ತಂಭೀಭೂತಗೊಳಿಸಿ ನಿಷ್ಕ್ರಿಯಗೊಳಿಸಲಾಗಿದೆ

- Advertisement -
- Advertisement -

ಈ ಬಾಲನರೇಂದ್ರ ಆ ಕಾಲದಲ್ಲಿ ಅಸ್ತಿತ್ವದಲ್ಲೇ ಇಲ್ಲದಿದ್ದ ರೈಲ್ವೇ ಸ್ಟೇಶನ್ನಲ್ಲಿ ಟೀ ಮಾರುವ ಬದಲು ಶಾಲೆಯಲ್ಲೇ ಒಂದಷ್ಟು ವರ್ಷ ಕಳೆದಿದ್ದರೆ ಆತನಿಗೆ ಹಳೇ ಜಾಣ್ನುಡಿ ಕೆಲವು ಒಳಗಿಳಿಯುತ್ತಿತ್ತೋ ಏನೋ,
“ದಾಟಿದ ಸೇತುವೆಯನ್ನು ನಾಶ ಮಾಡಬೇಡ, ನಾಳೆ ಮರಳುವಾಗ ಬೇಕಾದೀತು”
“ ಮೇಲಕ್ಕೇರುವಾಗ ಸಿಗುವ ಮಂದಿಯೊಂದಿಗೆ ಸೌಜನ್ಯದಿಂದ ವರ್ತಿಸು, ನಾಳೆ ಇಳಿತಾ ಬರುವಾಗ ಅವರು ಮತ್ತೆ ಸಿಗಬಹುದು!”

ಈ ನುಡಿಗಳು ಮೋದಿಗೆ ತನ್ನ ರಾಜಕೀಯದ ಈ ಕಡು ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತಿತ್ತು. ಯಾಕೆಂದರೆ ಇವರು ಸೇತುವೆ ಸುಟ್ಟಿದ್ದಷ್ಟೇ ಅಲ್ಲ, ಎಲ್ಲರನ್ನೂ ಮುಖಭಂಗ ಮಾಡಿದ್ದಾರೆ ಮತ್ತು ಪ್ರತಿಯೊಂದು ಸಂಸ್ಥೆಯನ್ನೂ ಕೆಡಿಸಿದ್ದಾರೆ.

ಭಾರತವನ್ನು ಮೋದಿ ನಾಶ ಮಾಡಿದ ಪ್ರಕ್ರಿಯೆಯನ್ನು ಮೂರು ಘಟ್ಟಗಳಲ್ಲಿ ಗುರುತಿಸಬಹುದು.

  1. ನೋಟು ಅಮಾನ್ಯೀಕರಣ.
  2. 2019ರ ಗೆಲುವು.
  3. ಕೋವಿಡ್‌ ಸಾಂಕ್ರಾಮಿಕ.

ಮೊದಲನೇ ಸಂದರ್ಭದಲ್ಲಿ ನಮ್ಮ ಆರ್ಥಿಕತೆಯನ್ನು ಬುಡಮೇಲು ಮಾಡಿದ್ದಾಯಿತು. ಎರಡನೇ ಸಂದರ್ಭದ ಬಳಿಕ ದೇಶದ ಒಕ್ಕೂಟ ವ್ಯವಸ್ಥೆಗೇ ಕೊಡಲಿಯೇಟು ನೀಡಿದರು. ಒಂಭತ್ತು ರಾಜ್ಯಗಳಲ್ಲಿ ಬುಡಮೇಲು ರಾಜಕೀಯದ ಮೂಲಕವೇ ಅಧಿಕಾರ ಸ್ಥಾಪಿಸಿದ್ದಾಯ್ತು. ಆಮೇಲೆ ಹಿಂದೂ ರಾಷ್ಟ್ರದ ಗುರಿಗಾಗಿ ಸಿಎಎಯನ್ನು ಮುಂದೊತ್ತಲಾಯಿತು. ಮಾದ್ಯಮಗಳನ್ನಂತೂ ಬೆದರಿಸಿ ನಿಯಂತ್ರಣದಲ್ಲಿಡಲಾಯಿತು. ಮೂರು ಕೃಷಿ ಕಾನೂನು, ಕಾರ್ಮಿಕ ಕಾನೂನುಗಳನ್ನು ತಂದ ರೀತಿಯಲ್ಲೇ ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಯ ನಾಶದ ಬೀಜವಿತ್ತು.

