Homeಮುಖಪುಟಕಿಚ್ಚುಹಚ್ಚಿ ಶಾಂತಿಯಾತ್ರೆ ಮಾಡಿದ್ದು ಇತಿಹಾಸದ ವ್ಯಂಗ್ಯ...!!

ಕಿಚ್ಚುಹಚ್ಚಿ ಶಾಂತಿಯಾತ್ರೆ ಮಾಡಿದ್ದು ಇತಿಹಾಸದ ವ್ಯಂಗ್ಯ…!!

- Advertisement -
- Advertisement -

ಬೆಂಕಿಕಡ್ಡಿ ಗೀರಿದ ಪರಿಣಾಮವೇ ಹಿಂಸಾಚಾರಕ್ಕೆ ಮೂಲ ಕಾರಣ. ಮೂರು ಕಿಡಿಗಳು ಹೊತ್ತಿಕೊಂಡು ಉರಿಯಲು ಆರಂಭಿಸಿದಾಗಲೇ ಆರಿಸುವ ಯತ್ನ ಮಾಡಿದ್ದರೆ ಯಾವುದೇ ಅನಾಹುತಗಳು ಸಂಭವಿಸುವ ಸಾಧ್ಯತೆ ಇರಲಿಲ್ಲ.. ಸೂತ್ರಧಾರಿಗಳು ಹೊತ್ತಿಸಿದ ಕಿಡಿಗಳು ಸುಡುತ್ತಲೇ ಹೋದವು. ಬೆಂಕಿ ಹೊತ್ತಿಕೊಳ್ಳುತ್ತಿ ದ್ದಂತೆಯೇ ತುಪ್ಪವನ್ನೂ ಸುರಿಯತೊಡಗಿದರು. ಬೆಂಕಿಯ ಕೆನ್ನಾಲಗೆಗಳು ಇಡೀ ಈಶಾನ್ಯ ದೆಹಲಿಯ ಹಲವು ಪ್ರದೇಶಗಳು ಹೊತ್ತಿ ಉರಿದವು. ಹಿಂಸಾಚಾರ 42 ಬಲಿ ಪಡೆಯಿತು. ನೂರಾರು ಮಂದಿ ಗಾಯಗೊಂಡರು. ಹಲವು ಮನೆಗಳು, ಶಾಪ್ ಮತ್ತು ಮನೆಗಳು ಕಿಡಿಗೇಡಿಗಳು ಹೊತ್ತಿಸಿದ ಬೆಂಕಿಯಲ್ಲಿ ಭಸ್ಮವಾದವು. ಇದರ ಅರಿವು ಇರಬೇಕಾಗಿದ್ದವರು ಜಾಣತನ ಪ್ರದರ್ಶಿಸಿದರು. ಜಾಣತನ ಫಲವೇ ಹಿಂಸಾಚಾರ ಮತ್ತು ಬೆಂಕಿ .

ಧ್ವಂಸಗೈದ ಕೈಗಳಿಗೆ ಮಣ್ಣು ಮೆತ್ತಿಕೊಳ್ಳಲಿಲ್ಲ.ಮಣ್ಣುಮೆತ್ತಿಕೊಂಡ ಸಾಕ್ಷಿಯೂ ಇರಲಿಲ್ಲ.ಎಲ್ಲವೂ ಸೇವೆಯೊಳಗೆ ಮುಗಿದು ಹೋಗಿತ್ತು. 1992, 2002 ಮತ್ತು 2020 ಪ್ರತಿ ಘಟನೆಯ ನಡುವೆ 10 ವರ್ಷಗಳ ಅಂತರವಿದೆ. ಮೂರನೆಯದು 18 ವರ್ಷದ ಅಂತರ.ಇವೆಲ್ಲವೂ  “ನಿರ್ದಿಷ್ಟ ದಾಳಿ”ಯ ಭಾಗವೇ ಆಗಿವೆ. “ನಿರ್ದಿಷ್ಟ ದಾಳಿ”ಗೆ 28 ವರ್ಷಗಳ ಇತಿಹಾಸವಿದೆ. ಈ ಇತಿಹಾಸ ಕರಾಳ ಅಧ್ಯಾಯಗಳು ಪ್ರತಿ ಹತ್ತು ಇಲ್ಲವೇ ಹದಿನೆಂಟು ವರ್ಷಕ್ಕೊಮ್ಮೆ ತೆರೆದುಕೊಳ್ಳುತ್ತಲೇ ಹೋಗುತ್ತಿವೆ. ಸಂಘಟಿತ, ವ್ಯವಸ್ಥಿತ ಮತ್ತು “ನಿರ್ದಿಷ್ಟ ದಾಳಿ” ನಡೆದಾಗ ಸಾಮಾನ್ಯ ಜನತೆ ಜರ್ಝರಿತಗೊಂಡಿರುವುದಂತೂ ಸತ್ಯದ ಸಂಗತಿ.