ಇದನ್ನೂ ಓದಿ: ರಾಷ್ಟ್ರೀಯ ದುರಂತಕ್ಕೆ ನಾಂದಿ ಹಾಡಿದ ಗುಜರಾತ್ ಮಾದರಿಯ ಅನುಷ್ಠಾನ

ಈ ಮೂರು ಘಟ್ಟದಲ್ಲೂ ಒಂದು ಸಾತತ್ಯವಿತ್ತು. ಎಲ್ಲಾ ರೀತಿಯ ಸಂವಿಧಾನಿಕ, ನಿಯಂತ್ರಕ ಸಂಸ್ಥೆಗಳನ್ನು ನಿಯಂತ್ರಿಸಲಾಯಿತು. ನ್ಯಾಯಾಂಗವನ್ನು ಅಪಮೌಲ್ಯಗೊಳಿಸಲಾಯಿತು. ಸಾರ್ವಜನಿಕ ಅಭಿಪ್ರಾಯಗಳಿಗೆ ನಿರ್ಲಕ್ಷ್ಯ ತೋರಲಾಯಿತು. ಮೋದಿ ಮತ್ತು ಮಾಸ್ಕನ್ನು ಕಣ್ಣ ಮೇಲೆ ಧರಿಸಿರುವ ಅವರ ಪಡೆಗೆ ಇದೆಲ್ಲಾ ಮಹಾ ಸಾಧನೆಯಂತೆ ಗೋಚರಿಸುತ್ತಿದೆ.

ಆಡಳಿತದ ಒಂದೊಂದು ಸಾಧನಗಳೂ ಮೊಂಡಾಗಿ ನಿರುಪಯೋಗವಾದವು. ಅಧಿಕಾರದ ತೀರದ ದಾಹ ಇಷ್ಟು ಅದ್ವಾನಗಳಿಗೆ ಕಾರಣವಾಗಿದೆ.

ಚುನಾವಣೆಯಿರುವ ರಾಜ್ಯಗಳಿಂದ ಆನ್‌ಲೈನ್‌ ಶಾಪಿಂಗ್ ಮಾಡಿದ ಮೋದಿ!

ಈಗ ಇವರು “ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸರಕಾರದ ಜೊತೆ ಕೈಗೂಡಿಸಬೇಕು” ಅಂತಿದ್ದಾರೆ. ಇದರ ವ್ಯಂಗ್ಯ ಅದ್ಭುತ. ಕಳೆದ ಏಳು ವರ್ಷ ಇವರು ಇದರ ತದ್ವಿರುದ್ಧ ಮಾಡಿದ್ದೇ ಜಾಸ್ತಿ. ಧರ್ಮ, ಪ್ರಾದೇಶಿಕತೆ, ಜಾತಿ – ಹೀಗೆ ರಾಜಕೀಯ ಅಧಿಕಾರಕ್ಕಾಗಿ ಏನೇನೆಲ್ಲ ಒಡೆಯಬಹುದೋ ಅಷ್ಟೆಲ್ಲಾ ಒಡೆದದ್ದಾಗಿದೆ. ರೈತರು, ವಿದ್ಯಾರ್ಥಿಗಳು, ಬುದ್ಧಿ ಜೀವಿಗಳು, ಸಾಮಾಜಿಕ ಕಾರ್ಯಕರ್ತರು ಹೀಗೆ ಯಾರನ್ನೂ ಬಿಡದೇ ಪೀಡಿಸಲಾಗಿದೆ. ಎಷ್ಟೇ ಪ್ರತಿಭಟನೆಗಳಾದರೂ ಯಾವುದಕ್ಕೂ ಬಗ್ಗದ ಪೆಡಸುತನ ತೋರಿದ್ದಾರೆ. ಈಗ ಈ ಗುಂಪುಗಳೆಲ್ಲಾ ಅವರ ಹಿಂದೆ ಬೆಂಬಲಕ್ಕೆ ನಿಲ್ಲಬೇಕು ಎಂದು ಬಯಸುತ್ತಿದ್ದಾರೆ.