ಸೂತ್ರ ಹಿಡಿದವರು ಪರದೆಯ ಹಿಂದೆ ಇದ್ದಾರೆ. ಪರದೆಯ ಹಿಂದೆ ಯಾರು ಕುಳಿತಿದ್ದಾರೆ? ಯಾವ ಬೊಂಬೆ ಸೂತ್ರ ಹಿಡಿದ್ದಾರೆಂಬುದು ಪ್ರೇಕ್ಷಕರಿಗೆ ಗೊತ್ತಾಗುತ್ತಿಲ್ಲ. ಸೂತ್ರಧಾರರು ನಿರ್ದೇಶಿಸಿದಂತೆ ಗೊಂಬೆಗಳು ನರ್ತಿಸುತ್ತಿವೆ. ಕೊಳ್ಳಿ ಇಟ್ಟಂತೆ ನಟಿಸಿದರೆ ವಾಸ್ತವದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತದೆ. ಪಾತ್ರದ ಹತ್ಯೆ ನಡೆದುಹೋದರೆ ವಾಸ್ತವದಲ್ಲಿ ಹಲವು ತಲೆಗಳು ಉರುಳಿಹೋಗಿರುತ್ತವೆ. ಸೂತ್ರಧಾರರ ಶಕ್ತಿ ಏನೆಂಬುದು ಅವರ ಬೊಂಬೆ ಆಡಿಸುವ ರೀತಿಯಲ್ಲೇ ತಿಳಿಯುತ್ತದೆ. ರಂಗಸ್ಥಳದಲ್ಲಿ ಅಭಿನಯಿಸುವ ಬೊಂಬೆಗಳು ನಿಜ ಜೀವನದಲ್ಲಿ ಜೀವಂತ ಮನುಷ್ಯರೇ ಆಗಿರುತ್ತಾರೆ. ಅಂಥ ಬೊಂಬೆಗಳಿಂದಾಗಿಯೇ ಈಶಾನ್ಯ ದೆಹಲಿ ಹೊತ್ತಿ ಉರಿಯುತ್ತಿರುವುದು.

ಬೊಂಬೆಗಳು ಅಭಿನಯಿಸುವಾಗ ಯಾರೂ ರಂಗಸ್ಥಳಕ್ಕೆ ಹೋಗುವಂತಿಲ್ಲ. ಹೋಗಬೇಕಾದವರು ಹತ್ತಿರದಲ್ಲೇ ನಿಂತು ತಾದಾತ್ಮ್ಯದಿಂದ ನೋಡುತ್ತಾರೆ. ಬೊಂಬೆಗಳ ಅಭಿನಯ ಅಂಥದ್ದು. ನಿಜದಲ್ಲಿ ಬೆಂಕಿ ಹಚ್ಚಿದರೂ, ಜೀವಗಳು ಉರುಳಿಬಿದ್ದರೂ ಅದು ರಂಗದ ಮೇಲೆಯೇ ನಡೆದಂತೆ ಕಾಣುತ್ತದೆ. ಸೂತ್ರಧಾರರ ”ಪಾಲಕರು” ಆಜ್ಞಾನುವರ್ತಿಗಳು ಬೆಂಕಿ ಹೊತ್ತಿಕೊಂಡಿದ್ದನ್ನು ನೋಡಿ ನೀರು ಸುರಿದು ಆರಿಸುವ ಪ್ರಯತ್ನ ಮಾಡಬಹುದಿತ್ತು ಅದು ಮಾಡಲೇ ಇಲ್ಲ. ”ಊರೆಲ್ಲಾ ಕೊಳ್ಳೇ ಹೋದಮೇಲೆ ದಿಡ್ಡಿ ಬಾಗಿಲು ಹಾಕಿದರು” ಎಂಬಂತೆ ಪಾಲಕರು ನಡೆದುಕೊಂಡರು. ಸೂತ್ರದಾರರ ಕೈಚಳಕ ಪ್ರೇಕ್ಷಕರನ್ನು ಮನರಂಜಿಸಿತ್ತು. ಅವರ ಬಯಕೆಯೂ ಈಡೇರಿತ್ತು.