ಇದನ್ನೂ ಓದಿ: ‘ನಾವೂ ಬದುಕಬೇಕು’: ಜನಾಗ್ರಹ ಆಂದೋಲನಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಬಲ

ವಿರೋಧ ಪಕ್ಷಗಳನ್ನು ನಾಮಾವಶೇಷ ಮಾಡುವುದೇ ಗುರಿ ಎಂದು ಸಾರಿದವರು ಈಗ ವಿರೋಧಪಕ್ಷಗಳು ಸಹಕರಿಸಬೇಕು ಎನ್ನುತ್ತಿದ್ದಾರೆ. ಸಿಬಿಐ, ಇಡಿ, ಎನ್‌ಐಎ ಮತ್ತಿತರ ಏಜೆನ್ಸಿಗಳನ್ನು ಬಳಸಿ ರಾಜಕೀಯ ನಾಯಕರನ್ನು ಬೇಟೆಯಾಡಲಾಗಿದೆ. ಸಾವಿರಾರು ಕೋಟಿಯ ಚುನಾವಣಾ ಬಾಂಡ್‌ ನಿಧಿಸಂಗ್ರಹಿಸಲಾಗಿದೆ. ಭಾಜಪಕ್ಕೆ ಬೇಕಾದ ರೀತಿಯಲ್ಲಿ ಚುನಾವಣೆಗಳು ನಡೆಯುತ್ತಿವೆ.

ಒಕ್ಕೂಟ ವ್ಯವಸ್ಥೆಯನ್ನು ಅಣಕ ಮಾಡುವ ರೀತಿಯಲ್ಲಿ ಆಡಳಿತ ನಡೆಸಲಾಗುತ್ತಿದೆ. ಅಧಿಕಾರವನ್ನು ಹಂಚಿಕೊಳ್ಳುವ ಮಾತೇ ಇಲ್ಲ. ಎಲ್ಲಾ ಕ್ರೆಡಿಟ್‌ ತನಗೇ ಸಲ್ಲಬೇಕು.

ಫೈನಾನ್ಸ್‌ ಕಮಿಷನ್ನಿನ ನಿಯಮಾವಳಿಗಳನ್ನು ಬದಲಾಯಿಸಿ ರಾಜ್ಯಗಳ ಕಾಸು ಮುಕ್ಕಿ ತಿಂದಾಗಿದೆ. ಎರಡು ಬಾರಿಯೂ ತನ್ನ ಪಕ್ಷವನ್ನು ತಿರಸ್ಕರಿಸಿದ ದೆಹಲಿಯ ಮತದಾರರನ್ನು ಅವಮಾನಿಸುವಂತೆ ಲೆಫ್ಟಿನೆಂಟ್‌ ಗವರ್ನರ್‌‌ಗೆ ಸರ್ವಾಧಿಕಾರ ನೀಡಲಾಯಿತು. ಈ ಸಾಂಕ್ರಾಮಿಕದ ಕಾಲದಲ್ಲಿ ಸಾಂಕ್ರಾಮಿಕ ಕಾನೂನಿನ ನೆಪದಲ್ಲಿ ಎಲ್ಲಾ ಅಧಿಕಾರವನ್ನೂ ತಾನೇ ಇಟ್ಟುಕೊಂಡು ರಾಜ್ಯಗಳಿಗೆ ಈ ವಿಷಯದಲ್ಲಿ ಏನೂ ಪಾತ್ರವಿಲ್ಲದಂತೆ ನೋಡಿಕೊಂಡಿದ್ದಾಯಿತು.

ಲಾಕ್‌‌ಡೌನ್‌, ಆರ್ಥಿಕ ಪ್ಯಾಕೇಜು, ಲಸಿಕೆ ಹೀಗೆ ಪ್ರತಿಯೊಂದರಲ್ಲೂ ಅಷ್ಟೇ. ಈಗ ಅವರ ಅದಕ್ಷತೆ ಬಯಲಾಗುತ್ತಿದ್ದಂತೆ ಸಮಸ್ಯೆಯನ್ನು ರಾಜ್ಯಗಳ ಮಡಿಲಿಗೆ ಎಸೆಯುವ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳು ಸಹಕರಿಸಬೇಕು ಎನ್ನುತ್ತಾರೆ. ಆದರೆ ಬಲು ಸೌಜನ್ಯದ ಮಾಜಿ ಪ್ರಧಾನಿ ಕೊಟ್ಟ ಸಲಹೆಗಳನ್ನು ಅಹಂಕಾರದ ನಿರ್ಲಕ್ಷ್ಯದಲ್ಲಿ ಪಕ್ಕಕ್ಕಿಡುವುದಷ್ಟೇ ಅಲ್ಲ ತನ್ನ ಪಕ್ಷದವರ ಮೂಲಕ ಅವರನ್ನು ಗೇಲಿ ಮಾಡಲಾಗುತ್ತದೆ. ಮಹಿಳಾ ಮುಖ್ಯಮಂತ್ರಿಯೊಬ್ಬರನ್ನು ಅಸಭ್ಯ ಧ್ವನಿಯಲ್ಲಿ ಈತ ಅಣಕಿಸುತ್ತಾರೆ.

ಇದನ್ನೂ ಓದಿ: ‘ಟೂಲ್‌ಕಿಟ್-ಲೆಟರ್‌ಹೆಡ್ ಫೋರ್ಜರಿ ಪ್ರಕರಣ: ಬಿಜೆಪಿಯ ರಮಣಸಿಂಗ್, ಸಂಬಿತ್ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲು

ಸರಕಾರಕ್ಕೆ ಸಲಹೆ ನೀಡಿ ಅದಕ್ಕೆ ಮಾರ್ಗದರ್ಶನ ಮಾಡಬೇಕಾದ ಸಂಸ್ಥೆಗಳನ್ನು ಸ್ತಂಭೀಭೂತಗೊಳಿಸಿ ನಿಷ್ಕ್ರಿಯಗೊಳಿಸುತ್ತಾರೆ. ಸರ್ವೋಚ್ಛ ನ್ಯಾಯಾಲಯವೂ ನಿಯಂತ್ರಣಕ್ಕೊಳಗಾದಂತಿದೆ. ಚುನಾವಣಾ ಆಯೋಗವೂ ಇನ್ನೊಂದು ಸರಕಾರಿ ಇಲಾಖೆಯಂತಿದೆ. ಮಾಹಿತಿ ಆಯೋಗ ಮಾಹಿತಿಯನ್ನು ಬಿಡುಗಡೆ ಮಾಡಿದ್ದಕ್ಕಿಂತ ಮುಚ್ಚಿಟ್ಟದ್ದೇ ಜಾಸ್ತಿ. ಲೋಕ್‌‌ಪಾಲ್‌ ಏನಾಯಿತು ಎಂಬುದು ಈ ದಶಕದ ಬಲು ದೊಡ್ಡರಹಸ್ಯವೇ ಸರಿ. ಮಾನವ ಹಕ್ಕು ಆಯೋಗ ಮತ್ತಿತರ ಆಯೋಗಗಳು ಬರೆಯುವ ಪತ್ರಕ್ಕೆ ಯಾವ ಇಲಾಖೆಯೂ ಉತ್ತರಿಸುವ ಗೋಜಿಗೂ ಹೋಗುವುದಿಲ್ಲ.

ಆರೋಗ್ಯ ಭಾರತಕ್ಕಾಗಿ ಸರ್ಕಾರ ನಾಲ್ಕು ರಂಗಗಳಲ್ಲಿ ಕೆಲಸ ಮಾಡುತ್ತಿದೆ- ಪ್ರಧಾನಿ ಮೋದಿ
PC: Asian Age

 