ಯಕ್ಷಗೊಂಬೆಗಳು ಪರಸ್ಪರ ಕಲ್ಲು ತೂರಿಕೊಂಡಿದ್ದವು. ಇದು ಜನರಿಗೆ ಕಾಣುವ ಹೊತ್ತಿಗೆ ಪರಸ್ಪರ ವಿರೋಧಿ ಗುಂಪು ಕಲ್ಲುತೂರಿಕೊಂಡಂತೆ. ಯಾಕೆ ಹೀಗೆ? ಇಂತಹ ನಾಟಕದ ದೃಶ್ಯಗಳ ಸೂತ್ರಧಾರರು ಆಟ ಆಡಲು ಬೇಕು. ಆ ಆಟ ಪ್ರೇಕ್ಷಕರಿಂದ ಹೊಗಳಿಕೆಯ ಗದ್ದುಗೆಗೆ ಏರಿಸುತ್ತದೆ. ಸೂತ್ರದಾರರು ಹೊಗಳಿಕೆಯ ಗದ್ದುಗೆ ಹಿಡಿಯುವುದೇ ತೊಗಲು ಬೊಂಬೆಗಳ ನರ್ತನದಿಂದ. ಆ ತೊಗಲು ಗೊಂಬೆಗಳು ಇಡೀ ದೇಶದ ಯಾವುದೇ ರಾಜ್ಯದಲ್ಲಿರಬಹುದು. ಅವು ಸದಾ ಕುಣಿಯುತ್ತಲೇ ಇರುತ್ತವೆ. ಗೊಂಬೆಗಳು ಹೆಚ್ಚುಹೆಚ್ಚು ಕುಣಿದಂತೆ ಪ್ರೇಕ್ಷಕ ಅಳುತ್ತಾನೆ, ನಗುತ್ತಾನೆ, ನೋವು ತಾಳಲಾರದೆ ಆಕ್ರಂದನ ಮಾಡುತ್ತಾನೆ.

ಮಹಾಭಾರತದಲ್ಲಿ ಕೃಷ್ಣ ಸೂತ್ರಧಾರ  ಅರ್ಜುನನ ಸಾರಥಿ. ದ್ವಾರಕಾ ನಗರಿಯ ಅವತಾರ ಪುರುಷ. ಅಂಥ ಕೃಷ್ಣ ಯುದ್ದರಂಗದಲ್ಲಿ ಕುದುರೆಯ ಲಗಾಮು ಹಿಡಿದು ಅರ್ಜುನನಿಗೆ ನೆರವಾದ. ಪಾಂಡವರಿಗೆ ಪಟ್ಟಾಧಿಕಾರ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾದ. ಯುದ್ದದಲ್ಲಿ ಸಾವು ನೋವಾದಾಗ ಅವರು ಮಾಡಿದ ಪಾಪದ ಫಲ ಅಂದ. ಧರ್ಮಕ್ಕೆ ಜ್ಲಾನಿ ಉಂಟಾದಾಗ ಅವತಾರವೆತ್ತಿ ದುಷ್ಟರ ಸಂಹಾರ ಮಾಡುತ್ತೇನೆ ಎಂದ. ಆ ದುಷ್ಟರು ಕೂಡ ನಮ್ಮೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸಿದ್ದವರೇ. ಆದರೆ ಅಧಿಕಾರದ ಆಸೆಗೆ ನಮ್ಮೊಂದಿಗಿನ ದುಷ್ಟರೆಂದು ಕರೆಯಲ್ಪಡುವವನ್ನು ಕೊಲ್ಲಲು ಪ್ರೇರೇಪಿಸಿದ. ದುಷ್ಟರು ಯಾರು ಎಂಬುದನ್ನು ನಿರ್ಧರಿಸುವರು ದ್ವಾರಕೆಯ ಪುತ್ರರು. ದ್ವಾರಕೆಯ ಸೂತ್ರದಾರರು ಮಾಡಿದ್ದು ತಪ್ಪಲ್ಲವೇ ಎಂದು ಕೇಳಿದರೆ ಧರ್ಮದ ಕಡೆ ಮುಖ ಮಾಡುತ್ತಾರೆ. ಆ ಮುಖಗಳಿಗೆ ರಕ್ತದ ಕಲೆಗಳು ಮೆತ್ತಿಕೊಂಡಿವೆ.