ಕೇಂದ್ರ ಸಂಪುಟವೂ ಪ್ರಧಾನಮಂತ್ರಿ ಕಛೇರಿ ತೆಗೆದುಕೊಂಡ ತೀರ್ಮಾನಗಳಿಗೆ ಸಮ್ಮತಿ ನೀಡುವ ಒಂದು ಕಛೇರಿ ಅಷ್ಟೇ. ಯಾವ ಮಂತ್ರಿಗೂ ತೂಕವಿಲ್ಲ. ಆದ್ದರಿಂದಲೇ ಅವರು ಈ ಸಾಂಕ್ರಾಮಿಕದ ಸಮಯದಲ್ಲಿ ಎಲ್ಲೋ ಅವಿತು ಕೂತಿದ್ದಾರೆ. ಸರಕಾರದ ಅಧಿಕಾರಿಗಳು ನೀತಿ ನಿರೂಪಣೆಗೆ ಕೊಡುಗೆ ನೀಡುವ ಬದಲು ಪ್ರಧಾನಮಂತ್ರಿ ಕಛೇರಿ ಹೇಳಿದ್ದನ್ನು ಮಾಡುವವರಾಗಿದ್ದಾರೆ. ಅತ್ಯುತ್ತಮ ಅಧಿಕಾರಿಗಳು ಕೇಂದ್ರ ಸೇವೆಯಲ್ಲಿಲ್ಲ. ಹೆಚ್ಚಿನವರು ರಾಜ್ಯಗಳಲ್ಲಿ ಇದ್ದಾರೆ. ಗುಜರಾತಿನ ಬಾಹುಳ್ಯವುಳ್ಳ ಅಧಿಕಾರಿಗಳ ಗಡಣದ ಮೇಲೆ ಮೋದಿ ಅವಲಂಬಿತರಾಗಿದ್ದಾರೆ

ಒಟ್ಟಾರೆ, ಪ್ರತಿಧ್ವನಿ ಸೂಸುವ ಕೋಣೆಯೊಂದರಲ್ಲಿ ಮೋದಿ ಬಂಧಿತರಾಗಿದ್ದಾರೆ. ವಾಸ್ತವದ ಸಂಪರ್ಕವೇ ಅವರಿಗಿದ್ದಂತಿಲ್ಲ. ಈ ಸಾಂಕ್ರಾಮಿಕವನ್ನು ಎದುರಿಸಲು ಅವರಲ್ಲಿ ಐಡಿಯಾಗಳೂ ಇಲ್ಲ, ಸಾಧನಗಳೂ ಇಲ್ಲ. ರಾಜ್ಯಭಾರದ ಕಾರ್ಯಾಂಗದ ಯಂತ್ರ ಕೆಲಸ ಮಾಡದೇ ಕೂತಿದೆ. ನ್ಯಾಯಾಂಗ ತನ್ನ ಪಾತ್ರದ ಘನತೆ ಮರುಪಡೆಯಲು ಇನ್ನೆಷ್ಟು ಸಮಯ ಬೇಕೋ?! ಮುಖ್ಯವಾಹಿನಿಯ ಮಾಧ್ಯಮಗಳಿಗೆ ವಿಶ್ವಾಸಾರ್ಹತೆಯೇ ಇಲ್ಲ. ಈತನ ಸಹವಾಸ ಅಂದರೆ ಹುಲಿ ಸವಾರಿ ಎಂಬ ಭಾವನೆ ವಿರೋಧ ಪಕ್ಷಗಳಿಗಿದೆ. ವೈಜ್ಞಾನಿಕ ತಜ್ಞರಿಗೆ ತಮ್ಮ ಬದಲು ಕೊರೋನಿಲ್‌ಗೆ ಆದ್ಯತೆ ನೀಡಲಾಗಿದೆ ಎಂಬ ಭಾವನೆ ಇದೆ.

ಇದನ್ನೂ ಓದಿ: ‘ಅಲೋಪತಿ’ ಕುರಿತ ತನ್ನ ವಿವಾದಾತ್ಮಕ ಹೇಳಿಕೆ ಹಿಂಪಡೆದ ಯೋಗ ಗುರು ರಾಮ್‌ದೇವ್‌

ಮೋದಿಯ ಮಾತು ಮತ್ತು ಕೃತಿ ಎರಡನ್ನೂ ನಂಬಲಾರದ ಸ್ಥಿತಿಯಲ್ಲಿ ಜನರಿದ್ದಾರೆ. ಈ ಸಾಂಕ್ರಾಮಿಕ ತಾಂಡವವಾಡುತ್ತಿರುವ ಈ ದಿನಗಳಲ್ಲಿ ಈತ ಕಣ್ಮರೆಯಾದಂತಿದೆ. ನಿಧಾನಕ್ಕೆ ಇದು ಕಣ್ಮರೆಯಾದಾಗ ಈತ ಮತ್ತೆ ಎದ್ದು ಬಂದು ಕೋವಿಡ್‌ ಮರೆಯಾಗಲು ನಾನೇ ಕಾರಣ ಎಂದು ಕ್ರೆಡಿಟ್‌ ತೆಗೆದುಕೊಂಡು ಸೆಂಟ್ರಲ್‌ ವಿಸ್ತಾ ಕಾಮಗಾರಿ ಮುಂದುವರಿಸುತ್ತಾರೆ. ಆದರೆ ಗಂಗೆಯಲ್ಲಿ ತೇಲುವ ಹೆಣಗಳು ಬೇರೆಯೇ ಕತೆ ಹೇಳುತ್ತಿರುತ್ತವೆ.