ಸಧ್ಯಕ್ಕೆ ತೊಗಲು ಬೊಂಬೆಯಾಟ ನಿಂತಿದೆ. ಯುದ್ದದಲ್ಲಿ ಕಾಲು, ಕಣ್ಣು, ಕೈ ಕಳೆದುಕಕೊಂಡ, ಗಾಯಗೊಂಡ ಅಮಾಯಕರು ಧನ್ವಂತರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬಗಳ ರೋಧಿಸುತ್ತಿವೆ. ಮನೆ, ಅಂಗಡಿ ಕಳೆದು ಕೊಂಡವರು ದಿಕ್ಕುಗಾಣದೆ ಯಾರತ್ತಲೋ ಸಹಾಯಹಸ್ತ ಚಾಚಿದ್ದಾರೆ. ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕ್ರೂರ ಮನಸ್ಸುಗಳು ಜಯದಲ್ಲಿ ಸಂಭ್ರಮಿಸುತ್ತಿವೆ. ದುಃಖತಪ್ತರು ‘ಹರ ಕೊಲ್ಲಲ್ ಪರ ಕಾಯ್ವನೆ’? ಎಂದು ಗೋಳಾಡುತ್ತಿದ್ದಾರೆ. ಭೀಭತ್ಸ ಸನ್ನಿವೇಶ ನಮ್ಮೆದುರಿಗಿದೆ. ದುಃಖದ ಕಾರ್ಮೋಡಗಳು ಮಳೆಸುರಿಸುತ್ತಿವೆ. ಭೂಮಿ ನೆನೆಯದು ಬೆಂಕಿ ಆರದು ಅನ್ನುವಂತಿದೆ. ‘ಎಳವನ ಮೇಲೆ ಕುರುಡ ಕುಳಿತಿದ್ದಾನೆ/ ದಾರಿ ಸಾಗುವುದೆಂತೋ ನೋಡಬೇಕಾಗಿದೆ’.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಭವನ’ಗಳನ್ನು ‘ಲೋಕಭವನ’ಗಳೆಂದು ಮರುನಾಮಕರಣ; ಇದು ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲಿನ ಆಕ್ರಮಣ: ಜಾಗೃತ ಕರ್ನಾಟಕ

ದೇಶಾದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡುವುದಾಗಿ ಕೇಂದ್ರ ಗೃಹಸಚಿವಾಲಯ ತೀರ್ಮಾನಿಸಿದೆ. ಕೇಂದ್ರದ  ಈ ನೀತಿಯನ್ನು ವಿರೋಧಿಸಿರುವ ಜಾಗೃತ ಕರ್ನಾಟಕ ದೇಶದ ಎಲ್ಲಾ ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ....

ಯುಜಿಸಿ ಈಕ್ವಿಟಿ ನಿಯಮಗಳ ಮೇಲಿನ ಸುಪ್ರೀಂ ಕೋರ್ಟ್ ತಡೆಗೆ ವಿದ್ಯಾರ್ಥಿಗಳ ಪ್ರತಿಭಟನೆ, ರೋಹಿತ್ ಕಾಯ್ದೆಗೆ ಒತ್ತಾಯ

ಯುಜಿಸಿ ಇಕ್ವಿಟಿ ನಿಯಮಗಳಿಗೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆಯ ವಿರುದ್ಧ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಲು ಶಾಸನಬದ್ಧ ರೋಹಿತ್ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ)...

ನರವಾಣೆ ಅಪ್ರಕಟಿತ ಪುಸ್ತಕ ಗದ್ದಲ | ಸತ್ಯ ಹೊರಬಂದರೆ ಮೋದಿ, ರಾಜನಾಥ್ ಸಿಂಗ್ ಮುಖವಾಡ ಬಯಲಾಗಲಿದೆ : ರಾಹುಲ್ ಗಾಂಧಿ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ರಾಹುಲ್ ಗಾಂಧಿ ಸೋಮವಾರ (ಫೆ.2) ಲೋಕಸಭೆಯಲ್ಲಿ ಉಲ್ಲೇಖಿಸಿದ್ದು, ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ...

ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ಘರ್ಷಣೆ : ಮೂವರ ಬಂಧನ

ಗುಜರಾತ್‌ನ ಪಠಾಣ್ ತಾಲೂಕಿನ ಚದ್ರುಮಣ ಗ್ರಾಮದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ದ ಎಸ್‌ಸಿ/ಎಸ್‌ಟಿ...

ಲೋಕಸಭೆಯಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಉಲ್ಲೇಖಿಸಿದ ರಾಹುಲ್ ಗಾಂಧಿ: ಸಭೆಯಲ್ಲಿ ತೀವ್ರ ಗದ್ದಲ

ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಆತ್ಮಚರಿತ್ರೆಯಿಂದ ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಗದ್ದಲ ಭುಗಿಲೆದ್ದಿತು. ರಾಹುಲ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ರಕ್ಷಣಾ ಸಚಿವ...

ಪಂಜಾಬ್ ನಿರೀಕ್ಷೆಗಳನ್ನು ಪೂರೈಸುವಲ್ಲಿ ಕೇಂದ್ರ ಬಜೆಟ್ ಮತ್ತೊಮ್ಮೆ ವಿಫಲವಾಗಿದೆ: ಸಿಎಂ ಭಗವಂತ್ ಮಾನ್

ಕೇಂದ್ರ ಬಜೆಟ್ ಮತ್ತೊಮ್ಮೆ ಪಂಜಾಬ್‌ನ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಚಿವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ರೈತರಿಗೆ ಯಾವುದೇ...

ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ, ‘ಜೈ ಸಂವಿಧಾನ’ ಎನ್ನುವುದನ್ನು ಉಲ್ಲೇಖಿಸದೆ ಹೋದರು : ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ ತೆರಳಿದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಶಾಸಕ...

ಉತ್ತರಾಖಂಡ| ಹಿಂದುತ್ವ ಗುಂಪಿನ ಕಿರುಕುಳದಿಂದ ಮುಸ್ಲಿಂ ಅಂಗಡಿ ಮಾಲೀಕನನ್ನು ರಕ್ಷಿಸಿದ ದೀಪಕ್ ಕುಮಾರ್

ಸ್ಥಳೀಯ ಮುಸ್ಲಿಂ ಅಂಗಡಿ ಮಾಲೀಕನ ವಿರುದ್ಧ ಬಜರಂಗದಳ ಸದಸ್ಯರು ನೀಡುತ್ತಿದ್ದ ಕಿರುಕುಳವನ್ನು ಜಿಮ್ ಮಾಲೀಕ ದೀಪಕ್ ಕುಮಾರ್ ಸ್ಥಳದಲ್ಲೇ ಎದುರಿಸಿದ್ದಾರೆ. ಆಕ್ರೋಶಿತರಾದ ಹಿಂದುತ್ವ ಗುಂಪಿನ ಸದಸ್ಯರು ದೀಪಕ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದು, ಹಲವಾರ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ...

ದಕ್ಷಿಣ ಪಿನಾಕಿನಿ ಜಲವಿವಾದ : ನ್ಯಾಯಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ

ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.2) ನಿರ್ದೇಶನ ನೀಡಿದೆ. ಕೇಂದ್ರ...