ಮೋದಿಗೆ ಸಹಾಯ ಮಾಡಬಹುದಾಗಿದ್ದ ಪ್ರತಿಯೊಂದು ಸಂಸ್ಥೆ/ ರಾಜ್ಯ/ ಸೇವೆಗಳನ್ನು ಉದ್ದಿಶ್ಯಪೂರ್ವಕ ತಿರುಚಿ, ಟೊಳ್ಳಾಗಿಸಲಾಗಿದೆ. ಅಥವಾ ತಿರಸ್ಕಾರಪೂರ್ವಕ ಮೂಲೆಗೆ ತಳ್ಳಲಾಗಿದೆ. ಸದ್ಯಕ್ಕೆ ಈ ಪ್ರಧಾನಿ ಸೈನ್ಯ, ಶಸ್ತ್ರಾಸ್ತ್ರ ಇಲ್ಲದ ದಂಡನಾಯಕನಂತಿದ್ದಾರೆ. ಯಾರ ಸಹಾಯವೂ ಇಲ್ಲದೆ ತಾನು ಬಾನೆತ್ತರಕ್ಕೆ ಏರಬಲ್ಲೆ ಎಂಬ ಅವರ ಅಹಂಕಾರ ಈಗ ಅವರನ್ನು ಒಂಟಿಯಾಗಿಸಿದೆ.

ಆತ ಮತ್ತೆ 2024 ರ ಚುನಾವಣೆ ಗೆಲ್ಲಬಹುದು. ಅಗಣಿತ ನಿಧಿ, ಮಾತಿನ ವೈಖರಿ, ಸರಕಾರಿ ಯಂತ್ರಗಳ ದುರುಪಯೋಗ, ಮುರುಕು ವಿರೋಧ ಪಕ್ಷಗಳು, ಜೊತೆಗೂಡದೇ ಪ್ರತ್ಯೇಕ ಗೂಡುಕಟ್ಟಿಕೊಳ್ಳುವ ವಿರೋಧ ಪಕ್ಷಗಳ ನಾಯಕರು – ಈ ಎಲ್ಲಾ ಕಾರಣಗಳಿಂದ ಆತ ಮತ್ತೆ ಗೆದ್ದು ಆಳಬಹುದು. ಆದರೆ ಆತನ ಬತ್ತಳಿಕೆಯ ಬಾಣಗಳೆಲ್ಲಾ ಬರಿದಾಗಿದೆ. ಇದು ಸಾಂಕ್ರಾಮಿಕ ತಂದ ದುರಂತವಷ್ಟೇ ಅಲ್ಲ, ನಮ್ಮೆಲ್ಲರ ಸಾಮೂಹಿಕ ದುರಂತವೇ ಸರಿ.

ಮೂಲ: ಅವಯ್‌ ಶುಕ್ಲಾ (ನಿವೃತ್ತ IAS)
ಅನುವಾದ: ಕೆ.ಪಿ. ಸುರೇಶ್‌ 

ಇದನ್ನೂ ಓದಿ: ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಣದ ಆರ್ಥಿಕತೆಯ ಬಗ್ಗೆ ಅಸಡ್ಡೆ ತೋರುತ್ತಿರುವ ಸರ್ಕಾರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತದ ಸೇನಾ ಪಡೆಯನ್ನೂ ರಾಜಕೀಯಕರಣ ಗೊಳಿಸಿದ ಮೊಟ್ಟ ಮೊದಲ ಪ್ರಧಾನಿ ಮೋದಿ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಈಗ ಕೇವಲ ಮೋದಿಯ ಗುಮಾಸ್ತ ಅಷ್ಟೇ.
    “ದಿ ವೈರ್” ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮೂಲ ಇಂಗ್ಲಿಷ್ ಲೇಖನದಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿತ್ತು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...